Tag: Darshan

  • ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌

    ಫ್ಯಾನ್ಸ್‌ ವಾರ್‌ಗೆ ಬ್ರೇಕ್‌: ದರ್ಶನ್‌ಗೆ ಸದಾ ಒಳ್ಳೆಯದನ್ನೇ ಬಯಸುತ್ತೀನಿ ಎಂದ ಕಿಚ್ಚ ಸುದೀಪ್‌

    ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಚರ್ಚೆಯಾಗುತ್ತಿದ್ದ ಫ್ಯಾನ್ಸ್‌ ವಾರ್‌ಗೆ ನಟ ಕಿಚ್ಚ ಸುದೀಪ್‌ ಸ್ವತಃ ತೆರೆ ಎಳೆದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದ್ದ ಮಾತಿನ ಯುದ್ಧ, ಆರೋಪ ಪ್ರತ್ಯಾರೋಪಗಳ ನಡುವೆಯೇ ಸುದೀಪ್‌ ಮಾಡಿದ ಒಂದು ಸಾಲಿನ ಟ್ವೀಟ್‌ ಎಲ್ಲ ಗದ್ದಲಕ್ಕೂ ಬ್ರೇಕ್‌ ಹಾಕಿದೆ. ದರ್ಶನ್‌ ಬಗ್ಗೆ ಅವರು ವ್ಯಕ್ತಪಡಿಸಿದ ನಿಲುವು ಇದೀಗ ಅಭಿಮಾನಿಗಳ ನಡುವೆ ವೈರಲ್‌ ಆಗಿದೆ.

    ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್‌’ ಸಿನಿಮಾ ಡಿಸೆಂಬರ್‌ 25ರಂದು ತೆರೆಗೆ ಬರಲಿದ್ದು, ಇದರ ಹಿನ್ನೆಲೆಯಲ್ಲಿ ನಡೆದ ಹುಬ್ಬಳ್ಳಿ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಸುದೀಪ್‌ ‘ಯುದ್ಧಕ್ಕೆ ಸಿದ್ಧ’ ಎಂಬ ಮಾತು ಹೇಳಿದ್ದರು. ಈ ಮಾತು ಪೈರಸಿ ವಿರೋಧದ ಅಭಿಯಾನಕ್ಕೆ ಸಂಬಂಧಿಸಿದದ್ದು ಎಂದು ಅವರು ಸ್ಪಷ್ಟಪಡಿಸಿದ್ದರೂ, ಕೆಲವರು ಇದನ್ನು ದರ್ಶನ್‌ ವಿರುದ್ಧದ ಸಂದೇಶ ಎಂದು ಅರ್ಥ ಮಾಡಿಕೊಂಡರು. ಇದರಿಂದ ಇಬ್ಬರು ನಟರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ತೀವ್ರಗೊಂಡಿತು.

    ಈ ಮಧ್ಯೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗಳನ್ನೂ ಕೆಲವರು ಪರೋಕ್ಷ ಟಾಂಗ್‌ ಎಂದುಕೊಂಡು ಚರ್ಚೆಗೆ ಎಳೆದರು. ಪರಿಣಾಮವಾಗಿ ಫ್ಯಾನ್ಸ್‌ ವಾರ್‌ ದಿನೇ ದಿನೇ ಹೆಚ್ಚುತ್ತಾ ಹೋಗಿತ್ತು. ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್‌ ಟ್ವಿಟರ್‌ನಲ್ಲಿ ‘ಆಸ್ಕ್‌ ಮಿ ಎನಿಥಿಂಗ್‌’ ಸೆಷನ್‌ ನಡೆಸಿದ್ದು, ಅಲ್ಲೇ ಎಲ್ಲ ಗೊಂದಲಕ್ಕೂ ತೆರೆ ಬಿದ್ದಂತಾಯಿತು.

    ಸೆಷನ್‌ ವೇಳೆ ಒಬ್ಬ ಅಭಿಮಾನಿ ಸುದೀಪ್‌ ಹಾಗೂ ದರ್ಶನ್‌ ಜೊತೆಗಿನ ಹಳೆಯ ಫೋಟೋವೊಂದನ್ನು ಹಂಚಿಕೊಂಡು, “ಇವರ ಬಗ್ಗೆ ಒಂದು ಮಾತು ಹೇಳಿ” ಎಂದು ಪ್ರಶ್ನೆ ಹಾಕಿದರು. ಇದಕ್ಕೆ ಸುದೀಪ್‌ ಯಾವುದೇ ತಿರುಗುಬಾಣವಿಲ್ಲದೆ, ಸರಳವಾಗಿ “ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೀನಿ” ಎಂದು ಉತ್ತರಿಸಿದರು. ಈ ಒಂದು ಸಾಲಿನ ಪ್ರತಿಕ್ರಿಯೆ ಸಾಕಾಯಿತು, ಇಡೀ ವಿವಾದದ ತಾಪ ತಣ್ಣಗಾಗಲು.

    ಕಿಚ್ಚ ಸುದೀಪ್‌ ಅವರ ಈ ನಿಲುವನ್ನು ಹಲವರು ಮೆಚ್ಚಿಕೊಂಡಿದ್ದು, ಸ್ಟಾರ್‌ಗಳ ನಡುವಿನ ಗೌರವ ಹಾಗೂ ಸ್ನೇಹವೇ ಮುಖ್ಯ ಎಂಬ ಸಂದೇಶ ಮತ್ತೊಮ್ಮೆ ಸಾಬೀತಾಗಿದೆ. ಫ್ಯಾನ್ಸ್‌ ನಡುವೆ ನಡೆಯುವ ಅನಗತ್ಯ ಸಂಘರ್ಷಕ್ಕೆ ಇಂತಹ ಹೇಳಿಕೆಗಳು ಬ್ರೇಕ್‌ ಹಾಕಬೇಕು ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿಬರುತ್ತಿವೆ.

  • ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾ ಗದ್ದಲಗೊಂಡಿದೆ. ಆದರೆ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದದ್ದು ಒಂದೇ ‘ಬಿಗ್ ಬಾಸ್ ಕನ್ನಡ 12’ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ತಕ್ಷಣದ ಹಾಸ್ಯಭರಿತ ಎಂಟ್ರಿ.

    ಟ್ರೇಲರ್‌ನಲ್ಲೊಂದು ಸಣ್ಣ ಸನ್ನಿವೇಶ. ಪೊಲೀಸ್‌ ಮುಂದೆ ಕುಳಿತಿರುವ ಗಿಲ್ಲಿ ನಟ, ತಮ್ಮದೇ ಶೈಲಿಯಲ್ಲಿ “ಎಕ್ಸ್‌ಕ್ಯೂಸ್ ಮಿ ಪಿಸಿ… ಸ್ವಲ್ಪ ಎಸಿ ಹಾಕಮ್ಮ… ಲಾಟ್ ಆಫ್ ಸೆಕೆ!” ಎನ್ನುವ ಡೈಲಾಗ್ ಹೇಳುತ್ತಾರೇನು, ಕ್ಷಣಾರ್ಧದಲ್ಲೇ ಆ ದೃಶ್ಯಕ್ಕೇ ಬಣ್ಣ ಬದಲಾಗುತ್ತದೆ. ಅವರ ಡೆಲಿವರಿ, ಟೈಮಿಂಗ್ ಎರಡೂ ಸೇರಿ ಟ್ರೇಲರ್‌ನಲ್ಲಿರುವ ಗಂಭೀರತೆಯಲ್ಲಿ ಕ್ಷಣಿಕ ನಗುವಿನ ಗಾಳಿ ಹರಿಸುತ್ತವೆ.

    ಬಿಗ್ ಬಾಸ್’ ಮನೆಯಲ್ಲಿ ಈಗಾಗಲೇ ಗಿಲ್ಲಿ ನಟ ಹಾಸ್ಯದಿಂದ ಜನರ ಮನ ಗೆದ್ದಿದ್ದಾರೆ. ಡಬಲ್ ಮೀನಿಂಗ್ ಬೇಡ, ಅಸಭ್ಯ ಪದ ಬೇಡ… ಮನೆಯಲ್ಲೇ ನಡೆಯುವ ಚಿಕ್ಕ ಘಟನೆಗಳಿಗೆ ಸನ್ನಿವೇಶ, ಚಿತ್ರ ರೆಫರೆನ್ಸ್‌ ಜೋಡಿಸಿ, ತಕ್ಷಣ ಕಾಮಿಡಿ ಸಿಡಿಸುವುದು ಅವರ ಸ್ಟೈಲ್. ಅದೇ ಶೈಲಿ ಟ್ರೇಲರ್‌ನಲ್ಲೂ ಕಂಡುಬಂದಿದ್ದು, ವೀಕ್ಷಕರಿಗೆ “ಇವರ ಪಾತ್ರ ಸಿನಿಮಾದಲ್ಲೂ ಮುಖ್ಯವೇನೋ” ಎಂಬ ಅಂದಾಜು ಮೂಡಿಸಿದೆ.

    ಈಗಾಗಲೇ ಶೋ ಮೂಲಕ ಜನರಿಗೆ ಕನೆಕ್ಟ್ ಆಗಿರುವ ಅವರು, ದೊಡ್ಡ ಪರದೆ ಮೇಲೂ ತಮ್ಮದೇ ರೀತಿಯ ಗುರುತು ಮೂಡಿಸಿಕೊಳ್ಳಬಹುದು ಅನ್ನೋ ಆಸೆ ಅಭಿಮಾನಿಗಳಲ್ಲಿದೆ. ‘ಮ್ಯಾಕ್ಸ್ ಮಂಜು’ ಹೇಗೆ ಒಂದು ಚಿತ್ರದ ಮೂಲಕ ಹೊಸ ಇಮೇಜ್ ಪಡೆದುಕೊಂಡರೋ, ಗಿಲ್ಲಿ ನಟನಿಗೂ ‘ದಿ ಡೆವಿಲ್’ ಅದೇ ಅವಕಾಶ ಕೊಡುವ ಸಾಧ್ಯತೆ ದೊಡ್ಡದು.

    ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ. ಟ್ರೇಲರ್‌ನಲ್ಲಿ ಕೇವಲ ಕೆಲವು ಸೆಕೆಂಡ್‌ನಲ್ಲಿಲೇ ಸದ್ದು ಮಾಡಿದ ಗಿಲ್ಲಿ ನಟ, ಚಿತ್ರ ಬಂದ ಮೇಲೆ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಸ್ಪಷ್ಟವಾಗಿದೆ. ದರ್ಶನ್‌ ಅಭಿನಯದ ಭಾರೀ ಚಿತ್ರದಲ್ಲಿ ಅವರು ಯಾವ ರೀತಿಯಲ್ಲಿ ಮೆರುಗು ತರುತ್ತಾರೆ ಅನ್ನೋದನ್ನು ಈಗ ಎಲ್ಲರೂ ಕಾತರದಿಂದ ಕಾದಿದ್ದಾರೆ.

  • ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ಸ್ಯಾಂಡಲ್‍ವುಡ್‌ ಚರ್ಚೆಯಲ್ಲಿ ಮತ್ತೆ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸಿದ್ದರು ಎಂಬ ಮಾತು ಹಲವಾರು ಬಾರಿ ಕೇಳಿಬಂದಿದ್ದರೂ, “ಇವರು ಮದುವೆಯಾಗಿದ್ದಾರೆ” ಎಂಬ ವಿಷಯಕ್ಕೆ ಎಂದಿಗೂ ಅಧಿಕೃತ ದೃಢೀಕರಣ ಬಂದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ತೆರೆದುಕೊಂಡಿರುವ ಹಳೆ ಫೋಟೋಗಳು, ಚರ್ಚೆಗೆ ಮತ್ತಷ್ಟು ಆಹಾರ ನೀಡಿದ್ದಾರೆ.

    ಇತ್ತೀಚೆಗಷ್ಟೇ ವೈರಲ್ ಆದ ರೀಲ್ ವಿಡಿಯೋದಲ್ಲಿ ದರ್ಶನ್ ಮತ್ತು ಪವಿತ್ರಾ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಪವಿತ್ರಾ ಅವರ ಕತ್ತಿನಲ್ಲಿರುವ ಅರಿಶಿಣದ ದಾರ, ದರ್ಶನ್ ಅವರ ಉಡುಗೆ ಹಾಗೂ ಇಬ್ಬರ ಭಾವಭಂಗಿ, ಅಭಿಮಾನಿಗಳಲ್ಲಿ “ಇದು ಅವರ ಮದುವೆಯ ಫೋಟೋವೇ?” ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ತೆಗೆಯಲ್ಪಟ್ಟಿದೆ ಎನ್ನಲಾಗಿರುವ ಈ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ಅನೇಕ ವಾದ ಪ್ರತಿವಾದಗಳಿಗೆ ಕಾರಣವಾಗಿವೆ.

    ಆ ಸಮಯದಲ್ಲೇ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಗಾಯವಾಗಿದ್ದ ಸಂದರ್ಭದಲ್ಲಿ, ಪವಿತ್ರಾ ಅವರು ಅವರಿಗೆ ಊಟ ಮಾಡಿಸುತ್ತಿರುವ ಕ್ಷಣಗಳೂ ಫೋಟೋಗಳಲ್ಲಿ ಕಾಣಿಸುತ್ತಿವೆ. ಈ ಅನೌಪಚಾರಿಕ ದೃಶ್ಯಗಳು ಇಬ್ಬರ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ನೆನಪಿಗೆ ತರುತ್ತಿವೆ.

    ಆದರೆ, ಗಮನಿಸಬೇಕಾದ ಸಂಗತಿ ಏನೆಂದರೆ ಈವರೆಗೆ ಇವರು ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಈ ಹಳೆಯ ಫೋಟೋಗಳ ಮೇಲಿನ ಚರ್ಚೆ ಹೆಚ್ಚುತ್ತಿದ್ದಂತೆಯೇ, ಅಭಿಮಾನಿಗಳಲ್ಲಿ ಕುತೂಹಲ ತಾರಕ್ಕೇರಿದೆ.

    ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು “ಇದು ನಿಜವಾದ ಮದುವೆಯೇ? ಇಲ್ಲಾ ಫೋಟೋಶೂಟ್‌ನಾ?” ಎಂದು ಅಚ್ಚರಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ

    ಫೋಟೋಗಳು ವೈರಲ್ ಆದರೂ, ನಿಜ ಏನು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಇಷ್ಟರಲ್ಲೇ, ದರ್ಶನ್ ಪವಿತ್ರಾ ಜೋಡಿ ಕುರಿತು ಊಹಾಪೋಹಗಳು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದು ಆಗಿವೆ.