ಸತ್ಯಕಾಮಸತ್ಯಕಾಮಸತ್ಯಕಾಮ
  • About us
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಕೃಷಿ
  • ಅಪರಾಧ ಸುದ್ದಿ
  • ರಾಜಕೀಯ
  • ಸಾಂಸ್ಕೃತಿಕ
  • ಶಿಕ್ಷಣ
  • ತಂತ್ರಜ್ಞಾನ
  • ಮನರಂಜನೆ
  • ಆರೋಗ್ಯ
  • ಪ್ಯಾಶನ್
  • ವ್ಯಾಪಾರ
  • ವಿಜ್ಞಾನ
  • ಕ್ರೀಡೆ
Search
  • Advertise
© 2024 Satyakam.news All Rights Reserved.
Reading: ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • About us
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಕೃಷಿ
  • ಅಪರಾಧ ಸುದ್ದಿ
  • ರಾಜಕೀಯ
  • ಸಾಂಸ್ಕೃತಿಕ
  • ಶಿಕ್ಷಣ
  • ತಂತ್ರಜ್ಞಾನ
  • ಮನರಂಜನೆ
  • ಆರೋಗ್ಯ
  • ಪ್ಯಾಶನ್
  • ವ್ಯಾಪಾರ
  • ವಿಜ್ಞಾನ
  • ಕ್ರೀಡೆ
Search
  • About us
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಕೃಷಿ
  • ಅಪರಾಧ ಸುದ್ದಿ
  • ರಾಜಕೀಯ
  • ಸಾಂಸ್ಕೃತಿಕ
  • ಶಿಕ್ಷಣ
  • ತಂತ್ರಜ್ಞಾನ
  • ಮನರಂಜನೆ
  • ಆರೋಗ್ಯ
  • ಪ್ಯಾಶನ್
  • ವ್ಯಾಪಾರ
  • ವಿಜ್ಞಾನ
  • ಕ್ರೀಡೆ
Have an existing account? Sign In
Follow US
  • Advertise
© 2023. All Rights Reserved.
Home » ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ
ಅಪರಾಧ ಸುದ್ದಿ

ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

Satyakam NewsDesk
Last updated: 2025/07/03 at 10:18 PM
Satyakam NewsDesk
Share
2 Min Read
SHARE

 

ಯಾದಗಿರಿ, ಜುಲೈ 3 (ಸತ್ಯಕಾಮ ವಾರ್ತೆ):

ರಾಕ್ ಸ್ಟಾರ್ ಹಾಗೂ ನಿಮ್ಮ ಲೀಗಲ್ ಅಡ್ವೈಸರ್ ಎಂದು ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧಿಯಾಗಿರುವ ಪುನೀತ್ ರಾಜ್ ವಿರುದ್ಧ ಯುವತಿಯೊಬ್ಬರು ಭಾರೀ ಆರೋಪ ಹೇರಿದ್ದು, ಯೂಟ್ಯೂಬ್ ಶಾರ್ಟ್ ಫಿಲ್ಮ್‌ ನೆಪದಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ, ಮದುವೆ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ದೂರುದಾರೆಯು ನೀಡಿರುವ ದೂರಿನಂತೆ, ಇನ್‌ಸ್ಟಾಗ್ರಾಂ ಮೂಲಕ ಪುನೀತ್ ರಾಜ್ ಪರಿಚಿತನಾಗಿದ್ದ. ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದರಿಂದ ಸ್ನೇಹ ಬೆಳೆದಿತ್ತು, ಪುನೀತ್ ರಾಜ್ ತನ್ನನ್ನು ನಿರ್ದೇಶಕ ಎಂದು ಪರಿಚಯಿಸಿಕೊಂಡು ಯುವತಿಗೆ ತನ್ನ ಶಾರ್ಟ್ ಫಿಲ್ಮ್‌ನಲ್ಲಿ ನಾಯಕಿಯಾಗಿ ನಟಿಸುವಂತೆ ಹೇಳಿದ್ದ ಇದಕ್ಕೆ ಮನೆಯವರು ಒಪ್ಪಿಕೊಳ್ಳುವುದಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ. ಆದರೂ ಪುನೀತ್, “ಇದು ಕೇವಲ ಒಂದು ದಿನದ ಚಿತ್ರೀಕರಣ,” “ನನ್ನ ಕುಟುಂಬಸ್ಥರು ಇರುತ್ತಾರೆ,” ಎಂದು ಭರವಸೆ ನೀಡಿ ಫೆಬ್ರವರಿ 16 ರಂದು ಪುನೀತ್ ರಾಜ್ ಹಾಗೂ ಆತನ ಕುಟುಂಬದವರು ಮತ್ತು ಯುವತಿ ಬಾದಾಮಿ ಮಹಾಕೂಟಕ್ಕೆ ತೆರಳಿದ್ದು, ಬಾಡಿಗೆ ರೂಮ್‌ನಲ್ಲಿ ಉಳಿದಿದ್ದರು. ಅಲ್ಲಿಯೇ ಫೆಬ್ರವರಿ 17 ಹಾಗೂ 18 ರಂದು ಮದುವೆ ನಾಟಕವಾಡಿ, ಹಿಂದೂ ಸಂಪ್ರದಾಯದಂತೆ ಪುನೀತ್ ಯುವತಿಗೆ ಮದುವೆ ಮಾಡಿಕೊಂಡಂತೆ ಕಾರ್ಯಕ್ರಮಗಳ ಎಲ್ಲಾ ದೃಶ್ಯಗಳನ್ನು ಚಿತ್ರಿಕರಿಸಿದ್ದಾನಂತೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

- Advertisement -

ದಿನಾಂಕ 18 ರಂದು ರಾತ್ರಿ ಯುವತಿಯ ವಿರೋಧದ ನಡುವೆಯೂ ಪುನೀತ್ ಬಲವಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪುನೀತ್‌ ಪೋಷಕರಿಗೂ ತಿಳಿಸಿದಾಗ ಅವರು ಸಹ “ನಿನ್ನನ್ನು ನನ್ನ ಮಗನೊಂದಿಗೆ ಮದುವೆ ಮಾಡಲೆಂದು ಇದೆಲ್ಲಾ ಮಾಡಿದ್ದೇವೆ” ಎಂದು ಅವರ ಪೋಷಕರು ಉತ್ತರಿಸಿದ್ದಾರೆಂದು ಯುವತಿಯ ಆರೋಪವಾಗಿದೆ.

ಬಳಿಕ ಯಾದಗಿರಿಗೆ ಬಂದ ಇವರು ಯುವತಿ ತನ್ನ ಮನೆಗೆ ಹೋಗುವುದಾಗಿ ತಿಳಿಸಿದಾಗ ನಿನಗೆ ಮದುವೆಯಾಗಿದೆ ನೀನು ಇಲ್ಲೇ ಇರಬೇಕು, ನಮ್ಮ ಮನೆ ಬಿಟ್ಟು ಹೋದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಯುವತಿ ಎರಡು ದಿನ ಅಲ್ಲೇ ಉಳಿದುಕೊಂಡು, ದಿನಾಂಕ 22.02.2025 ರಂದು ತನ್ನ ಮನೆಗೆ ಮರಳಿದ್ದಾಳೆ. ಬಳಿಕ ಏಪ್ರಿಲ್ 12 ರಂದು ಪುನೀತ್ ರಾಜ್ ಯುವತಿಯ ಮನೆಯ ಬಳಿ ಬಂದು ಅವರ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೇ ನಮ್ಮ ಮದುವೆಯ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಹೇಳಿರುತ್ತಾನೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

ಈ ಸಂಬಂಧ ಯುವತಿ ಹೇಳಿಕೆಯಂತೆ ಪುನೀತ್ ಹಾಗೂ ಆತನ ತಂದೆ – ತಾಯಿ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

 

apvc-iconTotal Visits: 62
apvc-iconAll time total visits: 16039

You Might Also Like

ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

ಸಿನಿಮಯ ರೀತಿಯಲ್ಲಿ ಕೊಲೆ ಆರೋಪಿಯ ಬಂಧನ

ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್

ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ : ಉಮೇಶ್ ಮುದ್ನಾಳ ಆರೋಪ

ಸುಕ್ಷೇತ್ರ ಅಬ್ದುಲ್ ಭಾಷಾ ದೇವಸ್ಥಾನದ ಬಳಿ ಜೂಜಾಟ ಜೋರು

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Satyakam NewsDesk July 3, 2025 July 3, 2025
Share This Article
Facebook Twitter Whatsapp Whatsapp Telegram Copy Link Print
Share
Previous Article ಜು.5ರಂದು ಗಿರಿನಾಡಿಗೆ ನಿಖಿಲ್ ಕುಮಾರಸ್ವಾಮಿ
Next Article ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಮಾಡದಂತೆ ಮಾಜಿ ಸಚಿವ ರಾಜುಗೌಡ ಮನವಿ

Stay Connected

Facebook Like
Twitter Follow
Instagram Follow
Youtube Subscribe

Latest News

ನಾರಾಯಣಪೂರ ಕೆಬಿಜೆಎನ್ಎಲ್ ಅಧಿಕಾರಿಗಳ ಮೊಂಡಾಟ : ರೈತರ ನಿತ್ಯ ಅಲೆದಾಟ
ಇದೀಗ ಬಂದ ಸುದ್ದಿ July 16, 2025
ದೊಡ್ಡ ಕೆರೆಯಿಂದ ಅಪಾಯ ತಪ್ಪಿಸಲು ತಡೆಗೊಡೆ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರ ಸೂಚನೆ
ಇದೀಗ ಬಂದ ಸುದ್ದಿ July 16, 2025
ಹದಗೆಟ್ಟ ರಸ್ತೆಗೆ ಕಾಂಕ್ರಿಟ್ ಹಾಕಿಸಿ, ಚರಂಡಿ ನಿರ್ಮಿಸಿ ಅನುಕೂಲ ಮಾಡಿಕೊಟ್ಟ ನಗರಸಭೆ ಅಧ್ಯಕ್ಷೆ
ಇದೀಗ ಬಂದ ಸುದ್ದಿ July 16, 2025
ತಾಳಿಕೋಟೆ : ಬೂದಿಹಾಳ-ಫೀರಾಪೂರ ಏತ ನೀರಾವರಿ ಮುಂದುವರೆದ ಕಾಮಗಾರಿಯನ್ನು ಪ್ರಾರಂಬಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತಾಪಿ ಜನರು ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬೆಟ್ಟಿ ನೀಡಿದ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿದರು.
ರೈತರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲಾ-ಸಂಗಮೇಶ ಸಗರ
ಇದೀಗ ಬಂದ ಸುದ್ದಿ July 16, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in

Any questions related to ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ?

🟢 Online | Privacy policy

1

WhatsApp us

ಕ್ಷಣ ಕ್ಷಣ ಸುದ್ದಿಗೆ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Register Lost your password?
  • ←
  • Facebook
  • YouTube