Category: Discover

Discover land experiences before or after your voyage. On a late stay in port, explore the maze-like streets of Old Medina, tour the Hassan.

  • ಮೂಟ್ ಕೋರ್ಟ್ ಹಾಲ್ ಉದ್ಘಾಟನೆ

    ಮೂಟ್ ಕೋರ್ಟ್ ಹಾಲ್ ಉದ್ಘಾಟನೆ

    ಸತ್ಯಕಾಮ ವಾರ್ತೆ ಬೆಂಗಳೂರು:
    ಬೆಂಗಳೂರು ನಗರದ ಮೈಸೂರು ರಸ್ತೆಯ ಕೆಂಗೇರಿ ಚೆಕ್ ಪೋಸ್ಟ್ ಬಳಿಯಲ್ಲಿರುವ ಐಸಿಎಫ್ಎಐ ಲಾ ಸ್ಕೂಲ್ ನ ಕೆಂಗೇರಿ ಕ್ಯಾಂಪಸ್‌ನಲ್ಲಿರುವ ನವೀಕೃತ ಮೂಟ್ ಕೋರ್ಟ್ ಹಾಲ್‌ನ್ನು ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಅಶೋಕ್ ಜಿ. ನಿಜಣ್ಣರವರು ಹಾಗೂ ಮತ್ತಿತರ ಗಣ್ಯರು ಉದ್ಘಾಟಿಸಿದರು.[web_stories title=”true” excerpt=”false” author=”false” date=”false” archive_link=”true” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”2″ order=”ASC” orderby=”post_title” view=”circles” /]

    ನಂತರ ಮಾತನಾಡಿದ ಇವರು ಮೂಟ್ ಕೋರ್ಟ್ ಹಾಲ್ ಇದೊಂದು ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಅಧ್ಯಯನ ಹಾಗೂ ಪ್ರಾಯೋಗಿಕವಾಗಿ ಕಾನೂನು ತರಬೇತಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿರ್ದೇಶಕರಾದ ಶ್ರೀ ಸಿ.ಎಸ್. ಪಾಟೀಲ, ಕರ್ನಾಟಕ ಕಾನೂನು ಮತ್ತು ಸಂಸತ್ತೀಯ ಸುಧಾರಣಾ ಸಂಸ್ಥೆ ಹಾಗೂ ಮಾಜಿ ಕುಲಪತಿಗಳು, ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ, ಗೌರವಾನ್ವಿತ ಕುಲಾಧಿಪತಿ, ಐಸಿಎಫ್ಎಐ ಕಾನೂನು ವಿಶ್ವವಿದ್ಯಾಲಯ, ಮಿಜೋರಂ ಮತ್ತು ಮಾಜಿ ಕುಲಪತಿ, ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಶ್ರೀ ವೈ.ಆರ್. ಹರಗೋಪಾಲ್ ರೆಡ್ಡಿಯವರು, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್ ಮತ್ತು ಸುಪ್ರೀಂ ಕೋರ್ಟ್ ನ ದಾಖಲಾತಿ ನ್ಯಾಯವಾದಿಯಾದ ಶ್ರೀ ಗೌತಮ್ ದಾಸ್ ಮತ್ತಿತರು ಉಪಸ್ಥಿತರಿದ್ದರು.

    ಇನ್ನು ವಿಶೇಷ ಆಹ್ವಾನಿತರಾಗಿ ಪ್ರೊ. ಡಾ. ಸಂದೀಪ್ ದೇಸಾಯಿ ರವರು ಡೀನ್ ಹಾಗೂ ಅಮಿಟಿ ಕಾನೂನು ಕಾಲೇಜು, ಹಾಗೂ ಶ್ರೀ ಇ. ಸುಹೈಲ್ ಅಹ್ಮದ್, ಹಿರಿಯ ಸಹಭಾಗಿ ಮತ್ತು ಟ್ರೈಲ್ ಬೇಸ್, ಬೆಂಗಳೂರು ಇದ್ದರು. ಅತಿಥಿಗಳನ್ನು ಕುಲಪತಿಗಳಾದ ಪ್ರೊ. ಡಾ. ಮುದ್ದು ವಿನಯ್ ರವರು ಮತ್ತು ವಿಭಾಗದ ಮುಖ್ಯಸ್ಥೆ ಡಾ. ರಾಜಶ್ರೀ ಪಾಟೀಲ, ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.

    ಈ ಕಾರ್ಯಕ್ರಮದಲ್ಲಿ ಗಣ್ಯರಿಂದ ಹಲವು ಬಗೆಯ ಪ್ರೇರಣಾದಾಯಕ ಭಾಷಣಗಳಲ್ಲಿ ಕಾನೂನು ಶಿಕ್ಷಣದಲ್ಲಿ ಮೂಟ್ ಕೋರ್ಟ್‌ಗಳ ಪಾತ್ರ ಮತ್ತು ಸಿದ್ಧಾಂತದ ಅನುಭವವನ್ನು ಏಕೀಕರಿಸುವ ಅವಶ್ಯಕತೆಯನ್ನು ಹೈಲೈಟ್ ಮಾಡಲಾಯಿತು. ಹಾಗೇಯೆ ಈ ಕಾರ್ಯಕ್ರಮವು ಉತ್ಸಾಹ ಭರಿತ ವಿದ್ಯಾರ್ಥಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನಡೆಯಿತು.
  • 14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    ಸತ್ಯಕಾಮ ವಾರ್ತೆ ಯಾದಗಿರಿ:

    ತಾಲ್ಲೂಕಿನ ಮುಂಡರಗಿ ಗ್ರಾಮ ಹೊರವಲಯದ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಿಂದ 14 ನೇ ವರ್ಷದ ಜಾತ್ರೆ ಜರುಗಿತು.

    ಮಠದ ಪೀಠಾಧಿಪತಿ ಶಿವ ಚಂದ್ರಶೇಖರ ಮುತ್ಯಾ ಮಾತನಾಡಿ ಪ್ರತಿವರ್ಷದಂತೆ ಮಠದಲ್ಲಿ ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸಿ ನಾಗಲಿಂಗೇಶ್ವರ ದರ್ಶನ ಮಾಡುವರು. ಜಾತ್ರೆಯ ಪೂರ್ವದಿನ ರಾತ್ರಿ ಭಜನೆ ಕಾರ್ಯಕ್ರಮ, ಬೆಳಿಗ್ಗೆ ಮುಂಡರಗಿ ಗ್ರಾಮದ ದ್ಯಾಮವ್ವ ದೇವಸ್ಥಾನಕ್ಕೆ ತೆರಳಿ ಉಡಿ ತುಂಬುವ ಕಾರ್ಯಕ್ರಮ, ಗಂಗಾ ಸ್ನಾನ, ನಾಗರ ಹುತ್ತಕ್ಕೆ ಪೂಜೆ, ಹಾಗೂ ನಿಜ ನಾಗರಕ್ಕೆ ಹಾಲುಣಿಸುವುದು ವಾಡಿಕೆ. ಜಾತ್ರೆಯಲ್ಲಿ ಹಲಗೆ ಕುಣಿತ, ಡೊಳ್ಳು ಕುಣಿತ, ಕೈ ಕುಸ್ತಿ ಪಂದ್ಯಗಳು ಜರುಗುತ್ತವೆ, ವಿಶೇಷ ಪೂಜೆಗಳು ನೆರವೇರುತ್ತವೆ ಎಂದರು.

    ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ್ ಮಾತನಾಡಿ ನಮ್ಮ ಸನಾತನ ಧರ್ಮವು ಮನುಷ್ಯನಿಗೆ ಭಯ, ಭಕ್ತಿ, ನಂಬಿಕೆ, ದಾನ, ಧರ್ಮ, ಸಂಸ್ಕೃತಿ, ಸಂಸ್ಕಾರ ಗಳು ಇದ್ದಾಗಲೇ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ, ನಾವು ಕೂಡ ಹಲವು ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತೇವೆ ವಿಶೇಷವಾಗಿ ನಾಗರ ಪಂಚಮಿ ಪ್ರಯುಕ್ತ ನಮ್ಮ ಭಾಗದ ಕಂದಕೂರು ಗ್ರಾಮದ ಬೆಟ್ಟದ ಕೊಂಡಮ್ಮಾಯಿ ಜಾತ್ರೆವೇಳೆಯಲ್ಲಿ ರಾಶಿಗಟ್ಟಲೇ ಸಾವಿರಾರು ಹಾವು, ಚೇಳುಗಳು ಹೊರಬಂದು, ಜನರೆಲ್ಲ ಅವುಗಳಿಂದ ಆಟವಾಡುವುದು ಸಾಮಾನ್ಯ ಮಾತಲ್ಲ. ಅಂತೆಯೇ ಹುತ್ತದಲ್ಲಿನ ನಿಜ ನಾಗರ ಹಾವನ್ನು ಹೊರತೆಗೆದು ಹಾಲುಣಿಸುವುದು ದೈವತ್ವದ ಮಾತು ಎಂದರು.

    ಕಾರ್ಯಕ್ರಮದಲ್ಲಿ ಹಳಿಗೇರ ಪೀಠದ ಹಣಮಂತ್ರಾಯ ಮುತ್ಯಾ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರಮೇಶ್ ಕೋಟಿಮನಿ, ಶ್ರೀಧರ್ ಮಹಾಂತೇಶ್, ಅಶೋಕ್ ರೆಡ್ಡಿ ಎಲೇರಿ, ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್ ಸ್ವಾಮಿಗಳಿಂದ ಆಶೀರ್ವಾದ ಪಡೆದರು.

  • ಹೃದಯಾಘಾತದಿಂದ ಹಲ್ಕ್ ಹೊಗನ್ ವಿಧಿವಶ

    ಹೃದಯಾಘಾತದಿಂದ ಹಲ್ಕ್ ಹೊಗನ್ ವಿಧಿವಶ

    ಅಮೆರಿಕಾ: ವಿಶ್ವ ಪ್ರಸಿದ್ಧ ರೆಸಲಿಂಗ್, ನಟ ಹಾಗೂ ಪಾಪ್ ಕಲ್ಚರ್ ಐಕಾನ್‌ ಆಗಿದ್ದ ಹಲ್ಕ್ ಹೊಗನ್ (ಮೂಲ ಹೆಸರು ಟೆರಿ ಜೀನ್ ಬೋಲಿಯಾ) ಅವರು 71ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಫ್ಲೋರಿಡಾದ ಕ್ಲಿಯರ್‌ವಾಟರ್‌ನಲ್ಲಿ ತಮ್ಮ ನಿವಾಸದಲ್ಲಿದ್ದಾಗ ಇಂದು ಬೆಳಿಗ್ಗೆ ಅಸಹಜ ಆರೋಗ್ಯ ಸಮಸ್ಯೆ ಉಂಟಾಗಿ ತುರ್ತು ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಸುಮಾರು 30 ನಿಮಿಷಗಳ ಕಾಲ CPR ನೀಡಿದ ಬಳಿಕ ಆಸ್ಪತ್ರೆಗೂ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರನ್ನು ಮೃತ ಘೋಷಿಸಿದರು.

    ಹಲ್ಕ್ ಹೊಗನ್ ಅವರು 1980ರ ದಶಕದಲ್ಲಿ “Hulkamania” ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿದ್ದು, WWE (ಹಿಂದಿನ WWF) ಯ ಚಾಂಪಿಯನ್‌ಶಿಪ್‌ ಗೆದ್ದಂತೆ ಹಲವು ಪಟಕಥೆಗಳಿಗೆ ಜೀವ ತುಂಬಿದ್ದರು. ಅವರು ಆರು ಬಾರಿ WWE ಚಾಂಪಿಯನ್ ಆಗಿದ್ದು, ಹಲವು ಪೀಳಿಗೆಗಳ ಅಭಿಮಾನಿಗಳಿಗೆ ಪ್ರೇರಣೆಯಾದರು.

    ಅವರನ್ನು 2005ರಲ್ಲಿ WWE Hall of Fameಗೆ ಸೇರಿಸಲಾಗಿದೆ. ಅವರು ನಟರಾಗಿ, ಟಿವಿ ಶೋಗಳಲ್ಲಿ ಭಾಗವಹಿಸಿ ಹಲವಾರು ವರ್ಷಗಳು ಪ್ರಭಾವ ಬೀರಿದ್ದರು.

    ಅಂತಿಮ ಕ್ಷಣಗಳು:
    ಕ್ಲಿಯರ್‌ವಾಟರ್‌ನಲ್ಲಿ ಬೆಳಿಗ್ಗೆ 9:51 ಕ್ಕೆ ತುರ್ತು ಸೇವೆಗಳಿಗೆ ಕರೆ ಬಂದಿತ್ತು. ಪೊಲೀಸರು ಹಾಗೂ ವೈದ್ಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ 30 ನಿಮಿಷ CPR ನೀಡಿದರೂ ಅವರು ಜೀವಿತರಾದಿಲ್ಲ. ಯಾವುದೇ ಅಪರಾಧ ಅಥವಾ ಅನುಮಾನಾಸ್ಪದ ಘಟನೆ ಇಲ್ಲ ಎಂಬುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಕುಟುಂಬಸ್ಥರು: ಅವರು ತಮ್ಮ ಪತ್ನಿ ಸ್ಕೈ ಡೇಲಿ ಮತ್ತು ಮಕ್ಕಳು ಬ್ರುಕ್ ಹಾಗೂ ನಿಕ್ ಅವರನ್ನು ಅಗಲಿದ್ದಾರೆ.

    ಹಲ್ಕ್ ಹೊಗನ್ ಅವರ ನಿಧನದಿಂದ ರೆಸಲಿಂಗ್ ಪ್ರಪಂಚ ದುಃಖದಲ್ಲಿದ್ದು, ಹಲವು ತಾರೆಗಳು, ಅಭಿಮಾನಿಗಳು ತಮ್ಮ ಸಂತಾಪವನ್ನು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದಾರೆ.

    “ಆಹ್ ಬ್ರದರ್!” ಎಂದು ಆಳವಾದ ಧ್ವನಿಯಲ್ಲಿ ಹೇಳುತ್ತಿದ್ದ ಅವರ ನೆನಪಿನಲ್ಲಿ, ರೆಸಲಿಂಗ್ ಜಗತ್ತು ಶೋಕ ಸ್ಮರಣೆಯಲ್ಲಿದೆ.

  • ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

    ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

    ಸತ್ಯಕಾಮ ವಾರ್ತೆ ಯಾದಗಿರಿ : 

    ವಿಶೇಷ ಚೇತನರಲ್ಲಿರುವ ಆತ್ಮಶಕ್ತಿ ಅತ್ಯಂತ ಮಹತ್ವದ್ದಾಗಿದ್ದು, ಅದರಿಂದಲೇ ಅವರು ಸಮಾಜದಲ್ಲಿ ಅತ್ಯಂತ ಗೌರವದಿಂದ ಬದುಕುವಂತಾಗಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರ್‌ಪಿಡಿ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಗ್ರಾಮೀಣ ಹಾಗೂ ನಗರ ಅಂಗವಿಕಲರ ಪುನರ್ವಸ್ಥಿತಿ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಅರಿವು ವಿಕಲಚೇತನ ಹಾಕುತ್ತಾಯಿ ಸಮಾವೇಶ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

    ಅಂಗವೈಕಲ್ಯ ಶಾಪವಲ್ಲ. ಅದು ಆಕಸ್ಮಿಕವಾಗಿ ಹುಟ್ಟಿನಿಂದ ಬರುತ್ತದೆ. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ವಿಶ್ವಾಸ ಹಾಗೂ ಅತ್ಮಸ್ಥೆöÊರ್ಯ ತುಂಬಿ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂದರು.

    ಗುರುಮಠಕಲ್ ಖಾಸಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಜಿಗಳು, ಸಾನ್ನಿಧ್ಯವಹಿಸಿದ್ದರು. ಆರ್.ಪಿ.ಡಿ ಕಾಯ್ದೆ ಕುರಿತು ನಾಗಪ್ಪಜಿ ಅವಟಿ ಉಪನ್ಯಾಸ ನೀಡಿದರು.

    ಎಲೇರಿಯ ವಿಕಲಚೇತನ ಸಂಘಕ್ಕೆ ೧೫೦೦೦೦ ಸಾವಿರ ಚೆಕ್ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಗುರುಮಠಕಲ್ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ನಜರಾಪುರ್ ಉಪಾಧ್ಯಕ್ಷರಾದ ರೇಣುಕಾ ಪಡಿಗೆ, ಭಾರತಿ ದಂಡೋತಿ ತಹಸೀಲ್ದಾರ ಶಾಂತಗೌಡ ಬಿರಾದಾರ್, ಇಒ ಅಮರೇಶ್ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಹನುಮಂತರೆಡ್ಡಿ ಎಪಿಡಿ ಸಂಸ್ಥೆ ಯಾದಗಿರಿ ವ್ಯವಸ್ಥಾಪಕರಾದ ಸಂಪ್ರಿತ ದೇವಪುತ್ರ ಸಂತೋಷ್ ನಿರೇಟಿ ತಾಲೂಕ ನೌಕರ ಸಂಘದ ಅಧ್ಯಕ್ಷರು ಗುರುಮಟ್ಕಲ್, ಉಮಾ ನಾಯಕ್ ಅಧ್ಯಕ್ಷರು ಆರ್ ಪಿ ಡಿ ಟಾಸ್ಕ್ ಪೋರ್ಸ್ ಯಾದಗಿರಿ ಸೇರಿದಂತೆ ಇತರರಿದ್ದರು.

  • ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ ಜನತೆಗೆ ಉತ್ತಮ ಸೇವೆ ಒದಗಿಸಬೇಕಿದೆ. ಆಸ್ಪತ್ರೆಯ ಸುತ್ತಲಿನ ಪರಿಸರದ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರೂ ಗಮನಹರಿಸಬೇಕು, ಆಸ್ಪತ್ರೆಯ ಬಳಿ ನಾಗರೀಕರು ಕೂಡ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹೇಳಿದರು.

    ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸ್ವಚ್ಚತೆ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಎಲ್ಲೆಂದರಲ್ಲಿ ಮನೆಯಿಂದ ತಂದ ಊಟ ಮಾಡಿ ಅಲ್ಲೇ ಉಳಿದ ಅನ್ನವನ್ನು ಬಿಸಾಡುವುದು, ಬಿಡಿ, ಸಿಗರೇಟ್ ಸೇದುವುದು, ತಂಬಾಕು ಗುಟಕಾ ತಿಂದು ಉಗುಳುವುದು ಯಾರೂ ಮಾಡಬಾರದು ನಮ್ಮ ಆಸ್ಪತ್ರೆ ಸ್ವಚ್ಚತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲದೆ ಎಂದು ಹೇಳಿದರು.
    ಆಸ್ಪತ್ರೆ ಆವರಣದಲ್ಲಿ ಕಸ ಇದ್ದರೆ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡೇ ತಿರುಗುವಂತಹ ಪರಿಸ್ಥಿತಿ ಬರುತ್ತದೆ. ನಾಗರೀಕರ ನಿಷ್ಕಾಳಜಿಯೂ ಕೂಡ ಪರಿಸರ ಸ್ವಚ್ಚತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಪರಿಸರ ಅಭಿಯಂತ ಪ್ರಶಾಂತ, ಡಾ.ಅಂಗಡಿ, ಡಾ.ರಿಜ್ವಾನಾ, ಎಸ್.ಎ.ಶಿವಪುತ್ರ, ಮಾಜಿ ಸದಸ್ಯ ಅಬ್ದುಲ್ ಖರೀಂ ಸೇರಿದಂತೆ ಇತರರಿದ್ದರು.

    ಸರಕಾರಿ ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗ್ತೇವೆ. ಸಿಬ್ಬಂದಿಗೆ ಕಸವನ್ನು ಸರಿಯಾಗಿ ವಿಂಗಡಿಸುವ ಮಹತ್ವ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

    ಕು.ಲಲಿತಾ ಮೌಲಾಲಿ ಅನಪೂರ, ನಗರಸಭೆ ಅಧ್ಯಕ್ಷರು, ಯಾದಗಿರಿ