ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
Crime

Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

Satyakam NewsDesk
Last updated: 2025/10/23 at 9:18 PM
Satyakam NewsDesk
Share
3 Min Read
SHARE

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ವಿವಾದದ ಕೇಂದ್ರಬಿಂದುವಾಗಿದೆ. ಮನರಂಜನೆ, ಡ್ರಾಮಾ ಮತ್ತು ಸಂವಾದಗಳೊಂದಿಗೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಈ ಕಾರ್ಯಕ್ರಮ ಈಗ ಕಾನೂನು ಗೋಜಿಗೆ ಸಿಲುಕಿದೆ. ಸ್ಪರ್ಧಿಗಳ ನಡುವೆ ನಡೆದ ಒಂದು ಘಟನೆ, ಆಡಿದ ಮಾತು, ಬಳಸಿದ ಪದ ಬಳಕೆ ಮತ್ತು ಅದರ ಪರಿಣಾಮವಾಗಿ ಉಂಟಾದ ಸಾಮಾಜಿಕ ಪ್ರತಿಕ್ರಿಯೆ ಇವೆಲ್ಲದರ ಹಿನ್ನೆಲೆ ಈಗ ಚರ್ಚೆಗೆ ಗ್ರಾಸವಾಗಿದೆ.

ಅಶ್ವಿನಿ ಗೌಡ ವಿರುದ್ಧ ದೂರು ದಾಖಲು:

ಬಿಗ್‌ ಬಾಸ್‌ನ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಬಿಗ್‌ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುವಾಗ “She is S… ಆ ಕ್ಯಾಟೆಗರಿ‌ನವರು” ಎಂಬ ಪದಬಳಕೆ ಮಾಡಿರುವುದು ವ್ಯಕ್ತಿತ್ವ ನಿಂದನೆಯಾಗಿದೆ ಎಂದು ಆರೋಪಿಸಲಾಗಿದೆ.

ದೂರಿನಲ್ಲಿ ಅಶ್ವಿನಿ ಗೌಡ ಅವರೊಂದಿಗೆ ಕಲರ್ಸ್ ಕನ್ನಡ ಚಾನೆಲ್‌ನ ವ್ಯವಹಾರ ಮುಖ್ಯಸ್ಥ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ, ಹಾಗೂ ಡೈರೆಕ್ಟರ್ ಪ್ರಕಾಶ್ ಅವರ ಮೇಲೂ ಆರೋಪ ಹೊರಿಸಲಾಗಿದೆ. ಆರೋಪದಂತೆ, ಈ ರೀತಿಯ ನಿಂದನಾತ್ಮಕ ಪದಗಳನ್ನು ಸಂಪಾದನೆ ಮಾಡದೆ ಪ್ರಸಾರ ಮಾಡುವ ಮೂಲಕ ಚಾನೆಲ್ ಸಾಮಾಜಿಕ ಜವಾಬ್ದಾರಿಯನ್ನು ಉಲ್ಲಂಘಿಸಿದೆ. ಬಿಡದಿ ಪೊಲೀಸರು ಈ ಕುರಿತು ದೂರು ಸ್ವೀಕರಿಸಿ, ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ ಅಂದರೆ ಇದು ಗಂಭೀರವಲ್ಲದ ಪ್ರಕರಣ ಎಂದು ಗುರುತಿಸಲಾಗಿದೆ.

ದೂರಿನ ವಿಷಯವೇನು?: 

ದೂರಿನಲ್ಲಿ ಉಲ್ಲೇಖಿಸಿರುವಂತೆ, ಬಿಗ್‌ ಬಾಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಗೌಡ ಅವರು ಬಳಸಿದ “S Category” ಎಂಬ ಪದ ಜಾತಿ ನಿಂದನೆ ಹಾಗೂ ವ್ಯಕ್ತಿತ್ವ ಹಾನಿಗೆ ಕಾರಣವಾಗುವಂತದ್ದು. ಈ ಪದ ಬಳಕೆ ಕೇವಲ ವ್ಯಕ್ತಿಗಷ್ಟೇ ಅಲ್ಲ, ಸಮಾಜದ ಕೆಲವು ವರ್ಗಗಳಿಗೂ ನೋವುಂಟುಮಾಡುತ್ತದೆ ಎಂಬ ಆರೋಪ ಇದೆ.

ದೂರುದಾರ ಪ್ರಶಾಂತ್ ಮೆತಾಲ್ ಅವರ ಪ್ರಕಾರ, “ಇಂತಹ ಪದಗಳು ಸಾರ್ವಜನಿಕವಾಗಿ ಪ್ರಸಾರವಾಗುವುದರಿಂದ ಸಮಾಜದಲ್ಲಿ ತಪ್ಪು ಸಂದೇಶ ಹರಡುತ್ತದೆ ಮತ್ತು ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಉದ್ದೇಶದಿಂದ ಈ ಭಾಗವನ್ನು ತೆಗೆಯದೆ ಪ್ರಸಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ರಕ್ಷಿತಾ ಶೆಟ್ಟಿ ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದಾಗ, ಜಾಹ್ನವಿ ಮತ್ತು ಅಶ್ವಿನಿ ಗೌಡ ಫನ್ ಮಾಡಲು ಗೆಜ್ಜೆ (anklet) ಹಿಡಿದು ಅಲ್ಲಾಡಿಸಿದರೆಂದು ಹೇಳಲಾಗಿದೆ. ನಂತರ ಮನೆಯವರು ಯಾರು ಎಂದು ಕೇಳಿದಾಗ, ಇಬ್ಬರೂ ಅದು ರಕ್ಷಿತಾ ಮಾಡಿದ ಕೆಲಸ ಎಂದು ಸುಳ್ಳು ಹೇಳಿದ್ದಾರೆ.

ಈ ವಿಷಯಕ್ಕೆ ಕೋಪಗೊಂಡ ರಕ್ಷಿತಾ ಇಬ್ಬರನ್ನೂ ಪ್ರಶ್ನಿಸಿದಾಗ ವಾಗ್ವಾದ ಉಂಟಾಯಿತು. ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪದೆ ಗಲಾಟೆ ಮುಂದುವರಿಸಿದರು.

ಮರುದಿನ ಬೆಳಗ್ಗೆ, ಅಶ್ವಿನಿ ಗೌಡ ಜಾಹ್ನವಿಯೊಂದಿಗೆ ಮಾತನಾಡುತ್ತಿದ್ದ ವೇಳೆ, ರಕ್ಷಿತಾಳ ಬಗ್ಗೆ “She is S… ಆ ಕ್ಯಾಟೆಗರಿಯವಳು” ಎಂದು ಹೇಳಿದ್ದು ಕ್ಯಾಮೆರಾದಲ್ಲಿ ಸೆರಿಯಾಗಿದೆ.

ಸಾಮಾಜಿಕ ಪ್ರತಿಕ್ರಿಯೆ :

ಈ ಘಟನೆ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಅಶ್ವಿನಿ ಗೌಡ ವಿರುದ್ಧ ಟೀಕೆಗಳ ಮಳೆ ಸುರಿಯುತ್ತಿದ್ದು, ಕೆಲವು ವೀಕ್ಷಕರು ಅವರ ಮಾತುಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ನಿಂದನೆ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಬಿಗ್‌ ಬಾಸ್ ತಂಡದ ಸಂಪಾದನೆ ಮತ್ತು ಪ್ರಸಾರದ ನೀತಿಗಳನ್ನು ಪ್ರಶ್ನಿಸುತ್ತಿದ್ದಾರೆ.

ಇನ್ನು, ಈ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಶ್ವಿನಿ ಗೌಡ ಅಥವಾ ಚಾನೆಲ್ ಪರವಾಗಿ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಬಿಗ್‌ ಬಾಸ್ ಮನೆಯ ಮನರಂಜನೆ ಈಗ ವಿವಾದದ ಗೂಡಿನಲ್ಲಿ ಸಿಲುಕಿದೆ. ಶಿಸ್ತಿನ ಅಭಾವ ಕಾನೂನು ಗೊಂದಲಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯ ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದು ಕಾದು ನೋಡಬೇಕಾಗಿದೆ.

apvc-iconTotal Visits: 2
apvc-iconAll time total visits: 30198

You Might Also Like

ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ

ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ : ಬಾಕಿ ಉಳಿದ ಕಡತಗಳ ಪರಿಶೀಲನೆ 

TAGGED: Ashwini Gowda, Bidadi Police Station, Big Boss, Big Boss 12 Kannada, Bigg Boss Season 12 controversy
Satyakam NewsDesk October 23, 2025 October 23, 2025
Share This Article
Facebook Twitter Whatsapp Whatsapp Telegram Copy Link Print
Share
By Satyakam NewsDesk
Follow:
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
Previous Article ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:
Next Article IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ

Stay Connected

Facebook Like
Twitter Follow
Instagram Follow
Youtube Subscribe

Latest News

IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ
Latest News October 23, 2025
ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:
Technology October 23, 2025
ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ
Latest News October 23, 2025
Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!
Sports October 22, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube