ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು
Latest News

ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು

Satyakam NewsDesk
Last updated: 2024/08/22 at 9:32 PM
Satyakam NewsDesk
Share
2 Min Read
SHARE

ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ದೀಪದ ಕೆಳಗೆ ಕತ್ತಲು ಎಂಬಂತೆ ಬಯಲು ಶೌಚಮುಕ್ತ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾಡಳಿತ ಭವನದಲ್ಲೇ ಶೌಚಾಲಯಗಳ ಅವ್ಯವಸ್ಥೆ ಕಂಡು ಇಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪರದಾಡುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನದಲ್ಲಿರುವ ಶೌಚಾಲಯಗಳು ಇದ್ದರೂ ಇಲ್ಲದಂತಾಗಿದೆ, ಗ್ರಾಮೀಣ ಭಾಗದಿಂದ ನೂರಾರು ಜನರು ಸಮಸ್ಯೆಗಳನ್ನು ಹೊತ್ತುಕೊಂಡು ಇಲ್ಲಿಗೆ ಬರುತ್ತಾರೆ. ಸಮಸ್ಯೆ ಹೊತ್ತು ಬಂದ ಜನರಿಗೆ ಅಧಿಕಾರಿಗಳು ಸಭೆ, ಕಾರ್ಯಕ್ರಮ, ಅಧಿಕಾರಿಗಳ ನಡುವೆ ಚರ್ಚೆ ಎಂದು ಗಂಟೆಗಂಟಲೆ ಕಾಯಿಸುವ ವೇಳೆ ಸಾರ್ವಜನಿಕರು ತಮ್ಮ ನೈಸರ್ಗಿಕ ಬಾದೆ ತೀರಿಸಿಕೊಳ್ಳುವುದಕ್ಕೆ ಇಲ್ಲಿರುವ ಶೌಚಾಲಯದತ್ತ ಕಾಲಿಟ್ಟರೆ ಶೌಚಾಲಯದ ಅವ್ಯವಸ್ಥೆಯನ್ನು ಕಂಡು ಜಿಲ್ಲಾಡಳಿತಕ್ಕೆ ಛೀಮಾರಿ ಹಾಕುವಂತಾಗಿದೆ.

ಹೌದು. ಇಲ್ಲಿರುವ ಶೌಚಾಲಯಗಳನ್ನು ಬಳಸುವುದೇ ಕಷ್ಟವಾಗಿದ್ದೂ, ಪುರುಷರು ಬಳಸುವ ಕೆಲುವು ಶೌಚಾಲಯಗಳಲ್ಲಿ ನೀರಿನ ಪೈಪ್‌ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ, ಶೌಚದಲ್ಲಿ ಒಂದು ಕ್ಷಣ ಅದರ ಒಳಗೆ ನಿಲ್ಲಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಜನರು ಅನಿವಾರ್ಯವಾಗಿ ನೈಸರ್ಗಿಕ ಬಾಧೆಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ಬಂದಿದೆ.

ಭವನದಲ್ಲಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭಾಂಗಣದಲ್ಲಿರುವ ಶೌಚಾಲಯದಲ್ಲಿನ ಪುರುಷರ ಕೊಠಡಿಯಲ್ಲಿ ಟೈಲ್ಸ್ ಗಳು ಕಿತ್ತು ಹೋಗಿದ್ದರೇ, ಮೂರು ಅಂತಸ್ತಿನ ಬಿಲ್ಡಿಂಗ್ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಯ ಉಪಕರಣಗಳು ಮುರಿದು ಬಿದ್ದಿವೆ, ಅಲ್ಲದೇ ಮಲ ವಿಸರ್ಜನೆ ಮಾಡಲು ಹೋದರೆ ಸರಿಯಾದ ಸ್ವಚ್ಚತೆ ಇಲ್ಲಾ, ಶೌಚಾಲಯ ಉಪಯೋಗಿಸಿದ ಬಳಿಕ ಕೈ ತೊಳೆಯಲು ಸಿಂಕ್ ಬಳಿ ಬಂದರೆ ಅದರಲ್ಲಿ ನಳಗಳೇ ಇಲ್ಲಾ. ಇವುಗಳ ಬಗ್ಗೆ ಅಧಿಕಾರಿಗಳ ಗಮನಿಕಿದ್ದರೂ ಯಾವೊಬ್ಬರು ಅತ್ತ ಕಡೆ ಹೋಗುವುದಿಲ್ಲ.

ಜನರಿಗೆ ಸ್ವಚ್ಛದ ಬಗ್ಗೆ ನೀತಿ ಪಾಠವೇಳುವ ಜಿಲ್ಲಾಡಳಿತವೇ ಇಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಊರ ಸ್ವಚ್ಛತೆಯನ್ನು ಹೇಗೆ ನಿರ್ವಹಿಸಲು ಸಾಧ್ಯವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

ಜಿಲ್ಲಾ ಕೇಂದ್ರದ ಪ್ರಮುಖ ಆಡಳಿತ ಕಚೇರಿಯಲ್ಲೇ ಶೌಚಾಲಯಗಳು ಹೀಗಿರಬೇಕಾದರೆ, ತಾಲ್ಲೂಕು ಕೇಂದ್ರಗಳ ಕಚೇರಿಯಲ್ಲಿ ಹೇಗಿರಬಹುದೆಂಬುದನ್ನು ನೀವೇ ಊಹಿಸಿಕೊಳ್ಳಿ. ಇದರ ನಿರ್ವಹಣೆಗಾಗಿ ಪ್ರತಿ ವರ್ಷ ಲಕ್ಷಗಟ್ಟಲೇ ಹಣವನ್ನು ಮಿಸಲಿಡಲಾಗುತ್ತದೆ, ಆದರೆ ಇದರ ಅನುದಾನವನ್ನು ಬಳಕೆ ಮಾಡದೇ ಗುತ್ತಿಗೆದಾರನ ಜೇಬಿಗೆ ಬಿದ್ದೀರಬಹುದಾ ಎಂಬ ಅನುಮಾನ ಕಾಡತೊಡಗಿದೆ.

ಹಿರಿಯ ಅಧಿಕಾರಿಗಳ ಶೌಚಾಲಯ ಸ್ವಚ್ಛತೆ ಹಾಗೂ ಪ್ರತಿ ವರ್ಷ ನಿರ್ವಹಣೆ ಮಾಡಲಾಗುತ್ತದೆ, ಆದರೆ ಸಭಾಂಗಣದಲ್ಲಿನ ಶೌಚಾಲಯಗಳು ಹಲವು ವರ್ಷಗಳಿಂದ ನಿರ್ವಹಣೆ ಕಾಣದೇ ಸೊರಗಿದೆ. ಮಾದರಿಯಾಗಬೇಕಿದ್ದ ಜಿಲ್ಲಾಡಾಳಿತ ಭವನದಲ್ಲಿಯೇ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿದ್ದೂ ದುರ್ದೈವೇ ಸರಿ.

ನಿತ್ಯದ ಕಚೇರಿ ವ್ಯವಹಾರಕ್ಕೆ ಆಗಮಿಸುವ ಗ್ರಾಮೀಣ ಜನತೆಗೆ ಇದರ ಗೋಳು ಹೇಳತೀರದಾಗಿದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಸಾರ್ವಜನಿಕರಿಗೆ ಶೌಚಾಲಯಗಳ ಸಮರ್ಪಕ ವ್ಯವಸ್ಥೆ ಮಾಡುವಲ್ಲಿ ಮುಂದಾಗವರಾ ಎಂಬುದು ಕಾಲವೇ ಉತ್ತರಿಸಲಿದೆ.

apvc-iconTotal Visits: 169
apvc-iconAll time total visits: 25331

You Might Also Like

ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

Satyakam NewsDesk August 22, 2024 August 22, 2024
Share This Article
Facebook Twitter Whatsapp Whatsapp Telegram Copy Link Print
Share
Previous Article ಸರ್ಕಾರಿ ವೈದ್ಯನ ಸೇವೆ ಮರೀಚಿಕೆ;‌ ಸಂಬಳಕ್ಕೆ ಹಾಜರ್-ಕೆಲಸಕ್ಕೆ ಗೈರು..!
Next Article ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

Stay Connected

Facebook Like
Twitter Follow
Instagram Follow
Youtube Subscribe

Latest News

ಗ್ಯಾರಂಟಿ ಯೋಜನೆಗಳಿಂದ ಜನ ಸಂತೃಪ್ತರಾಗಿದ್ದಾರೆ- ಬಾಬುರಾವ್ ಚಿಂಚನಸೂರು
Politics September 7, 2025
ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು
Crime September 7, 2025
ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ
Latest News September 6, 2025
ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್
Latest News August 30, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube