Blog

  • ವಿವೇಕಾನಂದರ ಬೋಧನೆ ಯುವ ಜನತೆಗೆ ಸ್ಫೂರ್ತಿ

    ವಿವೇಕಾನಂದರ ಬೋಧನೆ ಯುವ ಜನತೆಗೆ ಸ್ಫೂರ್ತಿ

    ಸತ್ಯಕಾಮ ವಾರ್ತೆ ಗುರುಮಠಕಲ್‌ :

    ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾಧ್ಯಾಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ ಗಣೇಶ್ ಬುರಗಪಲ್ಲಿ ಅಭಿಪ್ರಾಯಪಟ್ಟರು.

    ಪಟ್ಟಣಕ್ಕೆ ಹತ್ತಿರದಲ್ಲಿರುವ ಬುರಗಪಲ್ಲಿ ಗ್ರಾಮದಲ್ಲಿ ವಿವೇಕಾನಂದರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದಾದ್ಯಂತ ಮಹಾನ್ ಅಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳು ಯಾವಾಗಲೂ ಯುವಕರನ್ನು ಪ್ರೇರೇಪಿಸುವಂತಿವೆ. ಜೊತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ ಎಂದರು.

    ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ಪರಿಚಯಿಸಿದ ಚಿಕಾಗೋ ಭಾಷಣ


    ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಷಣದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ವಿವೇಕಾನಂದರ ಅಂದಿನ ಭಾಷಣ ಇತಿಹಾಸದಲ್ಲಿ ಅವರ ಅತ್ಯಂತ ಪ್ರಸಿದ್ದ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಭಾಷಣದ ಆರಂಭದಲ್ಲಿ ಸ್ವಾಮಿ ವಿವೇಕಾನಂದರು, ‘ಅಮೆರಿಕದ ಸಹೋದರ ಸಹೋದರಿಯರೇ’ ಎಂದು ಹೇಳಿದಾಗ ಸದನವು ಎರಡು ನಿಮಿಷಗಳ ಕಾಲ ಚಪ್ಪಾಳೆಯನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಂದಿನಿಂದ, ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಪ್ರಪಂಚದಾದ್ಯಂತ ಮಾನ್ಯತೆ ಸಿಕ್ಕಿತು. ಕೇವಲ 30ನೇ ವಯಸ್ಸಿನಲ್ಲಿ, ವಿವೇಕಾನಂದರು ಹಿಂದುತ್ವದ ದೃಷ್ಟಿಕೋನದಿಂದ ಸಹೋದರತ್ವದ ಪಾಠವನ್ನು ಜಗತ್ತಿಗೆ ಕಲಿಸಿದರು. ಧರ್ಮಗಳ ಸಂಸತ್ತಿನಲ್ಲಿ ಈ ಯುವ ಸನ್ಯಾಸಿ ಮಾಡಿದ ಭಾಷಣದಿಂದ ಇಡೀ ಜಗತ್ತು ಮಂತ್ರಮುಗ್ಧವಾಯಿತು.

    ಈ ಸಂಧರ್ಭದಲ್ಲಿ ಮಹೇಂದ್ರ , ನರಸಿಂಹಲು , ಬ್ರಹ್ಮನಂದ, ಕೃಷ್ಣ , ಪರುಶುರಾಮ, ರಮೇಶ್, ಗಣೇಶ್, ರಾಜು,ಶಿವು, ವೆಂಕಟ, ದಸ್ತಪ್ಪ ಉಪಸ್ಥಿತರಿದ್ದರು.

    apvc-iconPost Views: 114
  • ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆಗೆ ನಿರ್ಧಾರ

    ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆಗೆ ನಿರ್ಧಾರ

    ಸತ್ಯಕಾಮ ವಾರ್ತೆ ಗುರುಮಠಕಲ್:

    ವೈಭವಯುತವಾಗಿ ವೈಕುಂಠ ಏಕಾದಶಿ ಹಿನ್ನೆಲೆ ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ಹೇಳಿದರು.

    ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಏಕಾದಶಿ ಪವಿತ್ರ ದಿನವಾಗಿದ್ದು, ಇದರ ಮಹತ್ವವನ್ನು ಜನರಿಗೆ ಸಾರುವ ಉದ್ದೇಶದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

    ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ವೈಕುಂಠದ್ವಾರವನ್ನು ಯಾದಗಿರಿ ಅಪಾರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಜ.೧೦ರಂದು ಬೆಳಿಗ್ಗೆ ೫;೩೦ ಸುಪ್ರಭಾತ ಸೇವೆ ನಂತರ ೯ಗಂಟೆಗೆ ವೈಕುಂಠದ್ವಾರ ಉದ್ಘಾಟನೆ. ಸಂಜೆ ೬ಗಂಟೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಲಕ್ಷಿö್ಮ ತಿಮ್ಮಪ್ಪ ದೇವರಿಗೆ ಪಲ್ಲಕಿ ಸೇವೆ ಬಳಿಕ ಮಹಾಮಂಗಳ ಆರತಿ ನೆರವೇರಲಿದೆ ಎಂದು ವಿವರಿಸಿದರು.

    ಹಿಂದುಗಳ ಪವಿತ್ರ ದಿನವಾದ ಏಕಾದಶಿಯಂದು ಗುರುಮಠಕಲ್, ಯಾದಗಿರಿ, ರಾಯಚೂರ, ಬೀದರ ಸೇರಿದಂತೆ ನೆರೆಯ ತೆಲಂಗಾಣದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ತಿಳಿಸಿದರು.

    apvc-iconPost Views: 16
  • ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

    ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

    ಸತ್ಯಕಾಮ ವಾರ್ತೆ ಶಹಾಪುರ:

    ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದ ರುಕ್ಮೀಣಿ ಎಂ. ಅವರಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದೂ ಇದೀಗ ಆಕೆಯ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     

    ಸಹಾಯಕ ಆಡಳಿತಾಧಿಕಾರಿಯಾಗಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರುಕ್ಮೀಣಿ ಎಂ. ಅವರು ಆರೋಗ್ಯ ಇಲಾಖೆಯ ನೇಮಕಾತಿಯ ಸಂದರ್ಭದಲ್ಲಿ ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿದ್ದ ದಿ;24/04/1961ರ ಜನ್ಮ ದಿನಾಂಕವನ್ನು ದಿ: 24/04/1964 ಅಂತ ತಿದ್ದುಪಡಿ ಮಾಡಿ 1985 ನೇ ಸಾಲಿನಲ್ಲಿ ಬೆಂಗಳೂರ ನೇಮಕಾತಿ ಪ್ರಾಧಿಕಾರಿ ಮುಖ್ಯ ಕಛೇರಿಯಲ್ಲಿ ತಿದ್ದುಪಡಿ ದಾಖಲೆ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಆರೋಗ್ಯ ಇಲಾಖೆಗೆ ರುಕ್ಮಿಣಿ ಅವರು ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿ ತಿದ್ದುಪಡಿ ಮಾಡಿ ತನ್ನ ಸ್ವಂತ ಲಾಭಕ್ಕಾಗಿ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ಹೆಚ್ಚಿಗೆ ಕರ್ತವ್ಯ ಮಾಡಿರುತ್ತಾರೆ ಎಂಬ ಅಂಶಗಳು ಬೆಳಕಿಗೆ ಬಂದಿದ್ದೂ, ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಯಾದಗಿರಿ ರವರ ಸೂಚನೆ ಮೇರೆಗೆ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ:ಯಲ್ಲಪ್ಪ ಅವರು ನಿವೃತ್ತಿ ಹೊಂದಿರುವ ರುಕ್ಮೀಣಿ ಎಂ. ಅವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

     

    ಕಲಂ:409, 420, 465, 468, 471 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ಸತ್ಯಕಾಮ ಪತ್ರಿಕೆಗೆ ಪೊಲೀಸ್ ಮೂಲಗಳು ತಿಳಿಸಿವೆ.

    apvc-iconPost Views: 293
  • ಜನರ ಧ್ವನಿಯಾಗಿ ನಾ ವಿಧಾನಸೌಧದಲ್ಲಿ ಮಾತಾಡಿನಿ

    ಜನರ ಧ್ವನಿಯಾಗಿ ನಾ ವಿಧಾನಸೌಧದಲ್ಲಿ ಮಾತಾಡಿನಿ

    ಸತ್ಯಕಾಮ ವಾರ್ತೆ ಯಾದಗಿರಿ:

    ರಾಜಕೀಯದಲ್ಲಿ ವಿರೋಧ ಸಾಮಾನ್ಯ, ವಿಧಾನಸೌಧದಲ್ಲಿ ನಾ ಮಾತಾಡ್ತಿನಿ ಅಂದ್ರ ಅದು ನಿಮ್ಮಾಶೀರ್ವಾದದಿಂದ ಮಾತ್ರ, ಜನರ ಧ್ವನಿಯಾಗಿ ನಾ ವಿಧಾನಸೌಧದಲ್ಲಿ ಮಾತಾಡಿನಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಶಾಸಕ ಶರಣಗೌಡ ಕಂದಕೂರ ಅಭಿನಂದನಾ ಸಮಾರಂಭ ಹಾಗೂ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಶ್ಚಂದ್ರ ಕಟಕಟಿಯವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಎಪಿಎಂಸಿ ಸೇರಿದಂತೆ ಮುಂದೆ ಹಲವು ಚುನಾವಣೆಗಳು ಬರಲಿವೆ, ಪಕ್ಷ ಸಂಘಟನೆಗೆ ಇನ್ನೂ ಹೆಚ್ಚಾಗಿ ಆಗಬೇಕಿದೆ, ಪಕ್ಷ ಉಳಿದರೆ ನಾವು ನೀವು ಉಳಿಯೋದು ಸಾಧ್ಯ ಅದನ್ನರಿತು ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

    ಗುರುಮಠಕಲ್ ಮುಖಂಡರಾದ ಬಸಣ್ಣ ದೇವರಳ್ಳಿ ಮಾತನಾಡಿ, ನಾಲ್ಕು ದಶಕಗಳ ದಲಿತರ ಕನಸು ಗುರುಮಠಕಲ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಪುತ್ಥಳಿ ಅನಾವರಣ ಮಾಡಿ ದಲಿತರ ಕನಸು ನನಸು ಮಾಡಿದ್ದಾರೆ ಎಂದರು.

    ಸನ್ಮಾನ ಸಮಾರಂಭದಲ್ಲಿ ಕಟಕಟಿ ಬಾವುಕ

    ಅಣ್ಣಾ ಇವತ್ತು ನನ್ನ ಕುಟುಂಬಕ್ಕೆ ನಿಮ್ಮ ಕುಟುಂಬದ ಆಶೀರ್ವಾದ ಸದಾ ಇದೆ. ಊರಿಗೆ ಒಳ್ಳೆಯದನ್ನು ಮಾತ್ರ ನಾ ಮಾಡಿನಿ ಅದಕ್ಕಾಗಿ ಕಂದಕೂರ ಕುಟುಂಬದ ಆಶೀರ್ವಾದ ಇದೆ.ಕಂದಕೂರ ಕುಟುಂಬಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆ ನಿಭಾಯಿಸುತ್ತೇನೆ.

    – ಸುಭಾಷ ಕಟಕಟಿ, ಜೆಡಿಎಸ್ ಜಿಲ್ಲಾಧ್ಯಕ್ಷರು, ಯಾದಗಿರಿ

     

    ಶರಣಗೌಡ ಕಂದಕೂರ ಅವರು ಗುರುಮಠಕಲ್‌ಗೆ ಶಾಶ್ವತ ಶಾಸಕರು ಕಳೆದ ನಾಲ್ಕು ದಶಕಗಳಿಂದಾಗ ಅಭಿವೃದ್ಧಿಯನ್ನು ಮಾಡಿದ್ದಾರೆ. ಹಳ್ಳಿಗಳ ಪ್ರತಿಯೊಂದು ಕುಟುಂಬದ ಜೊತೆ ಸಂಪರ್ಕದಲ್ಲಿದ್ದು, ಅವರ ಕಷ್ಟ, ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

    ಶಾಸಕ ಕಂದಕೂರ ಅವರಿಗೆ ಅದ್ದೂರಿ ಮೆರವಣಿಗೆ

    ಗುರುಮಠಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದಲ್ಲಿ ಶಾಸಕ ಶರಣಗೌಡ ಕಂದಕೂರ ಅಭಿನಂದನಾ ಸಮಾರಂಭ ಹಾಗೂ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಶ್ಚಂದ್ರ ಕಟಕಟಿಯವರಿಗೆ ಸನ್ಮಾನ ಸಮಾರಂಭದ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

    ಈಶಪ್ಪ ರ‍್ಯಾಕಾ ಪ್ರಾಸ್ತಾವಿಕ ಮಾತನಾಡಿ, ಕಂದಕೂರ ಕುಟುಂಬದಿAದ ಯಾದಗಿರಿ ಜಿಲ್ಲೆಯಲ್ಲಿ ಜೆಡಿಎಸ್ ಜೀವಂತವಾಗಿದೆ. ನಮ್ ನಾಯಕರು ಬರಿ ಹೇಳೋದಲ್ಲ ಕೆಲಸ ಮಾಡಿ ತೋರಸ್ತಾರ ಜೆಡಿಎಸ್ ನಲ್ಲಿ ಲಾಬಿ ಇಲ್ಲ ನಿಷ್ಠೆಗೆ ಮಾತ್ರ ಹುದ್ದೆ ಎನ್ನುವದನ್ನು ಮತ್ತೊಮ್ಮೆ ನಿಷ್ಠಾವಂತ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಹುದ್ದೆ ಕೊಟ್ಟಿರುವುದೇ ಸಾಕ್ಷಿಯಾಗಿದೆ. ನಮ್ಮೂರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆಯ ಜವಾಬ್ದಾರಿ ಕೊಟ್ಟು ಮೊತ್ತೊಮ್ಮೆ ಹೊನಗೇರಾ ಗ್ರಾಮದ ಕೈ ಶಾಸಕ ಶರಣಗೌಡ ಕಂದಕೂರ ಅವರು ಹಿಡಿದಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ದೊಡ್ಡನಾಗಪ್ಪ ಬೋವಿ, ಜಿ.ತಮ್ಮಣ್ಣ, ಮಲ್ಲಣಗೌಡ ಕೌಳೂರ, ಶರಣು ಆವಂಟಿ, ಭೋಜನಗೌಡ ಯಡ್ಡಳ್ಳಿ, ಪ್ರಕಾಶ ನಿರೆಟಿ, ಬಸಣ್ಣ ದಢವರಳ್ಳಿ, ಕೃಷ್ಣಾರಡ್ಡಿ, ಪಾಪಣ್ಣ ಮನ್ನೆ, ನಾಗರಾಜ ದೇಶಮುಖ, ಅಜಯರಡ್ಟಿ ಎಲ್ಹೇರಿ, ರವಿ ಪಾಟೀಲ, ರಾಮಣ್ಣ ಬಳಿಚಕ್ರ, ಸಣ್ಣಪ್ಪ ಕೋಟಗೇರಾ, ಗಿರಿನಾಥರಡ್ಡಿ, ನಾಗರಡ್ಡಿ ಮೋಟ್ನಳ್ಳಿ, ಮಾರ್ಥಂಡಪ್ಪ ಮಾನೇಗಾರ, ತಾಯಪ್ಪ ಬದ್ದೇಪಲ್ಲಿ, ಈಶ್ವರ ನಾಯಕ, ನರಾಪ್ಪ ಕವಡೆ, ಹಣಮಂತ ಬಂದಳ್ಳಿ, ತಿಪ್ಪಾರಡ್ಡಿ, ಶರಣಗೌಡ ಮೋಟ್ನಳ್ಳಿ, ಸೋಮನಗೌಡ ಬೆಳಗೇರಾ, ಗುರುನಾಥರಡ್ಡಿ ಸೈದಾಪೂರ, ಅಮೀನರಡ್ಡಿ, ಮಲ್ಲಣಗೌಡ ಹತ್ತಿಕುಣಿ ಇದ್ದರು.

     

    ಕಂದಕೂರ ಮಂತ್ರಿ ಖಚಿತ

    ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮತ್ತೇ ಬರ್ತದಾ ಶರಣಗೌಡ ಕಂದಕೂರ ಮಂತ್ರಿ ಆಗೋದು ಖಚಿತ.

    apvc-iconPost Views: 63
  • ತಾಲೂಕ ನ್ಯಾಯಾಲಯಕ್ಕೆ ಆಗ್ರಹಿಸಿ ಡಿ 23 ರಂದು ಪ್ರತಿಭಟನೆ- ಸಿ. ಎಸ್. ಮಾಲಿಪಾಟೀಲ್ 

    ತಾಲೂಕ ನ್ಯಾಯಾಲಯಕ್ಕೆ ಆಗ್ರಹಿಸಿ ಡಿ 23 ರಂದು ಪ್ರತಿಭಟನೆ- ಸಿ. ಎಸ್. ಮಾಲಿಪಾಟೀಲ್ 

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಪಟ್ಟಣವು ತಾಲೂಕ ಕೇಂದ್ರವಾಗಿ ಆರು ವರ್ಷ ಕಳೆದರೂ ತಾಲೂಕಿಗೆ ಸಂಬಂಧ ಪಟ್ಟ ಇಲಾಖೆಗಳು ಸೇರಿದಂತೆ ತಾಲೂಕು ನ್ಯಾಯಾಲಯ ಸ್ಥಾಪನೆ ಆಗದೆ ಇರುವದಕ್ಕೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ. ಎಸ್. ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

     

    ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುಮಠಕಲ್‌ನಲ್ಲಿ ತಾಲೂಕು ನ್ಯಾಯ ಲಯ ಸ್ಥಾಪನೆಗೆ ಆಗ್ರಹಿಸಿ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 23 ರಂದು ಗಾಂಧಿ ಮೈದಾನದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

    ಪಕ್ಷ ಬೇಧ ಮರೆತು ಇಂದು ಗಡಿಭಾಗದ ತಾಲೂಕಿನ ಮೂಲಭೂತ ಸೌಕರ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಸರ್ವ ಸಂಘ ಸಂಸ್ಥೆಗಳು ಹೋರಾಟಕ್ಕೆ ಹೊಂದಾಗಬೇಕು ಎಂದು ವೀರಪ್ಪ ಪ್ಯಾಟಿ ಅಭಿಪ್ರಾಯಪಟ್ಟರು.

    ವಕೀಲ ಗುರುನಾಥ ಅನಪುರ ಮಾತನಾಡಿ, ಹೈಕೋರ್ಟ್ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದ್ದರು ಫಿಠೋಪಕರಣದ ಸಿದ್ಧತೆಗಾಗಿ ಬಿಡುಗಡೆಯಾಗಬೇಕಾದ ಹಣವನ್ನು ವಿವಿಧ ಇಲಾಖೆ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಬಾರದಿರಿವಿದು ಮಲತಾಯಿ ದೋರಣೆ ಮಾಡುತ್ತಿದ್ದಂತೆ ಕಾಣುತ್ತಿದೆ, ನ್ಯಾಯ ದೊರಕುವ ವರೆಗೂ ಹೋರಾಟ ನಿಲ್ಲದು ಎಂದು ಅವರು ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಾಪೆಟ್ಲಾ ಮಾತನಾಡಿ, ಪ್ರಿಯಾಂಕ ಖರ್ಗೆ ಅವರು ಸಂಬಂಧ ಪಟ್ಟ ಇಲಾಖೆಗೆ ಫಿಠೋಪಕರಣಕ್ಕೆ ಅವಶ್ಯಕತೆಯ ಹಣವನ್ನು ಶಿಫಾರಸ್ಸು ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ಒತ್ತಡ ಹೇರೋಣ ಎಂದರು.

    ಜೆಡಿಎಸ್ ನ ಮುಖಂಡ ಜಿ. ತಮ್ಮಣ್ಣ, ವಕೀಲ ಸಾಯಬಣ್ಣ ಗಣಾಪುರ, ಅನಂತಪ್ಪ ಯಾದ್ಲಾಪುರ ಮಾತನಾಡಿದರು.

    ಪ್ರತಿಭಟನೆಗೆ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಬೆಂಬಲ ನೀಡಿ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಇಲ್ಲಿನ ಜನರು ತಾಲ್ಲೂಕು ಕೇಂದ್ರವಾದರೂ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ತಪ್ಪುತ್ತಿಲ್ಲ. ಇಲ್ಲಿಯೇ ನ್ಯಾಯಾಲಯವಾದಲ್ಲಿ ಜನರ ಸಮಸ್ಯೆಗೆ ಇಲ್ಲಿಯೇ ಪತಿಹಾರ ಸಿಗುವುದು ಅನುಕೂಲವಾಅಗುವುದು ಎಂದು ಹೇಳಿದರು. ಈ ಸಂಧರ್ಭದಲ್ಲಿ ರಾಜ ರಮೇಶ ಗೌಡ, ಖಜಾಂಚಿ ಸಾಬಣ್ಣ, ಕಿಷ್ಟಪ್ಪ ಪುರುಷೋತ್ತಮ್, ಕೃಷ್ಣ ಮೇದಾ, ಗುರುನಾಥ ರೆಡ್ಡಿ ಅನಪುರ, ವೀರಪ್ಪ ಪ್ಯಾಟಿ, ವಿಶ್ವನಾಥ ರೆಡ್ಡಿ, ಜಿ.ತಮ್ಮಣ್ಣ, ಕೃಷ್ಣ, ಸಂಜೀವ ಕುಮಾರ ಚಂದಾಪುರ, ನರಸಿಂಹಲು ನಿರೇಟಿ, ಆಶಣ್ಣ ಬುದ್ದ, ಮೋಹನ ಕುಮಾರ್ ಗಜಾರೆ, ಕೃಷ್ಣ ಪಂಚಾಲ, ಅನಂತಪ್ಪ ಬೋಯಿನ್ ಯಾದ್ಲಾಪುರ, ಆಶೋಕ್ ಗುಮಡಾಲ್, ನಾಗೇಶ ಗದ್ದಿಗಿ, ಮರಳಿಧರ್ ಮೌರ್ಯ, ಜ್ಞಾನೇಶ್ವರ ರೆಡ್ಡಿ, ರಾಮಯ್ಯ ಗೌಡ, ದಂತಾಪೂರ, ಅಶೋಕ್ ಶನಿವಾರಂ, ಭೀಮಶಪ್ಪ ಶನಿವಾರಂ, ರಂಗಸ್ವಾಮಿ, ಚನ್ನಬಸಪ್ಪ, ಮೊಗುಲಪ್ಪ ಯಾದ್ಲಾಪುರ, ಫಯಾಜ್ ಅಹ್ಮದ್, ಮೌನೇಶ್ ಕೊಂಕಲ್, ಲಾಲಪ್ಪ ತಲಾರಿ, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

     

    ಗುರುಮಠಕಲ್ ತಾಲೂಕ ಕೇಂದ್ರವಾಗಿ 6 ವರ್ಷವಾದರು ಅಭಿವೃದ್ಧಿ ಮರೀಚಿಕೆಯಾಗಿದೆ, ಸರಕಾರದ ಮಲತಾಯಿ ಧೋರಣೆ ವಿರುದ್ಧ ಹಾಗೂ ಜನರಿಗೆ ಅನುಕೂಲವಾಗುವಂತೆ ಕೋರ್ಟ್ ಕಛೇರಿಗಳ ಸ್ಥಾಪನೆ ಪ್ರಯುಕ್ತ ತಾಲೂಕಿನ ಎಲ್ಲಾ ಹಳ್ಳಿ ಜನರು, ರಾಜಕೀಯ ಪಕ್ಷದ ಕಾರ್ಯಕರ್ತರು, ವರ್ತಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಬೇಡಿಕೆ ಸಲ್ಲಿಸೋಣ.

    ಆನಂದ ರಾವ್ ನೀರೇಟಿ, ವಕೀಲರು.

    apvc-iconPost Views: 50
  • ತೀವ್ರ ಶೀತ ಗಾಳಿ ಹಿನ್ನೆಲೆ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಡಿ.ಸಿ. ಮನವಿ

    ತೀವ್ರ ಶೀತ ಗಾಳಿ ಹಿನ್ನೆಲೆ: ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಡಿ.ಸಿ. ಮನವಿ

    ಕಲಬುರಗಿ: ಭಾರತೀಯ ಹವಾಮಾನ ಇಲಾಖೆಯು ಡಿ.18 ರಂದು ರೆಡ್ ಅಲರ್ಟ್ ಮತ್ತು ಡಿ.19 ರಂದು ಎಲ್ಲೋ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಈ ಅವಧಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ 5-6 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನ ಇರಲಿದೆ. ವಿಶೇಷವಾಗಿ ಸಾರ್ವಜನಿಕರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತ್ರದ ನಂತರ ವಾಕಿಂಗ್ (ವಾಯುವಿಹಾರ) ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಗಡೆ ಓಡಾಡಬಾರದೆಂದು ಅವರು ತಿಳಿಸಿದ್ದಾರೆ.

    *ಮುನ್ನಚ್ಚರಿಕೆ ಕ್ರಮಗಳೇನು?*

    ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬಾರದಂತೆ ಎಚ್ಚರಿಕೆ ವಹಿಸುವುದು. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ವೆಟರ್, ಜಾಕೇಟ್, ಉಲನ್ ಟೋಪಿ, ಕಾಲು ಕುಬಸ, ಕೈ ಗ್ಲೌಸ್ ಗಳನ್ನು ಧರಿಸಬೇಕು. ವಿಶೇಷವಾಗಿ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡಬಾರದು.

    *ರೈತರಿಗೆ ಸಲಹೆ:*

    ಇನ್ನು ರೈತ ಬಾಂದವರು ಈ ದಿವಸಗಳಲ್ಲಿ ವಿಶೇಷವಾಗಿ ರಾತ್ರಿ ಸಮಯದಲ್ಲಿ ಹೊಲಗಳಲ್ಲಿ ತಂಗುವುದು ಮತ್ತು ಹಗಲಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಿರಲು ತಿಳಿಸಿದೆ. ಅವಶ್ಯವಿದ್ದಲ್ಲಿ ಮಾತ್ರ ಬೆಚ್ಚನೆಯ ಉಡುಪುಗಳನ್ನು ಧರಿಸಲು ತಿಳಿಸಿದೆ. ಮುನ್ಮೆಚ್ಚರಿಕೆ ಕ್ರಮವಾಗಿ ರೈತರು ಹಿಂಗಾರು ಬೆಳೆಗಳಿಗೆ ಶೀತ ಗಾಳಿಯ ಪ್ರಭಾವವನ್ನು ಪ್ರತಿರೋಧಿಸಲು ಪ್ಲ್ಯಾನೋಫಿಕ್ಸ್ 0.5 ಎಂ.ಎಲ್. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ರೈತರಿಗೆ ಸಲಹೆ ನೀಡಿದ್ದಾರೆ.

    apvc-iconPost Views: 170
  • ನ್ಯಾಯ ವಂಚಿತ ತಾಲೂಕಕ್ಕೆ ನ್ಯಾಯವಾದಿಗಳಿಂದ ಹೋರಾಟಕ್ಕೆ ಸಜ್ಜು

    ನ್ಯಾಯ ವಂಚಿತ ತಾಲೂಕಕ್ಕೆ ನ್ಯಾಯವಾದಿಗಳಿಂದ ಹೋರಾಟಕ್ಕೆ ಸಜ್ಜು

    ನ್ಯಾಯವಾದಿಗಳ ಪೂರ್ವಭಾವಿ ಸಭೆ

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಪಟ್ಟಣವು ತಾಲೂಕು ಕೇಂದ್ರವಾಗಿ ದಶಕಗಳೇ ಕಳೆದರೂ ಇನ್ನು ಸಂಬಂಧ ಪಟ್ಟ ಇಲಾಖೆಗಳು ಹಾಗೂ ನ್ಯಾಯಾಲಯ ಬರದೇ ಇರುವದಕ್ಕೆ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಸಿ. ಎಸ್. ಮಾಲಿಪಾಟೀಲ್ ವಿಷಾಧ ವ್ಯಕ್ತ ಪಡಿಸಿದರು.

     

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಕಳೆದ 2012 ರಿಂದ ನ್ಯಾಯಾಲಯದ ಬೇಡಿಕೆಯಿಟ್ಟಿದ್ದೇವೆ, ಮಾನದಂಡದ ಪ್ರಕಾರ ತಾಲೂಕಿನಿಂದ 1200 ಪ್ರಕರಣಗಳು ಧಾಖಲಾಗುತ್ತಿದ್ದರು ಕುಂಠ ನೆಪ ಹೇಳಿ ಮುಂದೂಡುತ್ತಿರುವುದು ಸಹಿಸಲಾಗದು, ಪ್ರಯುಕ್ತ ಮುಂದಿನ ದಿನಗಳಲ್ಲಿ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತೇವೆ ಎಂದರು.

     

    ಇದೇ ಸಂಧರ್ಭದಲ್ಲಿ ವಕೀಲ ಆನಂದ ರಾವ್ ನೀರೇಟಿ ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳಿಂದ ನಯವಾಧಿಗಳು ಸೇರಿದಂತೆ ಅರ್ಜಿದಾರರು ದೂರದ ಯಾದಗಿರಿಗೆ ಅಲೆಡದಾಡಬೇಕಾಗಿದೆ, ಸಮಯ ಸೇರಿದಂತೆ ಆರ್ಥಿಕ ಹೊರೆಯಾಗುತ್ತಿದ್ದು, ಪುರಸಭೆ ಕಾರ್ಯಾಲಯವು ಬೇಡಿಕೆಗೆ ಸ್ಪಂಧಿಸಿ ಟೌನ್ ಹಾಲ್ ಅನ್ನು ಬಳಕೆಗೆ ನೀಡಿದ್ದು ರಾಜಕೀಯ ಹಿತಾಶಕ್ತಿಯಿಲ್ಲದೆ ತಾಲೂಕ ಕೇಂದ್ರದಲ್ಲಿ ನ್ಯಾಯಾಲಯ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟವರು ಮುತುವರ್ಜಿ ವಹಿಸದಿದ್ದರೆ ಅತೀ ಶೀಘ್ರದಲ್ಲಿ ಹೋರಾಟ ಮಾಡುತ್ತೇವೆ ಎಂದರು.

     

    ಈ ಸಂಧರ್ಭದಲ್ಲಿ ಖಜಾಂಚಿ ಸಾಬಣ್ಣ, ಕೃಷ್ಣ ಮೇಧಾ, ರಾಜ ರಮೇಶ ಗೌಡ, ಗುರುನಾಥ ರೆಡ್ಡಿ ಅನಪುರ, ದೇವಪ್ಪ ಎಮ್, ವಿಶ್ವನಾಥ ರೆಡ್ಡಿ, ಸಂಜೀವ ಕುಮಾರ ಚಂದಾಪುರ, ಮೋಹನ ಕುಮಾರ್ ಗಜಾರೆ, ನರಸಪ್ಪ ಧನವಾಡ, ಕೃಷ್ಣ ಪಂಚಾಲ, ಮೊಗುಲಪ್ಪ ಯಾದ್ಲಾಪುರ, ಮೌನೇಶ್ ಕೊಂಕಲ್, ವಿಜಯಕುಮಾರ್ ಉಪಸ್ಥಿತರಿದ್ದರು.

    apvc-iconPost Views: 137
  • ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆ; ವೀರಣ್ಣ ಗೌಡ ಪಾಟೀಲ್

    ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆ; ವೀರಣ್ಣ ಗೌಡ ಪಾಟೀಲ್

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆಯಾಗಿವೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್ ಅವರು ಅವರು ಹೇಳಿದ್ದಾರೆ.

    ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದ ಅಂಗನವಾಡಿ ಮಕ್ಕಳಿಂದ ಬಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್ ಅವರು ಮಾತನಾಡಿದರು
    ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದ ಅಂಗನವಾಡಿ ಮಕ್ಕಳಿಂದ ಬಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್ ಅವರು ಮಾತನಾಡಿದರು.

    ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹಾಗೂ ಕಲಿಕೆ ಟಾಟಾ ಟ್ರಸ್ಟ್ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಲಮೇಳ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಶಿಕ್ಷಣಕ್ಕೆ ಬೇಕಾದ ಉತ್ತಮ ಅಡಿಪಾಯಯವನ್ನು ಕಲಿಕಾ ಚಟುವಟಿಕೆಗಳ ಮೂಲಕ ದೊರಕಿಸಿಕೊಡಲಾಗುತ್ತದೆ ಎಂದರು.

    ಬಾಲಮೇಳ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುತ್ತಿದೆ. ಮಕ್ಕಳ ಅಭಿರುಚಿ ಗುರುತಿಸಿ ಪೋಷಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

    ಈ‌‌‌ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕರಾದ ವೀರಣ್ಣ ಗೌಡ ಪಾಟೀಲ್,ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ ಪಾಟೀಲ್, ಸಿ. ಡಿ. ಪಿ. ಓ ಶರಣಬಸಪ್ಪ,ಗೌರಮ್ಮ, ಶಾಂತ, ಮುದ್ದೇಶ, ಸೇರಿದಂತೆ ಇತರರು ಇದ್ದರು.

    apvc-iconPost Views: 70
  • ಮಾಜಿ ಮುಖ್ಯಮಂತ್ರಿ ಶ್ರೀ ಎಸ್ಎಂ ಕೃಷ್ಣ ನಿಧನ: ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ ನಾಳೆ ರಜೆ

    ಮಾಜಿ ಮುಖ್ಯಮಂತ್ರಿ ಶ್ರೀ ಎಸ್ಎಂ ಕೃಷ್ಣ ನಿಧನ: ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ ನಾಳೆ ರಜೆ

    Screenshot

    ಕಲಬುರಗಿ- ಇಂದು ದಿ. 10 ಮಂಗಳವಾರ ರಂದು ಬೆಳಗ್ಗೆ 2:30ಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್ಎಂ ಕೃಷ್ಣ ಅವರು ನಿಧನವಾದ ಕಾರಣ ದಿನಾಂಕ 11 ಬುಧವಾರದಂದು ಹುಟ್ಟುರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ದಿನಾಂಕ 11 ಬುಧವಾರದಂದು ರಾಜ್ಯದಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ ಅಲ್ಲದೆ ದಿನಾಂಕ 10 ರಿಂದ 12ರ ವರೆಗೆ ಮೂರು ದಿನಗಳು ರಾಜ್ಯಾದ್ಯಂತ ಶೋಕ ಆಚರಣೆ ಮಾಡಲಾಗದು ಎಂದು ಸರ್ಕಾರ ಘೋಷಿಸಿದೆ.

    apvc-iconPost Views: 87
  • ಒಳ ಮೀಸಲಾತಿ ನೀಡದಿದ್ದರೆ ಹೋರಾಟಕ್ಕೆ ಸಿದ್ಧ

    ಒಳ ಮೀಸಲಾತಿ ನೀಡದಿದ್ದರೆ ಹೋರಾಟಕ್ಕೆ ಸಿದ್ಧ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಗ್ರಾಮೀಣ ಭಾಗದಲ್ಲಿ ಇಂದು ಸಂಘಟನೆಯ ಅವಶ್ಯವಿದೆ. ಎಲ್ಲರೊಂದಿಗೆ ಸಹೋದರತ್ವ ಭಾವನೆಯಿಂದ ಇದ್ದು ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ತಪ್ಪು ಮಾಡಿದವರ ವಿರುದ್ಧ ಹೋರಾಟ ಇರಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಗಣೇಶ್ ದುಪ್ಪಲ್ಲಿ ಸಲಹೆ ನೀಡಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಅವರು ಮಾತನಾಡಿದರು.

    ಮಾದಿಗ ದಂಡೋರದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ 30 ವರ್ಷಗಳ ನಿರಂತರ ಹೋರಾಟದ ಪ್ರತಿಫಲವಾಗಿ ಕಳೆದ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ವರ್ಗೀಕರಣವನ್ನು ಆಯಾ ರಾಜ್ಯಗಳು ಅಂಗೀಕರಿಸಿ ಜಾರಿಗೊಳಿಸಬಹುದು ಎಂದು ತೀರ್ಪ ನೀಡಿದೆ. ಆದರೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಳ ಮೀಸಲಾತಿಯನ್ನು ತೀರ್ಪು ಬಂದು ಎರಡು ಮೂರು ತಿಂಗಳು ಕಳೆದರೂ ಮೀಸಲಾತಿಯನ್ನು ಅಂಗೀಕರಿಸಿ ಜಾರಿಗೊಳಿಸಿಲ್ಲ. ಒಳ ಮೀಸಲಾತಿ ಜಾರಿಗೆಯ ವಿಳಂಭ ದೋರಣೆಯು ಸಹಿಸಲಾಗದು ಎಂದರು.

    ಭೀಮಶಪ್ಪ ಗೂಡ್ಸೆ ಮಾತನಾಡಿ, ಮೀಸಲಾತಿ ವಿಚಾರವಾಗಿ ಹಳ್ಳಿಯಿಂದ ದಿಲ್ಲಿಗೆ ತೆರಳಿದ ನಾಯಕರು ಮಾತಾಡುತ್ತಿಲ್ಲ. ಅವರು ಹೇಳಿದರೆ ಆಗಿ ಬಿಡುತ್ತದೆ, ಇಂದು ದುರ್ಬಲರಿಗೆ ಮೀಸಲಾತಿ ಲಾಭ ಸಿಗಬೇಕು ಎಂದರು.

    ನೂತನ ಪದಾಧಿಕಾರಿಗಳು: ಅಧ್ಯಕ್ಷ ರವಿ ಎಮ್.ಟಿ.ಪಲ್ಲಿ, ಉಪಾಧ್ಯಕ್ಷ ಶರಣಪ್ಪ ಅಮ್ಮಪಲ್ಲಿ,ಗೌರವ ಅಧ್ಯಕ್ಷ ವೆಂಕಟೇಶ ಪುಟಪಾಕ್, ಪ್ರ.ಕಾರ್ಯದರ್ಶಿ ಮಹಾದೇವ ಗಾಜರಕೋಟ, ಕಾರ್ಯದರ್ಶಿ ನಿಲೇಶ್ ನಜರಾಪೂರ, ಸಹ ಕಾರ್ಯದರ್ಶಿ ನಾಗೇಶ್ ಚಂಡ್ರಿಕಿ, ಖಜಾಂಚಿ ನರಸಪ್ಪ ಹಿಮಲ್ಹಾಪೂರ, ನಗರ ಅಧ್ಯಕ್ಷ ಶ್ರೀನಿವಾಸ ಕಿಂದಿಂಟಿ, ನಗರ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸೈಧಪೋಳ್, ಕಾನೂನು ಸಲಹೆಗಾರ ಬುಗ್ಗಪ್ಪ ಕಾಕಲವಾರ, ಪ್ರಚಾರ ಸಮೀತಿಯ ಅಧ್ಯಕ್ಷ ಕಿಷ್ಣಪ್ಪ ಸೈಧಪೋಳ್, ನಗರ ಕಾರ್ಯದರ್ಶಿ ಅನಿಲ್ ಬಸ್ಸಪ್ಪೋಳ್ ಸಹಾಯಕ ಕಾರ್ಯದರ್ಶಿ ಭೀಮಶಪ್ಪ ಮಿನಿಂಟಿ ಅವರನ್ನು ಆಯ್ಕೆ ಮಾಡಲಾಯಿತು.

    apvc-iconPost Views: 69