Category: Technology

Modern technology has become a total phenomenon for civilization, the defining force of a new social order in which efficiency is no longer an option but a necessity imposed on all human activity.

  • ಬೆಂಗಳೂರು ಮೆಟ್ರೋಗೆ ದೇಶದ ಮೊದಲ ‘ಮೇಡ್‌ಇನ್‌ಇಂಡಿಯಾ’ ಚಾಲಕರಹಿತ ರೈಲು

    ಬೆಂಗಳೂರು ಮೆಟ್ರೋಗೆ ದೇಶದ ಮೊದಲ ‘ಮೇಡ್‌ಇನ್‌ಇಂಡಿಯಾ’ ಚಾಲಕರಹಿತ ರೈಲು

    ಬೆಂಗಳೂರು ಮೆಟ್ರೋಗೆ ಹೊಸ ಯುಗವನ್ನೇ ತೆರೆದಂತೆ, ಮೊದಲ “ಮೇಡ್‌ ಇನ್ ಇಂಡಿಯಾ” ಚಾಲಕರಹಿತ ಮೆಟ್ರೋ ರೈಲು ಬಳಕೆಗೆ ಸಿದ್ಧವಾಗಿದೆ. ಬಿಇಎಂಎಲ್ ತಯಾರಿಸಿರುವ ಈ ಫ್ಯೂಚರಿಸ್ಟಿಕ್ ಟ್ರೈನ್ ನೇರವಾಗಿ ಪಿಂಕ್‌ ಲೈನ್‌ಗಾಗಿ ರೂಪುಗೊಳ್ಳುತ್ತಿದ್ದು, 2027ರ ಮೇ ನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಸಜ್ಜಾಗಲಿದೆ. ಭಾರತದ ನೆಲದಲ್ಲೇ ನಿರ್ಮಾಣವಾದ ಮೊದಲ ಸಂಪೂರ್ಣ ಚಾಲಕರಹಿತ ಮೆಟ್ರೋ ಅನ್ನೋ ವಿಶೇಷತೆ ಇದಕ್ಕೆ ಮತ್ತಷ್ಟು ಮೌಲ್ಯ ನೀಡಿದೆ.

    ಇದು 6 ಬೋಗಿಗಳ ಮೃದುವಾದ, ಶಬ್ದರಹಿತ ಮತ್ತು ರೈಲು. ರೈಲಿನ ಬಾಡಿ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಾಗಿದ್ದು ಗಟ್ಟಿತನ, ದೀರ್ಘಾವಧಿ ಮತ್ತು ಸುರಕ್ಷತೆ ಎಂಬ ಮೂರು ಗುಣಗಳನ್ನು ಒಂದೇ ವೇಳೆ ಒದಗಿಸುತ್ತದೆ. ಒಳಗೆ ವಿಶಾಲ ಗ್ಯಾಂಗ್‌ವೇ, USB ಚಾರ್ಜರ್‌, ಆರಾಮದಾಯಕ ಆಸನಗಳು ಎಲ್ಲವೂ ಪ್ರಯಾಣಿಕರು ಸುಲಭವಾಗಿ ಸಂಚರಿಸೋಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. 2026ರ ಮಧ್ಯಭಾಗದಲ್ಲೇ ಕಾಳೇನ ಅಗ್ರಹಾರ ತಾವರೆಕೆರೆ 7.5 ಕಿಮೀ ಮಾರ್ಗದಲ್ಲಿ ಟ್ರಯಲ್‌ ರನ್ ಆರಂಭವಾಗಲಿದ್ದು, ನಂತರ ಹಂತ ಹಂತವಾಗಿ ಸಂಪೂರ್ಣ ಪಿಂಕ್ ಲೈನ್ ತೆರೆಯಲಾಗುತ್ತದೆ.

    ಈ ರೈಲಿನ ಪ್ರಮುಖ ‘ಹೈಲೈಟ್’ ಎಂದರೆ GoA4 ತಂತ್ರಜ್ಞಾನ ಚಾಲಕರಿಲ್ಲದ ಸಂಪೂರ್ಣ ಆಟೋಮೇಟೆಡ್‌ ಮೆಟ್ರೋ ವ್ಯವಸ್ಥೆ. ರೈಲು ಎಲ್ಲಿ ಹೋದರೂ, ಎಷ್ಟು ವೇಗದಲ್ಲಿ ಓಡಿದರೂ, ಯಾವ ಸ್ಟೇಷನ್‌ನಲ್ಲಿ ನಿಲ್ಲಬೇಕಾದರೂ… ಎಲ್ಲವನ್ನೂ ದೂರದಲ್ಲಿರುವ ಕಂಟ್ರೋಲ್ ರೂಮ್‌ ನಿರ್ವಹಿಸುತ್ತದೆ. ರೈಲು ಚಲಿಸುವುದು, ಬ್ರೇಕ್ ಹಾಕುವುದು, ಬಾಗಿಲು ತೆರೆದು ಮುಚ್ಚುವುದು ಈ ಎಲ್ಲ ಪ್ರಕ್ರಿಯೆಗಳೂ ಸಿಸ್ಟಮ್‌ನಲ್ಲೇ ಪ್ರೋಗ್ರಾಮಿಂಗ್ ಆಗಿರುತ್ತವೆ. ‘CBTC’ ಎಂಬ ಅತ್ಯಾಧುನಿಕ ಕಮ್ಯುನಿಕೇಶನ್‌ ಆಧಾರಿತ ತಂತ್ರಜ್ಞಾನ ರೈಲಿನ ನಿಖರ ಸ್ಥಳದ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಟ್ರ್ಯಾಕ್ ಮಾಡುತ್ತಾ, ಸಂಪೂರ್ಣ ವ್ಯವಸ್ಥೆಯನ್ನು ಸುರಕ್ಷಿತವಾಗಿ ನಡೆಸುತ್ತದೆ.

    ಸುರಕ್ಷತೆಯ ವಿಷಯಕ್ಕೆ ಬಂದರೆ, ಚಾಲಕರಿಲ್ಲದ ರೈಲು ಎಂದೇನೂ ಭಯಪಡುವ ಅಗತ್ಯವಿಲ್ಲ. ಈ ಹೊಸ ಮೆಟ್ರೋ ಒಳಗೆ ಮತ್ತು ಹೊರಗೆ ಅನೇಕ ಸೆನ್ಸರ್‌ಗಳು ಕೆಲಸ ಮಾಡುತ್ತವೆ. ಹಳಿಯ ಮೇಲೆ ಯಾವುದಾದರೂ ಅಡೆತಡೆ ಕಂಡರೂ, ಬೆಂಕಿ ಅಥವಾ ತಾಂತ್ರಿಕ ವ್ಯತ್ಯಯ ಎದುರಾದರೂ, ಸಿಸ್ಟಮ್ ತಕ್ಷಣ ಸ್ಪಂದಿಸಿ ರೈಲನ್ನು ನಿಲ್ಲಿಸುವ ವ್ಯವಸ್ಥೆ ಇದೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್‌ ರೂಂ ಜೊತೆ ನೇರವಾಗಿ ಮಾತನಾಡಲು ಪ್ಯಾಸೆಂಜರ್‌ ಅಲಾರ್ಮ್ ಸಾಧನವನ್ನು ಕೂಡ ನೀಡಲಾಗಿದೆ. ಜೊತೆಗೆ ರೈಲು ಸಂಪೂರ್ಣವಾಗಿ ಸಿಸಿಟಿವಿ ನಿಗಾವಿಡಿಯಲ್ಲಿ ಇರುತ್ತದೆ. ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ಗಳು ಮತ್ತು ರೈಲಿನ ಬಾಗಿಲುಗಳ ಸಿಂಕ್ರೊನೈಜೇಶನ್‌ ಅಪಘಾತಗಳನ್ನು ಮುಂಚೆಯೇ ತಡೆಯುತ್ತದೆ.

    ಬಿಇಎಂಎಲ್ ನಿರ್ಮಿಸಿರುವ ಈ ಟ್ರೈನ್‌ ಕೇವಲ ತಾಂತ್ರಿಕ ಸಾಧನೆ ಮಾತ್ರವಲ್ಲ, ಇದು ಭಾರತದಲ್ಲಿ ಮೆಟ್ರೋ ತಂತ್ರಜ್ಞಾನ ಸ್ವಾವಲಂಬನ್ಯದ ಹೆಜ್ಜೆಗುರುತು. ದೆಹಲಿಯ ಕೆಲವು ಮಾರ್ಗಗಳಲ್ಲಿ ಆಗಲೇ ಡ್ರೈವರ್‌ಲೆಸ್‌ ಮೆಟ್ರೋ ಓಡುತ್ತಿದರೂ, ದೇಶೀಯವಾಗಿ ನಿರ್ಮಿತ ಪೂರ್ಣ ಚಾಲಕರಹಿತ ರೈಲನ್ನು ಮೊದಲಬಾರಿಗೆ ಬೆಂಗಳೂರು ಸ್ವಾಗತಿಸಲಿದೆ. ಮೆಟ್ರೋ ಸೇವೆಯ ವೇಗ, ಸುರಕ್ಷತೆ, ಮತ್ತು ಪ್ರಯಾಣದ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಈ ರೈಲು, ನಗರದ ಭವಿಷ್ಯದ ಸಾರಿಗೆ ವ್ಯವಸ್ಥೆಯ ನಕಲಿ ಬದಲಾವಣೆಯ ಸಂಕೇತವಾಗಿಯೇ ಕಾಣುತ್ತಿದೆ.

  • ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಫೋನ್‌ ಮೂಲಕ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ!

    ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಫೋನ್‌ ಮೂಲಕ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ!

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಈಗ ಪ್ರಯಾಣ ಇನ್ನಷ್ಟು ಸುರಕ್ಷಿತವಾಗಲಿದೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಲು ರಿಲಯನ್ಸ್‌ ಜಿಯೋ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಜೋಡಿಸಿ ಹೊಸ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭಿಸಲು ಮುಂದಾಗಿವೆ. ದೇಶದಾದ್ಯಂತ 4G ಮತ್ತು 5G ನೆಟ್‌ವರ್ಕ್ ಬಳಸುವ ಜಿಯೋ ಗ್ರಾಹಕರಿಗೆ, ತಮ್ಮ ವಾಹನವು ಅಪಾಯಕಾರಿ ಪ್ರದೇಶವನ್ನು ಸಮೀಪಿಸಿದ ಕ್ಷಣದಲ್ಲೇ ನೇರವಾಗಿ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ತಲುಪುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.

    ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ ಒಂದೇ ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರು ಅಪಾಯದ ಪ್ರದೇಶಕ್ಕೆ ತಲುಪುವ ಮುಂಚಿತವಾಗಿಯೇ ಮಾಹಿತಿ ಪಡೆದು ಎಚ್ಚರಿಕೆಯಿಂದ ಸಾಗಲು ಅವಕಾಶ ಒದಗಿಸುವುದು. ಹೆದ್ದಾರಿಯ ಕೆಲವೆಡೆ ದಟ್ಟ ಮಂಜು ಆವರಿಸಿರಬಹುದು, ಕೆಲವೆಡೆ ಜಾನುವಾರುಗಳು ರಸ್ತೆ ದಾಟುವುದು ಸಾಮಾನ್ಯ, ಕೆಲವು ಭಾಗಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ, ಮತ್ತೆ ಕೆಲವೊಂದು ಮಾರ್ಗಗಳಲ್ಲಿ ಧಿಡೀರ್‌ ತಿರುವುಗಳು ಮತ್ತು ಡೈವರ್ಶನ್‌ಗಳು ಚಾಲಕರನ್ನು ಗೊಂದಲಕ್ಕೊಳಪಡಿಸುತ್ತವೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ, ಜಿಯೋ ಟವರ್‌ಗಳ ಮೂಲಕ ನೇರವಾಗಿ ಆ ಪ್ರದೇಶದ ಮಾಹಿತಿ ಗ್ರಾಹಕರ ಫೋನ್‌ಗೆ ತಲುಪಲಿದೆ.

    ಈ ಎಚ್ಚರಿಕೆಗಳು ಎಸ್‌ಎಂಎಸ್‌, ವಾಟ್ಸಾಪ್‌ ಸಂದೇಶ ಮತ್ತು ಹೈ ಪ್ರಿಯಾರಿಟಿ ವಾಯ್ಸ್ ಕಾಲ್‌ಗಳ ರೂಪದಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವೆಂದರೆ, ನೆಟ್‌ವರ್ಕ್‌ ಸಮಸ್ಯೆಯಿರುವ ಪ್ರದೇಶಗಳಲ್ಲಿದ್ದರೂ ಈ ಅಲರ್ಟ್‌ಗಳು ತಲುಪುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎನ್ನುವುದು ಗಮನಾರ್ಹ ಸಂಗತಿ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಈ ವ್ಯವಸ್ಥೆಗೆ ಹೊಸ ಹಾರ್ಡ್‌ವೇರ್‌ ನಿರ್ಮಾಣದ ಅಗತ್ಯವಿಲ್ಲ; ಜಿಯೋ ಈಗಾಗಲೇ ಹೊಂದಿರುವ ಟೆಲಿಕಾಂ ಟವರ್‌ಗಳ ನೆಟ್‌ವರ್ಕ್‌ನನ್ನೇ ಬಳಸಲಾಗುತ್ತಿದೆ. ಜೊತೆಗೆ ‘ರಾಜಮಾರ್ಗಯಾತ್ರಾ’ ಆಪ್ ಮತ್ತು 1033 ತುರ್ತು ಸಹಾಯವಾಣಿ ಸಂಖ್ಯೆಯೊಂದಿಗೆ ಕೂಡ ಈ ಅಲರ್ಟ್‌ಗಳನ್ನು ಹಂತ ಹಂತವಾಗಿ ನೀಡಲಾಗುತ್ತದೆ.

    ತೊಂದರೆಗಳು ಹೆಚ್ಚು ಇರುವ ಹೆದ್ದಾರಿ ಸೆಕ್ಷನ್‌ಗಳಲ್ಲಿ ಸಂಚರಿಸುವ ಎಲ್ಲ ಜಿಯೋ ಬಳಕೆದಾರರಿಗೆ ಸ್ವಯಂಚಾಲಿತವಾಗಿ ಈ ಎಚ್ಚರಿಕೆಗಳು ತಲುಪುತ್ತವೆ. ದೇಶದಲ್ಲಿ 50 ಕೋಟಿಗೂ ಹೆಚ್ಚು ಜನರು ಜಿಯೋ ಬಳಕೆ ಮಾಡುತ್ತಿರುವುದರಿಂದ, ಈ ವ್ಯವಸ್ಥೆ ವ್ಯಾಪಕ ಮಟ್ಟದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಮೊದಲ ಹಂತದಲ್ಲಿ ಆಯ್ದ ಹೆದ್ದಾರಿಗಳಲ್ಲಿ ಪೈಲಟ್‌ ಪ್ರಾಜೆಕ್ಟ್‌ ರೂಪದಲ್ಲಿ ಆರಂಭಿಸಿ, ನಂತರ ಪೂರ್ಣ ದೇಶಕ್ಕೆ ವಿಸ್ತರಿಸುವ ಯೋಜನೆ ಸಚಿವಾಲಯದ ಬಳಿ ಇದೆ ಎಂದು ತಿಳಿದುಬಂದಿದೆ.

    ದೆಶದ ಹೆದ್ದಾರಿಗಳನ್ನು ಸುರಕ್ಷಿತಗೊಳಿಸಲು ಟೆಲಿಕಾಂ ತಂತ್ರಜ್ಞಾನವನ್ನು ಈ ರೀತಿ ಉಪಯೋಗಿಸುವುದು ಹೊಸ ಪ್ರಯತ್ನ ಎನ್ನಬಹುದು. ಚಾಲಕರಿಗೆ ನೇರವಾಗಿ ಎಚ್ಚರಿಕೆ ನೀಡುವ ಈ ಕ್ರಮ, ದೂರ ಪ್ರಯಾಣ ಮಾಡುವವರಿಗೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡಲಿದೆ. ಜಿಯೋ–NHAI ಒಟ್ಟಿಗೆ ಹೆದ್ದಾರಿ ಸುರಕ್ಷತೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಜ್ಜಾಗಿವೆ ಎನ್ನಬಹುದು

  • ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈಹಿಕ-ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸಿವೆ. ಸಂವಹನ, ಆರ್ಥಿಕ ವಹಿವಾಟು, ವೈಯಕ್ತಿಕ ಮಾಹಿತಿ ಸಂಗ್ರಹಣೆ ಇವೆಲ್ಲವೂ ಸ್ಮಾರ್ಟ್‌ಫೋನ್ ಅವಲಂಬನೆಯ ಮೇಲೇ ನಿಂತಿದೆ. ಇದರಿಂದ ಸೈಬರ್ ಅಪರಾಧಗಳು, ಸಿಮ್ ಕಾರ್ಡ್ ದುರುಪಯೋಗ ಮತ್ತು ಡಿಜಿಟಲ್ ಟ್ರ್ಯಾಕಿಂಗ್‌ಗಳಂತಹ ಭದ್ರತಾ ಸವಾಲುಗಳು ವೇಗವಾಗಿ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲೇ ನಾಗರಿಕರ ಸುರಕ್ಷತೆ ಮತ್ತು ಮೊಬೈಲ್ ಜಾಲದ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಪರಿಚಯಿಸಿತ್ತು.

    ಆದರೆ, ಇತ್ತೀಚೆಗೆ ಈ ಆ್ಯಪ್‌ನ್ನು ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಪೂರ್ವ-ಸ್ಥಾಪನೆ (Pre-Install) ಮಾಡುವುದು ಕಡ್ಡಾಯ ಎಂದು ಸರ್ಕಾರದ ಆದೇಶ ಬಂದಿತ್ತು. ಇದರಿಂದ ರಾಜಕೀಯ ವಲಯದಿಂದ, ವಿಶೇಷವಾಗಿ ವಿರೋಧ ಪಕ್ಷಗಳಿಂದ, ತೀವ್ರ ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬಂದವು. ಮಾಹಿತಿ ಸ್ವಾತಂತ್ರ್ಯ, ನಾಗರಿಕರ ಗೌಪ್ಯತೆ, ಮತ್ತು ಸರ್ಕಾರದ ನಿಗಾವಹಿಸುವ ನೀತಿ ಬಗ್ಗೆ ಸಂಶಯ ವ್ಯಕ್ತವಾಗಿತ್ತು.

    ಈ ಹಿನ್ನೆಲೆಯಲ್ಲಿ ದೂರ ಸಂಪರ್ಕ ಇಲಾಖೆ (DoT) ಮಹತ್ವದ ಸ್ಪಷ್ಟನೆ ನೀಡಿದ್ದು, ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಈಗ ಕಡ್ಡಾಯವಲ್ಲ ಎಂದು ಘೋಷಿಸಿದೆ.

    ಸರ್ಕಾರದ ಅಭಿಪ್ರಾಯ ಏನು?

    ಸೈಬರ್ ಭದ್ರತೆ ಎಲ್ಲರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದಲೇ ಮೊದಲಿಗೆ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು DoT ಹೇಳಿದೆ. ಈ ಆ್ಯಪ್‌ನ ಮೂಲಕ,

    • ನಕಲಿ ಸಿಮ್ ಕಾರ್ಡ್‌ಗಳ ವಿರುದ್ಧ ಕ್ರಮ
    • ಮೊಬೈಲ್ ಕಳೆದುಹೋದರೆ ಹೊರತೆಗೆದುಕೊಳ್ಳುವ ವ್ಯವಸ್ಥೆ
    • ಸೈಬರ್ ಮೋಸಗಳನ್ನು ತಡೆಗಟ್ಟುವ ಮಾಹಿತಿ
    • ಇಂತಹ ಸೇವೆಗಳು ನಾಗರಿಕರಿಗೆ ಲಭ್ಯವಾಗುತ್ತವೆ.

    ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದೆ. ನಾಗರಿಕರನ್ನು ಸೈಬರ್ ದುಷ್ಟ ಶಕ್ತಿಗಳಿಂದ ಕಾಪಾಡುವ ಉದ್ದೇಶವಿದೆ ಎಂದು ಇಲಾಖೆ ತಿಳಿಸಿದೆ. ಸಮಾಜದ ವಿವಿಧ ವಲಯಗಳಲ್ಲಿ ಆ್ಯಪ್‌ ಸ್ವೀಕಾರ ಹೆಚ್ಚುತ್ತಿರುವುದನ್ನು ಗಮನಿಸಿ, ಸ್ಮಾರ್ಟ್‌ಫೋನ್ ತಯಾರಕರಿಗೆ ಪೂರ್ವ-ಸ್ಥಾಪನೆ ಕಡ್ಡಾಯದಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ.

    ವಿರೋಧ ಪಕ್ಷಗಳ ಆಕ್ಷೇಪಣೆ ಏನು?

    ವಿಪಕ್ಷಗಳು ಆ್ಯಪ್ ಮೂಲಕ ಜನರ ವೈಯಕ್ತಿಕ ಮಾಹಿತಿ ಸಂಗ್ರಹಣೆ, ದೈನಂದಿನ ಚಟುವಟಿಕೆಗಳ ಮೇಲಿನ ನಿಗಾ, ಸರ್ಕಾರದ ಗೂಢಚರ್ಯೆಗೆ ಅವಕಾಶ ಇತ್ಯಾದಿ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಈ ಒತ್ತಡದ ನಡುವೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

    ಸಂಚಾರ್ ಸಾಥಿ ಆ್ಯಪ್ ಬಳಕೆಯು ಸಂಪೂರ್ಣವಾಗಿ ಸ್ವಯಂಸೇವಾ (voluntary) ಆಗಿದ್ದು, ನಾಗರಿಕರು ತಮ್ಮ ಅಗತ್ಯ ಮತ್ತು ವಿಶ್ವಾಸ ಆಧಾರದಲ್ಲಿ ಡೌನ್‌ಲೋಡ್ ಮಾಡಿ ಬಳಸಿಕೊಳ್ಳಬಹುದು. ಡಿಜಿಟಲ್ ಭದ್ರತೆ ಹೆಚ್ಚಿಸುವ ಪ್ರಯತ್ನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ದಿಕ್ಕಿನಲ್ಲಿ ಈ ನಿರ್ಧಾರ ಪ್ರಮುಖ ಎನ್ನಲಾಗುತ್ತಿದೆ.

  • Jio–Google Offer:Gemini Pro AI Plan ಉಚಿತ!

    Jio–Google Offer:Gemini Pro AI Plan ಉಚಿತ!

    ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಜಗತ್ತಿನ ಪ್ರತಿಯೊಂದು ಕ್ಷೇತ್ರಕ್ಕೂ ಪ್ರವೇಶಿಸಿ ಕ್ರಾಂತಿಯನ್ನೇ ತಂದಿದೆ. ಸ್ಮಾರ್ಟ್‌ಫೋನ್‌ ಬಳಕೆ, ಶಿಕ್ಷಣ, ಮನರಂಜನೆ, ವ್ಯವಹಾರ, ಸಂಶೋಧನೆ ಯಾವ ಕ್ಷೇತ್ರವನ್ನೇ ನೋಡಿದರೂ ಎಐನ ಪ್ರಭಾವ ಅಚ್ಚರಿಯಂತೆ ಹೆಚ್ಚುತ್ತಿದೆ. ಭಾರತದಲ್ಲಿ 5G ಇಂಟರ್ನೆಟ್ ವ್ಯಾಪಕವಾಗುತ್ತಿರುವುದರಿಂದ, ಹೊಸ ತಲೆಮಾರಿನ ಯುವಕರು ತಂತ್ರಜ್ಞಾನವನ್ನು ಮತ್ತಷ್ಟು ಆಳವಾಗಿ ಬಳಸುವ ಅವಕಾಶವನ್ನು ಹುಡುಕುತ್ತಿದ್ದಾರೆ. ಇಂತಹ ಸಮಯದಲ್ಲಿ, ಭಾರತದ ಅತ್ಯಂತ ದೊಡ್ಡ ಡಿಜಿಟಲ್ ದೈತ್ಯಗಳಲ್ಲಿ ಒಂದಾದ ರಿಲಯನ್ಸ್ Jio, ದೇಶದ ಯುವಕರಿಗಾಗಿ ತಂತ್ರಜ್ಞಾನ ಲೋಕದಲ್ಲಿ ತಿರುಗುಬಾಣದಂತಹ ಹೊಸ ಯೋಜನೆಯನ್ನು ಘೋಷಿಸಿದೆ.

    ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಜನರ ಕೈಗೆ ತಲುಪಿಸುವ ಗುರಿಯೊಂದಿಗೆ, ರಿಲಯನ್ಸ್ ಮತ್ತು ಗೂಗಲ್ ಜೊತೆಯಾಗಿದ್ದು, 18 ತಿಂಗಳ ಕಾಲ 35,100 ರೂಪಾಯಿ ಮೌಲ್ಯದ Google Gemini Pro AI Plan ಅನ್ನು ಜಿಯೋ ಗ್ರಾಹಕರಿಗೆ ಉಚಿತವಾಗಿ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ. ಇದೊಂದು ದೇಶದ ಯುವಕರಿಗೆ ಸಿಗಬಹುದಾದ ಅತ್ಯಂತ ದೊಡ್ಡ ಡಿಜಿಟಲ್ ಗಿಫ್ಟ್ ಎಂದು ಹೇಳಬಹುದು.

    ಭಾರೀ ಪಾಲುದಾರಿಕೆ, ರಿಲಯನ್ಸ್ + ಗೂಗಲ್:

    ಅಕ್ಟೋಬರ್ 30ರಂದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ದೊಡ್ಡ ಮಟ್ಟದ ಎಐ ಸಹಕಾರವನ್ನು ಘೋಷಿಸುತ್ತಾ, ಭಾರತದಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸುವ ಗುರಿ ಹೊಂದಿವೆ. ಈ ಪಾಲುದಾರಿಕೆಯ ಮೂಲಕ Jio 5G ಬಳಕೆದಾರರಿಗೆ ಗೂಗಲ್‌ನ ಜೆಮಿನಿ ಪ್ರೊ ಸೇವೆಗಳನ್ನು ಉಚಿತ ಮಾಡಲು ನಿರ್ಧರಿಸಲಾಗಿದೆ.

    ಯಾರು ಈ ಆಫರ್ ಪಡೆಯಬಹುದು?:

    ಪ್ರಾರಂಭದಲ್ಲಿ 18 ರಿಂದ 25 ವರ್ಷದೊಳಗಿನ ಜಿಯೋ ಗ್ರಾಹಕರು.

    ನಂತರ ಎಲ್ಲಾ ಜಿಯೋ ಬಳಕೆದಾರರಿಗೆ ಹಂತ ಹಂತವಾಗಿ ವಿಸ್ತರಣೆ.

    5G ಅನ್ಲಿಮಿಟೆಡ್ ಪ್ಲಾನ್ ಹೊಂದಿರುವವರಿಗೆ ಮಾತ್ರ ಈ ಸದುಪಯೋಗ.

    18 ತಿಂಗಳು ಉಚಿತ, ಏನು ಸಿಗಲಿದೆ?:

    ಈ ಆಫರ್ ಮೌಲ್ಯ ಸುಮಾರು ₹35,100, ಮತ್ತು ಇದರಲ್ಲಿ ಒಳಗೊಂಡಿರುವವು,

    Google Gemini 2.5 Pro ಪ್ರವೇಶ.

    ಎಐ ಮೂಲಕ ಸಂಭ್ರಮದ ಮಟ್ಟದ ಚಿತ್ರಗಳು, ವಿಡಿಯೋಗಳು, ಕಂಟೆಂಟ್ ಕ್ರಿಯೇಷನ್, ಸಂಶೋಧನೆ, ಅಪ್ಲಿಕೇಶನ್ ಅಭಿವೃದ್ಧಿ.

    Nano, Banana, Vio 3.1 AI ಮಾದರಿಗಳಿಗೆ ಪ್ರವೇಶ.

    ಇವುಗಳ ಮೂಲಕ ಬಳಕೆದಾರರು ಹೆಚ್ಚು ನಿಖರವಾದ, ಸ್ಮಾರ್ಟ್ ಮತ್ತು ಸೃಜನಶೀಲ ಫಲಿತಾಂಶಗಳನ್ನು ಪಡೆಯಬಹುದು.

    Notebook LM – Advance Research Tools.

    ವಿದ್ಯಾರ್ಥಿಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳಿಗೆ ಹೈ-ಎಂಡ್ ಎಐ ನೋಟ್‌ಬುಕ್ ವ್ಯವಸ್ಥೆ.

    2TB Google Cloud Storage

    ಭಾರೀ ಫೈಲ್‌ಗಳು, ಡೇಟಾ, ಫೋಟೋ ವೀಡಿಯೊಗಳಿಗೆ ಸಾಕಷ್ಟು ಸಂಗ್ರಹಣೆ.

    ಎಐ ಮೂಲಕ 145 ಕೋಟಿಯವರಿಗೂ ಸೇವೆ, Mukesh Ambani:

    ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿರುವಂತೆ,  ಭಾರತದ 145 ಕೋಟಿ ಜನರಿಗೆ ಎಐ ಸೇವೆಗಳನ್ನು ತಲುಪಿಸುವುದು ನಮ್ಮ ಗುರಿ. ಗೂಗಲ್‌ನೊಂದಿಗೆ ಕೈಜೋಡಿಸುವ ಮೂಲಕ, ಭಾರತ ಎಐ ಮೂಲಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ.

    ಗೂಗಲ್ ಸಿಇಒ ಸುಂದರ್ ಪಿಚೈ ಮಾತನಾಡಿ, ರಿಲಯನ್ಸ್ ಜೊತೆಗಿನ ಈ ಹೊಸ ಎಐ ಸಹಯೋಗವು ಭಾರತದ ಡಿಜಿಟಲ್ ಭವಿಷ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಜಿಯೋ ಬಳಕೆದಾರರಿಗೆ ಗೂಗಲ್‌ನ ಅತ್ಯಾಧುನಿಕ ಎಐ ಪರಿಕರಗಳನ್ನು ತಲುಪಿಸುವುದು ದೊಡ್ಡ ಹೆಜ್ಜೆ.

    ಭಾರತ ಎಐ ಕೇಂದ್ರವಾಗುವ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ:

    ಭಾರತೀಯ ಕಂಪನಿಗಳಿಗೆ Tensor Processing Units (TPUs) ಪ್ರವೇಶ, ದೊಡ್ಡ ಎಐ ಮಾದರಿಗಳನ್ನು ರಚಿಸುವ ಮೂಲಸೌಕರ್ಯ, Gemini Enterprise ಬಳಕೆಯನ್ನು ಭಾರತೀಯ ವ್ಯವಹಾರಗಳಿಗೆ ವಿಸ್ತರಿಸುವ ಗುರಿಯಾಗಿದೆ.

    ರಿಲಯನ್ಸ್ ಇಂಟೆಲಿಜೆನ್ಸ್ ಈಗ Google Cloud Strategic Partner, ಆದ್ದರಿಂದ ಭಾರತದಲ್ಲಿ ಎಐ ಅಳವಡಿಕೆ ವೇಗವಾಗಿ ಹೆಚ್ಚಲಿದೆ.

  • ಬೆಂಗಳೂರಿನ ಸ್ವದೇಶಿ ಡ್ರೈವರ್‌ಲೆಸ್ ಕಾರಿಗೆ ಜನರು ಫುಲ್‌ ಫಿದಾ!

    ಬೆಂಗಳೂರಿನ ಸ್ವದೇಶಿ ಡ್ರೈವರ್‌ಲೆಸ್ ಕಾರಿಗೆ ಜನರು ಫುಲ್‌ ಫಿದಾ!

    ಬೆಂಗಳೂರು ಮತ್ತೊಮ್ಮೆ ತಂತ್ರಜ್ಞಾನದ ಮೂಲಕ ವಿಶ್ವದ ಗಮನವನ್ನು ಸೆಳೆದಿದೆ. ಚಾಲಕರಿಲ್ಲ, ಸ್ಟೇರಿಂಗ್‌ ವೀಲ್‌ ಇಲ್ಲ ಸಂಪೂರ್ಣ ಸ್ವಯಂಚಾಲಿತ ಕಾರು ನಗರದಲ್ಲಿ ಓಡಾಡಿದೆ! ವಿಪ್ರೋ–ಐಐಎಸ್‌ಸಿ ರಿಸರ್ಚ್ ಅಂಡ್‌ ಇನ್ನೋವೇಶನ್‌ ನೆಟ್‌ವರ್ಕ್‌ (VAIRIN) ನಿರ್ಮಿಸಿದ ಈ ಡ್ರೈವರ್‌ಲೆಸ್ ವಾಹನವನ್ನು ಆರ್‌ವಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭವ್ಯವಾಗಿ ಅನಾವರಣಗೊಳಿಸಿ ಚಾಲನೆ ನೀಡಲಾಯಿತು.

    ಈ ವಿಶೇಷ ಕ್ಷಣದಲ್ಲಿ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಕಾರಿನಲ್ಲಿ ಕುಳಿತು ಕ್ಯಾಂಪಸ್‌ ನಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದರು. ಕಾರಿನಲ್ಲಿ ಚಾಲಕನಿಲ್ಲದೆ, ಸ್ವಾಮೀಜಿಗಳು ಸುರಕ್ಷಿತವಾಗಿ ಸಂಚರಿಸುತ್ತಿರುವ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಡಿಲಿನಂತೆ ಹರಡುತ್ತಿದೆ. ಭಾರತದಲ್ಲೇ ತಯಾರಾದ ಸ್ವಯಂಚಾಲಿತ ತಂತ್ರಜ್ಞಾನಕ್ಕೆ ನೆಟ್ಟಿಗರು “ಇದು ನಮ್ಮ ಕೀರ್ತಿ!” ಎಂದು ಅಭಿನಂದನೆ ಸುರಿಸುತ್ತಿದ್ದಾರೆ.

    ಟೆಸ್ಲಾ ಆಟೋಪೈಲಟ್‌ ತಂತ್ರಜ್ಞಾನವು ಈಗಾಗಲೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ದೇಶೀಯ ಸಂಶೋಧನೆ ಮತ್ತು ಭಾರತೀಯ ತಂತ್ರಜ್ಞರು ನಿರ್ಮಿಸಿದ ಈ ವಾಹನವು, “ಇನ್ನು ನಾವು ಕೂಡ ಯಾರಿಗೂ ಕಡಿಮೆಯಲ್ಲ” ಎಂಬುದನ್ನು ಸಾಬೀತುಪಡಿಸಿದೆ. ಇದು ಕೇವಲ ಒಂದು ಪ್ರದರ್ಶನವಷ್ಟೇ ಅಲ್ಲ ಭಾರತದಲ್ಲಿ ಸ್ವಯಂಚಾಲಿತ ವಾಹನಗಳ ಭವಿಷ್ಯದ ಬಾಗಿಲು ತೆರೆದ ಕ್ಷಣವಾಗಬಹುದು. ಸಂಶೋಧಕರು ಈಗ ರಸ್ತೆಗಳ ಭದ್ರತೆ, ಪ್ರಯಾಣಿಕರ ಸುರಕ್ಷತೆ ಮತ್ತು ಸಾಫ್ಟ್‌ವೇರ್‌ ನಿಖರತೆಯ ಪರೀಕ್ಷೆಗಳನ್ನು ಮುಂದುವರೆಸಲಿದ್ದಾರೆ.

    ಈ ಕಾರಿನ ಯಶಸ್ಸು ಯುವ ಸಂಶೋಧಕರಿಗೆ ಪ್ರೇರಣೆ ನೀಡಿದಂತಾಗಿದೆ. “ಟೆಕ್ ನಗರ” ಎಂಬ ಹೆಸರು ಹೊಂದಿರುವ ಬೆಂಗಳೂರು ಮತ್ತೆ ತನ್ನ ಶಕ್ತಿ ತೋರಿಸಿದೆ. ಹೀಗಾಗಿ, ಭವಿಷ್ಯದಲ್ಲಿ ಭಾರತೀಯ ತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ದಿನಗಳು ಇನ್ನೂ ಸಮೀಪವಾಗಿವೆ ಎಂಬ ನಂಬಿಕೆಗಳು ಹೆಚ್ಚಾಗುತ್ತಿವೆ.

  • ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!

    ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!

    ಹಬ್ಬದ ಸೀಸನ್‌ ಕಳೆದ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ಕಳೆದ ಕೆಲವು ವಾರಗಳಿಂದ ಏರಿಳಿತ ಕಂಡ ಚಿನ್ನದ ದರ ಈಗ ಸಡಿಲವಾಗಿ ಇಳಿಕೆಯಾಗತೊಡಗಿದ್ದು, ಚಿನ್ನಾಭರಣ ಪ್ರಿಯರ ಮುಖದಲ್ಲಿ ನಗು ಮೂಡಿಸಿದೆ. ಸೋಮವಾರದಂತೆ ಚಿನ್ನದ ಬೆಲೆಗಳಲ್ಲಿ ಸಾವಿರ ರೂಪಾಯಿಗಿಂತಲೂ ಹೆಚ್ಚು ಇಳಿಕೆ ದಾಖಲಾಗಿದೆ.

    ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 27ರಂದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹12,448 ಆಗಿದ್ದು, 10 ಗ್ರಾಂ ಚಿನ್ನಕ್ಕೆ ₹1,24,480 ಆಗಿದೆ. ಕೇವಲ ಒಂದು ದಿನದಲ್ಲೇ ಸುಮಾರು ₹1,140 ಇಳಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ ಹೋಲಿಕೆಯಾಗಿ ಇಳಿಕೆಯಾಗಿದೆ ಪ್ರತಿ ಗ್ರಾಂ ₹11,410 ಹಾಗೂ 10 ಗ್ರಾಂ ₹1,14,100. ಅಂದರೆ ಸುಮಾರು ₹1,050 ಇಳಿಕೆ ಕಂಡಿದೆ.

    ಬೆಂಗಳೂರು ಮಾರುಕಟ್ಟೆಯಲ್ಲಿಯೂ ಇದೇ ರೀತಿಯ ಇಳಿಕೆ ವಾತಾವರಣ ಕಂಡುಬಂದಿದೆ. ಇಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹12,448 ಆಗಿದ್ದು, 10 ಗ್ರಾಂ ಚಿನ್ನಕ್ಕೆ ₹1,24,480 ರೂ. ಇದೆ. ಜಿಎಸ್‌ಟಿ ಮತ್ತು ಕಾರ್ಮಿಕ ಶುಲ್ಕ ಸೇರಿಸಿದ ನಂತರದ ಬೆಲೆಯಲ್ಲಿ ಮಳಿಗೆಯಿಂದ ಮಳಿಗೆಗೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಬೆಳ್ಳಿ ಬೆಲೆಯೂ ತಗ್ಗಿದ್ದು, ಪ್ರತಿ ಗ್ರಾಂ ₹157 ಹಾಗೂ ಕೆಜಿ ₹1,57,000 ರೂ. ಆಗಿದೆ.

    ಇಳಿಕೆಯ ಹಿಂದಿನ ಕಾರಣಗಳು

    ಹಬ್ಬದ ಕಾಲಾವಧಿ ಮುಗಿದ ಬಳಿಕ ಖರೀದಿ ಒತ್ತಡ ಕಡಿಮೆಯಾಗಿರುವುದು ಚಿನ್ನದ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎನ್ನಬಹುದು. ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ತೋರಿಸಿಕೊಂಡಿದ್ದು, ಚೀನಾ ಅಮೆರಿಕಾ ನಡುವಿನ ವ್ಯಾಪಾರ ಉದ್ವಿಗ್ನತೆ ಶಾಂತವಾಗಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ. ಹಲವು ಹೂಡಿಕೆದಾರರು ಇತ್ತೀಚಿನ ಏರಿಕೆಯ ಬಳಿಕ ಲಾಭ ಪಡೆದು ಚಿನ್ನ ಮಾರಾಟ ಮಾಡುತ್ತಿರುವ ಹಿನ್ನೆಲೆ ಕೂಡ ದರ ಇಳಿಕೆಗೆ ಕಾರಣವಾಗಿದೆ.

    ಆರ್ಥಿಕ ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳು ಚಿನ್ನದ ಮಾರುಕಟ್ಟೆ ಬೆಲೆಯಲ್ಲಿ ಇನ್ನೂ ಸ್ವಲ್ಪ ಇಳಿಕೆ ಆಗುವ ಸಂಭವನೀಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೂಡಿಕೆ ಅಥವಾ ಚಿನ್ನಾಭರಣ ಖರೀದಿಸಲು ಬಯಸುವವರಿಗೆ ಇದು ಉತ್ತಮ ಸಮಯವಾಗಬಹುದು.

    ಇದೀಗ ಚಿನ್ನದ ಮಾರುಕಟ್ಟೆ ಸ್ಥಿರತೆಯ ಹಾದಿಯಲ್ಲಿ ಸಾಗುತ್ತಿದ್ದು, ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶ. ಆದರೆ ಕೇವಲ ತಾತ್ಕಾಲಿಕ ಲಾಭಕ್ಕಾಗಿ ಖರೀದಿ ಮಾಡುವವರಿಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ ದರದ ಅಲೆಮಾಲೆ ಇನ್ನೂ ಸಂಪೂರ್ಣ ನಿಂತಿಲ್ಲ.

    ಹಬ್ಬದ ಬಳಿಕದ ಈ ಇಳಿಕೆ ಚಿನ್ನಾಭರಣ ಪ್ರಿಯರಿಗೆ ಖಂಡಿತವಾಗಿಯೂ ಸಿಹಿ ಸುದ್ದಿ. ಯೋಗ್ಯ ಸಮಯದಲ್ಲಿ ವಿವೇಕದಿಂದ ಖರೀದಿ ಮಾಡಿದರೆ ಇದು ನಿಜಕ್ಕೂ “ಸುವರ್ಣಾವಕಾಶ

  • ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:

    ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:

    ವಿಶ್ವ ವಿಖ್ಯಾತ ಹಂಪಿಯ ಅದ್ಭುತ ವೈಭವವನ್ನ ನೇರವಾಗಿ ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದೀಗ ಸುಗಮ ಪ್ರಯಾಣದ ದಾರಿ ತೆರೆದಿದೆ. ಕರ್ನಾಟಕದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಕಣಜವಾದ ವಿಜಯನಗರ ಸಾಮ್ರಾಜ್ಯದ ಪುರಾತನ ರಾಜಧಾನಿ ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಹಂಪಿಗೆ ನೇರ ವಿಮಾನ ಸಂಪರ್ಕದ ಕೊರತೆ ಪ್ರವಾಸೋದ್ಯಮದ ಬೆಳವಣಿಗೆಗೆ ಅಡ್ಡಿಯಾಯಿತು. ಇದೀಗ ಆ ಅಡ್ಡಿ ದೂರವಾಗಲಿದೆ.

    ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಹಂಪಿ ಬೆಂಗಳೂರು ವಿಮಾನಯಾನ ಸೇವೆಗೆ ಮತ್ತೆ ಜೀವ ದೊರೆತಿದೆ. ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ (Star Air) ನವೆಂಬರ್ 1ರಿಂದ ಬೆಂಗಳೂರು–ವಿದ್ಯಾನಗರ–ಬೆಂಗಳೂರು ಮಾರ್ಗದಲ್ಲಿ ದೈನಂದಿನ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಈ ಹೆಜ್ಜೆ ಕೇವಲ ಪ್ರವಾಸಿಗರಿಗಲ್ಲ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕೈಗಾರಿಕಾ ವಲಯಕ್ಕೂ ಸಂಜೀವನಿಯಾಗಲಿದೆ.

    ವಿಮಾನ ಸೇವೆಯ ಸಂಪೂರ್ಣ ವೇಳಾಪಟ್ಟಿ:

    ಬೆಳಗ್ಗೆ 7:50 ಕ್ಕೆ: ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುತ್ತದೆ.

    ಬೆಳಗ್ಗೆ 8:40 ಕ್ಕೆ: ವಿದ್ಯಾನಗರ ವಿಮಾನ ನಿಲ್ದಾಣ (ಹಂಪಿಗೆ ಸಮೀಪ) ತಲುಪುತ್ತದೆ.

    ಕೇವಲ 30 ನಿಮಿಷಗಳ ವಿರಾಮದ ಬಳಿಕ,

    ಬೆಳಗ್ಗೆ 9:10 ಕ್ಕೆ: ವಿದ್ಯಾನಗರದಿಂದ ವಿಮಾನ ಮರಳಿ ಹೊರಡುತ್ತದೆ.

    ಬೆಳಗ್ಗೆ 10:00 ಕ್ಕೆ: ಬೆಂಗಳೂರು ತಲುಪುತ್ತದೆ.

    ಈ ವೇಗದ ಮತ್ತು ಅನುಕೂಲಕರ ವೇಳಾಪಟ್ಟಿ ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳುವವರಿಗೆ ಹಾಗೂ ವ್ಯಾಪಾರ ವಹಿವಾಟುಗಳ ನಿಮಿತ್ತ ಆಗಮಿಸುವವರಿಗೆ ಅತ್ಯಂತ ಉಪಯುಕ್ತ.

    ಹಂಪಿಗೆ ತಲುಪುವ ಸುಗಮ ಮಾರ್ಗ:

    ವಿದ್ಯಾನಗರ ವಿಮಾನ ನಿಲ್ದಾಣ ಹಂಪಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ಇದುವರೆಗೂ ಹಂಪಿಗೆ ಪ್ರಯಾಣಿಕರು 150 ಕಿಲೋಮೀಟರ್ ದೂರದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಸಬೇಕಾಗುತ್ತಿತ್ತು. ಹೊಸ ವಿಮಾನ ಸೇವೆಯಿಂದ ಪ್ರಯಾಣದ ಸಮಯ ಮತ್ತು ವೆಚ್ಚ ಎರಡನ್ನೂ ಉಳಿತಾಯ ಮಾಡಬಹುದು.

    ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ:

    ಹಂಪಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮದ ಜೊತೆಗೆ ಕೈಗಾರಿಕಾ ವಲಯವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ JSW ಉಕ್ಕು ಕಾರ್ಖಾನೆ ಹಾಗೂ ಅನೇಕ ಮಧ್ಯಮ ಮಟ್ಟದ ಉದ್ಯಮಗಳು ಇಲ್ಲಿವೆ. ಹೀಗಾಗಿ, ಸ್ಟಾರ್ ಏರ್‌ನ ಈ ಹೊಸ ವಿಮಾನ ಮಾರ್ಗವು ಉದ್ಯಮಿಗಳು, ತಂತ್ರಜ್ಞರು ಮತ್ತು ವ್ಯಾಪಾರಿಗಳಿಗೆ ವೇಗದ ಸಂಚಾರದ ಸೌಲಭ್ಯ ಒದಗಿಸಲಿದೆ.

    ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಸೇವೆ ಮಹತ್ವದ್ದಾಗಿದೆ. ಸ್ಥಳೀಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟ್ಯಾಕ್ಸಿ ಸೇವೆಗಳು ಹಾಗೂ ಪ್ರವಾಸಿ ಮಾರ್ಗದರ್ಶಕರು ಇದರ ಪ್ರಯೋಜನವನ್ನು ಅನುಭವಿಸಲಿದ್ದಾರೆ.

    ಇನ್ನು, ಹಂಪಿ ಪ್ರವಾಸಿ ಮಾರ್ಗದರ್ಶಕರ ಸಂಘದ ಕಾರ್ಯದರ್ಶಿಯೊಬ್ಬರು ಹೇಳಿವ ಪ್ರಕಾರ ಈ ಅತ್ಯಂತ ಅಗತ್ಯವಾದ ವಿಮಾನ ಸೇವೆಯನ್ನ ಮರುಪ್ರಾರಂಭಿಸಿದಕ್ಕಾಗಿ ನಾವು ಸ್ಟಾರ್ ಏರ್‌ಗೆ ಕೃತಜ್ಞರಾಗಿದ್ದೇವೆ. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲಿನ ಅವಲಂಬನೆ ತಪ್ಪಲಿದ್ದು, ಪ್ರವಾಸಿಗರಿಗೆ ಹಂಪಿ ಇನ್ನಷ್ಟು ಹತ್ತಿರವಾಗಲಿದೆ.

    ಹಂಪಿ ಕೇವಲ ಪುರಾತನ ಅವಶೇಷಗಳ ತಾಣವಲ್ಲ, ಅದು ನಮ್ಮ ಸಂಸ್ಕೃತಿಯ ಜೀವಂತ ಚಿಹ್ನೆ. ಪ್ರವಾಸಿಗರು ಈಗ ವೇಗವಾಗಿ ಈ ಐತಿಹಾಸಿಕ ನಾಡಿಗೆ ತಲುಪುವ ಅವಕಾಶವನ್ನು ಪಡೆಯಲಿದ್ದಾರೆ. ಸ್ಟಾರ್ ಏರ್‌ನ ಈ ಹೊಸ ಸೇವೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ.

  • Jio–Airtel‌ಗೆ ಸವಾಲು: BSNL ₹1 4G ಪ್ಯಾಕ್  

    Jio–Airtel‌ಗೆ ಸವಾಲು: BSNL ₹1 4G ಪ್ಯಾಕ್  

    ಭಾರತದ ಅತ್ಯಂತ ವೈಭವಶಾಲಿ ಹಾಗೂ ಹರ್ಷೋಲ್ಲಾಸದ ಹಬ್ಬಗಳಲ್ಲಿ ಒಂದಾದ ದೀಪಾವಳಿ, ಬೆಳಕಿನ ಜಯ, ಹೊಸ ಆರಂಭ ಹಾಗೂ ಕುಟುಂಬದ ಸಂಭ್ರಮದ ಸಂಕೇತವಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ವ್ಯಾಪಾರ, ಹೂಡಿಕೆ ಮತ್ತು ಸೇವಾ ಕ್ಷೇತ್ರಗಳು ಗ್ರಾಹಕರ ಹೃದಯ ಗೆಲ್ಲಲು ವಿವಿಧ ರೀತಿಯ ಆಕರ್ಷಕ ಯೋಜನೆಗಳನ್ನು ಘೋಷಿಸುತ್ತವೆ. ಟೆಲಿಕಾಂ ಕ್ಷೇತ್ರದಲ್ಲಿಯೂ ಈ ಪೈಪೋಟಿ ತೀವ್ರವಾಗಿದ್ದು, ಖಾಸಗಿ ಕಂಪನಿಗಳು ವಿಭಿನ್ನ ರಿಯಾಯಿತಿ ಹಾಗೂ ಉಡುಗೊರೆಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿವೆ.

    ಈ ಪೈಪೋಟಿಯಲ್ಲಿ ಇದೀಗ ಸರ್ಕಾರಿ ಟೆಲಿಕಾಂ ದೈತ್ಯ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೂಡ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ, ಕಂಪನಿಯು ನಿಜಕ್ಕೂ ಗ್ರಾಹಕರಿಗೆ ಅಚ್ಚರಿ ಮೂಡಿಸುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ. ಕೇವಲ ₹1 ಕ್ಕೆ ಪೂರ್ಣ ಒಂದು ತಿಂಗಳ 4G ಸೇವಾ ಪ್ಯಾಕ್! ಇದು ಕೇವಲ ಆಫರ್‌ವಲ್ಲ, BSNL ತನ್ನ ನೆಟ್‌ವರ್ಕ್ ಶಕ್ತಿಯನ್ನು ದೇಶಾದ್ಯಂತ ತೋರಿಸಲು ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.

    ಆಫರ್ ಮಾನ್ಯಾವಧಿ:

    ಈ ವಿಶಿಷ್ಟ ಯೋಜನೆ ಅಕ್ಟೋಬರ್ 15ರಿಂದ ನವೆಂಬರ್ 15, 2025ರವರೆಗೆ ಲಭ್ಯ. ಈ ಅವಧಿಯಲ್ಲಿ BSNL ಗೆ ಸೇರುವ ಹೊಸ ಗ್ರಾಹಕರು ಕೇವಲ ₹1 ನಾಮಮಾತ್ರ ಶುಲ್ಕ ಪಾವತಿಸಿ 30 ದಿನಗಳ ಕಾಲ ಸಂಪೂರ್ಣ 4G ಸೇವೆಯನ್ನು ಅನುಭವಿಸಬಹುದು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ.

    ಯೋಜನೆಯ ಉದ್ದೇಶವೇನು?:

    ಈ ದೀಪಾವಳಿ ಆಫರ್‌ನ ಹಿಂದೆ ಹಲವು ಉದ್ದೇಶಗಳು ಅಡಗಿವೆ,

    ದೇಶೀಯವಾಗಿ ಅಭಿವೃದ್ಧಿಪಡಿಸಿದ BSNL ನ 4G ತಂತ್ರಜ್ಞಾನವನ್ನು ಜನರಿಗೆ ನೇರವಾಗಿ ಪರಿಚಯಿಸುವುದು.

    ಹಬ್ಬದ ವಾತಾವರಣವನ್ನು ಸದುಪಯೋಗಪಡಿಸಿಕೊಂಡು ಹೊಸ ಗ್ರಾಹಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದು.

    Jio ಮತ್ತು Airtel ಮುಂತಾದ ಖಾಸಗಿ ಕಂಪನಿಗಳಿಗೆ ಸ್ಪರ್ಧಾತ್ಮಕವಾಗಿ ನಿಲ್ಲುವುದು.

    ₹1 ಯೋಜನೆಯ ಪ್ರಮುಖ ಸೌಲಭ್ಯಗಳು ಹೀಗಿವೆ:

    ಈ ದೀಪಾವಳಿ ಪ್ಯಾಕ್ ಹೊಸ ಬಳಕೆದಾರರಿಗೆ BSNL ನೆಟ್‌ವರ್ಕ್‌ನ ಸಂಪೂರ್ಣ ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ.

    ದಿನಕ್ಕೆ 2GB ಹೈ-ಸ್ಪೀಡ್ 4G ಡೇಟಾ.

    ಭಾರತದೆಲ್ಲೆಡೆ ಅನಿಯಮಿತ ಧ್ವನಿ ಕರೆಗಳು.

    ಪ್ರತಿದಿನ 100 ಉಚಿತ SMS.

    ಉಚಿತ ಸಿಮ್ ಕಾರ್ಡ್ ವಿತರಣೆ.

    ಈ ಎಲ್ಲಾ ಸೌಲಭ್ಯಗಳು 30 ದಿನಗಳ ಕಾಲ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ದೊರೆಯುತ್ತವೆ. ಹೊಸ ಗ್ರಾಹಕರು BSNL ನ ಸೇವಾ ಗುಣಮಟ್ಟ ಮತ್ತು ವೇಗವನ್ನು ನೇರವಾಗಿ ಪರೀಕ್ಷಿಸಲು ಇದು ಉತ್ತಮ q ಅವಕಾಶವಾಗಿದೆ.

    ಆಫರ್ ಪಡೆಯುವ ವಿಧಾನ:

    ಈ ಪ್ಯಾಕ್‌ನ್ನು ಪಡೆಯುವುದು ತುಂಬಾ ಸರಳ,

    ಹತ್ತಿರದ BSNL ಕಚೇರಿ ಅಥವಾ ಅಧಿಕೃತ ಅಂಗಡಿಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು.

    ಅಥವಾ BSNL ನ ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬಹುದು.

    ಪ್ರಾಥಮಿಕ ದೃಢೀಕರಣದ ಬಳಿಕ ಸೇವೆ ತಕ್ಷಣ ಸಕ್ರಿಯಗೊಳ್ಳುತ್ತದೆ.

    ಆಗಸ್ಟ್ ಆಫರ್‌ನ ಪ್ರಭಾವ:

    ಈ ಹೊಸ ಯೋಜನೆಯ ಹಿಂದೆ BSNL ಗೆ ಒಂದು ಮಹತ್ವದ ಹಿನ್ನೆಲೆ ಇದೆ. 2025ರ ಆಗಸ್ಟ್‌ನಲ್ಲಿ ಕಂಪನಿಯು ಇದೇ ರೀತಿಯ ಪ್ರಚಾರ ಆಫರ್ ಬಿಡುಗಡೆ ಮಾಡಿತ್ತು ಮತ್ತು ಅಚ್ಚರಿ ಮೂಡಿಸುವ ಪ್ರತಿಕ್ರಿಯೆ ದೊರೆಯಿತು, ಕೇವಲ ಒಂದು ತಿಂಗಳ ಅವಧಿಯಲ್ಲಿ 1.38 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರು BSNL ಗೆ ಸೇರಿದರು. ಇದರ ಫಲವಾಗಿ, BSNL ಆಗಸ್ಟ್ ತಿಂಗಳಲ್ಲಿ ಹೊಸ ಗ್ರಾಹಕರ ದಾಖಲೆಯ ಆಧಾರದ ಮೇಲೆ Airtel ನಂತರ ದೇಶದ ಎರಡನೇ ಅತಿದೊಡ್ಡ ಮೊಬೈಲ್ ಸೇವಾ ಪೂರೈಕೆದಾರನಾಗಿ ಹೊರಹೊಮ್ಮಿತು. ಈ ಯಶಸ್ಸಿನಿಂದ, ದೀಪಾವಳಿಯ ಸಮಯದಲ್ಲಿ BSNL ತನ್ನ 4G ವಿಸ್ತರಣೆಗೆ ಮತ್ತಷ್ಟು ವೇಗ ನೀಡುತ್ತಿದೆ.

    ಆತ್ಮನಿರ್ಭರ್ ಭಾರತದತ್ತ ಹೆಜ್ಜೆ:

    BSNL ನ 4G ನೆಟ್‌ವರ್ಕ್ ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನ ಆಧಾರಿತವಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋರ್ ನೆಟ್‌ವರ್ಕ್ ಮತ್ತು ಉಪಕರಣಗಳನ್ನು ಬಳಸಿ ನಿರ್ಮಿಸಲಾದ ಈ ಯೋಜನೆ ಆತ್ಮನಿರ್ಭರ್ ಭಾರತ್ ಉದ್ದೇಶದತ್ತ ಮಹತ್ವದ ಹಂತವಾಗಿದೆ.

    ದೀಪಾವಳಿಯ ಸಂಭ್ರಮದಲ್ಲಿ BSNL ಘೋಷಿಸಿರುವ ಈ ₹1 ಯೋಜನೆ, ಗ್ರಾಹಕರಿಗೆ ಯಾವುದೇ ಬಾಧ್ಯತೆ ಇಲ್ಲದೆ ಉನ್ನತ ಮಟ್ಟದ 4G ಅನುಭವ ನೀಡುವ ಅಪರೂಪದ ಅವಕಾಶವಾಗಿದೆ. ಇದು ಕೇವಲ ಮಾರ್ಕೆಟಿಂಗ್ ತಂತ್ರವಲ್ಲ , ಖಾಸಗಿ ಕಂಪನಿಗಳ ಬಲಿಷ್ಠ ನೆಟ್‌ವರ್ಕ್‌ಗಳಿಗೆ ನೇರ ಸವಾಲು ನೀಡುವ ಸರ್ಕಾರಿ ಸಂಸ್ಥೆಯ ಧೈರ್ಯಶಾಲಿ ಹೆಜ್ಜೆಯಾಗಿದೆ.

  • ಚಿನ್ನ–ಬೆಳ್ಳಿ ದರ ಕುಸಿತ.!ಶೇ.35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

    ಚಿನ್ನ–ಬೆಳ್ಳಿ ದರ ಕುಸಿತ.!ಶೇ.35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

    ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯು ಕೇವಲ ಲೋಹವಲ್ಲ, ಅವು ಸಂಸ್ಕೃತಿ, ಪರಂಪರೆ, ಆರ್ಥಿಕತೆ ಹಾಗೂ ಭಾವನೆಗಳಿಗೂ ಮೇಳೈಸಿರುವ ಅಮೂಲ್ಯ ಸಂಪತ್ತು. ಹಬ್ಬ-ಹರಿದಿನಗಳಿಂದ ಹಿಡಿದು ಮದುವೆ, ಧಾರ್ಮಿಕ ಕಾರ್ಯಕ್ರಮಗಳು, ಹೂಡಿಕೆ ಹಾಗೂ ಭವಿಷ್ಯ ಭದ್ರತೆವರೆಗೆ ಚಿನ್ನ ಮತ್ತು ಬೆಳ್ಳಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಾಚೀನ ಕಾಲದಿಂದಲೇ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತಿದ್ದು, ಆರ್ಥಿಕ ಅಸ್ಥಿರತೆ ಅಥವಾ ದರ ಏರಿಕೆಯ ಸಮಯದಲ್ಲಿ ಜನರು ಚಿನ್ನ-ಬೆಳ್ಳಿಯತ್ತ ಮುಖ ಮಾಡುವುದು ಸಾಮಾನ್ಯ.

    2025ರ ಆರಂಭದಿಂದಲೇ ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಏರಿದವು. ದರ ಏರಿಕೆಯ ಪರಿಣಾಮವಾಗಿ ಮಧ್ಯಮ ವರ್ಗದ ಜನರಿಗೆ ಚಿನ್ನ ಖರೀದಿಸುವುದೇ ಕಷ್ಟವಾಗಿತ್ತು. ಆದರೆ ಈಗ ಮಾರುಕಟ್ಟೆಯ ಚಿತ್ರಣ ಬದಲಾಗುತ್ತಿದ್ದು, ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಇಳಿಕೆ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.

    ಬೆಲೆ ಏರಿಕೆಯ ಬಳಿಕ ಇಳಿಕೆಯ ಎಚ್ಚರಿಕೆ:

    ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಜಾಗತಿಕ ತಂತ್ರಜ್ಞಾನಿ ಅಮಿತ್ ಗೋಯಲ್ (Amit Goyal) ಅವರ ಪ್ರಕಾರ, ಇತ್ತೀಚಿನ ಚಿನ್ನದ ಬೆಲೆ ಏರಿಕೆಯು ಶಾಶ್ವತವಲ್ಲ. ಅವರ ಅಂದಾಜಿನ ಪ್ರಕಾರ, ಚಿನ್ನದ ಬೆಲೆ ಶೇಕಡಾ 30 ರಿಂದ 35ರಷ್ಟು ಇಳಿಯುವ ಸಾಧ್ಯತೆ ಇದೆ. ಇದರರ್ಥ, ಪ್ರತಿ 10 ಗ್ರಾಂ ಚಿನ್ನದ ದರವು ಸುಮಾರು ₹77,701 ಮಟ್ಟಕ್ಕೆ ಕುಸಿಯಬಹುದು.

    ಅದೇ ರೀತಿ ಬೆಳ್ಳಿಯ ಬೆಲೆಯಲ್ಲಿ ಶೇಕಡಾ 50ರಷ್ಟು ಕುಸಿತ ಸಾಧ್ಯವೆಂದು ಅವರು ತಿಳಿಸಿದ್ದಾರೆ. ಹೂಡಿಕೆದಾರರು ಹಾಗೂ ಖರೀದಿದಾರರು ಈ ಭವಿಷ್ಯವನ್ನು ಮನನ ಮಾಡಿಕೊಂಡು ತಮ್ಮ ಹಣಕಾಸು ತೀರ್ಮಾನಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

    ಚಿನ್ನದ ಬೆಲೆಯಲ್ಲಿ ಶೇಕಡಾ 30–35ರಷ್ಟು ಇಳಿಕೆಯ ನಿರೀಕ್ಷೆ:

    ಗೋಯಲ್ ಅವರ ವಿಶ್ಲೇಷಣೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ಚಿನ್ನದ ಬೆಲೆ ಶೇಕಡಾ 30–35ರಷ್ಟು ಇಳಿಯುವ ಸಾಧ್ಯತೆ ಇದೆ. ಪ್ರತಿ 10 ಗ್ರಾಂ ಚಿನ್ನದ ದರವು ₹77,701 ರವರೆಗೆ ಕುಸಿಯಬಹುದು.

    ಬೆಳ್ಳಿಯ ಬೆಲೆಯು ಸಹ ಶೇಕಡಾ 50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಮತ್ತು ₹77,450 ಮಟ್ಟ ತಲುಪಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಬದಲಾವಣೆಯು ಹೂಡಿಕೆ ಮಾರುಕಟ್ಟೆಗೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

    2025ರಲ್ಲಿ ಏರಿಕೆಯ ಹಾದಿಯಿಂದ ಇಳಿಕೆಯ ಹಾದಿಗೆ:

    2025ರ ಆರಂಭದಿಂದಲೇ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡುಬಂತು. ಮಧ್ಯಮ ವರ್ಗದ ಜನರಿಗೆ ಚಿನ್ನದ ಖರೀದಿ ಅಸಾಧ್ಯವಾಗುವ ಮಟ್ಟಿಗೆ ದರ ಏರಿಕೆ ಕಂಡುಬಂದಿತ್ತು. ಆದರೆ ಈಗ ತಜ್ಞರ ಪ್ರಕಾರ ಈ ಏರಿಕೆಯು ಕೊನೆಯ ಹಂತವನ್ನು ತಲುಪಿದೆ.

    2007, 2008 ಮತ್ತು 2011 ರಲ್ಲಿಯೂ ಇದೇ ರೀತಿಯ ಸನ್ನಿವೇಶ ಕಂಡುಬಂದಿತ್ತು, ಆ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯ ನಂತರ ಶೇಕಡಾ 45ರಷ್ಟು ಕುಸಿತ ದಾಖಲಾಗಿತ್ತು. ಇದೇ ಮಾದರಿಯ ಪರಿಸ್ಥಿತಿ ಮತ್ತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

    ಬೆಳ್ಳಿಯ ಬೆಲೆ ಏರಿಕೆ:

    ಕಳೆದ ಹತ್ತು ತಿಂಗಳಲ್ಲಿ ಬೆಳ್ಳಿಯ ಬೆಲೆ ಎರಡು ಪಟ್ಟು ಏರಿರುವುದು ಗಮನಾರ್ಹ. ಚಿನ್ನಕ್ಕಿಂತಲೂ ಬೆಳ್ಳಿಯು ಹೂಡಿಕೆದಾರರಿಗೆ ಶೇಕಡಾ 37ರಷ್ಟು ಹೆಚ್ಚುವರಿ ಲಾಭ ನೀಡಿದೆ. ಇದರ ಹಿಂದಿರುವ ಪ್ರಮುಖ ಕಾರಣಗಳು, ಹಬ್ಬದ ಕಾಲದಲ್ಲಿ ಹೆಚ್ಚಿದ ಖರೀದಿ ಬೇಡಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಬೆಳ್ಳಿಯ ಹೆಚ್ಚಿದ ಬಳಕೆ ಮತ್ತು ಜಾಗತಿಕ ಪೂರೈಕೆಯ ಕೊರತೆ.

    ದೀಪಾವಳಿ ಮತ್ತು ಧನತ್ರಯೋದಶಿಯ ಸಂದರ್ಭದಲ್ಲಿ ಭಾರತದಲ್ಲಿ ಬೆಳ್ಳಿ ಖರೀದಿ ಹೆಚ್ಚಾಗುವ ನಿರೀಕ್ಷೆಯಿದೆ. ಜೊತೆಗೆ ಸೌರ ವಿದ್ಯುತ್ ಘಟಕಗಳು, ಎಐ (AI) ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಬೆಳ್ಳಿಯ ಬಳಕೆ ವೇಗವಾಗಿ ಹೆಚ್ಚುತ್ತಿರುವುದರಿಂದ ಜಾಗತಿಕ ಬೇಡಿಕೆಯೂ ಏರಿದೆ.

    ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ಬೃಹತ್ ಬದಲಾವಣೆಗಳು ಹೂಡಿಕೆದಾರರಿಗೆ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿವೆ. ಬೆಲೆ ನಿಗದಿ ವ್ಯವಸ್ಥೆಯ ಬದಲಾವಣೆಗಳು, ಜಾಗತಿಕ ಆರ್ಥಿಕ ಪರಿಸ್ಥಿತಿ ಹಾಗೂ ಬೇಡಿಕೆ–ಪೂರೈಕೆಯ ಅಸಮತೋಲನಗಳು ಮುಂದಿನ ಬೆಲೆ ಬದಲಾವಣೆಗಳಲ್ಲಿ ಪ್ರಮುಖ ಪಾತ್ರವಹಿಸಲಿವೆ.

    ಹೀಗಾಗಿ, ಹೂಡಿಕೆದಾರರು ಹಾಗೂ ಖರೀದಿದಾರರು ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುವುದು ಅತ್ಯಂತ ಮುಖ್ಯ.

  • ನಿಮ್ಮ ಫೋನ್‌ನ ಎಕ್ಸ್ ಪೈರಿ ದಿನಾಂಕ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

    ನಿಮ್ಮ ಫೋನ್‌ನ ಎಕ್ಸ್ ಪೈರಿ ದಿನಾಂಕ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

    ನಮ್ಮ ದಿನನಿತ್ಯದ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಹನದಿಂದ ಹಿಡಿದು ಬ್ಯಾಂಕಿಂಗ್‌, ಶಿಕ್ಷಣ, ಮನರಂಜನೆ ಹಾಗೂ ಆರೋಗ್ಯದವರೆಗೆ ಎಲ್ಲವೂ ಇಂದು ಕೈಯಲ್ಲಿರುವ ಒಂದು ಸ್ಮಾರ್ಟ್‌ಫೋನ್‌ನಿಂದ ಸಾಧ್ಯವಾಗಿದೆ. ಹೊಸ ಫೋನ್ ಖರೀದಿಸಿದಾಗ ನಾವು ಅದರ ಡಿಸೈನ್, ಕ್ಯಾಮೆರಾ ಗುಣಮಟ್ಟ, ಬ್ಯಾಟರಿ ಬ್ಯಾಕಪ್ ಹಾಗೂ ಬೆಲೆ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ. ಆದರೆ ಒಂದು ಮಹತ್ವದ ವಿಷಯವನ್ನು ಬಹುತೆಕ ಜನರು ಕಡೆಗಣಿಸುತ್ತಾರೆ ಅದು ಫೋನ್‌ನ ಜೀವಿತಾವಧಿ (Lifespan) ಅಥವಾ ಎಕ್ಸ್ ಪೈರಿ ದಿನಾಂಕ (Expiry Date).

    ಹಾಲು, ತರಕಾರಿ ಅಥವಾ ಪ್ಯಾಕೇಜ್ಡ್‌ ಆಹಾರಗಳಂತೆ, ಎಲೆಕ್ಟ್ರಾನಿಕ್‌ ಸಾಧನಗಳಿಗೂ ಒಂದು ನಿರ್ದಿಷ್ಟ ಅವಧಿಯ ನಂತರ ಸಹಜ ಬಾಳಿಕೆ ಮುಗಿಯುತ್ತದೆ. ಫೋನ್‌ನ ಹಾರ್ಡ್‌ವೇರ್ ನಿಧಾನವಾಗಿ ಹಳೆಯದಾಗುತ್ತದೆ, ಸಾಫ್ಟ್‌ವೇರ್ ಅಪ್‌ಡೇಟ್‌ಗಳು ನಿಲ್ಲುತ್ತವೆ ಮತ್ತು ಕಾರ್ಯಕ್ಷಮತೆಯಲ್ಲಿ ಕುಸಿತ ಕಂಡುಬರುತ್ತದೆ. ಆದರೆ ಬಹಳಷ್ಟು ಮಂದಿ ತಮ್ಮ ಫೋನ್ ಯಾವಾಗ ಮುಕ್ತಾಯ ದಿನಾಂಕ ತಲುಪುತ್ತದೆ ಎಂಬುದನ್ನು ತಿಳಿಯದೇ, ತಡವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ.

    ಇದಕ್ಕಾಗಿ ನಿಮ್ಮ ಫೋನ್‌ನ ಉತ್ಪಾದನಾ ದಿನಾಂಕ ಹಾಗೂ ಕಂಪನಿ ನೀಡುವ ಬೆಂಬಲ ಅವಧಿಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಮಾಹಿತಿ ನಿಮ್ಮ ಫೋನ್‌ ಎಷ್ಟು ವರ್ಷಗಳವರೆಗೆ ಸುರಕ್ಷಿತವಾಗಿ, ಅಪ್‌ಡೇಟ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿಸುತ್ತದೆ. ಕೆಳಗಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮ ಫೋನ್‌ನ ‘ಎಕ್ಸ್ ಪೈರಿ’ ದಿನಾಂಕವನ್ನು ಸುಲಭವಾಗಿ ಕಂಡುಹಿಡಿಯಬಹುದು.

    ಫೋನ್‌ನ ಜೀವಿತಾವಧಿ ತಯಾರಾದ ದಿನದಿಂದಲೇ ಆರಂಭವಾಗುತ್ತದೆ: 

    ವರದಿಯ ಪ್ರಕಾರ, ಕೆಲವು ಫೋನ್‌ಗಳು ಕೇವಲ 2 ವರ್ಷಗಳವರೆಗೆ ಮಾತ್ರ ಉತ್ತಮವಾಗಿ ಕೆಲಸ ಮಾಡುತ್ತವೆ, ಇತರವು 3–4 ವರ್ಷಗಳವರೆಗೆ ಬೆಂಬಲ ಪಡೆಯುತ್ತವೆ. ಹಾರ್ಡ್‌ವೇರ್ ಸವೆತಕ್ಕಿಂತಲೂ ಕಂಪನಿ ನೀಡುವ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳು ಮತ್ತು ಸೆಕ್ಯುರಿಟಿ ಬೆಂಬಲದ ಅವಧಿಯೇ ಮುಖ್ಯ. ನೀವು ಫೋನ್‌ ಖರೀದಿಸಿದ ದಿನದಿಂದ ಅಲ್ಲ, ತಯಾರಾದ ದಿನದಿಂದಲೇ ಅವುಗಳ ಜೀವಿತಾವಧಿ ಆರಂಭವಾಗುತ್ತದೆ.

    ಬ್ರಾಂಡ್‌ವಾರು ಸರಾಸರಿ ಜೀವಿತಾವಧಿ (Support Period):

    Apple iPhone: 4 ರಿಂದ 8 ವರ್ಷಗಳು

    Samsung: 3 ರಿಂದ 6 ವರ್ಷಗಳು

    Google Pixel: 3 ರಿಂದ 5 ವರ್ಷಗಳು

    Huawei: 2 ರಿಂದ 4 ವರ್ಷಗಳು

    Vivo, Lava ಮುಂತಾದವು: ಸರಾಸರಿ 3 ರಿಂದ 4 ವರ್ಷಗಳು (ಕೆಲವು 5 ವರ್ಷಗಳವರೆಗೂ)

    ಉತ್ಪಾದನಾ ದಿನಾಂಕವನ್ನು ಪತ್ತೆ ಹಚ್ಚುವುದು ಹೇಗೆ?

    ಫೋನ್‌ನ ಎಕ್ಸ್ ಪೈರಿ ದಿನಾಂಕವನ್ನು ತಿಳಿಯಲು ಮೊದಲು ಅದರ ಉತ್ಪಾದನಾ ದಿನಾಂಕ ತಿಳಿದುಕೊಳ್ಳಬೇಕು.

    ಬಾಕ್ಸ್ ಪರಿಶೀಲನೆ: ಹೆಚ್ಚಿನ ಫೋನ್‌ಗಳ ಬಾಕ್ಸ್‌ನಲ್ಲಿ ಉತ್ಪಾದನಾ ದಿನಾಂಕ ಬರೆಯಲ್ಪಟ್ಟಿರುತ್ತದೆ.

    Settings, About Phone: ಇಲ್ಲಿ Serial Number ಅಥವಾ Manufacturing Date ದೊರೆಯುತ್ತದೆ.

    SNDeepInfo ವೆಬ್‌ಸೈಟ್‌ಗೆ ಹೋಗಿ ಫೋನ್‌ನ ಸೀರಿಯಲ್ ನಂಬರ್ ನಮೂದಿಸಿ. ಅದು ತಯಾರಾದ ನಿಖರ ದಿನಾಂಕವನ್ನು ನಿಮಗೆ ತೋರಿಸುತ್ತದೆ.

    Dial Code: *#06# ಅನ್ನು ಡಯಲ್ ಮಾಡಿದರೆ ಫೋನ್‌ನ Serial Number ಕಾಣಿಸುತ್ತದೆ.

    ಎಕ್ಸ್ ಪೈರಿ ದಿನಾಂಕ ಲೆಕ್ಕ ಹಾಕುವುದು ಹೇಗೆ?

    ಉತ್ಪಾದನಾ ದಿನಾಂಕವನ್ನು ತಿಳಿದ ನಂತರ, ಬ್ರಾಂಡ್‌ನ ಸರಾಸರಿ ಬೆಂಬಲ ಅವಧಿಯನ್ನು ಅದರ ಮೇಲೆ ಸೇರಿಸಿ ಲೆಕ್ಕ ಹಾಕಿ.

    ಉದಾಹರಣೆಗೆ, ನೀವು 2020ರಲ್ಲಿ ತಯಾರಾದ iPhone ಬಳಸುತ್ತಿದ್ದರೆ, ಅದು 2024ರಿಂದ 2028ರ ಒಳಗೆ ಬೆಂಬಲ ಮುಗಿಯುವ ಸಾಧ್ಯತೆ ಇದೆ.

    endoflife.date ಸೈಟ್ ಬಳಸಿ ನಿಖರ ಮಾಹಿತಿಯನ್ನು ಪಡೆಯಿರಿ:

    endoflife.date ಎಂಬ ವೆಬ್‌ಸೈಟ್‌ನಲ್ಲಿ ವಿವಿಧ ಫೋನ್‌ಗಳು, ಸಾಫ್ಟ್‌ವೇರ್ ಹಾಗೂ ಉಪಕರಣಗಳ ಅಧಿಕೃತ ಮುಕ್ತಾಯ ದಿನಾಂಕ (End of Support Date) ನೀಡಲಾಗುತ್ತದೆ.

    ಈ ಸೈಟ್‌ನಲ್ಲಿ ನೀವು iPhone, iPad, Apple Watch ಅಥವಾ Amazon Kindle ಮುಂತಾದ ಸಾಧನಗಳಿಗೂ ಮುಕ್ತಾಯ ದಿನಾಂಕವನ್ನು ಪರಿಶೀಲಿಸಬಹುದು.

    ಹೀಗಾಗಿ, ನೀವು ಹೊಸ ಫೋನ್ ಖರೀದಿಸುವಾಗ ಅಥವಾ ಉಪಯೋಗಿಸಿದ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಅದರ ಎಕ್ಸ್ ಪೈರಿ ದಿನಾಂಕವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

    ಫೋನ್‌ನ ಎಕ್ಸ್ ಪೈರಿ ದಿನಾಂಕ ತಿಳಿದಿರುವುದರಿಂದ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು z ಹೊಸ ಫೋನ್‌ಗೆ ಸರಿಯಾದ ಸಮಯದಲ್ಲಿ ಅಪ್‌ಗ್ರೇಡ್ ಮಾಡಬಹುದು, ಸುರಕ್ಷತೆ ಕಾಪಾಡಬಹುದು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮುಂಚಿತವಾಗಿ ತಪ್ಪಿಸಬಹುದು.