ಸಮಾಜದ ಶಾಂತಿಗೆ ಪೊಲೀಸರೊಂದಿಗೆ ಸಹಕಾರ ಅಗತ್ಯ : ಎಸ್.ಪಿ ಪೃಥ್ವಿಕ್ ಶಂಕರ್

ಸತ್ಯಕಾಮ ವಾರ್ತೆ ಗುರುಮಠಕಲ್:
ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪೃಥ್ವಿ‌ಕ್‌  ಶಂಕರ್ ಹೇಳಿದರು.

ಪಟ್ಟಣದ ಹರಿಜನವಾಡದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುಮಠಕಲ್ ಪೊಲೀಸ್ ಠಾಣೆಯಿಂದ ಆಯೋಜಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯಲ್ಲಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು.‌  “ರಸ್ತೆ ಸುರಕ್ಷತೆಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮನೆ ಕಳ್ಳತನ ತಪ್ಪಿಸಲು ಸಿಸಿ ಟಿವಿ ಅಳವಡಿಸುವುದು ಉತ್ತಮ. ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಇರಬೇಕಾಗಿದೆ,” ಎಂದು ಅವರು ತಿಳಿಸಿದರು.

ಅಪರಾಧಗಳನ್ನು ತಡೆಯಲು ಜನರ ಸಹಕಾರ ಅತ್ಯಗತ್ಯವಾಗಿದ್ದು, ದಲಿತ ಸಮುದಾಯದ ಯಾರಿಗಾದರೂ ತೊಂದರೆ ಆಗಿದ್ದರೆ, ಪೊಲೀಸ್ ಇಲಾಖೆ ಅವರ ಪಕ್ಕದಲ್ಲೇ ಇರುತ್ತದೆ. ಕಾನೂನು ಅವರನ್ನು ರಕ್ಷಿಸುವ ಶಕ್ತಿ ಹೊಂದಿದೆ ಎಂದರು.

ಈ ಸಂಧರ್ಭದಲ್ಲಿ ಪಿ. ಐ. ಈರಣ್ಣ ದೊಡ್ಡಮನಿ, ತಾಲೂಕ ಪಂಚಾಯತ್ ಇ. ಓ. ಅಂಬರೀಷ್ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ನರಸಿಂಹಸ್ವಾಮಿ, ಎ.ಎಸ್. ಐ ಭೀಮಶಪ್ಪ ಖಾನಾಗಡ್ಡ, ಶರಣಪ್ಪ ಪಸರ್, ಶಿವರಾಮರೆಡ್ಡಿ, ಶ್ರೀಶೈಲ, ರಾಜುಗೌಡ, ಸೇರಿದಂತೆ ಯುವಕರು ಮುಖಂಡರುಗಳು ಉಪಸ್ಥಿತರಿದ್ದರು.

apvc-iconPost Views: 65

Comments

Leave a Reply

Your email address will not be published. Required fields are marked *