ಸತ್ಯಕಾಮ ವಾರ್ತೆ ಸುರಪುರ:
ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿನ ಖಾರೀಜ್ ಖಾತಾ ಜಾಗದಲ್ಲಿ 4 ಎಕರೆ ಜಾಗವನ್ನು ವಾಲ್ಮೀಕಿ ಸಮುದಾಯಕ್ಕೆ ಮೀಸಲಿಡುವಂತೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ತಹಸಿಲ್ದಾರ್ಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ವಾಲ್ಮೀಕಿ ಸಮುದಾಯ ತಾಲೂಕಿನಲ್ಲಿ ದೊಡ್ಡ ಸಮುದಾಯವಾಗಿದ್ದು,ಈ ಸಮುದಾಯ ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅಭಿವೃಧ್ಧಿ ಹೊಂದಲು ಗ್ರಂಥಾಲಯ ಸೇರಿದಂತೆ ಸಮುದಾಯ ಭವನ ಯಾವುದೂ ನಿರ್ಮಾಣಗೊಂಡಿಲ್ಲ.ಆದ್ದರಿAದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಖಾರೀಜ್ ಖಾತಾ ಸರ್ವೇ ನಂಬರ್ 7/1 ರಲ್ಲಿ ಇರುವ 6 ಎಕರೆ 15 ಗುಂಟೆ ಜಮೀನಿನ ಪೈಕಿ ನಾಲ್ಕು ಎಕರೆ ಜಮೀನು ಮೀಸಲಿಟ್ಟು ನಮ್ಮ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಂತರ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕ ಗೌರವಾಧ್ಯಕ್ಷ ಸಿದ್ದನಗೌಡ ಕರಿಬಾವಿ,ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷಿö್ಮÃ,ತಾ.ಪ್ರ ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ,ಶ್ರೀ ವಾಲ್ಮೀಕಿ ಇಂಟರ್ನ್ಯಾಷನಲ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ,ಮುಖಂಡರಾದ ಭೀಮು ಹೆಚ್.ನಾಯಕ, ವಿಜಯಕುಮಾರ ಚಿಟ್ಟಿ,ಬಲಭೀಮ ನಾಯಕ ಬೈರಿಮಡ್ಡಿ,ವಿನೋದ ಕುಮಾರ ನಾಯಕ,ವೆಂಕಟೇಶ ಬೇಟೆಗಾರ, ವಾಸುದೇವ ನಾಯಕ, ಶ್ರೀನಿವಾಸ ನಾಯಕ ಲಕ್ಷಿö್ಮÃಪುರ,ಮೌನೇಶ ನಾಯಕ ಚಿಕ್ಕನಹಳ್ಳಿ, ದೇವು ನಾಯಕ ಜಾಲಿಬೆಂಚಿ,ನಾಗರಾಜ ದೇವತ್ಕಲ್,ರಂಗನಾಥ ನಾಯಕ ಲಕ್ಷಿö್ಮÃಪುರ,ಶಿವರಾಜ ಪಾಟೀಲ,ವಿಜಯಗೌಡ ಬೇವಿನಾಳ, ಶರಣು ಮಕಾಶಿ,ದೇವರಾಜ ದಳವಾಯಿ,ಕನಕಾಚಲ ನಾಯಕ ಜಾಗೀರದಾರ,ಸಂಜೀವಪ್ಪ ನಾಯಕ,ಗೋಪಾಲ ನಾಯಕ ಸತ್ಯಂಪೇಟೆ, ಮಲ್ಲಣಗೌಡ ಮಾಲಿ ಪಾಟೀಲ್,ಪರಮಣ್ಣ ಕಕ್ಕೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಾಲ್ಮೀಕಿ ಸಮುದಾಯಕ್ಕೆ ಸುರಪುರ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿ 4 ಎಕರೆ ಜಮೀನು ಮೀಸಲಿಡುವಂತೆ ಆಗ್ರಹಿಸಿ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರ.ಕಾರ್ಯದರ್ಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. |
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಹಿಂಬದಿಯ ಮೈದಾನದಲ್ಲಿ ಹಾಕಲಾಗಿರುವ ನೀಲಿ ಧ್ವಜದ ಸ್ಥಳದಲ್ಲಿ ಅಂಬೇಡ್ಕರ್ ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡುವಂತೆ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಮತ್ತೊಂದೆಡೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸಮುದಾಯದ ಅಭಿವೃಧ್ಧಿಗಾಗಿ ಗ್ರಂಥಾಲಯ,ಸಮಯದಾಯ ಭವನ ನಿರ್ಮಾಣಕ್ಕಾಗಿ ಸರ್ವೇ ನಂಬರ್ 7/1ರ ಖಾರೀಜ್ ಖಾತಾ ಜಮೀನಿನಲ್ಲಿ 4 ಎಕರೆ ಜಮೀನು ನೀಡುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಧ್ವಜವನ್ನು ಹಾಕಲಾಗಿದೆ. |
ಸುರಪುರ: ನಗರದ ಪೊಲೀಸ್ ಠಾಣೆಯ ಪಿ.ಐ ಉಮೇಶ ನಾಯಕ ಅವರು ಒಬ್ಬ ದಕ್ಷ ಅಧಿಕಾರಿಯಾಗಿದ್ದಾರೆ.ಕೆಲವು ಸಂಘಟನೆಗಳು ಅವರ ವಿರುದ್ಧ ಮಾಡುತ್ತಿರುವ ಆರೋಪ ಸುಳ್ಳಾಗಿದ್ದು,ಯಾವುದೇ ಕಾರಣಕ್ಕೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ವರ್ಗಾವಣೆ ಮಾಡಬಾರದು.ಹಾಗೇನಾದರು ಮಾಡಿದಲ್ಲಿ ನಮ್ಮ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸುರಪುರ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಹಸಿಲ್ದಾರ್ ಮೂಲಕ ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರ್ಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. |

