Blog

  • ರಾಜಕೀಯ ವಲಯದಲ್ಲಿ ಮತ್ತೆ ಕಿಚ್ಚು ಹಚ್ಚಿದ ಯತೀಂದ್ರ ಹೇಳಿಕೆ

    ರಾಜಕೀಯ ವಲಯದಲ್ಲಿ ಮತ್ತೆ ಕಿಚ್ಚು ಹಚ್ಚಿದ ಯತೀಂದ್ರ ಹೇಳಿಕೆ

    ಕರ್ನಾಟಕ ರಾಜಕೀಯದ ವಾತಾವರಣ ಕಳೆದ ಕೆಲವು ವಾರಗಳಿಂದ ನಾಯಕತ್ವ ಬದಲಾವಣೆಯ ಚರ್ಚೆಯಿಂದ ಗದ್ದಲಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಅಧಿಕಾರ ಹಸ್ತಾಂತರದ ಪ್ರಶ್ನೆ ಹಲವು ಬಾರಿ ಸುದ್ದಿಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಎರಡೂ ನಾಯಕರು ಈ ವಿಚಾರವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು. ಹೈಕಮಾಂಡ್‌ನಿಂದಲೂ ಸ್ಪಷ್ಟ ಸೂಚನೆಗಳು ಬಂದ ನಂತರ ಗಾಸಿಪ್‌ಗಳಿಗೆ ಕಡಿವಾಣಬಿದ್ದಂತೆ ಕಂಡಿತ್ತು. ಆದರೆ ಇದೀಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

    ನಾಯಕತ್ವ ಬದಲಾವಣೆ ಇಲ್ಲ ಹೈಕಮಾಂಡ್‌ ಹೇಳಿಕೆ ಸ್ಪಷ್ಟ: ಯತೀಂದ್ರ

    ಮಾಧ್ಯಮಗಳೊಂದಿಗೆ ಮಾತನಾಡಿದ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಹೈಕಮಾಂಡ್‌ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ನನ್ನ ತಂದೆಯೇ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿದ್ದಾರೆ.

    ಸಿಎಂ ಸಿದ್ದರಾಮಯ್ಯ ಸ್ವತಃ ಪಕ್ಷದ ಒಳಗಿನ ನಾಯಕರಿಗೆ ಹೈಕಮಾಂಡ್‌ ಹೇಳುವವರೆಗೆ ನಾನೇ ಸಿಎಂ ಎಂದು ಸೂಚನೆ ನೀಡಿದ್ದರೂ, ಈ ವಿಷಯದ ಮೇಲೆ ಮಾತನಾಡಬಾರದು ಎಂಬ ನಿರ್ದೇಶನ ನೀಡಲಾಗಿತ್ತು. ಆದರೆ ಪುತ್ರ ಯತೀಂದ್ರ ಅವರ ನೇರ ಹೇಳಿಕೆ ಮತ್ತೆ ರಾಜಕೀಯ ಚರ್ಚೆಗೆ ಹೊಸ ಆಯಾಮ ತಂದಿದೆ.

    ಬ್ರೇಕ್‌ಫಾಸ್ಟ್‌ ರಾಜಕೀಯ ಸಿಎಂ ಡಿಕೆಶಿ ಭೇಟಿ ಬಳಿಕ ಶಾಂತಿ ಕಂಡ ರಾಜಕೀಯ:

    ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವೆ ಎರಡು ಬಾರಿ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿತ್ತು. ಈ ಭೇಟಿಯ ಬಳಿಕ ಇಬ್ಬರೂ ನಾಯಕರೂ ಒಂದೇ ವೇದಿಕೆಯಲ್ಲಿ ಬಂದು, ಸರ್ಕಾರ ಸ್ಥಿರವಾಗಿದೆ, ಹೈಕಮಾಂಡ್‌ ಹೇಳಿಕೆಯ ಮೇರೆಗೆ ಎಲ್ಲವೂ ನಡೆಯುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಯತೀಂದ್ರ ಅವರ ಹೊಸ ಹೇಳಿಕೆ ಮತ್ತೆ ಕೋಲಾಹಲಕ್ಕೆ ಕಾರಣವಾಗಿದ್ದು, ಕುರ್ಚಿ ಕಿತ್ತಾಟ ವಿಚಾರವನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತಳ್ಳಿದೆ.

    apvc-iconPost Views: 0
  • “ಕ್ರಿಕೆಟ್ ಬಿಟ್ರೆ ನನಗೆ ಬೇರೇನೂ ಇಷ್ಟವಿಲ್ಲ” – ಸ್ಮೃತಿ ಮಂದಾನಾ

    “ಕ್ರಿಕೆಟ್ ಬಿಟ್ರೆ ನನಗೆ ಬೇರೇನೂ ಇಷ್ಟವಿಲ್ಲ” – ಸ್ಮೃತಿ ಮಂದಾನಾ

    ಮದುವೆ ರದ್ದು ವಿಚಾರದಿಂದ ಸುದ್ದಿಯಾಗಿದ್ದ ಸ್ಮೃತಿ ಮಂದಾನಾ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆದರೆ ವೇದಿಕೆ ಮೇಲೆ ಮಾತನಾಡಿದ ಕ್ಷಣದಲ್ಲೇ ಅವರ ಮನಸ್ಸು ಎಲ್ಲಿದೆ ಎನ್ನುವುದು ಸ್ಪಷ್ಟವಾಯಿತು ಕ್ರಿಕೆಟ್‌ ಹೊರತು ಬೇರಾವುದೂ ಅವರಿಗೆ ಮುಖ್ಯವಲ್ಲ. ವೈಯಕ್ತಿಕ ಗೊಂದಲಗಳ ಮಧ್ಯೆಯೂ ಅವರ ಗಮನ ಪೂರ್ಣವಾಗಿ ಆಟದಲ್ಲೇ ಇದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ, “ಭಾರತೀಯ ಜರ್ಸಿ ಧರಿಸುವ ಯೋಚನೆಯೇ ನನ್ನನ್ನು ಮತ್ತೆ ಮತ್ತೆ ಎಬ್ಬಿಸುತ್ತದೆ. ಕ್ರಿಕೆಟ್ ಬಿಟ್ಟರೆ ಬೇರೇನೂ ನನ್ನ ಮನಸ್ಸಿಗೆ ತಟ್ಟುವುದೇ ಇಲ್ಲ,” ಎಂದು ಹೇಳಿದರು. ಮದುವೆ ವಿಷಯದಲ್ಲಿ ಏನೇ ಆಗಿರಲಿ, ತಮ್ಮ ಬದುಕಿನ ಮೂಲ ದಿಕ್ಕು ಕ್ರಿಕೆಟ್‌ ಆಗಿದೆ ಅನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.

    ವಿಶ್ವಕಪ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಆ ಟ್ರೋಫಿ ತಂಡದ ಹಲವು ವರ್ಷಗಳ ಪರಿಶ್ರಮದ ಫಲ ಎಂದು ಹೇಳಿದರು. ಫೈನಲ್ ಪಂದ್ಯಕ್ಕೂ ಮುನ್ನ ನಾವು ಗೆಲುವಿನ ಕ್ಷಣವನ್ನು ಮನಸ್ಸಿನಲ್ಲಿ ಪುನಃ ಪುನಃ ಕಲ್ಪಿಸಿಕೊಂಡಿದ್ದೆವು; ನಿಜವಾಗಿ ಟ್ರೋಫಿ ಕೈಗೆ ಸಿಕ್ಕಾಗ, ಎಲ್ಲರಿಗೂ ಅದು ಭಾವನಾತ್ಮಕ ಕ್ಷಣವಾಗಿತ್ತು ಎಂದು ಸ್ಮೃತಿ ನೆನಪಿಸಿಕೊಂಡರು.

    ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಸ್ಟ್ಯಾಂಡ್ಸ್‌ನಲ್ಲಿ ಹಾಜರಿದ್ದುದೇ ತಂಡಕ್ಕೆ ದೊಡ್ಡ ಬಲ ನೀಡಿತು ಎಂದು ಸ್ಮೃತಿ ಹೇಳಿದರು. “ಅವರ ಕಣ್ಣಲ್ಲಿ ಕಾಣಿಸಿದ ಹೆಮ್ಮೆಯೇ ನಮ್ಮ ಗೆಲುವಿನ ನಿಜವಾದ ಮೌಲ್ಯ,” ಎಂಬ ಅವರ ಹೇಳಿಕೆ, ಹಿರಿಯ ಆಟಗಾರರೊಂದಿಗೆ ಯುವ ತಂಡದ ಭಾವನಾತ್ಮಕ ಬಂಧವನ್ನು ತೋರಿಸಿತು.

    ವೈಯಕ್ತಿಕ ವಿಷಯಗಳಲ್ಲಿ ಏರಿಳಿತಗಳಿದ್ದರೂ, ಸ್ಮೃತಿ ಈಗಾಗಲೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಯಾರಿಯಲ್ಲಿದ್ದಾರೆ. ನೆಟ್ಸ್‌ನಲ್ಲಿ ಮತ್ತೆ ಬ್ಯಾಟ್ ಹಿಡಿದಿರುವ ಅವರು, ಮೈದಾನವೇ ತಮ್ಮ ನಿಜವಾದ ಮನೆ ಎಂಬುದನ್ನು ತೋರಿಸಿದ್ದಾರೆ.

    apvc-iconPost Views: 0
  • ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಯಾದಗಿರಿ: ಗುರುಮಠಕಲ್ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ ಬಳಿಕ ೩೩ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ, ಭೇದಿ ಮತ್ತು ಹೊಟ್ಟೆನೋವಿನಿಂದ ಬಳಲಿರುವ ಘಟನೆ ಬೆಳಕಿಗೆ ಬಂದಿದೆ.

    ರಾತ್ರಿ ೭.೩೦ರ ಸುಮಾರಿಗೆ ಚಿಕನ್, ಚಪಾತಿ, ಅನ್ನ ಸೇವಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಗುರುಮಠಕಲ್ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.

    ಒಟ್ಟು ೧೫೦ ವಿದ್ಯಾರ್ಥಿಗಳಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವುದರಿAದ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ ಎಂದು ಚಿಕಿತ್ಸಕ ವೈದ್ಯರು ಹೇಳಿದ್ದಾರೆ.

    ತುರ್ತು ಪರಿಸ್ಥಿತಿಯನ್ನು ಮನಗಂಡು ತಾಲೂಕ ಆಸ್ಪತ್ರೆ ವೈದ್ಯರ ಜೊತೆಗೆ ಪಟ್ಟಣದ ಸ್ಥಳೀಯ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಸೇರ್ಪಡೆಗೊಂಡು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಘಟನೆಯ ಮಾಹಿತಿ ತಿಳಿದ ಜಿಲ್ಲಾ ಆಡಳಿತದ ತಂಡ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಸೀಲ್ದಾರ್ ಹಾಗೂ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದರು.

    ಗುರುಮಠಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಾಸ್ಟೆಲ್‌ನ ಅಡಿಗೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಆಹಾರ ಸುರಕ್ಷತಾ ಇಲಾಖೆಯು ತಪಾಸಣೆ ಆರಂಭಿಸಿದೆ.

    ಘಟನೆಯಿAದ ಆತಂಕಗೊAಡ ಪೋಷಕರು ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.

    apvc-iconPost Views: 13
  • ಹೊಸ ವರ್ಷದ ಸಂಭ್ರಮಕ್ಕೆ ಬಿಗಿ ನಿಯಮಗಳು: ಪೊಲೀಸರಿಂದ ಹೊಸ ಗೈಡ್‌ಲೈನ್ಸ್ ಜಾರಿ

    ಹೊಸ ವರ್ಷದ ಸಂಭ್ರಮಕ್ಕೆ ಬಿಗಿ ನಿಯಮಗಳು: ಪೊಲೀಸರಿಂದ ಹೊಸ ಗೈಡ್‌ಲೈನ್ಸ್ ಜಾರಿ

    ಪ್ರತಿ ವರ್ಷ ಡಿಸೆಂಬರ್ ತಿಂಗಳು ಪ್ರಾರಂಭವಾದ ಕೂಡಲೇ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮದ ಸದ್ದು ಗದ್ದಲ ಶುರುವಾಗುತ್ತದೆ. ಐಟಿ ನಗರವಾದ ಈ ಸಿಲಿಕಾನ್ ಸಿಟಿಯಲ್ಲಿ ವಿಶೇಷವಾಗಿ ಯುವಜನತೆಯೇ ನ್ಯೂ ಇಯರ್ ವೆಲ್‌ಕಮ್‌ಗೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಪಬ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಓಪನ್ ಪಾರ್ಟಿ ಸ್ಥಳಗಳು ಉತ್ಸವದ ರಂಗಿನೆಯನ್ನೇ ತಳೆಯುತ್ತವೆ. ಆದರೆ ಇತ್ತೀಚೆಗೆ ಗೋವಾದ ನೈಟ್‌ಕ್ಲಬ್ ದುರಂತದಲ್ಲಿ ಸಂಭವಿಸಿದ ವಿಷಾದನೀಯ ಘಟನೆ ದೇಶವನ್ನೇ ತಲ್ಲಣಗೊಳಿಸಿದ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಚಿತ ಮುನ್ನೆಚ್ಚರಿಕೆ ಕ್ರಮಗಳನ್ನು ಬೆಂಗಳೂರಿನ ಪೊಲೀಸರು ಕೈಗೊಂಡಿದ್ದಾರೆ.

    ಹೊಸ ವರ್ಷಕ್ಕೆ ಇನ್ನೂ 20 ದಿನ ಬಾಕಿ ಇರುವಾಗಲೇ, ನಗರದ ಪಬ್-ಬಾರ್ ಹಾಗೂ ಸೆಲೆಬ್ರೇಷನ್ ಸ್ಥಳಗಳ ಮೇಲೆ ಪೊಲೀಸರು ಕಣ್ಣಕಟ್ಟುವ ಬಿಗಿ ನಿಯಮಗಳನ್ನು ಅಳವಡಿಸಿದ್ದಾರೆ. ನಗರ ಪೊಲೀಸ್‌ ಅಧಿಕಾರಿಗಳು ಪಬ್‌ ಮತ್ತು ಹೋಟೆಲ್‌ ಮಾಲೀಕರ ಜೊತೆ ವಿಶೇಷ ಸಭೆ ನಡೆಸಿ, ಸುರಕ್ಷತೆ ಮತ್ತು ಕಾನೂನು ಪಾಲನೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

    ಹೊಸ ವರ್ಷಾಚರಣೆಗಾಗಿ ಜಾರಿಗೊಂಡ ಪ್ರಮುಖ ಗೈಡ್‌ಲೈನ್ಸ್:

    ಫೈರ್ ಡಿಪಾರ್ಟ್‌ಮೆಂಟ್ ಪರವಾನಗಿ ಕಡ್ಡಾಯ:

    ಯಾವುದೇ ಪಬ್‌, ಬಾರ್‌, ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಲು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ತಗೊಳ್ಳಲೇಬೇಕು.

    ಪರವಾನಗಿ ಇಲ್ಲದಿದ್ದರೆ ಸ್ಥಳವನ್ನು ತಕ್ಷಣ ಮುಚ್ಚಲಾಗುವುದು:

    ಪರ್ಮಿಷನ್‌ ಇಲ್ಲದೆ ಸೇವೆ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

    ಹೆಚ್ಚು ಜನರಿಗೆ ಪ್ರವೇಶ ನಿಷೇಧ:

    ನಿಗದಿಗಿಂತ ಹೆಚ್ಚು ಜನರನ್ನು ಸೇರಿಸಿಕೊಂಡು ಅಪಾಯಕ್ಕೆ ಕಾರಣವಾದರೆ ಅದರ ಹೊಣೆಗಾರಿಕೆ ನೇರವಾಗಿ ಮಾಲೀಕರಿಗೇ.

    ಸಮಯ ಮೀರಿದ ಸೇವೆ ನಿಷೇಧ:

    ಪೊಲೀಸರ ಅನುಮತಿ ಸಮಯ ಮೀರಿಸಿ ಪಾರ್ಟಿ, ಮದ್ಯಸೇವನೆ ಅನುಮತಿಯಿಲ್ಲ.

    ಸಿಸಿಟಿವಿ ಕಡ್ಡಾಯ:

    ಸೆಲೆಬ್ರೇಷನ್ ಆಗುವ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲೇಬೇಕು.

    ಮಹಿಳೆಯರ ಸುರಕ್ಷತೆಗೆ ವಿಶೇಷ ಕ್ರಮಗಳು:

    ಮಹಿಳೆಯುಳ್ಳ ಗ್ರಾಹಕರಿಗಾಗಿ ಸುರಕ್ಷತಾ ಪ್ರೋಟೋಕಾಲ್‌ ಕಟ್ಟುನಿಟ್ಟಾಗಿ ಪಾಲಿಸಬೇಕು.

    ಬೆಂಗಳೂರು ನಗರದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಯಾವುದೇ ರೀತಿಯ ಅಪಾಯ ಸಂಭವಿಸದಂತೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸರು ಜಾರಿಗೆ ತಂದಿದ್ದಾರೆ. ಸುರಕ್ಷಿತ ಮತ್ತು ಶಿಸ್ತಿನ ಹೊಸ ವರ್ಷವನ್ನು ಸ್ವಾಗತಿಸುವುದು ಎಲ್ಲರ ಜವಾಬ್ದಾರಿಯೇ ಆಗಿದೆ.

    apvc-iconPost Views: 4
  • ಮೆಟ್ರೋಕ್ಕೆ 96 ಹೊಸ ರೈಲು: 3 ನಿಮಿಷಕ್ಕೊಂದು ಮೆಟ್ರೋ

    ಮೆಟ್ರೋಕ್ಕೆ 96 ಹೊಸ ರೈಲು: 3 ನಿಮಿಷಕ್ಕೊಂದು ಮೆಟ್ರೋ

    ಬೆಂಗಳೂರು ನಗರದ ವೇಗದ ಬೆಳವಣಿಗೆಗೆ ಅನುಪಾತವಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆಯೂ ಅಬ್ಬರಿಸಿದೆ. ಕೆಲಸಕ್ಕೆ ಹೋಗುವಾಗ, ಕಾಲೇಜು, ಆಸ್ಪತ್ರೆ, ಅಥವಾ ಸಾಮಾನ್ಯವಾಗಿ ನಗರದಲ್ಲಿ ಸಂಚಾರ ಮಾಡುವಾಗ ವಾಹನ ದಟ್ಟಣೆ ಜನರನ್ನು ಗಂಟೆಗಳ ಕಾಲ ಸಿಲುಕಿಸಿಟ್ಟಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಬೆಂಗಳೂರಿನ ಮೆಟ್ರೋ ಸಾರಿಗೆ (Namma Metro) ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಈಗ ಈ ಮೆಟ್ರೋ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವ ದೊಡ್ಡ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ.

    ನಗರದ ಪ್ರತಿಯೊಂದು ಆರಂಭದಿಂದ ಕೊನೆಯವರೆಗೂ ಮೆಟ್ರೋ ತಲುಪಿಸುವ ಗುರಿ ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಈಗ ಹೊಸ ರೈಲು ಹಾಗೂ ಕೋಚ್‌ಗಳ ಆರ್ಡರ್ ನೀಡಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿದರೂ, ಒಂದು ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗುವುದಿಲ್ಲ. ಮುಂದಿನ ದಿನಗಳಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ನಿಮ್ಮ ಪ್ಲಾಟ್‌ಫಾರ್ಮ್‌ಗೆ ಬಂದು ನಿಲ್ಲಲಿದೆ!

    ಪ್ರಸ್ತುತ ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಸೇರಿ ಒಟ್ಟು 63 ರೈಲುಗಳು ನಮ್ಮ ಮೆಟ್ರೋ ಬಳಿಯಿವೆ.

    ಗ್ರೀನ್ + ಪರ್ಪಲ್ ಲೈನ್‌ನಲ್ಲಿ: 57 ರೈಲು

    ಯೆಲ್ಲೋ ಲೈನ್‌ನಲ್ಲಿ: 6 ರೈಲು

    ಹೊಸ ಸೇರ್ಪಡೆ ಹೀಗಿದೆ:

    ಗ್ರೀನ್ ಮತ್ತು ಪರ್ಪಲ್ ಲೈನ್ – 21 ಹೊಸ ರೈಲುಗಳು

    ಯೆಲ್ಲೋ ಲೈನ್ – 9 ಹೊಸ ರೈಲುಗಳು

    ಹೆಚ್ಚುವರಿ ಆರ್ಡರ್ – 6 ರೈಲುಗಳು

    ಪಿಂಕ್ ಲೈನ್‌ ವಿಶೇಷ:

    ಕಾಳೇನ ಅಗ್ರಹಾರ ಟು ನಾಗವಾರ – 16 ರೈಲು

    ಹೆಚ್ಚುವರಿ – 7 ರೈಲು

    ಒಟ್ಟು 23 ರೈಲುಗಳು

    ಬ್ಲೂ ಲೈನ್‌ಗಾಗಿ ದೊಡ್ಡ ಸೇರ್ಪಡೆ:

    ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ – 16 ರೈಲು

    ಕೆ.ಆರ್ ಪುರ ಟು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಟು 21 ರೈಲು

    ಒಟ್ಟು 37 ರೈಲುಗಳು

    3 ನಿಮಿಷಕ್ಕೊಂದು ಮೆಟ್ರೋ!

    ಬ್ಲೂ ಮತ್ತು ಪಿಂಕ್ ಲೈನ್‌ಗಳು ಚಾಲನೆಗೊಂಡು, ಹೊಸ ರೈಲುಗಳು ಸೇರಿಕೊಂಡರೆ, ಪ್ರತಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಸಾಧ್ಯವಾಗಲಿದೆ.

    ಒಟ್ಟು ರೈಲುಗಳ ಸಂಖ್ಯೆ ರೈಸ್!

    ಈಗಿರುವ 63 ರೈಲುಗಳಿಗೆ 96 ಹೊಸ ರೈಲುಗಳು ಸೇರಿದರೆ, ಒಟ್ಟು 159 ರೈಲುಗಳು ನಮ್ಮ ಮೆಟ್ರೋ ಬಳಿಯಲ್ಲಿರಲಿವೆ.

    ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇದು ದೊಡ್ಡ ನಿರಾಳಿಕೆಯ ಸುದ್ದಿ. ಹೊಸ ಮಾರ್ಗಗಳು ತೆರೆಯುತ್ತಾ, ರೈಲುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ, ಪ್ರಯಾಣ ಸುಗಮವಾಗುವುದು ಖಚಿತ. ಮೆಟ್ರೋ ಅಭಿವೃದ್ಧಿಯ ಈ ವೇಗ ಮುಂದುವರಿದರೆ, ಭವಿಷ್ಯದಲ್ಲಿ ಬೆಂಗಳೂರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೇ ಕ್ರಾಂತಿಯನ್ನು ಕಾಣಲಿದೆ.

    apvc-iconPost Views: 8
  • ತಿರುಪತಿ–ಶಿರಡಿ ನೇರ ರೈಲು ಸೇವೆಗೆ ಸೋಮಣ್ಣ ಹಸಿರು ನಿಶಾನೆ

    ತಿರುಪತಿ–ಶಿರಡಿ ನೇರ ರೈಲು ಸೇವೆಗೆ ಸೋಮಣ್ಣ ಹಸಿರು ನಿಶಾನೆ

    ಭಾರತವು ಯಾತ್ರಾಧಾರಿತ ಸಂಸ್ಕೃತಿಯಿಂದ ಹೆಸರುವಾಸಿಯಾಗಿದ್ದು, ಲಕ್ಷಾಂತರ ಭಕ್ತರು ಪ್ರತಿದಿನ ತಮ್ಮ ನಂಬಿಕೆ ಮತ್ತು ಭಕ್ತಿಯ ಪಯಣದಲ್ಲಿ ಹಲವು ಪವಿತ್ರ ಕ್ಷೇತ್ರಗಳನ್ನು ಭೇಟಿ ಕೊಡುತ್ತಾರೆ. ಆಂಧ್ರಪ್ರದೇಶದ ಪುಣ್ಯ ಕ್ಷೇತ್ರ ತಿರುಪತಿ ಹಾಗೂ ಮಹಾರಾಷ್ಟ್ರದ ಪ್ರಸಿದ್ಧ ಶಿರಡಿ ಇವು ಭಾರತೀಯ ಭಕ್ತರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಎರಡು ಪ್ರಮುಖ ತೀರ್ಥಕ್ಷೇತ್ರಗಳು. ಈಗ ಈ ಎರಡೂ ಧಾರ್ಮಿಕ ಕೇಂದ್ರಗಳನ್ನು ನೇರವಾಗಿ ಸಂಪರ್ಕಿಸುವ ಮತ್ತೊಂದು ಸೌಲಭ್ಯದ ಬಗ್ಗೆ ಮಾಹಿತಿ ತಿಳಿದುಬಂದಿದೆ.

    ಭಕ್ತರ ಆದ್ಯತೆ ಮತ್ತು ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ತಿರುಪತಿ–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ನವದೆಹಲಿಯ ರೈಲ್ ಭವನದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದರು.

    ನಾಲ್ಕು ರಾಜ್ಯಗಳನ್ನು ಜೋಡಿಸುವ ತೀರ್ಥಸೇತುವೆ:

    ಈ ಹೊಸ ರೈಲು ಮಾರ್ಗವು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಜೋಡಿಸುವ ಮೂಲಕ ದೀರ್ಘಾವಧಿಯ ಸಾರಿಗೆ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕನ್ನು ನೀಡಲಿದೆ.

    ಇದು ದಕ್ಷಿಣ ಕರಾವಳಿ ಭಾಗದ ಭಕ್ತರಿಗೆ ಶಿರಡಿಗೆ ಮೊದಲ ನೇರ ರೈಲು ಸಂಪರ್ಕ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.

    ಯಾತ್ರಾರ್ಥಿಗಳಿಗೆ ಅನೇಕ ಲಾಭ:

    • ಭಕ್ತರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ.
    • ಪ್ರತಿ ಮಾರ್ಗಕ್ಕೆ ಸುಮಾರು 30 ಗಂಟೆಗಳ ಸುಗಮ ಪ್ರಯಾಣ.
    • ನಾಲ್ಕು ರಾಜ್ಯಗಳಲ್ಲಿ ಆರ್ಥಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನೆ.
    • ಮಾರ್ಗ ಮಧ್ಯೆ 31 ಪ್ರಮುಖ ನಿಲ್ದಾಣಗಳ ಸಂಪರ್ಕ.
    • ನೆಲ್ಲೂರು
    • ಗುಂಟೂರು
    • ಸಿಕಂದರಾಬಾದ್
    • ಬೀದರ್
    • ಮನ್ಮಾಡ್
    • ಮತ್ತು ಮತ್ತಿತರ ಪ್ರಮುಖ ನಿಲ್ದಾಣಗಳು

    ಪಾರ್ಲಿ ವೈಜನಾಥ್‌ನಂತಹ ಪ್ರಸಿದ್ಧ ಶಿವ ಕ್ಷೇತ್ರಗಳ ಸಂಪರ್ಕವೂ ಈ ರೈಲು ಮಾರ್ಗದ ವಿಶೇಷತೆ.

    ಸೋಮಣ್ಣ ಅವರ ಅಭಿಪ್ರಾಯ:

    ಈ ವಿಶೇಷ ಸೇವೆ ಪ್ರಾರಂಭವಾಗಿರುವುದು ನಾಲ್ಕು ರಾಜ್ಯಗಳ ಭಕ್ತರಿಗೂ ಐತಿಹಾಸಿಕ ಕ್ಷಣ ಎಂದು ಸಚಿವ ಸೋಮಣ್ಣ ಹೇಳಿದರು. ರೈಲ್ವೆ ನಮ್ಮ ದೇಶದ ಜೀವನಾಡಿ. ಭಕ್ತರು ಈಗ ಯಾತ್ರೆಯನ್ನು ಇನ್ನಷ್ಟು ಶ್ರಮವಿಲ್ಲದೆ, ಸುಲಭವಾಗಿ ಕೈಗೊಳ್ಳಲು ಈ ರೈಲು ಸೇವೆ ಮಹತ್ತರ ಎಂದು ತಿಳಿಸಿದ್ದಾರೆ.

    ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ:

    ತಿರುಪತಿ ಮತ್ತು ಶಿರಡಿ ಪುಣ್ಯಕ್ಷೇತ್ರಗಳ ನಡುವೆ ನೇರ ಸಂಪರ್ಕ ದೊರಕಿರುವುದರಿಂದ, ಯಾತ್ರಾರ್ಥಿಗಳ ಸಂಖ್ಯೆ ಮತ್ತಷ್ಟು ಏರಲಿದೆ. ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿ. ವ್ಯಾಪಾರ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ದಾರಿ ಸಿಗುತ್ತದೆ.

    apvc-iconPost Views: 6
  • ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ಉಚಿತ ಪ್ರಯಾಣವನ್ನು ಮಹಿಳೆಯರಿಗೆ ನೀಡುವ ‘ಶಕ್ತಿ’ ಯೋಜನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರೂ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಈ ಯೋಜನೆ ಭಾರವಾಗಿಬಿಟ್ಟಿದೆ. ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರ ಬಸ್ ಪ್ರಯಾಣದ ಸಂಖ್ಯೆ ಹೆಚ್ಚಾದರೂ, ಅದರ ವೆಚ್ಚವನ್ನು ಸರ್ಕಾರದಿಂದ ತೆಗೆಯುವ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯದ ಕಾರಣ NWKRTC ಈಗ ಗಂಭೀರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ.

    ಸರ್ಕಾರವು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತವನ್ನು ನಿಗಮಕ್ಕೆ ಮರುಪಾವತಿ ಮಾಡಬೇಕಿದೆ. ನಿಗಮಗಳು ಪ್ರತಿಮಾಸವೂ ಈ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುತ್ತಿವೆ. ಆದರೆ ಸರ್ಕಾರದಿಂದ ಬರುವ ಹಣ ವಾರಂವಾರ ತಡವಾಗುತ್ತಿದ್ದು, ಮುಖ್ಯವಾಗಿ ಪೂರ್ಣ ಪ್ರಮಾಣದಲ್ಲಿ ಬರದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಪ್ರತೀ ತಿಂಗಳು ಸುಮಾರು 130 ಕೋಟಿ ರೂಪಾಯಿ ಮರುಪಾವತಿ ಪಡೆಯಬೇಕಾದ NWKRTCಗೆ ಸರ್ಕಾರದಿಂದ ಸಿಗುತ್ತಿರುವುದು 100 ರಿಂದ 110 ಕೋಟಿ ರೂಪಾಯಿಗಳಷ್ಟೇ. ಉಳಿದ ಹಣ ಹಂತ ಹಂತವಾಗಿ ಜಮೆಯಾಗುತ್ತಾ ಬಂದಿದ್ದು, ಈಗ ಬಾಕಿಯ ಮೊತ್ತ ಬರೋಬ್ಬರಿ 940 ಕೋಟಿಗೆ ಏರಿದೆ.

    ಈ ದೊಡ್ಡ ಬಾಕಿಯ ಪರಿಣಾಮ ನಿಗಮದ ದೈನಂದಿನ ಚಟುವಟಿಕೆಗಳ ಮೇಲೂ ನೇರವಾಗಿ ಬಿದ್ದಿದೆ. ಸಿಬ್ಬಂದಿಯ ಪಿಎಫ್ ಕಂತುಗಳನ್ನು ಪಾವತಿಸಲು ನಿಗಮ ಬಾಧ್ಯವಾಗಿದ್ದು, ಅದಕ್ಕೂ ಸಾಲದ ಮೊರೆ ಹೋಗಬೇಕಾಯಿತು. 646 ಕೋಟಿ ರೂಪಾಯಿ ಸಾಲ ಮಾಡಿ ಸಿಬ್ಬಂದಿಯ ಪಿಎಫ್ ಕರಾರುಗಳನ್ನು ಪೂರೈಸಿದ್ದರೂ, ಇನ್ನೂ ನಿವೃತ್ತ ನೌಕರರಿಗೆ ಕೊಡಬೇಕಾಗಿರುವ ಸುಮಾರು 45 ಕೋಟಿ ರೂಪಾಯಿ ಗ್ರಾಚ್ಯುಟಿ ಮೊತ್ತ ಬಾಕಿಯೇ ಉಳಿದಿದೆ. ವೇತನಗಳ ಪಾವತಿಗೂ ಸರ್ಕಾರದಿಂದ ಬರುವ ಹಣವೇ ಬಳಸಬೇಕಾದ ಪರಿಸ್ಥಿತಿ ಬಂದಿರುವುದರಿಂದ, ಅಭಿವೃದ್ಧಿ ಕಾರ್ಯಗಳು ಅಡ್ಡಿಯಿಲ್ಲದೆ ಸಾಗಲು ನಿಗಮದ ಬಳಿ ಹಣವೇ ಉಳಿದಿಲ್ಲ.

    ಇದೇ ಸಂದರ್ಭದಲ್ಲಿ ಬಸ್‌ಗಳ ನಿರ್ವಹಣೆ, ಹೊಸ ವಾಹನಗಳ ಖರೀದಿ, ಮೂಲಭೂತ ಸೌಲಭ್ಯಗಳ ಸುಧಾರಣೆ ಎಲ್ಲವೂ ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಉಚಿತ ಪ್ರಯಾಣದ ಫಲಾನುಭವಿಗಳು ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದ್ದರೂ, ಆ ಹೊಣೆಯನ್ನು ಹೊರುವ ನಿಗಮಗಳು ಮೂಲಭೂತ ಆರ್ಥಿಕ ನೆರವಿಗಾಗಿ ಸರ್ಕಾರದ ಬಾಗಿಲಲ್ಲಿ ಕಾಯಬೇಕಾದ ಪರಿಸ್ಥಿತಿ ಮೂಡಿದೆ.

    ಶಕ್ತಿ ಯೋಜನೆಯಿಂದ ಮಹಿಳೆಯರ ಸಂಚಾರ ಸುಲಭವಾಗಿರುವುದು ರಾಜ್ಯಕ್ಕೆ ಶ್ಲಾಘನೀಯ ವಿಷಯವಾದರೂ, ಅದರ ಹೊಣೆಗಾರಿಕೆಯನ್ನು ನಿಭಾಯಿಸುವ ನಿಗಮಗಳು ಆರ್ಥಿಕವಾಗಿ ಬಲಿಯಾಗಬೇಕಾದರೆ ಮರುಪಾವತಿ ವ್ಯವಸ್ಥೆಯಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯ ಸ್ಪಷ್ಟವಾಗಿದೆ.

    apvc-iconPost Views: 2
  • ನಾನ್-ಎಸಿ ಸ್ಲೀಪರ್ ಕೋಚ್‌ಗಳಲ್ಲಿ ಈಗ ಹಾಸಿಗೆ–ಹೊದಿಕೆ ಸೌಲಭ್ಯ!

    ನಾನ್-ಎಸಿ ಸ್ಲೀಪರ್ ಕೋಚ್‌ಗಳಲ್ಲಿ ಈಗ ಹಾಸಿಗೆ–ಹೊದಿಕೆ ಸೌಲಭ್ಯ!

    ರೈಲು ಪ್ರಯಾಣವು ಭಾರತದ ದೊಡ್ಡ ಪ್ರಮಾಣದ ಜನಸಂಚಾರಕ್ಕೆ ಪ್ರಮುಖ ಸಂಚಾರ ಮಾಧ್ಯಮ. ವಿಶೇಷವಾಗಿ ದೀರ್ಘ ದೂರದ ರೈಲುಗಳಲ್ಲಿನ ನಾನ್-ಎಸಿ ಸ್ಲೀಪರ್ ಕೋಚ್‌ಗಳು ಸಾಮಾನ್ಯ ಪ್ರಯಾಣಿಕರ ಆರ್ಥಿಕ ಸ್ನೇಹಿ ಆಯ್ಕೆಯಾಗಿವೆ. ಆದರೆ ಇಷ್ಟು ಕಾಲ ಈ ವಿಭಾಗದ ಪ್ರಯಾಣಿಕರು ಎದುರಿಸುತ್ತಿದ್ದ ಸಾಮಾನ್ಯ ಸಮಸ್ಯೆ ಎಂದರೆ ರಾತ್ರಿ ವೇಳೆಯ ಚಳಿ, ಆರಾಮದಾಯಕ ಮಲಗುವ ಸೌಲಭ್ಯಗಳ ಕೊರತೆ. ಹಾಸಿಗೆ, ಹೊದಿಕೆ ಅಥವಾ ತಲೆದಿಂಬುಗಳು ಇಲ್ಲದೇ ಅನೇಕರು ತೊಂದರೆ ಅನುಭವಿಸುತ್ತಿದ್ದರು. ಈಗ ಭಾರತೀಯ ರೈಲ್ವೆ ಈ ಸಮಸ್ಯೆಗೆ ಸ್ಪಷ್ಟ ಪರಿಹಾರ ನೀಡಲು ಮುಂದಾಗಿದೆ.

    ಹೊಸ ಸೇವೆ ಜಾರಿಗೆ ಬರುವ ದಿನಾಂಕ:

    2026ರ ಜನವರಿ 1ರಿಂದ ಆರಂಭ. ಇದುವರೆಗೆ ಎಸಿ ಕೋಚ್‌ ಪ್ರಯಾಣಿಕರಿಗಷ್ಟೇ ಲಭ್ಯವಿದ್ದ ಹಾಸಿಗೆ–ದಿಂಬು ಸೌಲಭ್ಯವನ್ನು ಈಗ ಮೊದಲ ಬಾರಿಗೆ ನಾನ್-ಎಸಿ ಸ್ಲೀಪರ್ ಕೋಚ್‌ಗಳಲ್ಲಿಯೂ ಒದಗಿಸಲಾಗುತ್ತಿದೆ.

    ಸೌಲಭ್ಯ ಮತ್ತು ಬಾಡಿಗೆ ವಿವರ:

    ಪ್ರಯಾಣಿಕರು ಬಾಡಿಗೆ ಆಧಾರದಲ್ಲಿ ಪಡೆಯಬಹುದಾದ ವಸ್ತುಗಳು:

    • ಕವರ್‌ ಸಹಿತ ತಲೆದಿಂಬು ಮತ್ತು ಬೆಡ್‌ ಶೀಟ್ : ಬಾಡಿಗೆ-₹50
    • ಕೇವಲ ಬೆಡ್‌ ಶೀಟ್ : ಬಾಡಿಗೆ- ₹20
    • ಕವರ್‌ ಸಹಿತ ತಲೆದಿಂಬು : ಬಾಡಿಗೆ- ₹30

    ಪ್ರತಿ ಪ್ರಯಾಣಕ್ಕೆ ಒಂದೇ ಬಾರಿ ಬಳಸುವಂತೆ ವ್ಯವಸ್ಥೆ ಕೊಡಲಾಗಿದೆ.

    ಪ್ರಾರಂಭಿಕ ಹಂತದಲ್ಲಿ ಸೇವೆ ಲಭ್ಯವಾಗುವ ರೈಲುಗಳು:

    ದಕ್ಷಿಣ ರೈಲ್ವೆ 10 ರೈಲುಗಳಲ್ಲಿ ಪ್ರಯೋಗಾತ್ಮಕವಾಗಿ ಸೇವೆ ಜಾರಿಗೊಳಿಸುತ್ತಿದೆ.

    • ಚೆನ್ನೈ – ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
    • ಚೆನ್ನೈ ಎಗಮೋರ್ – ಮಂಗಳೂರು ಎಕ್ಸ್‌ಪ್ರೆಸ್

    (ಇನ್ನೂ 8 ರೈಲುಗಳಲ್ಲಿ ಹಂತ ಹಂತವಾಗಿ ಆರಂಭ)

    ಯಶಸ್ವಿಯಾದರೆ ದೇಶದ ಬೇರೆ ಎಲ್ಲಾ ನಾನ್-ಎಸಿ ಸ್ಲೀಪರ್ ರೈಲುಗಳಿಗೆ ವಿಸ್ತರಣೆ.

    ಸರ್ಕಾರದ ಉದ್ದೇಶ:

    • ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಗುಣಮಟ್ಟದ ಅನುಭವ
    • ರಾತ್ರಿ ಪ್ರಯಾಣದ ಆರೋಗ್ಯ–ಆರಾಮದ ರಕ್ಷಣೆ
    • ರೈಲು ಪ್ರಯಾಣವನ್ನು ಮತ್ತಷ್ಟು ಜನಸ್ನೇಹಿ ಮಾಡುವುದು

    2026ರ ಜನವರಿ 1ರಿಂದ, ನಾನ್-ಎಸಿ ಸ್ಲೀಪರ್ ಕೋಚ್ ಪ್ರಯಾಣಿಕರು ಸಣ್ಣ ಬಾಡಿಗೆಯೊಂದಿಗೆ ಹಾಸಿಗೆ–ಹೊದಿಕೆ–ತಲೆದಿಂಬು ಸೌಲಭ್ಯವನ್ನು ಪಡೆಯಬಹುದಾಗಿದೆ. ಆರಂಭದಲ್ಲಿ 10 ರೈಲುಗಳಲ್ಲಿ, ನಂತರ ಹಂತ ಹಂತವಾಗಿ ದೇಶವ್ಯಾಪಿ ಜಾರಿಗೆ ಬರಲಿದೆ.

    apvc-iconPost Views: 21
  • ಟಾಕ್ಸಿಕ್ ಗೆ ಸೆಡ್ಡು ಹೊಡೆಯಲು ಐದಾರು  ಸಿನಿಮಾಗಳು ಸಾಲುಗಟ್ಟಿ ಬರುತ್ತಿವೆ!

    ಟಾಕ್ಸಿಕ್ ಗೆ ಸೆಡ್ಡು ಹೊಡೆಯಲು ಐದಾರು ಸಿನಿಮಾಗಳು ಸಾಲುಗಟ್ಟಿ ಬರುತ್ತಿವೆ!

    ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19ರಂದು ಜಗತ್ತಿನಾದ್ಯಂತ ತೆರೆಗೆ ಬರಲು ಸಿದ್ಧವಾಗುತ್ತಿದ್ದಂತೆಯೇ, ಕನ್ನಡದಿಂದ ಹಿಡಿದು ಬಾಲಿವುಡ್‌–ಟಾಲಿವುಡ್‌ ವರೆಗೆ ಎಲ್ಲೆಡೆ ಚಲನಚಿತ್ರ ಚಲನ ಶುರುವಾಗಿದೆ. ಇನ್ನೂ ನೂರು ದಿನ ಬಾಕಿ ಇದ್ದರೂ ಟಾಕ್ಸಿಕ್ ಕುರಿತಂತೆ ಚರ್ಚೆ ಗಟ್ಟಿಯಾಗಿ ನಡೆಯುತ್ತಿದೆ. ಯಶ್ ತಮ್ಮ ಅಭಿಮಾನಿಗಳೊಂದಿಗೆ ಹೊಸ ಸಂದೇಶ ಹಂಚಿಕೊಂಡಿರುವುದು ಈ ಸಂಭ್ರಮಕ್ಕೆ ಮತ್ತಷ್ಟು ವೇಗ ನೀಡಿದೆ. ಆದರೆ ಈ ಬಾರಿ ಟಾಕ್ಸಿಕ್ ಒಬ್ಬನೇ ಕಣಕ್ಕಿಳಿಯುವುದಿಲ್ಲ; ಅದೇ ಸಮಯದಲ್ಲಿ ಇನ್ನೂ ಅನೇಕ ದೊಡ್ಡ ಸಿನಿಮಾಗಳು ಸಾಲಾಗಿ ನಿಂತಿವೆ.

    ಟಾಕ್ಸಿಕ್ ಬಿಡುಗಡೆಯಾದ ತಕ್ಷಣದ ದಿನವೇ ಅಜಯ್ ದೇವಗನ್ ನಟನೆಯ ಧಮಾಲ್ 4 ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕಾಮಿಡಿ ಮತ್ತು ಮನರಂಜನೆಯನ್ನು ಒಟ್ಟುಗೂಡಿಸಿಕೊಂಡಿರುವ ಈ ಸಿನಿಮಾಗೆ ಬಾಲಿವುಡ್‌ನಲ್ಲಿ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಅದರ ಜೊತೆಗೆ ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರ ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಓಡುತ್ತಿದ್ದು, ಅದರ ಮುಂದಿನ ಭಾಗವನ್ನು ಇದೇ ಸಮಯಕ್ಕೆ ತರಲು ತಂಡ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಎರಡು ಬಾಲಿವುಡ್‌ ಸಿನಿಮಾಗಳು ತಮ್ಮದೇ ಅಭಿಮಾನಿ ಬಳಗವನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವುದರಿಂದ, ಮರೀಚಿಕೆ ಗದ್ದಲ ಖಚಿತ.

    ಇದೇ ವೇಳೆ ಟಾಲಿವುಡ್‌ ಕೂಡ ಕೈ ಮುಗಿದು ಕುಳಿತಿಲ್ಲ. ಮಾರ್ಚ್ ತಿಂಗಳ ಕೊನೆಯಲ್ಲಿ ಡಕಾಯಿತ್ ಸಿನಿಮಾ ರಿಲೀಸ್‌ ಆಗಲು ಸಜ್ಜಾಗುತ್ತಿದೆ. ಗುಂಡು–ಗಲಾಟೆ, ಟೆನ್ಷನ್, ಆಕ್ಷನ್ ಆಲ್ ಮಿಕ್ಸೆಡ್ ಎಂಬ ಶೈಲಿಯ ಈ ಚಿತ್ರ ಈಗಲೇ ಪ್ರೇಕ್ಷಕರಲ್ಲಿ ಕುತೂಹಲ ಬಿತ್ತಿದೆ. ಅದೇ ವಾರದಲ್ಲಿ ರಾಮ್ ಚರಣ್ ತನ್ನ ಅತ್ಯಂತ ನಿರೀಕ್ಷಿತ ಪೆದ್ದಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಹಾಡುಗಳು ಮತ್ತು ಟೀಸರ್‌ಗಳು ವೈರಲ್ ಆಗಿರುವುದರಿಂದ ಈ ಚಿತ್ರದ ನಿರೀಕ್ಷೆ ಮಾರ್ಚ್‌ ತಿಂಗಳ ಹವಾ ಬದಲಾಯಿಸುವ ಮಟ್ಟಕ್ಕೆ ಏರಿದೆ. ಇದೇ ದಿನ ಮತ್ತೊಂದು ದೊಡ್ಡ ಚಲನಚಿತ್ರ, ನಾನಿ ಅಭಿನಯದ ದಿ ಪ್ಯಾರಡೈಸ್, ಪ್ರೇಕ್ಷಕರ ಮುಂದೆ ಬರಲಿದೆ. ನಾನಿಯ ಚಿತ್ರಗಳಿಗೆ ಇರುವ ನಂಬಿಕೆ ಮತ್ತು ಪ್ರೀತಿ ಈ ಚಿತ್ರಕ್ಕೂ ಬಲ ನೀಡಲಿದೆ.

    ಒಂದೇ ತಿಂಗಳಲ್ಲಿ, ಒಂದೇ ಕಾಲದಲ್ಲಿ ಆರು ಬೃಹತ್ ಸಿನಿಮಾಗಳು ತೆರೆಗೆ ಬರುವುದು ಸಾಮಾನ್ಯ ಸಂಗತಿ ಅಲ್ಲ. ಪ್ರತಿ ಚಿತ್ರವೂ ತನ್ನದೇ ಭಿನ್ನ ಜಾನರ್‌, ವಿಭಿನ್ನ ಸಿನೆಮಾಟಿಕ್‌ ಸ್ಟೈಲ್‌, ತನ್ನದೇ ಅಭಿಮಾನಿಗಳ ಬೆಂಬಲ ಇವೆಲ್ಲ ಸೇರಿ ಮಾರ್ಚ್ 2026 ಅನ್ನು ನಿಜವಾದ ಸಿನೆಮಾ ಹಬ್ಬದ ತಿಂಗಳನ್ನಾಗಿ ಮಾಡುತ್ತಿದೆ. ಇದೊಂದು ಬಾಕ್ಸ್‌ ಆಫೀಸ್‌ ಯುದ್ಧವೇ ಆಗಬಹುದು, ಆದರೆ ಪ್ರೇಕ್ಷಕರಿಗೆ ಇದು ಸಂಪೂರ್ಣ ಉತ್ಸವ.

    ಟಾಕ್ಸಿಕ್ ತನ್ನದೇ ಲೆವೆಲ್‌ನಲ್ಲಿ ದೊಡ್ಡ ನಿರೀಕ್ಷೆಯನ್ನು ಹೊತ್ತಿದ್ದರೂ, ಎದುರು ನಿಂತಿರುವ ಸಿನಿಮಾಗಳು ಕೂಡ ಲಘು ಪ್ರತಿಸ್ಪರ್ಧಿಗಳಲ್ಲ. ಯಶ್, ಅಜಯ್ ದೇವಗನ್, ರಣವೀರ್ ಸಿಂಗ್, ರಾಮ್ ಚರಣ್, ನಾನಿ ಎಲ್ಲರೂ ಒಂದೇ ವೇದಿಕೆಯಲ್ಲಿ ತಮ್ಮದೇ ಆದ ಮಿಂಚನ್ನು ತೋರಿಸಲು ಸಿದ್ಧರಾಗಿದ್ದಾರೆ. ಯಾವ ಸಿನಿಮಾ ಜೋರಾಗಿ ಓಡುತ್ತದೆ, ಯಾವುದು ಬಾಕ್ಸ್‌ ಆಫೀಸ್‌ನಲ್ಲಿ ಸ್ಪರ್ಧೆಯನ್ನು ಮೀರಿಸುತ್ತದೆ ಎಂಬ ಕುತೂಹಲ ಈಗಲೇ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

    ಒಟ್ಟಾರೆ ನೋಡಿದರೆ, 2026ರ ಮಾರ್ಚ್ ತಿಂಗಳು ಸಿನಿಮಾಪ್ರಿಯರಿಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಹಬ್ಬದ ಮಾಸವಾಗಲಿದೆ. ಪ್ರೇಕ್ಷಕರು ಯಾವ ಚಿತ್ರವನ್ನು ಮೊದಲಿಗೆ ನೋಡಬೇಕು ಎಂದು ಯೋಚಿಸುವಷ್ಟರಲ್ಲಿ ಮತ್ತೊಂದು ದೊಡ್ಡ ರಿಲೀಸ್‌ ಬಾಗಿಲಲ್ಲೇ ಕಾದಿದೆ. ಒಂದು ಮಾತಿನಲ್ಲಿ ಹೇಳಬೇಕಾದರೆ ಆ ತಿಂಗಳು ಥಿಯೇಟರ್‌ಗಳಿಗೆ ಹೋಗುವುದು ಕೇವಲ ಸಿನಿಮಾ ನೋಡುವುದು ಅಲ್ಲ; ಅದು ಒಂದು ಅನುಭವ!

    apvc-iconPost Views: 5
  • IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ  ಭಾರತ ತಂಡದ 11ರ ಬಳಗ ಹೇಗಿರಲಿದೆ?

    IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ ಭಾರತ ತಂಡದ 11ರ ಬಳಗ ಹೇಗಿರಲಿದೆ?

    ಭಾರತ–ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭಕ್ಕೆ ಗಂಟೆಗಳು ಮಾತ್ರ ಬಾಕಿ. ಕಟಕ್‌ನ ಕ್ರೀಡಾಂಗಣದಲ್ಲಿ ಇಂದು ನೆಡೆಯಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಹಣಾಹಣಿಗೆ ಯಾವ 11 ಮಂದಿ ಮೈದಾನಕ್ಕಿಳಿಯಲಿದ್ದಾರೆ ಎಂಬುದು ಈಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಯಾಗಿದೆ. ಕಾರಣ ಟೀಂ ಇಂಡಿಯಾ ಶಿಬಿರದಲ್ಲಿ ಅನೇಕರು ಫಾರ್ಮ್ನಲ್ಲಿರುವುದು.

    ಮೊದಲನೆಯದಾಗಿ, ಆರಂಭಿಕ ಜೋಡಿಯೇ ಈಗ ಕುತೂಹಲ. ಕುತ್ತಿಗೆ ನೋವಿನಿಂದ ಹೊರ ಬಂದಿರುವ ಉಪನಾಯಕ ಶುಭ್‌ಮನ್ ಗಿಲ್ ಮತ್ತೆ ತಂಡಕ್ಕೆ ಸೇರಿದ ಸುದ್ದಿ ಶಿಬಿರಕ್ಕೆ ಹೊಸ ಚೈತನ್ಯ ತಂದಿದೆ. ಗಿಲ್ ಜೊತೆಗೆ ಅಭಿಷೇಕ್ ಶರ್ಮಾ ಇನಿಂಗ್ಸ್‌‌ಗೆ ಸ್ಫೋಟಕ ಆರಂಭ ಕೊಡುವ ಸಾಧ್ಯತೆ ಬಲವಾಗಿದೆ. ಇವರಿಬ್ಬರ ಆಟದ ಶೈಲಿ ಕಟಕ್ ಪಿಚ್‌ಗೆ ಚೆನ್ನಾಗಿ ಹೊಂದಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.

    ಮೂರನೇ ಕ್ರಮಾಂಕಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ ಆಗಮಿಸುತ್ತಾರೆ. ಅಬ್ಬರದ ಸ್ಟ್ರೈಕ್‌ರೇಟ್ ಮೂಲಕ ತೀವ್ರ ಒತ್ತಡದಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವರಿಗೆ ಇದೆ. ಅವರ ನಂತರ ತಿಲಕ್ ವರ್ಮಾ ನಡೆಯುವ ವೇಗ ಬದಲಾಯಿಸುವ ಗುಣವಿರುವ ಯುವ ಮುಖ. ಮಧ್ಯ ಕ್ರಮಾಂಕದ ಹೊಣೆಗಾರಿಕೆಯ ಬಹುತೇಕ ಭಾಗ ಇವರಿಬ್ಬರ ಮೇಲೆ ಇರುತ್ತದೆ.

    ಆಲ್‌ರೌಂಡ್ ವಿಭಾಗದಲ್ಲಿ ದೊಡ್ಡ ಹೆಸರು ಹಾರ್ದಿಕ್ ಪಾಂಡ್ಯ. ಗಾಯದಿಂದ ಚೇತರಿಸಿಕೊಂಡು ಮರಳುತ್ತಿರುವ ಹಾರ್ದಿಕ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಮತೋಲನ ತರುತ್ತಾರೆ. ಇವರೊಂದಿಗೆ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ಅಕ್ಷರ್‌ರ ಸ್ಪಿನ್, ದುಬೆರ ಶಕ್ತಿಶಾಲಿ ಹಿಟಿಂಗ್ಇವೆರಡೂ ತಂಡಕ್ಕೆ ಉಪಯೋಗ.

    ವಿಕೆಟ್ ಕೀಪರ್ ಸ್ಥಾನ ಮಾತ್ರ ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಜಿತೇಶ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ಅವಕಾಶ ಬಳಸಿಕೊಂಡಿದ್ದರೆ, ಅನುಭವದ ಮೈಲಿಗಲ್ಲು ಹೊಂದಿರುವ ಸಂಜು ಸ್ಯಾಮ್ಸನ್ ಕೂಡ ಬಾಗಿಲಲ್ಲೇ ನಿಂತಿದ್ದಾರೆ. ನಿರ್ಧಾರ ಯಾವತ್ತಕ್ಕೆ ಬದಲಾಗುತ್ತದೆ ಎಂಬ ಕುತೂಹಲವಿದೆ. ಆದರೆ ತಂಡದ ಒಳಗಿನ ಚಲನವಲನ ನೋಡಿದರೆ, ಜಿತೇಶ್‌ಗೆ ಸ್ವಲ್ಪ ಹೆಚ್ಚು ಬಲವಿದೆ.

    ಬೌಲಿಂಗ್ ಹೆಗ್ಗಳಿಕೆಗೆ ಬಂದರೆ ಬುಮ್ರಾ ಇದ್ದಂತೆಯೇ ಭದ್ರತೆ. ಅರ್ಷದೀಪ್ ಸಿಂಗ್ ಆರಂಭದ ಓವರ್‌ಗಳಲ್ಲಿ ಸ್ವಿಂಗ್‌ನಿಂದ ಸವಾಲು ಹಾಕಬಹುದು. ಮೂರನೇ ಪ್ರಮುಖ ಬೌಲರ್ ವರುಣ್ ಚಕ್ರವರ್ತಿ ರಂಗಿನ ವೈವಿಧ್ಯಮಯ ಸ್ಪಿನ್‌ಗಳು ಟಿ20 ಕ್ರಿಕೆಟ್‌ಗೆ ನೀಡುವ ರಹಸ್ಯ ಅಸ್ತ್ರ. ಜೊತೆಗೂಡಿ ಅಕ್ಷರ್ ಹಾಗೂ ಹಾರ್ದಿಕ್ ಸಹಾಯಕ ಬೌಲರ್‌ಗಳಾಗಿ ತಮ್ಮ ಪಾತ್ರ ನಿಭಾಯಿಸುತ್ತಾರೆ.

    ಕಟಕ್‌ನ ಮೊದಲ ಟಿ20ಗಾಗಿ ಭಾರತದ ಸಂಭಾವ್ಯ 11 ಹೀಗಿದೆ:

    ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

    ಸರಣಿ ಆರಂಭವಾಗುವುದಕ್ಕೂ ಮುನ್ನವೇ ಉತ್ಸಾಹ ಶ್ರೇಷ್ಟ ಮಟ್ಟಕ್ಕೆ ತಲುಪಿದೆ. ಭಾರತದ ಈ ಹೊಸ ಸಂಯೋಜನೆ ಮೈದಾನದಲ್ಲಿ ಎಷ್ಟು ಫಲ ನೀಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    apvc-iconPost Views: 6