ಸತ್ಯಕಾಮ ವಾರ್ತೆ ಸುರಪುರ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ರಂಗAಪೇಟಿಯ ಕನ್ನಡ ಸಾಹಿತ್ಯ ಸಂಘದ ೮೩ ನೇ ವರ್ಷದ ನಾಡ ಹಬ್ಬಕ್ಕೆ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ಭುವನೇಶ್ವರಿ ದೇವಿ ಮೂರ್ತಿಗೆ ಯಜ್ಙೇಶ್ವರ ಭಟ್ ಅವರು ನಾಡದೇವಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ವಿತರಿಸಿದರು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ್ವರ ವಾರದ್, ಕಾರ್ಯಾಧ್ಯಕ್ಷ ಶ್ರೀರಂಗಯ್ಯ ಮಿರಿಯಾಲ,ಉಪಾಧ್ಯಕ್ಷರಾದ ಯಂಕಣ್ಣ ಗದ್ವಾಲ್, ಸೋಮರಾಯ ಶಖಾಪುರ,ಶರಣಗೌಡ ಎಂ. ಪಾಟೀಲ್ ಜೈನಾಪುರ, ಪ್ರಧಾನ ಕಾರ್ಯದರ್ಶಿ ಮುದ್ದಪ್ಪ ಅಪ್ಪಾಗೋಳ,ಸಹ ಕಾರ್ಯದರ್ಶಿಗಳಾದ ಸಿದ್ದಯ್ಯ ಮಠ, ಪ್ರಕಾಶ ಆಲಬನೂರ, ಸಂಘಟನಾ ಕಾರ್ಯದರ್ಶಿ ಮಹಾದೇವಪ್ಪ ಗುತ್ತೇದಾರ್, ಖಜಾಂಚಿ ರವಿಕುಮಾರ ತ್ರಿವೇದಿ, ಹಿರಿಯ ಪತ್ರಕರ್ತ ಮಲ್ಲು ಗುಳಗಿ,ವೆಂಕಟೇಶ ಟೊಣಪೆ, ದಿಲೀಪ್ ಗೆಜ್ಜೆಲ್, ಭೀಮರಾಯ ಭಜಂತ್ರಿ,ಭಾಗಣ್ಣ ಹಸನಾಪುರ ಸೇರಿದಂತೆ ಇತರರಿದ್ದರು.

