Category: Special News

  • ಟಿಟಿಇ ಬಹಿರಂಗಪಡಿಸಿದ ಲೋವರ್ ಬರ್ತ್ ಸಿಗುವ ಸುಲಭ ಮಾರ್ಗ!

    ಟಿಟಿಇ ಬಹಿರಂಗಪಡಿಸಿದ ಲೋವರ್ ಬರ್ತ್ ಸಿಗುವ ಸುಲಭ ಮಾರ್ಗ!

    ಭಾರತೀಯ ರೈಲ್ವೆ ಎಂದರೆ ಕೋಟಿ ಕೋಟಿ ಜನರ ದಿನನಿತ್ಯದ ಪ್ರಯಾಣದ ನಂಬಿಕೆಯ ಮಾರ್ಗ. ಆದರೆ ಹಿರಿಯ ನಾಗರಿಕರಿಗೆ (Senior Citizens) ಈ ಪ್ರಯಾಣ ಕೆಲವೊಮ್ಮೆ ತುಂಬಾ ಕಷ್ಟಕರವಾಗುತ್ತದೆ. ದೂರದ ಪ್ರಯಾಣದಲ್ಲಿ ಅವರಿಗೆ ಮೇಲಿನ (Upper) ಅಥವಾ ಮಧ್ಯಮ (Middle) ಬರ್ತ್ ಸಿಕ್ಕರೆ, ಅದು ನಿಜಕ್ಕೂ ಸವಾಲಾಗುತ್ತದೆ. ಪದೇ ಪದೇ ಮೇಲಕ್ಕೆ ಹತ್ತುವುದು, ಇಳಿಯುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯೂ ಆಗಬಹುದು. ವಿಶೇಷವಾಗಿ ವಯೋವೃದ್ಧ ಮಹಿಳೆಯರು ಅಥವಾ ಆರೋಗ್ಯ ಸಮಸ್ಯೆ ಇರುವವರು ಇದರಿಂದ ತೊಂದರೆ ಅನುಭವಿಸುತ್ತಾರೆ.

    ಈಗ ಇಂತಹ ಹಿರಿಯ ನಾಗರಿಕರಿಗೆ ಒಂದು ಉಪಯುಕ್ತ ಮಾಹಿತಿಯನ್ನು ರೈಲ್ವೆಯ ಟಿಟಿಇ (TTE) ಒಬ್ಬರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಟಿಟಿಇ ನೀಡಿದ ಸಲಹೆ ಅನೇಕ ಹಿರಿಯ ನಾಗರಿಕರಿಗೆ ಪ್ರಯಾಣದ ಅನುಭವವನ್ನು ಸುಲಭಗೊಳಿಸಬಹುದು ಎನ್ನುವುದು ಖಚಿತ.

    ಇತ್ತೀಚೆಗೆ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ರೆಕಾರ್ಡ್ ಮಾಡಲಾದ ಒಂದು ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ ಟಿಟಿಇ ಒಬ್ಬರು ಪ್ರಯಾಣಿಕರ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅವರ ಮುಂದೆ ನಾಲ್ವರು ಹಿರಿಯ ನಾಗರಿಕರು ಇದ್ದರು. ಈ ನಾಲ್ವರು ಹಿರಿಯ ಪ್ರಯಾಣಿಕರಿಗೆ ಲೋವರ್ ಬರ್ತ್ ಬದಲು ಮಧ್ಯಮ ಮತ್ತು ಮೇಲಿನ ಬರ್ತ್‌ಗಳು ಸಿಕ್ಕಿದ್ದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಅದಕ್ಕೆ ಟಿಟಿಇ ಸ್ಪಷ್ಟನೆ ನೀಡುತ್ತಾ ಹೇಳಿದರು, ನೀವು ನಾಲ್ವರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ, ಸಿಸ್ಟಮ್‌ ಸ್ವಯಂಚಾಲಿತವಾಗಿ ಲೋವರ್ ಬರ್ತ್ ನೀಡುವುದಿಲ್ಲ. ಬದಲಿಗೆ ಮಧ್ಯಮ ಅಥವಾ ಮೇಲಿನ ಬರ್ತ್‌ಗಳನ್ನು ನೀಡುತ್ತದೆ. ಆದರೆ ನೀವು ಇಬ್ಬರಿಬ್ಬರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ, ಸಿಸ್ಟಮ್‌ ಹಿರಿಯ ನಾಗರಿಕರನ್ನು ಪ್ರಾಥಮ್ಯದಲ್ಲಿ ಪರಿಗಣಿಸಿ ಲೋವರ್ ಬರ್ತ್ ನೀಡುವ ಸಾಧ್ಯತೆ ಹೆಚ್ಚು.

    ಅಂದರೆ, ಮೂವರು ಅಥವಾ ನಾಲ್ವರು ಹಿರಿಯ ನಾಗರಿಕರು ಒಂದೇ ಟಿಕೆಟ್‌ನಲ್ಲಿ ಪ್ರಯಾಣ ಬುಕ್ ಮಾಡಿದರೆ, ಅವರಿಗೆ ಕೆಳ ಬರ್ತ್‌ ಸಿಗುವ ಅವಕಾಶ ಕಡಿಮೆ. ಹೀಗಾಗಿ, ಇಬ್ಬರಿಬ್ಬರು ಒಟ್ಟಿಗೆ ಬೇರೆ ಬೇರೆ ಟಿಕೆಟ್ ಬುಕ್ ಮಾಡಿದರೆ, ಪ್ರತಿ ಜೋಡಿ ಪ್ರಯಾಣಿಕರು ಕೆಳ ಬರ್ತ್ ಪ್ರಯೋಜನವನ್ನು ಪಡೆಯಬಹುದು ಎಂಬುದೇ ಈ ಹ್ಯಾಕ್‌ನ ಸಾರಾಂಶ.

    ಈ ಉಪಯುಕ್ತ ಸಲಹೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X (ಹಳೆಯ Twitter) ನಲ್ಲಿ ಹಿರಿಯ ನಾಗರಿಕರಿಗೆ ಅತ್ಯಂತ ಉಪಯುಕ್ತ ರೈಲು ಟಿಕೆಟ್ ಬುಕಿಂಗ್ ಹ್ಯಾಕ್ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಜನರು ಟಿಟಿಇ ಅವರ ಧೀರ ಮತ್ತು ಸಹಾನುಭೂತಿ ತುಂಬಿದ ವಿವರಣೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೆಲವರು ಅವರನ್ನು ಪ್ರಶಂಸಿಸುತ್ತಾ ಇಂತಹ ಅಧಿಕಾರಿಗಳು ರೈಲ್ವೆಗೆ ಗೌರವ ತಂದಿದ್ದಾರೆ ಎಂದಿದ್ದಾರೆ.

    ಆದರೆ ಎಲ್ಲರೂ ಇದನ್ನು ಶೇ.100 ಪರ್ಫೆಕ್ಟ್ ಪರಿಹಾರ ಎಂದು ಒಪ್ಪಿಕೊಂಡಿಲ್ಲ. ಕೆಲ ಪ್ರಯಾಣಿಕರು, ಒಂದು ಕುಟುಂಬದಲ್ಲಿ 5-6 ಜನರು ಒಟ್ಟಿಗೆ ಪ್ರಯಾಣಿಸುವಾಗ ಈ ಹ್ಯಾಕ್ ಅನುಸರಿಸಿದರೆ ಎಲ್ಲರಿಗೂ ಒಂದೇ ಬೋಗಿಯಲ್ಲಿ ಆಸನ ಸಿಗದೆ, ವಿಭಜನೆ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ, ಹಿರಿಯ ನಾಗರಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ತಂತ್ರಾಂಶದಲ್ಲಿ ಸಣ್ಣ ಬದಲಾವಣೆ ಮಾಡಬೇಕು ಎಂದು ಬಳಕೆದಾರರು ಸಲಹೆ ನೀಡಿದ್ದಾರೆ.

    ಈ ವೀಡಿಯೊ ರೈಲು ಪ್ರಯಾಣಿಕರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಅನೇಕ ಹಿರಿಯರು ಈಗ ತಮ್ಮ ಮುಂದಿನ ಪ್ರಯಾಣಕ್ಕೆ ಈ ವಿಧಾನವನ್ನು ಪ್ರಯೋಗಿಸಬೇಕೆಂದು ಯೋಚಿಸುತ್ತಿದ್ದಾರೆ.

    ಮುಖ್ಯ ಸಲಹೆ:
    ಹಿರಿಯ ನಾಗರಿಕರು ರೈಲು ಟಿಕೆಟ್ ಬುಕ್ ಮಾಡುವಾಗ,
    ಇಬ್ಬರಿಬ್ಬರು ಒಟ್ಟಿಗೆ ಟಿಕೆಟ್ ಬುಕ್ ಮಾಡುವುದು ಲೋವರ್ ಬರ್ತ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

    Lower Berth/Sr. Citizen ಆಯ್ಕೆಯನ್ನು ಟಿಕೆಟ್‌ ಬುಕ್ ಮಾಡುವಾಗ ಖಚಿತವಾಗಿ ಟಿಕ್‌ಮಾರ್ಕ್ ಮಾಡಬೇಕು.
    ಪ್ರಯಾಣದ ದಿನ, ಟಿಟಿಇಗೆ ತಿಳಿಸಿದರೆ ಅವರಿಗೆ ಕೆಳ ಬರ್ತ್ ಸಿಗುವ ಪ್ರಾಮುಖ್ಯತೆ ನೀಡಲಾಗುತ್ತದೆ

  • ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!

    ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!

    ಹಿಂದೆ ಮನೆಯ ಅಡುಗೆಮನೆ ಬದಿಯಲ್ಲೇ ಕಸದ ಬುಟ್ಟಿಗೆ ಸೇರುತ್ತಿದ್ದ ತೆಂಗಿನಕಾಯಿ ಚಿಪ್ಪು ಇಂದು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ರೈತರಿಂದ ಮನೆಮಹಿಳೆಯರವರೆಗೂ ಎಲ್ಲರಿಗೂ ಹೆಚ್ಚುವರಿ ಆದಾಯ ತರಿಸುತ್ತಿರುವ ಸುದ್ದಿ ಇದೀಗ ಗ್ರಾಮೀಣ ಭಾಗದಲ್ಲಿ ದೊಡ್ಡ ಗೆ ಗ್ರಾಸವಾಗಿದೆ. ಭಾರತದಲ್ಲಿ ತೆಂಗಿನಕಾಯಿ ಕಲ್ಪವೃಕ್ಷ ಎಂದು ಕರೆಯಲ್ಪಡುವುದಕ್ಕೆ ಕಾರಣ, ಅದರ ಪ್ರತಿಯೊಂದು ಭಾಗವೂ ಮಾನವನಿಗೆ ಒಳ್ಳೆಯದು ಆಗುವುದು. ಎಳನೀರು, ಕೊಬ್ಬರಿ, ತೊಳೆ, ಗರಿ, ಎಣ್ಣೆ ಹೀಗೆ ಮರದ ಎಲ್ಲ ಭಾಗಗಳು ಬಳಕೆಯಲ್ಲಿ ಇವೆ. ಆದರೆ ಜಾಗತಿಕ ಮಾರುಕಟ್ಟೆಯ ಅವಶ್ಯಕತೆ, ವಿದೇಶಗಳಲ್ಲಿ ಇದ್ದಿಲಿಗೆ ಏರಿದ ಡಿಮ್ಯಾಂಡ್ ಹಾಗೂ ಸ್ಥಳೀಯ ಮಟ್ಟದಲ್ಲಿ ತೆಂಗು ಉತ್ಪಾದನೆಯಲ್ಲಿ ಕಂಡುಬಂದ ಬದಲಾವಣೆ ಈ ತ್ಯಾಜ್ಯವನ್ನು ಇಂದು ಆರ್ಥಿಕ ನೇರವಾಗಿ ಪರಿಣಮಿಸಿದೆ.

    ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಮನೆ ಬಾಗಿಲಿಗೇ ವ್ಯಾಪಾರಿಗಳು:

    ಇತ್ತೀಚೆಗೆ ತೆಂಗಿನ ಚಿಪ್ಪಿನ ಬೆಲೆ ಅಚ್ಚರಿಯ ಮಟ್ಟಿಗೆ ಏರಿಕೆಯಾಗಿದೆ. ವ್ಯಾಪಾರಿಗಳು ಸ್ವತಃ ಮನೆಯ ಬಾಗಿಲಿಗೇ ಬಂದು ಚಿಪ್ಪುಗಳನ್ನು ಸಂಗ್ರಹಿಸಿ, ಒಂದು ಕೆಜಿಗೆ 20–22 ರೂ. ಒಂದು ಚಿಪ್ಪಿಗೆ 1 ರೂಪಾಯಿ, ಕೊಟ್ಟು ಖರೀದಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿನ ಮಹಿಳೆಯರಿಗೆ ಹೊಸ ಆದಾಯದ ಮೂಲ ರೂಪುಗೊಂಡಿದೆ. ಹಿಂದಿನಂತೆ ಚಿಪ್ಪುಗಳನ್ನು ಉರಿಯಾಗಿ ಬಳಸದೆ, ಜನರಿಂದ ಸಂಗ್ರಹಿಸಿ ಮಾರಾಟ ಮಾಡುವುದು ಈಗ ಸಾಮಾನ್ಯವಾಗಿದೆ.

    ವಿದೇಶಕ್ಕೆ ರಫ್ತಾಗುತ್ತಿರುವ ಚಿಪ್ಪಿನ ಇದ್ದಿಲು:

    ಕೊನೆಯ ಕೆಲವು ವರ್ಷಗಳಿಂದ ತೆಂಗಿನ ಚಿಪ್ಪಿನಿಂದ ತಯಾರಾಗುವ ಇದ್ದಿಲು (charcoal briquettes) ವಿದೇಶಗಳಲ್ಲಿ ಭಾರೀ ಬೇಡಿಕೆ ಪಡೆದಿದೆ.

    ಬಾರಿ ಪ್ರಮಾಣದಲ್ಲಿ ರಫ್ತು ಆಗುತ್ತಿರುವುದು ಚಿಪ್ಪಿನ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ರಫ್ತುಗಾರರು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಕಚ್ಚಾ ಸಾಮಗ್ರಿ ಬೇಕಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

    ಎಳನೀರು ಬೇಡಿಕೆ, ಚಿಪ್ಪಿನ ಕೊರತೆ:

    ರೈತರು ಈಗ ಕೊಬ್ಬರಿ ಮಾರಾಟಕ್ಕಿಂತ ಎಳನೀರಿಗೆ ಹೆಚ್ಚು ಒಲವು ತೋರುತ್ತಿರುವುದು ಮಾರುಕಟ್ಟೆಯಲ್ಲಿ ಬಲಿತ ತೆಂಗಿನಕಾಯಿಗಳ ಲಭ್ಯತೆಯನ್ನು ಕಡಿಮೆ ಮಾಡಿದೆ. ಇಂತಹ ಪರಿಸ್ಥಿತಿ ಚಿಪ್ಪಿನ ಮೌಲ್ಯವನ್ನು ಇನ್ನಷ್ಟು ಏರಿಸಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

    ಗ್ರಾಮೀಣ ಮಹಿಳೆಯರಿಗೆ ಹೊಸ ಆದಾಯದ ದಾರಿಗಳು:

    ಹಿಂದೆ ಉರಿಯಾಗಿ ಅಥವಾ ಮಣ್ಣಿನಲ್ಲಿ ಹೂತುಬಿಡುತ್ತಿದ್ದ ಚಿಪ್ಪುಗಳು ಈಗ ನೇರ ಹಣ ತರುತ್ತಿರುವುದರಿಂದ ಹಲವಾರು ಮನೆಗಳು ಇದನ್ನು ಪಾರ್ಶ್ವ ಉದ್ಯಮವಾಗಿ ತೆಗೆದುಕೊಂಡಿವೆ.

    ಟ್ರ್ಯಾಕ್ಟರ್‌ಗಳಲ್ಲಿ ಸಂಗ್ರಹಿಸಿದ ಚಿಪ್ಪುಗಳನ್ನು ತಿಪಟೂರು, ಅರಸೀಕೆರೆ ಮುಂತಾದ ಪ್ರಮುಖ ತೆಂಗು ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ.

    ಕಲ್ಪವೃಕ್ಷಕ್ಕೆ ಮತ್ತೊಂದು ಗರಿ:

    ತೆಂಗು ಮರದ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯುಕ್ತ. ಈಗ ಚಿಪ್ಪು ಕೂಡಾ ಆ ಜಾತಿಗೆ ಸೇರಿದೆ. ಎಣ್ಣೆ, ಎಳನೀರು, ಗರಿ, ತೊಳೆ, ಮಟ್ಟೆ ಈಗ ಚಿಪ್ಪಿನ ಇದ್ದಿಲು ಎಲ್ಲವೂ ವ್ಯಾಪಾರ ರಂಗದಲ್ಲಿ ಮೌಲ್ಯ ಪಡೆದಿವೆ. ಇದರಿಂದ ತೆಂಗಿನಕಾಯಿ ಕಲ್ಪವೃಕ್ಷ ಎಂಬ ಹೆಸರಿನ ಮಹತ್ವ ಇನ್ನಷ್ಟು ಹೆಚ್ಚಿಸಿದೆ.

    ಒಟ್ಟಾರೆಯಾಗಿ, ಒಮ್ಮೆಗೆ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟ ತೆಂಗಿನಕಾಯಿ ಚಿಪ್ಪು ಇಂದು ತನ್ನದೇ ಆದ ಮಾರುಕಟ್ಟೆ, ಮೌಲ್ಯ ಮತ್ತು ಬೇಡಿಕೆಯನ್ನು ಪಡೆದುಕೊಂಡಿದೆ. ರೈತರಿಗೆ, ಮಹಿಳೆಯರಿಗೆ ಹಾಗೂ ಗ್ರಾಮೀಣ ಉದ್ಯಮಗಳಿಗೆ ಹೊಸ ಚೈತನ್ಯ ಮತ್ತು ಹೆಚ್ಚುವರಿ ಆದಾಯ ನೀಡುತ್ತಿದೆ.

  • ಹುಬ್ಬಳ್ಳಿ–ಪಂಢರಪುರ ನಡುವೆ ವಿಶೇಷ ರೈಲು ಸಂಚಾರ

    ಹುಬ್ಬಳ್ಳಿ–ಪಂಢರಪುರ ನಡುವೆ ವಿಶೇಷ ರೈಲು ಸಂಚಾರ

    ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ನೈರುತ್ಯ ರೈಲ್ವೆ ಹುಬ್ಬಳ್ಳಿ–ಪಂಢರಪುರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ ಹಮ್ಮಿಕೊಂಡಿದೆ. ಈ ವೇಳೆ ಭಕ್ತರ ಅನುಕೂಲಕ್ಕಾಗಿ ನಾಲ್ಕು ದಿನಗಳ ಕಾಲ ಕಾಯ್ದಿರಿಸದ ವಿಶೇಷ ರೈಲು ಓಡಿಸಲಿದ್ದು, ಭಕ್ತರ ಯಾತ್ರೆಗೆ ಸುಲಭ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ.

    ಈ ವಿಶೇಷ ರೈಲು ಅಕ್ಟೋಬರ್ 30, 31 ಮತ್ತು ನವೆಂಬರ್ 2, 3 ರಂದು ಸಂಚರಿಸಲಿದೆ. ಪ್ರತಿ ಪ್ರಯಾಣದ ದಿನದಲ್ಲಿ ಹುಬ್ಬಳ್ಳಿಯಿಂದ ಬೆಳಿಗ್ಗೆ 5.10ಕ್ಕೆ ರೈಲು ಹೊರಟು, ಅದೇ ದಿನ ಸಂಜೆ 4 ಗಂಟೆಗೆ ಪವಿತ್ರ ಪಂಢರಪುರ ತಲುಪಲಿದೆ. ಮರಳಿ ಪಂಢರಪುರದಿಂದ ಸಂಜೆ 6 ಗಂಟೆಗೆ ರೈಲು ಹೊರಟು, ಮರುದಿನ ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.

    ಈ ನಾಲ್ಕು ದಿನಗಳ ಸಂಚಾರವು ಕಾರ್ತಿಕ ಏಕಾದಶಿ ಸಂದರ್ಭಕ್ಕೆ ಯೋಜಿಸಲಾಗಿದ್ದು, ಪಂಢರಪುರದ ವಿಠೋಬ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ಪ್ರಯಾಣ ಮಾಡುವ ಹಿನ್ನೆಲೆ ರೈಲ್ವೆ ಈ ವಿಶೇಷ ರೈಲು ಸೇವೆ ನೀಡಲಾಗಿದೆ. ಭಕ್ತರಿಗೆ ಹಿತಕರ ಸಮಯದಲ್ಲಿ ರೈಲು ಹೊರಡುವಂತೆ ಹಾಗೂ ತಲುಪುವಂತೆ ಸಮಯ ನಿಗದಿಪಡಿಸಲಾಗಿದೆ.

    ಹುಬ್ಬಳ್ಳಿ–ಪಂಢರಪುರ ನಡುವಿನ ಈ ಸೇವೆ ರೈಲು ಸಂಖ್ಯೆ 07367/07368 ಅಡಿಯಲ್ಲಿ ಸಂಚರಿಸಲಿದೆ. ಬೆಳಗ್ಗೆ ಹೊರಡುವ ರೈಲು ಪಂಢರಪುರ ತಲುಪಿದ ಬಳಿಕ, ಅಂದೇ ಸಂಜೆ ಮರಳಿ ಪ್ರಯಾಣ ಆರಂಭಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಇದರೊಂದಿಗೆ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ರೈಲ್ವೆ ಮಂಡಳಿಯು ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಯಶವಂತಪುರ–ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ (06261/06262) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ಮೊದಲು ಅಕ್ಟೋಬರ್ 2025ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿದ್ದ ಈ ರೈಲುಗಳು ಈಗ ನವೆಂಬರ್ ಅಂತ್ಯದವರೆಗೆ ಮುಂದುವರಿಯಲಿವೆ.

    ರೈಲು ಸಂಖ್ಯೆ 06261 ಯಶವಂತಪುರ–ಮುಜಫ್ಫರಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಅಕ್ಟೋಬರ್ 29ರಿಂದ ನವೆಂಬರ್ 26ರವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಅದೇ ರೀತಿಯಾಗಿ 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ರೈಲು ಅಕ್ಟೋಬರ್ 31ರಿಂದ ನವೆಂಬರ್ 28ರವರೆಗೆ ಪ್ರತಿ ಶುಕ್ರವಾರ ಓಡಲಿದೆ.

    ಈ ಎರಡು ವಿಶೇಷ ರೈಲುಗಳು ತಮ್ಮ ಹಳೆಯ ನಿಲುಗಡೆಗಳು ಹಾಗೂ ಬೋಗಿಗಳ ವಿನ್ಯಾಸದಲ್ಲೇ ಮುಂದುವರಿಯಲಿವೆ. ಆದರೆ, ಒಂದು ಸಣ್ಣ ಬದಲಾವಣೆ ಪ್ರಯಾಣಿಕರು ಗಮನಿಸಬೇಕಾದದ್ದು 06262 ಮುಜಫ್ಫರಪುರ–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ರೈಲು ಈಗ ಮುಂಚೆ ಇದ್ದಂತೆ ಬೆಳಿಗ್ಗೆ 6:30ಕ್ಕೆ ಅಲ್ಲ, ಬೆಳಿಗ್ಗೆ 7:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.

    ಸಮಯದಲ್ಲಿ ಈ ಬದಲಾವಣೆ ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾಗಿದ್ದು, ರೈಲುಗಳು ಸರಾಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕಾರ್ತಿಕ ಮಾಸದ ಈ ವಿಶೇಷ ಸಂದರ್ಭದಲ್ಲಿ ಭಕ್ತರು ಸುಗಮವಾಗಿ ಪಂಢರಪುರ ದರ್ಶನಕ್ಕೆ ತೆರಳಲು ಹಾಗೂ ಉತ್ತರ ಭಾರತದ ದೀರ್ಘ ಪ್ರಯಾಣಿಕರಿಗೆ ಸಹಾಯವಾಗುವಂತೆ ಈ ಹೊಸ ವೇಳಾಪಟ್ಟಿ ಜಾರಿಯಾಗಿದೆ.

  • ನ.01ರಿಂದ ಹೊಸ ಆರ್ಥಿಕ ಮತ್ತು ಪಡಿತರ ನಿಯಮಗಳಲ್ಲಿ ಬದಲಾವಣೆ!

    ನ.01ರಿಂದ ಹೊಸ ಆರ್ಥಿಕ ಮತ್ತು ಪಡಿತರ ನಿಯಮಗಳಲ್ಲಿ ಬದಲಾವಣೆ!

    ನವೆಂಬರ್ 1, 2025ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಸಾಮಾನ್ಯ ನಾಗರಿಕರು, ಬ್ಯಾಂಕ್ ಗ್ರಾಹಕರು, ಹೂಡಿಕೆದಾರರು ಹಾಗೂ ಪಡಿತರ ಚೀಟಿದಾರರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವಂತಿವೆ.

    ಬ್ಯಾಂಕಿಂಗ್, ಆಧಾರ್ ನವೀಕರಣ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆ, ಮ್ಯೂಚುವಲ್ ಫಂಡ್ ಹೂಡಿಕೆ ನಿಯಮಗಳು ಮತ್ತು ಉಚಿತ ಪಡಿತರ ವ್ಯವಸ್ಥೆ ಇವುಗಳೆಲ್ಲವೂ ಹೊಸ ರೂಪ ಪಡೆಯಲಿವೆ. ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಈ ಬದಲಾವಣೆಗಳನ್ನು ಪಾರದರ್ಶಕತೆ, ಸುರಕ್ಷತೆ ಮತ್ತು ಸಮರ್ಥ ನಿರ್ವಹಣೆಯನ್ನು ಹೆಚ್ಚಿಸಲು ತರಲಿವೆ.

    ಆಧಾರ್ ನವೀಕರಣ ಪ್ರಕ್ರಿಯೆಯಲ್ಲಿ ದೊಡ್ಡ ಸುಧಾರಣೆ: 

    ಯುಐಡಿಎಐ (UIDAI) ಈಗ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಪೂರ್ಣವಾಗಿ ಡಿಜಿಟಲ್ ಮಾಡಿದ್ದಾರೆ.

    ಹಿಂದಿನಂತೆ ಕೇಂದ್ರಕ್ಕೆ ಹೋಗಿ ದಾಖಲೆ ನೀಡುವ ಅವಶ್ಯಕತೆ ಇಲ್ಲ. ಈಗ ನೀವು ಆನ್‌ಲೈನ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಯನ್ನು ಸುಲಭವಾಗಿ ನವೀಕರಿಸಬಹುದು.

    ಕೇವಲ ಬಯೋಮೆಟ್ರಿಕ್ (ಫಿಂಗರ್ ಪ್ರಿಂಟ್ ಅಥವಾ ಐರಿಸ್) ಬದಲಾವಣೆಗೆ ಮಾತ್ರ ಆಧಾರ್ ಕೇಂದ್ರಕ್ಕೆ ಭೇಟಿ ಅಗತ್ಯ.

    ಹೊಸ ವ್ಯವಸ್ಥೆಯಡಿಯಲ್ಲಿ, ಪ್ಯಾನ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, MGNREGA ಅಥವಾ ಶಾಲಾ ದಾಖಲೆಗಳಂತಹ ಸರ್ಕಾರಿ ಡೇಟಾಬೇಸ್‌ಗಳೊಂದಿಗೆ UIDAI ನಿಮ್ಮ ವಿವರಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ ಅಂದರೆ ದಾಖಲೆ ಅಪ್‌ಲೋಡ್ ಪ್ರಕ್ರಿಯೆ ಇಲ್ಲದೆ ನವೀಕರಣ ಸಾಧ್ಯ.

    ಬ್ಯಾಂಕ್ ನಿಯಮಗಳಲ್ಲಿ ಹೊಸ ತಿದ್ದುಪಡಿ: 

    ಬ್ಯಾಂಕಿಂಗ್ ವಲಯದಲ್ಲಿಯೂ ನವೆಂಬರ್ 1ರಿಂದ ಪ್ರಮುಖ ಬದಲಾವಣೆ ಜಾರಿಗೆ ಬರುತ್ತದೆ.

    ಬ್ಯಾಂಕಿಂಗ್ ಕಾನೂನು (ಪರಿಷ್ಕರಣೆ) ಕಾಯ್ದೆ 2025 ಪ್ರಕಾರ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆ, ಲಾಕರ್ ಮತ್ತು ಸುರಕ್ಷಿತ ಕಸ್ಟಡಿ ಖಾತೆಗಳಿಗೆ ಗರಿಷ್ಠ ನಾಲ್ಕು ನಾಮಿನಿಗಳನ್ನು ನೇಮಿಸಿಕೊಳ್ಳಬಹುದು.

    ಅಷ್ಟೇ ಅಲ್ಲ, ಪ್ರತಿಯೊಬ್ಬ ನಾಮಿನಿಗೆ ಶೇಕಡಾವಾರು ಪಾಲು (percentage share) ನೀಡುವ ಅವಕಾಶವೂ ಇದೆ.

    ಮೊದಲ ನಾಮಿನಿ ಜೀವಂತವಾಗಿಲ್ಲದಿದ್ದರೆ, ಅವರ ಪಾಲು ಸ್ವಯಂಚಾಲಿತವಾಗಿ ಮುಂದಿನ ನಾಮಿನಿಗೆ ವರ್ಗಾಯಿಸಲಾಗುತ್ತದೆ.

    ಇದು ಬ್ಯಾಂಕ್ ಗ್ರಾಹಕರಿಗೆ ಅವರ ಹಣಕಾಸು ಹಕ್ಕುಗಳನ್ನು ನಿರ್ವಹಿಸಲು ಹೆಚ್ಚಿನ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.

    ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗಾಗಿ ಹೊಸ ನಿಯಮಗಳು: 

    SBI ಕ್ರೆಡಿಟ್ ಕಾರ್ಡ್ ಗ್ರಾಹಕರಿಗೂ ನವೆಂಬರ್ 1ರಿಂದ ಹೊಸ ನಿಯಮಗಳು ಅನ್ವಯಿಸುತ್ತವೆ. ಅಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳಿಗೆ ಈಗ 3.75% ಶುಲ್ಕ ವಿಧಿಸಲಾಗುತ್ತದೆ. D CRED, CheQ, Mobikwik ಮುಂತಾದ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಶಾಲೆ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ, ಹೆಚ್ಚುವರಿ 1% ಶುಲ್ಕ ಅನ್ವಯಿಸುತ್ತದೆ, ಆದರೆ ಶಾಲೆಯ ಅಧಿಕೃತ ವೆಬ್‌ಸೈಟ್ ಅಥವಾ POS ಯಂತ್ರದ ಮೂಲಕ ನೇರ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ.

    ₹1,000 ಕ್ಕಿಂತ ಹೆಚ್ಚು ಮೊತ್ತವನ್ನು ವ್ಯಾಲೆಟ್‌ಗೆ ಲೋಡ್ ಮಾಡಿದರೆ 1% ಶುಲ್ಕ ವಿಧಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್‌ನಿಂದ ಚೆಕ್ ಪಾವತಿಗಳಿಗೆ ₹200 ಶುಲ್ಕ ವಿಧಿಸಲಾಗುತ್ತದೆ.

    ಈ ಕ್ರಮಗಳು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ನಿಯಂತ್ರಣ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಎಸ್‌ಬಿಐ ಕೈಗೊಂಡಿರುವ ಕ್ರಮಗಳಾಗಿವೆ.

    ಸೆಬಿ (SEBI) ಹೊಸ ಹೂಡಿಕೆ ನಿಯಮಗಳು: 

    ಹೂಡಿಕೆ ವಲಯದಲ್ಲಿ ಪಾರದರ್ಶಕತೆ ಹೆಚ್ಚಿಸಲು ಭಾರತೀಯ ಮೌಲ್ಯಪತ್ರ ಮತ್ತು ವಿನಿಮಯ ಮಂಡಳಿ (SEBI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಅಧಿಕಾರಿಗಳು ಅಥವಾ ಅವರ ಕುಟುಂಬ ಸದಸ್ಯರು ₹15 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು (ಟ್ರಾನ್ಸಾಕ್ಷನ್) ಮಾಡಿದರೆ, ಅದನ್ನು ಅನುಸರಣಾ ಅಧಿಕಾರಿಗೆ (Compliance Officer) ಕಡ್ಡಾಯವಾಗಿ ವರದಿ ಮಾಡಬೇಕಾಗಿದೆ.

    ಇದರಿಂದ ಒಳಗಿನ ವಹಿವಾಟು (insider trading) ನಿಯಂತ್ರಣ ಹಾಗೂ ಹೂಡಿಕೆದಾರರ ಹಿತಾಸಕ್ತಿ ಕಾಪಾಡುವುದು ಉದ್ದೇಶ.

    ಪಡಿತರ ಚೀಟಿ (Ration Card) ನಿಯಮಗಳಲ್ಲಿ ಬದಲಾವಣೆ:

    ಕೇಂದ್ರ ಸರ್ಕಾರವು ಉಚಿತ ಪಡಿತರ ಯೋಜನೆಯಲ್ಲೂ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಹೊಸ ನಿಯಮಗಳು ನವೆಂಬರ್ 1, 2025 ರಿಂದ ಜಾರಿಗೆ ಬರುತ್ತವೆ ಮತ್ತು ಕೋಟ್ಯಂತರ ಪಡಿತರ ಚೀಟಿದಾರರ ಮೇಲೆ ಪರಿಣಾಮ ಬೀರುತ್ತವೆ. ಸರ್ಕಾರವು ಪ್ರತಿ ಪಡಿತರ ಚೀಟಿದಾರರಿಗೂ ಹೊಸ ಅರ್ಹತಾ ಪರಿಶೀಲನೆ ನಡೆಸಲಿದೆ.

    ಕೆಳಗಿನವರು ತಮ್ಮ BPL ಪಡಿತರ ಚೀಟಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ:

    ನಿಗದಿತ ಆದಾಯ ಮಿತಿಗಿಂತ ಹೆಚ್ಚುಗಳಿಸುವವರು.

    ಸರ್ಕಾರಿ ಉದ್ಯೋಗಿಗಳು ಅಥವಾ ಪಿಂಚಣಿ ಪಡೆಯುವವರು.

    ವಸತಿ ಯೋಜನೆಗಳು ಅಥವಾ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುವವರು. ನಾಲ್ಕು ಚಕ್ರದ ವಾಹನ ಅಥವಾ ದೊಡ್ಡ ವ್ಯವಹಾರ ಹೊಂದಿರುವವರು. ಸುಳ್ಳು ಅಥವಾ ನಕಲಿ ಮಾಹಿತಿ ನೀಡಿದವರು. ಪರಿಶೀಲನೆಯಲ್ಲಿ ಸಹಕರಿಸದವರು.

    ಸರ್ಕಾರವು ಒನ್ ನೇಷನ್, ಒನ್ ರೇಷನ್ ಕಾರ್ಡ್ ನೀತಿಯಡಿಯಲ್ಲಿ ಪಡಿತರ ಚೀಟಿದಾರರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ ಪರಿಶೀಲಿಸುತ್ತದೆ, ಅರ್ಥಾತ್ ಅರ್ಹತೆ ಇಲ್ಲದ ಫಲಾನುಭವಿಗಳನ್ನು ಬೇರ್ಪಡಿಸಲಾಗುತ್ತದೆ.

    ಒಟ್ಟಾರೆಯಾಗಿ, ನವೆಂಬರ್ 1, 2025ರಿಂದ ಜಾರಿಗೆ ಬರುವ ಈ ನಿಯಮಗಳು ಭಾರತದ ಆರ್ಥಿಕ, ಹೂಡಿಕೆ ಹಾಗೂ ಸಾರ್ವಜನಿಕ ವಲಯದ ಕಾರ್ಯವಿಧಾನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿವೆ.

    ಆಧಾರ್‌ನಿಂದ ಹಿಡಿದು ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಮ್ಯೂಚುವಲ್ ಫಂಡ್ ಮತ್ತು ಪಡಿತರ ಚೀಟಿದಾರರಿಗೆ ಪ್ರತಿಯೊಂದು ವಿಭಾಗದಲ್ಲಿಯೂ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸುರಕ್ಷತೆಯ ನವೀನ ವ್ಯವಸ್ಥೆ ಸ್ಥಾಪನೆಯಾಗಲಿದೆ.

  • ವೀರಪ್ಪನ್ ಪುತ್ರಿ ವಿದ್ಯಾರಾಣಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ?

    ವೀರಪ್ಪನ್ ಪುತ್ರಿ ವಿದ್ಯಾರಾಣಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ?

    ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿರುವ ಒಂದು ವಿಡಿಯೋ ತುಣುಕಿನಿಂದ ಕಾಡಿನ ಕಳ್ಳ ವೀರಪ್ಪನ್ ಅವರ ಪುತ್ರಿಯರು ಮತ್ತೆ ಸುದ್ದಿಯಲ್ಲಿದ್ದಾರೆ. ಅಂಕಣಕಾರ ಶ್ರೀಕಂಠ ಬಾಳಗಂಚಿ ನೀಡಿರುವ ಸಂದರ್ಶನದ ಒಂದು ಭಾಗದಲ್ಲಿ ಅವರು “ವೀರಪ್ಪನ್ ಸತ್ತ ನಂತರ ಆರ್‌ಎಸ್ ಎಸ್ ಸಂಸ್ಥೆ ಅವರ ಮಗಳನ್ನು ಶಿಕ್ಷಣದ ದಾರಿಗೆ ತಂದಿತು. ಇಂದು ಅವರು ವಕೀಲೆಯಾಗಿ ಸಮಾಜಕ್ಕೆ ಸೇವೆ ಮಾಡುತ್ತಿದ್ದಾರೆ” ಎಂದು ಹೇಳಿರುವುದು ಜನರ ಗಮನ ಸೆಳೆದಿದೆ.

    ಈ ವಿಡಿಯೋ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವೀರಪ್ಪನ್ ಪುತ್ರಿಯರು ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಕುತೂಹಲ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು.

    ವೀರಪ್ಪನ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ವಿದ್ಯಾರಾಣಿ ಮತ್ತು ಪ್ರಭಾರಾಣಿ. ತಂದೆಯ ಸಾವಿನ ನಂತರ ಇಬ್ಬರ ಬದುಕು ಸಂಪೂರ್ಣ ಬದಲಾಗಿದೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಈ ಇಬ್ಬರು ಮಗಳುಗಳು ಜೀವನದ ನೂರಾರು ಕಠಿಣ ಹಾದಿಗಳನ್ನು ಎದುರಿಸಿ ತಮ್ಮದೇ ದಾರಿಯಲ್ಲಿ ಮುಂದುವರಿದಿದ್ದಾರೆ.

    ವಿದ್ಯಾರಾಣಿಯವರು ವಾರಾಣಸಿಯಲ್ಲಿರುವ ಆರ್‌ಎಸ್ಸೆಸ್‌ನ ಕಲ್ಯಾಣ ಆಶ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಬೆಂಗಳೂರಿನ ಕಾಲೇಜಿಲ್ಲಿ ಕಾನೂನು ಪದವಿ ಪೂರ್ಣಗೊಳಿಸಿ ವಕೀಲೆಯಾದರು. 2024ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಅವರು ಈಗ ಕೃಷ್ಣಗಿರಿಯಲ್ಲೇ ನೆಲೆಸಿ ವಕೀಲೆಯಾಗಿ ಮತ್ತು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದ ಸ್ಟೇಟ್ಸ್‌ಮನ್ ವರದಿ ಪ್ರಕಾರ, ವಿದ್ಯಾರಾಣಿ ದಲಿತ ಕ್ರೈಸ್ತ ಯುವಕನನ್ನು ಮದುವೆಯಾಗಿದ್ದು, ಸ್ಥಳೀಯವಾಗಿ ಶಾಲೆ ನಡೆಸುತ್ತಿದ್ದಾರೆ.

    ತಂದೆಯ ದುಷ್ಕೀರ್ತಿ ಹಿನ್ನಲೆಯಲ್ಲಿ ಸಮಾಜದಿಂದ ದೂರವಿದ್ದ ಅವರು, ಶಿಕ್ಷಣ ಮತ್ತು ಸೇವೆಯ ಮೂಲಕ ಹೊಸ ಗುರುತನ್ನು ಗಳಿಸಿದ್ದಾರೆ. ವಿದ್ಯಾರಾಣಿ ಹಿಂದೆ ಬಿಜೆಪಿಗೆ ಸೇರಿದ್ದರು. ನಂತರ 2024ರ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷ ತೊರೆದು ನಾಮ್ ತಮಿಳರ್ ಕಚ್ಚಿ ಪಕ್ಷದ ಟಿಕೆಟ್‌ನಿಂದ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಆ ಚುನಾವಣೆಯಲ್ಲಿ ಸೋಲು ಕಂಡರು.

    ವೀರಪ್ಪನ್ ಅವರ ಕಿರಿಯ ಮಗಳು ಪ್ರಭಾರಾಣಿ ತಂದೆ ಮೃತಪಟ್ಟಾಗ ಕೇವಲ 11 ವರ್ಷದವಳು. ಆಕೆಯ ಶಿಕ್ಷಣದ ಜವಾಬ್ದಾರಿಯನ್ನು ಚೆನ್ನೈನ ವಕೀಲರೊಬ್ಬರು ಹೊತ್ತಿದ್ದರು. ಪ್ರಭಾರಾಣಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಆಕೆಯ ಪ್ರಸ್ತುತ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

    ವೀರಪ್ಪನ್ ಪುತ್ರಿಯರು ತಂದೆಯ ನೆರಳಿನಿಂದ ದೂರವಾಗಿ, ಶಿಕ್ಷಣ, ಗೌರವ ಮತ್ತು ಸಮಾಜಸೇವೆಯ ಜೀವನ ಕಟ್ಟಿಕೊಂಡಿದ್ದಾರೆ. ಅರಣ್ಯದಲ್ಲಿ ಹುಟ್ಟಿ ಬದುಕಿದ ತಂದೆಯ ಮಕ್ಕಳು ಇಂದಿನ ದಿನಗಳಲ್ಲಿ ಶಿಕ್ಷಣದ ಬೆಳಕಿನ ಮೂಲಕ ಹೊಸ ಜೀವನ ಕಟ್ಟಿಕೊಂಡಿರುವುದು ಮನಮುಟ್ಟುವ ಸಂಗತಿ.

  • ಎಚ್ಚರಿಕೆ: ಈ 10 ಫೋನ್ ಸಂಖ್ಯೆಗಳು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು.!

    ಎಚ್ಚರಿಕೆ: ಈ 10 ಫೋನ್ ಸಂಖ್ಯೆಗಳು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು.!

    ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ಮತ್ತು ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇದೇ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸುವ ಹೊಸ ಹೊಸ ಮಾರ್ಗಗಳನ್ನು ಸ್ಕ್ಯಾಮರ್‌ಗಳು ಕಂಡುಹಿಡಿಯುತ್ತಿದ್ದಾರೆ. ಬ್ಯಾಂಕ್ ಖಾತೆ, ಲಾಟರಿ, ಡೆಲಿವರಿ, ಡೆಬಿಟ್ ಕಾರ್ಡ್ ಅಥವಾ ಬಹುಮಾನ ಯಾವ ವಿಷಯವನ್ನಾದರೂ ನೆಪವನ್ನಾಗಿ ಮಾಡಿಕೊಂಡು ಅವರು ಜನರಿಂದ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕಸಿದುಕೊಳ್ಳುತ್ತಾರೆ.

    ಇತ್ತೀಚೆಗೆ ‘ಬೀನ್ವೆರಿಫೈಡ್’ (BeenVerified) ಎಂಬ ಅಮೆರಿಕಾದ ಸೈಬರ್‌ಸಿಕ್ಯೂರಿಟಿ ಕಂಪನಿಯೊಂದು ಮಹತ್ವದ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಹೆಚ್ಚು ಸಂಖ್ಯೆಯ ಹಗರಣಗಳಿಗೆ ಬಳಸಲಾಗಿದ್ದ ಟಾಪ್ 10 ಮೋಸದ ಫೋನ್ ಸಂಖ್ಯೆಗಳು ಬಹಿರಂಗಗೊಂಡಿವೆ. ಈ ಸಂಖ್ಯೆಗಳ ಮೂಲಕ ಅನೇಕರು ಬಲಿಯಾಗಿರುವುದಾಗಿ ವರದಿಯಾಗಿದೆ. ನೀವು ಸಹ ನಿಮ್ಮ ಹಣ ಮತ್ತು ಡೇಟಾವನ್ನು ಕಾಪಾಡಿಕೊಳ್ಳಬೇಕೆಂದರೆ, ಕೆಳಗಿನ ಸಂಖ್ಯೆಗಳ ಕರೆ ಅಥವಾ ಮೆಸೇಜ್‌ಗಳಿಗೆ ಎಂದಿಗೂ ಪ್ರತಿಕ್ರಿಯೆ ನೀಡಬೇಡಿ.

    ಹಗರಣಗಳಲ್ಲಿ ಹೆಚ್ಚು ಬಳಸಲಾಗಿರುವ 10 ಅಪಾಯಕಾರಿ ಸಂಖ್ಯೆಗಳು:

    (865) 630-4266:
    ಈ ಸಂಖ್ಯೆಯಿಂದ ಬರುವ ಕರೆಗಳಲ್ಲಿ ಜನರಿಗೆ “ನಿಮ್ಮ ವೆಲ್ಸ್ ಫಾರ್ಗೋ ಬ್ಯಾಂಕ್ ಖಾತೆ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ” ಎಂಬ ಸಂದೇಶ ಬರುತ್ತದೆ. ನಂತರ “ಅನ್‌ಲಾಕ್ ಮಾಡಲು ಬ್ಯಾಂಕ್‌ಗೆ ಕರೆ ಮಾಡಿ” ಎಂದು ಹೇಳುತ್ತಾರೆ. ಇದು ನಕಲಿ ಬ್ಯಾಂಕ್ ಹಗರಣ.

    (469) 709-7630:
    ಈ ಕರೆಗಳಲ್ಲಿ “ನಿಮ್ಮ ಪಾರ್ಸೆಲ್ ವಿತರಣೆ ವಿಫಲವಾಗಿದೆ” ಎಂಬ ನೆಪ ಹೇಳಿ, ನೀವು ಅಥವಾ ನಿಮ್ಮ ಬಂಧುಗಳ ಹೆಸರು ಬಳಸಿ, ಆನ್‌ಲೈನ್ ಲಿಂಕ್ ಒತ್ತಿಸಲು ಅಥವಾ ಕರೆ ಮಾಡಲು ಪ್ರೇರೇಪಿಸುತ್ತಾರೆ.

    (805) 637-7243:
    ವೀಸಾ ಕಾರ್ಡ್ ಹಗರಣ ವಿಭಾಗದಿಂದ ಕರೆ ಬಂದಿದೆ ಎಂದು ನಂಬಿಸಲು ಪ್ರಯತ್ನಿಸುವ ಮೋಸಗಾರರು ಈ ಸಂಖ್ಯೆಯನ್ನು ಬಳಸುತ್ತಾರೆ.

    (858) 605-9622:
    ನಿಮ್ಮ ಬ್ಯಾಂಕ್ ಖಾತೆ ತಡೆಹಿಡಿಯಲಾಗಿದೆ ಎಂಬ ಎಚ್ಚರಿಕೆ ಸಂದೇಶಗಳು ಈ ಸಂಖ್ಯೆಯಿಂದ ಬರುತ್ತವೆ. ನಿಜವಾದ ಬ್ಯಾಂಕ್‌ಗಳು ಇಂತಹ ಕರೆಗಳನ್ನು ಮಾಡುವುದಿಲ್ಲ.

    (863) 532-7969:
    ಯಾವುದೇ ಬ್ಯಾಂಕ್ ಹೆಸರು ಹೇಳದೆ “ನಿಮ್ಮ ಡೆಬಿಟ್ ಕಾರ್ಡ್ ಸ್ಥಗಿತಗೊಂಡಿದೆ” ಎಂದು ಹೇಳುವ ಕರೆಗಳು ಈ ಸಂಖ್ಯೆಯಿಂದ ಬಂದಿವೆ.

    (904) 495-2559:
    ಈ ಸಂಖ್ಯೆ ಮೂಲಕ ಜನರಿಗೆ “ನೀವು AT&T ಲಾಟರಿ ಗೆದ್ದಿದ್ದೀರಿ” ಎಂಬ ಸುಳ್ಳು ಸಂದೇಶಗಳು ಕಳುಹಿಸಲ್ಪಟ್ಟಿವೆ.

    (312) 339-1227:
    ತೂಕ ಇಳಿಸುವ ಉತ್ಪನ್ನಗಳು ಅಥವಾ ನಕಲಿ ಪ್ಯಾಕೇಜ್ ಹಗರಣಗಳನ್ನು ಉತ್ತೇಜಿಸಲು ಈ ಸಂಖ್ಯೆಯನ್ನು ಬಳಸಲಾಗಿದೆ.

    (917) 540-7996:
    ಸ್ಟ್ರೀಮ್ VI” ಎನ್ನುವ ಹೆಸರಿನಲ್ಲಿ ನಕಲಿ ಮಾರ್ಕೆಟಿಂಗ್ ಹಗರಣ ನಡೆಸಲಾಗಿದೆ.

    (347) 437-1689:
    ಉಚಿತ ಡೈಸನ್ ವ್ಯಾಕ್ಯೂಮ್ ಕ್ಲೀನರ್ ಅಥವಾ ಸಣ್ಣ ಡಾಲರ್ ಉಡುಗೊರೆಗಳ ಭರವಸೆ ನೀಡಿ ಜನರನ್ನು ವಂಚಿಸುವ ಕರೆಗಳು ಈ ಸಂಖ್ಯೆಯಿಂದ ಬರುತ್ತವೆ.

    (301) 307-4601:
    ಯುಎಸ್ಪಿಎಸ್ ವಿತರಣಾ ಹಗರಣ “ನಿಮ್ಮ ಪಾರ್ಸೆಲ್ ವಿಳಾಸ ತಪ್ಪಾಗಿದೆ” ಎಂಬ ನೆಪದಲ್ಲಿ ಲಿಂಕ್ ಕಳುಹಿಸಿ ವೈಯಕ್ತಿಕ ಮಾಹಿತಿ ಕಸಿಯುವ ಪ್ರಯತ್ನ.

    ಹಾಗಿದ್ದರೆ ನೀವು ಹೇಗೆ ಸುರಕ್ಷಿತರಾಗಬಹುದು?:
    ಅಜ್ಞಾತ ಸಂಖ್ಯೆಯಿಂದ ಬಂದ ಯಾವುದೇ ಕರೆ ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
    ಬ್ಯಾಂಕ್, ಕ್ರೆಡಿಟ್ ಕಾರ್ಡ್ ಕಂಪನಿ ಅಥವಾ ಸರಕಾರಿ ಸಂಸ್ಥೆಗಳು ಎಂದಿಗೂ ವೈಯಕ್ತಿಕ ಮಾಹಿತಿಯನ್ನು ಕರೆ ಮೂಲಕ ಕೇಳುವುದಿಲ್ಲ.
    ಯಾವುದೇ ಲಾಟರಿ ಅಥವಾ ಉಡುಗೊರೆ ಗೆದ್ದಿದ್ದೀರಿ ಎಂಬ ಸಂದೇಶ ಬಂದರೆ ಅದು ನೂರಕ್ಕೆ ನೂರು ಹಗರಣವಾಗಿರುತ್ತದೆ.
    ಸಂಶಯಾಸ್ಪದ ಸಂಖ್ಯೆಗಳನ್ನು ತಕ್ಷಣ “Block” ಮಾಡಿ ಮತ್ತು “Report Spam” ಆಯ್ಕೆ ಬಳಸಿ.

    ಬೀನ್ವೆರಿಫೈಡ್ ವರದಿಯ ಪ್ರಕಾರ, ಫೋನ್ ಹಗರಣಗಳು ದಿನೇದಿನೇ ಸುಧಾರಿತ ತಂತ್ರಜ್ಞಾನ ಬಳಸಿ ನಡೆಯುತ್ತಿವೆ. ಆದ್ದರಿಂದ ಪ್ರತಿಯೊಬ್ಬ ಮೊಬೈಲ್ ಬಳಕೆದಾರರೂ ಎಚ್ಚರಿಕೆಯಿಂದ ಇರಬೇಕು. ಒಂದು ತಪ್ಪು ಕರೆ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮೊತ್ತವನ್ನೇ ಹಾಳುಮಾಡಬಹುದು. ಜಾಗರೂಕರಾಗಿರಿ, ಸುರಕ್ಷಿತರಾಗಿರಿ.

  • Deepavali Special: ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು ಸೇವೆ ಆರಂಭ

    Deepavali Special: ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು ಸೇವೆ ಆರಂಭ

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಲಕ್ಷಾಂತರ ಮಂದಿ ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಸಮಯದಲ್ಲಿ ರೈಲು ನಿಲ್ದಾಣಗಳಲ್ಲಿ ಉಂಟಾಗುವ ಅಪಾರ ದಟ್ಟಣೆ ಹಾಗೂ ಟಿಕೆಟ್‌ಗಳ ಕೊರತೆಯಿಂದ ಪ್ರಯಾಣಿಕರಿಗೆ ಅನೇಕ ಬಾರಿ ತೊಂದರೆ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಗ್ಗಿಸಲು ಮತ್ತು ಸೌಲಭ್ಯ ಒದಗಿಸಲು ನೈಋತ್ಯ ರೈಲ್ವೆ ಇಲಾಖೆ ಪ್ರಮುಖ ಕ್ರಮ ಕೈಗೊಂಡಿದೆ.

    ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (SMVT Bengaluru) ಆಂಧ್ರ ಪ್ರದೇಶದ ವಿಶಾಖಪಟ್ಟಣಂ (Visakhapatnam) ಕಡೆಗೆ ವಿಶೇಷ ರೈಲು ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ದೀಪಾವಳಿ ಪ್ರಯುಕ್ತ ಈ ರೈಲು ಪ್ರಯಾಣಿಕರಿಗೆ ಅನುಕೂಲಕರ ಹಾಗೂ ವೇಗದ ಪ್ರಯಾಣದ ಅವಕಾಶ ನೀಡಲಿದೆ.

    ವಿಶೇಷ ರೈಲು ವೇಳಾಪಟ್ಟಿ ಮತ್ತು ನಿಲ್ದಾಣ ವಿವರಗಳು ಹೀಗಿದೆ:

    ಪ್ರಯಾಣ ಆರಂಭ ದಿನಾಂಕ: ಅಕ್ಟೋಬರ್ 22, 2025

    ಹೊರಡುವ ಸಮಯ: ಮಧ್ಯಾಹ್ನ 3:50ಕ್ಕೆ

    ಹೊರಡುವ ನಿಲ್ದಾಣ: SMVT ಬೆಂಗಳೂರು

    ರೈಲು ಸಂಖ್ಯೆ: 08544 (ವಿಶೇಷ ರೈಲು)

    ಗಮ್ಯಸ್ಥಾನ: ವಿಶಾಖಪಟ್ಟಣಂ

    ವಿಶಾಖಪಟ್ಟಣಂ ತಲುಪುವ ಸಮಯ: ಅಕ್ಟೋಬರ್ 23, ಮಧ್ಯಾಹ್ನ 1:30ಕ್ಕೆ

    ಈ ರೈಲು ತನ್ನ ಪ್ರಯಾಣದ ವೇಳೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ, ಗೂಡೂರು, ನೆಲ್ಲೂರು, ಗುಡಿವಾಡ, ಕೈಕಲೂರು, ಆಕಿವಿಡು, ಭೀಮಾವರಂ, ತನುಕು, ನಿಡದವೋಲು, ರಾಜಮಂಡ್ರಿ, ಸಾಮಲಕೋಟ, ಎಲಮಂಚಿಲಿ ಹಾಗೂ ದುವ್ವಾಡ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

    ಪ್ರಯಾಣಿಕರಿಗೆ ಸೂಚನೆಗಳು:

    ಈ ವಿಶೇಷ ರೈಲಿಗೆ ಆನ್‌ಲೈನ್ ಹಾಗೂ ಕೌಂಟರ್ ಟಿಕೆಟ್‌ಗಳ ಮೂಲಕ ಮುಂಗಡ ಬುಕಿಂಗ್‌ ಈಗಾಗಲೇ ಆರಂಭಗೊಂಡಿದೆ.

    ದೀಪಾವಳಿ ಸಮಯದಲ್ಲಿ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ಶೀಘ್ರದಲ್ಲೇ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

    ರೈಲು ಸಮಯದಲ್ಲಿ ಯಾವುದೇ ಬದಲಾವಣೆ ಅಥವಾ ಹೆಚ್ಚುವರಿ ರೈಲುಗಳ ಕುರಿತು ಮಾಹಿತಿ ಪಡೆಯಲು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ ರೈಲು ವಿಚಾರ ಕೇಂದ್ರವನ್ನು ಸಂಪರ್ಕಿಸಬಹುದು.

    ಆದ್ದರಿಂದ, ದೀಪಾವಳಿ ಹಬ್ಬದ ಸಂಭ್ರಮವನ್ನು ತಮ್ಮ ಊರಿನಲ್ಲಿ ಕುಟುಂಬದೊಂದಿಗೆ ಆಚರಿಸಲು ಬಯಸುವವರಿಗೆ ಈ ವಿಶೇಷ ರೈಲು ಪ್ರಯಾಣವನ್ನು ಇನ್ನಷ್ಟು ಸುಗಮ ಮತ್ತು ಆರಾಮದಾಯಕವಾಗಿಸುತ್ತದೆ. ಬೆಂಗಳೂರಿನಿಂದ ವಿಶಾಖಪಟ್ಟಣಂವರೆಗೆ ನೇರ ಸಂಪರ್ಕ ಒದಗಿಸುವ ಈ ರೈಲು ಸೇವೆ ಸಾವಿರಾರು ಪ್ರಯಾಣಿಕರಿಗೆ ಬಹುಮೌಲ್ಯವಾದ ಸೌಲಭ್ಯವಾಗಲಿದೆ.

  • ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ

    ರಾಜ್ಯದ ಜನತೆಗೆ ಮಹತ್ವದ ಮಾಹಿತಿ : ಜಾತಿ ಗಣತಿ ಸಮೀಕ್ಷೆಯಲ್ಲಿ ನಿಮ್ಮ ಸಹಕಾರ ಅಗತ್ಯ

    ರಾಜ್ಯದ ಜನಸಂಖ್ಯೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಅರಿಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಈಗ ಅಂತಿಮ ಹಂತ ತಲುಪಿದೆ. ಈ ಸಮೀಕ್ಷೆಯು ಕೇವಲ ಅಂಕಿ-ಅಂಶಗಳ ಸಂಗ್ರಹಣೆಯಷ್ಟೇ ಅಲ್ಲ, ಮುಂದಿನ ದಶಕಗಳಲ್ಲಿ ರಾಜ್ಯದ ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಯೋಜನೆಗಳ ರೂಪರೇಖೆ ನಿರ್ಧರಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಸಮಗ್ರ ಮಾಹಿತಿಯ ಆಧಾರದ ಮೇಲೆ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ವಿವಿಧ ಸಮುದಾಯಗಳ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ನೀಡಲು ಈ ಸಮೀಕ್ಷೆಯು ಪೂರಕವಾಗಲಿದೆ.

    ಸಮೀಕ್ಷೆಯ ವೇಳೆ ಕೆಲ ಮನೆಗಳು ಬಿಟ್ಟುಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ನಿಮ್ಮ ಮನೆಗೆ ಸಮೀಕ್ಷಾಧಿಕಾರಿಗಳು ಭೇಟಿ ನೀಡದಿದ್ದರೆ ತಕ್ಷಣವೇ 8050770004 ಗೆ ಕರೆ ಮಾಡಿ, ನಿಮ್ಮ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸರ್ಕಾರ ನಾಗರಿಕರನ್ನು ವಿನಂತಿಸಿದೆ. ನಾಗರಿಕರ ಸಹಕಾರದಿಂದ ಮಾತ್ರ ಈ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

    ಸಮೀಕ್ಷಾ ಅವಧಿ ವಿಸ್ತರಣೆ ಯಾಕೆ?:

    ಸಮೀಕ್ಷಾ ಕಾರ್ಯ ಆರಂಭವಾದ ನಂತರ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳು ಎದುರಾಗಿದ್ದವು. ವಿವರಗಳನ್ನು ನೇರವಾಗಿ ಮೊಬೈಲ್ ಆಪ್‌ಗಳ ಮೂಲಕ ದಾಖಲಿಸುವ ವ್ಯವಸ್ಥೆ ಇರಲಿದ್ದು, ಕೆಲವೆಡೆ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎದುರಾದ ಕಾರಣ ಪ್ರಾರಂಭಿಕ ಹಂತ ನಿಧಾನಗತಿಯಲ್ಲಿ ನಡೆಯಿತು.

    ಅದೇ ರೀತಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಬಾರಿ ಶಿಕ್ಷಕರ ಬದಲು ಸರ್ಕಾರಿ ನೌಕರರನ್ನು ಸಮೀಕ್ಷೆಗೆ ನಿಯೋಜಿಸಲಾಗಿತ್ತು. ದೀಪಾವಳಿ ರಜಾ ಅವಧಿಯಲ್ಲಿ ಅವರು ಲಭ್ಯರಾಗದ ಕಾರಣದಿಂದ ಸಮೀಕ್ಷಾ ಅವಧಿಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಹೆಚ್ಚು ಕುಟುಂಬಗಳನ್ನು ಒಳಗೊಂಡಂತೆ ಸಮೀಕ್ಷೆಯನ್ನು ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಸಲಾಗುತ್ತಿದ್ದು, ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಗಳು ಇವೆ.

    ಆತುರದಲ್ಲಿ ಸಮೀಕ್ಷೆ ನಡೆಯುತ್ತಿದೆಯೇ? ಸರ್ಕಾರದ ಸ್ಪಷ್ಟನೆ:

    ಸಮೀಕ್ಷೆ ಕಾರ್ಯವನ್ನು ವೇಗಗೊಳಿಸಲು ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ಆರಂಭಿಕ ಹಂತದಲ್ಲಿ 3–4 ವಿಭಿನ್ನ ಆಪ್‌ಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲಾಯಿತು. ಅವುಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೆಲವು ದಿನಗಳು ಬೇಕಾದ್ದರಿಂದ ಪ್ರಾರಂಭದಲ್ಲಿ ವಿಳಂಬ ಉಂಟಾಯಿತು.

    ಇದಲ್ಲದೆ, ಶಿಕ್ಷಕರಿಗೆ ಸಮೀಕ್ಷೆಯ ಜವಾಬ್ದಾರಿಯನ್ನು ನೀಡಿದಾಗ, ಅವರಿಗೆ ಮೊದಲಿನಿಂದಲೇ ಅಗತ್ಯ ತರಬೇತಿ ಮತ್ತು ಉತ್ಸಾಹದ ಕೊರತೆ ಇತ್ತು. ನಂತರ ಸರ್ಕಾರವು ಅವರಿಗೆ ತರಬೇತಿ ನೀಡಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿತು. ಇದೇ ವೇಳೆ, ಕೆಲವು ಮಾಧ್ಯಮಗಳಲ್ಲಿ ಸಮೀಕ್ಷೆ ನಡೆಯುತ್ತಿಲ್ಲ ಎಂಬ ತಪ್ಪು ಮಾಹಿತಿಗಳು ಹರಡಿದ್ದರಿಂದ ಪ್ರಾರಂಭಿಕ ಹಂತದಲ್ಲಿ ಗೊಂದಲ ಉಂಟಾಯಿತು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ನಿಮ್ಮ ಸಹಕಾರವೇ ಸಮೀಕ್ಷೆಯ ಯಶಸ್ಸು:

    ಈ ಸಮೀಕ್ಷೆ ಕೇವಲ ಒಂದು ಸರ್ಕಾರಿ ಪ್ರಕ್ರಿಯೆಯಲ್ಲ, ಅದು ಭವಿಷ್ಯದ ಪೀಳಿಗೆಯ ಶಿಕ್ಷಣ, ಉದ್ಯೋಗ ಹಾಗೂ ಕಲ್ಯಾಣದ ದಿಕ್ಕನ್ನು ನಿಗದಿಪಡಿಸುವ ಪ್ರಮುಖ ಹಂತ. ನಿಮ್ಮ ಮನೆಯಲ್ಲಿ ಸಮೀಕ್ಷಾಧಿಕಾರಿಗಳು ಭೇಟಿ ನೀಡಿದಾಗ ನಿಖರ ಮಾಹಿತಿಯನ್ನು ನೀಡುವುದು ನಾಗರಿಕರ ಕರ್ತವ್ಯ. ಮನೆಯನ್ನು ಬಿಟ್ಟು ಹೋಗಿದ್ದರೆ 8050770004 ಈ ಸಂಖ್ಯೆಗೆ ಕರೆ ಮಾಡಿ ತಕ್ಷಣ ಮಾಹಿತಿ ನೀಡಿ.

  • ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಿಯೇ! ಈ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮತ್ತೆ ನಿಮ್ಮದಾಗಿಸಿಕೊಳ್ಳಿ

    ಕರ್ನಾಟಕದಲ್ಲಿ ಇತ್ತೀಚೆಗೆ ಬಿಪಿಎಲ್‌ (BPL) ಮತ್ತು ಎಪಿಎಲ್‌ (APL) ಕಾರ್ಡ್‌ಗಳ ಬಗ್ಗೆ ದೊಡ್ಡ ಗೊಂದಲ ಉಂಟಾಗಿದೆ. ಆಹಾರ ಇಲಾಖೆಯ ಪ್ರಕಾರ, ಅನೇಕರು ನಕಲಿ ಅಥವಾ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್‌ ಕಾರ್ಡ್ ಪಡೆದಿದ್ದರು. ಇಂತಹವರ ಕಾರ್ಡ್‌ಗಳನ್ನು ಈಗ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ನಿಜವಾದ ಬಡ ಕುಟುಂಬಗಳ ಕಾರ್ಡ್‌ಗಳೂ ಸಹ ತಪ್ಪಾಗಿ ಬದಲಾಯಿಸಿರುವುದು ಕಂಡುಬಂದಿದೆ.

    ಆದರೆ ಚಿಂತೆ ಬೇಡ! ಸರ್ಕಾರ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ ಯಾರು ನಿಜವಾಗಿಯೂ ಬಿಪಿಎಲ್‌ ಕಾರ್ಡ್‌ಗೆ ಅರ್ಹರಾಗಿದ್ದಾರೋ ಅವರು ಸೂಕ್ತ ದಾಖಲೆಗಳನ್ನು ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಿದರೆ, ಅವರ ಎಪಿಎಲ್‌ ಕಾರ್ಡ್‌ಗಳನ್ನು ಮತ್ತೆ ಬಿಪಿಎಲ್‌ ಕಾರ್ಡ್‌ಗಳಾಗಿ ಬದಲಿಸಲಾಗುತ್ತದೆ.

    ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಅರ್ಜಿಯನ್ನು ಸಲ್ಲಿಸಿದ ನಂತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅರ್ಹತೆ ಸಾಬೀತಾದರೆ 45 ದಿನಗಳ ಒಳಗಾಗಿ ಆ ಕುಟುಂಬಕ್ಕೆ ಹೊಸ ಬಿಪಿಎಲ್‌ ಕಾರ್ಡ್‌ ನೀಡಲಾಗುತ್ತದೆ.

    ರಾಜ್ಯದಲ್ಲಿ ನಕಲಿ ದಾಖಲೆಗಳಿಂದ ಪಡೆದಿರುವ ಸಾವಿರಾರು ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು 7,76,000 ಬಿಪಿಎಲ್‌ ಕಾರ್ಡ್‌ಗಳು ಅನರ್ಹ ಎಂದು ಕಂಡುಬಂದಿವೆ. ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ, ಒಟ್ಟು 13,87,651 ಪಡಿತರ ಚೀಟಿಗಳು ಅನರ್ಹ ಎಂದು ಪರಿಗಣಿಸಲಾಗಿದೆ.

    ಅದರಿಂದಾಗಿ ಅರ್ಹರು ತಮ್ಮ ಪ್ರದೇಶದ ತಹಶೀಲ್ದಾರ್‌ ಕಚೇರಿಗೆ ತೆರಳಿ, ಕುಟುಂಬದ ಆದಾಯ ಪ್ರಮಾಣ ಪತ್ರ, ಮನೆ ಬಾಡಿಗೆ ಅಥವಾ ಆಸ್ತಿ ವಿವರಗಳು ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ದಾಖಲೆಗಳು ಸರಿಯಾಗಿದ್ದರೆ ಬಿಪಿಎಲ್‌ ಕಾರ್ಡ್‌ ಮತ್ತೆ ನೀಡಲಾಗುತ್ತದೆ.

    ಆದರೆ, ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳ ವಿತರಣೆ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಆದ್ದರಿಂದ ಸರ್ಕಾರವು ಮೊದಲು ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಮುಗಿಸಿ ನಂತರ ಹೊಸ ಕಾರ್ಡ್‌ಗಳನ್ನು ನೀಡುವ ಯೋಜನೆ ಹೊಂದಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಬಡ ಕುಟುಂಬಗಳು ಹೊಸ ಕಾರ್ಡ್‌ಗಾಗಿ ಕಾಯುತ್ತಿವೆ.

    ಈ ಪರಿಸ್ಥಿತಿಯಿಂದ ಜನರು ತೀವ್ರವಾದ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಪಡಿತರ ಸಿಗದೆ ಅನೇಕ ಬಡ ಕುಟುಂಬಗಳು ಪರದಾಡುತ್ತಿವೆ. ಸಾರ್ವಜನಿಕರು “ಬಿಪಿಎಲ್‌ ಕಾರ್ಡ್‌ಗಳ ದುರ್ಬಳಕೆ ತಡೆಯುವುದು ಸರಿಯೇ, ಆದರೆ ನಿಜವಾದ ಬಡವರಿಗೆ ತೊಂದರೆ ಕೊಡಬಾರದು” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಒಟ್ಟಿನಲ್ಲಿ, ಸರ್ಕಾರದ ಉದ್ದೇಶ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಿ ನಿಜವಾದ ಬಡ ಕುಟುಂಬಗಳಿಗೆ ನೆರವು ನೀಡುವುದಾಗಿದೆ. ಆದರೆ ತಪ್ಪು ಕಾರ್ಡ್‌ ಬದಲಾವಣೆಗಳಿಂದ ಸಮಸ್ಯೆ ಉಂಟಾಗಿದೆ. ಅರ್ಹರು 45 ದಿನಗಳೊಳಗೆ ದಾಖಲೆ ಸಲ್ಲಿಸಿದರೆ ಮತ್ತೆ ಬಿಪಿಎಲ್‌ ಕಾರ್ಡ್‌ ಪಡೆಯುವ ಅವಕಾಶವಿದೆ.

  • ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ ಸರ್ಕಾರದ ಬಾಗಿಲಲ್ಲಿ ಮೊಳಗಿತು—2 ಪುಟ ಜಾಹೀರಾತಿಗೆ ಸಕಾರಾತ್ಮಕ ಬೆಳವಣಿಗೆ!

    ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ ಸರ್ಕಾರದ ಬಾಗಿಲಲ್ಲಿ ಮೊಳಗಿತು—2 ಪುಟ ಜಾಹೀರಾತಿಗೆ ಸಕಾರಾತ್ಮಕ ಬೆಳವಣಿಗೆ!

    ಸತ್ಯಕಾಮ ವಾರ್ತೆ ಬೆಂಗಳೂರು:

    ಕಲ್ಯಾಣ ಕರ್ನಾಟಕದ ಪತ್ರಿಕೆಗಳ ಧ್ವನಿ ಇದೀಗ ಸರ್ಕಾರದ ಬಾಗಿಲಲ್ಲಿ ಗಟ್ಟಿಯಾಗಿ ಮೊಳಗಿದೆ. ಹಲವು ವರ್ಷಗಳ ಆಶೆ, ಬೇಡಿಕೆ ಮತ್ತು ಹೋರಾಟಕ್ಕೆ ಹೊಸ ಆಶಾಕಿರಣ ಮೂಡಿಸಿದ್ದು, ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ನಿಯೋಗವು ಮೂರು ದಿನಗಳ ಕಾಲ ಬೆಂಗಳೂರಿನ ಪ್ರವಾಸದ ವೇಳೆ ಪ್ರಮುಖ ನಾಯಕರನ್ನು ಭೇಟಿಯಾಗಿ ವಿಷಯವನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಿದೆ. ಈ ಹೋರಾಟಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಸಂಪಾದಕರ ಹೋರಾಟದ ಮಹತ್ತರ ಹೆಜ್ಜೆಯಾಗಿದೆ.

    ನಿಯೋಗವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ವಿಸ್ತೃತ ಚರ್ಚೆ ಮಾಡಲಾಯಿತು. ಸಂಪಾದಕರ “ಕಲ್ಯಾಣ ಕರ್ನಾಟಕದ ಪತ್ರಿಕೆಗಳು ಕೇವಲ ಸುದ್ದಿಯ ವೇದಿಕೆಗಳಲ್ಲ — ಇದು ಜನರ ಧ್ವನಿ, ಹೋರಾಟದ ಶಕ್ತಿ, ಮತ್ತು ನಾಡಿನ ನಿಜವಾದ ಮುಖ” ಎಂದು ಭಾವನಾತ್ಮಕವಾಗಿ ಮನವರಿಕೆ ಮಾಡಿದರು. ಮಂಡಳಿ ಅಧ್ಯಕ್ಷರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ನಂತರ ನಿಯೋಗವು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರನ್ನು ಭೇಟಿಯಾಗಿ ವಿಷಯದ ತೀವ್ರತೆಯನ್ನು ತಿಳಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಅವರು ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಕ್ರಮದ ಭರವಸೆ ನೀಡಿದರು. ಅದೇ ದಿನ ವಿಧಾನಸೌಧದಲ್ಲಿ ಇರುವ ಬ್ಯಾಂಕೆಟ್ ಹಾಲ್‌ನಲ್ಲಿ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಪತ್ರ ಸಲ್ಲಿಸಲಾಯಿತು.

    ಈ ಪ್ರಯಾಣದ ಅತ್ಯಂತ ಪ್ರಭಾವಶೀಲ ಹಂತವೆಂದರೆ ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾದ ಕ್ಷಣ. ಸಚಿವರು ವಿಷಯದ ಗಂಭೀರತೆಯನ್ನು ಮನಗಂಡು, “ನಿಮ್ಮ ಧ್ವನಿ ನ್ಯಾಯಸಮ್ಮತವಾಗಿದೆ. ಮಂಡಳಿ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡುತ್ತೇನೆ. ಈ ಬೇಡಿಕೆಗೆ ಸ್ಪಂದನೆ ದೊರೆಯಲಿದೆ,” ಎಂದು ಸ್ಪಷ್ಟ ಭರವಸೆ ನೀಡಿದರು. ಈ ಮಾತು ಕಲ್ಯಾಣ ಕರ್ನಾಟಕ ಸಂಪಾದಕರ ಹೋರಾಟಕ್ಕೆ ಹೊಸ ಉತ್ಸಾಹ ನೀಡಿತು.

    ಈ ಹೋರಾಟದ ಮುಂಚೂಣಿಯಲ್ಲಿ ಗೌರವಾಧ್ಯಕ್ಷರು ಸುರೇಶ ಗೌರೆ, ಪ್ರಧಾನ ಕಾರ್ಯದರ್ಶಿ ಹನುಮಂತ್ ಭೋಧಾನಕರ್, ಉಪಾಧ್ಯಕ್ಷರು ಆನಂದ ಮಣ್ಣೂರ, ಚಂದ್ರಶೇಖರ ಕವಲಗಿ, ಶಿವಕುಮಾರ್ ತೊಟ್ನಲಳಿ, ಸದಸ್ಯರು ವಿಠಲ್ ಚಿಕಣಿ ಮತ್ತು ಬಾಬು ಚೌಹಾಣ್ ಇದ್ಧರು. ಎಲರ ಒಗ್ಗಟ್ಟು, ಹೋರಾಟ ಮತ್ತು ಧ್ವನಿ ಸರ್ಕಾರದ ಕಿವಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

    ಸಂಘದ ಅಧ್ಯಕ್ಷರು ಹಾಗೂ ಸದಸ್ಯರು — ಮಾಧ್ಯಮ ಮಾನ್ಯತಾ ಸಮಿತಿ ಗುರುರಾಜ ಕುಲಕರ್ಣಿ ಅವರು ಘೋಷಣಾತ್ಮಕವಾಗಿ ಹೇಳಿದರು, ನಮ್ಮ ಧ್ವನಿ ಕೇವಲ ಪತ್ರಿಕೆಗಳಲ್ಲ, ಈಗ ಸರ್ಕಾರದ ಕಿವಿಯಲ್ಲೂ ಮೊಳಗುತ್ತಿದೆ. 2 ಪುಟ ಜಾಹೀರಾತು ನಮ್ಮ ಹಕ್ಕು — ಈ ಹೋರಾಟ ಕೇವಲ ಬೇಡಿಕೆಯಲ್ಲ, ಮಾಧ್ಯಮದ ಗೌರವದ ಹೋರಾಟ. ಈಗ ಹಿಂದಿರುಗುವುದಿಲ್ಲ.” “ಒಗ್ಗಟ್ಟಾಗಿದಾಗ ಪತ್ರಕರ್ತರ ಧ್ವನಿ ಗೋಡೆಗಳನ್ನೇ ಕಂಪಿಸುತ್ತದೆ. ಈ ಹೋರಾಟದ ಗೆಲುವಿನ ಬಾಗಿಲು ತೆರೆಯಲಾಗಿದೆ. ಅಂತಿಮ ನಿರ್ಧಾರ ಬರುವ ತನಕ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ,” ಎಂದು ಸ್ಪಷ್ಟಪಡಿಸಿದರು.

    ಸಂಘವು ಮುಂದಿನ ಹಂತದಲ್ಲಿ ಮಂಡಳಿ ಅಧ್ಯಕ್ಷರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಅಂತಿಮ ಮಾತುಕತೆ ನಡೆಸಲು ಸಜ್ಜಾಗಿದೆ. ಸಂಪಾದಕರ ಧ್ವನಿ ಇದೀಗ ಶಕ್ತಿ — ಸರ್ಕಾರದ ಕಿವಿಗೊಡಬೇಕಾದ ನಾದವಾಗಿದೆ.