ಅಕ್ರಮ ಸರಾಯಿ ಮಾರಾಟ ಮಾಲು ಜಪ್ತಿ ಪ್ರಕರಣ ದಾಖಲು

ಬೀದರ : ಗಣೇಶ್ ಚತುರ್ಥಿಯ ಹಬ್ಬದ ನಿಮಿತ್ಯ ಬೀದರ್ ಜಿಲ್ಲಾಧಿಕಾರಿಗಳಾದ ಶ್ರೀ ಗೋವಿಂದ ರೆಡ್ಡಿ ಅವರು ಸರಾಯಿ ಮಾರಾಟ ನಿಷೇಧ ಘೋಷಣೆ ಮಾಡಿದ್ದರು. ಆದೇಶ ಉಲ್ಲಂಘನೆ ಮಾಡಿ ಸರಾಯಿ ಮಾರಾಟ ಮಾಡಿ ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದ ಆರೋಪಿಗಳ ಸ್ಟೋರಿ ಒಂದು ಬೆಳಕಿಗೆ ಬಂದಿದೆ.
ಬೀದರ್ ನಗರದ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಖಚಿತ ವರದಿಯ ಮೇರೆಗೆ ವರಿಷ್ಠ ಪೊಲೀಸ್ ಅಧಿಕಾರಿ ಶ್ರೀ ಚನ್ನಬಸಣ್ಣ ಎಸ್ ಎಲ್ ಹಾಗೂ ಮಹೇಶ್ ಮೇಘಣ್ಣನವರ್ ಹೆಚ್ಚುವರಿ ಎಸ್ಪಿ ರವರ ದಿವ್ಯ ಮಾರ್ಗದರ್ಶನದಲ್ಲಿ ಠಾಣೆ ಪ್ರಭಾರಿ ಪಿಐ ಶ್ರೀವಿಜಯಕುಮಾರ್, ಶ್ರೀಮತಿ ತಸ್ಲೀಮ್ ಸುಲ್ತಾನಾ ಪಿ ಎಸ್ ಐ, ಮುಖ್ಯಪೇದೆ ಹನುಮ ಗೌಡರು ಹಾಗೂ ಇತರ ಪೊಲೀಸ್ ಪೇದೆಗಳೊಂದಿಗೆ ಹಠಾತ್ತನೆ ದಾಳಿ ನಡೆಸಿ ವಿವಿಧ ನಮೂನೆಯ ಅಂದಾಜು ರೂಪಾಯಿ 83,553/- ಬೆಲೆಬಾಳುವ ಸರಾಯಿ ಮತ್ತು 13,000/- ರೂಪಾಯಿ ಬೆಲೆಬಾಳುವ ಎರಡು ಮೊಬೈಲ್ ಹೀಗೆ ಒಟ್ಟು ರೂಪಾಯಿ 96,553/- ಮೌಲ್ಯದ ಮಾಲನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆಯೊಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

apvc-iconPost Views: 3

Comments

Leave a Reply

Your email address will not be published. Required fields are marked *