Category: Latest News

  • ಹುಮ್ನಾಬಾದ್ ನಲ್ಲಿ ನಕಲಿ ಗೊಬ್ಬರ ಜಾಲಪತ್ತೆ !

    ಹುಮ್ನಾಬಾದ : — ಹುಮ್ನಾಬಾದ ಪಟ್ಟಣದ ಗೋಡಾನ್ವಂದರಲ್ಲಿ ನಕಲಿ ಅನಧಿಕೃತ ಗೊಬ್ಬರ ತಯಾರಿಕೆ ಮತ್ತು ಮಾರಾಟದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ಪ್ರಕರಣ ಒಂದನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಉನ್ನತಮೂಲಗಳಿಂದ ವರದಿಯಾಗಿದೆ .
    ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಚನ್ನಬಸಣ್ಣ ಎಸ್ ಎಲ್ ಹಾಗೂ ಹೆಚ್ಚುವರಿ ಎಸ್ ಪಿ ಶ್ರೀ ಮಹೇಶ್ ಮೇಘಣ್ಣನವರ ದಿವ್ಯ ನಿರ್ದೇಶನದಲ್ಲಿ ಹುಮ್ನಾಬಾದ್ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಅನಧಿಕೃತ ನಕಲಿ ಗೊಬ್ಬರ ತಯಾರಿಸಿ ಸರ್ಕಾರದ ಪರವಾನಿಗೆ ಇಲ್ಲದೆ ಗೌಡನ್ ಒಂದರಲ್ಲಿ ಶೇಖರಿಸಿಟ್ಟ ಮಾಹಿತಿ ಪಡೆದ ಅವರು ಕೃಷಿ ಇಲಾಖೆಯವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ಗೊಬ್ಬರ ಸಂಗ್ರಹಿಸಲ್ಪಟ್ಟ ಗೋಡಾನ್ ಮೇಲೆ ಸಿನಿಮಯ ರೀತಿಯಲ್ಲಿ ಹಲ್ಲೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅಕ್ರಮ ಗೊಬ್ಬರ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ವರದಿಯಾ

  • ಸಿರಸಿ ಮಡ್ಡಿಯ ಸಾಯಿ ದರ್ಬಾರ್ ನಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ !

    ಸಿರಸಿ ಮಡ್ಡಿಯ ಸಾಯಿ ದರ್ಬಾರ್ ನಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ !

    ಕಲಬುರಗಿ :- ನಗರದ ಶರಣ ಸಿರಸಿ, ಮಡ್ಡಿಯ ನಿಸರ್ಗ ಕಾಲೋನಿಯ ಶ್ರೀ ಸಾಯಿ ದರ್ಬಾರ್ ಮಂದಿರದಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ ಜರುಗಿತು.
    ಬೆಳಗಿನ ಜಾವ 8:00 ಗಂಟೆಗೆ ಸಾಯಿಬಾಬಾರವರ ಭವ್ಯಮೂರ್ತಿಗೆ ಮಹಾ ಅಭಿಷೇಕ ಅನೇಕ ಸದ್ಭಕ್ತರ ಉಪಸ್ಥಿತಿಯಲ್ಲಿ ಗುರುಗಳಾದ ಶ್ರೀ ಸುರೇಶ್ ಬಾಬಾ ಗುರೂಜಿಯವರ ನೇತೃತ್ವದಲ್ಲಿ ಜರುಗಿತ್ತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸಾಯಿಬಾಬಾರವರ ಮಧ್ಯದ ಆರತಿ ಗುರೂಜಿ ಅವರ ನೇತೃತ್ವದಲ್ಲಿ ನೆರವೇರಿತು.
    ಗುರುಪೂರ್ಣಿಮೆಯ ಮಹಾ ಅಭಿಷೇಕ ಮತ್ತು ಆರತಿಯಲ್ಲಿ ಪತ್ರಕರ್ತ ಶ್ರೀ ಆನಂದ್ ಪಿ ಮಣ್ಣೂರ್ ಪತ್ರಕರ್ತ ಶ್ರೀ ದಸ್ತಯ್ಯ ಗುತ್ತೇದಾರ್ ಪತ್ರಕರ್ತ ಹಾಗೂ ಸಾಹಿತಿ ಶ್ರೀ ಕಿರಣ್ ಪಾಟೀಲ್ ಅಶೋಕ್ ಗುತ್ತೇದಾರ್ ಶಿವರಾಜ್ ಬಿರಾದಾರ್ ಜನರಲ್ ಮ್ಯಾನೇಜರ್ ನಿವೃತ್ತ, ಶ್ರೀ ದಶರಥ ಏಖೆಳ್ಳಿಕರ್ ಇನ್ನು ಅನೇಕರು ಉಪಸ್ಥಿತರಿದ್ದರು. ಆರತಿಯ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಹುಮನಾಬಾದ್ ತಾಲೂಕಿನ ಶ್ರೀಮತಿ ಸುಗಂಧಾ ನರೂಣಿ ರವರು ಏರ್ಪಡಿಸಿದರು.