Blog

  • ಗುತ್ತಿಗೆದಾರರಿಂದ 14 ಸಾವಿರ ಹಣ ಪಡೆದ ದ್ವಿತೀಯ ದರ್ಜೆ ಸಹಾಯಕಿ

    ಗುತ್ತಿಗೆದಾರರಿಂದ 14 ಸಾವಿರ ಹಣ ಪಡೆದ ದ್ವಿತೀಯ ದರ್ಜೆ ಸಹಾಯಕಿ

    *ಸತ್ಯಕಾಮ ವಾರ್ತೆ ಯಾದಗಿರಿ:*
    ಶಹಾಪುರ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಮಿನಾಕ್ಷಿ ಎಂಬುವವರು ಗುತ್ತಿಗೆದಾರರಿಂದ 14ಸಾವಿರ ರೂ ಲಂಚವನ್ನು ರಾಜಾರೋಷವಾಗಿ ಪಡೆದಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಂಡಿದೆ.

    ಕಳೆದ ನಾಲ್ಕೈದು ದಿನಗಳಯಿಂದಷ್ಟೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದೂ, ತಾಲೂಕು ಪಂಚಾಯಿತಿ ಕಚೇರಿಯೊಳಗೆ ದ್ವಿತೀಯ ದರ್ಜೆ ಸಹಾಯಕಿ ಗುತ್ತಿಗೆದಾರರು ಮಾತುಕತೆ ನಡೆಸಿ 14ಸಾವಿರ ರೂಪಾಯಿ ಹಣ ನೀಡಿರುವ 6ನಿಮಿಷ 50 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆ ವಿಡಿಯೋದಲ್ಲಿ ಸರ್ ಗೆ 3% ಎಂದು ಹೇಳಲಾಗಿದ್ದು ಆ ಸರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತಾ. ಪಂಚಾಯತಿಯಲ್ಲಿ ಕಾಮಗಾರಿ ಟೆಂಡರ್ ಪಡೆಯಬೇಕಾದರೆ 4% ಲಂಚ ಅಧಿಕಾರಿಗಳ ಜೇಬಿಗೆ ತುಂಬಿಸಬೇಕಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳತ್ತಿದ್ದಾರೆ.

    apvc-iconPost Views: 22
  • ಕರ್ನಾಟಕದ ೨೦ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ: ೯ ಹಾಲಿ ಸಂಸದರಿಗೆ ಕೊಕ್​, ಜಾಧವ್ ಮತ್ತೆ ಕಣಕ್ಕೆ

    ಕರ್ನಾಟಕದ ೨೦ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ: ೯ ಹಾಲಿ ಸಂಸದರಿಗೆ ಕೊಕ್​, ಜಾಧವ್ ಮತ್ತೆ ಕಣಕ್ಕೆ


    ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ೨೮ ಲೋಕಸಭೆ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳಿಗೆ ಟಿಕೆಟ್​ ಪ್ರಕಟಿಸಲಾಗಿದೆ. ಕೆಲ ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದೆ. ಹೊಸಬರಿಗೆ ಅವಕಾಶ ನೀಡಲಾಗಿದೆ. ವಿರೋಧದ ನಡುವೆಯೂ ಕೆಲವರಿಗೆ ಮಣೆ ಹಾಕಲಾಗಿದ್ದು, ಬಿಜೆಪಿ ಸದಸ್ಯತ್ವ ಪಡೆಯದೇ ಇರುವ ಡಾ. ಮಂಜುನಾಥ್ ಅವರಿಗೂ ಟಿಕೆಟ್ ಪ್ರಕಟಿಸಲಾಗಿದ್ದು, ಕಲಬುರಗಿಯಿಂದ ಉಮೇಶ್ ಜಾಧವ್ ಮತ್ತೆ ಕಣಕ್ಕಿಳಿದಿದ್ದಾರೆ.
    ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ೯೫,೪೫೨ ಮತಗಳಿಂದ ಖರ್ಗೆ ಅವರನ್ನು ಸೋಲಿಸಿದ್ದರು. “ಸೋಲಿಲ್ಲದ ಸರದಾರ” ಎಂದು ಜನಪ್ರಿಯವಾಗಿ ಕರೆಯಲ್ಪಡುವ (ಸೋಲದ ನಾಯಕ), ಇದು ಹಲವಾರು ದಶಕಗಳ ಕಾಲದ ಖರ್ಗೆಯವರ ರಾಜಕೀಯ ಜೀವನದಲ್ಲಿ ಮೊದಲ ಚುನಾವಣಾ ಸೋಲಾಗಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
    ಕಟೀಲ್, ಪ್ರತಾಪ್, ಡಿವಿಎಸ್​ಗೆ ಕೊಕ್: ೨೦ ಕ್ಷೇತ್ರಗಳ ಪೈಕಿ ೯ ಜನ ಹಾಲಿ ಸಂಸದರಿಗೆ ಟಿಕೆಟ್​ ಕೈತಪ್ಪಿದೆ. ಇದರಲ್ಲಿ ಚಾಮರಾಜನಗರದ ವಿ ಶ್ರೀನಿವಾಸ್​ ಪ್ರಸಾದ್​, ತುಮಕೂರಿನ ಎಲ್​ ಬಸವರಾಜ್, ಹಾವೇರಿ ಶಿವಕುಮಾರ್ ಉದಾಸಿ ಈ ಹಿಂದೆ ಸ್ಪರ್ಧೆ ಮಾಡುವುದಿಲ್ಲವೆಂದು ಘೋಷಿಸಿದ್ದರು. ಅದರಂತೆಯೇ ಈ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ ಹಾಕಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ತಮ್ಮ ​ಪುತ್ರನಿಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ.
    ಮತ್ತೊಂದೆಡೆ ತುಮಕೂರಿನಲ್ಲಿ ಹಿರಿಯ ನಾಯಕ ವಿ ಸೋಮಣ್ಣ ಅವರಿಗೆ ಟಿಕೆಟ್​ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ನಿರೀಕ್ಷೆಯಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಮೈಸೂರಿನಲ್ಲಿ ಪ್ರತಾಪ್​ ಸಿಂಹ ಬದಲಿಗೆ ಯದುವೀರ್ ಒಡೆಯರ್ ಅವರಿಗೆ ಅವಕಾಶ ನೀಡಲಾಗಿದೆ.
    ಇದೇ ವೇಳೆ ವಿರೋಧದ ನಡುವೆಯೂ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಅವರನ್ನು ಕಣಕ್ಕೆ ಇಳಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಿಂದ ಕಟೀಲ್​ ಬದಲಿಗೆ ಬ್ರಿಜೇಶ್​ ಚೌಟ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.
    ಬೆಂಗಳೂರು ಕೇಂದ್ರದಿAದ ಪಿ.ಸಿ.ಮೋಹನ್ ಅವರಿಗೆ ಟಿಕೆಟ್​ ಕೈ ತಪ್ಪಲಿದೆ ಎಂಬ ವದಂತಿ ನಡುವೆಯೂ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ಬಿಗಿ ಪಟ್ಟಿನ ನಡುವೆಯೂ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಸಿಕ್ಕಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಬಿಜೆಪಿ ಮಣೆ ಹಾಕಿದೆ.
    ಕ್ಷೇತ್ರವಾರು ಅಭ್ಯರ್ಥಿಗಳ ಮಾಹಿತಿ ಈ ಕೆಳಗಿನಂತಿದೆ.
    ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
    ಬಾಗಲಕೋಟೆ – ಪಿ.ಸಿ. ಗದ್ದಿಗೌಡರ್
    ವಿಜಯಪುರ – ರಮೇಶ ಜಿಗಜಿಣಗಿ
    ಕಲಬುರಗಿ – ಉಮೇಶ್ ಜಾಧವ್
    ಬೀದರ್ – ಭಗವಂತ್ ಖೂಬಾ
    ಕೊಪ್ಪಳ – ಡಾ. ಬಸವರಾಜ್ ಕ್ಯಾವತ್ತೂರು
    ಬಳ್ಳಾರಿ – ಬಿ. ಶ್ರೀರಾಮುಲು
    ಹಾವೇರಿ – ಬಸವರಾಜ ಬೊಮ್ಮಾಯಿ
    ಧಾರವಾಡ – ಪ್ರಹ್ಲಾದ್ ಜೋಶಿ
    ದಾವಣಗೆರೆ – ಗಾಯತ್ರಿ ಸಿದ್ದೇಶ್ವರ್
    ಶಿವಮೊಗ್ಗ – ಬಿ.ವೈ. ರಾಘವೇಂದ್ರ
    ಚಿಕ್ಕಮಗಳೂರು – ಉಡುಪಿ – ಕೋಟ ಶ್ರೀನಿವಾಸ್ ಪೂಜಾರಿ
    ದಕ್ಷಿಣ ಕನ್ನಡ – ಬ್ರಿಜೇಶ್​ ಚೌಟ
    ತುಮಕೂರು – ವಿ. ಸೋಮಣ್ಣ

    apvc-iconPost Views: 0
  • ಮಾದಕ  ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ – ಅಮಿತ್ ಶಾ

    ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ – ಅಮಿತ್ ಶಾ

    ನವ ದೆಹಲ್ಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದರು. ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಮೂಲಕ, ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಸಾಧಿಸುವತ್ತ ಮೋದಿ ಸರ್ಕಾರ ವೇಗವಾಗಿ ಸಾಗುತ್ತಿದೆ. ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ಮುಕ್ತ ಭಾರತವು ಮುಂಬರುವ ಪೀಳಿಗೆಗೆ ಬಹುದೊಡ್ಡ ಕೊಡುಗೆಯಾಗಲಿದೆ.

    ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಕಟ್ಟುನಿಟ್ಟಿನ ಧೋರಣೆ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಮಾದಕ ದ್ರವ್ಯ ವ್ಯಾಪಾರವನ್ನು ತಡೆಗಟ್ಟಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ, ಈ ಕ್ರಮಗಳ ಮೂಲಕ ಮಾದಕ ದ್ರವ್ಯಗಳ ಜಫ್ತಿ ಮತ್ತು ಬಂಧನಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಶಾ ಅವರ ನಿಷ್ಠುರ ನೀತಿಗಳಿಂದಾಗಿ, ಸರ್ಕಾರಗಳು ಮತ್ತು ಏಜೆನ್ಸಿಗಳ ನಡುವಿನ ಸಮನ್ವಯ, ಸಹಕಾರ ಮತ್ತು ಸಹಯೋಗದ ಮೂಲಕ, ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಲ್ಲಿ ಮತ್ತು ಪ್ರಕರಣಗಳ ದಾಖಲೆಗಳಲ್ಲಿ ವೃದ್ಧಿಯಾಗಿದೆ.
    ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ಅಕ್ರಮ ಮಾದಕ ದ್ರವ್ಯದ ವ್ಯಾಪಾರವನ್ನು ತಡೆಯಲು ನಡೆಸಿದ ಬಹುಮುಖ ಪ್ರಯತ್ನಗಳಿಂದ, ವಶಪಡಿಸಿಕೊಂಡ ಮಾದಕವಸ್ತುಗಳ ಪ್ರಮಾಣವು ಸುಮಾರು 100% ಹೆಚ್ಚಾಗಿವೆ ಮತ್ತು ಅದನ್ನು ವ್ಯವಹರಿಸುವವರ ವಿರುದ್ಧ ದಾಖಲಾಗುವ ಪ್ರಕರಣಗಳು 152% ಹೆಚ್ಚಾಗಿವೆ.

    ಅಂಕಿಅಂಶಗಳ ಪ್ರಕಾರ, 2006 ರಿಂದ 2013 ರ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1257 ಇತ್ತು, ಇದು 2014-2023 ರ ಅವಧಿಯಲ್ಲಿ 3 ಪಟ್ಟು ಏರಿಕೆಯಾಗಿ 3755 ಕ್ಕೆ ತಲುಪಿದೆ. 2006-13 ರ ಅವಧಿಯಲ್ಲಿ 1363 ಬಂಧನಗಳಾಗಿದ್ದವು, ಇವು 4 ಪಟ್ಟು ಹೆಚ್ಚಿ 2014-23 ಅವಧಿಯಲ್ಲಿ ಬಂಧನಗಳ ಸಂಖ್ಯೆ 5745 ಕ್ಕೆ ತಲುಪಿದೆ. 2006-13ರಲ್ಲಿ ವಶಪಡಿಸಿಕೊಂಡಿದ್ದ 1.52 ಲಕ್ಷ ಕೆಜಿ ಡ್ರಗ್ಸ್ ಪ್ರಮಾಣ ಮೋದಿ ಆಡಳಿತದಲ್ಲಿ ದ್ವಿಗುಣಗೊಂಡು 3.95 ಲಕ್ಷ ಕೆಜಿಗೆ ತಲುಪಿದೆ. 2006-13ರ ಅವಧಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯವು ರೂ.768 ಕೋಟಿಯಿತ್ತು, ಇದು ಮೋದಿ ಸರ್ಕಾರದ ಅವಧಿಯಲ್ಲಿ 30 ಪಟ್ಟು ಹೆಚ್ಚಾಗಿ ರೂ.22,000 ಕೋಟಿಗೆ ತಲುಪಿದೆ.

    ಮೋದಿಯವರ ನಾಯಕತ್ವ ಮತ್ತು ಶಾ ಅವರ ದೂರದೃಷ್ಟಿಯಿಂದಾಗಿ, ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳು 12,000 ಕೋಟಿ ರೂಪಾಯಿ ಮೌಲ್ಯದ 12 ಲಕ್ಷ ಕಿಲೋಗ್ರಾಂಗಳಷ್ಟು ಡ್ರಗ್ಸ್ಅನ್ನು ನಾಶಪಡಿಸುವ ಅಭೂತಪೂರ್ವ ಕೆಲಸವನ್ನು ಮಾಡಿವೆ. ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸಾಗಿಸಲು ಕೇಂದ್ರ ಮತ್ತು ರಾಜ್ಯ ಮಾದಕ ದ್ರವ್ಯ ಕಾನೂನು ಜಾರಿ ಸಂಸ್ಥೆಗಳ ನಡುವೆ ಉತ್ತಮ ಒಗ್ಗಟ್ಟು ಮತ್ತು ಹೊಂದಾಣಿಕೆಗಾಗಿ 2019 ರಲ್ಲಿ ನಾಲ್ಕು ಹಂತದ NCORD ಕಾರ್ಯವಿಧಾನವನ್ನು ಬಲಪಡಿಸಲಾಯಿತು.

    ಮೋದಿ ಸರಕಾರದಲ್ಲಿ, ಮಾದಕ ವ್ಯಸನ ಮುಕ್ತ ನವ ಭಾರತ ನಿರ್ಮಾಣಕ್ಕೆ ಅಮಿತ್ ಶಾ ಅವರ ತಂತ್ರಗಾರಿಕೆಗಳು ಫಲ ನೀಡುತ್ತಿರುವುದಕ್ಕೆ ಕೇವಲ ನಮ್ಮ ದೇಶವಲ್ಲದೇ ಜಗತ್ತಿನಾದ್ಯಂತದ ಜನರು ಸಾಕ್ಷಿಯಾಗಿದ್ದಾರೆ.

    apvc-iconPost Views: 0
  • ದಿ|| ಮಾಜಿ ಅಧ್ಯಕ್ಷನಿಗೆ ಅಗೌರವ ತಂದ ಮಹಾನ್ ಸಾಹಿತಿಗಳ ವೇದಿಕೆ

    ದಿ|| ಮಾಜಿ ಅಧ್ಯಕ್ಷನಿಗೆ ಅಗೌರವ ತಂದ ಮಹಾನ್ ಸಾಹಿತಿಗಳ ವೇದಿಕೆ


    ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಫೆ.೨೬ ಹಾಗೂ ೨೭ರಂದು ನಡೆದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರು ಅವರಿಗೆ ನುಡಿ ನಮನ ಸಲ್ಲಿಸದೆ ಕಾರ್ಯಕ್ರಮ ನಡೆಸಿರುವುದು ವಿಪರ್ಯಾಸ.
    ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮೊದಲು ದಿವಂಗತರಿಗೆ ಗೌರವ ನಮನ ಸಲ್ಲಿಸಿ ತದನಂತರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡಬೇಕಾಗಿತ್ತು. ಆದರೆ ಕಸಾಪ ಈ ಕೆಲಸ ಮಾಡದೆ ಅಗೌರವ ತೋರಿರುವುದು ಸಾಹಿತಿಕಾರರಿಗೆ ಹಾಗೂ ಕನ್ನಡಾಭಿಮಾನಿಗಳಲ್ಲಿ ಬೇಸರ ತರಿಸಿದೆ.
    ಹೌದು ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರರವರು ಸಾಹಿತ್ಯ ಪರಿಷತ್ತಿಗೆ ನೀಡಿರುವ ಕೊಡುಗೆ ಅಪಾರ, ೧೯೯೫ರಲ್ಲಿ ಕಲ್ಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಿಗೆ ಸರ್ವಾಧ್ಯಕ್ಷ ಪಟ್ಟವನ್ನು ಕಟ್ಟಿ ಕನ್ನಡದ ತೆರನ್ನು ಎಳೆದವರು. ಅಲ್ಲದೆ ಕನ್ನಡದ ಕಂಪು ಕಲ್ಬುರ್ಗಿಯ ಜನರಿಗೆ ಉಣಬಡಿಸಿದರು, ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿ ಕಚೇರಿಯನ್ನಾಗಿ ಮಾಡುವುದರ ಜೊತೆಗೆ ಈಗಿರುವ ದಿ|| ಬಾಪುಗೌಡ ರಂಗಮಂದಿರಕ್ಕೆ ಭೂಮಿ ಪೂಜೆ ಆದದ್ದು ಕೂಡ ಇವರ ಕಾಲದಲ್ಲಿ ಎಂಬುದು ಈಗಿನ ಸಾಹಿತಿಗಳು ತಿಳಿದು ಕೊಳ್ಳಬೇಕು.
    ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆಯ ಹಿರಿಮೆ ಗರಿಮೆಯ ಕನ್ನಡಿಗರ ಐಕ್ಯತೆಯ ಕನ್ನಡದ ಅಳಿವು ಉಳಿವಿನ ಕೋಟಿ ಲೆಕ್ಕದ ವೇದಿಕೆಯಾಗಬೇಕು. ಭಾಷೆಯೊಂದಕ್ಕೆ ಇಂತಹ ಅತೀ ದೊಡ್ಡ ಮನ್ನಣೆ ಸಿಗುತ್ತಿರುವಾಗ ಅದೊಂದು ರಾಜಕೀಯ ಜಾತ್ರೆಯಂತಾಗಿದ್ದು ಬೇಸರ.
    ಒಂದರ್ಥದಲ್ಲಿ ರಾಜಕೀಯ ಅಸ್ಪೃಶ್ಯತೆ ಕೂಡ ಸಾಹಿತ್ಯ ಲೋಕದಲ್ಲಿ ನುಸುಳಿದೆ ಎಂದು ಹೇಳಬಹುದು. ಸಾಹಿತ್ಯ ಕ್ಷೇತ್ರವನ್ನು ಕಟ್ಟುತ್ತಿರುವುದು ಕವಿಗಳು ಮತ್ತು ಸಾಹಿತಿಗಳೆ ಹೊರತು ರಾಜಕೀಯದವರಲ್ಲ ಎಂಬುದನ್ನು ಮನದಟ್ಟಣೆ ಮಾಡಿಕೊಳ್ಳಬೇಕು. ಈ ಬೆಳವಣಿಗೆ ಸಾಹಿತ್ಯ ಲೋಕವನ್ನು ಮತ್ತು ಹಿರಿಯ ಸಾಹಿತಿಗಳನ್ನು ಬಹುಬೇಗಾ ದೂರತಳ್ಳುತ್ತಿರುವ ಮುನ್ಸೂಚನೆ ಕಂಡಬರುತ್ತಿದೆ.

    apvc-iconPost Views: 2
  • ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಇನ್ನಿಲ್ಲ

    ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಇನ್ನಿಲ್ಲ

    *ಸತ್ಯಕಾಮ ವಾರ್ತೆ ಬೆಂಗಳೂರು*
    ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ(67) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.

    ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಕೊನೆಯುಸಿರೆಳಿದಿದ್ದಾರೆ.ಮೊನ್ನೆಯಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಅವರು,ಕಾಂಗ್ರೆಸ್ ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಈವರೆಗೆ ನಾಲ್ಕು ಶಾಸಕರಾಗಿದ್ದರು.

    2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸುರಪುರ ಎಸ್​ಟಿ ಮೀಸಲು ಕ್ಷೇತ್ರದಿಂದ ಬಿಜೆಪಿಯ ರಾಜುಗೌಡ ಅವರನ್ನು ರಾಜಾ ವೆಂಕಟಪ್ಪ ನಾಯಕ್​ ಮಣಿಸಿದ್ದರು. ಈ ಮೂಲಕ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲದೇ ಈ ಬಾರಿ ಸಚಿವ ಸ್ಥಾನಕ್ಕೆ ಕಸರತ್ತು ನಡೆಸಿದ್ದರು. ಆದ್ರೆ, ಹೈಕಮಾಂಡ್​ ರಾಜಾ ವೆಂಕಟಪ್ಪ ನಾಯಕ ಅವರಿಗೆ ಉಗ್ರಾಣ ನಿಗಮ ನೀಡಲಾಗಿತ್ತು. ಅದರಂತೆ ಮೊನ್ನೇ ಅಷ್ಟೇ ಅವರು ಉಗ್ರಾಣ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

    apvc-iconPost Views: 0
  • ಯಾದಗಿರಿ ಜಿಲ್ಲಾ ಮಾಧ್ಯಮಪಟ್ಟಿಯಲ್ಲಿದ್ದವರಿಗೆ ಮಾತ್ರ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವಂತೆ..!ಅದ್ಯಕ್ಷರ  ಹೊಸ ವರಾತ

    ಯಾದಗಿರಿ ಜಿಲ್ಲಾ ಮಾಧ್ಯಮಪಟ್ಟಿಯಲ್ಲಿದ್ದವರಿಗೆ ಮಾತ್ರ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವಂತೆ..!ಅದ್ಯಕ್ಷರ ಹೊಸ ವರಾತ


    (ವರದಿ: ಕುದಾನ್‌ ಸಾಬ್‌)

    ಸತ್ಯಕಾಮ ವಾರ್ತೆ ಯಾದಗಿರಿ:
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾ ಘಟಕವು ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ದಿ ಮತ್ತು ವೃತ್ತಿಪರ ಉನ್ನತೀಕರಣಕ್ಕೆ ಸಕ್ರೀಯವಾಗಿ ಕೆಲಸ ಮಾಡಬೇಕೇ ಹೊರತು ತಮ್ಮ ಸ್ವಹಿತಾಸಕ್ತಿಗಾಗಿ ನೈಜ ಪತ್ರಕರ್ತರಿಗೆ ಸದಸ್ಯತ್ವ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಉದ್ಭವಿಸಿದೆ.

    ಸದಾ ಸಂಘಟನೆಯ ಸ್ಥಾನಮಾನಗಳಲ್ಲೆ ಇರಬೇಕು ಎಂಬ ಹಪಾಹಪಿಗೆ ಬಿದ್ದಿರುವ ಇಲ್ಲಿನ ಸಂಘದ ಜಿಲ್ಲಾಧ್ಯಕ್ಷ ಸದಸ್ಯತ್ವವನ್ನು ಹೊಸಬರಿಗೆ ಸದಸ್ಯತ್ವ ನಿರಾಕರಿಸಿ ಪತ್ರಕರ್ತ ಸಮೂಹದಲ್ಲಿ ಕುತಂತ್ರ ನಡೆಸುತ್ತಿದ್ದಾರೆ ಒಂದರ್ಥದಲ್ಲಿ ಪಟ್ಟ ಭದ್ರ ಮಾಡಿಕೊಳ್ಳುವ ಕುತಂತ್ರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಕಾರ್ಯನಿರತ ಪತ್ರಕರ್ತರು ಆರೋಪಿಸುತ್ತಿದ್ದಾರೆ.

    ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಬೇಕಾದಾರೆ ಜಿಲ್ಲೆಯ ಮಾಧ್ಯಮ ಪಟ್ಟಿಯಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಕೊಡಲಾಗುವುದು ಇಲ್ಲದಿದ್ದರೆ ಕೊಡಲು ಸಾಧ್ಯವಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಹೇಳುತ್ತಾರೆ. ಆದರೆ ಈ ಕುರಿತು ಯಾವುದಾದರೂ ಆದೇಶ ಇಲ್ಲವೇ ಪತ್ರಕರ್ತರ ಸಂಘದ ನಿರ್ಣಯ ಇದ್ದರೆ ನೀಡುವಂತೆ ಮಾಡುವ ಮನವಿಗೂ ನಕಾರಾತ್ಮಕವಾಗಿ ಅಸಂಬಂದ್ದ ಉತ್ತರ ನೀಡುತ್ತಾರೆ.

    ಪತ್ರಕರ್ತರ ಸಂಘದ ಬೈಲಾ ನೀಡುವಂತೆ ಕೇಳಿದರೆ ಕೊಡಲು ಬರುವುದಿಲ್ಲ ಎಂದು ಒಬ್ಬರು ಹೇಳಿದರೆ ಇನ್ನೊಬ್ಬ ಪದಾಧಿಕಾರಿ ರಾಜ್ಯಕ್ಕೆ ಎಲ್ಲ ಕಡೆ ಒಂದೇ ಬೈಲಾ ಇದೆ ಬೇಕಿದ್ದರೆ ಅಲ್ಲಿ ಹೋಗಿ ನೋಡಿಕೊಳ್ಳಿ ಎಂದು ಪರೋಕ್ಷವಾಗಿ ಹೇಳುತ್ತಿರುವುದು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

    ಇದಲ್ಲದೇ ಹೊಸದಾಗಿ ಬಂದ ಪತ್ರಕರ್ತರಿಗೆ ಹಾಗೂ ನೈಜ ಪತ್ರಕರ್ತರಿಗೆ ಸದಸ್ಯತ್ವ ಮಾಡಿಸುವ ಮೂಲಕ ಸಂಘವನ್ನು ಬಲಪಡಿಸಬೇಕಾದ ಜವಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರು ಯಾವುದೇ ಮಾಹಿತಿ ಕೇಳಿದರೆ ಸಾಕು ಸರ್ವಾಧಿಕಾರಿಯಂತೆ ವರ್ತಿಸಿ ಪತ್ರಿಕಾ ಭವನದ ಗ್ರೂಪ್ ನಿಂದ ರಿಮೂವ್ ಮಾಡುವುದು ಪತ್ರಕರ್ತರ ಸಂಘದ ಗ್ರೂಪ್ ನಿಂದ ರಿಮೂವ್ ಮಾಡುವುದು ಮಾಡುವ ಮೂಲಕ ಪತ್ರಕರ್ತರ ವಿರುದ್ಧವೇ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ನಡೆಯುತ್ತಿದೆ.

    ಪರಿಸ್ಥಿತಿ ಹೀಗೆ ಮುಂದುವರೆದರೆ ಅನ್ಯಾಯದ ಬಗ್ಗೆ ಪ್ರಶ್ನಿಸುವ ಪತ್ರಕರ್ತರ ಸಂಘದಲ್ಲಿಯೇ ಅನ್ಯಾಯ ನಡೆದರೆ ಇನ್ನಾರಿಗೆ ಪ್ರಶ್ನಿಸುವುದು ಎಂಬುದನ್ನು ಸಂಬಂಧಿಸಿದವರೇ ಹೇಳಬೇಕಿದೆ.

    apvc-iconPost Views: 19
  • ಪ್ರಸ್ತುತ ವರ್ಷವನ್ನೇ ಮರೆತ ಅಧಿಕಾರಿಗಳು

    ಪ್ರಸ್ತುತ ವರ್ಷವನ್ನೇ ಮರೆತ ಅಧಿಕಾರಿಗಳು

    *ಸತ್ಯಕಾಮ ವಾರ್ತೆ ಯಾದಗಿರಿ:*
    Lkg ಮಕ್ಕಳನ್ನು ಪ್ರಸ್ತುತ ವರ್ಷ ಯಾವುದೆಂದು ಕೇಳಿದರೆ 2024 ಎಂದು ಉತ್ತರಿಸುತ್ತಾರೆ. ಆದರೆ ಈ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತುತ ವರ್ಷ ಯಾವುದೆಂದೆ ಗೊತ್ತಿಲ್ಲ, ಇಂತಹ ಅಧಿಕಾರಗಳಿಂದ ಜಿಲ್ಲೆ ಅಭಿವೃದ್ಧಿ ಹೇಗೆ ಕಾರ್ಯಗತವಾಗುತ್ತೆಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತೆ ಈ ಅಧಿಕಾರಿಗಳು ಮಾಡಿದ್ದಾರೆ.

    ಹೌದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ, ಶಿಕ್ಷಣಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿಯಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತಕ್ಕೆ ಸಂಬಂಧಿಸಿದಂತೆ, ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ PCPNDT ( ಲಿಂಗ ಆಯ್ಕೆಯ ನಿಷೇಧ ಅಧಿನಿಯಮ,1994)ರ ಕುರಿತು ಜಿಲ್ಲೆಯ ಎಲ್ಲಾ ಸ್ಕಾನಿಂಗ್ ಸೆಂಟರ್ ಹೊಂದಿರುವ ವೈದ್ಯರು ಹಾಗೂ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಸಿಬ್ಬಂದಿಯವರೆಗೆ ತರಬೇತಿ ಕಾರ್ಯಗಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಇರುವ ಹಲವು ಲೋಪದೋಷಗಳು ಓದುಗರನ್ನು ಪೇಚಿಗೆ ಸಿಲುಕಿದ ಪ್ರಸಂಗ ಜರುಗಿದೆ.

    ಫೆ.16 ರಿಂದ ಮತ್ತು 17 ರಂದು ನಡೆಯುತ್ತಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಕಾರ್ಯಕ್ರಮದ ಸಿಬ್ಬಂದಿಯವರೆಗೆ ತರಬೇತಿ ಕಾರ್ಯಗಾರದ ಆಮಂತ್ರಣ ಪತ್ರಿಕೆಯಲ್ಲಿ ಪ್ರಸುತ್ತ ವರ್ಷವನ್ನೇ ಬದಲಾಯಿಸಲಾಗಿದೆ, ಆಮಂತ್ರಣವನ್ನು ಒಮ್ಮೆ ಗಮನಿಸಿದರೆ, ಅಧಿಕಾರಿಗಳು ಇನ್ನೂ 2023ನೇ ವರ್ಷದಲ್ಲೆ ಇದ್ದಂತೆ ಕಾಣುತ್ತದೆ, ಅಷ್ಟೇ ಅಲ್ಲದೇ ಮುಖ್ಯ ಅತಿಥಿಗಳು ಪಟ್ಟಿಯಲ್ಲಿ ಶ್ರೀಮತಿ ಸಂಗೀತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯಾದಗಿರಿ ಜಿಲ್ಲಾ ಪಂಚಾಯತ್ ಎಂದು ಮುದ್ರಿಸಿಲಾಗಿದೆ,

    ಅಧಿಕಾರಿಗಳೇ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಜ್ಞಾವಂತರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ಇನ್ನುಮುಂದಾದರೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಮುದ್ರಿಸುವ ಮೊದಲು ಇಲಾಖೆ ಅಧಿಕಾರಿಗಳು, ಪರಿಣಿತಿ ಹೊಂದಿರುವ ನುರಿತ ಕನ್ನಡ ಪಂಡಿತರಲ್ಲಿ ವಿಷಯ ಬರೆಯಿಸಿಕೊಂಡು ಪ್ರಕಟಣೆ ಅಥವಾ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    *ಬಾಕ್ಸ್:*
    *ಆಮಂತ್ರಣ ಪತ್ರಿಕೆಯಲ್ಲಿರುವ ತಪ್ಪುಗಳು*

    *ಪ್ರಸ್ತುತ ಸಾಲಿನ ವರ್ಷ 2024 ರ ಬದಲಿಗೆ 2023

    * ಯಾದಗಿರಿ ಜಿಲ್ಲೆಯ ಹೆಸರನ್ನು ಯಾದಗಿರಿರಿ

    * ಫೆಬ್ರವರಿ ಬದಲಿಗೆ ಪೇಬ್ರವರಿ

    *ತಾರತಮ್ಯ ಬದಲಿಗೆ ತಾರತಮ್ಮ

    *ಸ್ವಾಗತ ಬದಲಿಗೆ ಸಾಗತ ಎಂದು ಮುದ್ರಿಸಲಾಗಿದೆ.

    apvc-iconPost Views: 7
  • ಸರಕಾರಿ ಜಾಲತಾಣದಲ್ಲಿ ತನ್ನ ವೈಯಕ್ತಿಕ ಪ್ರಚಾರಕ್ಕೆ ದುರ್ಬಳಕೆ

    ಸರಕಾರಿ ಜಾಲತಾಣದಲ್ಲಿ ತನ್ನ ವೈಯಕ್ತಿಕ ಪ್ರಚಾರಕ್ಕೆ ದುರ್ಬಳಕೆ

    ತಪ್ಪು ಹ್ಯಾಶ್ ಟ್ಯಾಗ್ : ಸಾರ್ವಜನಿಕರಲ್ಲಿ ಗೊಂದಲ

    ಮೇಲಧಿಕಾರಿಗಳಿಗಿಂತ ಈತನೇ ದೊಡ್ಡವನಾ.?

    ಕಲಬುರ್ಗಿ: ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸರ್ಕಾರದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಪೋಸ್ಟಗಳಲ್ಲಿ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುವುದರಿಂದ ಸಾರ್ವಜನಿಕರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.

    ಹೌದು ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ರಚಿಸಲಾಗಿರುವ DIPR Kalaburgi ಪೇಜ್ ನಲ್ಲಿ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಅಪ್ಲೋಡ್ ಮಾಡುವ ವೇಳೆ ಇಲಾಖೆಯ ಸಿಬ್ಬಂದಿ ರವಿ ಮೀರಾಸ್ಕಾರ್ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಉದ್ಭವಗೊಂಡಿದೆ.

    ಅದೇನೆಂದರೆ ರವಿ ಮಿರಾಸ್ಕರ್ DIPR Kalaburgi ಪೇಜ್ ನಲ್ಲಿ ದಿನ ನಿತ್ಯ ಅಪ್ಲೋಡ್ ಮಾಡುವ ಪೋಸ್ಟ್ ನಲ್ಲಿ ರವಿ ಮೀರಾಸಕರ್ ಪ್ರಾದೇಶಿಕ ಆಯುಕ್ತರು ಕಲಬುರ್ಗಿ ವಿಭಾಗ ಎಂಬ ಹ್ಯಾಶ್ಟ್ಯಾಗ್ ಕಾಣಿಸುತ್ತದೆ, ಇದು ನೋಡುಗರಿಗೆ ಬೇರೆ ರೀತಿಯ ಸಂದೇಶವನ್ನೇ ರವಾನಿಸುತ್ತದೆ,

    ಹಾಗಾದ್ರೆ ಕಲಬುರಗಿ ಇಲಾಖೆಯ ಪ್ರಾದೇಶಿಕ ಆಯುಕ್ತರಾದ್ರು ಯಾರು.?

    ಸಿಬ್ಬಂದಿಗಳು ಈ ರೀತಿಯಾಗಿ ತಮ್ಮ ಹೆಸರನ್ನು ಬಳಸಿ ಇಲಾಖೆಯ ಮೇಲಾಧಿಕಾರಿಗಳ ಹ್ಯಾಶ್ಟ್ಯಾಗ್ ಬಳಸಿದಾಗ DIPR ಕಲಬುರಗಿ ವಿಭಾಗದ ಆಯುಕ್ತರು ಇವರೇನಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ, ಇದ್ದರಿಂದ ಇಲಾಖೆಗೆ ಅರ್ಜಿ ಬರೆಯುವವರಿಗೆ ಇದು ತಪ್ಪು ಮಾಹಿತಿ ತಿಳಿಸುತ್ತದೆ ಅಲ್ಲದೆ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ನೋಡುವರಿಗೂ ಕೂಡ ಇಂತಹ ಹ್ಯಾಶ್ಟ್ಯಾಗ್ ತಪ್ಪು ಮಾಹಿತಿ ನೀಡುತ್ತದೆ.

    ರವಿ ಮಿರಾಸ್ಕರ್ ಎಂಬತಾ ಪೋಸ್ಟ್ ಮಾಡುವ ವೇಳೆ ಹ್ಯಾಶ್ಟ್ಯಾಗ್ ನಲ್ಲಿ ಅಲ್ಪವಿರಾಮ ಚಿಹ್ನೆ ಬಳಸದೆ ಇಲಾಖೆಯ ಮುಖ್ಯಸ್ಥರ ಸ್ಥಾನದ ಹ್ಯಾಶ್ಟ್ಯಾಗ್ ಬಳಸಿರುವುದರಿಂದ ಈ ಪ್ರಶ್ನೆ ಉದ್ಭವವಾಗಿದೆ.

    ಇಲ್ಲಿ ಮತ್ತೊಂದು ವಿಷಯವೇನೆಂದರೆ ಸಚಿವರು ಹೆಸರಿನ ಮುಂದೆಯೇ ಮೇಲಾದಿಕಾರಿಗಳ ಹೆಸರು ಬಳಸಬೇಕೆಂಬ ಪರಿಜ್ಞಾನತೆ ಇವರಿಗಿಲ್ವಾ. ಹಾಗಾದ್ರೆ ಮೇಲಾದಿಕಾರಿಗಳಿಗಿಂತ ಇವರೇ ದೊಡ್ಡವರಾ.?

    ಓರ್ವ ಸರ್ಕಾರಿ ನೌಕರನು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ನೌಕರರು ಅಂತರ್ಜಾಲದ ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿಯಮಗಳ ಅವಕಾಶಗಳನ್ನು ಮೀರಿ ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ ವ್ಯಕ್ತಪಡಿಸುವುದು ಕಂಡುಬರುತ್ತಿದೆ.

    ಮಾಹಿತಿ ಮತ್ತು ಸಂವಹನ ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿ ಕೊಂಡು ಫೇಸ್‌ಬುಕ್, ಟ್ವಿಟರ್, ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ವಾರ್ತಾ ಇಲಾಖೆ ಮುಂದಾಗಿದೆ. ಆದ್ರೆ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸಿ ಮುಂದೆ ಇಲಾಖೆಯ ಹ್ಯಾಶ್ ಟ್ಯಾಗ್ ಬಳಸಿದರೆ ಮೇಲಾಧಿಕಾರಿಗಳಿಗೆ ಇರುವ ಬೆಲೆಯಾದರು ಏನು?

    apvc-iconPost Views: 28
  • ಮಾಜಿ ಶಾಸಕ ಕಂದಕೂರ ಇನ್ನಿಲ್ಲ

    ಮಾಜಿ ಶಾಸಕ ಕಂದಕೂರ ಇನ್ನಿಲ್ಲ

    ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರದ ತಂದೆ ಜೆಡಿಎಸ್ ಪಕ್ಷದ ಹಿರಿಯ ರಾಜಕಾರಣಿಗಳಾದ ನಾಗನಗೌಡ ಕಂದಕೂರ ಅವರು ತೀವ್ರ ಹೃದಯಾಘಾತದಿಂದ ಇಂದು ( ರವಿವಾರ ) ವಿಧಿವಶರಾಗಿದ್ದಾರೆ.

    ನಾಗನಗೌಡ ಕಂದಕೂರ ಅವರಿಗೆ 79 ವರ್ಷ ವಯಸ್ಸಾಗಿತ್ತು ಎದೆ ನೋವು ಕಾಣಿಸಿಕೊಂಡ ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಅದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನೊಪ್ಪಿದ್ದಾರೆ.
    ನಾಗನಗೌಡ ಕಂದಕೂರ್ ಅವರು 2018ರಲ್ಲಿ ಯಾದಗಿರಿ ಜಿಲ್ಲೆ ಗುರುಮಠಕಲ್‌ ಶಾಸಕರಾಗಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ ಮೊದಲ ಬಾರಿಗೆ ನಾಗನಗೌಡ ಕಂದಕೂರ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

    ಕಳೆದ ೫೦ ವರ್ಷಗಳಿಂದ ರಾಜಕೀಯ ಜೀವನದಲ್ಲಿ ಸೋಲು ಗೆಲುವುಗಳನ್ನು ಕಂಡು ಕಲ್ಯಾಣ ಕರ್ನಾಟಕ ಭಾಗದ ಜೆಡಿಎಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿ ಯಾಗಿದ್ದ ಇವರ ಅಗಲಿಕೆ ಪಕ್ಷಕ್ಕೆ ಹಾಗೂ ಕಂದಕೂರ ಕುಟುಂಬದ ಅಭಿಮಾನಿ ಬಳಗಕ್ಕೆ ತುಂಭಲಾರದ ನಷ್ಟವನ್ನು ಉಂಟು ಮಾಡಿದೆ.

    apvc-iconPost Views: 2
  • ನಮ್ಮ ಸೇವೆ ಜನರು ಮೆಚ್ಚುವಂತಿರಬೇಕು:

    ನಮ್ಮ ಸೇವೆ ಜನರು ಮೆಚ್ಚುವಂತಿರಬೇಕು:

    ಸತ್ಯಕಾಮ ವಾರ್ತೆ ಯಾದಗಿರಿ:
    ಸರಕಾರಿ ಅಧಿಕಾರಿಗಳಿಗೆ ಅಧಿಕಾರ ಶಾಶ್ವತವಲ್ಲ, ಆದರೇ, ಅಧಿಕಾರ ಅವಧಿಯಲ್ಲಿ ನಾವು ಪ್ರಾಮಾಣಿಕ, ನಿಷ್ಠೆಯಿಂದ ಮಾಡುವ ಸೇವೆ ಸಲ್ಲಿಸುವ ಜತೆ ಜನಮಾನಸದಲ್ಲಿ ಸದಾ ನೆನಪಿರುವ ಕೆಲಸ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್.ಲಕ್ಷ್ಮಿಪತಿ ಅವರು ಹೇಳಿದರು.

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ೬೫೯ ಸ್ಥಳೀಯ ಸಮಿತಿ ವತಿಯಿಂದ ನಗರದ ಹೊಸಳ್ಳಿ ರಸ್ತೆಯಲ್ಲಿ ಇರುವ ಕೆಇಬಿ ಸಭಾ ಭವನದಲ್ಲಿ ನಡೆದ ಸುರಕ್ಷತಾ ಕಾರ್ಯಗಾರ ಸಂಘಟನಾ ಸಭೆ ಹಾಗು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಿಸ್ವಾರ್ಥ, ಸೇವೆ, ಸರಳತೆ ಗುಣಗಳು ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ನಿವು ಬೆಳೆಸಿದಂತ ನಾಯಕ ಇಂದು ಬೃಹತ್ ಆಗಿ ನೌಕರರ ಸಂಘದಲ್ಲಿ ಬೆಳೆದ ಶ್ರೀನಿವಾಸ ಅವರ ವ್ಯಕ್ತಿತ್ವ, ಕೆಲಸದ ಮಾದರಿ ಕುರಿತು ಗುಣಗಾನ ಮಾಡಿದ ಅವರು, ಯಾವುದೇ ನಾಯಕ ಬೆಳೆಯಲು ಅವರಲ್ಲಿ ನಾಯಕತ್ವದ ಗುಣಗಳ ಜತೆ ನಿಸ್ವಾರ್ಥ, ಪ್ರಮಾಣಿಕತೆ ಇರಬೇಕು ಎಂದರು.

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ವೇತನ ಪರಿಷ್ಕೃಕಣೆ ಮಾಡಿ ಕೊಡಲು ಹೋರಾಟ ಮಾಡಿದೆ. ಸಂಘ ಬಲಿಷ್ಠವಾಗಿದೆ ಹಿಡಿದ ಕೆಲಸ ಮಾಡಿಯೇ ತೀರುತ್ತಾರೆ. ಎಂಬ ನಂಬಿಕೆಯ ಹೆಸರು ನಮ್ಮ ಸಂಘಕ್ಕೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಆಸ್ತಿ, ನೌಕರಿ ಸಂಪಾದನೆ ಮಾಡಬಹುದು ಆದರೆ ಯಾದಗಿರಿ ಶ್ರೀನಿವಾಸ ಅವರು ಎಲ್ಲರನ್ನು ವಿಶ್ವಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರ ಮಾರ್ಗದರ್ಶನ ಇಲಾಖೆ ಎಲ್ಲಾ ಸಿಬ್ಬಂದಿಗೆ ಅಗತ್ಯವಾಗಿದೆ ಎಂದು ಹೇಳಿದರು.

    ವಿದ್ಯುತ್ ಕ್ಷೇತ್ರ ಅತ್ಯಂತ ಸಮಸ್ಯೆಯಿಂದ ಕೂಡಿದೆ. ಬದಲಾದ ಸಂಸ್ಕರಣೆ ಮೂಲಕ ವಿದ್ಯುತ್ ಅವಲಂಬನೆ ಹೆಚ್ಚಾಗಲಿದೆ. ಎದೆ ಗುಂದದೆ ಇಲಾಖೆ ಕೆಲಸ ಮಾಡುತ್ತಿದೆ. ವಿದ್ಯುತ್ ಅವಘಡದಿಂದ ಸಾವನ್ನಪ್ಪುತ್ತಾರೆ, ಅಂಗವಿಲರಾಗುತ್ತಾರೆ. ಆದರೂ, ಸಾರ್ವಜನಿಕ ಕೆಲಸ ಬಿಟ್ಟು ಹೋಗಿಲ್ಲ ಎಂದು ಸಿಬ್ಬಂದಿಗಳ ಕಾರ್ಯಕ್ಷಮತೆ ಸಮರ್ಥಿಸಿಕೊಂಡರು. ವಿದ್ಯುತ್ ಕಾಯ್ದೆಯ ಖಾಸಗಿಕರಣ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಹೋರಾಡಲು ನಾವು ಸಂಘಟಿತರಾಗಿ, ಸಿದ್ದರಾಗಬೇಕು ಎಂದು ಸಲಹೆ ನೀಡಿದರು.
    ಸಂಘದ ಉಪಾಧ್ಯಕ್ಷ ಬಾಬು ಕೊರೆ ಮಾತನಾಡಿ, ಸಂಘಟನೆಯ ಮೂಲಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಕಾರವಾಗಿದೆ ಎಂದು ಹೇಳಿದರು.

    ಕಾರ್ಮಿಕ ಮುಖಂಡ ಹಾಗೂ ಸಂಘದ ಕಾರ್ಯಧ್ಯಕ್ಷ ಶ್ರೀನಿವಾಸ ಅವರ ವಯೋನಿವೃತ್ತಿ ಹೊಂದಿದ್ದು,. ಇಲಾಖೆಯಲ್ಲಿ ಅವರು ಸಲ್ಲಿಸಿದ ಸೇವೆ ಅತ್ಯಂತ ಸಂತಸದ ಸಂಗತಿ ಇಲಾಖೆಗೆ ಇಂತಹ ಅಧಿಕಾರಿಗಳ ಸೇವೆ ಇನ್ನೂ ಅವಶ್ಯಕತೆ ಇದೆ ಎಂದು ಹೇಳಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಬಲರಾಮ ಮಾತನಾಡಿ, ಸಭಾ ಭವನಕ್ಕೆ ಶ್ರೀನಿವಾಸ ಅವರ ಕೋಡುಗೆ ಅಪಾರವಾಗಿದೆ. ಅವರು ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದಲ್ಲಿ ಸಿಬ್ಬಂದಿಗಳು ನಡೆಯಬೇಕು ಎಂದು ಹೇಳಿದರು.

    ಖಚಾಂಚಿ ಮಂಜುನಾಥ, ಸಂಘಟನೆ ಕಾರ್ಯದರ್ಶಿ ಹಣಮಂತ ರೆಡ್ಡಿ, ಸ್ಥಳಿಯ ಸಮಿತಿ ಅಧ್ಯಕ್ಷರಾದ ಯಮುನಪ್ಪ ತನಿಕೆದಾರ ಚಂದಪ್ಪ, ಸುರೇಖಾ, ಸಹಾಯ ಕಾರ್ಯನಿರ್ವಾಹ ಅಭಿಯಂತರ ಮರೆಪ್ಪ ಕಡೆಕರ್, ಸಹಾಯಕ ಕಾರ್ಯ ನಿವಾಹಕ ಚಂದ್ರಕಾಂತ, ಮಾರಖಂಡೇಶ್ವರ, ರಾಜು ಪತ್ತಾರ್, ಮಹಾದೇವಪ್ಪ. ಸಂತೋಷ ಯಾದವ, ಇದ್ದರು.

    apvc-iconPost Views: 5