ಕಲಬುರಗಿ :- ನಗರದ ಶರಣ ಸಿರಸಿ, ಮಡ್ಡಿಯ ನಿಸರ್ಗ ಕಾಲೋನಿಯ ಶ್ರೀ ಸಾಯಿ ದರ್ಬಾರ್ ಮಂದಿರದಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ ಜರುಗಿತು.
ಬೆಳಗಿನ ಜಾವ 8:00 ಗಂಟೆಗೆ ಸಾಯಿಬಾಬಾರವರ ಭವ್ಯಮೂರ್ತಿಗೆ ಮಹಾ ಅಭಿಷೇಕ ಅನೇಕ ಸದ್ಭಕ್ತರ ಉಪಸ್ಥಿತಿಯಲ್ಲಿ ಗುರುಗಳಾದ ಶ್ರೀ ಸುರೇಶ್ ಬಾಬಾ ಗುರೂಜಿಯವರ ನೇತೃತ್ವದಲ್ಲಿ ಜರುಗಿತ್ತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸಾಯಿಬಾಬಾರವರ ಮಧ್ಯದ ಆರತಿ ಗುರೂಜಿ ಅವರ ನೇತೃತ್ವದಲ್ಲಿ ನೆರವೇರಿತು.
ಗುರುಪೂರ್ಣಿಮೆಯ ಮಹಾ ಅಭಿಷೇಕ ಮತ್ತು ಆರತಿಯಲ್ಲಿ ಪತ್ರಕರ್ತ ಶ್ರೀ ಆನಂದ್ ಪಿ ಮಣ್ಣೂರ್ ಪತ್ರಕರ್ತ ಶ್ರೀ ದಸ್ತಯ್ಯ ಗುತ್ತೇದಾರ್ ಪತ್ರಕರ್ತ ಹಾಗೂ ಸಾಹಿತಿ ಶ್ರೀ ಕಿರಣ್ ಪಾಟೀಲ್ ಅಶೋಕ್ ಗುತ್ತೇದಾರ್ ಶಿವರಾಜ್ ಬಿರಾದಾರ್ ಜನರಲ್ ಮ್ಯಾನೇಜರ್ ನಿವೃತ್ತ, ಶ್ರೀ ದಶರಥ ಏಖೆಳ್ಳಿಕರ್ ಇನ್ನು ಅನೇಕರು ಉಪಸ್ಥಿತರಿದ್ದರು. ಆರತಿಯ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಹುಮನಾಬಾದ್ ತಾಲೂಕಿನ ಶ್ರೀಮತಿ ಸುಗಂಧಾ ನರೂಣಿ ರವರು ಏರ್ಪಡಿಸಿದರು.
ಸಿರಸಿ ಮಡ್ಡಿಯ ಸಾಯಿ ದರ್ಬಾರ್ ನಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ !
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
