12 ಜನ ಸಾಧಕರಿಗೆ” ಸಾಹಿತ್ಯ ಸಾರಥಿ” ಪ್ರಶಸ್ತಿ

ಕಲಬುರಗಿ : ಸಾಹಿತ್ಯ ಸಾರಥಿ ರಾಜ್ಯಮಟ್ಟದ ಸಾಹಿತಿಕ ಪತ್ರಿಕೆಯ 6ನೇ ವರ್ಷದ ಸಂಭ್ರಮದ ಪ್ರಯುಕ್ತ 12 ಜನ ಸಾಧಕರನ್ನು ಸಾಹಿತ್ಯ ಸಾರಥಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಹಾಗೂ ಸಾಹಿತಿ ಬಿ.ಎಚ್ .ನಿರಗುಡಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು
“ಸಾಹಿತ್ಯಕ್ಷೇತ್ರ ಡಾ. ಲಕ್ಷ್ಮಣ ಕೌಂಟೆ, ಡಾ. ವಿಕ್ರಮ್ ವಿಸಾಜಿ, ಡಾ ಅಮೃತಾ ಕಟಕೆ
” ಮಾಧ್ಯಮ ಕ್ಷೇತ್ರ ” ಶ್ರೀ ಸ, ದಾ, ಜೋಶಿ ಶ್ರೀ,ಸುಭಾಸ ಬಣಗಾರ,ಶ್ರೀ ಪ್ರಭುಲಿಂಗ ನೀಲೂರೆ, ವಿಜ್ಞಾನ ಕ್ಷೇತ್ರ ಡಾ ಶ್ರೀಶೈಲ ಘೂಳಿ, ವೈದ್ಯಕೀಯ ಕ್ಷೇತ್ರ ಡಾ ಈರಣ್ಣಾ ಹೀರಾಪೂರ, ಶಿಕ್ಷಣ ಕ್ಷೇತ್ರ ಶ್ರೀ ಶಿವಾನಂದ ಖಜೂರಗಿ ,ನಾಟಕ ಕ್ಷೇತ್ರ ಬಸಯ್ಯಸ್ವಾಮಿ ಪ್ಯಾಠಿಮಠ, ಚಿತ್ರಕಲಾ ಕ್ಷೇತ್ರ ಶಾಹೀದ್ ಪಾಶಾ ಸಮಾಜಸೇವೆ ಉಮಾ ಪಾಟೀಲ ಮುಂತಾದವರ ಸಮಗ್ರ ಸಾಧನೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
2023 ಸೆಪ್ಟೆಂಬರ್ 3 ರಂದು ಕಲಬುರಗಿ ನಗರದ ಚೇಂಬರ್ ಆಪ್ ಕಾಮರ್ಸ್
ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು. ಎಂದು ತಿಳಿಸಿದ್ದಾರೆ.

apvc-iconPost Views: 3

Comments

Leave a Reply

Your email address will not be published. Required fields are marked *