ಕೋರ್ಟ್ ಹಾಲ್ ಗಳಲ್ಲಿ ಬಾಬಾಸಾಹೇಬರ ಭಾವಚಿತ್ರ ಹಾಕಲು ಹೈಕೋರ್ಟ್ ಆದೇಶ: ಜಗದೀಶ ದಾಸನಕೇರಿ ಹರ್ಷ

ಸತ್ಯಕಾಮ ವಾರ್ತೆ ಯಾದಗಿರಿ: 
ಕರ್ನಾಟಕ ಹೈಕೋರ್ಟ್ ಬೆಂಗಳೂರು, ಹೈಕೋರ್ಟ ಪೀಠ ಧಾರವಾಡ, ಕಲ್ಬುರ್ಗಿ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯದ ಕೋರ್ಟ್ ಹಾಲ್ ಗಳಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಹೈಕೋರ್ಟ್ರಿಜಿಸ್ಟಾçರ್ ಜನರಲ್ ಆದೇಶ ಹೊರಡಿಸಿದ್ದಾರೆ. ಇದು ಸ್ವಾಗತಾರ್ಹ ಎಂದು ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಮ್ಮ ಸಂಘಟನೆಯಿAದ ಮೊದಲ ಬೇಡಿಕೆ ಇದಾಗಿತ್ತು, ಇದೇ ಬೇಡಿಕೆಯನ್ನು ಇಟ್ಟುಕೊಂಡು ಸತತ ೨-೩ ವರ್ಷಗಳಿಂದ ಮಾಡಿದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.
ಇದಾದ ನಂತರ ಅಹಿಂದ ಸಂಘಟನೆ ಮುಖಾಂತರವೂ ಹೋರಾಟ ಮಾಡಿದ್ದು ವಿವಿಧ ದಲಿತ ಸಂಘಟನೆಗಳು ರಾಜ್ಯದ ಹಲವು ಕಡೆ ಹೋರಾಟ ನಡೆಸಿದ್ದವು ಛಲಬಿಡದೇಹೋರಾಟ ಮುಂದುವರೆಸಿದ ಫಲವಾಗಿ ಇಂದು ಕೋರ್ಟ್ ಆದೇಶವಾಗಿರುವುದು ಸಂತಸ ತಂದಿದೆ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
apvc-iconPost Views: 16

Comments

Leave a Reply

Your email address will not be published. Required fields are marked *