ಸತ್ಯಕಾಮ ವಿಶೇಷ
ವರದಿ: ಪ್ರಕಾಶ ಗುದ್ನೇಪ್ಪನವರ.
ಶಹಾಪುರ : ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ನಾಗರ ಕೆರೆ, ಮಾವಿನ ಕೆರೆಗಳು ತುಂಬಿ ತುಳುಕುತ್ತಿವೆ ಅಲ್ಲದೇ ದಕ್ಷಿಣ ಬಾಗದಲ್ಲಿ ಸಗರಾದ್ರಿ ಬೆಟ್ಟಗಳಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿರುವ ವಿಹಂಗಮ ದೃಶ್ಯ ಪ್ರವಾಸಿಗರ ಚಿತ್ತ ಇತ್ತ ಕಡೆ ಹರಿಸುವದರಲ್ಲಿ ಯಾವುದೇ ಸಂದೇಹ ವಿಲ್ಲ ಎನ್ನಬಹುದು.
ನಗರದ ದಕ್ಷಿಣ ಭಾಗದಲ್ಲಿ ಸಾಲು ಸಾಲಾಗಿ ಕಂಡು ಬರುವ ಬೆಟ್ಟಗುಡ್ಡುಗಳಿಗೆ ಸಗರಾದ್ರಿ ಬೆಟ್ಟವೆಂದು ಕರೆಯಲಾಗುತ್ತದೆ ಹಾಗೂ ಸಗರನಾಡಿನ ಬೆಟ್ಟಗಳನ್ನೆ ಸಗರಾದ್ರಿ ಬೆಟ್ಟ ಎನ್ನಲಾಗುತ್ತಿದೆ.
ಇಲ್ಲಿನ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ಪ್ರವಾಸಿಗರ ಕಣ್ಮಣ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನಾಳ್ಕೈದು ಗುಡ್ಡ ಹೊಂದಿಕೊಂಡು ದೂರದಿಂದ ಬುದ್ಧ ಮಲಗಿರುವಂತೆ ಸ್ಪಷ್ಟವಾಗಿ ಚಿತ್ರ ಪ್ರತಿಯುಬ್ಬರಿಗೂ ಆಶ್ಚರ್ಯವನ್ನುಂಟು ಮಾಡಿರುವುದಂತೂ ಸತ್ಯ.
ಈ ಭಾಗದಲ್ಲಿಯೇ ಗವಿ ಬಸಪ್ಪ ನಾಗ ಬಸಪ್ಪ ಬೆಟ್ಟದ ಪಕ್ಕದಿಂದ ಹರಿದು ಬರುವ ನೀರು ಜಲಪಾತ ಮಳೆಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು. ಇಂತಹ ಬಿಸಿಲನಾಡಿನಲ್ಲಿ ಇಂತಹದೊಂದು ಅದ್ಭುತ ಜಲಪಾತ ಮಳೆಗಾದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಹತ್ತಾರು ದಿನಗಳಿಂದ ಸತತ ಮಳೆ ಸುರಿಯುತ್ತಿರುವದರಿಂದ ಇದೀಗ ಸಗರಾದ್ರಿ ಜಲಪಾತ ಮೈದುಂಬಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿರವುದು ವಿಶೇಷವಾಗಿದೆ.
ಮಳೆ ಬಂದಿತೆಂದರೆ ದಾಸನಕೊಳ್ಳ, ಸಗರಾದ್ರಿ ಜಲಪಾತ, ಈ ಭಾಗವೆಲ್ಲ ಹಸಿರಿನಿಂದ ದುಂಬಿಕೊಂಡು ಜನರನ್ನು ಆಕರ್ಷಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಪ್ರದೇಶ ಮಲೆನಾಡನ್ನು ನೆನಪಿಸುತ್ತದೆ.
ಸರ್ಕಾರವಾಗಲಿ ಜನಪ್ರತಿನಿದಿನಗಳು ಇತ್ತ ಕಡೆ ಗಮನ ಹರಿಸಿದರೆ ಇದೊಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಯಾವದೇ ಸಂದೇಹವಿಲ್ಲ ಎನ್ನುವರು ಇಲ್ಲಿನ ಸೌಂದರ್ಯ ಸವಿಯಲು ಬರುವ ಜನರು.
ಒಟ್ಟಾರೆ ಬಿಸಿಲನಾಡಿನಲ್ಲಿ ಮಳೆಗಾಲದಲ್ಲಿ ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿನ ಜಲಪಾತಗಳು ಧೂಮ್ಮಿಕ್ಕಿ ಹರಿದು ಸುತ್ತಮುತ್ತಲಿನ ಜನತೆಗೆ ಖುಷಿ ನೀಡುತ್ತಿರುವುದು ತುಂಬಾ ಸಂತಸ ಎನ್ನಬಹುದು.
ಪ್ರಕೃತಿಯ ಮಡಿಲಿನಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿರುವ ಬೆಟ್ಟ ಗುಡ್ಡಗಳೊಂದಡೆಯಾದರೆ ಧೂಮುಕ್ಕಿ ಹರಿಯುತ್ತಿರುವ ಜಲಾಪಾತಗಳು ಹಾಗೂ ಮೈದುಂಬಿಕೊಂಡಿರುವ ಕೆರೆಗಳು ನಿಸರ್ಗದ ಸವಿ ಸವಿಯಲು ಪ್ರವಾಸಿಗರು ದಿನ ನಿತ್ಯ ನೂರಾರು ಜನ ಆಗಮಿಸುತ್ತಿರುವುದು ಸರ್ವೇ ಸಮಾನ್ಯವಾಗಿದೆ.
“ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿ ಅನೇಕ ಜಾಲಧಾರೆ ಜಲಪಾತಗಳಿಂದ ನಿಸರ್ಗದ ಸೌಂದರ್ಯ ಇಮ್ಮಡಿಯಾಗಿದೆ ಇಂತಹ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆ ಆಸಕ್ತಿವಹಿಸಿ ಅಭಿವೃದ್ಧಿಗೆ ಮುಂದಾದರೆ ಇನ್ನೂ ಹೆಚ್ಚಿನ ಜನಾಕರ್ಶನಗೊಳ್ಳವುದು ಶತಸಿದ್ಧ ಎನ್ನುವರು” ̲ನಿವೃತ್ತ ರಾಷ್ಟ್ರ ಪಶಸ್ತಿ ವಿಜೇತ ಶಿಕ್ಷಕರಾದ ಸೋಮಶೇಖರಯ್ಯ ಹಿರೇಮಠ.

