Blog

  • ಬೃಹನ್ಮಠದ ಆಶಯದಂತೆ ಶ್ರೀಗಳಿಂದ ಬಸವತತ್ವ ಪ್ರಚಾರ:ಶಿವಾನಂದ ಕಳಸದ.

    ಬೃಹನ್ಮಠದ ಆಶಯದಂತೆ ಶ್ರೀಗಳಿಂದ ಬಸವತತ್ವ ಪ್ರಚಾರ:ಶಿವಾನಂದ ಕಳಸದ.

    ಸತ್ಯಕಾಮ ವಾರ್ತೆ ಗುರುಮಠಕಲ್:

    ಚಿತ್ರದುರ್ಗದ ಶ್ರೀ ಬೃಹನ್ಮಠದ ಅಶಯದಂತೆ ಬಸವತತ್ವ ಪ್ರಚಾರ ಗಡಿನಾಡಿನಲ್ಲಿ ಖಾಸಾಮಠದ ಶ್ರೀಗಳು ಬಸವತತ್ವ ಪ್ರಚಾರಕಾರ್ಯ ಶ್ಲಾಘನೀಯವಾಗಿದೆ ಎಂದು ಚಿತ್ರದುರ್ಗ ಬೃಹನ್ಮಠ ವಿದ್ಯಾಪೀಠದ ಅಧ್ಯಕ್ಷ ಶಿವಯೋಗಿ.ಸಿ.ಕಳಸದ ಹೇಳಿದರು.

     

    ಪಟ್ಟಣದ ಖಾಸಾಮಠ ಆವರಣದಲ್ಲಿ ಅನುಭಾವ ಶ್ರಾವಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಯಾವುದೇ ಮಠ ಮಾನ್ಯಗಳು ಬೆಳೆಯಲು ಭಕ್ತರ ಸಹಕಾರ ಅತಿ ಮುಖ್ಯ,ಐತಿಹಾಸಿಕ ಮತ್ತು ಚಾರಿತ್ರಿಕ ಇತಿಹಾಸವುಳ್ಳ ಖಾಸಾಮಠವನ್ನು ಅಭಿವೃದ್ಧಿ ಗೊಳಿಸಲು ಶ್ರೀ ಮಠದ ಸದ್ಭಕ್ತರ ಸೇವೆ ಸಹಕಾರ ಅನನ್ಯವಾಗಿದೆ ಹೇಳಿದರು.

     

    ಮಾನವನ ಜೀವನವು ವಚನ ಸಾಹಿತ್ಯ ಎಂಬ ದರ್ಶನಗಳ ಮೇಲೆ ಅವಲಂಬಿತವಾಗಿದೆ.ಬಸವಾದಿ ಶರಣರ ಜೀವನ ಇಂದಿಗೂ ಪ್ರೇರಕವಾಗಿವೆ. ಯಾವುದೇ ಜಾತಿ ಬೇಧವಿಲ್ಲದೆ ಬಸವಾದಿ ಶರಣರ ಶರಣತತ್ವಚಿಂತನೆ, ದಾಸೋಹ,ಅಕ್ಷರ,ಶಿಕ್ಷಣ ಸೇರಿದಂತೆ ಪ್ರತಿ ಶ್ರಾವಣಮಾಸದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಜೊತೆಗೆ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ತಮ್ಮದೇ ಆದ ವಿಶಿಷ್ಟ ಕಾಯಕ ಸೇವೆ ಸಲ್ಲಿಸುತ್ತಿರುವ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳ ಕಾರ್ಯವೈಖರಿ ಬೃಹನ್ಮಠ ಆಡಳಿತ ಮಂಡಳಿಗೆ ತೃಪ್ತಿ ತಂದಿದೆ ಎಂದರು.

     

    ರಾಯಷೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಭಾಗೋಡಿ ಮಾತನಾಡಿ,ಬಸವಾದಿ ಶರಣರ ವಚನ ಸಾಹಿತ್ಯದ ಅನುಭಾವವನ್ನು ಜೀವನದಲ್ಲಿ ಆಚರಿಸಿ ನಡೆದರೆ ಜೀವನದ ಏರು ತೊಡರು,ಕಷ್ಟಗಳನ್ನು ಸಲೀಸಾಗಿ ದಾಟಬಹುದು.ನನ್ನ ಜೀವನದಲ್ಲಿ ನಡೆದ ಅನೇಕ ಘಟನೆಗಳು ಸನ್ನಿವೇಶಗಳೇ ಸಾಕ್ಷಿಯಾಗಿದೆ. ಖಾಸಾಮಠದ ಶ್ರೀಗಳ ಮಾರ್ಗದರ್ಶನ ನಮಗೆಲ್ಲಾ ತುಂಬ ಪ್ರೇರಣೆ ನೀಡಿದೆ ಎಂದರು.

     

    ೧೧ ದಿನಗಳ ಅನುಭಾವ ಶ್ರಾವಣ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಸಹಕರಿಸಿದ ಭಕ್ತರನ್ನು ಸನ್ಮಾನಿಸಲಾಯಿತು.

     

    ಕಾರ್ಯಕ್ರಮದಲ್ಲಿ ಅಖಿಲ ಭಾರತ ಚೀರಶೈವ ಮಹಾಸಭಾ ಯಾದಗಿರಿ ಜಿಲ್ಲಾ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ,ಎಸ್ ಎಲ್ ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ನರೇಂದ್ರ ರಾಠೋಡ,ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ,ನಾಗಭೂಷಣ ಅವಂಟಿ,ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸಂತೋಷ ಕುಮಾರ ನೀರಟ್ಟಿ,ಶ್ರಾವಣಮಾಸಾಚರಣೆ ಸಮೀತಿ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರ,ಕಾರ್ಯಕ್ರಮ ನಿರೂಪಿಸಿದ ಶಿಕ್ಷಕ ಕರಿಬಸವರಾಜ ಸಜ್ಜನ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು,ಗಣ್ಯರು,ಮಹಿಳೆಯರು ಭಾಗವಹಿಸಿದ್ದರು.

    apvc-iconPost Views: 20
  • ಕುಂಟೋಜಿ ಬಸವೇಶ್ವರ ಜಾತ್ರೆ ಆರಂಭ.!

    ಕುಂಟೋಜಿ ಬಸವೇಶ್ವರ ಜಾತ್ರೆ ಆರಂಭ.!

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ಐತಿಹಾಸಿಕ ದೇವಾಲಯವಾಗಿದ್ದು ಸಾವಿರಾರು ವರ್ಷಗಳ ಇತಿಹಾಸದಾಗಿದೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾತ್ರೆ ಜರುಗುತ್ತದೆ ಅದರಂತೆ ಸೆಪ್ಟೆಂಬರ್ 2 ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಅತಿ ವಿಜೃಂಭಣೆ ಜಾತ್ರೆ ಜರುಗಲಿದೆ ಎಂದು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ತಿಳಿಸಿದರು.

    ಶನಿವಾರ ದೇವಸ್ಥಾನದ ಯಾತ್ರಾ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಸವೇಶ್ವರ ಜಾತ್ರಾ ಮಹೋತ್ಸವ ಸೆ.2 ರಿಂದ 6 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರದಂದು ಬೆಳಿಗ್ಗೆ ಬಸವಣ್ಣನಿಗದ ಮಹಾಪೂಜೆ, ಮಧ್ಯಾಹ್ನ ಕಳಸದ ಮೆರವಣಿಗೆ ನಂತರ ಕಳಸ ಶಿಖರಕ್ಕೇರುವುದು. ಅಂದೇ ರಾತ್ರಿ ‘ಖಾನಾವಳಿ ಚನ್ನಿ’ ನಾಟಕ ಇರಲಿದ್ದು, ಕುಂಟೋಜಿ ಸಂಸ್ಥಾನ ಮಠದ ಗುರು ಚನ್ನವೀರ ಶಿವಾಚಾರ್ಯ ಸಾನಿಧ್ಯ, ಉದ್ಘಾಟನೆಯನ್ನು ಶಾಸಕ ಸಿ.ಎಸ್ ನಾಡಗೌಡ, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.

    ಸೆ.3 ರಂದು ಬೆಳಿಗ್ಗೆ ಸಕಲ ವಾಧ್ಯ-ವೈಭವದೊಂದಿಗೆ ಪಲ್ಲಕ್ಕಿ ಉತ್ಸವದ ಬಳಿಕ ಸಂಗ್ರಾಣಿ ಕಲ್ಲು, ಚೀಲ, ಗುಂಡು, ಉಸುಕಿನ ಚೀಲ ಎತ್ತುವುದು. ಹಗ್ಗ ಜಗ್ಗುವ ಸ್ಪರ್ಧೆ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮ ಇರಲಿವೆ. ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಸಾನಿಧ್ಯವಹಿಸುವರು. ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಆನಂದ ಗಸ್ತಿಗಾರ ವಹಿಸಲಿದ್ದಾರೆ.

    ಸೆ. 4 ರಂದು ಎತ್ತಿನಗಾಡಿ ರೇಸ್, ಪುಟ್ಟಿ ಗಾಡಿಯ ಸುತ್ತು ಗಾಡಿ ರೇಸ್, ಟ್ರ್ಯಾಕ್ಟರ್ ಇಂಜಿನ್ ಸ್ಪರ್ಧೆ ಹಾಗೂ ಕಲಾಚಿಂಚನ ಬಳಗದಿಂದ ರಸಮಂಜರಿ ಕಾರ್ಯಕ್ರಮ ಇರಲಿದ್ದು ಯಂಕಂಚಿ ಹಿರೇಮಠ ಸಂಸ್ಥಾನ ಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದರೆ, ಉದ್ಘಾಟನೆಯನ್ನು ಎಂ.ಎನ್ ಮದರಿ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ರಾಮಣ್ಣ ಹುಲಗಣ್ಣಿ ವಹಿಸುವರು.

    ಸೆ.5 ರಂದು ಗಾಡಿ ರೇಸ್, ತೆರಬಂಡಿ ರೇಸ್, ಟ್ರ್ಯಾಕ್ಟರ್ ಹಿಂಬದಿಯ ಬಲ ಪ್ರದರ್ಶನ, ಪಗಡಿ ಸ್ಪರ್ಧೆ ಇರಲಿದೆ. ಅಂದೆ ರಾತ್ರಿ ‘ಮಗ ಹೋದರು ಮಾಂಗಲ್ಯ ಮುಖ್ಯ’ ನಾಟಕ ಇದೆ. ಜಾತ್ರೆ ನಡೆಯುವ ಐದು ದಿನಗಳು ಅನ್ನಸಂತರ್ಪಣೆ ಇರಲಿದೆ.

    ಈ ದೇವಸ್ಥಾನದ ಉತ್ತರಕ್ಕೆ ಅಲ್ಲಿಸಾಬ ದರ್ಗಾ, ದಕ್ಷಿಣಕ್ಕೆ ಗಂಗಪ್ಪಯ್ಯನ ಗುಡಿ, ಪಶ್ಚಿಮಕ್ಕೆ ಘನಮಠೇಶ್ವರ, ಪೂರ್ವಕ್ಕೆ ಮಳಿ(ಮಳೆ) ಬಸವೇಶ್ವರ ದೇವಸ್ಥಾನಗಳ ಮದ್ಯಭಾಗದಲ್ಲಿ ನೆಲೆಸಿರುವನೇ ಕುಂಟೋಜಿ ನಂದಿ ಬಸವಣ್ಣ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ದೇವಸ್ಥಾನಕ್ಕೆ ಕಲ್ಯಾಣ ಚಾಲುಕ್ಯ ಜಯಸಿಂಹ-2, ಸೋಮೇಶ್ವರ- ಮತ್ತು ಮಾದವಸಿಂಗನವರು ದಾನಧರ್ಮ ಮಾಡಿದ ಮಾಹಿತಿಯು “ಸೌತ್ ಇಂಡಿಯನ್ ಇನ್ಸಕ್ರೀಪ್ಸ್‌ಷನ್” ಬುಕ್ಕಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ ಎಂದು ಜಾತ್ರಕಮಿಟಿಯ ಬಸವರಾಜ ಹುಲಗಣ್ಣಿ ಹೇಳಿದರು.

    ಪ್ರತಿ ವರ್ಷ ಶ್ರಾವನ ಮಾಸದ ಕೊನೆಯ ಸೋಮವಾರದಂದು ನಡೆಯುವ ಕುಂಟೋಜಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ಜಾತ್ರೆ ದೊಡ್ಡ ಪ್ರಾಮಾಣದಲ್ಲಿ ನಡೆಯುತ್ತಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅದರಂತೆ ಎಲ್ಲಾ ಭಕ್ತರು ಬಂದು ಪಾಲ್ಗೊಂಡು ಬಸವಣ್ಣನ ಕೃಪೆಗೆ ಪಾತ್ರರಾಗಿ, ಜಾತ್ರೆ ನಡೆಯುವ ಐದು ದಿನವೂ ಉಪಹಾರ ವವ್ಯಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ತಿಳಿಸಿದರು.

    ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಉಪಾಧ್ಯಕ್ಷ ಆನಂದ್ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೇಕಾರ, ಖಜಾಂಚಿ ಬಸನಗೌಡ ಬಿರಾದಾರ, ಸದಸ್ಯರಾದ ಸಂಗಯ್ಯ ಮಠ್, ನಾಗಳಿಂಗಯ್ಯ ಮಠ, ವೀರಭದ್ರ ಪತ್ತಾರ, ನಾಗೇಶ ಸಜ್ಜನ್, ಪ್ರಕಾಶ ಹೂಗಾರ್, ವೀರಬಸ್ಸು ಊರಾನ, ಬಸವರಾಜ ಮಡಿವಾಳರ, ಹುಚ್ಛೆಸಾಬ ನಾಲತವಾಡ, ಹಣಮಂತ ಕುಂಬಾರ, ಮುತ್ತು ಜಾವುರ, ಕುಮಾರ ಹಡಪದ, ಹಣಮಂತ ಭಜಂತ್ರಿ, ಹಣಮಂತ ನಾಯಕ, ಲಕ್ಷ್ಮಣ ಮುರಾಳ, ದುರ್ಗಪ್ಪ ಕವಡಿಮಟ್ಟಿ ಹಾಗೂ ಗುರುಪಾದಪ್ಪ ಹೆಬ್ಬಾಳ, ಸಿದ್ದಪ್ಪ ಹೂಗಾರ, ಮಾಜಿ ಸೈನಿಕ ಬಸಯ್ಯ್ ಮಠ, ಅಧ್ಯಕ್ಷರು ಡಿಜೆ ಮಲಿಕರು ಸಂಘ ಶಿವಪ್ಪ ಕೋಲಕರ, ಗಂಗಾಧರ್ ಹುಲಗಣ್ಣಿ, ಮಲ್ಲಿಕಾರ್ಜುನ ಹೆಬ್ಬಾಳ, ಸಂತೋಷ ಬಿರಾದಾರ್, ಬಸವರಾಜ ಹುಲಗಣ್ಣಿ ಇದ್ದರು.

    apvc-iconPost Views: 144
  • ಹತ್ತಿಯಲ್ಲಿ ರಬ್ಬರ್ ಹುಳು ನಿಯಂತ್ರಿಸಲು ಕೀಟನಾಶಕ ಸಿಂಪಡಿಸಿ.

    ಹತ್ತಿಯಲ್ಲಿ ರಬ್ಬರ್ ಹುಳು ನಿಯಂತ್ರಿಸಲು ಕೀಟನಾಶಕ ಸಿಂಪಡಿಸಿ.

    ಸತ್ಯಕಾಮ‌ ವಾರ್ತೆ ವಡಗೇರಾ:
    ತಾಲೂಕಿನ ವಡಗೇರಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ಬೆಳೆಯಲ್ಲಿ ಹತ್ತಿ ಕಾಯಿಕೊರಕ ರಬ್ಬರ ಹುಳುವಿನ ಹಾವಳಿ ಹೆಚ್ಚಾಗಿದ್ದು, ರೈತರು ಹುಳುಗಳನ್ನು ನಿಯಂತ್ರಿಸಲು ಕೀಟನಾಶಕ ಸಿಂಪರಣೆ ಮಾಡಿ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಕ್ಲೋರಂಟ್ರಾನಿಲಿಪ್ರೋಲ್+ ಲ್ಯಾಂಬ್ಡಾ ಸೈಹಾಲೋಥ್ರೀನ್ ಕೀಟನಾಶಕ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು. ಮತ್ತೆ ಹತ್ತು ದಿನಗಳ ನಂತರ, ಪ್ರೊಫೆನೊಪೊಸ್ +ಸೈಪರ್ಮೆಥ್ರಿನ್ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು.ಅಸೆಟಾಮಿಪ್ರಿಡ್ + ಬೈಫೆಂತ್ರಿನ್ ಜೊತೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು ಮತ್ತೆ ಹತ್ತು ದಿನಗಳ ನಂತರ, ರೈತರು ಪ್ರತಿ ಎಕರೆಗೆ ಈ ಮೇಲ್ಕಂಡ ಕೀಟನಾಶಕವನ್ನು 200 ಮೀ.ಲೀ ಕಡ್ಡಾಯವಾಗಿ ಸಿಂಪರಣೆಯನ್ನು ಮಾಡಬೇಕು ಎಂದಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಿಳಿಸಿದ್ದಾರೆ.

    apvc-iconPost Views: 12
  • “ಸ್ಫೂರ್ತಿ ಸಾಧನೆಯ ಮೊದಲ ಮೆಟ್ಟಿಲು”

    “ಸ್ಫೂರ್ತಿ ಸಾಧನೆಯ ಮೊದಲ ಮೆಟ್ಟಿಲು”

    ಸ್ಫೂರ್ತಿ ಎಂಬ ಎರಡಕ್ಷರದ ಅರ್ಥ ವಿಶಾಲವಾದದ್ದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಬದ್ಧತೆ, ಪ್ರಾಮಾಣ ಕತೆ, ನಡತೆ, ಗುಣ, ಸಮಾಜಮುಖಿ ಚಿಂತನೆ, ಮಾನವೀಯತೆ, ವಿಶೇಷ ಸಾಧನೆಗಳ ಅನಾವರಣ ಅಥವಾ ದಿಕ್ಸೂಚಿಯೇ ಸ್ಫೂರ್ತಿ ಎಂಬ ಎರಕ್ಷರದಲ್ಲಿ ಅಡಗಿದೆ. ಸ್ಫೂರ್ತಿಯು ಆಂತರಿಕ ಸ್ಥಿತಿಯಾಗಿದ್ದು ಅದು ವ್ಯಕ್ತಿಗಳ ಗುರಿ ನಿರ್ದಿಷ್ಟ ನಡವಳಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಇದು ಅನೇಕ ಕ್ಷೇತ್ರಗಳಿಗೆ ಸಂಬAಧಿಸಿದೆ. ಆ ಕ್ಷೇತ್ರಗಳಲ್ಲಿ ವಿವಿಧ ಗುರಿಯ ಸಾಧನೆಗಾಗಿ ಮನುಷ್ಯ ಮತ್ತೊಬ್ಬರಿಂದ ಪ್ರಭಾವಿತನಾಗಿ ಮೊಳಕೆ ಒಡೆದು ಹಾಗೂ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಎಲ್ಲಾ ಕಷ್ಟ, ನೋವು, ನಲಿವು, ಸುಖ ಮತ್ತು ಅಡಚಣೆಗಳನ್ನು ದಾಟಿ ಮುನ್ನುಗ್ಗಿ ತನ್ನ ಗುರಿಯನ್ನು ಸಾಧಿಸುತ್ತಾನೆ. ಜೀವನದಲ್ಲಿ ನಡೆಯುವ ಕೆಲವು ಘಟನೆಗಳಿಂದ ಮಾನಸಿಕವಾಗಿ ಗಟ್ಟಿತನವನ್ನು ಅಳವಡಿಸಿಕೊಂಡು ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬಂದು ಗುರಿ ಸಾಧನೆ ಮಾಡುವುದೂ ಕೂಡ ಒಂದು ರೀತಿಯ ಪ್ರೇರಕ ಶಕ್ತಿ ಎನ್ನಬಹುದು.
    ಸ್ಫೂರ್ತಿಯಿಂದ ತಾನು ವೈಯಕ್ತಿಕ ಅಭಿವೃದ್ಧಿಯನ್ನು ಹೊಂದಿ ಜೊತೆಗೆ ಇತರರ ಅಭಿವೃದ್ಧಿಗಾಗಿ ಅವರ ಸಂತೋಷಕ್ಕಾಗಿ ನಿಸ್ವಾರ್ಥ ಉದ್ದೇಶದಿಂದ ವಯಕ್ತಿಕ ಪ್ರತಿಫಲವನ್ನು ನಿರೀಕ್ಷಿಸದೆ ಸಹಾಯ ಮಾಡುವ ಬಯಕೆಯನ್ನು ಹೊಂದುವುದಾಗಿದೆ. ಒಬ್ಬ ವ್ಯಕ್ತಿ ಸಮಾಜಕ್ಕಾಗಿ ಮಾಡಿರುವ ತ್ಯಾಗ, ಇತರರ ಬದುಕಿಗೆ ಬೆಳಕಾಗಿ, ಮಾರ್ಗದರ್ಶಿಯಾಗಿ, ಸಮಾಜದ ಪರಿವರ್ತನೆಗೆ ತನ್ನ ಜೀವನವನ್ನೇ ಮೀಸಲಾಗಿಟ್ಟು, ಸಾಮಾಜಿಕ ಸಾಧನೆಯಲ್ಲಿ ಮೇರು ಶಿಖರವಾಗಿ ಬೆಳೆದು ತಾನು ಜನ್ಮ ತಾಳಿದ ದೇಶಕ್ಕೆ, ಅಷ್ಟೇ ಏಕೆ ಜಗತ್ತಿಗೆ ಮಾದರಿಯಾಗಿ ಜೀವನ ಸಾಗಿಸಿ ಇತರರಿಗೆ ಸ್ಫೂರ್ತಿದಾಯಕರಾಗಿರುವ ಮಹಾಪುರಷರ ಸಾಧನೆಗಳು ನಮ್ಮ ಮುಂದೆ ಜೀವಂತವಾಗಿರುವುದನ್ನು ನಾವು ಕಾಣುತ್ತೇವೆ. ಈ ವಿಶ್ವದಲ್ಲಿ ಅನೇಕ ಸಾಧಕರಿಂದ ಸ್ಫೂರ್ತಿ ಪಡೆಯುತ್ತೇವೆ. ಮಹಾಪುರುಷರು ಮಾಡಿರುವ ಸಾಧನೆಗಳನ್ನು ಓದುವುದರಿಂದ, ಗುರುಗಳ, ಮಾರ್ಗದರ್ಶಕರÀ, ಸಾಧಕರ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ, ಅವರು ಮೇಲೆದ್ದು ಛಲದಿಂದ ಸಾಧಕರ ಮೇಲ್ಪಂಕ್ತಿಯಲ್ಲಿರುವುದನ್ನು ತಿಳಿದು ನಮಗೆ ಸ್ಫೂರ್ತಿ ಎಂಬುದು ಒಡೆದು ಮೂಡುತ್ತದೆ. ಆ ಸ್ಫೂರ್ತಿಯೇ ನಮಗೆ ಗುರಿಯನ್ನು ಮುಟ್ಟುವ ಕಡೆಗೆ ಕರೆದೊಯ್ಯುತ್ತದೆ.
    ವಿಶ್ವದ ಸುಮಾರು ೮೦ ಭಾಗ ದೇಶಗಳು ಬುದ್ಧ ಧಮ್ಮವನ್ನು ಅಳವಡಿಸಿಕೊಂಡು ಅವರ ಮಧ್ಯಮ ಮಾರ್ಗದಲ್ಲಿ ಕರುಣೆ, ಪ್ರೀತಿ, ಶಾಂತಿ, ನೆಮ್ಮದಿ, ಮಾನವೀಯತೆಯನ್ನು ಬೆಳೆಸಿಕೊಂಡಿರುವುದು ನಮಗೆಲ್ಲಾ ತಿಳಿದಿದೆ. ಬುದ್ಧನ ನಂತರ ಬಸವ, ಬಾಬಾಸಾಹೇಬ್‌ಅಂಬೇಡ್ಕರ್, ಗಾಂಧಿಜೀ, ಸ್ವಾಮಿವಿವೇಕಾನಂದರು, ಸುಭಾಷ್‌ಚಂದ್ರಬೋಸ್, ನೆಲ್ಸನ್‌ಮಂಡೇಲಾ, ಮದರ್‌ತೆರೇಸಾ, ಅಬ್ದುಲ್‌ಕಲಾಂ, ಸಾವಿತ್ರಿಬಾಯಿಫುಲೆ, ನಾಲ್ವಡಿ ಕೃಷ್ಣರಾಜಒಡೆಯರ್ ರವರು ಇಡೀ ಜಗತ್ತಿಗೆ (ರೋಲ್‌ಮಾಡೆಲ್) ಸ್ಫೂರ್ತಿದಾಯಕರಾಗುತ್ತಾರೆ. ವಿಶ್ವದಲ್ಲಿ ಇನ್ನೂ ಅನೇಕ ಮಹಾಸಾಧಕರು ತಮ್ಮದೇ ಆದ ಸಾಧನೆಯನ್ನು ಮಾಡಿ ಇತರರಿಗೆ ಮಾದರಿಯಾಗಿರುವುದನ್ನು ನಾವು ಕಂಡಿದ್ದೇವೆ. ಹಾಗೆಯೇ ವಿಶ್ವದ ಮೊದಲಿನ ಸಾಲಿನಲ್ಲಿರುವ ಮಹಾಪುರುಷರ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದರೆ ಎರಡನೇ ಸಾಲಿನ ಸಾಧಕರ, ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂಬ ಭಾವನೆಯಿಂದ ಅವರ ಸಾಧನೆಗಳನ್ನು ಕುರಿತು ಈ ಅಂಕಣದಲ್ಲಿ  ಹೊರತರಲು ಬಯಸಿದ್ದೇನೆ.
    ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು ಎಂಬ ಛಲ, ಗುರಿಯನ್ನು ತಲುಪಬೇಕೆಂಬ ತವಕ, ಸಾಧಕರ ಸಾಲಿನಲ್ಲಿ ನಾನು ಒಬ್ಬನಾಗಬೇಕು ಎಂಬ ಕನಸು, ಜೀವನೋತ್ಸಾಹ, ಸಮಾಜದಲ್ಲಿ ಇತರರಿಗೆ, ಮಾದರಿಯಾಗಬೇಕು, ಸ್ಫೂರ್ತಿದಾಯಕರಾಗಬೇಕೆಂಬ ಬಯಕೆ, ತನ್ನನ್ನು ತಾನು ಜಯಿಸಬೇಕೆಂಬ ಅಚಲ ನಿರ್ಧಾರ ಎಂತಹ ಮನುಷ್ಯನನ್ನಾದರೂ ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಜೀವನದಲ್ಲಿ ಒಂದು ಸಣ್ಣ ಸಮಸ್ಯೆ ಎದುರಾದರು ಜೀವನವೇ ಬೇಡ ಎಂದು ತೀರ್ಮಾನಿಸುವ ಮನಸ್ಸಿನಂತಹವರ ಮಧ್ಯೆ, ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧಕರ ಬಗ್ಗೆ ಮೆಲುಕನ್ನು ಹಾಕೋಣ.
    ಅಧ್ಯಕ್ಷರಾಗಿದ್ದ ಲಿಂಕನ್ ರವರು ತಮ್ಮ ಸೌಜನ್ಯ, ಸತ್ಕಾರ, ಮತ್ತು ಸಮಾನತೆಗೆ ಹೆಸರಾದವರು. ಅವರು ಎಂದೂ ಯಾರಿಗೂ ತಾರತಮ್ಯ ಮಾಡುತ್ತಿರಲಿಲ್ಲ. ಒಂದು ಬಾರಿ ಅವರ ಅಧಿಕಾರಿಯ ಜೊತೆ ಅಡ್ಡಾಡಲು ಹೊರಗೆ ಹೋದಾಗ ಒಬ್ಬ ನೀಗ್ರೋ ಭಿಕ್ಷÄಕ ಅಧ್ಯಕ್ಷರನ್ನು ನೋಡಿ ಸ್ವಾಗತಿಸಿದ. ಅಧ್ಯಕ್ಷರು ಪ್ರತಿಯಾಗಿ ತಮ್ಮ ಹ್ಯಾಟನ್ನು ತೆಗೆದು ಅವನಿಗೆ ನೀಡಿದರು. ಇದನ್ನು ನೋಡಿದ ಅಧಿಕಾರಿಯು ನಿಮ್ಮ ಹ್ಯಾಟನ್ನು ಕೊಳಕು ಬಟ್ಟೆಯ ಭಿಕ್ಷÄಕನಿಗೇಕೆ ನೀಡಿದಿರಿ? ಎಂದು ಕೇಳಿದರು. ಅದಕ್ಕೆ ಅವರು ನಗುತ್ತಾ ಹೇಳಿದರು ನನಗಿಂತ ಯಾರು ಹೆಚ್ಚು ಉದಾರಿಗಳಾಗಿರಬಾರದು ಎಂಬುದು ನನ್ನ ಅನಿಸಿಕೆ. ಏಕೆಂದರೆ ಉದಾರತೆಯು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ಅದು ವಿನಮ್ರತೆಯು ಇದ್ದ ಕಡೆ ಅರಳುತ್ತದೆ. ವಿನಮ್ರತೆಯೇ ಮಹಾಪುರುಷರ ಹೆಗ್ಗುರುತು ಎಂದು ಹೇಳಿದರು. ಲಿಂಕನ್ ರವರ ಆದರ್ಶ ಇಂದಿನ ಸಮಾಜದಲ್ಲಿ ಎಲ್ಲರಲ್ಲೂ ಹಾಸು ಹೊಕ್ಕಾಗಲಿ ಎಂಬುದು ನಮ್ಮ ಆಶಯ. ಹೃದಯ ಮಿಡಿಯುವ ಮನಸ್ಸುಳ್ಳವರು ಸಮಾಜದಲ್ಲಿ ದೊಡ್ಡವರಾಗುತ್ತಾರೆ.
    ಮೂಲತಃ ತುಮಕೂರು ಜಿಲ್ಲೆ, ಕುಣ ಗಲ್ ತಾಲ್ಲೂಕು, ಚೌಡನಕುಪ್ಪೆ ಗ್ರಾಮದ ಹೊನ್ನಯ್ಯ ಮತ್ತು ಮುನಿಯಮ್ಮ ದಂಪತಿಗಳ ಮಗ ಕೆಂಪಹೊನ್ನಯ್ಯಾ ತಾನು ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕಣ ್ಣನ ರೆಟಿನಾಪೊರೆ ಕಳಚಿ ಸಂಪೂರ್ಣ ದೃಷ್ಟಿ ಕಳೆದು ಕೊಂಡರು. ನಂತರ ಮೈಸೂರಿನ ಅಂಧ ಮಕ್ಕಳ ಪಾಠಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿ ನಂತರ ಮಹಾರಾಜ ಕಾಲೇಜಿನಲ್ಲಿ ಪದವಿ ಗಳಿಸಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಯು.ಪಿ.ಎಸ್.ಸಿ ಪಾಸಾಗಲು ಯಾವುದೇ ತರಬೇತಿ ಪಡೆಯದೇ ಸ್ವ-ಪ್ರಯತ್ನದಿಂದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕರ್ನಾಟಕದಲ್ಲೇ ಅಂಧ ಅಭ್ಯರ್ಥಿ ಐ.ಎ.ಎಸ್ ಪಾಸುಮಾಡಿದವರು ಎಂಬ ಕೀರ್ತಿಗೆ ಕಾರಣರಾಗಿ ಇತಿಹಾಸ ನಿರ್ಮಿಸಿದ್ದಾರೆ. ಕೆಂಪಹೊನ್ನಯ್ಯಾರವರು ನನ್ನ ಹೆಂಡತಿಯೇ ನಿಜವಾದ ಐ.ಎ.ಎಸ್ ಆಫೀಸರ್ ಎಂದು ಹೇಳುತ್ತಾರೆ. ಏಕೆಂದರೆ ಇವರ ಸಾಧನೆಯ ಹಿಂದೆ ಆಕೆಯ ಪರಿಶ್ರಮವಿದೆ. ಆಕೆ ಅವರಿಗೆ ಓದಲು ಅನುಕೂಲವಾಗುವಂತೆ ಆಡಿಯೋ ಮತ್ತು ಟಿಪ್ಪಣ ಗಳನ್ನು ತಯಾರಿಸಿ ಕೊಡುತ್ತಿದ್ದರು. ಜೀವನದಲ್ಲಿ ಎಷ್ಟೇ ಅಡೆ ತಡೆ, ಕಷ್ಟ ನೋವು ಎದುರಾದರು ಅವುಗಳಿಗೆ ಎದೆಗುಂದದೆ ತಾಳ್ಮೆಯಿಂದ ಅವುಗಳನ್ನು ಮೆಟ್ಟಿನಿಂತು ಎದುರಿಸಿ ಮುನ್ನುಗಬೇಕು, ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಕಷ್ಟಗಳನ್ನು ಸವಾಲನ್ನಾಗಿ ಸ್ವೀಕರಿಸಿ ಆಗ ಯಶಸ್ಸು ತಾನಾಗಿಯೇ ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದು ಇತರರಿಗೆ ಧೈರ್ಯ ತುಂಬುತ್ತಾರೆ. ಹಾಗಾಗಿ ಇಂತಹವರ ಸಾಧನೆ ನಮಗೆಲ್ಲಾ ಆದರ್ಶವಾಗಲಿ.
    ಸರ್ ಐಸಾಕ್ ನ್ಯೂಟನ್ ರವರು ಒಂದು ಡೈಮಂಡ್ ಎಂಬ ನಾಯಿಯನ್ನು ಸಾಕಿದ್ದರು. ಅದನ್ನು ತುಂಬಾ ಪ್ರೀತಿಸುತ್ತಿದ್ದರು. ಒಮ್ಮೆ ರಾತ್ರಿ ನ್ಯೂಟನ್ ರವರು ಮನೆಯಲ್ಲಿ ಇಲ್ಲದಿದ್ದಾಗ ಡೈಮಂಡ್ ಮೇಜಿನ ಮೇಲೆ ಉರಿಯುತ್ತಿದ್ದ ಮೇಣದ ಬತ್ತಿಯನ್ನು ಉರುಳಿಸಿದ ಪರಿಣಾಮ ಅವರ ಎಲ್ಲಾ ಪುಸ್ತಕಗಳು ಸುಟ್ಟು ಹೋದವು. ಅದು ಅವರ ಎಂಟು ವರ್ಷಗಳ ಪರಿಶ್ರಮದ ಫಲವಾಗಿತ್ತು. ನ್ಯೂಟನ್ ಮನೆಗೆ ವಾಪಸ್ಸಾದಾಗ ಆ ದುರಂತ ನೋಡಿ ಅವರು ಪ್ರತಿಕ್ರಿಯಿಸಿದರು. ಡೈಮಂಡನ್ನು ಹತ್ತಿರ ಕರೆದು ನೀನು ಮಾಲೀಕನಿಗೆ ಕೊಟ್ಟಿರುವ ತೊಂದರೆ, ಅದರ ಪರಿಶ್ರಮ ನಿನಗೆ ಸ್ವಲ್ಪವೂ ಗೊತ್ತಿಲ್ಲ ಎಂದು ಹೇಳಿದರು. ಅದನ್ನು ಅವರು ಮಹತ್ತರವಾದ ಕೆಲಸದ ನಷ್ಟ ಎಂದು ಭಾವಿಸಲಿಲ್ಲ ಮತ್ತೆ ಅದನ್ನು ಪ್ರಾರಂಭಿಸಿದರು. “ತಾಳ್ಮೆಯು ಯುಶಸ್ಸಿನ ಕೀಲಿ.” ಭಾವನಾತ್ಮಕವಾಗಿ ವ್ಯಕ್ತಿಗಳು ಸರಿಯಾದ ದೃಷ್ಟಿಯಲ್ಲಿ ವಿಷಯವನ್ನು ಅರಿಯಲು ವಿಫಲರಾಗುತ್ತಾರೆ. ಗಟ್ಟಿವ್ಯಕ್ತಿತ್ವದ ವ್ಯಕ್ತಿಯು ತನ್ನ ಭಾವನೆಯನ್ನು ನಿಯಂತ್ರಿಸಲು ಸಮರ್ಥನಾಗಿರುತ್ತಾನೆ. ಇಂತಹ ವ್ಯಕ್ತಿಗಳು ಸಂಕಷ್ಟದ ಸಮಯದಲ್ಲೂ ಶಾಂತರಾಗಿರುತ್ತಾರೆ. ಹೀಗಾಗಿ ವಾಸ್ತವದೊಂದಿಗೆ ತಮ್ಮ ಆದರ್ಶಗಳನ್ನು ಸೂಕ್ತವಾಗಿ ಹೊಂದಿಸಲು ಸಮರ್ಥರಾಗಿರುತ್ತಾರೆ. ಈ ರೀತಿಯಾದ ವ್ಯಕ್ತಿತ್ವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ.
    ಥಾಮಸ್ ಎಡಿಸನ್ ರವರು ಬಲ್ಪ್ ಕಂಡುಹಿಡಿದು ಜಗತ್ತಿಗೆ ಬೆಳಕನ್ನು ನೀಡಿದ ವ್ಯಕ್ತಿ. ಇವರು ಒಂದು ಬಲ್ಟ್ ಕಂಡು ಹಿಡಿಯಲು ಸಾವಿರಕ್ಕೂ ಹೆಚ್ಚು ಬಾರಿ ವೈಫಲ್ಯವನ್ನು ಕಂಡರೂ, ಎದೆಗುಂದದೆ ಈ ಕಾರ್ಯದಲ್ಲಿ ಸೋತರೂ, ಹಿಂಜರಿಯದೆ ಸತತ ಪ್ರಯತ್ನದಿಂದ ಯಶಸ್ಸು ಪಡೆದು ಇಡೀ ಪ್ರಪಂಚಕ್ಕೆ ಬೆಳಕನ್ನು ಕೊಟ್ಟ ಮಹಾಸಾಧಕರಾಗಿ ಹಾಗೂ ಇತರರಿಗೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ. “ಸೋಲು ಗೆಲುವಿನ ಮೆಟ್ಟಿಲು” ಎಂಬ ನುಡಿಯನ್ನು ನಾವು ಅರಿಯಬೇಕಾಗಿದೆ.
    ವಾಟ್ಸಪ್ ಬಳಸುವ ನಿಮಗೆಲ್ಲ ಜಾನ್‌ಕೋಮ್ ಗೊತ್ತಿರಬೇಕು. ಆತÀ ವಾಟ್ಸಪ್ ನ ಸಹಸಂಸ್ಥಾಪಕ. ಉಕ್ರೇನ್‌ನ ಸಣ್ಣ ಗ್ರಾಮದಲ್ಲಿ ಜನಿಸಿದ ಜಾನ್‌ಕೋಮ್ ಕಷ್ಟದಲ್ಲಿಯೇ ಜೀವನ ಅರಂಭಿಸಿದ. ಈತನಿಗೆ ಫೇಸ್ ಬುಕ್ ಕಂಪನಿಯು ಕೆಲಸ ನೀಡಲು ನಿರಾಕರಿಸಿತು. ಬಳಿಕ ಈತ ತನ್ನ ಸ್ನೇಹಿತ ಆಕ್ಟನ್ ಜೊತೆ ಸೇರಿಕೊಂಡು ವಾಟ್ಸಪ್ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿದ. ಪ್ರತಿತಿಂಗಳು ವಾಟ್ಸಪ್ ಬಳಕೆದಾರರ ಸಂಖ್ಯೆ ೧.೨ ಶತಕೋಟೆ ಹೆಚ್ಚುತ್ತಾ ಹೋಯಿತು. ಈ ಆಪ್ ಅನ್ನು ಕೆಲವು ವರ್ಷಗಳ ಹಿಂದೆ ೧೯ ಶತಕೋಟಿ ಡಾಲರ್‌ಗೆ ಫೇಸ್ ಬುಕ್ ಕಂಪನಿಯು ಖರೀದಿಸಿತು. ಒಂದು ಸಮಯದಲ್ಲಿ ಉದ್ಯೋಗ ನೀಡಲು ನಿರಾಕರಿಸಿದ ಕಂಪನಿಯೇ ಈತ ಅಭಿವೃದ್ಧಿ ಪಡಿಸಿದ ಆಪ್ ಅನ್ನು ಖರೀದಿಸಿದರು, ಎಂತಹ ಸಾಧನೆ ನೋಡಿ. ಎಂತಹ ಅದ್ಭುತ ಚಾಲೆಂಜ್ ಎಂಬುದನ್ನು ನಾವು ಅರಿಯಬೇಕಾಗಿದೆ. ಇಂತಹ ಸಾಧನೆಗಳೆ ನಮಗೆ ಮಾದರಿಯಾಗಬೇಕು. ಇಂತಹ ನಿದರ್ಶನಗಳಿಂದ ನಾವೂ ಕೂಡ ಜೀವನದಲ್ಲಿ ಸಾಧಕರಾಗುವ ಕಡೆ ಮುನ್ನುಗ್ಗಬೇಕು.
    ಮನುಕುಲವನ್ನು ಪ್ರೀತಿಸಬೇಕು ಮತ್ತು ಸೇವೆ ಮಾಡಬೇಕು ಈ ರೀತಿಯ ಮನಸ್ಸುಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಸಂಬAಧಗಳನ್ನು ಮಾಡುವುದು ದೊಡ್ಡದಲ್ಲ ಅದನ್ನು ಉಳಿಸಿಕೊಳ್ಳುವ ಜಾಣ್ಮೆಯು ನಮಗಿರಬೇಕು. ಸ್ವಾರ್ಥ ಬಿಟ್ಟು ಸಂತೋಷವನ್ನು ಕಾಣುವ ದಿಕ್ಕಿನಲ್ಲಿ ಸಾಗಬೇಕು. ಬೇರೆಯವರನ್ನು ನೂರಕ್ಕೆ ನೂರರಷ್ಟು ನಂಬಿದರೆ ಅವರು ಕೂಡ ಪ್ರಾಮಾಣ ಕರಾಗಿರುತ್ತಾರೆ. ಇಲ್ಲಿ ನಂಬಿಕೆ ಬಹಳ ಮುಖ್ಯ, ಅಪನಂಬಿಕೆ ಸಾವಿರ ಗೊಂದಲಗಳಿಗೆ ಕಾರಣವಾಗುತ್ತದೆ. ಸತÀತ ಪ್ರಯತ್ನ, ನಿರಂತರ ಶ್ರಮದಿಂದ ಮಹತ್ವವಾದುದನ್ನು ಸಾಧಿಸಬಹುದು. ನೀವು ಇತರರಿಗೆ ಸಹಾಯ ಮಾಡಿದರೆ ಪ್ರಕೃತಿ ನಿಮಗೆ ಬೇಕಾದಷ್ಟು ನೀಡುತ್ತದೆ. ನೀವು ಗಳಿಸುವುದಕ್ಕಿಂತ ಹೆಚ್ಚು ಸಹಾಯ ಮಾಡಿ ಅದಕ್ಕೆ ಹತ್ತರಷ್ಟು ನಿಮಗೆ ಲಭಿಸುತ್ತದೆ ಇದೇ ಪ್ರಕೃತಿಯ ನಿಯಮ! ಕ್ಷಮಾಗುಣ ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ಗೊಬ್ಬರ ಹಾಕಿದ ಹೊಲ ಊಟ ನೀಡಿದ ಮನೆ ಎಂದಿಗೂ ಕೆಡುವುದಿಲ್ಲ. ಕೊಡುವುದರಲ್ಲಿ ಇರುವ ಆನಂದ ಬೇರೆಲ್ಲೂ ಕಾಣಲು ಸಾಧ್ಯವಿಲ.್ಲ ನಿಮ್ಮ ಕಠಿಣ ಪರಿಶ್ರಮದಿಂದ ನೀವೇ ಇಂದು ಮತ್ತು ನಾಳೆಯಾಗಬೇಕು. ಏಕೆಂದರೆ ಅಭ್ಯಾಸವು ಪರಿಪೂರ್ಣತೆಯನ್ನು ನೀಡುತ್ತದೆ. ಬಾನೆತ್ತರಕ್ಕೆ ಕೊಂಡೊಯ್ಯುತ್ತದೆ.
    ಬುದ್ಧನ ಮಧ್ಯಮ ಮಾರ್ಗವನ್ನು ಅನುಸರಿಸಿ ಜೀವನದಲ್ಲಿ ಯಾವಾಗಲೂ ನೆಮ್ಮದಿಯ ಜೀವನ ಸಾಗಿಸಬಹುದು. ನಿರಾಶಾವಾದಿಯಾಗಬೇಡಿ, ಆಶಾವಾದಿಯಾಗಿ ಬದುಕು ಸಾಗಿಸಬೇಕು. ಏಕೆಂದರೆ ನಿರಾಶಾವಾದ ನಿಮ್ಮನ್ನು ಏನನ್ನು ಸಾಧಿಸಲು ಬಿಡುವುದಿಲ್ಲ. ಇತರರನ್ನು ಪ್ರೀತಿಯಿಂದ ಮಾತನಾಡಿಸಿ ಒಂದು ದಯೆಯ ಮಾತು, ಪ್ರೀತಿಯ ಅಪ್ಪುಗೆ,  ನಿಷ್ಕಲ್ಮಶ ನಗುವು ಜೀವನವನ್ನು ಪೂರ್ಣವಾಗಿ ಬದುಕಿಸುವುದು ಮತ್ತು ಬಹಳ ಭಿನ್ನತೆಯನ್ನು ಉಂಟುಮಾಡುವುದು. ಬೇರೆಯವರ ಬದುಕಿನಲ್ಲಿ ಭಿನ್ನತೆಯನ್ನು ಉಂಟುಮಾಡುವ ಶಕ್ತಿ ನಮ್ಮಲ್ಲಿದೆ. ಅದನ್ನು ಸಾಧ್ಯವಾದಷ್ಟು ಬಾರಿ ಬಳಸಲು ನಾವು ಪಣತೊಡೋಣ. ಪ್ರೀತಿಯು ಎಲ್ಲಾ ಜಾತಿ, ದೇಶ ಜನಾಂಗ ಹಾಗೂ ಲಿಂಗವನ್ನು ಮೀರಿರುತ್ತದೆ. ಅದಕ್ಕೆ ದೇಶ, ಅಥವಾ ಜಾತಿ ಇಲ್ಲ ಅದು ಜನರನ್ನು ಅವರ ಸಾಮಾಜಿಕ ಅಂತಸ್ತಿನ ಪ್ರಕಾರ ಅಳೆಯುವುದಿಲ್ಲ. ಯಾವ ತಡೆಯಿಲ್ಲದೆ ನಾವು ಪ್ರೀತಿಯನ್ನು ಕಲಿಯಬಹುದು. ಈ ವಿಶ್ವದಲ್ಲಿ ಅವರ ಅಂತಸ್ತು, ದುಃಸ್ಥಿತಿ, ಬಡತನ, ರೋಗಿ, ಅನಾಥರೆಂದು ಕಡೆಗಣ ಸಬಾರದು. ಅಂತಹ ಜನರಿಗೆ ತುಂಬು ಹೃದಯದ ಪ್ರೀತಿ ಸುರಕ್ಷತೆಯ ಭಾವ ಹಾಗೂ ನೆರವು ನೀಡಿದರೆ ನಮಗೆ ಆನಂದ ಸಂತೃಷ್ತಿ ಹಗೂ ಸಂತೋಷ ದೊರಕುತ್ತದೆ. ಸಂತೋಷವೂ ಪ್ರೀತಿ ಹಾಗೂ ಸೇವೆಯ ನಿರ್ಣಾಯಕ ಪ್ರತಿಫಲ.
     ಹೀಗೆ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಭಾವನೆ, ಮಾನವೀಯತೆಯ ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು. ಕಠಿಣ ಪರಿಶ್ರಮ ನಿರಂತರವಾದ ಅಭ್ಯಾಸ ಸಾಮಾಜಿಕ ಬದ್ಧತೆ, ಸಾಧಿಸಬೇಕೆಂಬ ಛಲ, ಗುರಿಯ ಕಡೆ ಮುನ್ನುಗ್ಗುವ ದೂರ ದೃಷ್ಟಿ, ನಾನು ಸಾಧಿಸಿ ಸಮಾಜಕ್ಕಾಗಿ ಏನನ್ನಾದರೂ ನೀಡಬೇಕೆಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ಜಗತ್ತಿನಲ್ಲಿ ಫಲಿತಾಂಶ ನೀಡುವವರ ಅನಿವಾರ್ಯತೆ ಇದೆ. ನಾವು ಫಲವನ್ನು ನೀಡಿದರೆ ನಮ್ಮ ಜಾತಿ, ಜನಾಂಗ, ಬಣ್ಣ ಮತ್ತು ವಿದ್ಯಾರ್ಹತೆ ಏನೇ ಇರಲಿ ಸಮಾಜದಲ್ಲಿ ಅಂಗೀಕರಿಸಲ್ಪಡುತ್ತದೆ. ಬದ್ಧತೆಯಿಂದ ಕೆಲಸ ಮಾಡುವವರಿಗಾಗಿ ಪ್ರಪಂಚ ಕಾಯುತ್ತಿದೆ. ಶ್ರಮ ಪಟ್ಟು ಹೆಚ್ಚು ಕೆಲಸ ಮಾಡಿದಷ್ಟು ಯಶಸ್ಸು ಕಟ್ಟಿಟ್ಟ ಬುತ್ತಿ. ನಿಜವಾದ ಸಮರ್ಪಣೆಯ ಭಾವ ಹಾಗೂ ಬದ್ಧತೆಗೆ ದೀರ್ಘಕಾಲದಲ್ಲಿ ಬೆಲೆದೊರಕುತ್ತದೆ. ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕೆಂದರೆ ದೃಢಪ್ರಯತ್ನವನ್ನು ನಿಮ್ಮ ಆಪ್ತ ಗೆಳೆಯನನ್ನಾಗಿ ಮಾಡಿಕೊಳ್ಳಿ.  ಅನುಭವವನ್ನು ನಿಮ್ಮ ಆಪ್ತ ಸಲಹೆಗಾರರನ್ನಾಗಿ, ಜಾಗರೂಕತೆಯನ್ನು ನಿಮ್ಮ ಹಿರಿಯಣ್ಣನಾಗಿ ಹಾಗೂ ಆಶಾಭಾವವನ್ನು ನಿಮ್ಮ ಸಂರಕ್ಷಕನಾಗಿ ಮಾಡಿಕೊಳ್ಳಿ. ದ್ವೇಷವು ನಮ್ಮನ್ನು ಬಂಧಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಉಂಟು ಮಾಡುತ್ತದೆ. ನಮ್ಮ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಹಾಗೂ ನಿನ್ನ ಅಧಃಪತನಕ್ಕೆ ಕಾರಣವಾಗುತ್ತದೆ. ಶತ್ರುಗಳನ್ನು ಕ್ಷಮಿಸಿದರೆ ನಮ್ಮಲ್ಲಿ ಶಾಂತಭಾವ ಉಂಟಾಗುತ್ತದೆ.
    ಮಸಾಣದಲ್ಲಿ ಸುಟ್ಟು ಬೂದಿಯಾಗುವ ಈ ಶರೀರಕ್ಕೆ ಏಕೆ ಬೇಕು ದ್ವೇಷ, ಅಸೂಯೆ ? ಕೆಡುಕನ್ನು ಉಂಟು ಮಾಡುವ ಸಣ್ಣತನವೇಕೆ? ಒಟ್ಟಾರೆ ಈ ಮಹಾಸಾಧಕರ ಮುಂದೆ ಕಿಂಚಿತ್ತಾದರೂ ನಾವು ಏನನ್ನಾದರೂ ಒಳ್ಳೆಯ ಕೆಲಸ ಮಾಡಬೇಕು, ಜನ್ಮ ನೀಡಿದ ಭಾರತಾಂಬೆಗೆ, ಹಾಗೂ ಭೂಮಿಗೆ ಏನನ್ನಾದರೂ ವಾಪಸ್ಸು ನೀಡಬೇಕು (ವಿ ಮಷ್ಟ್ ಪೇ ಬ್ಯಾಕ್ ಟು ದಿ ಸೊಸೈಟಿ) ಎಂಬ ತವಕ ಪ್ರತಿಯೊಬ್ಬರ ಹೃದಯದಲ್ಲಿ ಮನೆ ಮಾಡಬೇಕು. ಯಾವಾಗಲೂ ಸಾಧನೆ ಮಾತಾಡಬೇಕು, ಮಾತನಾಡುವುದೇ ಸಾಧನೆಯಾಗಬಾರದು. ಸ್ಫೂರ್ತಿಯಿಂದಲೇ ಸಾಧನೆ, ಸಾಧನೆಯೇ ಸ್ಫೂರ್ತಿ. ಜೀವನ ನಿಂತ ನೀರಾಗಬಾರದು, ಹರಿಯುವ ಮಹಾನದಿಯಾಗಬೇಕು. ಒಂದು ಕಹಿ ಘಟನೆಯಿಂದ ಛಲ ಹುಟ್ಟುತ್ತದೆ. ಈ ಛಲದಿಂದಲೇ ಏನನ್ನಾದರೂ ಸಾಧಿಸುವ ಮನಸ್ಸು ಮಾಡುವುದು ಹಾಗೂ ಸಾಧಿಸಿ ತೋರಿಸುವುದು. ದೊಡ್ಡ ಅನಾಹುತಗಳ ಪರಿಣಾಮವೇ ಮನುಷ್ಯ ಘಟ್ಟಿ ನಿರ್ಧಾರಮಾಡಿ ಸಾಧಕರಾಗಲು ಬಯಸುವುದು. ಒಂದು ಮುಕ್ತಾಯದಿಂದ ಹೊಸದೊಂದು ಹುಟ್ಟುವುದು, ಆ ಹುಟ್ಟಿನಿಂದಲೇ ಜೀವನ ಪರಿವರ್ತನೆ ಕಡೆಗೆ ಸಾಗುವುದು. ನೀನು ಜೀವಿಸು, ನನ್ನನ್ನು ಜೀವಿಸಲು ಬಿಡು ಎನ್ನುವ ಮನೋಭಾವನೆ, ಪರಿಶುದ್ಧ ಹೃದಯ ನಮ್ಮದಾಗಬೇಕು. “ತಾಳಿದವನು ಬಾಳಿಯಾನು” ಎಂಬ ನುಡಿಮುತ್ತಿನಂತೆ  ಸಾಧನೆಗಾಗಿ ಬದುಕಬೇಕು, ಬದುಕುವುದೇ ಸಾಧನೆಗಾಗಿ ಎಂಬ ಅಚಲ ನಿರ್ಧಾರವಿರಬೇಕು. ಇಂದಿನ ಯುವ ಸಮುದಾಯ, ಈ ದಿಕ್ಕಿನಲ್ಲಿ ಯೋಚಿಸಿ, ಪರಿವರ್ತನಗೆ ಒಳಗಾಗಬೇಕು. ಆಗ ಮಾತ್ರ ಸಮಾಜ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ.
    -ಪ್ರೊ. ಸಿ. ಶಿವರಾಜು
    ಅಧ್ಯಕ್ಷರು, ಸಂಸ್ಕೃತ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-೫೬.
    apvc-iconPost Views: 4
  • ಸೆ.14 ರಂದು ರಾಷ್ಟೀಯ ಲೋಕ ಅದಾಲತ್

    ಸೆ.14 ರಂದು ರಾಷ್ಟೀಯ ಲೋಕ ಅದಾಲತ್

    ಸತ್ಯಕಾಮ ವಾರ್ತೆ ಯಾದಗಿರಿ:
    ಸೆ.14(SEP 14) ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್(LOK ADALAT) ನಡೆಯುತ್ತಿದ್ದು, ಬಾಕಿ ಇರುವ ವ್ಯಾಜ್ಯಗಳನ್ನು ಸಾರ್ವಜನಿಕರು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ  ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಅವರು ಹೇಳಿದರು.
    ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ನೆಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಇದರ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಲೋಕ್ ಅದಾಲತ್ತನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಅದಾಲತ್‌ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಈ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾ‌ರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್. ಕಾಯ್ದೆಯಡಿಯ ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನ ಹೊರತು ಪಡಿಸಿ) ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
    ಇದುವರೆಗೆ ಜಿಲ್ಲೆಯ್ಯಾದಂತ ಒಟ್ಟು 4325 ಪ್ರಕರಣಗಳನ್ನು ಲೋಕ ಅದಾಲತನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಒಟ್ಟು 04 ಬೆಂಚ್‌ ಗಳನ್ನು, ಶಹಾಪೂರ 03 ಮತ್ತು ಸುರಪೂರದಲ್ಲಿ 03 ಬೆಂಚ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಬೆಂಚನಲ್ಲಿ ಒಬ್ಬರು ನ್ಯಾಯಾಧೀಶರು ಹಾಗೂ ಒಬ್ಬರು ವಕೀಲರು ಸಂಧಾನಕಾರರಾಗಿ ಭಾಗವಹಿಸುವರು, ಅವರ ಮುಖಾಂತರ ರಾಜೀ ಸಂಧಾನ ಮಾಡಿಸಲಾಗುವುದು ಎಂದು ಹೇಳಿದರು.
    ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ಸಾಕಷ್ಟು ಸಮಯ ಮತ್ತು ಹಣ ಉಳಿತಾಯ ಮಾಡಬಹುದಾಗಿದೆ. ಸಿವಿಲ್ ಪ್ರಕರಣಗಳಲ್ಲಿ ರಾಜೀ ಆದರೆ ನ್ಯಾಯಾಲಯಕ್ಕೆ ತುಂಬಿದ ನ್ಯಾಯಾಲಯ ಶುಲ್ಕ ಸಹ ವಾಪಸ್ಸಾಗುತ್ತದೆ. ಮತ್ತು ಇದರಿಂದ ಉಭಯ ಪಕ್ಷಗಾರರಲ್ಲಿ ದ್ವೇಷದ ಭಾವನೆ ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಸಾರ್ವಹನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
    apvc-iconPost Views: 32
  • ಆ.29ರಂದು ವಚನ ದಿನ ಕಾರ್ಯಕ್ರಮ ಆಯೋಜನೆ

    ಆ.29ರಂದು ವಚನ ದಿನ ಕಾರ್ಯಕ್ರಮ ಆಯೋಜನೆ

    ಸತ್ಯಕಾಮ ವಾರ್ತೆ ಯಾದಗಿರಿ:
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನದಿನ ಹಾಗೂ ಸಂಸ್ಥಾಪಕರಾದ ಜಗದ್ಗುರು ಲಿಂ. ಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109 ನೇ ಜಯಂತಿ ಅಂಗವಾಗಿ ಆ. 29 ಗುರವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ವಚನ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಹೇಳಿದರು.

    ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಪೂಜ್ಯ ಶಾಂತವೀರ ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶರಣ ಕುಪೇಂದ್ರ ವಠಾರ ಅವರು ಈ ಕಾರ್ಯಕ್ರವನ್ನು ಉದ್ಘಾಟಿಸಲಿದ್ದಾರೆ. ಸಿದ್ದಪ್ಪ ಎಸ್ ಹೊಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಮಹಿಪಾಲ ರೆಡ್ಡಿ ಮುನ್ನೂರು. ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣ ವೆಂಕಟಗಿರಿ ದೇಶಪಾಂಡೆ ಹಾಗೂ ಶರಣ ಪ್ರಕಾಶ ಅಂಗಡಿ ಕನ್ನಳ್ಳಿ ಅವರ ಅತಿಥಿಗಳಾಗಿ ಭಾಗವಹಿಸುವವರು. ಶರಣ ಡಾ. ಸುಭಾಷ ಚಂದ್ರ ಕೌಲಗಿ ಅವರು ಪ್ರಾಸ್ತಾವಿಕ ಮಾತನಾಡುತ್ತಾರೆ. ಶರಣ ಅಖಂಡೇಶ್ವರ ಹಿರೇಮಠ ಅವರಯ ಗೌರವ ಉಪಸ್ಥಿತಿ ಇರಲಿದ್ದಾರೆ. ಶರಣ ನಾಗಪ್ಪ ಮಾಲಿ ಪಾಟೀಲ ಪತ್ರಕರ್ತರು ಇವರನ್ನ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿದ್ದೇವೆ ಮತ್ತು ಯಡಿಯೂರ ಸಿರಿ ಸಂಗೀತ ಪಾಠಶಾಲೆ ಯಾದಗಿರಿ ಇವರಿಂದ ವಚನ ಗಾಯನ ಕಾರ್ಯಕ್ರಮ ಆಯೋಜಿದ್ದೇವೆ ಎಂದು ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಅಯ್ಯಣ್ಣ ಹುಂಡೇಕಾರ. ಡಾ. ಸುಭಾಷ ಚಂದ್ರ ಕೌಲಗಿ. ಡಾ. ಭೀಮರಾಯ ಲಿಂಗೇರಿ . ದೇವಿಂದ್ರರೆಡ್ಡಿ ಯಡ್ಡಳ್ಳಿ ಇದ್ದರು.

    apvc-iconPost Views: 3
  • ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

    ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ :

    ಯಾದಗಿರಿ ನಗರದ ಅಜೀಜ್ ಕಾಲೋನಿ ನಿವಾಸಿಯಾದ ಶೇಖ ಇರ್ಫಾನ್ 25 ವರ್ಷ ಪುರುಷ ಕಾಣೆಯಾಗಿದ್ದು, ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ನಗರ ಠಾಣಾಧಿಕಾರಿ ತಿಳಿಸಿದ್ದಾರೆ.

    ಕಾಣೆಯಾದ ಪುರುಷ 2024ರ ಆಗಸ್ಟ್ 20 ರಂದು ರಾತ್ರಿ ಸಮಯದಲ್ಲಿ ಅಂದಾಜು 2 ಗಂಟೆಗೆ ಸುಮಾರಿಗೆ ತನ್ನ ಮೊಬೈಲ್ ಮನೆಯಲ್ಲಿ ಬಿಟ್ಟು ಮನೆಯಿಂದ ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಕುಟುಂಬದವರು ಪರಿಚಯವಿರುವ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಕಂಡು ಬಂದಿರುವುದಿಲ್ಲ. ಪುರುಷ ಕಾಣೆಯಾದ ಬಗ್ಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರುಷನ ಮಾಹಿತಿ ಸಿಕ್ಕರೆ ಯಾದಗಿರಿ ನಗರ ಪೊಲೀಸ್ ಠಾಣೆಗೆ ತಿಳಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 1
  • ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು

    ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು

    ವರದಿ: ಕುದಾನ್ ಸಾಬ್
    ಸತ್ಯಕಾಮ ವಾರ್ತೆ ಯಾದಗಿರಿ:
    ದೀಪದ ಕೆಳಗೆ ಕತ್ತಲು ಎಂಬಂತೆ ಬಯಲು ಶೌಚಮುಕ್ತ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾಡಳಿತ ಭವನದಲ್ಲೇ ಶೌಚಾಲಯಗಳ ಅವ್ಯವಸ್ಥೆ ಕಂಡು ಇಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪರದಾಡುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನದಲ್ಲಿರುವ ಶೌಚಾಲಯಗಳು ಇದ್ದರೂ ಇಲ್ಲದಂತಾಗಿದೆ, ಗ್ರಾಮೀಣ ಭಾಗದಿಂದ ನೂರಾರು ಜನರು ಸಮಸ್ಯೆಗಳನ್ನು ಹೊತ್ತುಕೊಂಡು ಇಲ್ಲಿಗೆ ಬರುತ್ತಾರೆ. ಸಮಸ್ಯೆ ಹೊತ್ತು ಬಂದ ಜನರಿಗೆ ಅಧಿಕಾರಿಗಳು ಸಭೆ, ಕಾರ್ಯಕ್ರಮ, ಅಧಿಕಾರಿಗಳ ನಡುವೆ ಚರ್ಚೆ ಎಂದು ಗಂಟೆಗಂಟಲೆ ಕಾಯಿಸುವ ವೇಳೆ ಸಾರ್ವಜನಿಕರು ತಮ್ಮ ನೈಸರ್ಗಿಕ ಬಾದೆ ತೀರಿಸಿಕೊಳ್ಳುವುದಕ್ಕೆ ಇಲ್ಲಿರುವ ಶೌಚಾಲಯದತ್ತ ಕಾಲಿಟ್ಟರೆ ಶೌಚಾಲಯದ ಅವ್ಯವಸ್ಥೆಯನ್ನು ಕಂಡು ಜಿಲ್ಲಾಡಳಿತಕ್ಕೆ ಛೀಮಾರಿ ಹಾಕುವಂತಾಗಿದೆ.

    ಹೌದು. ಇಲ್ಲಿರುವ ಶೌಚಾಲಯಗಳನ್ನು ಬಳಸುವುದೇ ಕಷ್ಟವಾಗಿದ್ದೂ, ಪುರುಷರು ಬಳಸುವ ಕೆಲುವು ಶೌಚಾಲಯಗಳಲ್ಲಿ ನೀರಿನ ಪೈಪ್‌ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ, ಶೌಚದಲ್ಲಿ ಒಂದು ಕ್ಷಣ ಅದರ ಒಳಗೆ ನಿಲ್ಲಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಜನರು ಅನಿವಾರ್ಯವಾಗಿ ನೈಸರ್ಗಿಕ ಬಾಧೆಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ಬಂದಿದೆ.

    ಭವನದಲ್ಲಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭಾಂಗಣದಲ್ಲಿರುವ ಶೌಚಾಲಯದಲ್ಲಿನ ಪುರುಷರ ಕೊಠಡಿಯಲ್ಲಿ ಟೈಲ್ಸ್ ಗಳು ಕಿತ್ತು ಹೋಗಿದ್ದರೇ, ಮೂರು ಅಂತಸ್ತಿನ ಬಿಲ್ಡಿಂಗ್ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಯ ಉಪಕರಣಗಳು ಮುರಿದು ಬಿದ್ದಿವೆ, ಅಲ್ಲದೇ ಮಲ ವಿಸರ್ಜನೆ ಮಾಡಲು ಹೋದರೆ ಸರಿಯಾದ ಸ್ವಚ್ಚತೆ ಇಲ್ಲಾ, ಶೌಚಾಲಯ ಉಪಯೋಗಿಸಿದ ಬಳಿಕ ಕೈ ತೊಳೆಯಲು ಸಿಂಕ್ ಬಳಿ ಬಂದರೆ ಅದರಲ್ಲಿ ನಳಗಳೇ ಇಲ್ಲಾ. ಇವುಗಳ ಬಗ್ಗೆ ಅಧಿಕಾರಿಗಳ ಗಮನಿಕಿದ್ದರೂ ಯಾವೊಬ್ಬರು ಅತ್ತ ಕಡೆ ಹೋಗುವುದಿಲ್ಲ.

    ಜನರಿಗೆ ಸ್ವಚ್ಛದ ಬಗ್ಗೆ ನೀತಿ ಪಾಠವೇಳುವ ಜಿಲ್ಲಾಡಳಿತವೇ ಇಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಊರ ಸ್ವಚ್ಛತೆಯನ್ನು ಹೇಗೆ ನಿರ್ವಹಿಸಲು ಸಾಧ್ಯವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

    ಜಿಲ್ಲಾ ಕೇಂದ್ರದ ಪ್ರಮುಖ ಆಡಳಿತ ಕಚೇರಿಯಲ್ಲೇ ಶೌಚಾಲಯಗಳು ಹೀಗಿರಬೇಕಾದರೆ, ತಾಲ್ಲೂಕು ಕೇಂದ್ರಗಳ ಕಚೇರಿಯಲ್ಲಿ ಹೇಗಿರಬಹುದೆಂಬುದನ್ನು ನೀವೇ ಊಹಿಸಿಕೊಳ್ಳಿ. ಇದರ ನಿರ್ವಹಣೆಗಾಗಿ ಪ್ರತಿ ವರ್ಷ ಲಕ್ಷಗಟ್ಟಲೇ ಹಣವನ್ನು ಮಿಸಲಿಡಲಾಗುತ್ತದೆ, ಆದರೆ ಇದರ ಅನುದಾನವನ್ನು ಬಳಕೆ ಮಾಡದೇ ಗುತ್ತಿಗೆದಾರನ ಜೇಬಿಗೆ ಬಿದ್ದೀರಬಹುದಾ ಎಂಬ ಅನುಮಾನ ಕಾಡತೊಡಗಿದೆ.

    ಹಿರಿಯ ಅಧಿಕಾರಿಗಳ ಶೌಚಾಲಯ ಸ್ವಚ್ಛತೆ ಹಾಗೂ ಪ್ರತಿ ವರ್ಷ ನಿರ್ವಹಣೆ ಮಾಡಲಾಗುತ್ತದೆ, ಆದರೆ ಸಭಾಂಗಣದಲ್ಲಿನ ಶೌಚಾಲಯಗಳು ಹಲವು ವರ್ಷಗಳಿಂದ ನಿರ್ವಹಣೆ ಕಾಣದೇ ಸೊರಗಿದೆ. ಮಾದರಿಯಾಗಬೇಕಿದ್ದ ಜಿಲ್ಲಾಡಾಳಿತ ಭವನದಲ್ಲಿಯೇ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿದ್ದೂ ದುರ್ದೈವೇ ಸರಿ.

    ನಿತ್ಯದ ಕಚೇರಿ ವ್ಯವಹಾರಕ್ಕೆ ಆಗಮಿಸುವ ಗ್ರಾಮೀಣ ಜನತೆಗೆ ಇದರ ಗೋಳು ಹೇಳತೀರದಾಗಿದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಸಾರ್ವಜನಿಕರಿಗೆ ಶೌಚಾಲಯಗಳ ಸಮರ್ಪಕ ವ್ಯವಸ್ಥೆ ಮಾಡುವಲ್ಲಿ ಮುಂದಾಗವರಾ ಎಂಬುದು ಕಾಲವೇ ಉತ್ತರಿಸಲಿದೆ.

    apvc-iconPost Views: 169
  • ಸರ್ಕಾರಿ ವೈದ್ಯನ ಸೇವೆ ಮರೀಚಿಕೆ;‌ ಸಂಬಳಕ್ಕೆ ಹಾಜರ್-ಕೆಲಸಕ್ಕೆ ಗೈರು..!

    ಸರ್ಕಾರಿ ವೈದ್ಯನ ಸೇವೆ ಮರೀಚಿಕೆ;‌ ಸಂಬಳಕ್ಕೆ ಹಾಜರ್-ಕೆಲಸಕ್ಕೆ ಗೈರು..!

    ವರದಿ: ಶ್ರೀಶೈಲ್ ಪೂಜಾರಿ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಸರ್ಕಾರಿ ಕೆಲಸ ದೇವರ ಕೆಲಸ. ಈ ಮಾತನ್ನು ಸಾರ್ಥಕ ಪಡಿಸಬೇಕಾದರೆ ಸರ್ಕಾರಿ ನೌಕರರು ತಮ್ಮ ದಿನನಿತ್ಯ ಸೇವಾ ಮನೋಭಾವದಿಂದ ದುಡಿಯಬೇಕು ಆದರೆ ತಾಲೂಕಿನ ಗರಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ವೈದ್ಯರು ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಗೈರು ಹಾಜರಾಗಿ ಸಂಬಳ ಪಡೆಯುತ್ತಿರುವುದು ಸತ್ಯಕಾಮ ಪತ್ರಿಕೆಯಿಂದ ಬಯಲಿಗೆ ಬಿದ್ದಿದೆ.

     

    ಹೌದು.. ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಗ್ರಾಮದ ಆಸ್ಪತ್ರೆಗೆ ಒಟ್ಟು 6 ಉಪ ಕೇಂದ್ರಗಳು ಒಳಪಡುತ್ತವೆ ಅದರಲ್ಲಿ ಕವಡಿಮಟ್ಟಿ, ಆಲೂರು, ಸರೂರು, ರಕ್ಕಸಗಿ, ಗರಸಂಗಿ ಸೇರಿದಂತೆ ಹಲವು ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ರೋಗಿಯ ರೋಗವನ್ನು ಗುಣಪಡಿಸುವನು. ಮುಚ್ಚುಮರೆ ಮಾಡದೇ ರೋಗಿಯು ತನ್ನ ಸಮಸ್ಯೆಗಳನ್ನು ಹೇಳುವುದು ಕೇವಲ ವೈದ್ಯನ ಮುಂದೊಂದೇ. ಆದರೆ ಇಲ್ಲಿ ಆ ವೈದ್ಯರೆ ಹಂತಕರಾಗುವ ಪ್ರಶ್ನೆ ಎದುರಾಗಿದೆ. ವೈದ್ಯರ ಬದಲಿಗೆ ಇಲ್ಲಿ ಬರುವ ರೋಗಿಗಳಿಗೆ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿ ಬೇರೆ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಚಿಕಿತ್ಸೆ ನೀಡುತ್ತಿರುವುದು ದೊಡ್ಡ ಅಪರಾಧ ಅಂತ ಗೊತ್ತಿದ್ದರು ಹಳ್ಳಿ ಜನರ ಜೀವನದ ಜತೆಗೆ ಚೆಲ್ಲಾಟ ವಾಡುತ್ತಿದ್ದಾರೆ.

     

    ವೈದ್ಯರ ಸಲಹೆ ಮೇರೆಗೆ ಮಾತ್ರ ಬೆರೊಬ್ಬ ಆರೋಗ್ಯ ಇಲಾಖೆ ಸಿಬ್ಬಂದಿಗಳು ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ಎಂಬಿಬಿಎಸ್, ಬಿಎಎಮ್ಎಸ್ ಮುಗಿಸದ ಸಿಬ್ಬಂದಿಗಳೇ ವೈದ್ಯರಾಗಿದ್ದಾರೆ. ಇವರು ನೀಡಿದ ಚಿಕಿತ್ಸೆಯೇ ಇಲ್ಲಿ ಪೈನಲ್ ಎನ್ನೋವಾಗೆ ಆಗಿದೆ. ಹೆಸರಿಗೆ ಮಾತ್ರ ಆಸ್ಪತ್ರೆ ಇದಾಗಿದ್ದು, ರೋಗಿಗಳ ಪಾಲಿಗಂತು ನರಕಯಾತನೆ ಆಗಿದೆ. ಯಾಕಂದ್ರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇಲ್ಲಿ ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳೇ ಎಲ್ಲಾ ಕಾರುಬಾರು.

    ಗರಸಂಗಿ ಆಸ್ಪತ್ರೆಗೆ ನಿಯೋಜನೆಗೊಂಡ ವೈದ್ಯ ಎಮ್.ಎಸ್ ಪಾಟೀಲ್ ಒಂದು ದಿನವೂ ಆಸ್ಪತ್ರೆಗೆ ಬಂದಿಲ್ಲ. ಹೆಸರಿಗೆ ಮಾತ್ರ ಆಸ್ಪತ್ರೆ ವೈದ್ಯರು ಎನ್ನುಂತೆ ಆಗಿದೆ. ಇಲ್ಲಿವರೆಗೂ ಆಸ್ಪತ್ರೆಗೆ ಬಂದೆ ಇಲ್ಲ. ವೈದ್ಯರ ಹಾಜರಾತಿ ಕೂಡ ಸಂಪೂರ್ಣ ಖಾಲಿ ಇದ್ದು, ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಈ ಮಾಹಿತಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಸತೀಶ್ ತಿವಾರಿಗೆ ಗೊತ್ತಿದ್ದರು ಸಹ ಕಂಡು ಕಾಣದಂತೆ ಮೂಖರಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ.

     

    ಗುತ್ತಿಗೆ ಆಧಾರದ ನೌಕರರು ಹಾಗೂ ಖಾಯಂ ಸರ್ಕಾರಿ ನೌಕರರು ಮಧ್ಯಾಹ್ನ 2 ಗಂಟೆ ಆದರೆ ಸಾಕು ಯಾವೊಬ್ಬ ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಇರಲ್ಲ. ಒಟ್ಟು 7 ಜನ ಸಿಬ್ಬಂದಿಗಳಲ್ಲಿ ದಿನಂಪ್ರತಿ ಮೂವರು ಬರುವುದೇ ಅಪರೂಪ. ಯಾವುದೇ ರೋಗಿಗಳು ಮಧ್ಯಾಹ್ನದ ಮೇಲೆ ಬಂದ್ರೆ ಅವರ ಪಾಡು ಹೇಳತೀರದು.

    ಸದ್ಯ ನಿಯೋಜನೆಗೊಂಡ ವೈದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಗ್ರಾಮದಲ್ಲಿ ಕರ್ತವ್ಯಕ್ಕೆ ಬರುತ್ತಿಲ್ಲ. ಸಿಬ್ಬಂದಿಗಳು ಸಹ ಮೂರು ದಿನಕ್ಕೊಮ್ಮೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಸರ್ಕಾರ 24X7 ಸೇವೆ ಸಲ್ಲಿಸಬೇಕು ಎಂದು ಆದೇಶಿಸಿದ್ದರೂ ಅದನ್ನು ಯಾವೊಬ್ಬ ನೌಕರನು ಪಾಲಿಸುತ್ತಿಲ್ಲ. ವೈದ್ಯರ ಚಿಕಿತ್ಸೆಯ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ಬಡ ಒಳ ಹಾಗೂ ಹೋರ ರೋಗಿಗಳು ಪರದಾಡುವಂತಾಗಿದೆ. ಇದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಈ ಭಾಗದ ಜನರು ಮುಖ ಮಾಡುವಂತಾಗಿದೆ.

     

    ಒಟ್ಟಿನಲ್ಲಿ ಇಲ್ಲಿನ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಗಳ ಸೇವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥಾಗಿದ್ದು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಆಸ್ಪತ್ರೆ ವೈದ್ಯ ಹಾಗೂ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಟ್ರೀಟ್ಮೆಂಟ್ ಕೊಡಿಸಿ, ಸಾರ್ವಜನಿಕರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮಾಡುತ್ತಾರಾ ಎಂಬುದು ಕಾದುನೋಡಬೇಕಿದೆ.

     

    ವೈದ್ಯರು ಒಂದು ತಿಂಗಳಿನಿಂದ ಬಂದೇ ಇಲ್ಲ. ಡಾಕ್ಟರ್ ಸಿಗದೇ ನರ್ಸ್ ಒಬ್ಬರೇ ಇಲ್ಲಿ ಡಾಕ್ಟರ್ ರೀತಿ ಚಿಕಿತ್ಸೆ ನೀಡುತ್ತಾರೆ. ಒಂದು ವೇಳೆ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ, ನರ್ಸ್ ಸಹ ಮಧ್ಯಾಹ್ನ 2 ಗಂಟೆಗೆ ನ ನಮ್ಮ ಮುಂದೆಯೇ ಮನೆಗೆ ಹೋಗುತ್ತಾರೆ. ಮಧ್ಯಾಹ್ನದ ಮೇಲೆ ಯಾವೊಬ್ಬ ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಇರೋದಿಲ್ಲ.

    ಗರಸಂಗಿ ಗ್ರಾಮಸ್ಥರು

    apvc-iconPost Views: 211
  • ಅಣ್ಣಾ ತಂಗಿಯ ಬಂಧನಕ್ಕೆ ಸಾಕ್ಷಿ ಈ ರಾಖಿ 

    ಅಣ್ಣಾ ತಂಗಿಯ ಬಂಧನಕ್ಕೆ ಸಾಕ್ಷಿ ಈ ರಾಖಿ 

    ಹಲವಾರು ಹಬ್ಬ, ಸಂಪ್ರದಾಯ, ಸಂಸ್ಕೃತಿ ಇವುಗಳೋಂದಿಗೆ ಇತಿಹಾಸವನ್ನು ಹೊಂದಿರುವ ದೇಶ ನಮ್ಮದು. ಒಂದೊಂದು ಹಬ್ಬವು ಒಂದೊಂದು ಕಥೆಯನ್ನು ಮತ್ತು ಒಂದೊಂದು ಸ್ವರೂಪವನ್ನು ಪಡೆದುಕೊಂಡಿವೆ. ಹಬ್ಬ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲಾ ಅದರಲ್ಲು ಶ್ರಾವಣ ಮಾಸದಲ್ಲಿ ಆರಂಭವಾಗುವ ವರಮಹಾಲಕ್ಷ್ಮಿ ಹಬ್ಬ ಮುನ್ನುಡಿ ಹಾಡಿದರೆ ಅದರೊಂದಿಗೆ ನಾ ಮುಂದು, ತಾ ಮುಂದು ಎಂದು ಬರುವುದು ರಕ್ಷಾಬಂಧನ.

    ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಈ ಹಬ್ಬವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಅಕ್ಕ-ತಮ್ಮ, ಅಣ್ಣಾ-ತಂಗಿ ತನ್ನ ಸಹೋದರನಿಗೆ ಎಲ್ಲದರಿಂದಲೂ ರಕ್ಷೆ ಹಾಗೂ ಜಯ ಸಿಗಲಿ ಮತ್ತು ನನ್ನ ರಕ್ಷಣೆಯ ಭಾರ ನಿನ್ನದು ಎಂದು ಸಹೋದರಿಯು, ಸಹೋದರನಿಗೆ ರಕ್ಷಾಸೂತ್ರ ಕಟ್ಟುತ್ತಾಳೆ.

    ಹಿಂದಿನ ದಿನಗಳಲ್ಲಿ ರಾಖಿಯನ್ನು ಮನೆಯಲ್ಲೆ ತಯಾರಿಸುತ್ತಿದ್ದರು, ಜಗತ್ತು ಅಭಿವೃದ್ಧಿಯತ್ತ ತಿರುಗಿದಂತೆ ಖರೀದಿಸಿ ತಂದು ರಾಖಿ ಕಟ್ಟುವ ಪರಿಯತ್ತ ಬದಲಾಯಿತು ಹಾಗೆ ರಾಖಿಯಲ್ಲಿರುವ ವಿವಿಧ ಬಣ್ಣಗಳು ಒಂದೊಂದು ಸಂಕೇತದ ಪ್ರತಿಕವೆಂದು ಮನೆಯ ಹಿರಿಯರೂ ಹೆಳುತ್ತಿದ್ದರು, ಹತ್ತಿ ದಾರದ ರಾಖಿ ರಕ್ಷಣ ದಾರವು ಉತ್ತಮವಾದದ್ದು, ಇದು ಲಭ್ಯವಿಲ್ಲದಿದ್ದರೆ ಕಲವಾ ಅಂದರೆ ಕೆಂಪುದಾರ ಕಟ್ಟಬಹುದು, ರಾಖಿ ಕೊಳ್ಳುವಾಗ ಅದರಲ್ಲಿ ಕಪ್ಪು ಅಥವಾ ಕಂದು ಬಣ್ಣ ಬಳಿಸಿದ್ದರೆ ಅದು ಒಳೆತಲ್ಲಾ, ರಾಖಿಯ ಬೇಲೆ ಎಷ್ಟೇ ಇರಲಿ ಬಣ್ಣಗಳ ಮೇಲೆ ನಿಗಾ ಇರಬೇಕು. ಇನ್ನು ರಾಖಿ ಕಟ್ಟಿಸಿಕೊಳ್ಳುವ ಸಹೋದರರು ಖಾಲಿ ಕೈಯಲ್ಲಿರಬಾರದು. ಉಡುಗೊರೆ ಅಥವಾ ಹಣ ನೀಡಲೆಬೇಕು, ಸಹೋದರಿಯರ ಕಾಲಿಗೆ ಹಣೆಹಚ್ಚಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ಎಂದು ನಮ್ಮ ಅಜ್ಜಾ-ಅಜ್ಜಿಯಂದಿರು ತಿಳಿ ಹೆಳುತ್ತಿದ್ದರು. ಆ ಕಾಲ ಇಂದು ಬದಲಾಗಿದೆ.

    ಸ್ಟೋನ್ ಬಳಕೆಯ ಟ್ರೆಂಡಿಂಗ್ ರಾಖಿ:

    ಆದುನಿಕತೆ ಬೆಳೆದಂತೆ ಎಲ್ಲಾ ರೀತಿಯ ತಂತ್ರಜ್ಞಾನಗಳ ಅಳವಡಿಕೆಯಿಂದ ರಾಖಿಯನ್ನು ಮನೆಯಲ್ಲಿ ತಯಾರಿಸುವುದು ಕಡಿಮೆನೆ, ಮಾರ್ಕೆಟಗಳಲ್ಲಿ ಮಿಂಚುತ್ತಿರುವ ಬಣ್ಣದ ರಾಖಿಯು ಬಗೆ ಬಗೆಯ ಆಕಾರ, ಸ್ವರೂಪ ಹೊಂದಿವೆ. ವಯಸ್ಸಿಗೆ ತಕ್ಕಂತ ಕಲರ್‌ಫುಲ್ ರಾಖಿ ಇಂದು ಸದ್ದು ಮಾಡುತ್ತಿವೆ. ಮಕ್ಕಳಿಗೆ ಇಷ್ಟವಾಗುವ ಗೊಂಬೆ ರಾಖಿ, ಸ್ಪೆöÊಡರ ಮ್ಯಾನ್, ಲೈಟಿಂಗ್ ರಾಖಿ, ಪಾಂಡ ರಾಖಿ, ಪ್ರಾಣಿ-ಪಕ್ಷೀಗಳ ಚಿತ್ರಣದ ರಾಖಿ, ನವಿಲಿನ ರಾಖಿ, ಜೆಲ್ಲಿ ರಾಖಿ, ಸ್ಪೀನ್ನರ್, ಮೋಟೂ-ಪತ್ಲು, ಡೊರೆಮಾನ್ ರಾಖಿ, ಸ್ಪಂಜಿನ ರಾಕಿ ಇದ್ದರು ಮಕ್ಕಳಿಗೆ ಲೈಟಿಂಗ್, ಲೈಟಿಂಗ್ ರಾಖಿಯ ಮೇಲೆ ಹೆಚ್ಚು ಪ್ರಿತಿ.

    ಇನ್ನೂ ಕಾಲೇಜು ವಿದ್ಯಾರ್ಥಿಗಳಿಗಂತೂ ರಾಖಿಯ ಕ್ರೇಜು ಅತೀ ಇರುವುದು, ಕೈ ತುಂಬ ಹೆಚ್ಚು ರಾಖಿ ಕಟ್ಟಿಸಿಕೊಳ್ಳುವ ಹುಚ್ಚಿನೋಂದಿಗೆ ವ್ಯರೈಟಿ ಬಯಸುವ ಪಡ್ಡೆ ಹುಡುಗರಿಗೆ ಸ್ಟೋನ್ ರಾಖಿಯಿಂದ ಹಿಡಿದು ಮೊಡರ್ನ ರಾಖಿ, ಫ್ಲರ‍್ಸ ರಾಖಿ, ಹವಳದ ರಾಖಿ, ನೆಮ್ ಪ್ಲೇಟ ರಾಖಿ, ಬೆಳ್ಳಿ-ಬಂಗಾರವೂ ನಾಚುವಂತಹ ಸೀಲ್‌ವರ್ ಬಣ್ಣದ ರಾಖಿ, ಅಣ್ಣ-ತಂಗಿಯ ಪೋಟೋ ಹಾಕಿರುವ ರಾಖಿ, ತಟ್ಟೆ ರಾಕಿ, ಜುಮುಕಿ ರಾಖಿ, ನವಿಲು ರಾಖಿ, ಗ್ರಾö್ಯಂಡ ರಾಖಿ ಇದೇಲ್ಲ ಕಾಲೇಜು ವಿದ್ಯಾಥಿಗಳಿಗೆ ಕ್ರೇಜ್ ಆದ್ರೆ ಇತ್ತ ವಯಸ್ಸಾದವರಿಗೆ ಸುಗಂಧದ ರಾಖಿ, ಗೊಂಡೆ ರಾಖಿ, ಪ್ಯಾನ್ಸಿ ರಾಖಿ, ಚಮಕಿ ರಾಕಿ, ಮುತ್ತಿನ ರಾಖಿ, ಎರಡು ಎಳೆಯ ದಾರಕ್ಕೆ ಮೂರು ಮುತ್ತಿದ್ದರೆ ಸಾಕು ಎನ್ನುವ ಇವರುಗಳ ಮಧ್ಯೆ ಫುಲ್ ಟ್ರೇಂಡಿಗನಲ್ಲಿ ಬ್ರೋ(BRO) ಬ್ರದರ್(BROTHER) ಭಾಯಿ (BHAI) ಸ್ಮಾರ್ಟ ಬ್ರೋ (SMART BRO) ಅಣ್ಣಾ ಎಂದೆಲ್ಲಾ ಅಕ್ಷರದ ಒಂದೇಡೆ ಆದರೆ ದೇವರುಗಳ ಮೂರ್ತಿ ಹೊತ್ತು ಸಕಾರಾತ್ಮಕತೆಯ ಮೆರಗಿನಿಂದ ಕಂಗೋಳಿಸುತ್ತಿರುವ ರಾಖಿ ಇನ್ನೊಂದೆಡೆಗೆ ಸಂಭ್ರಮಿಸುತ್ತಿವೆ.

    ಸಹೋದರಿ ಕಟ್ಟುವ ರಾಖಿ ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ. ಬರಹದ ಮೂಲಕ ಹೇಳಲಾಗದ ಸಂಬಂಧ, ಹೇಳಿದರೂ ಅರ್ಥವಾಗದ ಅನುಬಂಧ, ಅರ್ಥವಾದರೂ ಅರ್ಥೈಸಿಕೊಳ್ಳಲಾಗದ ಎಳೆಳೂ ಜನುಮದ ಅನುಬಂಧ ಅದುವೇ ಅಣ್ಣಾ-ತಂಗಿಯ ಪ್ರೀತಿ ವಾತ್ಸಲ್ಯದ ಋಣಾನುಬಂಧ.

    ಬರಹ: ಲಕ್ಷ್ಮಿ ಬಾಗಲಕೋಟಿ (ವಿಜಯಪುರ)

    apvc-iconPost Views: 89