ಧಾರಾಕಾರ ಮಳೆ – ಕೆರೆಯಂತಾದ ಶಾಲಾ ಆವರಣ

ಸತ್ಯಕಾಮ ವಾರ್ತೆ ಕಲಬುರಗಿ: 

ನಗರದ ವಿವಿಧೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಬ್ರಹ್ಮಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣವಾಗಿ ಮಳೆನೀರಿನಿಂದ ಕೇರೆಯಂತಾಗಿದ್ದು, ಶಾಲೆಗೆ ತೆರಳಿದ ಮಕ್ಕಳು ಪರದಾಡುವಂತಾಗಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಆವರಣದ ಒಳಗೇ ನೀರು ನಿಂತುಹೋಗಿದೆ. ಬೆಳಗ್ಗೆ ಪೋಷಕರು ಮಕ್ಕಳನ್ನು ಶಾಲೆಗೆ ಕೊಂಡೊಯ್ಯಲು ತೊಂದರೆ ಅನುಭವಿಸಿದರೆ, ಕೆಲವು ವಿದ್ಯಾರ್ಥಿಗಳು ನೀರನ್ನು ದಾಟಿ ತರಗತಿಗೆ ಸೇರಬೇಕಾಯಿತು.

ಶಾಲಾ ಆವರಣದಲ್ಲಿ ನೀರು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರತಿ ಬಾರಿ ಮಳೆ ಬಿದ್ದಾಗ ಇದೇ ಪರಿಸ್ಥಿತಿ. ಹೀಗಾದರೆ ಮಕ್ಕಳು ಓದುವುದು ಹೇಗೆ?” ಎಂದು ಪೋಷಕರು ಪ್ರಶ್ನಿಸಿದರು.

apvc-iconPost Views: 4

Comments

Leave a Reply

Your email address will not be published. Required fields are marked *