ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಮೋದಿ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠಿತ ಸ್ಥಾನಮಾನ – ಕಂದಕೂರು
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಮೋದಿ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠಿತ ಸ್ಥಾನಮಾನ – ಕಂದಕೂರು
Politics

ಮೋದಿ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠಿತ ಸ್ಥಾನಮಾನ – ಕಂದಕೂರು

ಭಾರತ ಸ್ವಾತಂತ್ರದ ನಂತರ ಹಲವಾರು ದಶಕಗಳ ವರೆಗೂ ಸಣ್ಣಪುಟ್ಟ ರಾಷ್ಟ್ರಗಳೊಂದಿಗೆ ಹೋಲಿಕೆ ಆಗುತ್ತಿತ್ತು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಲಾಢ್ಯ ರಾಷ್ಟ್ರಗಳ ಜೊತೆ ಸರಿಸಮವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ರಂಗದಲ್ಲಿ ಸ್ಪರ್ಧೆ ನೀಡುವಂತಾಗಿದ್ದೇವೆ ಎಂದು ಶಾಸಕ ಶರಣು ಗೌಡ ಕಂದಕೂರು ಹೇಳಿದರು.

Satyakam NewsDesk
Last updated: 2025/08/15 at 5:34 PM
Satyakam NewsDesk
Share
2 Min Read
SHARE

ಗುರುಮಠಕಲ್: ಭಾರತ ಸ್ವಾತಂತ್ರದ ನಂತರ ಹಲವಾರು ದಶಕಗಳ ವರೆಗೂ ಸಣ್ಣಪುಟ್ಟ ರಾಷ್ಟ್ರಗಳೊಂದಿಗೆ ಹೋಲಿಕೆ ಆಗುತ್ತಿತ್ತು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಲಾಢ್ಯ ರಾಷ್ಟ್ರಗಳ ಜೊತೆ ಸರಿಸಮವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ರಂಗದಲ್ಲಿ ಸ್ಪರ್ಧೆ ನೀಡುವಂತಾಗಿದ್ದೇವೆ ಎಂದು ಶಾಸಕ ಶರಣು ಗೌಡ ಕಂದಕೂರು ಹೇಳಿದರು.

ಪಟ್ಟಣದ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಯೋತ್ಪಾದಕರ ಕುತಂತ್ರಕ್ಕೆ 27 ಜನ ಭಾರತೀಯರು ಬಲಿಯಾಗಿರುವ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಚರಣೆ ವಿರೋಧಿಗಳಿಗೆ ನಿದ್ದೆಗೆಡಿಸಿದೆ. ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಷವಾಗಿದ್ದು, ಕೊರೋನಾ ಕಾಲದಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ಕಂಡು ದೊಡ್ಡ ದೇಶಗಳು ಕೂಡ ಬೆರಗಾಗಿವೆ ಎಂದು ಅವರು ಬಣ್ಣಿಸಿದರು.

ಅಧ್ಯಕ್ಷ ಭಾಷಣಕ್ಕೂ ಮುಂಚೆ ಕಲಬುರಗಿ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧೀಪತಿಗಳಾದ ಡಾ||ಶರಣಬಸಪ್ಪ ಅವರಿಗೆ ಸಂತಾಪ ಸೂಚಿಸಿದರು, ವೇದಿಕೆ ಮೇಲಿದ್ದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ತಾಲೂಕ ದಂಡಾಧಿಕಾರಿಗಳಿಗೆ ಶಿಸ್ತು ಮತ್ತು ಸಮಯ ಪರಿಪಾಲನೆ ಮಾಡುವಂತೆ ಎಚ್ಚರಿಕೆ ನೀಡಿದರು.

ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಉಪನ್ಯಾಸ ನೀಡಿದ ಚಂದ್ರಶೇಖರ್ ಪಾಟೀಲ್, ಅಜ್ಞಾತ ಸ್ವಾತಂತ್ರ ವೀರರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸೋಣ ಕೇವಲ ಒಂದು ವ್ಯಕ್ತಿಯಿಂದ ಸ್ವಾತಂತ್ರ ನಮಗೆ ಬಂದಿಲ್ಲ, ಸಾವಿರಾರು ದೇಶಭಕ್ತರು ದೇಶಕ್ಕಾಗಿ ಹುತಾತ್ಮರಾಗಿರುವ ಪ್ರಯುಕ್ತ ನಮಗೆ ದೇಶ ಸ್ವಾತಂತ್ರ ಸಿಕ್ಕಿದೆ ಜಲಿಯನ್ ವಾಲಿಬಾಲ್ ಹತ್ಯಾಕಾಂಡ ಹಾಗೂ ದೇಶಭಕ್ತ ಉದಂ ಸಿಂಗ್ ಅವರ ಕುರಿತು ವಿವರಿಸಿ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಿದರು.

ಇದಕ್ಕೂ ಮುಂಚೆ ತಾಲೂಕ ದಂಡಾಧಿಕಾರಿ ಹಾಗೂತಹಸೀಲ್ದಾರ ಶಾಂತಗೌಡ ಬಿರಾದಾರ ಧ್ವಜಾರೋಹಣ ನೆರವೇರಿಸಿ ಪ್ರಾಸ್ಥಾವಿಕ ನುಡಿ ಹೇಳಿದರು.

ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.

ಈ ವೇಳೆ ವೇಧಿಕೆಮೇಲೆ ಜಯಶ್ರೀ ಪೊ.ಪಾಟೀಲ್ ಪುರಸಭೆ ಅಧ್ಯಕ್ಷರು, ರೇಣುಕಾ ವಿ.ಪಡಿಗೆ ಉಪಾಧ್ಯಕ್ಷರು, ಅಂಬ್ರೇಶ್ ಪಾಟೀಲ್ ತಾ.ಪಂ ಇ. ಓ, ಭಾರತಿ.ಸಿ.ದಂಡೋತಿ ಪುರಸಭೆ ಮುಖ್ಯಾಧಿಕಾರಿ, ವೀರಣ್ಣ.ಎಸ್. ದೊಡ್ಡಮನಿ ಆರಕ್ಷಕ ನಿರೀಕ್ಷಕರು, ನರಸಿಂಹಸ್ವಾಮಿ ಉಪ ತಹಶೀಲ್ದಾರ್ ಸೇರಿದಂತೆಮುಖಂಡರುಗಳು ಸಾರ್ವಜನಿಕಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

apvc-iconTotal Visits: 54
apvc-iconAll time total visits: 24624

You Might Also Like

RSS ಗೀತೆ ಹಾಡಿದ್ರೆ CM ಸೀಟ್ ಸಿಗೋದಾದರೆ? ನಾವು ಇಬ್ಬರೂ ಹಾಡ್ತೀವಿ! – ಜಾರಕಿಹೊಳಿ ವ್ಯಂಗ್ಯ

ಎರಡು ವರ್ಷ ಕಾಣದಂತೆ ಮಾಯವಾದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ

ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ

ರೈತರ ಕಣ್ಣಲ್ಲಿ ನೀರು ಬರಿಸಿದರೆ ಒಳ್ಳೆಯದಾಗದು– ಮಾಗನೂರ

Satyakam NewsDesk August 15, 2025 August 15, 2025
Share This Article
Facebook Twitter Whatsapp Whatsapp Telegram Copy Link Print
Share
Previous Article ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ
Next Article ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

Stay Connected

Facebook Like
Twitter Follow
Instagram Follow
Youtube Subscribe

Latest News

ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್
Latest News August 30, 2025
ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ
Latest News August 30, 2025
ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ
Latest News August 29, 2025
ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ
Crime August 29, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube