ಕುರಕುಂದಾ ಗ್ರಾಮಕ್ಕೆ ಶಾಸಕರ ಭೇಟಿ: ಮೃತ ಮಕ್ಕಳಿಗೆ ಅಂತಿಮ ನಮನ, ಕುಟುಂಬಕ್ಕೆ ಸಾಂತ್ವನ

[web_stories title=”true” excerpt=”false” author=”false” date=”false” archive_link=”true” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”5″ order=”DESC” orderby=”post_title” view=”circles” /] ಸತ್ಯಕಾಮ ವಾರ್ತೆ ಯಾದಗಿರಿ:

ಬೆಂಗಳೂರಿನಲ್ಲಿ ಮೃತ ಪಟ್ಟ ಯಾದಗಿರಿ ಮತಕ್ಷೇತ್ರ ಕುರಕುಂದಾ ಗ್ರಾಮದ ಚಾಂದಪಾಶಾ ಎಂಬುವವರ ಮಕ್ಕಳ ಕಳಬರಹಕ್ಕೇ ಅಂತಿಮ‌ ನಮನ ಸಲ್ಲಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್ ಅವರು, ಚಿಕ್ಕ ಮಕ್ಕಳ ಸಾವು ದುಖಃ ತಂದಿದೆ. ಹೆತ್ತವರ ಮುಂದೆ ಮಕ್ಕಳು ಸಾಯಿಬಾರದು, ಆ ದುಖಃಕ್ಕೆ ಕೊನೆಯೇ ಇಲ್ಲ, ಆದರೂ ಧೈರ್ಯದಿಂದ ಇದ್ದು ಜೀವನ ನಡೆಸಿರಿ ಎಂದು ಸಾಂತ್ವನ ಹೇಳಿದರು.

ಗ್ರಾಮದ ಅವರ ಮನೆಗೆ ತೆರಳಿದ್ದ ಶಾಸಕರು ಮಕ್ಕಳನ್ನು ಕಳೆದಕೊಂಡ ಹೆತ್ತವರ ದುಖಃ ಕಂಡು ಮರುಗಿದರು. ನಾನು ಮಾಡುವ ಈ ವೈಯಕ್ತಿಕ ಸಹಾಯ ದೊಡ್ಡದಲ್ಲ, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ‌ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು. 
 
ಈ ವೇಳೆ ಕಾಸೀಮ ಮುತ್ತ್ಯಾ, ಡಾ. ರಾಜು ಬೆಳಗೇರಿ,ಕಾಶೀಮ್ ಗುಲಾಮಿ, ಮಕಧುಮ್, ಶರಣಬಸವ ಕುರಕುಂದಿ, ಮೆಹಬೂಬ್, ಶರಣ ಗೌಡ, ಬಸನಗೌಡ, ಅಂಬ್ರೆಷ್, ರಫಿ ಬೆಳಗೇರ, ಮೋಸಪ್ಪಾ, ಹಾಗೂ ಕುರಕುಂದಿ ಗ್ರಾಮಸ್ಥರು ಇದ್ದರು.
apvc-iconPost Views: 220

Comments

Leave a Reply

Your email address will not be published. Required fields are marked *