ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು
Health

ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು

Satyakam NewsDesk
Last updated: 2025/11/02 at 8:48 PM
By Satyakam NewsDesk
Share
2 Min Read
SHARE

ಇತ್ತೀಚಿನ ದಿನಗಳಲ್ಲಿ, ಫಾಸ್ಟ್‌ಫುಡ್, ಪ್ಯಾಕೇಜ್ಡ್ ಪದಾರ್ಥಗಳು ಮತ್ತು ಸಿಹಿತಿಂಡಿಗಳ ಸೇವನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಸಕ್ಕರೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವೈದ್ಯಕೀಯ ತಜ್ಞರ ಪ್ರಕಾರ, ಭಾರತೀಯರ ದಿನನಿತ್ಯದ ಆಹಾರದಲ್ಲಿ ಲುಕಾಯಿತ ಸಕ್ಕರೆಯ ಪ್ರಮಾಣ (Hidden Sugar) ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಕೇವಲ ಚಹಾ-ಕಾಫಿಯಲ್ಲಿ ಹಾಕುವ ಸಕ್ಕರೆಯಷ್ಟೇ ಅಲ್ಲ, ನಾವು ತಿನ್ನುವ ಜ್ಯೂಸ್, ಬಿಸ್ಕತ್, ಬ್ರೆಡ್, ಸಾಸ್, ರೆಡಿ-ಟು-ಈಟ್ ಪದಾರ್ಥಗಳಲ್ಲಿ ಇರುವ ಸಕ್ಕರೆ ನಮ್ಮ ದೇಹಕ್ಕೆ ನೇರವಾಗಿ ಹಾನಿ ಮಾಡುತ್ತದೆ.

Contents
ಹಸಿವು ಕಡಿಮೆಯಾಗುವುದು:ಮೆಗ್ನೀಸಿಯಮ್ ಮಟ್ಟ ಕುಸಿತ:ಚರ್ಮ ಸಮಸ್ಯೆಗಳು:ಸಿಹಿ ಅಂಶವನ್ನು ಸಂಪೂರ್ಣ ತ್ಯಜಿಸಬೇಕೇ?

ಹೆಚ್ಚುವರಿ ಸಕ್ಕರೆಯ ಸೇವನೆ ಯಕೃತ್‌ (Liver) ಮೇಲಿನ ಒತ್ತಡವನ್ನೇ ಹೆಚ್ಚು ಮಾಡದೇ, ಕೊಲೆಸ್ಟ್ರಾಲ್‌, ರಕ್ತದೊತ್ತಡ, ತೂಕ ಹೆಚ್ಚಳ, ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳ ಮೂಲವಾಗುತ್ತದೆ. ಮುಖ್ಯವಾಗಿ, ಸಕ್ಕರೆ ಅತಿಯಾಗಿ ಸೇವಿಸುವವರು ತಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ, ಮುಂದೆ ಮಧುಮೇಹದ ಅಪಾಯದತ್ತ ತಳ್ಳಿಕೊಳ್ಳುತ್ತಾರೆ. ಹಾಗಾದರೆ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತಿರುವುದನ್ನು ಹೇಗೆ ಗುರುತಿಸಬಹುದು? ಯಾವ ಲಕ್ಷಣಗಳು ಎಚ್ಚರಿಕೆಯ ಗಂಟೆ ಹೊಡೆಯುತ್ತವೆ? ಮತ್ತು ಸಿಹಿ ಅಂಶವನ್ನು ಸಂಪೂರ್ಣವಾಗಿ ತ್ಯಜಿಸಬೇಕೇ…? ಎಂಬ ಬಗ್ಗೆ ನೋಡೋಣ ಬನ್ನಿ.

ಹಸಿವು ಕಡಿಮೆಯಾಗುವುದು:

  • ಸಕ್ಕರೆಯ ಅತಿಯಾದ ಸೇವನೆ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ. ಇದರ ಪರಿಣಾಮ,
  • ಮುಖದಲ್ಲಿ ಮೊಡವೆಗಳು ಮೂಡುವುದು
  • ಹಸಿವು ಕಡಿಮೆಯಾಗುವುದು
  • ಜೀರ್ಣಕ್ರಿಯೆ ಅಸ್ತವ್ಯಸ್ತವಾಗುವುದು

ದೆಹದಲ್ಲಿ ಕ್ಯಾಲೊರಿಗಳು ಒಂದೇ ತಟ್ಟಿನಲ್ಲಿ ಜಮೆಯಾಗುವುದರಿಂದ ಹೊಟ್ಟೆಗೆ ಸರಿಯಾದ ಹಸಿವೆ ಕಾಣದು. ದಿನದಿಂದ ದಿನಕ್ಕೆ ಹಸಿವು ಕಡಿಮೆಯಾಗುತ್ತಿದ್ದರೆ, ಇದು ನೀವು ಸಿಹಿತಿಂಡಿಗಳನ್ನು ಮಿತಿಗಿಂತ ಹೆಚ್ಚು ಸೇವಿಸುತ್ತಿದ್ದೀರಿ ಎಂಬ ಸೂಚನೆ. ಅದೇ ರೀತಿ ಯಾವುದೇ ಕಾರಣವಿಲ್ಲದೆ ತೂಕ ಏರಿಕೆ ಕಂಡುಬಂದರೂ ಅದು ಹೆಚ್ಚುವರಿ ಸಕ್ಕರೆಯ ಪರಿಣಾಮವಾಗಿರಬಹುದು.

ಮೆಗ್ನೀಸಿಯಮ್ ಮಟ್ಟ ಕುಸಿತ:

ಬಿಳಿ ಸಕ್ಕರೆ ದೇಹದಲ್ಲಿ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕಿರಿಕಿರಿ, ಖಿನ್ನತೆ, ಆಯಾಸಕ್ಕೆ ಕಾರಣವಾಗುತ್ತದೆ.

ಅತಿಯಾದ ಸಕ್ಕರೆ ಸೇವನೆ, ಮೆಗ್ನೀಸಿಯಮ್ ಅನ್ನು ಕಡಿಮೆ ಮಾಡುತ್ತದೆ. ದೇಹದ ನಿದ್ರಾ ಚಕ್ರವನ್ನು ಅಸ್ತವ್ಯಸ್ತಗೊಳಿಸುತ್ತದೆ. ನಿದ್ರೆ ಕೆಡುತ್ತಿದೆ, ಮಧ್ಯರಾತ್ರಿ ಎಚ್ಚರವಾಗುತ್ತಿದೆ, ದೇಹ ಸದಾ ಬಲಹೀನವಾಗುತ್ತಿದೆ ಎಂದರೆ ಸಕ್ಕರೆಯ ಸೇವನೆ ಹೆಚ್ಚಾಗಿದೆ ಎನ್ನಬಹುದು.

ಚರ್ಮ ಸಮಸ್ಯೆಗಳು:

  • ಅತಿಯಾದ ಸಕ್ಕರೆ ಸೇವನೆಯು,
  • ಮುಖದಲ್ಲಿ ಮೊಡವೆ (Acne)
  • ಚರ್ಮದಲ್ಲಿ ಒಣತನ
  • ತುರಿಕೆ

ಹಾರ್ಮೋನಲ್ ಚೇಂಜಸ್ ಇವುಗಳನ್ನು ಉಂಟುಮಾಡಬಹುದು. ಈ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ತಕ್ಷಣ ಸಿಹಿಯನ್ನೂ ಪ್ಯಾಕೇಜ್ಡ್ ಜಂಕ್ ಫುಡ್‌ನನ್ನೂ ಕಡಿಮೆ ಮಾಡುವುದು ಒಳಿತು.

ಸಿಹಿ ಅಂಶವನ್ನು ಸಂಪೂರ್ಣ ತ್ಯಜಿಸಬೇಕೇ?

ಇಲ್ಲ! ದೇಹಕ್ಕೆ ಸ್ವಲ್ಪ ಸಿಹಿಯ ಅಗತ್ಯವಿದೆ. ಆದರೆ ಬಿಳಿ ಸಕ್ಕರೆಯ ಬದಲು ನೈಸರ್ಗಿಕ ಸಕ್ಕರೆಯನ್ನು ಆಯ್ಕೆ ಮಾಡಬೇಕು ಉದಾಹರಣೆಗೆ,

ಹಣ್ಣುಗಳು (Natural Fructose)

  • ಹಾಲು, ಮೊಸರು (Lactose)
  • ಜೇನು (Honey – ಮಿತ ಪ್ರಮಾಣದಲ್ಲಿ)
  • ಬೆಲ್ಲ (Jaggery – ಮಿತ ಪ್ರಮಾಣದಲ್ಲಿ)

ಇವು ದೇಹಕ್ಕೆ ಅಗತ್ಯ ಇರುವ ನೈಸರ್ಗಿಕ ಸಕ್ಕರೆಯನ್ನು ನೀಡುತ್ತವೆ, ಹಾನಿ ಮಾಡೋದಿಲ್ಲ.

ಗಮನಿಸಿ: 

  • ದಿನಕ್ಕೆ 25 ಗ್ರಾಂಕ್ಕಿಂತ ಹೆಚ್ಚು ಬಿಳಿ ಸಕ್ಕರೆ ಸೇವನೆ ಬೇಡ.
  • ಪ್ಯಾಕೇಜಡ್ ಫುಡ್ ಲೇಬಲ್ಸ್ ಓದಿ.
  • ನೀರು ಹೆಚ್ಚು ಕುಡಿಯಿರಿ.
  • ವ್ಯಾಯಾಮಕ್ಕೆ ಆದ್ಯತೆ ನೀಡಿ.
apvc-iconTotal Visits: 6
apvc-iconAll time total visits: 32009

You Might Also Like

ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ 7 ಪರಿಣಾಮಕಾರಿ ವ್ಯಾಯಾಮಗಳ ಪಟ್ಟಿ

ಕರುಳಿನ ಆರೋಗ್ಯವನ್ನು ಕಾಪಾಡುವ ಕೆಲವು ಅತ್ಯುತ್ತಮ ಆಹಾರಗಳು ಇಲ್ಲಿವೆ!

ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

ಬೆಳಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯ ನೀರು ಕುಡಿದರೇ, ದೇಹದಲ್ಲಿ ಹಲವಾರು ಪ್ರಯೋಜನಗಳ ಲಾಭ ಪಡೆಯಬಹುದು!

TAGGED: Blood sugar, Health tips, high blood sugar, Sugar
Satyakam NewsDesk November 2, 2025 November 2, 2025
Share This Article
Facebook Twitter Whatsapp Whatsapp Telegram Copy Link Print
Share
By Satyakam NewsDesk
Follow:
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
Previous Article ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!
Next Article Karnataka Examinations Authority Recruitment: ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ!

Stay Connected

Facebook Like
Twitter Follow
Instagram Follow
Youtube Subscribe

Latest News

Karnataka Examinations Authority Recruitment: ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ!
JOBS November 2, 2025
ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!
Special News November 2, 2025
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 
Sports November 2, 2025
ನಿಯಮ ಮೀರಿ ಕಟ್ಟಿದ ಕಟ್ಟಡಗಳಿಗೆ ದೊಡ್ಡ ರಿಲೀಫ್
Govt Schemes November 2, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube