Category: Special News

  • ಶನಿವಾರ ಜಿಲ್ಲೆಗೆ ಗೃಹ ಸಚಿವರ ಆಗಮನ.?

    ಶನಿವಾರ ಜಿಲ್ಲೆಗೆ ಗೃಹ ಸಚಿವರ ಆಗಮನ.?

    *ಸತ್ಯಕಾಮ ವಾರ್ತೆ ಯಾದಗಿರಿ:*
    ಕಳೆದ ವರ್ಷದಲ್ಲೇ ಉದ್ಘಾಟನೆಯಾಗಬೇಕಿದ್ದ ನಗರ ಪೊಲೀಸ್ ಠಾಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದೂ.?, ಇದೇ ಶನಿವಾರದಂದು ಡಾಕ್ಟರ್ ಜಿ ಪರಮೇಶ್ವರ್ ರವರು ನಗರದ ಗಾಂಧಿ ವೃತದಲ್ಲಿರುವ ನೂತನ ನಗರ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜೂ.22ರಂದು ಜಿಲ್ಲೆಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಂದು ಸವ್ಯಸಾಚಿ ಡಾಕ್ಟರ್ ಜಿ ಪರಮೇಶ್ವರ್ ಯುವ ಬ್ರಿಗೇಡ್ ನ ನೂತನ ಕಛೇರಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ನಗರ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಿದ್ದಾರೆ, ತದನಂತರ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಗೃಹ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಬೆನ್ನಲ್ಲೇ ಬುಧವಾರ ತಡರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆಂದು ಮೂಲಗಳು ಖಚಿತಪಡಿಸಿವೆ..

    ಇನ್ನು ಗೃಹ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಬಗ್ಗೆ ಯಾದಗಿರಿ ಪೊಲೀಸ್ ಇಲಾಖೆ ಅಧಿಕೃತವಾಗಿ ತಿಳಿಸಿಲ್ಲ.

  • ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ

    ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ


    ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಿಎಂಗೆ ಆಹ್ವಾನ

    ಬೆಂಗಳೂರು: ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ಶೀಘ್ರದಲ್ಲಿ ಸಮ್ಮೇಳನಕ್ಕೆ ದಿನಾಂಕ ನೀಡುವುದಾಗಿ ಭರವಸೆ ನೀಡಿದರು.

    ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿ ಅವರು ಮಾತನಾಡಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ, ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ಮತ್ತು ಮಾಲೀಕರ ಸಂಘವು ನಮ್ಮದಾಗಿದೆ. ರಾಜ್ಯಾದ್ಯಂತ ನಮ್ಮ ಸಂಘದ ಜಿಲ್ಲಾ ಘಟಕಗಳು ಪತ್ರಿಕೆಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ತಮ್ಮ ನೇತೃತ್ವದ ಸರ್ಕಾರದ ವತಿಯಿಂದ ನೀಡಿದ ಮತ್ತು ನೀಡುತ್ತಿರುವ ಎಲ್ಲಾ ರೀತಿಯ ಸಹಕಾರವನ್ನು ಸ್ಮರಿಸುತ್ತಿವೆ. ನಮ್ಮ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮ್ಮೇಳನವನ್ನು  ಜುಲೈ ತಿಂಗಳಲ್ಲಿ ಎರಡು ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ನಡೆಯಲಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ  ಹೆಚ್.ಕೆ. ಪಾಟೀಲ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದರು.

    ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು, ಉಪ ಸಂಪಾದಕರು, ಪ್ರಧಾನ ಸಂಪಾದಕರು, ವ್ಯವಸ್ಥಾಪಕ ಸಂಪಾದಕರು, ಆವೃತ್ತಿಗಳ ಸಂಪಾದಕರು ಭಾಗವಹಿಸಲಿದ್ದಾರೆ ಎಂದರು.

    ಈ ಸಮ್ಮೇಳನದಲ್ಲಿ ಮಾಧ್ಯಮ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಪತ್ರಿಕಾ ಸಂಪಾದಕರಿಗೆ ಮತ್ತು ಪತ್ರಿಕಾ ವಿತರಕರಿಗೆ ಮತ್ತು ಸಂಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಈ ಸಮ್ಮೇಳನದಲ್ಲಿ ಸುಮಾರು ಎರಡು ಸಾವಿರಕ್ಕೂ ಮೇಲ್ಪಟ್ಟು ಪತ್ರಿಕಾ ಸಂಪಾದಕರು ಮತ್ತು ಅವರ ಕುಟುಂಬದ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಂಜುನಾಥ ಬಸಪ್ಪ ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿಗಳಾದ ಚನ್ನ ಬಸವ, ಖಜಾಂಚಿ ಖಾನ್ ಸಾಬ್ ಮೆಮೂನ್, ಕಾರ್ಯದರ್ಶಿಗಳಾದ ವಿ.ಅನೂಪ್ ಕುಮಾರ್, ಸಹ ಕಾರ್ಯದರ್ಶಿ ಡಾ.ಕೆ.ಎಸ್ ಸ್ವಾಮಿ,  ಸೇರಿದಂತೆ ಮತ್ತಿತರರು ಇದ್ದರು.

  • ಬಿರುಕು ಬಿಟ್ಟ ವಿದ್ಯುತ್ ಕಂಬ: ಜೀವ ಭಯದಲ್ಲಿ ಅಂಗನವಾಡಿ ಮಕ್ಕಳು

    ಬಿರುಕು ಬಿಟ್ಟ ವಿದ್ಯುತ್ ಕಂಬ: ಜೀವ ಭಯದಲ್ಲಿ ಅಂಗನವಾಡಿ ಮಕ್ಕಳು

    ಶಿಥಿಲಗೊಂಡ ಕಂಬ ದುರಸ್ತಿ ಕಾರ್ಯಕ್ಕೆ ಮುಂದಾಗದೆ ಕ್ಯಾರೇ ಎನ್ನದ ಅಧಿಕಾರಿಗಳು

    *ಸತ್ಯಕಾಮ ವಾರ್ತೆ ಯಾದಗಿರಿ:*
    ಮಕ್ಕಳ ಕಲಿಕೆಯ ಮೊದಲ ಹಂತವಾಗಿರುವ ಅಂಗನವಾಡಿ ಆವರಣದಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ ಕಂಬ ಬಿರುಕು ಬಿಟ್ಟು, ಈಗಲೋ ಆಗಲೋ ಬಿಳುವ ಹಂತದಲ್ಲಿದ್ದೂ, ಅಂಗನವಾಡಿ ಮಕ್ಕಳ ಜೀವ ರಕ್ಷಣೆಗೆ ಬೆಲೆ ಇಲ್ಲದಂತಾಗಿದೆ.

    ಹೌದು ಯಾದಗಿರಿ ಪಟ್ಟಣದ ಹತ್ತಿಕುಣಿ-ಸೇಡಂ ರಸ್ತೆ ಸಮೀಪದ ಹಳೆ ಜಾಕ್ವಾಲ್ ಮುಸ್ಲಿಂಪೂರದಲ್ಲಿರುವ ಅಂಗನವಾಡಿ ಕೇಂದ್ರ-2ರಲ್ಲಿನ ಆವರಣದಲ್ಲಿ ಬಿರುಕು ಬಿಟ್ಟ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ ಕಂಬ ಕಾಣಬಹುದು, ಅಲ್ಲದೆ ಕಂಬದ ಸುತ್ತಲೂ ತಂತಿ ಬೇಲಿ ಅಳವಡಿಸದೇ ಇರುವುದರಿಂದ ಮಕ್ಕಳು ಆಟವಾಡುತ್ತ ಹೋಗಿ ಕಂಬ ಮುಟ್ಟಿದರೆ ಅಪಾಯ ಸಂಭವಿಸುವ ಸ್ಥಿತಿ ಇದೆ.

    ಈ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್‌ ಕಂಬದಲ್ಲಿ ಸಿಮೆಂಟ್ ಉದುರಿದ್ದು ಒಳಭಾಗದ ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ಬಲವಾದ ಗಾಳಿ ಬೀಸಿದರೆ ಕಂಬ ನೆಲಕ್ಕೊರಗುವ ಸಾಧ್ಯತೆಗಳಿವೆ. ಕೂಡಲೇ ಈ ಕಂಬ ಬದಲಾಯಿಸಲು ಜೆಸ್ಕಾಂ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

    ವಿದ್ಯುತ್ ಕಂಬ ದುರಸ್ಥಿ ಮಾಡುವಂತೆ ವರ್ಷದ ಹಿಂದೆಯೇ ಅಧಿಕಾರಿಗಳಿಗೆ ತಿಳಿಸಿದ್ದೆವೆ ಆದರೆ ಕಂಬದಲ್ಲಿನ ವಿದ್ಯುತ್ ಸಂಪರ್ಕವನ್ನು ತೆಗೆದಿದ್ದಾರೆ ಹೊರತು ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದರು.

    ಇತ್ತೀಚಿಗೆ ಜಿಲ್ಲೆಯಲ್ಲಿ ಬಿರುಸಿನ ಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಿದ ಘಟನೆಗಳು ಜೆಸ್ಕಾಂ ಮುಂದಿದ್ದರೂ ಕೂಡ ಅಂಗನವಾಡಿ ಕೇಂದ್ರದ ಆವರಣದಲಿರುವ ವಿದ್ಯುತ್ ಪರಿವರ್ತಕ ಕಂಬಗಳನ್ನು ತೆರುವುಗೊಳಿಸದೇ ಜೆಸ್ಕಾಂ ಅಧಿಕಾರಿಗಳು ಹಸುಗೂಸು ಮಕ್ಕಳ ಜೀವನದಲ್ಲಿ ಆಟವಾಡುತ್ತಿರುವುದು ವಿಪರ್ಯಾಸವಾಗಿದೆ.

    ಆದಷ್ಟು ಬೇಗ ಅಧಿಕಾರಿಗಳು ಕ್ರಮ ಕೈಗೊಂಡು ಅನಾಹುತವನ್ನು ತಪ್ಪಿಸಲು ಮುಂದಾಗುವರಾ.? ಎಂಬುದನ್ನು ಕಾದು ನೋಡಬೇಕಿದೆ.

  • ಸತ್ಯಕಾಮ ವರದಿಗೆ ಸ್ಪಂದಿಸಿದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು

    ಸತ್ಯಕಾಮ ವರದಿಗೆ ಸ್ಪಂದಿಸಿದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು

    ಕಲಬುರ್ಗಿ: ಇತ್ತೀಚೆಗೆ ಕಳೆದ ತಿಂಗಳು ದಿನಾಂಕ 30 ರಂದು ನಮ್ಮ ಪತ್ರಿಕೆಯಲ್ಲಿ ಅನಧಿಕೃತ ಕೇಬಲ್ ತೆರವು ಯಾವಾಗ ಎಂಬ ವರದಿಗೆ ಇಂದು ಮುಹೂರ್ತ ಬಂದಿದೆ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಯಾದಗಿರಿ ಅವರು ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯಾ ಜಿಯೋ ಹೊರತುಪಡಿಸಿ ಇನ್ನುಳಿದ ಕೇಬಲ್ ಗಳು ಅನಧಿಕೃತ ಎಂದು ತಮ್ಮ ಉಪ ವಿಭಾಗವಾರು ವಿದ್ಯುತ್ ಕಂಬಗಳಿಗೆ ಅನಧಿಕೃತವಾಗಿ ಕೇಬಲ್ ಅಳವಡಿಸಿದವರಿಗೆ ಕಂಪನಿ ನಿಯಮ ಸಂಸಾರ ಸೂಕ್ತ ಕ್ರಮ ಕೈಗೊಂಡು ಹಾಗೂ ಇಲ್ಲಿವರೆಗೆ ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸಲು ಪಾವತಿಸಿದ ಶುಲ್ಕವನ್ನು ಮತ್ತು ಶುಲ್ಕದ ವಿವರ ತಮ್ಮ ಕಚೇರಿಗೆ ತಕ್ಷಣ ಸಲ್ಲಿಸಲು ಸೂಚಿಸುತ್ತಾರೆ.

  • ಆರ್. ಕೆ ಗೆಲುವು ಖಚಿತವೆಂದ ಸಮೀಕ್ಷೆ

    ಆರ್. ಕೆ ಗೆಲುವು ಖಚಿತವೆಂದ ಸಮೀಕ್ಷೆ

    ಸತ್ಯಕಾಮ ವಾರ್ತೆ ಕಲಬುರ್ಗಿ:
    ಕರ್ನಾಟಕ ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರಬಂದಿದ್ದೂ, ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ಅಳಿಯ ರಾಧಕೃಷ್ಣ ದೊಡ್ಮನಿ ಬಾರಿ ಅಂತರದಲ್ಲಿ ಗೆಲುವಿನ ಪಟಾಕಿ ಸಿಡಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ವರದಿ ಮಾಡಿವೆ.

    2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿ ಬಿಜೆಪಿಯ ಬಾವುಟವನ್ನು ಹಾರಿಸಿದ್ದ ಉಮೇಶ್ ಜಾಧವ್ ಅವರು ಈ ಬಾರಿಯೂ ಗೆಲುವು ಸಾಧಿಸಿ ಕಲಬುರ್ಗಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸದಿಂದ ಮತ್ತೆ ಹೈಕಮಾಂಡ್ ಉಮೇಶ್ ಜಾಧವ್ ಅವರನ್ನು ಕಣಕ್ಕೆ ಇಳಿಸಿದೆ.

    ಆದರೆ ಇದೆಲದ್ದಕ್ಕೂ ತೆರೆ ಎಳೆದಿರುವ ಚುನಾವಣೋತ್ತರ ಸಮೀಕ್ಷೆಗಳು ಖರ್ಗೆ ಅಳಿಯ ರಾಧಕೃಷ್ಣ ದೊಡ್ಮನಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುಧ್ಧ ಬಾರಿ ಅಂತರದಿಂದ ಗೆಲುವು ಸಾಧಿಸಲಿದ್ದೂ ಕಳೆದ ಬಾರಿ ಬಿಜೆಪಿಗೆ ಮತ ಚಲಾಯಿಸಿದ್ದ ಮತದಾರರು ಈ ಬಾರಿ ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳನ್ನು ಮೆಚ್ಚಿ ಈ ಬಾರಿ ರಾಧಾಕೃಷ್ಣ ದೊಡ್ಡಮನಿ ಅವರ ಕೈ ಹಿಡಿದಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಸಮೀಕ್ಷೆಗಳ ಬಹಿರಂಗಗೊಳಿಸಿವೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮೇ 07 ರಂದು ಎರಡನೇ ಹಂತದ ಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಕಾಂಗ್ರೆಸ್ಸ್ ಅಭ್ಯರ್ಥಿಯಾಗಿ ಖರ್ಗೆ ಅಳಿಯ ರಾಧಕೃಷ್ಣ ದೊಡ್ಮನಿ ಸ್ಪರ್ಧಿಸಿದ್ದರು.

    ಈ ಬಾರಿ ನಾನೇ ಗೆಲ್ಲುವೇ ಎಂದು ಪಣತೊಟ್ಟಿರುವ ಇಬ್ಬರೂ ಅಭ್ಯರ್ಥಿಗಳು ಜೂನ್ 04 ರ ಫಲಿತಾಂಶಕ್ಕೆ ಕಾಯಬೇಕಿದೆ.

  • ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ : ಇನ್ನೂ ಆಕ್ಟಿವ್

    ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ : ಇನ್ನೂ ಆಕ್ಟಿವ್

    ಜಿಲ್ಲಾಧಿಕಾರಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಸಾರ್ವಜನಿಕರಿಗೆ ರಿಪ್ಲೈ ಮಾಡಿದ ಖದೀಮರು

    ಸತ್ಯಕಾಮ ವಾರ್ತೆ
    ಯಾದಗಿರಿ ಜಿಲ್ಲಾಧಿಕಾರಿ ಡಾ ಸುಶೀಲಾ ಬೀ ಅವರ ನಕಲಿ ಫೇಸ್ ಖಾತೆ ತೆರೆಯಲಾಗಿದೆ, ಅಲ್ಲದೇ ಈ ಖಾತೆಯಿಂದ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾಡಳಿತದಲ್ಲಿನ ಅಧಿಕಾರಿ ವರ್ಗದವರಿಗೆ ಖದೀಮರು ಮೆಸೇಜ್ ಕಳಿಸುತ್ತಿದ್ದಾರೆ.

    ಡೆಪ್ಯೂಟಿ ಕಮಿಷನ್ ಯಾದಗಿರಿ ಐಎಎಸ್ (ಸುಶೀಲಾ ಬಿ) ಎಂಬ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿರುವ ಖದೀಮರು ಜಿಲ್ಲಾಧಿಕಾರಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಯೇ ಆ ಮೇಸೆಜ್ ಗಳಿಗೆ ರಿಪ್ಲೇ ಮಾಡಿದ್ದಾರೆ ಎಂದು ಸಾರ್ವಜನಿಕರು ನಂಬಿದ್ದಾರೆ, ಅಲ್ಲದೇ ಜಿಲ್ಲಾಧಿಕಾರಿ ಅವರಿಗೆ ಫೋಟೋ ಸ್ಟೇಟಸ್ ಇಟ್ಟುಕೊಂಡಿದ್ದ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡ ಕದೀಮರು ಅದನ್ನು ಜಿಲ್ಲಾಧಿಕಾರಿಯವರ ನಕಲಿ ಫೇಸ್ಬುಕ್ ಖಾತೆಯಲ್ಲಿ ಸ್ಟೇಟಸ್ ಇಟ್ಟಿದ್ದಾರೆ.

    ಜಿಲ್ಲಾಧಿಕಾರಿಗಳ ಹೆಸರು ಮತ್ತು ಡಿಪಿ ಯಲ್ಲಿ ಪೋಟೋ ಬಳಸಿಕೊಂಡು ವಂಚನೆ ಮಾಡಲು ಯತ್ನಿಸುವ ಪ್ರಕರಣಗಳು ಕಂಡು ಬಂದ ಮೇರೆಗೆ ಸ್ವತಹ ಜಿಲ್ಲಾಧಿಕಾರಿಯೇ ಸೈಬರ್ ಕ್ರೈಂ ನಲ್ಲಿ ಪ್ರಕರಣ ದಾಖಲಿಸಿರುವುದಾಗಿ ಮೊನ್ನೆಯಷ್ಟೇ ಹೇಳಿಕೊಂಡಿದ್ದರು. ಅದರೆ ಇದುವರೆಗೂ ಪ್ರಕರಣವನ್ನು ಭೇದಿಸದ ಸೈಬರ್ ಕ್ರೈಂ ಪೊಲೀಸರು ಜಿಲ್ಲಾಧಿಕಾರಿ ಹೆಸರಿನ ನಕಲಿ ಖಾತೆಯನ್ನು ಪತ್ತೆ ಹಚ್ಚುವಲ್ಲಿ ಆಸಕ್ತಿ ತೋರುತ್ತಿಲ್ಲ.

    ಆದಷ್ಟು ಬೇಗನೆ ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲಾಧಿಕಾರಿ ಖಾತೆಯಿಂದ ಮೋಸ ಹೋಗದಂತೆ ತಡೆಯಬೇಕಾಗಿದೆ.

  • ಅನಧಿಕೃತ ಕೇಬಲ್ ತೆರವಿಗೆ  ಮುಹೂರ್ತ ಯಾವಾಗ..?

    ಅನಧಿಕೃತ ಕೇಬಲ್ ತೆರವಿಗೆ ಮುಹೂರ್ತ ಯಾವಾಗ..?

    ಜನಪ್ರತಿನಿಧಿಗಳು, ಜೆಸ್ಕಾಂ ಅಧಿಕಾರಿಗಳು ಅವಘಡ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವರೇ?

    *ಸತ್ಯಕಾಮ ವಾರ್ತೆ ಯಾದಗಿರಿ:*
    ಜಿಲ್ಲೆಯಲ್ಲಿ ಅನದಿಕೃತ ಕೇಬಲ್ ಗಳ ಹಾವಳಿ ಮಿತಿ ಮೀರಿದ್ದು, ಕಳೆದ ಶನಿವಾರ ಸತ್ಯಕಾಮ ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯಾ. ಜಿಯೋ ಹೊರತುಪಡಿಸಿ ಇನ್ನುಳಿದ ಕೇಬಲ್ ಗಳು ಅನದಿಕೃತವೆಂದು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗಿ ನಾಲ್ಕೈದು ಐದು ದಿನ ಕಳೆದರೂ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಯಾಗಲಿ, ನಗರಸಭೆ ಆಯುಕ್ತರಾಗಲಿ(ಪ್ರ), ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಿದ್ದಾರೆ..?

    ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಮ್ಮ ಪ್ರತಿನಿಧಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದಕ್ಕೆ ಕಾರಣವೇನಿರಬಹುದು.?

    ಕಾನೂನು ಬದ್ಧವಾಗಿ ಒಎಫ್‌ಸಿ ಅಳವಡಿಕೆಗೆ ನಿರ್ದಿಷ್ಟ ಶುಲ್ಕಗಳನ್ನು ಪಾವತಿಸದೆ, ಅನುಮತಿ ಪಡೆಯದೇ ಕೇಬಲ್ ಗಳನ್ನು ಅಳವಡಿಸಲಾಗಿದೆ. ಕೇಬಲ್ ಗಳಿಂದ ನಗರದ ಸೌಂದ ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆಯೇ ವಿನಾ ಇದರಿಂದ ಸರ್ಕಾರದ ಬೊಕ್ಕಸ ತುಂಬಬೇಕಿದ್ದ ಲಕ್ಷಾಂತರ ರೂಪಾಯಿ ಗುಳುಂ ಆಗುತ್ತಿದೆ.

    ನಗರದಲ್ಲಿ ಇತ್ತಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಪಾದಚಾರಿ ಮಾರ್ಗದಲ್ಲಿ ಮರಗಳು, ಕಂಬಗಳು ಜೊತೆಗೆ ಒಎಫ್‌ಸಿ, ಫೋನ್, ಟಿ.ವಿ ಹೀಗೆ ವಿವಿಧ ಕೇಬಲ್‌ಗಳು ನೆಲಕ್ಕೆ ಬಿದ್ದಿವೆ. ಕೆಲವು ಕಡೆ ತುಂಡಾಗಿ ಬಿದ್ದಿದ್ದರೆ, ಇನ್ನು ಕೆಲವೆಡೆ ಕೈಗೆಟುಕುವ ಅಂತರದಲ್ಲಿವೆ. ಕೆಲವು ಕಡೆ ವಿದ್ಯುತ್ ಕಂಬಗಳಲ್ಲಿನ ಕೇಬಲ್ ಬಂಡಲ್ ಗಳು ಜೋತುಬಿದಿದ್ದು,
    ರಸ್ತೆ ಮೇಲೆ ವಾಹನ ಸವಾರರು ಸಂಚರಿಸುವಾಗ ಯಾವ ವಾಹನ/, ವ್ಯಕ್ತಿಯ ಮೇಲೆ ಕೇಬಲ್‌ಗಳು ಬೀಳುತ್ತವೆಯೋ ಹೇಳಲಾಗದು.

    ನಾಗರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಧಿಕಾರಿಗಳು ಹಾಗೂ ಜನ್ರತಿನಿಧಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ಪ್ರಮುಖವಾಗಿ ವಿದ್ಯುತ್ ಕಂಬದಲ್ಲಿನ ವಿಷಯಕ್ಕೆ ಸಂಬAಧಿಸಿದAತೆ ಜೆಸ್ಕಾಂ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು, ವಿದ್ಯುತ್ ಕಂಬದಿAದ ಸ್ವಲ್ಪ ವ್ಯತ್ಯಾಸವಾದರೂ ಜೀವಹಾನಿ ಸಂಭವಿಸುವ ಅಪಾಯವಿರುತ್ತದೆ. ಇನ್ನೂ ನಿರ್ಲಕ್ಷö್ಯವಹಿಸಿದಿದಲ್ಲಿ ಅದಕ್ಕೆ ಇಲಾಖೆಯೇ ಭಾರಿ ಬೆಲೆತೆತ್ತ ಬೇಕಾಗುತ್ತದೆ!

    ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಕಠಿಣ ಕ್ರಮ ವಹಿಸಿದರೆ ಮಾತ್ರ ಕೇಬಲ್ ಮಾಫಿಯಾವನ್ನು ನಿಯಂತ್ರಿಸಲು ಸಾಧ್ಯ. ಜನಜೀವನಕ್ಕೆ ತೊಂದರೆಯಾಗುವAತೆ ಕೇಬಲ್ ಅಳವಡಿಸಿದವರಿಗೆ ಶಿಕ್ಷೆಯಾದಾಗ ಮಾತ್ರ ಸಿಕ್ಕಸಿಕ್ಕಲ್ಲಿ ಕೇಬಲ್ ಅಳವಡಿಸುವುದು ಕಡಿಮೆಯಾಗಲಿದೆ. ಜನರು ದೂರುತ್ತಾರೆಂಬ ಕಾರಣಕ್ಕೆ ನಾಮಕೇವಾಸ್ತೆಗೆ ಅದನ್ನು ಪರಿಶೀಲನೆ, ನೋಟಿಸ್‌ಗಳು ನೀಡಿ ಕೈತೊಳೆದುಕೊಂಡು ಕುಳಿತಲ್ಲಿ ಅಕ್ರಮ ನಿಯಂತ್ರಿಸುವುದು ಕಷ್ಟ ಎಂಬುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ,

    ಅವಘಡ ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು,ಜನಪ್ರತಿನಿಧಿಗಳು ದುರ್ಘಟನೆ ನಡೆದಾದ ಮೇಲೆ ಎಚ್ಚೆತ್ತುಕೊಳ್ಳುವವರಾ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡಿದೆ, ಇನ್ನು ಯಾವಾಗ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ.

  • ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯ

    ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯ

    ಜಿಯೋ ಹೊರತು ಪಡಿಸಿ ಇನ್ನುಳಿದ ಕೇಬಲ್ ಗಳು ಅನಧಿಕೃತ

    ಸತ್ಯಕಾಮ ವಾರ್ತೆ ಯಾದಗಿರಿ:
    ನಗರದ ರಸ್ತೆ, ಪಾದಚಾರಿ ಮಾರ್ಗ, ಮರ, ವಿದ್ಯುತ್‌ ಕಂಬ, ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಖಾಸಗಿ ಕೇಬಲ್‌ಗಳು ಮೀನಿನ ಬಲೆಯಂತೆ ವ್ಯಾಪಿಸಿ ನಾಗರಿಕರಿಗೆ ಅಪಾಯ ತಂದೊಡ್ಡಿರುವ ಕಪ್ಪು ಬಣ್ಣದ ಕೇಬಲ್‌ಗಳು ಅನಧಿಕೃತವಾಗಿವೆಂದು ಗೊತ್ತಿದ್ದರೂ ಕೂಡ ಆಡಳಿತ ನಡೆಸುವವರು ಮಾತ್ರ ಇದರ ಬಗ್ಗೆ ಮೌನವಹಿಸಿದ್ದಾರೆ.

    ಹೌದು ಈ ಬಗ್ಗೆ ನಗರಸಭೆ ಹಾಗೂ ಜೆಸ್ಕಾಂ ಕಚೇರಿಗೆ ಯಾದಗಿರಿ ನಗರದಲ್ಲಿ ಓಎಫ್‌ಸಿ ಕೇಬಲ್, ಇಂಟರನೆಟ್ ಕೇಬಲ್, ಡಿಷ್ ಟಿವಿ ಕೇಬಲ್, ಫೈಬರ್ ಕೇಬಲಗಳು ಅಳವಡಿಸಲು ಇರುವ ಗೈಡ್ ಲೈನ್ಸ್‌ಗಳ ಪತ್ರದ ಪ್ರತಿ ಹಾಗೂ ಅನುಮತಿ ಪಡೆದವರ ವಿವರಗಳನ್ನು ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಕೋರಿದ ಮಾಹಿತಿಗೆ ಉತ್ತರ ನೀಡಿದ ಜೆಸ್ಕಾಂ ಹಾಗೂ ನಗರಸಭೆ, ಜಿಲ್ಲೆಯಲ್ಲಿ ಅಧಿಕೃತವಾಗಿ ಇಲಾಖೆಗೆ ಹಣ ಪಾವತಿ ಮಾಡಿದ್ದು ಕೇವಲ ಒಂದೇ ಒಂದು ಕಂಪೆನಿ ಅದೂ ಜಿಯೋ ಮಾತ್ರ ಇನ್ನುಳಿದ ಯಾವುದೇ ಕಂಪನಿಯು ಪರವಾನಿಗೆ ಪಡೆದಿಲ್ಲ ಎಂದು ಉತ್ತರಿಸಿವೆ.

    ಜಿಲ್ಲೆಯಲ್ಲಿ ಒಎಫ್‌ಸಿ ಕೇಬಲ್‌ ಅಕ್ರಮವಾಗಿ ಹರಡಿಕೊಂಡಿದ್ದೂ. ಸರ್ಕಾರದ ಇಲಾಖೆಗಳನ್ನು ನಿಯಂತ್ರಿಸುವ ಮಾಫಿಯಾಗಳಲ್ಲಿ ಈ ಒಎಫ್‌ಸಿ ಕೇಬಲ್‌ ಮಾಫಿಯಾ ಕೂಡ ಒಂದು. ಹೀಗಾಗಿಯೇ ಅಧಿಕಾರಿಗಳು ಅನಧಿಕೃತ ಕೇಬಲ್‌ ತೆರವುಗೊಳಿಸಲು ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ತೋರುತ್ತಿಲ್ಲ.

    ಟೆಲಿಕಾಂ ಸೇವಾ ಕಂಪನಿಗಳು 4 ರಿಂದ 6 ಕಿ.ಮೀ ಉದ್ದದ ಒಎಫ್‌ಸಿ ಕೆಬಲ್ ಗೆ ಅನುಮತಿ ಪಡೆದು ಐದು ಪಟ್ಟು ಅಧಿಕ ಡಕ್ಟ್ ಅಳವಡಿಸಿ ಲಕ್ಷಾಂತರ ರೂ. ಶುಲ್ಕ ವಂಚಿಸುತ್ತಿವೆ. ಒಂದು ಸಂಸ್ಥೆಯು ಜಿಲ್ಲೆಯಲ್ಲಿ ಕೇಬಲ್ ಅಳವಡಿಕೆಗೆ ಅನುಮತಿ ಪಡೆದರೆ, ಇತರೆ ಮೂರ್ನಾಲ್ಕು ಸಂಸ್ಥೆಗಳು ಅಕ್ರಮವಾಗಿ ಅದರಲ್ಲಿ ಕೇಬಲ್‌ ಹಾಕುತ್ತಿವೆ. ಈ ಅಕ್ರಮವನ್ನು ಪರಿಶೀಲಿಸುವ ತಾಂತ್ರಿಕ ನೈಪುಣ್ಯತೆ ಅಧಿಕಾರಿಗಳಿಗಿಲ್ಲ ಈ ಕಾರಣದಿಂದ್ದಾಗಿ ಅಕ್ರಮ ಕಬಲ್ ಮಾಫಿಯಾ ಜಾಲ ವಿಸ್ತಾರಣೆಗೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

    ಮೊಬೈಲ್‌ ಟವರ್‌ಗಳು, ಬ್ರಾಂಡ್‌ಬ್ಯಾಂಡ್‌ ಸೇವೆಗಳು ಸಂಪೂರ್ಣವಾಗಿ ಒಎಫ್‌ಸಿಯನ್ನೇ ಅವಲಂಬಿಸಿವೆ. ದೂರ ಸಂಪರ್ಕ ಸೇವೆ ಒದಗಿಸುವ ಸೇವಾದಾರರದ್ದು ಒಂದು ವಿಧವಾದರೆ, ಟಿವಿ ಸೇವೆಯೊಂದಿಗೆ ಅಂತರ್ಜಾಲ ಸೇವೆ ಒದಗಿಸುವರದ್ದು ಇನ್ನೊಂದು ವಿಧ. ಐಎಸ್‌ಪಿ ಸೇವೆ ಒದಗಿಸುವವರು ಒಎಫ್‌ಸಿಯನ್ನು ಮರದಿಂದ ಮರಕ್ಕೆ, ಕಂಬದಿಂದ ಕಂಬಕ್ಕೆ ಎಳೆದು, ರಸ್ತೆಗಳಲ್ಲಿ ತೋರಣ ಕಟ್ಟಿದ್ದಾರೆ!

    ಇನ್ನೂ ಒಎಫ್‌ಸಿ ಮಾರ್ಗದ ಶುಲ್ಕದಿಂದ ತಪ್ಪಿಸಿಕೊಳ್ಳಲು ಹಲವು ಸಂಸ್ಥೆಗಳು ಅನುಮತಿ ಪಡೆದಿರುವ ಕಂಪನಿಯೊಂದಿಗೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಹಣ ಉಳ್ಳವರ ಪಾಲಾಗುತ್ತಿದೆ.

    ನಗರದಲ್ಲಿ ಬಹುತೇಕ ಕಂಬಗಳು ಕೇಬಲ್‌ನಿಂದ ಆವರಿಸಿದ್ದೂ. ಈ ಕಂಬಗಳಲ್ಲಿ ರಿಪೇರಿ ಇದ್ದರೆ ಲೈನ್‌ಮನ್‌ಗೆ ಕಂಬವೇರುವುದು ತ್ರಾಸದಾಯಕ. ಇದರಿಂದ ಅವಘಡ ಸಾಧ್ಯತೆಯೂ ಹೆಚ್ಚು, ತುರ್ತು ಸಂದರ್ಭಗಳಲ್ಲಿ ಲೈನ್‌ಮನ್‌ ಗಳು ಕಂಬವೇರಲು ಹರಸಾಹಸ ಪಡಬೇಕಾಗಿದೆ.

    ನಗರದಲ್ಲಿ ಅಕ್ರಮವಾಗಿ ಒಎಫ್ ಸಿ, ಕೇಬಲ್ ಹಾಕುವಾಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ಅಕ್ರಮ ಒಎಫ್ ಸಿ ಕೇಬಲ್ ಗಳ ಹಾವಳಿ ತಪ್ಪಿಸಬಹುದು. ಆದರೆ ಅಧಿಕಾರಿಗಳು ಈ ಭ್ರಷ್ಟ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಆಪ್ಟಿಕಲ್ ಕೇಬಲ್ ಹಾವಳಿಗೆ ಕಡಿವಾಣ ಹಾಕಲಾಗುತ್ತಿಲ್ಲ.

    ಕೂಡಲೇ ಸಂಬದಪ್ಪಟ್ಟ ಅಧಿಕಾರಿಗಳು ಅನಧಿಕೃತ ಕೇಬಲ್ ಮಾಫಿಯ ಕಡೆ ಗಮನಹರಿಸಿ ಕಡಿವಾಣ ಹಾಕುವರಾ ಎಂಬುದನ್ನ ಕಾದುನೋಡಬೇಕಿದೆ.

  • ದಿ|| ಮಾಜಿ ಅಧ್ಯಕ್ಷನಿಗೆ ಅಗೌರವ ತಂದ ಮಹಾನ್ ಸಾಹಿತಿಗಳ ವೇದಿಕೆ

    ದಿ|| ಮಾಜಿ ಅಧ್ಯಕ್ಷನಿಗೆ ಅಗೌರವ ತಂದ ಮಹಾನ್ ಸಾಹಿತಿಗಳ ವೇದಿಕೆ


    ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಫೆ.೨೬ ಹಾಗೂ ೨೭ರಂದು ನಡೆದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರು ಅವರಿಗೆ ನುಡಿ ನಮನ ಸಲ್ಲಿಸದೆ ಕಾರ್ಯಕ್ರಮ ನಡೆಸಿರುವುದು ವಿಪರ್ಯಾಸ.
    ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮೊದಲು ದಿವಂಗತರಿಗೆ ಗೌರವ ನಮನ ಸಲ್ಲಿಸಿ ತದನಂತರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡಬೇಕಾಗಿತ್ತು. ಆದರೆ ಕಸಾಪ ಈ ಕೆಲಸ ಮಾಡದೆ ಅಗೌರವ ತೋರಿರುವುದು ಸಾಹಿತಿಕಾರರಿಗೆ ಹಾಗೂ ಕನ್ನಡಾಭಿಮಾನಿಗಳಲ್ಲಿ ಬೇಸರ ತರಿಸಿದೆ.
    ಹೌದು ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರರವರು ಸಾಹಿತ್ಯ ಪರಿಷತ್ತಿಗೆ ನೀಡಿರುವ ಕೊಡುಗೆ ಅಪಾರ, ೧೯೯೫ರಲ್ಲಿ ಕಲ್ಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಿಗೆ ಸರ್ವಾಧ್ಯಕ್ಷ ಪಟ್ಟವನ್ನು ಕಟ್ಟಿ ಕನ್ನಡದ ತೆರನ್ನು ಎಳೆದವರು. ಅಲ್ಲದೆ ಕನ್ನಡದ ಕಂಪು ಕಲ್ಬುರ್ಗಿಯ ಜನರಿಗೆ ಉಣಬಡಿಸಿದರು, ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿ ಕಚೇರಿಯನ್ನಾಗಿ ಮಾಡುವುದರ ಜೊತೆಗೆ ಈಗಿರುವ ದಿ|| ಬಾಪುಗೌಡ ರಂಗಮಂದಿರಕ್ಕೆ ಭೂಮಿ ಪೂಜೆ ಆದದ್ದು ಕೂಡ ಇವರ ಕಾಲದಲ್ಲಿ ಎಂಬುದು ಈಗಿನ ಸಾಹಿತಿಗಳು ತಿಳಿದು ಕೊಳ್ಳಬೇಕು.
    ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆಯ ಹಿರಿಮೆ ಗರಿಮೆಯ ಕನ್ನಡಿಗರ ಐಕ್ಯತೆಯ ಕನ್ನಡದ ಅಳಿವು ಉಳಿವಿನ ಕೋಟಿ ಲೆಕ್ಕದ ವೇದಿಕೆಯಾಗಬೇಕು. ಭಾಷೆಯೊಂದಕ್ಕೆ ಇಂತಹ ಅತೀ ದೊಡ್ಡ ಮನ್ನಣೆ ಸಿಗುತ್ತಿರುವಾಗ ಅದೊಂದು ರಾಜಕೀಯ ಜಾತ್ರೆಯಂತಾಗಿದ್ದು ಬೇಸರ.
    ಒಂದರ್ಥದಲ್ಲಿ ರಾಜಕೀಯ ಅಸ್ಪೃಶ್ಯತೆ ಕೂಡ ಸಾಹಿತ್ಯ ಲೋಕದಲ್ಲಿ ನುಸುಳಿದೆ ಎಂದು ಹೇಳಬಹುದು. ಸಾಹಿತ್ಯ ಕ್ಷೇತ್ರವನ್ನು ಕಟ್ಟುತ್ತಿರುವುದು ಕವಿಗಳು ಮತ್ತು ಸಾಹಿತಿಗಳೆ ಹೊರತು ರಾಜಕೀಯದವರಲ್ಲ ಎಂಬುದನ್ನು ಮನದಟ್ಟಣೆ ಮಾಡಿಕೊಳ್ಳಬೇಕು. ಈ ಬೆಳವಣಿಗೆ ಸಾಹಿತ್ಯ ಲೋಕವನ್ನು ಮತ್ತು ಹಿರಿಯ ಸಾಹಿತಿಗಳನ್ನು ಬಹುಬೇಗಾ ದೂರತಳ್ಳುತ್ತಿರುವ ಮುನ್ಸೂಚನೆ ಕಂಡಬರುತ್ತಿದೆ.

  • ಯಾದಗಿರಿ ಜಿಲ್ಲಾ ಮಾಧ್ಯಮಪಟ್ಟಿಯಲ್ಲಿದ್ದವರಿಗೆ ಮಾತ್ರ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವಂತೆ..!ಅದ್ಯಕ್ಷರ  ಹೊಸ ವರಾತ

    ಯಾದಗಿರಿ ಜಿಲ್ಲಾ ಮಾಧ್ಯಮಪಟ್ಟಿಯಲ್ಲಿದ್ದವರಿಗೆ ಮಾತ್ರ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವಂತೆ..!ಅದ್ಯಕ್ಷರ ಹೊಸ ವರಾತ


    (ವರದಿ: ಕುದಾನ್‌ ಸಾಬ್‌)

    ಸತ್ಯಕಾಮ ವಾರ್ತೆ ಯಾದಗಿರಿ:
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾ ಘಟಕವು ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ದಿ ಮತ್ತು ವೃತ್ತಿಪರ ಉನ್ನತೀಕರಣಕ್ಕೆ ಸಕ್ರೀಯವಾಗಿ ಕೆಲಸ ಮಾಡಬೇಕೇ ಹೊರತು ತಮ್ಮ ಸ್ವಹಿತಾಸಕ್ತಿಗಾಗಿ ನೈಜ ಪತ್ರಕರ್ತರಿಗೆ ಸದಸ್ಯತ್ವ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಉದ್ಭವಿಸಿದೆ.

    ಸದಾ ಸಂಘಟನೆಯ ಸ್ಥಾನಮಾನಗಳಲ್ಲೆ ಇರಬೇಕು ಎಂಬ ಹಪಾಹಪಿಗೆ ಬಿದ್ದಿರುವ ಇಲ್ಲಿನ ಸಂಘದ ಜಿಲ್ಲಾಧ್ಯಕ್ಷ ಸದಸ್ಯತ್ವವನ್ನು ಹೊಸಬರಿಗೆ ಸದಸ್ಯತ್ವ ನಿರಾಕರಿಸಿ ಪತ್ರಕರ್ತ ಸಮೂಹದಲ್ಲಿ ಕುತಂತ್ರ ನಡೆಸುತ್ತಿದ್ದಾರೆ ಒಂದರ್ಥದಲ್ಲಿ ಪಟ್ಟ ಭದ್ರ ಮಾಡಿಕೊಳ್ಳುವ ಕುತಂತ್ರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಕಾರ್ಯನಿರತ ಪತ್ರಕರ್ತರು ಆರೋಪಿಸುತ್ತಿದ್ದಾರೆ.

    ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಬೇಕಾದಾರೆ ಜಿಲ್ಲೆಯ ಮಾಧ್ಯಮ ಪಟ್ಟಿಯಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಕೊಡಲಾಗುವುದು ಇಲ್ಲದಿದ್ದರೆ ಕೊಡಲು ಸಾಧ್ಯವಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಹೇಳುತ್ತಾರೆ. ಆದರೆ ಈ ಕುರಿತು ಯಾವುದಾದರೂ ಆದೇಶ ಇಲ್ಲವೇ ಪತ್ರಕರ್ತರ ಸಂಘದ ನಿರ್ಣಯ ಇದ್ದರೆ ನೀಡುವಂತೆ ಮಾಡುವ ಮನವಿಗೂ ನಕಾರಾತ್ಮಕವಾಗಿ ಅಸಂಬಂದ್ದ ಉತ್ತರ ನೀಡುತ್ತಾರೆ.

    ಪತ್ರಕರ್ತರ ಸಂಘದ ಬೈಲಾ ನೀಡುವಂತೆ ಕೇಳಿದರೆ ಕೊಡಲು ಬರುವುದಿಲ್ಲ ಎಂದು ಒಬ್ಬರು ಹೇಳಿದರೆ ಇನ್ನೊಬ್ಬ ಪದಾಧಿಕಾರಿ ರಾಜ್ಯಕ್ಕೆ ಎಲ್ಲ ಕಡೆ ಒಂದೇ ಬೈಲಾ ಇದೆ ಬೇಕಿದ್ದರೆ ಅಲ್ಲಿ ಹೋಗಿ ನೋಡಿಕೊಳ್ಳಿ ಎಂದು ಪರೋಕ್ಷವಾಗಿ ಹೇಳುತ್ತಿರುವುದು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

    ಇದಲ್ಲದೇ ಹೊಸದಾಗಿ ಬಂದ ಪತ್ರಕರ್ತರಿಗೆ ಹಾಗೂ ನೈಜ ಪತ್ರಕರ್ತರಿಗೆ ಸದಸ್ಯತ್ವ ಮಾಡಿಸುವ ಮೂಲಕ ಸಂಘವನ್ನು ಬಲಪಡಿಸಬೇಕಾದ ಜವಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರು ಯಾವುದೇ ಮಾಹಿತಿ ಕೇಳಿದರೆ ಸಾಕು ಸರ್ವಾಧಿಕಾರಿಯಂತೆ ವರ್ತಿಸಿ ಪತ್ರಿಕಾ ಭವನದ ಗ್ರೂಪ್ ನಿಂದ ರಿಮೂವ್ ಮಾಡುವುದು ಪತ್ರಕರ್ತರ ಸಂಘದ ಗ್ರೂಪ್ ನಿಂದ ರಿಮೂವ್ ಮಾಡುವುದು ಮಾಡುವ ಮೂಲಕ ಪತ್ರಕರ್ತರ ವಿರುದ್ಧವೇ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ನಡೆಯುತ್ತಿದೆ.

    ಪರಿಸ್ಥಿತಿ ಹೀಗೆ ಮುಂದುವರೆದರೆ ಅನ್ಯಾಯದ ಬಗ್ಗೆ ಪ್ರಶ್ನಿಸುವ ಪತ್ರಕರ್ತರ ಸಂಘದಲ್ಲಿಯೇ ಅನ್ಯಾಯ ನಡೆದರೆ ಇನ್ನಾರಿಗೆ ಪ್ರಶ್ನಿಸುವುದು ಎಂಬುದನ್ನು ಸಂಬಂಧಿಸಿದವರೇ ಹೇಳಬೇಕಿದೆ.