ಗುಣಮಟ್ಟದ ಕೆಲಸದೊಂದಿಗೆ ನಿಗದಿತ ಅವಧಿಯಲ್ಲಿ ಮುಗಿಸಿ: ಶಾಸಕ ಪಾಟೀಲ್ ಸೂಚನೆ

ಸತ್ಯಕಾಮ ವಾರ್ತೆ ಯಾದಗಿರಿ:

ಗುಣಮಟ್ಟ ಕಾಮಗಾರಿ ಆಗಬೇಕು ಮತ್ತು ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ 3.48 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಕುರಕುಂದಾದಲ್ಲಿ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಸತಿ ನಿಲಯಗಳ ಕಟ್ಟಡಗಳ ಬೇಡಿಕೆ ಬಹುದಿನಗಳಿಂದಲ್ಲೂ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಬರುವ ದಿನಗಳಲ್ಲಿ ಉತ್ತಮ ಕಟ್ಟಡಗಳು ಈ ಗ್ರಾಮ ಹೊಂದಲಿದೆ ಎಂದರು.

ರಾಜ್ಯದ ಸಮಗ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಅದರಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ವಿಶೇಷ ಕಾಳಜಿ ಹೊಂದಿದೆ ಎಂದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್. ಸೂಗುರೆಡ್ಡಿ ಮಾತನಾಡಿ, ಶಾಸಕರ ಕಾಳಜಿ ಮತ್ತು ಸತತ ಪ್ರಯತ್ನದ ಫಲವಾಗಿ ಈ ಕೆಲಸ ಕಾರ್ಯರೂಪಕ್ಕೆ ಬರುತ್ತಿದೆ. ನಿಗದಿತ ಅವಧಿಯೊಳಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದೆಂದು ಹೇಳಿದರು.

ಕಾರ್ಯಕ್ರಮದಲ್ಲಿ EO ಮಲ್ಲಿಕಾರ್ಜುನ ಸಂಗವಾರ ವಡಗೇರಾ, ತಾಲೂಕ ಆರೋಗ್ಯ ಅಧಿಕಾರಿ ರಮೇಶ ಗುತ್ತೇದಾರ, ಖಾಜಾ ಮೊನುದ್ದಿನ್ ಮಿರ್ಚಿ,ಸಾಬಣ್ಣ ಗುಂಜನೂರ್, ಬನಪ್ಪ, ಶೂಪುತ್ರಪ್ಪ ಪದ್ದಿ, ರಾಮಲಿಂಗ ಕುದರೆ, ಶರಣಬಸಪ್ಪ, ದೇವಪ್ಪ ವಟ್ಟ, ಕಾಸಿಮ್ ಮುತ್ಯಾ, ಕುರುಕುಂದಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಮುದ್ದಮ್ಮ ಗುಡುಸಾಬ, ಕುರಕುಂದಾ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಲ್ಲಪ್ಪ ಹಣಮಂತ ಇದ್ದರು.

apvc-iconPost Views: 60

Comments

Leave a Reply

Your email address will not be published. Required fields are marked *