Category: Entertainment

Music expresses feeling and thought, without language. It was below and before speech, and it is above and beyond all words.

  • “ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ” – ಕೆಎಲ್ ರಾಹುಲ್

    “ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ” – ಕೆಎಲ್ ರಾಹುಲ್

    ಕ್ರಿಕೆಟ್ ಲೋಕದಲ್ಲಿ ಕೆಎಲ್ ರಾಹುಲ್ ಎಂಬ ಹೆಸರು ಅಷ್ಟೇ ಶಾಂತವಾಗಿ, ಅಷ್ಟೇ ಪ್ರಭಾವಶಾಲಿಯಾಗಿ ಬೆಳಗುತ್ತಿದೆ. ಮೈದಾನದಲ್ಲಿ ಗಂಭೀರವಾಗಿ, ದೃಢತೆಯಿಂದ ಆಟವಾಡುವ ಈ ಆಟಗಾರನ ಮತ್ತೊಂದು ಮುಖ ಹಾಸ್ಯ ಮತ್ತು ಸ್ನೇಹಭಾವದಿಂದ ಕೂಡಿದೆ. ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಸಣ್ಣ ಘಟನೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಗುವಿನ ಅಲೆ ಎಬ್ಬಿಸಿದೆ. ಅದು ಅವರ ಮೆಂಟರ್ ಆಗಿದ್ದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಬಗ್ಗೆ ಮತ್ತು ಅದರಲ್ಲಿ ಪ್ರಮುಖ ಪಾತ್ರದಲ್ಲಿ ಅವರ ಪತ್ನಿಯೂ ಕೂಡ ಇದ್ದಾರೆ.

    ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದ ಸಮಯದಲ್ಲಿ, ತಂಡದ ಮೆಂಟರ್ ಆಗಿದ್ದವರು ಕೆವಿನ್ ಪೀಟರ್ಸನ್. ಕಠಿಣ ಶಿಸ್ತು, ದೃಢ ಮಾರ್ಗದರ್ಶನ ಮತ್ತು ಕಟುವಾದ ವಿಶ್ಲೇಷಣೆಗಳು ಪೀಟರ್ಸನ್ ಅವರ ಕೋಚಿಂಗ್ ಶೈಲಿಯ ಮುಖ್ಯ ಅಂಶಗಳಾಗಿವೆ. ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದ ರಾಹುಲ್‌ಗೆ ಅನೇಕ ಪಾಠಗಳು ಕಲಿತರೂ, ಕೆಲವೊಮ್ಮೆ ಆ ಕಠಿಣತನ ತಾಳಲಾಗದಂತಾಗುತ್ತಿತ್ತು.

    ರಾಹುಲ್‌ನ ಪ್ರಕಾರ, “ಕೆವಿನ್ ಪೀಟರ್ಸನ್ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಆದರೆ ಅವರು ಕೆಲವೊಮ್ಮೆ ತುಂಬಾ ಗಂಭೀರವಾಗಿ ಮಾತಾಡುತ್ತಿದ್ದರು. ಅವರ ಪಾಠ ಕೇಳುವಾಗ ನಕ್ಕುಬಿಡಲು ಸಹ ಆಗುತ್ತಿರಲಿಲ್ಲ. ಅವರು ತುಂಬಾ ಏಕಾಗ್ರತೆಯಲ್ಲಿರುತ್ತಾರೆ, ನಾನು ಒಳಗೆ ನಕ್ಕುಕೊಂಡೇ ಇರ್ತೀನಿ.”

    ಈ ಘಟನೆಯ ಕುತೂಹಲಕರ ಭಾಗವೆಂದರೆ ರಾಹುಲ್ ಅವರು ಒಮ್ಮೆ ಕೆವಿನ್ ಪೀಟರ್ಸನ್ ಅವರ ಪತ್ನಿಗೇ ದೂರು ನೀಡಿಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

    “ನಾವು ಯೂರೋಪ್ ಪ್ರವಾಸದಲ್ಲಿದ್ದಾಗ ಒಮ್ಮೆ ಅವರ ಪತ್ನಿಯನ್ನು ಭೇಟಿ ಮಾಡಿದ್ದೆ. ಅಲ್ಲಿ ನಾನು ನಕ್ಕು ಅವರ ಬಳಿ ಹೇಳಿದೆ ‘ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ. ಅಭ್ಯಾಸದಲ್ಲಿ ತುಂಬಾ ಕಠಿಣವಾಗಿ ಮಾತನಾಡುತ್ತಾರೆ. ಸ್ವಲ್ಪ ಅವರಿಗೆ ಹೇಳಿ ಪ್ಲೀಸ್, ನನ್ನ ಮೇಲೆ ಮೃದುಧೋರಣೆಯಿಂದ ಕನಿಕರ ಇರಲಿ!’”

    ಅದನ್ನು ಕೇಳಿ ಪೀಟರ್ಸನ್ ಅವರ ಪತ್ನಿಯೂ ನಕ್ಕರಂತೆ. ಈ ಹಾಸ್ಯಭರಿತ ಕ್ಷಣವು ಪೀಟರ್ಸನ್ ಮತ್ತು ರಾಹುಲ್ ನಡುವಿನ ಸ್ನೇಹದ ನಿಜವಾದ ಹತ್ತಿರತನವನ್ನು ತೋರಿಸುತ್ತದೆ.

    ಈ ಘಟನೆ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ನಡೆಸಿದ 2 Sloggers ಎಂಬ ಯುಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಯಿತು. ಸಂಭಾಷಣೆಯ ವೇಳೆ ಅಥಿಯಾ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ರಾಹುಲ್ ತಮ್ಮ ಗುರು ಶಿಷ್ಯರ ನಡುವಿನ ಸಣ್ಣಪುಟ್ಟ ನೊಣಜಗಳ ಕುರಿತು ಹಾಸ್ಯಾತ್ಮಕವಾಗಿ ಹಂಚಿಕೊಂಡರು.

    “ಪ್ರತಿ ಬಾರಿ ಕೆವಿನ್ ಜೊತೆ ಜಗಳವಾದಾಗ, ನನ್ನ ಪತ್ನಿಯೇ ನನಗೆ ಬುದ್ಧಿ ಹೇಳುತ್ತಾಳೆ,” ಎಂದು ನಗುತ್ತಾ ಹೇಳಿದ್ದಾರೆ ರಾಹುಲ್. “ಆದರೂ ಕೆವಿನ್ ನನ್ನ ಜೀವನದಲ್ಲಿ ಒಬ್ಬ ಪ್ರೇರಕ. ಅವರಿಂದ ಕಲಿತ ಪಾಠಗಳು ಇಂದು ನನ್ನ ಆಟದ ಗುಣಮಟ್ಟವನ್ನು ರೂಪಿಸಿವೆ” ಎಂದು ಹೇಳಿಕೊಂಡಿದ್ದಾರೆ.

  • ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ

    ಸಿನಿಮಾ ಲೋಕದಲ್ಲಿ ಜನಪ್ರಿಯತೆ ಪಡೆದವರು ಎದುರಿಸಬೇಕಾದ ದೊಡ್ಡ ಸವಾಲುಗಳಲ್ಲಿ ಒಂದು ಎಂದರೆ ತಮ್ಮ ಹೆಸರು ಮತ್ತು ಮುಖದ ದುರುಪಯೋಗ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವೇಗದ ಬೆಳವಣಿಗೆ ಡೀಪ್‌ಫೇಕ್ ಎಂಬ ಹೊಸ ಅಪಾಯವನ್ನು ತಂದುಕೊಟ್ಟಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಈ ತಂತ್ರಜ್ಞಾನವು ಯಾರ ಮುಖವನ್ನು ಬೇರೆ ವ್ಯಕ್ತಿಯ ದೇಹದ ಮೇಲೆ ನಿಖರವಾಗಿ ಹೊಂದಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಜವಾದ ಹಾಗೇ ಕಾಣುವ ನಕಲಿ ವೀಡಿಯೋಗಳನ್ನು ರಚಿಸಲಾಗುತ್ತದೆ. ಇದೇ ತಂತ್ರಜ್ಞಾನದಿಂದ ಈಗ ಮೆಗಾಸ್ಟಾರ್ ಚಿರಂಜೀವಿ ಸಂಕಷ್ಟ ಅನುಭವಿಸುತ್ತಿದ್ದಾರೆ

    ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಚಿತ್ರರಂಗದಲ್ಲಿಯೂ, ಸಾಮಾನ್ಯ ಜನರಲ್ಲಿಯೂ ಆಘಾತ ಮೂಡಿಸಿದೆ. ಚಿರಂಜೀವಿ ಅವರ ಹೆಸರು, ಮುಖದ ಹೋಲಿಕೆ ಹಾಗೂ ಚಿತ್ರವನ್ನು ಬಳಸಿಕೊಂಡು ಎಐ ರಚಿತ, ಮಾರ್ಫಿಂಗ್ ಮಾಡಿದ ಅಶ್ಲೀಲ ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಟ ಸ್ವತಃ ಕಾನೂನು ಹೋರಾಟ ಆರಂಭಿಸಿದ್ದಾರೆ.

    ಚಿರಂಜೀವಿ ಅವರ ದೂರಿನಲ್ಲಿ ಏನಿದೆ?

    ಹಲವು ವೆಬ್‌ಸೈಟ್‌ಗಳು ನನ್ನ ಹೆಸರು ಮತ್ತು ಮುಖವನ್ನು ಬಳಸಿ ಕೃತಕವಾಗಿ ರಚಿಸಿದ ಅಶ್ಲೀಲ ವೀಡಿಯೋಗಳನ್ನು ಪ್ರಕಟಿಸಿವೆ. ಈ ವೀಡಿಯೋಗಳು ನನಗೆ ವಿರುದ್ಧವಾದ ತಪ್ಪು ಗ್ರಹಿಕೆಯನ್ನು ಉಂಟುಮಾಡಿ, ನನ್ನ ಮಾನ-ಗೌರವಕ್ಕೆ ಧಕ್ಕೆಯುಂಟುಮಾಡಿವೆ. ನನ್ನ ಮೇಲೆ ಜನರಲ್ಲಿದ್ದ ಸದ್ಭಾವನೆಯನ್ನು ಹಾಳುಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ, ಎಂದು ತಿಳಿಸಿದ್ದಾರೆ.

    ಈ ದೂರು ಹಿನ್ನೆಲೆಯಲ್ಲಿ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಐಟಿ ಕಾಯ್ದೆಯ ಸೆಕ್ಷನ್‌ಗಳು 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 79, 294, 296 ಮತ್ತು 336(4) ಹಾಗೂ 1986ರ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ 2, 3 ಮತ್ತು 4 ಅಡಿಯಲ್ಲಿ ತನಿಖೆ ಆರಂಭಿಸಿದ್ದಾರೆ.

    ಚಿರಂಜೀವಿ ತಮ್ಮ ಹೇಳಿಕೆಯಲ್ಲಿ ಹೇಳಿರುವಂತೆ, ಈ ವೀಡಿಯೋಗಳು ಸಂಪೂರ್ಣ ನಕಲಿ. ಕೃತಕ ಬುದ್ಧಿಮತ್ತೆ ಮೂಲಕ ನನ್ನ ಮುಖಭಾವ, ಶರೀರಭಾಷೆ ಮತ್ತು ವ್ಯಕ್ತಿತ್ವವನ್ನು ಅಶ್ಲೀಲ ರೀತಿಯಲ್ಲಿ ಪರಿವರ್ತಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ಮಾನಹಾನಿಕಾರಕ, ಎಂದು ಖಂಡಿಸಿದ್ದಾರೆ.

    ಈ ಪ್ರಕರಣ ಕೇವಲ ಚಿರಂಜೀವಿಯವರ ವೈಯಕ್ತಿಕ ಹಕ್ಕಿನ ವಿಷಯವಲ್ಲ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರಕ್ರಿಯೆಗಳ ವಿರುದ್ಧ ಎಚ್ಚರಿಕೆಯ ಗಂಟೆ ಎಂಬಂತೆ ಪರಿಣಿತರು ಹೇಳಿದ್ದಾರೆ. ಡೀಪ್‌ಫೇಕ್‌ನಂತಹ ತಂತ್ರಜ್ಞಾನಗಳು ಸೃಜನಶೀಲ ಕ್ಷೇತ್ರಗಳಿಗೆ ಅವಕಾಶಗಳನ್ನೂ ಕೊಡುವುದೇ ಸರಿ, ಆದರೆ ಅದನ್ನು ದುರುಪಯೋಗ ಮಾಡಿದರೆ ವ್ಯಕ್ತಿಗಳ ಗೌರವ ಮತ್ತು ಸಮಾಜದ ನೈತಿಕತೆಯ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ.

    ಹೈದರಾಬಾದ್ ಪೊಲೀಸರು ಈಗ ತಪ್ಪಿತಸ್ಥರನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಚಿರಂಜೀವಿಯ ಪ್ರಕರಣದಿಂದ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆ ಕುರಿತ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

  • ಹೊಸ ಅವತಾರದಲ್ಲಿ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್

    ಹೊಸ ಅವತಾರದಲ್ಲಿ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್

    ಹೈದರಾಬಾದ್: ಸೌತ್ ಸಿನೆಮಾದ ಪ್ಯಾನ್ ಇಂಡಿಯಾ ಸ್ಟಾರ್, ಎಲ್ಲರ ಮನದ ಡಾರ್ಲಿಂಗ್ ಪ್ರಭಾಸ್ ಅವರ ಹುಟ್ಟುಹಬ್ಬ (ಅಕ್ಟೋಬರ್ 23) ಸಂದರ್ಭದಲ್ಲಿ ಅವರ ಹೊಸ ಸಿನಿಮಾ “ಫೌಜಿ” ಅಧಿಕೃತವಾಗಿ ಘೋಷಣೆಯಾಗಿದೆ.

    ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಭರ್ಜರಿಯಾಗಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಘೋಷಣೆಯ ಜೊತೆಗೆ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಅವರ ತೀಕ್ಷ್ಣ ನೋಟ, ಯುದ್ಧ ಶಸ್ತ್ರಾಸ್ತ್ರಗಳು ಹಾಗೂ ಐತಿಹಾಸಿಕ ವಾತಾವರಣದ ವಿನ್ಯಾಸದಿಂದ ಕೂಡಿದೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

    ಚಿತ್ರದ ಕಥೆ 1940ರ ದಶಕದ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿದೆ ಎನ್ನಲಾಗಿದೆ. ಅಂದರೆ, ಇದು ಒಂದು ಪೀರಿಯಡ್ ಡ್ರಾಮಾ ಶೈಲಿಯ ಯುದ್ಧಕಥೆ ಆಗಿದ್ದು, ಪ್ರಭಾಸ್ ಅವರನ್ನು ಸಂಪೂರ್ಣ ಹೊಸ ಶೈಲಿಯಲ್ಲಿ ಕಾಣುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

    ಚಿತ್ರದಲ್ಲಿ ತಾರಾಬಳಗವೂ ಅತ್ಯಂತ ಭರ್ಜರಿಯಾಗಿದೆ ಇಮಾನ್ವಿ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಾ ಪ್ರದಾ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಕಾಣಿಸಿದ್ದಾರೆ.

    ಹುಟ್ಟುಹಬ್ಬದ ದಿನ ಬಿಡುಗಡೆಯಾದ ಈ ಘೋಷಣೆಯ ನಂತರ, ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಹ್ಯಾಷ್‌ಟ್ಯಾಗ್‌ಗಳು, ಪೋಸ್ಟರ್ ಹಂಚಿಕೆ, ಫ್ಯಾನ್ ಮೀಟಿಂಗ್‌ಗಳ ಮೂಲಕ “ಫೌಜಿ” ಬಗ್ಗೆ ಚರ್ಚೆ ಗರಿಗೆದರುತ್ತಿದೆ.

  • ಕಾಂತಾರ ವಿಲನ್ ಪಾತ್ರದ ಬಳಿಕ ಬಿಗ್ ಬಾಸ್ ನಲ್ಲಿ ದೂಳೆಬ್ಬಿಸಲು ಬಂದ ಮ್ಯೂಟೆಂಟ್ ರಘು!

    ಕಾಂತಾರ ವಿಲನ್ ಪಾತ್ರದ ಬಳಿಕ ಬಿಗ್ ಬಾಸ್ ನಲ್ಲಿ ದೂಳೆಬ್ಬಿಸಲು ಬಂದ ಮ್ಯೂಟೆಂಟ್ ರಘು!

    ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದೆ ಎನ್ನಬಹುದು. ಪ್ರೇಕ್ಷಕರು ಕಾಯುತ್ತಿದ್ದ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ, ಕಾಂತಾರ: ಚಾಪ್ಟರ್ 1 ಸಿನಿಮಾದ ವಿಲನ್ ಮ್ಯೂಟೆಂಟ್ ರಘು ಈಗ ದೊಡ್ಮನೆಗೆ ಕಾಲಿಟ್ಟಿದ್ದಾರೆ. ರಾಘವೇಂದ್ರ ಹೊಂಡದಕೇರಿ ಎಂಬ ನಿಜನಾಮ ಹೊಂದಿರುವ ರಘು, ಸಿನಿಮಾ, ಫಿಟ್‌ನೆಸ್ ಮತ್ತು ಆನಿಮೇಷನ್ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಯೊಳಗೆ ಹೊಸ ಎನರ್ಜಿ ತರಲು ಬಂದಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

    ಮ್ಯೂಟೆಂಟ್ ರಘು ಮೊದಲ ಬಾರಿಗೆ “ರಾಣ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಖಳನಾಯಕನಾಗಿ ಪ್ರವೇಶಿಸಿದರು. ನಂತರ “ಕ್ರಾಂತಿ”, “ಗರಡಿ”, “ಕಾಟೇರ” ಮುಂತಾದ ಚಿತ್ರಗಳಲ್ಲಿ ಬಲಿಷ್ಠ ವಿಲನ್ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದರು. ಅವರ ಅಭಿನಯದ ತೀವ್ರತೆ, ಶರೀರದ ಬಲ, ಮತ್ತು ಸ್ಟೈಲ್‌ ಅವರು ಬೇರೆ ನಟರಿಂದ ವಿಭಿನ್ನವಾಗಿದ್ದಾರೆ ಎಂಬುದನ್ನು ತೋರಿಸಿತು. ಇತ್ತೀಚೆಗೆ ಅವರು ಅಭಿನಯಿಸಿದ “ಕಾಂತಾರ: ಚಾಪ್ಟರ್ 1” ಚಿತ್ರದಲ್ಲಿನ ಪಾತ್ರವು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ.

    ಚಿತ್ರರಂಗದ ಹೊರತಾಗಿಯೂ ರಘು ಅವರ ಪ್ರತಿಭೆ ವಿಶಾಲವಾಗಿದೆ. ಅವರು ಹಾಲಿವುಡ್‌ನ ಪ್ರಸಿದ್ಧ ಆನಿಮೇಟೆಡ್ ಚಿತ್ರಗಳಾದ ಮಡಗಾಸ್ಕರ್, ಪೆಂಗ್ವಿನ್ಸ್, ಮತ್ತು ಹೌ ಟು ಟ್ರೇನ್ ಯುವರ್ ಡ್ರಾಗನ್ ಸಿನಿಮಾಗಳಲ್ಲಿ ಆನಿಮೇಷನ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆ ಅವರಲ್ಲಿರುವ ಕ್ರೀಯಾಶೀಲತೆ ಮತ್ತು ಅಂತರಾಷ್ಟ್ರೀಯ ಮಟ್ಟದ ಅನುಭವವನ್ನು ತೋರಿಸುತ್ತದೆ.

    ರಾಘವೇಂದ್ರ ಹೊಂಡದಕೇರಿ ಅವರು ಕೇವಲ ಕಲಾವಿದರಲ್ಲ, ಬಲಿಷ್ಠ ಕ್ರೀಡಾಪಟು ಕೂಡ ಹೌದು. ಅವರು ಬಾಡಿಬಿಲ್ಡಿಂಗ್, ಪವರ್ ಲಿಫ್ಟಿಂಗ್ ಮತ್ತು ಸ್ಟ್ರಾಂಗ್ ಮ್ಯಾನ್ ಸ್ಪರ್ಧೆಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಪರಿಶ್ರಮ ಮತ್ತು ಶಿಸ್ತು ಅವರಿಗೆ ‘ಕ್ರೀಡಾರತ್ನ’ ಪ್ರಶಸ್ತಿಯನ್ನೂ ಕೂಡ ತಂದುಕೊಟ್ಟಿದೆ.

    ಟಿವಿ ಪ್ರೇಕ್ಷಕರು ರಘುವನ್ನು ಮೊದಲ ಬಾರಿಗೆ “ಕ್ವಾಟ್ಲೆ ಕಿಚನ್” ರಿಯಾಲಿಟಿ ಶೋ ಮೂಲಕ ಗುರುತಿಸಿದರು. ಅಲ್ಲಿ ಅವರು ತಮ್ಮ ಆತ್ಮವಿಶ್ವಾಸ ಮತ್ತು ನೈಜ ವ್ಯಕ್ತಿತ್ವದಿಂದ ವಿಜೇತರಾದರು. ಈಗ ಅದೇ ವಾಹಿನಿಯ “ಬಿಗ್ ಬಾಸ್ ಕನ್ನಡ ಸೀಸನ್ 12”ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿಯಿಂದ ಮನೆಗೆ ಹೊಸ ಸ್ಪರ್ಧಾತ್ಮಕ ವಾತಾವರಣ ಬರುತ್ತದೆ ಎನ್ನುವುದು ಖಚಿತ.

    ಕಳೆದ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಹನುಮಂತ ಲಮಾಣಿ ಟೈಟಲ್ ಗೆದ್ದಿದ್ದರು. ಆ ಇತಿಹಾಸವನ್ನು ಈ ಬಾರಿ ಮ್ಯೂಟೆಂಟ್ ರಘು ಮರುಕಳಿಸುವರಾ ಎಂಬ ಕುತೂಹಲ ಈಗ ಎಲ್ಲರಲ್ಲಿದೆ. ರಘು ಅವರ ಬಲಿಷ್ಠ ವ್ಯಕ್ತಿತ್ವ, ನೇರ ನಿಲುವು ಮತ್ತು ಮನ ಗೆಲ್ಲುವ ಶೈಲಿ ಈ ಸೀಸನ್‌ನ ಕಥೆಯನ್ನು ಬದಲಾಯಿಸಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

    ಒಟ್ಟಾರೆ, ಮ್ಯೂಟೆಂಟ್ ರಘು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಬಂದು ಹೊಸ ಉತ್ಸಾಹ ತಂದಿದ್ದಾರೆ. ಅವರು ಖಳನಾಯಕನಾಗಿ ಬೆಳೆದರೂ, ಈಗ ಪ್ರೇಕ್ಷಕರ ಹೃದಯ ಗೆಲ್ಲುವ ಹೀರೋ ಆಗಲು ಸಜ್ಜಾಗಿದ್ದಾರೆ. ಧೂಳೆಬ್ಬಿಸುವ ಆಟ ಈಗಷ್ಟೇ ಆರಂಭವಾಗಿದೆ!

  • 53 ವರ್ಷಗಳ ಕಲಾಜೀವನಕ್ಕೆ ರಾಷ್ಟ್ರದ ಗೌರವ.! ಕನ್ನಡದ ಅಗ್ರ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

    53 ವರ್ಷಗಳ ಕಲಾಜೀವನಕ್ಕೆ ರಾಷ್ಟ್ರದ ಗೌರವ.! ಕನ್ನಡದ ಅಗ್ರ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

    ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ, ರಾಜಕಾರಣಿ ಹಾಗೂ ಸಂವೇದನಾಶೀಲ ಕಲಾವಿದರಾದ ಅನಂತ್ ನಾಗ್ ಅವರಿಗೆ ಈ ವರ್ಷ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕನ್ನಡಿಗರಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ. ಸುಮಾರು ಐದು ದಶಕಗಳಷ್ಟು ದೀರ್ಘ ಮತ್ತು ವೈವಿಧ್ಯಮಯ ಕಲಾಜೀವನದಲ್ಲಿ ಅನಂತ್ ನಾಗ್ ಅವರು ನಟನೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಮಾಡಿದವರು. ಶಿಸ್ತಿನ ಅಭಿನಯ, ಸಾಂಸ್ಕೃತಿಕ ನಂಟು ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಚಲನಚಿತ್ರ ರಂಗದಲ್ಲಷ್ಟೇ ಅಲ್ಲ, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿಯೂ ವಿಶಿಷ್ಟ ಗುರುತು ಮೂಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ, ಪದ್ಮ ಪ್ರಶಸ್ತಿ ಪಡೆದ ನಟರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಅನಂತ್ ನಾಗ್ ಮಾತನಾಡಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಇದು ನನ್ನ ಪ್ರಶಸ್ತಿ ಅಲ್ಲ, ಕನ್ನಡ ಚಿತ್ರರಂಗದ್ದು ಎಂದು ಅವರು ವಿನಯದಿಂದ ಹೇಳಿದ್ದಾರೆ.

    ಜಗ್ಗೇಶ್ ಮಾತು ನೆನಪಿಸಿಕೊಂಡ ಅನಂತ್ ನಾಗ್:

    ಇದೇ ಸಂದರ್ಭದಲ್ಲಿ ಅನಂತ್ ನಾಗ್, ಹಿರಿಯ ನಟ ಮತ್ತು ಸಂಸದ ಜಗ್ಗೇಶ್ ಅವರ ಮಾತುಗಳನ್ನು ನೆನಪಿಸಿಕೊಂಡು, ಅರ್ಹರಿಗೆ ಪ್ರಶಸ್ತಿ ಕೊಡಬೇಕು ಅಂತ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿ ಅವ್ರು ಎಂದು ಅವರು ಹೇಳಿದ್ದನ್ನು ಸ್ಮರಿಸಿದರು. ಈ ಪ್ರಶಸ್ತಿಯ ಹಿಂದಿನ ಉದ್ದೇಶವೇ ಕನ್ನಡ ಚಿತ್ರರಂಗದ ಸೇವೆಗೆ ಸಿಕ್ಕ ಗೌರವವೆಂದು ಅವರು ತಿಳಿಸಿದ್ದಾರೆ.

    ರಾಜಕೀಯ ನೆನಪು ಹಂಚಿಕೊಂಡ ಅನಂತ್ ನಾಗ್: 

    ತಮ್ಮ ರಾಜಕೀಯ ಹಾದಿಯನ್ನು ಸ್ಮರಿಸಿದ ಅವರು, ನಾನು ಮೊದಲ ಸಲ ಅಸೆಂಬ್ಲಿಗೆ ಹೋದಾಗ ಮಂತ್ರಿಯಾಗಿದ್ದೆ. ಆಗ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ‘ಇಷ್ಟು ಸ್ಮಾರ್ಟ್ ವ್ಯಕ್ತಿ ರಾಜಕೀಯದಲ್ಲಿ ಏನು ಮಾಡ್ತಿದ್ದಾರೆ?’ ಅನ್ನಿಸಿತು. ಆಗಿನಿಂದಲೂ ಡಿಕೆಶಿ ಇಂಡಸ್ಟ್ರಿಗೆ ಬರ್ಬೇಕಿತ್ತು ಅನ್ನಿಸಿತು” ಎಂದು ನಗುತ್ತಾ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

    53 ವರ್ಷಗಳ ಸಿನಿ ಜರ್ನಿಯ ಮೆಲುಕು: 

    ತಮ್ಮ 53 ವರ್ಷಗಳ ಸಿನಿಮಾ ಬದುಕಿನ ಬಗ್ಗೆ ಮಾತನಾಡಿದ ಅವರು, ನಿರ್ದೇಶಕರು, ನಿರ್ಮಾಪಕರು, ಸಾಹಿತ್ಯಕಾರರು ಮತ್ತು ಸಂಭಾಷಣೆ ಬರಹಗಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ನಾನು ಒಂದೇ ಒಂದು ಹಾಡಿನಲ್ಲೂ ಡಾನ್ಸ್ ಮಾಡಿಲ್ಲ. ಎಕ್ಸೆಪ್ಶನ್ ಕೊಟ್ಟಿದ್ದೆ ಅಷ್ಟೇ. ಡಾನ್ಸ್, ಫೈಟ್ ಏನೂ ಮಾಡಿಲ್ಲ. ಆದರೆ ಕನ್ನಡಿಗರು ನನ್ನನ್ನು ಕ್ಷಮಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಅದನ್ನೇ ಅವರು ಒಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

    ಇನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಪವಿತ್ರವಾದ ಸಂಭ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆಯುತ್ತಿರುವ ಪವಿತ್ರ ಕೆಲಸ ಇದು. ನಾನು 35 ವರ್ಷಗಳ ಹಿಂದೆ ಡೈರೆಕ್ಟರ್ ಆಗಿದ್ದೆ. ಎಲೆಕ್ಷನ್‌ಗೂ ಮೊದಲು ಡೈರೆಕ್ಟರ್ ಆಗಿದ್ದೆ. ಅನಂತ್ ನಾಗ್‌ ಅವರಿಗೆ ಸನ್ಮಾನ ಎಂದಿದ್ದಕ್ಕಾಗಿ ಮಾತ್ರ ನಾನು ಇಲ್ಲಿ ಬಂದಿದ್ದೇನೆ ಎಂದರು. ಇನ್ನು, ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಭಕ್ತಿ ಇದ್ದರೆ ಭಗವಂತ ಇದ್ದಾನೆ. ನೀವು ಬಣ್ಣ ಹಾಕಿಕೊಂಡು ನಾಟಕ ಮಾಡ್ತಿದ್ದೀರಾ, ನಾವು ಬಣ್ಣ ಹಾಕದೆ ನಾಟಕ ಮಾಡ್ತಿದ್ದೀವಿ. ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್‌ವುಡ್ ಬಾಲಿವುಡ್‌ನನ್ನೇ ಟೇಕ್‌ಓವರ್ ಮಾಡಿದೆ ಎಂದು ಶ್ಲಾಘಿಸಿದರು.

    ಅನಂತ್ ನಾಗ್ ಅವರಿಗೆ ದೊರೆತಿರುವ ಪದ್ಮಭೂಷಣ ಪ್ರಶಸ್ತಿ, ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ಕನ್ನಡ ಚಿತ್ರರಂಗದ ಪರಂಪರೆ, ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕ ರಾಷ್ಟ್ರ ಮಟ್ಟದ ಮಾನ್ಯತೆ.

  • ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

    ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಮಾನವೀಯತೆ ಮೆರೆದ ರಿಷಬ್ ಶೆಟ್ಟಿ

    ಭಾರತದ ಅತ್ಯಂತ ಜನಪ್ರಿಯ ಕ್ವಿಜ್ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯು ಅನೇಕ ಪ್ರತಿಭಾವಂತರನ್ನು ಪರಿಚಯಿಸಿದೆ. ಈ ಬಾರಿ ಆ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ವಿನಯ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಪ್ರೇಕ್ಷಕರ ಮನ ಗೆದ್ದಷ್ಟೇ ಅಲ್ಲ, ಒಂದು ಮಾದರಿಯನ್ನೂ ಸಹ ನಿರ್ಮಿಸಿದರು.

    ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಜೀವನದ ಪಯಣ, ಕುಟುಂಬ, ಮತ್ತು ತಮ್ಮ ಸಾಮಾಜಿಕ ಸೇವಾ ಉದ್ದೇಶಗಳ ಕುರಿತು ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿದ ‘ರಿಷಬ್ ಫೌಂಡೇಶನ್’ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣ ಹಾಗೂ ದೈವ ನರ್ತಕರ ಜೀವನೋಪಾಯಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವನ್ನು ವ್ಯಕ್ತಪಡಿಸಿದರು.

    ಆಟದಲ್ಲಿ ಅವರು ಅತ್ಯಂತ ಶಾಂತ ಮತ್ತು ನಿಖರವಾಗಿ ಪ್ರಶ್ನೆಗಳಿಗೆ ಉತ್ತರಿಸಿದರು. ಆರಂಭದಲ್ಲಿ 50,000 ರೂ. ಮೌಲ್ಯದ ಪ್ರಶ್ನೆಯಿಂದ ಆರಂಭಿಸಿದ ಅವರು ಕ್ರಮೇಣ 12 ಪ್ರಶ್ನೆಗಳನ್ನು ಯಶಸ್ವಿಯಾಗಿ ಪೂರೈಸಿದರು. ವಿಶೇಷವಾಗಿ ಒಂದು ಕಠಿಣ ಪ್ರಶ್ನೆ “ಇಂಡೋನೇಷ್ಯಾದಲ್ಲಿರುವ ಜ್ವಾಲಾಮುಖಿಯ ಕೆಳಗೆ ಯಾವ ಹಿಂದೂ ದೇವರ ಪ್ರತಿಮೆ ಇದೆ?” ಎಂಬುದಕ್ಕೆ ಅವರು ಲೈಫ್ಲೈನ್ ಬಳಸಿಕೊಂಡು ಸರಿಯಾದ ಉತ್ತರವಾದ ‘ಗಣಪತಿ’ ಎಂದು ಹೇಳಿದರು.

    ಈ ಪ್ರದರ್ಶನದ ಫಲವಾಗಿ ರಿಷಬ್ ಶೆಟ್ಟಿ ಅವರು ₹12,50,000 ಮೊತ್ತದ ಬಹುಮಾನವನ್ನು ಗೆದ್ದರು. ಆದರೆ, ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಅದನ್ನು ಬಳಸದೇ, ಅದನ್ನೆಲ್ಲ ತಮ್ಮ ಫೌಂಡೇಶನ್‌ಗೆ ದಾನ ಮಾಡಿದರು. ಅವರ ಈ ನಡೆ ಎಲ್ಲರಿಗೂ ಪ್ರೇರಣೆಯಾಗಿತು.

    ಅಮಿತಾಭ್ ಬಚ್ಚನ್ ಅವರ ಆತಿಥ್ಯದಲ್ಲಿ ನಡೆದ ಈ ಶೋ ವೇಳೆ, ಆಯೋಜಕರು ಮತ್ತು ಸ್ಪಾನ್ಸರ್‌ಗಳೂ ಕೂಡಾ ರಿಷಬ್ ಅವರ ಮಾನವೀಯ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಫೌಂಡೇಶನ್‌ಗೆ 1,500 ಕಿಲೋ ಅಕ್ಕಿ, 1,500 ಕಿಲೋ ಗೋಧಿ, 1,500 ಕಿಲೋ ತುಪ್ಪ, ಜೊತೆಗೆ ಹಿರೋ ಎಕ್ಸ್‌ಟ್ರೀಂ 125 ಬೈಕ್ ನೀಡುವುದಾಗಿ ಘೋಷಿಸಿದರು.

    ಒಟ್ಟಿನಲ್ಲಿ, ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರ ಗೆಲುವು ಕೇವಲ ಹಣದ ಗೆಲುವಲ್ಲ ಅದು ಮಾನವೀಯತೆ ಮತ್ತು ಅದು ಸಾಮಾಜಿಕ ಜವಾಬ್ದಾರಿಯ ಗೆಲುವು.

  • ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ

    ‘ಕಾಂತಾರ ಚಾಪ್ಟರ್ 1’ ಭರ್ಜರಿ ಯಶಸ್ಸು: ರಿಷಬ್ ಶೆಟ್ಟಿ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ

    ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಚಿತ್ರವೆಂದರೆ ‘ಕಾಂತಾರ ಚಾಪ್ಟರ್ 1’. ಈ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರಕುತ್ತಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಶೋಗಳು ನಡೆಯುತ್ತಿವೆ. ಕಥಾ ಹಂದರ, ತಾಂತ್ರಿಕ ಮೆರುಗು ಹಾಗೂ ಸಂಸ್ಕೃತಿಯ ನೈಜ ಚಿತ್ರಣದಿಂದ ಈ ಚಿತ್ರವು ದೇಶಾದ್ಯಂತ ಸದ್ದು ಮಾಡುತ್ತಿದೆ. ಮೊದಲ ಭಾಗದಂತೆಯೇ, ಈ ಚಾಪ್ಟರ್ ಕೂಡ ಭಾವನಾತ್ಮಕ ಕತೆಯ ಜೊತೆಗೆ ಸಂಸ್ಕೃತಿ ಹಾಗೂ ಭಕ್ತಿಯ ಅಂಶಗಳನ್ನು ಒಟ್ಟುಗೂಡಿಸಿರುವುದರಿಂದ ಪ್ರೇಕ್ಷಕರ ಮನ ಗೆದ್ದಿದೆ.

    ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇವಿ ಆಶೀರ್ವಾದ ಪಡೆಯಲು ಧಾರ್ಮಿಕ ಯಾತ್ರೆಗೆ ತೆರಳಿದ್ದಾರೆ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಅವರು ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಈ ವೇಳೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ತಮ್ಮ ಹರ್ಷವನ್ನು ಹಂಚಿಕೊಂಡ ಬಗೆ ಹೀಗಿದೆ, ಎಲ್ಲವೂ ತುಂಬಾ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ಪ್ರೇಕ್ಷಕರು ನಮ್ಮ ಸಿನಿಮಾಗೆ ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು, ಅದೇ ರೀತಿಯಲ್ಲಿ ಈ ಬಾರಿಯೂ ಪ್ರೇಕ್ಷಕರು ಚಾಪ್ಟರ್ 1 ಅನ್ನೂ ಕೂಡ ಹೃದಯಪೂರ್ವಕವಾಗಿ ಸ್ವೀಕರಿಸಿರುವುದು ನನಗೆ ಅಪಾರ ಸಂತೋಷವನ್ನು ನೀಡಿದೆ.

    ಇನ್ನು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಿಷಬ್ ಶೆಟ್ಟಿ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಅವರು ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

    ಕಾಂತಾರ ಚಾಪ್ಟರ್ 1’ ಯಶಸ್ಸು ಕೇವಲ ಒಂದು ಸಿನಿಮಾ ವಿಜಯವಲ್ಲ, ಇದು ಕನ್ನಡ ಸಂಸ್ಕೃತಿ, ಭಕ್ತಿ ಮತ್ತು ಹಳ್ಳಿ ಜೀವನದ ಆಳವಾದ ಕಥೆಯೊಂದರ ವಿಜಯವಾಗಿದೆ.

  • ಖ್ಯಾತ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ಸಜ್ಜು.! ಸಂಗೀತವೇ ಇವರ ಪ್ರೀತಿಯ ಸೇತುವೆ

    ಖ್ಯಾತ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ಸಜ್ಜು.! ಸಂಗೀತವೇ ಇವರ ಪ್ರೀತಿಯ ಸೇತುವೆ

    ಭಾರತದ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ವೇದಿಕೆಯ ಮೇಲೆ ತಮ್ಮ ಗಾಯನದಿಂದ ಜನಮನ ಸೆಳೆಯುವ ವಿಶಿಷ್ಟ ಶೈಲಿಯಿಂದ ಖ್ಯಾತಿ ಗಳಿಸಿರುವ ರಘು, ಇದೀಗ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಈ ಮದುವೆ ಕೇವಲ ಇಬ್ಬರು ಕಲಾವಿದರ ವೈಯಕ್ತಿಕ ಬಂಧನವಲ್ಲ, ಸಂಗೀತ ಲೋಕದಲ್ಲಿ ಮೂಡಿದ ಅಪರೂಪದ ಬಾಂಧವ್ಯಕ್ಕೂ ಸಾಕ್ಷಿಯಾಗಲಿದೆ. ಇಬ್ಬರೂ ಕೂಡ ತಮ್ಮದೇ ಆದ ಗುರುತಿನಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದು, ಅವರ ಸಂಗೀತಯಾತ್ರೆಯೇ ಈ ಪ್ರೀತಿಯ ಸೇತುವೆಯಾಗಿದೆ ಎನ್ನಬಹುದು.

    ಎರಡನೇ ವಿವಾಹ, ಹೊಸ ಬಾಳಿನ ಹೊಸ ಪುಟ: ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಅವರೊಂದಿಗೆ ಅವರು ವೈವಾಹಿಕ ಜೀವನ ನಡೆಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಅವರ ವಿವಾಹ ಮುರಿದುಬಿದ್ದಿತ್ತು. ಆ ಬಳಿಕ, ತಮ್ಮ ಸಂಗೀತಯಾತ್ರೆಯ ಮಧ್ಯೆ ವಾರಿಜಶ್ರೀ ಅವರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದರು ರಘು ದೀಕ್ಷಿತ್.

    ವಾರಿಜಶ್ರೀ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಖ್ಯಾತ ಗಾಯಕಿ ಹಾಗೂ ಕೊಳಲು ವಾದಕಿ. ಶಾಸ್ತ್ರೀಯ ಸಂಗೀತದಲ್ಲಿ ಪ್ರಾವೀಣ್ಯತೆ ಅವರು, ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತವನ್ನು ವಿಶಿಷ್ಟವಾಗಿ ಸಂಯೋಜಿಸುವ ಶೈಲಿಗೆ ಖ್ಯಾತರಾಗಿದ್ದಾರೆ. ರಘುದೀಕ್ಷಿತ್ ಮತ್ತು ವಾರಿಜಶ್ರೀ ಹಲವಾರು ಆಲ್ಬಂಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ ಮತ್ತು ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು.

    ಸಂಗೀತದಿಂದ ಪ್ರೀತಿ, ಪ್ರೀತಿಯಿಂದ ಜೀವನ: ಸಾಕು ಇನ್ನು ಸಾಕು ಆಲ್ಬಮ್‌ನಲ್ಲಿ ಇವರ ಸಂಗೀತ ಸಹಯೋಗವೇ ಇವರ ಪ್ರೀತಿಗೆ ದಾರಿ ಮಾಡಿಕೊಟ್ಟಿತು ಎನ್ನಲಾಗುತ್ತಿದೆ. COVID ಕಾಲಘಟ್ಟದಲ್ಲಿ ಇವರಿಬ್ಬರು ಹಾಡಿದ ಕೆಲವು ಹಾಡುಗಳು ಅಪಾರ ಜನಪ್ರಿಯತೆ ಪಡೆದಿದ್ದವು. ಅದೇ ಸಮಯದಲ್ಲಿ ಇವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

    ಈ ತಿಂಗಳ ಕೊನೆಯಲ್ಲಿ ಮದುವೆ: ಇವರ ವಿವಾಹ ಈ ತಿಂಗಳ ಕೊನೆಯಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮದುವೆ ಸಂಗೀತ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಮತ್ತು ಸಂಗೀತಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

    ಹೊಸ ಜೀವನಕ್ಕೆ ಸಂಗೀತಮಯ ಶುಭಾರಂಭ: ರಘು ದೀಕ್ಷಿತ್ ಅವರ ಜೀವನದಲ್ಲಿ ಹೊಸ ವಸಂತ ಬಂದಿದೆ ಎನ್ನಬಹುದು. ಸಂಗೀತದಲ್ಲಿ ಒಂದಾಗಿದ್ದ ಈ ಇಬ್ಬರು ಕಲಾವಿದರು ಈಗ ಜೀವನದಲ್ಲೂ ಒಂದಾಗಲು ಸಿದ್ಧರಾಗಿದ್ದಾರೆ. ಇವರ ದಾಂಪತ್ಯವು ಸಂಗೀತ ಲೋಕಕ್ಕೆ ಹೊಸ ಪ್ರೇರಣೆಯಾಗಲಿದೆ ಎಂಬ ನಿರೀಕ್ಷೆಯಿದೆ.

  • ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ – ಮೊದಲ ದಿನವೇ ಭರ್ಜರಿ ಕಲೆಕ್ಷನ್!

    ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ – ಮೊದಲ ದಿನವೇ ಭರ್ಜರಿ ಕಲೆಕ್ಷನ್!

    ತೆಲುಗು ಚಿತ್ರರಂಗದ ಖ್ಯಾತ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಎಪಿಕ್ ಹರಿ ಹರ ವೀರ ಮಲ್ಲು ಚಿತ್ರ ಇಂದು ವಿಜೃಂಭಣೆಯಿಂದ ತೆರೆಕಂಡಿದ್ದು, ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರವು, ಬಿಡುಗಡೆ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಅನ್ನು ದಾಖಲಿಸಿದೆ.

    ಚಿತ್ರದ ಚಿತ್ರೀಕರಣ ಸುಮಾರು ಐದು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಅನೇಕ ಬಾರಿ ಬಿಡುಗಡೆಯು ಮುಂದೂಡಲ್ಪಟ್ಟಿತ್ತು. ಕೊನೆಗೆ ಜುಲೈ 24 ರಂದು ತೆರೆಕಂಡ ಈ ಸಿನಿಮಾ, ಬಿಡುಗಡೆಯ ದಿನವೇ ಉತ್ತಮ ಪ್ರತಿಕ್ರಿಯೆಗಳನ್ನು ಕಂಡಿದೆ.

    ಚಿತ್ರ ಮೊದಲ ದಿನದ ಕಲೆಕ್ಷನ್ ₹ (ರೂ)
    ಹರಿ ಹರ ವೀರ ಮಲ್ಲು ₹43.8 ಕೋಟಿ
    ವಕೀಲ್ ಸಾಬ್ ₹40.10 ಕೋಟಿ
    ಭೀಮ್ ನಾಯಕ್ ₹37.15 ಕೋಟಿ
    ಬ್ರೋ ₹30.5 ಕೋಟಿ

    ಈ ಮೂಲಕ, ಹರಿ ಹರ ವೀರ ಮಲ್ಲು ಸಿನಿಮಾ ಪವನ್ ಕಲ್ಯಾಣ್ ಅವರ ಚಲನಚಿತ್ರ ವೃತ್ತಿ ಜೀವನದಲ್ಲಿ ಅತ್ಯುತ್ತಮ ಆರಂಭಿಕ ದಿನದ ಕಲೆಕ್ಷನ್ ದಾಖಲಿಸಿದ ಸಿನಿಮಾ ಎನಿಸಿಕೊಂಡಿದೆ.

    ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚಿತ್ರವು ಭರ್ಜರಿಯಾಗಿ ಓಡುತ್ತಿದ್ದು, ಈ ಎರಡು ರಾಜ್ಯಗಳಿಂದ ಮಾತ್ರವೇ ₹7 ಕೋಟಿ ರೂ. ಕಲೆಕ್ಷನ್‌ ಆಗಿದೆ. ಚಿತ್ರದ ಒಟ್ಟು ಭಾರತ ಕಲೆಕ್ಷನ್ ₹11.12 ಕೋಟಿ ರೂ. ಎಂದು ಪ್ರತ್ಯೇಕ ವರದಿಯೊಂದರಲ್ಲಿ ಹೇಳಲಾಗಿದೆ.

    ಪವನ್ ಕಲ್ಯಾಣ್ ಅವರ ಶಕ್ತಿ, ಪರದೆಯ ಮೇಲೆ ಅವರ ಬಲಿಷ್ಠ ಹಾಜರಾತಿ ಮತ್ತು ಆಕ್ಷನ್ ದೃಶ್ಯಗಳ ನಿರ್ವಹಣೆ ಚಿತ್ರದ ಹೈಲೈಟ್ ಆಗಿವೆ. ಚಿತ್ರದಲ್ಲಿನ ವಿ.ಎಫ್‌.ಎಕ್ಸ್, ಕಲಾತ್ಮಕ ದೃಶ್ಯಗಳು ಪ್ರೇಕ್ಷಕರನ್ನು ಸೆಳೆದಿವೆ. ಆದರೆ ಇಂಟರ್ವೆಲ್ ನಂತರ ಕಥೆಯ ನಿಧಾನಗತಿ ಮತ್ತು ನಿರೀಕ್ಷೆಗಿಂತ ಕಡಿಮೆ ತಾಂತ್ರಿಕ ತೃಪ್ತಿ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

    ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗಾರರಾಗಿ ನಿಧಿ ಅಗರ್ವಾಲ್, ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ನೋರಾ ಫತೇಹಿ, ಸುನಿಲ್ ವರ್ಮಾ, ಜಿಶು ಸೇನ್‌ಗುಪ್ತಾ ಮತ್ತು ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಹರಿ ಹರ ವೀರ ಮಲ್ಲು ಸಿನಿಮಾ ಪವನ್ ಕಲ್ಯಾಣ್ ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಆರಂಭವಾಗಿದ್ದು, ಉತ್ತಮ ಓಪನಿಂಗ್‌ನೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ಶಕ್ತಿಶಾಲಿಯಾದ ಹಾಜರಾತಿ ನೀಡಿದೆ. ಮೊದಲ ದಿನವೇ ಚಿತ್ರವು ₹43.8 ಕೋಟಿ ಗಳಿಸಿದ್ದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಭರ್ಜರಿ ಗಳಿಕೆಯ ನಿರೀಕ್ಷೆಯಿದೆ.

  • ಮನರಂಜಿಸಿದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ

    ಮನರಂಜಿಸಿದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ

    ಕಲಬುರಗಿ. ಮಸ್ಸಂಜೆಯ ಮನೋಹರ ಗಾನ ಸಂಭ್ರಮ ಪ್ರೇಕ್ಷಕರ ಮನ ರಂಜಿಸಿರುವುದು ನನಗೂ ಖುಷಿ ಎನಿಸಿದೆ ಎಂದು ಚಲನ ಚಿತ್ರ ಸಂಗೀತ ನಿರ್ದೇಶಕರಾದ ವಿ ಮನೋಹರ ಹೇಳಿದರು.
    ನಗರದ ಕಲಾ ಮಂಡಲದಲ್ಲಿ ಸುಕಿ ಸಂಸ್ಕೃತಿಕ ಸಂಸ್ಥೆ ಹಾಗೂ ರಾಷ್ಟ್ರ ಕೂಟ ಪುಸ್ತಕ ಮನೆ ಸಹಯೋಗದಲ್ಲಿ ನಡೆದ ಮಹಿಪಾಲ ರೆಡ್ಡಿ ಮುನ್ನೂರು ಅವರ ಮುಗಿಲು ಸುರಿದ ಮುತ್ತು ಪುಸ್ತಕ ಲೋಕಾರ್ಪಣೆ ಹಾಗೂ ವಿ ಮನೋಹರ ಅವರ ರಚನೆ ಹಾಗೂ ಸಂಗೀತ ನಿರ್ದೇಶನದ ಗೀತೆಗಳ ಗಾನ ಸಂಭ್ರಮ ದಲ್ಲಿ ಸುಕಿ ಮೆಲೋಡಿಸ್ ತಂಡದವರಿಂದ ಮನೋಹರ ಗಾನ ಸಂಭ್ರಮ ದಲ್ಲಿ ಗಾಯಕರ ಗಾನಗಳನ್ನು ಕೇಳಿ ಆನಂದಿಸಿದ್ದೇನೆ ಅವರುಗಳು ಬಲು ಸಂಭ್ರಮ ದಿಂದ ನನ್ನ ಹಾಡುಗಳನ್ನು ಹಾಡಿದ್ದು ಒಂದು ಕುಟುಂಬ ಕಾರ್ಯಕ್ರಮ ವೆಂದು ಅನಿಸುತ್ತದೆ ಇಂತಹ ಮಳೆಯ ವಾತಾವರಣದಲ್ಲಿ ಅದರಲ್ಲೂ ಬಾನುವಾರ ವಾಗಿದ್ದು ಮನೆಯಲ್ಲಿ ಹಾಯಾಗಿ ಮಿರ್ಚಿ ಬಝಿ ಮಂಡಕ್ಕಿ ತಿನ್ನುತ್ತಾ ಟಿವಿ ನೋಡುತ್ತಾ ಕೂಡ್ರುವ ಜಾಯಮಾನದಲ್ಲಿ ಇಲ್ಲಿ ಅದೆಂತಹ ಸಂಭ್ರಮ ದಲ್ಲಿ ಕೂತು ಹಾಡು ಕೇಳುತ್ತಿರುವುದು ಇದೊಂದು ಸ್ವರ್ಗದ ಹಾಗೆ ಆಗಿದೆ ಎಂದು ಹೇಳುತ್ತ ಪ್ರೇಕ್ಷಕರ ಕೋರಿಕೆಯ ಮೆರೆಗೆ ಓ ಮಲ್ಲಿಗೆ ಹಾಡನ್ನು ಹಾಡಿ ಮನರಂಜಸಿದರು.
    ಕಲಾ ಮಂಡಳ ಗಾಯನ ಅಭಿಮಾನಿಗಳಿಗೆ ಕಿಕ್ಕಿರಿದು ತುಂಬಿ ಮನೋಹರ ಗಾನ ಸಂಭ್ರಮದ ವಾತಾವರಣಕ್ಕೆ ಸಾಕ್ಷಿ ಆದರು.
    ಗಾಯನದಲ್ಲಿ ಕಿರಣ್ ಪಾಟೀಲ ಕವಿರಾಜ್ ಕಾವೇರಿ ಹಿರೇಮಠ ಮಹೇಶ ಕುಮಾರ. ಪ್ರಕಾಶ ದಂಡೋತಿ ಆನಂದ ಪಾಟೀಲ್ ಸಿದ್ದಣ್ಣ ಡಿಗ್ಗಾವಿ. ಶರಣು ವಿಜಯಲಕ್ಷ್ಮಿ ಮುಂತಾದ ಗಾನದಲ್ಲಿ ಬಾಗಿಯಾಗಿ ಮನೋಹರ ಅವರ ಹಾಡುಗಳನ್ನು ಹಾಡಿದರು.