ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚೆ
ಯಾದಗಿರಿ: ಮುಂಬರುವ ವಿಧಾನ ಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು ಆ ಅಧಿವೇಶನದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳು ತೆಗೆದುಕೊಂಡವರ ವಿರುದ್ದ ಕಾನೂನು ಕ್ರಮ ಆಗಬೇಕು ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆ ಆದ ಶಾಸಕರು ಅಧಿವೇಶನದಲ್ಲಿ ದ್ವನಿ ಎತ್ತಬೇಕು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.
ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆಯಾದ ಶಾಸಕರು ವಾಲ್ಮೀಕಿ ಸಮಾಜದ ಬೇಡಿಕೆಗಳಿಗೆ ಸ್ಪಂದನೆ ನೀಡದೆ ತಮ್ಮ ಮುಂದಿನ ರಾಜಕೀಯ ಬಹುಶಃ ಸಲುವಾಗಿ ನಮ್ಮ ಸಮಾಜಕ್ಕೆ ಅನ್ಯಾಯ ಎಸುಗುತ್ತಿದ್ದಾರೆ ಎಂದು ಸಚಿವರು ಹಾಗೂ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮಾಜದ ವಿವಿಧ ಬೇಡಿಕೆಗಳಾದ ಯಾದಗಿರಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಹತ್ತಿರ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಸಂಬಂಧಿಸಿದ ದಾಖಲಾತಿ ಇದ್ದರೂ ಕೂಡ ಎ ಖಾತಾ ಕೊಡಲು ಸಂಬಂಧಿಸಿದ ನಗರ ಸಭೆ ಅಧಿಕಾರಿಗಳು ನೀಡದೆ ಇರುವುದು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಆಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಮಾತನಾಡಿ ಯಾದಗಿರಿ ನಗರದಲ್ಲಿ ರಾಜ್ಯಾದ್ಯಂತ ನಕಲಿ ಪ್ರಮಾಣ ಪತ್ರಗಳು ವಿತರಣೆ ಆಗುತ್ತಿದ್ದು ಅದನ್ನು ಕೂಡಲೇ ತಡೆಯುವಂತೆ ಅಗಸ್ಟ್ ೧೩ ರಂದು ಯಾದಗಿರಿ ನಗರದಲ್ಲಿ ಬೃಹತ್ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮುಂಬರುವ ವಿಧಾನ ಸಭೆ ಅಧಿವೇಶನದಲ್ಲಿ ವಾಲ್ಮೀಕಿ ಸಮಾಜದ ಬೇಡಿಕೆಗಳ ಬಗ್ಗೆ ಚರ್ಚೆ ಆಗಬೇಕು ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಗಟ್ಟಲು ಸೂಕ್ತವಾದ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮುಖಂಡರಾದ ಸಿದ್ದಲಿಂಗಪ್ಪ ನಾಯಕ. ಚಂದ್ರಕಾಂತ ಹತ್ತಿಕುಣಿ. ಶರಣಪ್ಪ ಜಾಕನಹಳ್ಳಿ. ಗಂಗಾಧರ ನಾಯಕ. ದೊಡ್ಡಯ್ಯ ನಾಯಕ. ಅಂಬು ನಾಯಕ. ವಾಲ್ಮೀಕಿ ನಾಯಕ ಸಮಾಜದ ತಾಲೂಕ ಅಧ್ಯಕ್ಷರಾದ ಸಾಹೇಬ ಗೌಡ ನಾಯಕ ಗೌಡಗೇರ. ಶಹಪೂರ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ. ಸುರಪುರ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮನಗೌಡ. ಗುರಮಿಠಕಲ್ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕಾಶಪ್ಪ ನಾಯಕ. ಶೇಖರ ದೊರೆ. ಮಲ್ಲಿಕಾರ್ಜುನ ಕಟಕಟಿ. ಮಲ್ಲಿಕಾರ್ಜುನ ನಿಲಹಳ್ಳಿ. ಮೋನಪ್ಪ ಹಳಿಗೇರ. ಬಸವರಾಜ ಗೊಂದೆನೂರ. ನಾಗರಾಜ ಪ್ಯಾಪ್ಲಿ. ಚಂದಪ್ಪ ರಾಮಸಮುದ್ರ. ಬಸವರಾಜ ಹತ್ತಿಕುಣಿ. ಭೀಮರಾಯ ರಾಮಸಮುದ್ರ. ಸಿದ್ದಪ್ಪ ಕ್ಯಾಸಪನಳ್ಳಿ. ಲಕ್ಷ್ಮಣ ಜೀನಕೇರಿ. ಸಾಬು ನಿಲಹಳ್ಳಿ. ಪೋಲಪ್ಪ ನಿಲಹಳ್ಳಿ. ಈಶಪ್ಪ ಹೆಡಗಿಮದ್ರಿ. ರವಿ ಜಮಾದಾರ. ಕಾಶಿನಾಥ ನಾನೆಕ್. ಮಲ್ಲೇಶ ನಾಯಕ. ಮೋನಪ್ಪ ಯಾದಗಿರಿ. ಶಿವರಾಜ ಹವಲ್ದಾರ. ಬಂದಪ್ಪ ನಾಯಕ. ರವಿ ಹೊಸ್ಸಳ್ಳಿ. ರಮೇಶ ಯಾದಗಿರಿ. ಶ್ರೀನಿವಾಸ ಯಕ್ಷಂತಿ. ದೊಡ್ಡಪ್ಪ ನಾಯಕ. ರವಿಕುಮಾರ. ಅಂಬಣ್ಣ ಗೌಡಗೇರ. ಮಂಜುನಾಥ ಬಳಿಚಕ್ರ. ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಇದ್ದರೂ.

