ತೆರಿಗೆ ವಸೂಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ನಿಶ್ಚಿತ ಗುರಿ ಸಾಧಿಸಿರುವುದು ಸ್ವಾಗತಾರ್ಹ ಕ್ರಮ
ಯಾದಗಿರಿ : ಜಿಲ್ಲೆಯಲ್ಲಿ ಕರವಸೂಲಾತಿಗೆ ಹಮ್ಮಿಕೊಂಡಿದ್ದ ಒಂದೇ ದಿನದಲ್ಲಿ ಕೋಟಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, 2025ರ ಆಗಸ್ಟ್ 12 ರಂದು 1,46,00,855 ಕೋ.ರೂ.ಗಳ ದಾಖಲೆಯ ತೆರಿಗೆ ಸಂಗ್ರಹವಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಒಂದೇ ದಿನ 1,46,00,855 ಕೋ.ರೂ.ಗಳ ದಾಖಲೆಯ ಹಿನ್ನೆಲೆ ಕಾಯಕವನ್ನು ಮಾಡುವಾಗ ಮನಸ್ಸು ಶುದ್ಧವಾಗಿರಬೇಕು, ಅಂದರೆ ಯಾವುದೇ ದುರುದ್ದೇಶವಿಲ್ಲದೆ, ಭಕ್ತಿಯಿಂದ ಮಾಡಿದ ಕೆಲಸಕ್ಕೆ ಯಶಸ್ಸು ಸಾಧ್ಯ ಎನ್ನುವಂತೆ ಇಂದಿನ ತೆರಿಗೆ ಸಂಗ್ರಹಣೆಯಲ್ಲಿ ನಿಷ್ಟೆಯಿಂದ, ಭಕ್ತಿಯಿಂದ ಕೆಲಸ ನಿರ್ವಹಿಸಿದ್ದಕ್ಕಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಾಯಿತು
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಿಸುವ ಮೂಲಕ ರಾಜ್ಯ ಮಟ್ಟದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಸಾಧನೆಯ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಅಭಿಯಾನ ಪ್ರಾರಂಭಿಸಲಾಗಿತ್ತು. ಅದರಂತೆ, ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎನ್.ಆರ್.ಎಲ್.ಎಮ್ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಮತ್ತು ಎಲ್ಲಾ ಸಿಬ್ಬಂದಿಗಳು ಸೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ತೆರಿಗೆ ಸಂಗ್ರಹಣೆಗೆ ಸಹಕರಿಸುವಂತೆ ಕೋರಿ ಯಶಸ್ವಿಯಾಗಿದ್ದಾರೆ. ಒಂದೇ ದಿನದಲ್ಲಿ 1,46,00,855 ರೂ.ಗಳ ತೆರಿಗೆ ವಸೂಲಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ನಿಶ್ಚಿತ ಗುರಿ ಸಾಧಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
2025ರ ಆಗಸ್ಟ್ 10 ರಂದು ಯಾದಗಿರಿ ಜಿಲ್ಲೆಯ ರಾಜ್ಯದ ಕರವಸೂಲಾತಿ ಪ್ರಗತಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿತ್ತು ಆದರೆ 2025ರ ಆಗಸ್ಟ್ 12 ರಂದು ನಡೆದ ಕರವಸೂಲಾತಿಯಲ್ಲಿ ಕೋಟಿ ಅಭಿಯಾನ ಪ್ರಯುಕ್ತ ಯಾದಗಿರಿ ಜಿಲ್ಲೆ ರಾಜ್ಯದಲ್ಲಿ 20ನೇ ಸ್ಥಾನದಲ್ಲಿ ಬಂದಿರುತ್ತದೆ. ಒಟ್ಟಾರೆಯಾಗಿ ಯಾದಗಿರಿ ಜಿಲ್ಲೆಯಲ್ಲಿ ರೂ.18.74 ಕೋಟಿ ಚಾಲ್ತಿ ಬೇಡಿಕೆಗೆ ಎದುರಾಗಿ 2025ರ ಆಗಸ್ಟ್ 12 ರಂದು ಒಟ್ಟು ರೂ.4.35 (ಶೇ.23.22%) ಕೋಟಿ ತೆರಿಗೆ ವಸೂಲಿ ಮಾಡಲಾಯಿತು ಎಂದರು.
ಯಾದಗಿರಿ ತಾಲೂಕಿ ಮುದ್ನಾಳ ಗ್ರಾಮ ಪಂಚಾಯತ 6,06,706 ರೂ.ಗಳ, ಹತ್ತಿಕುಣಿ ಗ್ರಾಮ ಪಂಚಯತ್ 5,08,571 ರೂ.ಗಳ, ಶಹಾಪೂರ ತಾಲೂಕಿನ ಉಕ್ಕಿನಾಳ 4,18,736 ರೂ.ಗಳ, ಖಾನಾಪೂರ ಗ್ರಾಮ ಪಂಚಾಯತ್3,92,257 ರೂ.ಗಳ, ಹುಣಸಗಿ ತಾಲೂಕಿನ ನಾರಾಯಣಪೂರ ಗ್ರಾಮ ಪಂಚಾಯತ್ 3,15,862 ರೂ.ಗಳ, ಕಾಮನಟಗಿ ಗ್ರಾಮ ಪಂಚಾಯತ್ 2,13,336 ರೂ.ಗಳ, ಸುರಪುರ ತಾಲೂಕಿನ ಏವೂರ ಗ್ರಾಮ ಪಂಚಾಯತ್ 3,07,768 ರೂ.ಗಳ, ಮಲ್ಲ ಬಿ 2,13,431 ರೂ.ಗಳ, ವಡಗೇರಾ ತಾಲೂಕಿನ ವಡಿಗೇರಾ 3,03,881 ರೂ.ಗಳ, ಬೆಂಡೆಬೆAಬಳಿ ಗ್ರಾಮ ಪಂಚಾಯತ್ 2,48,746 ರೂ.ಗಳ, ಗುರುಮಠಕಲ್ ತಾಲೂಕಿನ ಚಂದ್ರಿಕಿ ಗ್ರಾಮ ಪಂಚಾಯತ್ 1,73,920 ರೂ.ಗಳ, ಕಾಕಲ್ವರ್ ಗ್ರಾಮ ಪಂಚಾಯತ್ 1,71,233 ರೂ.ಗಳ, ಇದೆ. ಶಹಾಪೂರ, ಯಾದಗಿರಿ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್ ತಾಲೂಕಿನಲ್ಲಿ ಒಟ್ಟು 1,46,11854.99 ಕೋ.ರೂ.ಗಳ ತೆರಿಗೆ ವಸೂಲಿ ಮಾಡಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿಗೆ ತೆರಿಗೆಯ ಮೂಲ ಅತೀ ದೊಡ್ಡ ಶಕ್ತಿಯಾಗಿ ಪರಿಣಮಿಸುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಾರ್ವಜನಿಕರಲ್ಲಿ ತೆರಿಗೆಯ ಬಗ್ಗೆ ಮನವೊಲಿಸಿ ಯಾದಗಿರಿ ಜಿಲ್ಲೆಯು ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಬರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ತೆರಿಗೆ ಪಾವತಿಯಿಂದ ಗ್ರಾಮ ಪಂಚಾಯತಿಯ ವಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಅನುಕೂಲವಾಗುತ್ತದೆ. ಹೀಗಾಗಿ ಕೋಟಿ ಅಭಿಯಾನ ಹೆಸರಿನಲ್ಲಿ ಒಂದು ದಿನದಲ್ಲಿ ಕೋಟಿ ಸಂಗ್ರಹಣೆ ಮಾಡಿರುತ್ತಾರೆ. ವಿಶೇಷವೆಂದರೆ ತೆರಿಗೆ ವಸೂಲಿ ಮಾಡಲು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಾಬಂಧನ ಹಬ್ಬದ ಪ್ರತೀಕರವಾಗಿ ಸಹೋದರರಿಗೆ ಕಾಣಿಕೆಯಾಗಿ ತೆರಿಗೆ ಪಾವತಿಸುವಂತೆ ಮನವೊಲಿಸಿದ್ದು ವಿಶೇಷವಾಗಿತ್ತು. ಅದರಂತೆ ತೆರಿಗೆ ಸಂಗ್ರಹಿಸಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

