Category: Business

The real test is not whether you avoid this failure, because you won’t. It’s whether you let it harden or shame you into inaction, or whether you learn from it; whether you choose to persevere.

  • ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!

    ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!

    ಹಬ್ಬದ ಸೀಸನ್‌ ಕಳೆದ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. ಕಳೆದ ಕೆಲವು ವಾರಗಳಿಂದ ಏರಿಳಿತ ಕಂಡ ಚಿನ್ನದ ದರ ಈಗ ಸಡಿಲವಾಗಿ ಇಳಿಕೆಯಾಗತೊಡಗಿದ್ದು, ಚಿನ್ನಾಭರಣ ಪ್ರಿಯರ ಮುಖದಲ್ಲಿ ನಗು ಮೂಡಿಸಿದೆ. ಸೋಮವಾರದಂತೆ ಚಿನ್ನದ ಬೆಲೆಗಳಲ್ಲಿ ಸಾವಿರ ರೂಪಾಯಿಗಿಂತಲೂ ಹೆಚ್ಚು ಇಳಿಕೆ ದಾಖಲಾಗಿದೆ.

    ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 27ರಂದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹12,448 ಆಗಿದ್ದು, 10 ಗ್ರಾಂ ಚಿನ್ನಕ್ಕೆ ₹1,24,480 ಆಗಿದೆ. ಕೇವಲ ಒಂದು ದಿನದಲ್ಲೇ ಸುಮಾರು ₹1,140 ಇಳಿಕೆ ದಾಖಲಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ ಹೋಲಿಕೆಯಾಗಿ ಇಳಿಕೆಯಾಗಿದೆ ಪ್ರತಿ ಗ್ರಾಂ ₹11,410 ಹಾಗೂ 10 ಗ್ರಾಂ ₹1,14,100. ಅಂದರೆ ಸುಮಾರು ₹1,050 ಇಳಿಕೆ ಕಂಡಿದೆ.

    ಬೆಂಗಳೂರು ಮಾರುಕಟ್ಟೆಯಲ್ಲಿಯೂ ಇದೇ ರೀತಿಯ ಇಳಿಕೆ ವಾತಾವರಣ ಕಂಡುಬಂದಿದೆ. ಇಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹12,448 ಆಗಿದ್ದು, 10 ಗ್ರಾಂ ಚಿನ್ನಕ್ಕೆ ₹1,24,480 ರೂ. ಇದೆ. ಜಿಎಸ್‌ಟಿ ಮತ್ತು ಕಾರ್ಮಿಕ ಶುಲ್ಕ ಸೇರಿಸಿದ ನಂತರದ ಬೆಲೆಯಲ್ಲಿ ಮಳಿಗೆಯಿಂದ ಮಳಿಗೆಗೆ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಬೆಳ್ಳಿ ಬೆಲೆಯೂ ತಗ್ಗಿದ್ದು, ಪ್ರತಿ ಗ್ರಾಂ ₹157 ಹಾಗೂ ಕೆಜಿ ₹1,57,000 ರೂ. ಆಗಿದೆ.

    ಇಳಿಕೆಯ ಹಿಂದಿನ ಕಾರಣಗಳು

    ಹಬ್ಬದ ಕಾಲಾವಧಿ ಮುಗಿದ ಬಳಿಕ ಖರೀದಿ ಒತ್ತಡ ಕಡಿಮೆಯಾಗಿರುವುದು ಚಿನ್ನದ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎನ್ನಬಹುದು. ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ತೋರಿಸಿಕೊಂಡಿದ್ದು, ಚೀನಾ ಅಮೆರಿಕಾ ನಡುವಿನ ವ್ಯಾಪಾರ ಉದ್ವಿಗ್ನತೆ ಶಾಂತವಾಗಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ. ಹಲವು ಹೂಡಿಕೆದಾರರು ಇತ್ತೀಚಿನ ಏರಿಕೆಯ ಬಳಿಕ ಲಾಭ ಪಡೆದು ಚಿನ್ನ ಮಾರಾಟ ಮಾಡುತ್ತಿರುವ ಹಿನ್ನೆಲೆ ಕೂಡ ದರ ಇಳಿಕೆಗೆ ಕಾರಣವಾಗಿದೆ.

    ಆರ್ಥಿಕ ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳು ಚಿನ್ನದ ಮಾರುಕಟ್ಟೆ ಬೆಲೆಯಲ್ಲಿ ಇನ್ನೂ ಸ್ವಲ್ಪ ಇಳಿಕೆ ಆಗುವ ಸಂಭವನೀಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೂಡಿಕೆ ಅಥವಾ ಚಿನ್ನಾಭರಣ ಖರೀದಿಸಲು ಬಯಸುವವರಿಗೆ ಇದು ಉತ್ತಮ ಸಮಯವಾಗಬಹುದು.

    ಇದೀಗ ಚಿನ್ನದ ಮಾರುಕಟ್ಟೆ ಸ್ಥಿರತೆಯ ಹಾದಿಯಲ್ಲಿ ಸಾಗುತ್ತಿದ್ದು, ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಉತ್ತಮ ಅವಕಾಶ. ಆದರೆ ಕೇವಲ ತಾತ್ಕಾಲಿಕ ಲಾಭಕ್ಕಾಗಿ ಖರೀದಿ ಮಾಡುವವರಿಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ ದರದ ಅಲೆಮಾಲೆ ಇನ್ನೂ ಸಂಪೂರ್ಣ ನಿಂತಿಲ್ಲ.

    ಹಬ್ಬದ ಬಳಿಕದ ಈ ಇಳಿಕೆ ಚಿನ್ನಾಭರಣ ಪ್ರಿಯರಿಗೆ ಖಂಡಿತವಾಗಿಯೂ ಸಿಹಿ ಸುದ್ದಿ. ಯೋಗ್ಯ ಸಮಯದಲ್ಲಿ ವಿವೇಕದಿಂದ ಖರೀದಿ ಮಾಡಿದರೆ ಇದು ನಿಜಕ್ಕೂ “ಸುವರ್ಣಾವಕಾಶ

  • ಕಡಿಮೆ ಹೂಡಿಕೆ, ಹೆಚ್ಚಿನ ಲಾಭ: ಮನೆಯಲ್ಲೇ ಪ್ರಾರಂಭಿಸಬಹುದಾದ 5 ಸುಲಭ ವ್ಯವಹಾರಗಳು

    ಕಡಿಮೆ ಹೂಡಿಕೆ, ಹೆಚ್ಚಿನ ಲಾಭ: ಮನೆಯಲ್ಲೇ ಪ್ರಾರಂಭಿಸಬಹುದಾದ 5 ಸುಲಭ ವ್ಯವಹಾರಗಳು

    ಇಂದಿನ ಯುವಕರು ಹೆಚ್ಚಿನ ಆದಾಯಕ್ಕಾಗಿ ದೊಡ್ಡ ನಗರಗಳಿಗೆ ಹಾರಿಹೋಗುತ್ತಿದ್ದಾರೆ. ಬೆಂಗಳೂರು, ಮುಂಬೈ ಅಥವಾ ದೆಹಲಿಯಂತಹ ನಗರಗಳಲ್ಲಿ ಲಕ್ಷಗಟ್ಟಲೆ ಸಂಬಳದ ಆಸೆಯಿಂದ ಜನರು ತಮ್ಮ ಊರನ್ನೇ ಬಿಟ್ಟು ಹೊಸ ಜೀವನ ಆರಂಭಿಸುತ್ತಿದ್ದಾರೆ. ಆದರೆ ಮನೆಯಲ್ಲೇ ಕುಳಿತು ಸರಿಯಾದ ಯೋಜನೆಯೊಂದಿಗೆ ವ್ಯವಹಾರ ಪ್ರಾರಂಭಿಸಿದರೆ, ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಹಾಗಾದರೆ, ಮನೆಮಂದಿ ಸುಲಭವಾಗಿ ಪ್ರಾರಂಭಿಸಬಹುದಾದ ಐದು ಲಾಭದಾಯಕ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಈ ವ್ಯವಹಾರಗಳ ಮೂಲಕ ನೀವು ಊರಿನಲ್ಲೇ ಇದ್ದುಕೊಂಡು ಹಣ ಸಂಪಾದನೆ ಮಾಡಬಹುದು.

    1. ಸಾವಯವ ತರಕಾರಿ ಕೃಷಿ:

    ಜನರು ರಾಸಾಯನಿಕ ಮುಕ್ತ, ಆರೋಗ್ಯಕರ ತರಕಾರಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಟೊಮೇಟೋ, ಬೀನ್ಸ್, ಬೆಳ್ಳುಳ್ಳಿ, ಕ್ಯಾರೆಟ್ ಮುಂತಾದ ನೈಸರ್ಗಿಕ ತರಕಾರಿಗಳನ್ನು ಮನೆಯ ಹತ್ತಿರ ಜಮೀನಿನಲ್ಲಿ ಬೆಳಸಿ, ಹತ್ತಿರದ ನಗರ ಮಾರುಕಟ್ಟೆಗೆ ಮಾರಾಟ ಮಾಡಬಹುದು. ಕಡಿಮೆ ವೆಚ್ಚ, ಉತ್ತಮ ಲಾಭ ಮತ್ತು ಆರೋಗ್ಯಕ್ಕೂ ಉಪಯುಕ್ತವಾದ ವ್ಯವಹಾರ ಇದಾಗಿದೆ.

    ಸಲಹೆ:
    ಹವಾಮಾನ ಮತ್ತು ಮಣ್ಣಿನ ಗುಣಮಟ್ಟಕ್ಕೆ ತಕ್ಕ ತರಕಾರಿಗಳನ್ನು ಆಯ್ಕೆಮಾಡಿ.
    ತಾಜಾ ಉತ್ಪನ್ನ ಮಾರಾಟ ಮಾಡುವುದರಿಂದ ಗ್ರಾಹಕರ ನಂಬಿಕೆ ಹೆಚ್ಚುತ್ತದೆ.

    2. ಡೈರಿ ವ್ಯವಹಾರ:

    ಸ್ವಲ್ಪ ಜಮೀನಿದ್ದರೆ ಹಸು ಅಥವಾ ಎಮ್ಮೆ ಸಾಕಿ ಹಾಲಿನ ಉತ್ಪನ್ನಗಳ ವ್ಯವಹಾರ ಆರಂಭಿಸಬಹುದು. ಪ್ರಾರಂಭದಲ್ಲಿ 2–3 ಹಸುಗಳನ್ನು ಸಾಕಿ ಹಾಲು, ಮೊಸರು, ತುಪ್ಪ ಮತ್ತು ಪನ್ನೀರ್ ತಯಾರಿಸಿ ಮಾರಾಟ ಮಾಡಬಹುದು. ನಂತರ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿ, ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಬಹುದು. ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ.

    ಸಲಹೆ:
    ಹಾಲಿನ ಗುಣಮಟ್ಟವನ್ನು ಕಾಪಾಡಿ.
    ಸ್ಥಳೀಯ ಹೋಟೆಲ್‌ಗಳು, ಕ್ಯಾಂಟೀನು, ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಿ.

    3. ಹೂವಿನ ಕೃಷಿ:

    ಹಬ್ಬ, ಮದುವೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಹೂ ಯಾವಾಗಲೂ ಅತ್ಯಗತ್ಯ. ಮನೆಯ ಹತ್ತಿರ ಚೆಂಡು ಹೂ, ಗುಲಾಬಿ, ಮಲ್ಲಿಗೆ ಮುಂತಾದ ಹೂಗಳನ್ನು ಕಡಿಮೆ ಹೂಡಿಕೆಯಲ್ಲಿ ಬೆಳಸಿ ಮಾರಾಟ ಮಾಡಬಹುದು. ಒಂದು ಎಕರೆ ಭೂಮಿಯಲ್ಲಿ ಪ್ರತಿ ಸೀಸನ್ 50,000 ರೂ.ರಿಂದ 1 ಲಕ್ಷ ರೂ.ವರೆಗೆ ಲಾಭ ಸಾಧ್ಯ.

    ಸಲಹೆ:
    ಹೂ ಬೆಳೆಯುವ ಮೊದಲು ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿ.
    ಹೂ ಪ್ಯಾಕೇಜಿಂಗ್ ಆಕರ್ಷಕವಾಗಿರಲಿ, ಹಬ್ಬಗಳ ಸಮಯದಲ್ಲಿ ಹೆಚ್ಚು ಮಾರಾಟ ಸಾಧ್ಯ.

    4. ಕೋಳಿ ಸಾಕಾಣಿಕೆ:

    ಕೋಳಿ ಸಾಕಾಣಿಕೆ ಕಡಿಮೆ ಹೂಡಿಕೆಯಲ್ಲಿಯೇ ಪ್ರಾರಂಭಿಸಬಹುದಾದ ಅತ್ಯುತ್ತಮ ವ್ಯವಹಾರವಾಗಿದೆ. 20–25 ಕೋಳಿಗಳಿಂದ ಆರಂಭಿಸಿ, ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಬಹುದು. ಸರಿಯಾದ ನಿರ್ವಹಣೆಯಿಂದ ಪ್ರತಿ ತಿಂಗಳು ಕನಿಷ್ಠ 20,000 ರೂ.ವರೆಗೆ ಸಂಪಾದನೆ ಸಾಧ್ಯ. ಸರ್ಕಾರದಿಂದ ಕೆಲ ಸಾಲಗಳು ಮತ್ತು ಸಬ್ಸಿಡಿ ಯೋಜನೆಗಳೂ ಇದಕ್ಕೆ ಸಹಾಯ ಮಾಡುತ್ತವೆ.

    ಸಲಹೆ:
    ಕೊಳಿಗಳ ಆರೋಗ್ಯ, ಆಹಾರ ಮತ್ತು ಸ್ವಚ್ಛತೆಯನ್ನು ಗಮನಿಸಿ.
    ಸ್ಥಳೀಯ ಅಂಗಡಿಗಳು ಮತ್ತು ಹೋಟೆಲ್‌ಗಳಿಗೆ ನೇರವಾಗಿ ಮಾರಾಟ ವ್ಯವಸ್ಥೆ ಮಾಡಿ.

    5. ಜೇನುತುಪ್ಪ ಉತ್ಪಾದನೆ:

    ಗ್ರಾಮೀಣ ಪ್ರದೇಶಗಳಲ್ಲಿ ಜೇನುತುಪ್ಪದ ವ್ಯವಹಾರ ಬಹಳ ಲಾಭದಾಯಕ. ಮನೆಯಲ್ಲೇ ಕೆಲವು ಜೇನು ಪೆಟ್ಟಿಗೆಯಿಂದ ಪ್ರಾರಂಭಿಸಿ ನೈಸರ್ಗಿಕ ಜೇನು ಉತ್ಪಾದಿಸಬಹುದು. ನಗರಗಳಲ್ಲಿ ನೈಸರ್ಗಿಕ ಜೇನುಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ, ಸರಿಯಾದ ಮಾರಾಟ ಯೋಜನೆಯೊಂದಿಗೆ ಉತ್ತಮ ಆದಾಯ ಪಡೆಯಬಹುದು.

    ಸಲಹೆ:
    ಪ್ರಾಥಮಿಕ ತರಬೇತಿ ಪಡೆದು, ಜೇನು ಪೆಟ್ಟಿಗೆ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ.

    ಈ ಐದು ವ್ಯವಹಾರಗಳು ಮನೆಮಂದಿ ಸೇರಿ, ಕಡಿಮೆ ಹೂಡಿಕೆ ಮತ್ತು ಹೆಚ್ಚಿನ ಲಾಭದಾಯಕತೆಯೊಂದಿಗೆ ಪ್ರಾರಂಭಿಸಬಹುದಾದ ಉತ್ತಮ ಆಯ್ಕೆಗಳು ಇವಾಗಿವೆ. ಈ ವ್ಯವಹಾರಗಳನ್ನು ಶುರುಮಾಡಲು ಬಹಳ ಮುಖ್ಯವಾಗಿ ಪರಿಶ್ರಮ, ಗುಣಮಟ್ಟ, ಹಾಗೂ ಸರಿಯಾದ ಮಾರ್ಕೆಟಿಂಗ್ ವ್ಯವಸ್ಥೆ ಮುಖ್ಯ.

  • ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿ : ಸಚಿವ ದರ್ಶನಾಪುರ

    ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿ : ಸಚಿವ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

    ನಗರದ ಎಸ್.ಡಿ.ಎನ್ ರೆಸಿಡೆನ್ಸಿ ಯಲ್ಲಿ ಇಂದು ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗ ಗೊಳಿಸುವುದು ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್ ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯವಿದೆ.ಈ ದಿಸೆಯಲ್ಲಿ ರಾಜ್ಯದ ಸಣ್ಣ ಉದ್ದಿಮೆದಾರರನ್ನು ತೊಂದರೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ವಿಶೇಷ ಗಮನ ನೀಡುತ್ತಿದೆ ಎಂದು ಹೇಳಿದರು.

    ಎಮ್ ಎಸ್ ಎಮ್ ಇ (micro and small and medium enterprises) ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಶಿಯಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನಿರ್ಣಯ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

    ಈ ಭಾಗದಲ್ಲಿ ಕೃಷಿಗೆ ಒತ್ತು ನೀಡಲಾಗುತ್ತಿದೆ.ಅದರಂತೆ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಗಮನ ನೀಡಿದಲ್ಲಿ ಕಾರ್ಮಿಕರ ಒಲಸೆ ಸಮಸ್ಯೆ ನಿವಾರಣೆಯಾಗಲಿದೆ.ಈ ದಿಸೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಈ ಭಾಗದ ಮುಂಡರಗಿಯಲ್ಲಿ ಕನಿಷ್ಠ ಐವತ್ತುರಿಂದ ನೂರು ಎಕರೆ ಜಮೀನಿನಲ್ಲಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ,ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ.ಅದರಂತೆ ಕಲ್ಯಾಣ ಕರ್ನಾಟಕ ಭಾಗದ ಕಲ್ಬುರ್ಗಿ, ಜೇವರ್ಗಿ,ಯಾದಗಿರಿ ಭಾಗಗಳಲ್ಲಿ ಕಡಿಮೆ ವೆಚ್ಚದ ಭೂ ನೀಡುವ ಉದ್ದೇಶ ಹೊಂದಲಾಗಿದ್ದು, ಶಹಾಪುರದಲ್ಲಿ 50 ಎಕರೆ ಜಮೀನು ಸಹ ಗುರುತಿಸಲಾಗಿದೆ ಎಂದು ಹೇಳಿದರು.

    ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹಿಸುತ್ತಿದ್ದು,ಕಾಸಿಯಾ ಸೇರಿದಂತೆ ವಿವಿಧ ಕೈಗಾರಿಕಾ ಸಂಸ್ಥೆಗಳ ಸಮಸ್ಯೆಗಳನ್ನು ಸರ್ಕಾರದ ಇತಿಮಿತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.ಉದ್ದಿಮೆದಾರರಿಗೆ ರಫ್ತು ಕುರಿತು ತರಬೇತಿ ಸಹ ನೀಡಿ ಪ್ರೋತ್ಸಾಹಿಸಲಾಗುತ್ತಿದೆ
    ಎಂದು ಹೇಳಿದರು.

    ಜಿಲ್ಲಾಧಿಕಾರಿ  ಹರ್ಷಲ್ ಭೋಯರ್ ಅವರು, ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗಾವಕಾಶಗಳ ಹೆಚ್ಚಿನ ಸೃಷ್ಟಿಗೆ ಸಣ್ಣ ಕೈಗಾರಿಕೆಗಳು ಬಹುಮುಖ್ಯ.ಉದ್ದಿಮೆದಾರರು ಆಧಾರ್ ಸ್ತಂಭವಾಗಿದ್ದು, ಜಿಲ್ಲಾಡಳಿತ ವತಿಯಿಂದ ಅವಶ್ಯಕ ನೆರವು ಒದಗಿಸಲಾಗುವುದು ಎಂದು ಹೇಳಿದರು.

    ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್ ಮಾತನಾಡಿದರು.

    ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶ್ ಕುಮಾರ್, ಕಾರ್ಯದರ್ಶಿ ಗುರು ಮಣಿಕಂಠ,ವಿಟಿಪಿಸಿ ಸಹಾಯಕ ನಿರ್ದೇಶಕ ಜಾಫರ್ ಅನ್ಸಾರಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಕುಲಶೇಖರನ್ ಉಪಸ್ಥಿತರಿದ್ದರು .ರಿಪೋರ್ಟ ಆನ್ ಕರ್ನಾಟಕ ಎಕ್ಸ್ ಪೋರ್ಟ್ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರಾದರ್ ಸ್ವಾಗತಿಸಿದರು.