ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಶಾಲಾ ಮಕ್ಕಳ ಜೀವದ ಜೋತೆಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು..!
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಶಾಲಾ ಮಕ್ಕಳ ಜೀವದ ಜೋತೆಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು..!
Latest News

ಶಾಲಾ ಮಕ್ಕಳ ಜೀವದ ಜೋತೆಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು..!

Satyakam NewsDesk
Last updated: 2025/02/20 at 2:41 PM
Satyakam NewsDesk
Share
2 Min Read
ನಗರದಲ್ಲಿರುವ ಸಬಾ ಆಂಗ್ಲ ಮಾದ್ಯಮ ಶಾಲೆಯ ವಾಹನಗಳ ಇನ್ಸೂರೆನ್ಸ ಹಾಗೂ ಪಿಟ್ನೆಸ್‌ ಮುಗಿದ್ದಿದ್ದರೂ, ಮಕ್ಕಳ ಜೀವದ ಜೋತೆ ಹಾಗೂ ಪಾಲಕರ ಜೋತೆ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ, ಮುಂದಾಗುವ ಅನಾಹುತಕ್ಕೆ ಈ ಶಾಲಾ ಸಂಸ್ಥೆಗಳೆ ಕಾರಣವಾಗುತ್ತದೇ,
ನಗರದಲ್ಲಿರುವ ಸಬಾ ಆಂಗ್ಲ ಮಾದ್ಯಮ ಶಾಲೆಯ ವಾಹನಗಳ ಇನ್ಸೂರೆನ್ಸ ಹಾಗೂ ಪಿಟ್ನೆಸ್‌ ಮುಗಿದ್ದಿದ್ದರೂ, ಮಕ್ಕಳ ಜೀವದ ಜೋತೆ ಹಾಗೂ ಪಾಲಕರ ಜೋತೆ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ, ಮುಂದಾಗುವ ಅನಾಹುತಕ್ಕೆ ಈ ಶಾಲಾ ಸಂಸ್ಥೆಗಳೆ ಕಾರಣವಾಗುತ್ತದೇ,
SHARE

ವರದಿ: ಕುದಾನ್‌ ಸಾಬ್‌

ಸತ್ಯಕಾಮ ವಾರ್ತೆ ಯಾದಗಿರಿ:

ಮಕ್ಕಳು ಯಾವುದೇ ಸಮಸ್ಯೆ ಇಲ್ಲದೆ ಶಾಲೆಯನ್ನು ತಲುಪುತ್ತಾರೆ ಎಂದು ಶಾಲಾ ಬಸ್‌ ನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ, ಆದರೆ ಪೋಷಕರಿಗೆ ವಾಹನದಲ್ಲಿ ಓಡಾಡುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದೂ ಅನೇಕ ಖಾಸಗಿ ಶಾಲೆಯ ವಾಹನಗಳು ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಇರುವುದು ಬಹಿರಂಗವಾಗಿದೆ.

ಹೌದು ನೂರಾರು ಕನಸುಗಳನ್ನು ಹೊತ್ತು ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶದ ಅನೇಕ ಮಕ್ಕಳನ್ನು ಪಾಲಕರು ಶಾಲಾ ವಾಹನಗಳಲ್ಲಿ ಕಳುಹಿಸುತ್ತಾರೆ, ಆದರೆ ಅದೆಷ್ಟೂ ವಾಹನಗಳು ಸುರಕ್ಷಿತವಾಗಿದೆ ಎಂದು ಪ್ರಜ್ಣಾನವಂತ ಪಾಲಕರು ಮಣನೆ ಮಾಡಿಕೋಳ್ಳುವಂತಾಗಿದೆ, ಇದಕ್ಕೆ ಪುಷ್ಠಿಕರಿಸುವಂತೆ ಇತ್ತಿಚಿಗೆ ಮಾನ್ವಿಯಲ್ಲಿ ಶಾಲಾ ಬಸ್‌ ಅಪಘಾತವಾಗಿ ಹತ್ತಾರು ವಿದ್ಯಾರ್ಥಿಗಳು, ತಮ್ಮ ಚಿಕ್ಕ ವಯಸ್ಸಿನಲ್ಲೇ ವಿಕಲ ಚೇತನರಾದರೇ, ಇನ್ನೂ ಕೆಲವು ಮಕ್ಕಳು ಉಸಿರು ಚೆಲ್ಲಿದರು.

ಇಂಗ್ಲಿಷ್‌ ವ್ಯಾಮೋಹದಿಂದಾಗಿ ಇಂದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆ ಬದಲಿಗೆ ಖಾಸಗಿ ಶಾಲೆಗಳು ಅದೆಷ್ಟೇ ದೂರದಲ್ಲಿದ್ದರೂ ಅದಕ್ಕೆ ದಾಖಲಿಸುತ್ತಾರೆ. ಇದಕ್ಕೆ ಮುಖ್ಯವಾಗಿ ಮಕ್ಕಳ ಸಂಚಾರಕ್ಕಾಗಿ ವಸತಿ ನಿಲಯದ ಪರ್ಯಾಯವಾಗಿ ಶಾಲಾ ಬಸ್ಗಳಿಗೆ ಪಾಲಕರು ಮೊರೆಹೋಗುತ್ತಾರೆ, ಆದರೆ ಜಿಲ್ಲೆಯಲ್ಲಿನ ಬಹುತೇಕ ಖಾಸಗಿ ಶಾಲೆಯ ವಾಹನಗಳು ಒಂದಿಲ್ಲೋಂದಾದ ಇನ್ಸೂರೆನ್ಸ್‌, ರಸ್ತೆ ತೆರಿಗೆ, ಪಿಟೆನೆಸ್‌ ಸೇರಿದಂತೆ ಹಲವು ಧಾಖಲೆಗಳನ್ನು ಖಾಸಗಿ ಶಾಲೆಯ ಆಡಳಿತ ಸಂಸ್ಥೆಗಳು ಪಾಲಿಸುತ್ತಿಲ್ಲ, ಇದ್ದರಿಂದ ಪಾಲಕರು ತಮ್ಮ ಮಕ್ಕಳ ಜೀವ ಭಯದಲ್ಲಿ ಶಾಲೆಗಳಿಗೆ ಕಳುಹಿಸುವಂತ ದಿನಗಳು ಇವೆ.

ಅದರಲ್ಲೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಪೋಷಕರಿಂದ ವಸೂಲಿ ಮಾಡುವ ಶುಲ್ಕದ ಕುರಿತಷ್ಟೇ ಆಸಕ್ತಿಯಿದೆ.ಆದರೆ ಅವರನ್ನೆ ನಂಬಿ ಪೋಷಕರು ಕಳಿಸುವ ಮಕ್ಕಳ ಬಗ್ಗೆ ಶಾಲೆ ಸಂಸ್ಥೆಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ, ಇದು ಬಹುತೇಕ ಖಾಸಗಿ ಶಾಲೆಗಳ ವಾಸ್ತವ ಇದೇ ರೀತಿ ಇವೆ. ಪ್ರತಿನಿತ್ಯ ಮುಂಜಾನೆ ಮಕ್ಕಳು ಶಾಲೆಯ ವಾಹನ ಹತ್ತಿದ ಬಳಿಕ ಮರಳಿ ಮನೆ ಸೇರಿಸುವವರೆಗೆ ಮಗುವಿನ ಸುರಕ್ಷತೆ ಹೊಣೆ ತಮ್ಮದು ಎಂಬ ಪ್ರಜ್ಞೆಯೇ ಶಾಲೆಗಳ ಆಡಳಿತ ಮಂಡಳಿಗಳಿಗೆ ಇಲ್ಲದಿರುವುದು ದುರಂತ.

ವಿದ್ಯಾರ್ಥಿಗಳು ಸಂಚರಿಸುವ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್‌, ವಿವರವಾದ ಮಾರ್ಗದರ್ಶಿ ಸೂತ್ರ ರಚಿಸಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಇವುಗಳಲ್ಲಿ ಯಾವುದೇ ಒಂದೂ ಪಾಲನೆಯಾಗುತ್ತಿಲ್ಲ. ಶಾಲಾ ವಾಹನಗಳಲ್ಲಿನ ಸುರಕ್ಷತಾ ನಿಯಮಗಳ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ದಿವ್ಯ ಮೌನ ವಹಿಸಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ.

ಒಟ್ಟಿನಲ್ಲಿ ಮಸ್ಕಿಯಲ್ಲಾದ ಶಾಲಾ ವಾಹನದ ದುರ್ಘಟನೆ ಯಾದಗಿರಿಯಲ್ಲಿ ಸಂಭವಿಸದಂತೆ ಇಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಈಗಲಾದರೂ ಇಂತಹ ಸರಿಯಾದ ದಾಖಲೆಇರದ ಶಾಲಾವಾಹನಗಳನ್ನು ಯಾವುದೇ ಮುಲ್ಲಾಜಿಲ್ಲದೇ ವಶಪಡಿಸಿಕೋಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕು,ಇಲ್ಲದಿದ್ದರೇ ಆರ್‌.ಟಿ.ಒ ಅಧಿಕಾರಿಗಳ ಬೇಜವಬ್ದಾರಿತನಕ್ಕೆ  ಅಪಾಘತಗಳಿಗೆ ತಾವೇ ಹೋಣೆಯಾಗಬೇಕಾತ್ತದೆ, ಇದಕ್ಕೆ ಶಾಲಾ ಆಡಳಿತಮಂಡಳಿಯು ಜವಬ್ದಾರಿಯಾಗುತ್ತದೆ.

 

ನಮ್ಮ ಮಕ್ಕಳನ್ನು ಖಾಸಗಿ ಶಾಲೆ ದಾಖಲಾತಿ ಮಾಡಿದ್ದೂ, ಆದರೆ ಶಾಲಾ ಸಂಸ್ಥೆಗಳು ಶಾಲಾ ವಾಹನಗಳನ್ನು ಯಾವುದೇ ದಾಖಲೆ ಪತ್ರಗಳಿಲ್ಲದೇ ಓಡಿಸುತ್ತಾರೆ, ಹೀಗಾಗಿ ನಾವು ನಮ್ಮ ಮಕ್ಕಳು ಸಂಜೆ ಮನೆ ಸೇರುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುವಂತಾಗಿದೆ. ಯಾವುದೇ ಅನಾಹುತಗಳು ಸಂಭವಿಸಿದರೆ ಇದಕ್ಕೆ ಯಾರು ಹೋಣೆಯಾಗುತ್ತಾರೆ,

-ಹೆಸರೇಳಲಿಚ್ಚಿಸದ ಪಾಲಕರು

apvc-iconTotal Visits: 72
apvc-iconAll time total visits: 25876

You Might Also Like

ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

Satyakam NewsDesk February 20, 2025 February 20, 2025
Share This Article
Facebook Twitter Whatsapp Whatsapp Telegram Copy Link Print
Share
Previous Article ನಾಳೆ ಯಾದಗಿರಿ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ ಪ್ರತಿಭಟನೆ MRPS ಅಧ್ಯಕ್ಷ ರವಿ ಬುರನ್ನೊಳ್
Next Article ಗರೂರ ಬಿ ಗ್ರಾಮದಲ್ಲಿ ದೈತ್ಯಾಕಾರದ ಮೊಸಳೆ ಪತ್ತೆ

Stay Connected

Facebook Like
Twitter Follow
Instagram Follow
Youtube Subscribe

Latest News

ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ
social media September 8, 2025
ಬಾಲ್ಯ ವಿವಾಹ: ಪೋಕ್ಸೋ ಕೇಸ್‌ ದಾಖಲು
Crime September 8, 2025
ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ- ಬಾಬುರಾವ್ ಚಿಂಚನಸೂರು
Politics September 7, 2025
ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು
Crime September 7, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube