Author: Satyakam NewsDesk

  • ನೇರ ನುಡಿ ಧೀರ ನಡೆಯ ರಾಜಕಾರಣಿ ಮುದ್ನಾಳ

    ನೇರ ನುಡಿ ಧೀರ ನಡೆಯ ರಾಜಕಾರಣಿ ಮುದ್ನಾಳ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಾಜಿ ಶಾಸಕರು ಹಾಗೂ ಜನಪ್ರೀಯ ನಾಯಕರಾದ ದಿವಂಗತ ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಇರದೇ ಪ್ರಬಲ ಶಕ್ತಿ ಆಗಿದ್ದರು ಎಂದು ತಾಲೂಕು ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಹೇಳಿದರು.

    ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಮುದ್ನಾಳ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ದಿ ವೆಂಕಟರೆಡ್ಡಿ ಗೌಡ ಮುದ್ನಾಳ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜಿಗಾಗಿ ಮತ್ತು ಜಿಲ್ಲಾ ಕೇಂದ್ರವಾಗಲು ಅವರು ಮಾಡಿದ ಹೋರಾಟ ಮರೆಯಲಾಗದು ಅವರ ರಾಜಕೀಯ ಸಾಮಾಜಿಕ ಶೈಕ್ಷಣಿಕ ಸಾಹಿತಿಕ ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಗಾದವಾದದು ಎಂದರು.

    ಹಿರಿಯರಾದ ಸಿ ಎಮ್ ಪಟ್ಟೆದಾರ ಮಾತನಾಡಿ ನೇರ ನುಡಿ ಧೀರ ನಡೆ ಅವರ ಸರಳ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲಿ ಅಚ್ಚಳೆಯದೆ ಉಳಿದಿದೆ ಯಾದಗಿರಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಜಾತ್ಯತೀತ ವ್ಯಕ್ತಿಯಾಗಿ ಬಾಳಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

    ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಧ್ಯಾಕ್ಷರಾದ ಬಸವರಾಜ ಮೋಟ್ನಳ್ಳಿ. ಕಸಾಪ ಗೌರವ ಕಾರ್ಯದರ್ಶಿಯಾದ ಡಾ. ಭೀಮರಾಯ ಲಿಂಗೇರಿ. ಡಾ. ಎಸ್ ಎಸ್ ನಾಯಕ ಮಾತನಾಡಿ ನುಡಿ ನಮನ ಸಲ್ಲಿಸಿದರು.

    ಈ ಕಾರ್ಯಕ್ರಮದಲ್ಲಿ ಸೋಮಶೇಖರ್ ಮಣ್ಣೂರ. ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಚನ್ನಪ್ಪ ಸಾಹುಕಾರ ಠಾಣಗುಂದಿ. ಚಂದ್ರಶೇಖರ ಅರಳಿ. ಮಹೇಶ ಹಿರೇಮಠ. ವೆಂಕಟೇಶ ಕಲಕಂಬ. ಮಹೇಶ್ ಪಾಟೀಲ. ಸುಬಾಶರೆಡ್ಡಿ. ನೀಲಕಂಠ ಶಿಲವಂತ. ಡಾ. ರವಿಂದ್ರ ಹೊಸಮನಿ. ವಿಶ್ವನಾಥ ಕಾಜಗಾರ. ರಾಮಚಂದ್ರ ದಿಲ್ಲಿಕರ್. ಬಸವಂತ್ರಾಯಗೌಡ ಮಾಲಿ ಪಾಟೀಲ. ದೇವಿಂದ್ರರೆಡ್ಡಿ ಯಡ್ಡಳ್ಳಿ. ನಾಗೇಂದ್ರ ಜಾಜಿ. ಶರಣು ಇಡ್ಲೂರ. ಮಲ್ಲು ಹಳಕಟ್ಟಿ. ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಮುದ್ನಾಳ ಅಭಿಮಾನಿಗಳು ಪಾಲ್ಗೊಂಡರು.

  • ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:

    ಶಹಾಪೂರ ತಾಲೂಕು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಡಂಗೇರಾ)ಬಿ) ಗ್ರಾಮದ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ತನುಶ್ರೀ ತಂದೆ ಕಾಂತಿಲಾಲ್ 100 ಮೀಟರ್ ಓಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.

    ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿನಿ ಕು.ತನುಶ್ರೀ ಅವರು ಶಾಲೆಗೆ ಕೀರ್ತಿ ತಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಹಾಗೂ ಕ್ರೀಡಾಪಟುಗಳಿಗೆ ಶಾಲೆಯ ಪ್ರಾಂಶುಪಾಲ ನಾಗರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ರಾಠೋಡ್ ಹಾಗೂ ಶಾಲೆಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿಯೂ ವಿಜೇತರಾಗಲಿ ಎಂದು ಹಾರೈಸಿದ್ದಾರೆ.

  • ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಹಾಪೂರ ತಾಲೂಕು ಪ್ರವೇಶ ಮಾಡದಂತೆ ನಿರ್ಬಂಧ

    ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಹಾಪೂರ ತಾಲೂಕು ಪ್ರವೇಶ ಮಾಡದಂತೆ ನಿರ್ಬಂಧ

    ಸತ್ಯಕಾಮ ವಾರ್ತೆ ಯಾದಗಿರಿ :

    ಇಂದಿನಿಂದ ಎರಡು ದಿನಗಳ(ಸೆ.22)ವರೆಗೆ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಹಿಂದೂಪರ ಭಾಷಣಕಾರ ರವರನ್ನು ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನಾದ್ಯಂತ ಪ್ರವೇಶ ಮಾಡದಂತೆ ನಿರ್ಬಂಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹೊರಡಿಸಿದ್ದಾರೆ.

    2024ರ ಸೆಪ್ಟೆಂಬರ್ 20 ರಂದು ರಾತ್ರಿ 12 ಗಂಟೆಯಿAದ 2024ರ ಸೆಪ್ಟೆಂಬರ್ 22ರ ಮಧ್ಯಾಹ್ನ 2 ಗಂಟೆಯ ವರೆಗೆ ಶ್ರೀ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಇವರಿಗೆ ಶಹಾಪೂರ ತಾಲ್ಲೂಕು ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ ಸೆಕ್ಷನ್ 133, 143, 144ಎ ರನ್ವಯ ನಿರ್ಬಂಧ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮೋಟನಳ್ಳಿ ವಸತಿ ನಿಲಯದ ವರದಿ ಬಳಿಕ ಮಕ್ಕಳ ಆಯೋಗ ಭೇಟಿ 

    ಮೋಟನಳ್ಳಿ ವಸತಿ ನಿಲಯದ ವರದಿ ಬಳಿಕ ಮಕ್ಕಳ ಆಯೋಗ ಭೇಟಿ 

    ಸತ್ಯಕಾಮ ವಾರ್ತೆ ಯಾದಗಿರಿ:

    ಮೋಟನಳ್ಳಿ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಸತ್ಯಕಾಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿ ಪ್ರೇಮ್ ಮೂರ್ತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಸೆ.17(ಸೋಮವಾರ) ರಂದು “ಮೋಟನಳ್ಳಿ ವಸತಿ ಶಾಲೆಯ ಲ್ಲಿ ಸಾಲು ಸಾಲು ಸಮಸ್ಯೆಗಳು” ಕಣ್ಣಿದ್ದೂ ಕುರುಡರಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಂಬ ಶೀರ್ಷಿಕೆಯಡಿ ಸತ್ಯಕಾಮ ಪ್ರಾದೇಶಿಕ ದಿನಪತ್ರಿಕೆ ಸುದ್ದಿಯನ್ನು ಪ್ರಕಟಿಸಿತ್ತು, ಇದರ ಆಧಾರದ ಮೇಲೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಅಲ್ಲಿನ ವಿದ್ಯಾರ್ಥಿಗಳ ಸಮುಖದಲ್ಲಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು.

    ಈ ವೇಳೆ ವಿದ್ಯಾರ್ಥಿಗಳು ಪ್ರಮುಖವಾಗಿ ಶುದ್ಧ ಕುಡಿಯುವ ನೀರು, ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ ಬರುವ ಕಿಟ್ ಸಿಗುತ್ತಿಲ್ಲ, ಬಯಲು ಶೌಚಯಲವೇ ಗತಿಯ ಬಗ್ಗೆ ಬಂದಂತಹ ಅಧಿಕಾರಿಗಳಿಗೆ ತಮ್ಮ ವಸತಿ ನಿಲಯದ ಸಮಸ್ಯೆಗಳ ಬಗ್ಗೆ ವಿವರಿಸಿದರು.

    ಈ ಸಂದರ್ಭದಲ್ಲಿ ಆಪ್ತ ಸಮಾಲೋಚನಾ ಆಧಿಕಾರಿ ದೇವಪ್ಪ, ಪ್ರಿನ್ಸಿಪಾಲ್ ಸಿದ್ದಪ್ಪ, ವಾರ್ಡನ್ ಆದಯ್ಯ ಹಿರೇಮಠ್, ಶಿಕ್ಷಕ ಮೌನೇಶ್ ಮೊಟನಹಳ್ಳಿ, ಸುನೀಲ್ ಕುಮಾರ್ ಸೇರಿದಂತೆ ಇತರರು ಇದ್ದರು.

     

  • ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಅಭಿಪ್ರಾಯ ಪಡೆಯಲು ಸೆ.22 ರಂದು ಸಭೆ

    ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಅಭಿಪ್ರಾಯ ಪಡೆಯಲು ಸೆ.22 ರಂದು ಸಭೆ

    ಭಕ್ತಾದಿಗಳು, ಸಾರ್ವಜನಿಕರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಮನವ

    ಸತ್ಯಕಾಮ ವಾರ್ತೆ ಯಾದಗಿರಿ:

    ಗೌರವಾನ್ವಿತ ಉಚ್ಚ ನ್ಯಾಯಲಯದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 22 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಏರ್ಪಡಿಸಿದ್ದು, ಆ ಗ್ರಾಮದ ಭಕ್ತಾದಿಗಳು, ಸಾರ್ವಜನಿಕರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಮನವಿ ಮಾಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪಿಟಿಷನ್ ಸಂಖ್ಯೆ 202656/2014 ಕ್ಕೆ ಸಂಬಂಧಿಸಿದಂತೆ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತು ಯಾದಗಿರಿ ಜಿಲ್ಲಾಧಿಕಾರಿಯ ಕಚೇರಿಯ ಸಭಾಂಗಣದಲ್ಲಿ ಸಭೆ ಜರುಗಿಸಿ ಅಲ್ಲಿನ ಗ್ರಾಮದ, ಭಕ್ತಾದಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ವರದಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತಾರೆ.

    ಸದರಿ ಮಠದ ಆಸ್ತಿ ನಿರ್ವಹಣೆಯ ಬಗ್ಗೆ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು, ಮಠದ ಪೀಠಾಧಿಪತಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಹಾಜರಾಗಲು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಿಸ್ವಾರ್ಥತೆಯ ಸಂಕೇತವೇ ತ್ಯಾಗ

    ನಿಸ್ವಾರ್ಥತೆಯ ಸಂಕೇತವೇ ತ್ಯಾಗ

    ತ್ಯಾಗ ಎಂಬ ಪದದ ಅರ್ಥವೇ ಅಸಾಧಾರಣವಾದದ್ದು. ತ್ಯಾಗ ಎಂಬ ಪದ ಆಳವಾದ, ಅರ್ಥವನ್ನು ಹೊಂದಿದೆ. ಮೌಲ್ಯಯುತವಾದ ಬದುಕನ್ನು ರೂಪಿಸಿಕೊಳ್ಳುವ ಮುಖ್ಯ ಭಾಗವೇ ತ್ಯಾಗ ಎನ್ನಬಹುದು. ಇದು ನಿಸ್ವಾರ್ಥತೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ತ್ಯಾಗವೂ ತನ್ನ ಹಿತಾಶಕ್ತಿಯ ಜೊತೆಗೆ ಇತರರ ಅಭಿವೃದ್ಧಿ ಅಥವಾ ಅವರ ಕಲ್ಯಾಣವನ್ನು ಒತ್ತಿ ಹೇಳುತ್ತದೆ. ಮಾನವೀಯತೆಯಿಂದ ಕೂಡಿದ ಸಮಾಜದ ಒಳಿತಿಗಾಗಿ ಅಹಂಕಾರ ಮತ್ತು ಸ್ವ-ಕೇಂದ್ರಿತ ಬಯಕೆಗಳನ್ನು ತ್ಯಜಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ತ್ಯಾಗ ಮಾಡಲು ಮೊದಲು ಮನಸ್ಸಿರಬೇಕು, ನಿಸ್ವಾರ್ಥತೆಯಿಂದ ಕೂಡಿರಬೇಕು, ಸಾಮಾಜಿಕ ಬದ್ಧತೆ, ಕಳಕಳಿ ಹಾಗೂ ಸಾಮಾಜಿಕ ಮನೋಭಾವನೆ ಉಳ್ಳವರಾಗಿರಬೇಕು. ಇಂತಹವರು ಮಾತ್ರ ತನ್ನ ದುರಾಸೆ, ಅತಿಯಾದ ಬಯಕೆಯಿಂದ ಕೂಡಿದ ಸ್ವಾರ್ಥವನ್ನು ತ್ಯಜಿಸಿ ತ್ಯಾಗದ ಮನೋಬಾವನೆಯನ್ನು ಬೆಳಸಿಕೊಳ್ಳುತ್ತಾರೆ. ಉದಾರತೆಯು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ತ್ಯಾಗವು ಮಹದಾನಂದ ಸಾರ್ಥಕತೆಯ ತೃಪ್ತಿಯನ್ನು ತರುತ್ತದೆ. ತ್ಯಾಗದ ಅರಿವು ಬೆರಳೆಣಿಕೆಯಷ್ಟು ಜನರಲ್ಲಿರುತ್ತದೆ. ಅರಿವಿನ ಕೊರತೆಯಿಂದ ಜನರನ್ನು ಸ್ವಾರ್ಥದೆಡೆಗೆ ಕೊಂಡೊಯ್ಯುತ್ತದೆ.

    ತ್ಯಾಗ ಎಂಬ ಪದವನ್ನು ಬಳಸಲು, ತಿಳಿಯಲು, ಉಪಯೋಗಿಸಲು ಜೀರ್ಣಿಸಿಕೊಳ್ಳಲು ಹಾಗೂ ಉಪದೇಶಿಸಲು ಎಲ್ಲರಿಂದಲೂ ಸಾಧ್ಯವಿಲ್ಲ .ಮನುಷ್ಯನ ಗುಣವೇ ಸ್ವಾರ್ಥತೆಯಿಂದ ಕೂಡಿದೆ ನಿಸ್ವಾರ್ಥ ಸೇವೆಯ ಪರ್ಯಾಯ ಪದವೇ ತ್ಯಾಗವೆಂದು ಹೇಳಬಹುದು. ಇಡೀ ಜಗತ್ತಿನಲ್ಲಿ ಸಮಾಜಕ್ಕಾಗಿ ತ್ಯಾಗ ಮಾಡಿರುವವರು ಬಹಳ ವಿರಳ ಹಾಗೂ ಬೆರಳೆಣಿಕೆಯಷ್ಟು ಮಹನೀಯರು ಮಾತ್ರ ನಮಗೆ ಸಿಗುತ್ತಾರೆ. ತ್ಯಾಗ ಎಂಬ ಶಬ್ದಕ್ಕೆ ಅಥವಾ ಪದಕ್ಕೆ ಅರ್ಥ ಕೊಟ್ಟಿರುವವರೆಂದರೆ ಮೊದಲಿಗೆ ತಾಯಿ, ತಾಯಿಗೆ ಸರಿಸಾಟಿಯೇ ತ್ಯಾಗ. ಈ ವಿಶ್ವದ ತ್ಯಾಗದ ಪಿತಾಮಹರೆಂದರೆ ಅಮ್ಮ ಎಂದು ವ್ಯಾಖ್ಯಾನಿಸಬಹುದು. ಅಮ್ಮ ಎಂಬ ಪದದ ಅರ್ಥವೇ ತ್ಯಾಗ, ತ್ಯಾಗ ಎಂಬ ಪದದ ಅರ್ಥವೇ ಅಮ್ಮ. ಅಮ್ಮ ಎನ್ನುವುದು ಒಂದು ಶಕ್ತಿ, ತಾನು ಹಸಿವಿನಲ್ಲಿದ್ದರೂ ತನ್ನ ಮಕ್ಕಳಿಗೆ ಹಸಿವಾಗದಂತೆ ನೋಡುವ, ತಾನು ಎಷ್ಟೇ ಕಷ್ಟ ಅನುಭವಿಸಿದರೂ, ಮಕ್ಕಳು ಸುಖದಿಂದ ಇರಲಿ ಎಂದು ಆಶಿಸುತ್ತಾ, ಆಕೆ ಅಕ್ಷರ ಕಲಿಯದಿದ್ದರೂ ತನ್ನ ಮಗು ವಿದ್ಯಾಭ್ಯಾಸದಿಂದ ವಂಚಿತನಾಗಬಾರದೆAದು ಹಗಲು ರಾತ್ರಿ ಎನ್ನದೆ ಸಮಯದ ಪರಿವೇ ಇಲ್ಲದೇ ಮನೆಯ ಒಳಗೆ ಮತ್ತು ಹೊರಗೆ ತನ್ನ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದೆಂದು ದುಡಿಮೆ ಮಾಡಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಮಕ್ಕಳ ಹಾರೈಕೆಯಲ್ಲಿ ಬದುಕುತ್ತಾಳೆ. ಇಡೀ ಜೀವವನ್ನು ತನ್ನ ಮಕ್ಕಳಿಗಾಗಿ, ಸಮಾಜಕ್ಕಾಗಿ ಒಳಿತನ್ನು ಬಯಸುವ ಈ ಪ್ರಪಂಚದ ಮೊದಲಿನ ತ್ಯಾಗಮಯಿ ಅಮ್ಮ ಎನ್ನುವುದು ನೂರಕ್ಕೆ ನೂರು ಸತ್ಯ. ಹಾಗೆಯೇ ತಂದೆಯೂ ಕೂಡ ತನ್ನ ಕುಟುಂಬ, ಮಕ್ಕಳು, ಸಮಾಜಕ್ಕಾಗಿ ಹಗಲಿರುಳೆನ್ನದೆ ದುಡಿಯುವ ತ್ಯಾಗಮಯಿ ತಂದೆ.

    ಬುದ್ಧನ ಪ್ರಕಾರ ದುಃಖಕ್ಕೆ ಕಾರಣವಾಗುವ ಆಸೆಯನ್ನು ತ್ಯಜಿಸುವುದು ಒಂದು ರೀತಿಯ ತ್ಯಾಗ ಎಂದಿದ್ದಾರೆ. ಸ್ವಾರ್ಥತೆಯನ್ನು ತ್ಯಜಿಸಬೇಕೆಂದರೆ ತ್ಯಾಗ ಮಾಡಲೇಬೇಕು. ಸ್ವಾರ್ಥ ಮತ್ತು ತ್ಯಾಗ ಈ ಎರಡು ತದ್ವಿರುದ್ಧವಾದವುಗಳು. ಆದ್ದರಿಂದಲೇ ಬುದ್ಧರು ತನ್ನ ಆಸೆ, ಆಕಾಂಕ್ಷೆ, ಬಯಕೆಗಳನ್ನು, ಅರಮನೆಯ ಸಿರಿ ಸಂಪತ್ತನ್ನು ತ್ಯಾಗ ಮಾಡಿ, ಜಗತ್ತಿಗೋಸ್ಕರ ಇಡೀ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದರು. ಆದ್ದರಿಂದಲೇ ಬೌದ್ಧಧಮ್ಮ ಸಮಾಜದ ಒಳಿತಿಗಾಗಿ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ಎರಡನೆಯ ಸತ್ಯ ಹಾಗೂ ತ್ಯಾಗದ ಸಂಕೇತವಾಗಿದೆ.

    ಬಸವಣ್ಣರವರ ಪ್ರಕಾರ ತ್ಯಾಗದ ಮೇಲಿನ ದೃಷ್ಟಿಕೋನವು ನಿಸ್ವಾರ್ಥತೆ ಮತ್ತು ಸೇವೆಯ ಕಲ್ಪನೆಯಲ್ಲಿ ಬೇರೂರಿದೆ ಎಂದಿದ್ದಾರೆ. ಅವರ ಸಾಮಾಜಿಕ ಪರಿಕಲ್ಪನೆ ತ್ಯಾಗದಿಂದ ಕೂಡಿದೆ. ಅವರಲ್ಲಿದ್ದ ಕರುಣೆ, ಪ್ರೀತಿ, ವಾತ್ಸಲ್ಯ, ಮಮತೆ, ಮನವೀಯತೆ, ಸಾಮಾಜಿಕ ಕÀಳಕಳಿ ತನ್ನ ಜೀವನದ ಗುರಿಯಾದ್ದರಿಂದ ಇದನ್ನು ಸಾಧಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಸಾಮಾಜಿಕ ಕ್ರಾಂತಿಪುರುಷ ಎನಿಸಿ ಕೊಂಡಿದ್ದಾರೆ.

    “ಪ್ರಬುದ್ಧ ಭಾರತದ” ನಿರ್ಮಾಣಕ್ಕಾಗಿ “ಬಹುಜನಹಿತಾಯ ಬಹುಜನಸುಖಾಯ” ಎಂಬ ಸಿದ್ಧಾಂತದಡಿ ಇಡೀ ಸಮಾಜಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಮಹಾ ದಾರ್ಶನಿಕ, ಜ್ಞಾನದಶಿಖರ, ಮಾನವತಾವಾದಿ, ಸಮಾಜಸುಧಾರಕ, ಶಿಕ್ಷಣತಜ್ಞ, ಆರ್ಥಿಕತಜ್ಞ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬುದ್ಧರ ತತ್ವಸಿದ್ಧಾಂತವನ್ನು ಜಾರಿ ಮಾಡುವ ಸಲುವಾಗಿ ತನ್ನ ಜೀವನದ ಆಸೆ, ಆಕಾಂಕ್ಷೆ, ಬಯಕೆ, ವೈಯಕ್ತಿಕ ಸುಖ ಸಂತೋಷ ಎಲ್ಲವನ್ನೂ ಸಮಾಜಕ್ಕಾಗಿ ಧಾರೆಯೆರೆದ, ತ್ಯಾಗಮಯಿ ಎಂದರೆ ತಪ್ಪಾಗುವುದಿಲ್ಲ. “ಇನ್ನೊಬ್ಬರನ್ನು ಸೋಲಿಸುವುದು ಜೀವನವಲ್ಲ, ಅವರನ್ನು ಗೆಲ್ಲಿಸುವುದೇ ಜೀವನ”, ನೀನು ನಿನಗಾಗಿ ಜೀವನ ಮಾಡಬೇಡ,ಇತರರಿಗಾಗಿ ಜೀವನ ಮಾಡು. ಜೀವನ ಸಾರ್ಥಕವಾಗುವುದು ನಾವು ಎಷ್ಟು ಸುಖ, ಸಂತೋಷದಿAದ ಇದ್ದೇವೆ ಎಂಬುದರಿAದಲ್ಲ. ನಿಮ್ಮಿಂದಾಗಿ ಎಷ್ಟು ಜನ ಸುಖ, ಶಾಂತಿ ಸಂತಸದಿAದ ಇದ್ದಾರೆ ಎಂಬುದು ಮುಖ್ಯ. ಹಾಗೆಯೇ ಮತ್ತೊಬ್ಬರ ಸಂತೋಷವನ್ನೇ ಬಯಸುವ ಮನಸ್ಸು…. ತನ್ನಲ್ಲಿರುವ ನೋವುಗಳನ್ನು ಎಂದಿಗೂ ಲೆಕ್ಕ ಹಾಕುವುದಿಲ್ಲ ಎಂಬ ಬಾಬಾಸಾಹೇಬರ ತ್ಯಾಗದ ಮನೋಭಾವನೆಯಿಂದಲೇ ನಮಗೆ ಸಂವಿಧಾನ ದೊರಕಿ ಶೋಷಿತಸಮುದಾಯಗಳಿಗೆ ಸಮಾನತೆಯ ಹಕ್ಕು, ಅಧಿಕಾರ ಸಿಕ್ಕಂತಾಗಿದೆ.

    ದೇಶಕ್ಕಾಗಿ ತನ್ನ ಸಂಸಾರ, ಬಂಧು, ಬಳಗ, ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿಯರೆಲ್ಲರನ್ನೂ ಬಿಟ್ಟು, ಪ್ರಾಣದ ಹಂಗಿಲ್ಲದೆ ದೇಶದರಕ್ಷಣೆಯೇ ನನ್ನ ಗುರಿ ಎಂಬ ಮನಸ್ಸಿನಿಂದ ರಾಷ್ಟçದ ರಕ್ಷಣೆ, ದೇಶದ ಹಿತ, ಕಾಯುವುದೇ ಸೈನಿಕರ ಆದ್ಯ ಕರ್ತವ್ಯ ಎಂದು ತಿಳಿದು ದೇಶಕ್ಕಾಗಿ ಪ್ರಾಣತೆತ್ತುತ್ತಾರೆ. ಹಾಗೆ ನೋಡಿದರೆ ಇಡೀ ಜಗತ್ತಲ್ಲಿ ತಮ್ಮ ದೇಶಕ್ಕೋಸ್ಕರ ದೇಶದ ಉಳಿವಿಗಾಗಿ ಕೋಟಿ ಕೋಟಿ ಸೈನಿಕರು, ದೇಶಾಭಿಮಾನಿಗಳು ಶತೃಗಳ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ದೇಶದ ಹಿತವನ್ನು ಕಾಯ್ದಿದ್ದಾರೆ, ಅವರ ತ್ಯಾಗ ಮತ್ತು ಬಲಿದಾನದಿಂದ ದೇಶದ ರಕ್ಷಣೆಯಾಗುತ್ತಿದೆ, ಇದುವೇ ನಿಜವಾದ ತ್ಯಾಗ. ಇವರ ತ್ಯಾಗದ ಗುಣವೇ ಸಮಾಜಕ್ಕೆ ಮಾದರಿಯಾಗಿದೆ.

    ಗಾಂಧೀಜಿಯವರ ತ್ಯಾಗ, ನಿಸ್ವಾರ್ಥತೆಯಿಂದ ಹಗಲು ಇರುಳೆನ್ನದೆ ಬ್ರಿಟೀಷರ ವಿರುದ್ಧ ಹೋರಾಡುವ ಮೂಲಕ ಮಾತೃಭೂಮಿಗಾಗಿ ತನ್ನ ಪ್ರಾಣದ ಹಂಗನ್ನು ತೊರೆದು, ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ. ಇದಕ್ಕಾಗಿಯೇ ಗಾಂಧೀಜಿಯವರನ್ನು ರಾಷ್ಟçಪಿತ ಎಂದು ಕರೆಯಲಾಗುತ್ತದೆ. ಗಾಂಧೀಜಿಯವರ ಆದರ್ಶಗಳು, ಅಹಿಂಸೆ ಮತ್ತು ಸತ್ಯದ ಮೂಲಕ ದೇಶದ ಸ್ವಾತಂತ್ರö್ಯವನ್ನು ಗಳಿಸುವುದಾಗಿತ್ತು. ಅವರ ತ್ಯಾಗ, ನಿಸ್ವಾರ್ಥ ಸೇವೆಯಿಂದಾಗಿ ಈ ದೇಶ ಪ್ರಗತಿಗೆ ಸಾಕ್ಷಿಯಾಗಿದೆ. ಮಾಗಡಿಯ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಎಂದೇ ಹೆಸರಾಗಿರುವ ಇವರ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಇವರ ಸಾಮಾಜಿಕ ಕಳಕಳಿ, ಬದ್ಧತೆ, ಮಾನವೀಯ ಸಂಬAಧ, ಪರಿಸರÀದ ಮೇಲಿರುವ ಪ್ರೀತಿಯಿಂದ ತಿಮ್ಮಕ್ಕರ ಮನೆಯ ರಸ್ತೆಯ ಇಕ್ಕೆಲುಗಳಲ್ಲಿ ಸಸಿಗಳನ್ನು ನೆಟ್ಟಿ, ಬೆಳೆಸಿ, ಗಾಳಿ, ನೆರಳು, ಪಕ್ಷಿಗಳಿಗೆ ಆಹಾರ ತಂಪಾದ ವಾತಾವರಣವನ್ನು ನೀಡುವಂತೆ ಮಾಡಿದ ಇವರ ತ್ಯಾಗದ ಗುಣಕ್ಕೆ ನಾವು ತಲೆಬಾಗಲೇಬೇಕು.
    ಭಾರತದ ಕ್ಷಿಪಣಿ ಮನುಷ್ಯ ಎಂದೇ ಕರೆಯಲ್ಪಡುವ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ತ್ಯಾಗ ಮತ್ತು ಸೇವಾ ಮನೋಭಾವನೆ, ಮಾದರಿ ಜೀವನದ ಮೂಲಕ ರಾಷ್ಟçದ ಆತ್ಮ ಸಾಕ್ಷಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದರು. ವೈಜ್ಞಾನಿಕ ಸಾಧನೆಯ ಜೊತೆಗೆ ಸಾಮಾಜಿಕ ಬದ್ಧತೆ, ನಮ್ರತೆ, ಸಮಗ್ರತೆ ಮತ್ತು ನಿಸ್ವಾರ್ಥತೆಯಿಂದ ಸೇವೆ ಮಾಡಿದ್ದಾರೆ. ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆ, ಬಯಕೆಗಳನ್ನು ಬದಿಗೊತ್ತಿ, ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟçಕ್ಕೆ ಸೇವೆ ಸಲ್ಲಿಸುವ ತಮ್ಮ ಬದ್ಧತೆಯಲ್ಲಿ ಅಚಲರಾಗಿದ್ದರು. ಕಲಾಂ ಅವರ ಜೀವನ ಮತ್ತು ಪರಂಪರೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಅವರ ತ್ಯಾಗ, ಪರಿಶ್ರಮ ಮತ್ತು ಸೇವೆಯ ಶಕ್ತಿಯನ್ನು ನಮಗೆ ನೆನಪಿಸುತ್ತದೆ. ಇಂತಹ ಮಹಾತ್ಯಾಗಿಯ ಗುಣ, ವ್ಯಕ್ತಿತ್ವ, ಸಾಧನೆ ನಮಗೆ ಆದರ್ಶವಾಗಿದೆ.

    ಮದರ್ ತೆರೇಸಾ ರವರು ನೊಂದ ಜೀವಿಗಳ ಆಶಾಕಿರಣ. ಅವರ ನಡೆ, ನುಡಿ, ಎಲ್ಲಾ ಕಾಲಕ್ಕೂ ದಾರಿದೀಪ. ದಯೆ, ಕರುಣೆಗಳಂತಹ ಮಾನವೀಯ ಗುಣಗಳನ್ನು ಇಟ್ಟುಕೊಂಡು ಲಕ್ಷಾಂತರ ನಿರಾಶ್ರಿತರಿಗೆ, ಬಡವರಿಗೆ, ವೃದ್ಧರಿಗೆ, ಶಿಕ್ಷಣ ವಂಚಿತರಿಗಾಗಿ, ಜೀವನವನ್ನೇ ಮುಡುಪಾಗಿಟ್ಟ ಮಹಾನ್ ತ್ಯಾಗಿ ಮದರ್ ತೆರೇಸಾ ದುರ್ಬಲರ ಸೇವೆಯಲ್ಲಿ ಹಗಲು ರಾತ್ರಿ ಎನ್ನದೇ ಇವರ ಸಂತೋಷಕ್ಕಾಗಿ, ಮುಂದಿನ ಅವರ ಭವಿಷ್ಯಕ್ಕಾಗಿ, ಜೀವನವನ್ನು ತ್ಯಾಗಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾತ್ಯಾಗಿ ತೆರೆಸಾರವರು. ಇಂತಹ ತೇರೆಸಾರವರು ಮತ್ತೇ, ಮತ್ತೇ ಹುಟ್ಟಿಬರಬೇಕೆಂಬುದೇ ನಮ್ಮ ಬಯಕೆ.
    ಇಂದಿನ ಸಮಾಜದಲ್ಲಿ ಮನುಷ್ಯನಿಗೆ ಶರೀರದಲ್ಲಿ ಇರಬೇಕಾದ ಎಲ್ಲಾ ಅಂಗಾAಗಗಳು ಇದ್ದರೂ ಸೋಮಾರಿತನದಿಂದ ಹತಾಶೆ, ಜಿಗುಪ್ಸೆ, ನಿರುತ್ಸಾಹ, ಉದಾಸೀನ, ತಾತ್ಸಾರದ ಮನೋಬಾವನೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳದಿರುವವರನ್ನು ನಾವು ಕಾಣುತ್ತೇವೆ. ಇಂತಹ ಸಂಧಿಗ್ದತೆಯಲ್ಲಿ ಕೇರಳದ ಕೆ.ವಿ ರಾಬಿಯಾ ರವರು ಪೋಲಿಯೋದಿಂದ ತನ್ನ ಎರಡು ಕಾಲುಗಳ ಸ್ವಾಧೀನ ಇಲ್ಲದಿದ್ದರೂ ವ್ಹೀಲ್ ಛೇರ್‌ನ ಸಹಾಯದಿಂದಲೇ ಅವರ ಮನೆಯ ಸುತ್ತಾಮುತ್ತ ಇರುವ ಎಲ್ಲಾ ವಯೋಮಾನದ ಅನಕ್ಷರಸ್ಥರನ್ನು ಒಗ್ಗೂಡಿಸಿಕೊಂಡು ಅವರಿಗೆ ಅಕ್ಷರ ಬಿತ್ತಿ ಬೆಳೆಯಲು ನಾಂದಿ ಹಾಡಿದರು. ಕೇರಳ ರಾಜ್ಯದ ಒಂದು ಜಿಲ್ಲೆಯನ್ನೇ ಅಕ್ಷರಸ್ಥರನ್ನಾಗಿ ಮಾಡಿರುವ ಇವರ ಸಾಧನೆ, ತ್ಯಾಗದ ಭಾವನೆ ಅಸಾಧಾರಣವಾದದ್ದು. ಅವರು ಹೇಳುತ್ತಾ “ನೀವು ಒಂದು ಕಾಲನ್ನು ಕಳೆದು ಕೊಂಡರೆ ಇನ್ನೊಂದು ಕಾಲಿನ ಮೇಲೆ ಎದ್ದು ನಿಲ್ಲಿರಿ, ಎರಡು ಕಾಲುಗಳನ್ನು ಕಳೆದುಕೊಂಡರೆ ನಿಮ್ಮ ಕೈಗಳಿಂದ ಬದುಕನ್ನು ನಡೆಸಿ, ಒಂದು ವೇಳೆ ಎರಡು ಕಾಲು, ಕೈಗಳನ್ನು ಕಳೆದುಕೊಂಡರೂ ನಿಮ್ಮ ಮೆದುಳಿನ ಸಾಮರ್ಥ್ಯದ ಮೇಲೆ ಬದುಕಿ ಸಮಾಜಕ್ಕಾಗಿ ಏನನ್ನಾದರು ಕೊಡುಗೆಯಾಗಿ ನೀಡಿ ಎಂದಿದ್ದಾರೆ. ಇವರ ಈ ತ್ಯಾಗದ ಗೂಣ ಇಡೀ ಸಮಾಜಕ್ಕೆ ಮಾದರಿಯಾಗಿದೆ.

    ಹೀಗೆ ಸಮಾಜ, ದೇಶ ಅಥವಾ ಜಗತ್ತಿನ ಒಳಿತಿಗಾಗಿ ಅಥವಾ ಅಭಿವೃದ್ಧಿಗಾಗಿ ಶ್ರಮಿಸುವ, ತಮ್ಮ ವಯಕ್ತಿಕ ಆಸೆ ಆಕಾಂಕ್ಷೆಗಳನ್ನು ಪರಿತ್ಯಾಗ ಮಾಡಿ ಸಮಾಜದ ಅಭಿವೃದ್ಧಿಗಾಗಿ, ಸಮಾನತೆಗಾಗಿ ಹೋರಾಡಿರುವ ಮಹಾತ್ಯಾಗಿಗಳು ಇತಿಹಾಸ ಪುಟಗಳಲ್ಲಿ ಸೇರಿರುತ್ತಾರೆ. ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಶಶ್ವತವಾಗಿ ಅವರ ಹೆಸರುಗಳು ಎಲ್ಲರ ಅಂತರಾಳದಲ್ಲಿ ಉಳಿದಿರುತ್ತದೆ. ಮನುಷ್ಯ ಹುಟ್ಟಿದ ಮೇಲೆ ತನ್ನ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ದುಡಿದು ನಾನು ಬೆಳೆದು ಇತರರನ್ನು ಬೆಳೆಸುವ ಮನಸ್ಸು ಮಾಡಬೇಕು. ಎಲ್ಲರಲ್ಲೊಬ್ಬರಾಗಬೇಕು, ಏಕಾಂಗಿಯಾದ ಜೀವನ ನಿರರ್ಥಕ, ಶ್ರೇಷ್ಠ ಸಂಕಲ್ಪವನ್ನು ಹೊಂದಿವವರು ಶ್ರೇಷ್ಠರೆನಿಸುತ್ತಾರೆ. ಇತರ ಪ್ರಾಣಿಗಳು ತನ್ನ ಸಮುದಾಯದ ಉಳಿವಿಗಾಗಿ ತ್ಯಾಗವನ್ನಾದರೂ ಮಾಡಿ ಅವುಗಳನ್ನು ಉಳಿಸುತ್ತವೆ, ಆದರೆ ಮನುಷ್ಯರಾದವರಿಗೆ ಜ್ಞಾನವಿದೆ. ನಾವು ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದೇವೆ ಎಂಬುದನ್ನು ಸಾಬೀತು ಪಡಿಸಬೇಕು. ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ ನೀನು ಸತ್ತಾಗ ಮಣ್ಣು ಹಾಕುವುದಕ್ಕೆ ಬರುತ್ತೇ ಎಂಬುದೇ ಸತ್ಯ. ಹಗಲಿರುಳು ತಂದೆ ತಾಯಿಗಳು ಕಷ್ಟ ಪಟ್ಟು ದುಡಿಯುವುದೇ ಒಂದೇ ಕಾರಣಕ್ಕೆ ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬರಬಾರದೆಂದು ಇಂತಹ ತ್ಯಾಗ ಭಾವನೆ ಹೃದಯಗಳನ್ನು ಇಂದಿನ ಯುವಸಮೂಹ ಅರಿಯಬೇಕಾಗಿದೆ.” ಸಾಧನೆ, ತ್ಯಾಗವಿಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶ ವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಮಾನವನ ಬದುಕು ಶ್ರೇಷ್ಠವಾದುದು. ಜನ್ಮಕೊಟ್ಟಭೂಮಿತಾಯಿಗೆ ಏನನ್ನಾದರೂ ಧಾರೆಯೆರೆಯಬೇಕಾಗಿದೆ. ಸ್ವಾರ್ಥದ ಬದುಕಿಗಿಂತ ತ್ಯಾಗದ ಬದುಕು ಅತಿಶ್ರೇಷ್ಠವಾದುದು ಎಂಬುದನ್ನು ನಾವು ಅರಿಯಬೇಕಾಗಿದೆ. ತ್ಯಾಗದಿಂದ ಸಿಗುವ ಆನಂದ, ಸಂತೋಷ, ಮಾನಸಿಕತೃಪ್ತಿ, ಜಿವನದಸಾರ್ಥಕತೆ, ಬೇರೆಯಾವುದರಿಂದಲೂ ಸಿಗುವುದಿಲ್ಲ. ತ್ಯಾಗದ ಮನಃಸ್ಥಿತಿ ಸಮಾಜದಲ್ಲಿ ಉಳ್ಳವರಿಗಿಂತ ಮದ್ಯಮ ಹಾಗೂ ಬಡವರಲ್ಲಿ ಹೆಚ್ಚಾಗಿ ಕಾಣಬಹುದು, ಉಳ್ಳವರು ಗಳಿಸುವ ಬಾವನೆ, ಬಡವರದು ತ್ಯಾಗದ ಗುಣ, ಹಸಿದವರ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಇಂತಹವರು ಹೆಚ್ಚು ಆರೋಗ್ಯವಂತರಾಗಿ, ಆನಂದದಿAದ, ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುತ್ತಾರೆ, ಈ ದೇಶದ ಸಂಸ್ಕೃತಿ ಹಂಚಿತಿನ್ನುವ, ದಾಸೋಹದ ಪಾಲನೆಯಾಗಿದೆ. ಉಳ್ಳವರು ಇಲ್ಲದವರಿಗೆ ಮನಸಾರೆ ನೀಡುವ ಮನೋಭಾವನೆ ಬೆಳೆಯಬೇಕು, ಅನ್ನದಾನ ಮಾಡಿದ ಮನೆ ಚಂದ ಆದ್ದರಿಂದ ಕೊಡುವ ಗುಣ ನಮ್ಮದಾಗಬೇಕು. ಪ್ರಾಣಿಗಳಿಗಿರುವ ತ್ಯಾಗದ ಮನೋಭಾವನೆ ಮನುಷ್ಯನಿಗಿಲ್ಲ ಎಂಬ ಆತಂಕ ಎಲ್ಲಾ ಕಡೆ ಕಾಡುತ್ತಿದೆ. ಈ ಆತಂಕವನ್ನು ಹೋಗಲಾಡಿಸಲು ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕಾಗಿ ನೀಡಿ ತ್ಯಾಗದ ಗುಣವನ್ನು ಮೆರೆಯಬೇಕಾಗಿದೆ.

     

    ಪ್ರೊ. ಸಿ. ಶಿವರಾಜು
    ಅಧ್ಯಕ್ಷರು, ಸಂಸ್ಕೃತ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-56.

  • ಮುದ್ದೇಬಿಹಾಳ ಪುರಸಭೆ ಅಧ್ಯಕ್ಷರಾಗಿ ಮೈಬೂಬ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆ.

    ಮುದ್ದೇಬಿಹಾಳ ಪುರಸಭೆ ಅಧ್ಯಕ್ಷರಾಗಿ ಮೈಬೂಬ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆ.

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಭಾರಿ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮೈಬೂಬ
    ಗೊಳಸಂಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೀತಿ ದೇಗಿನಾಳ ಅವರು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಬಲರಾಮ ಕಟ್ಟಿಮನಿ
    ಅವರು ಅಧಿಕೃತ ಘೋಷಿಸಿದ್ದಂತೆ ಪುರಸಭೆಗೆ ಆಗಮಿಸಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಗೌರವಿಸಿ ಅಭಿನಂದಿಸಿದರು.

    ಬಳಿಕ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ  ಸಿ ಎಸ್ ನಾಡಗೌಡ(ಅಪ್ಪಾಜಿ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಯಲ್ಲಿ ಮಾತ್ರ ನಾವು ನಮ್ಮ ನಮ್ಮ ಪಕ್ಷ ನಮ್ಮನಮ್ಮ ಬೆಂಬಲಿಗರು ಎಂಬುದು ಮಾತ್ರ ಇರುತ್ತದೆ, ಗೆದ್ದ ನಂತರ ನಾವು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಟ್ಟಣದ ಎಲ್ಲವಾರ್ಡುಗಳನ್ನು ಅಭಿವೃದ್ಧಿಗಾಗಿ ಶ್ರಮಿಸಬೇಕು.

    ಕಳೆದ ಒಂದೂವರೇ ವರ್ಷದಿಂದ ಪುರಸಭೆ ಅಧಿಕಾರವಿಲ್ಲದೇ ಅಭಿವೃದ್ಧಿಯಲ್ಲಿ ಸ್ವಲ್ಪ ಕುಂಟಿತಗೊಂಡಿತ್ತು  ಆದರೇ ಸಧ್ಯ ಚುನಾವಣೆಗೊಂಡು ನೂತನ
    ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡಾಗಿದೆ, ಆದರೇ ಇನ್ನು ಕೇಲವ ಒಂದೇ ವರ್ಷ ಆಡಳಿತ ಮಾಡುವ ಅವಕಾಶವಿದೇ ನಿಮಗಿರುವ ಸಮಯದೊಳಗೆ ಮುದ್ದೇಬಿಹಾಳ  ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಪೂರಕ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಾದರಿಯ ಪಟ್ಟಣ ನಿರ್ಮಾಣದ ಗುರಿ ನಿಮ್ಮದಾಗಬೇಕು.  ರಾಜ್ಯದಲ್ಲಿ ನಮ್ಮ ಸರಕಾರ ಬಂದು ಒಂದೂವರೇ ವರ್ಷಗಳು ಕಳೆದುಹೋಗಿವೆ ಆದರೇ ಕೇಂದ್ರದ ಬಿಜೆಪಿ ಸರಕಾರ ದೇಶದಲ್ಲೆಡೆ ಏಕಕಾಲಕ್ಕೆ ಒಂದೆ ಚುನಾವಣೆ ನಡೆಸುವ ಕಾನೂನು ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿವೆ ಹಾಗೇನಾದರೂ ಸುಮಾರು ೬ ವರ್ಷಕ್ಕೆÀ ಶಾಸಕರ ಅವಧಿ ಹೆಚ್ಚಾಗಲಿದೆ ಹಾಗೇನಾದರೂ ಕಾನೂನು ಜಾರಿಗೊಂಡರೆ ಈಗಿರುವ ಮೂರುವರೇ ವರ್ಷದ ಬದಲಾಗಿದೆ ನಾಲ್ಕುವರೆ ವರ್ಷ ಅಧಿಕಾರ ನಮಗೆ
    ಸಿಗಲಿದೆ.

    ಸರಕಾರದಿಂದ ಹೆಚ್ಚೇಚ್ಚು ಅನುದಾನ ತರುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಸಮಯ ಸಿಕ್ಕಂತಾಗುತ್ತದೆ ಜೊತೆಗೆ ಜನರ ವಿಶ್ವಾಸಾರ್ಹ
    ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನಿ ಇಲ್ಲಿಯವರೆಗೂ ಯಾವೂದೇ ಕಾನೂನು ಬಾಹಿರವಾಗಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಕಾನೂನಿನ ಅಢಿಯಲ್ಲಿಯೇ ನಾನು ನಡೆದುಕೊಂಡು ಬಂದಿದ್ದೇನೆ, ಯಾರೇ ಯಾಗಲಿ ಹೇಳಿಕೆ ಕೊಡಬೇಕಾದರೇ ಯೋಚನೆಯಿಂದ ಹಿರಿತನದ ಜವಾಬ್ದಾರಿಯಿಂದ ಹೇಳಿಕೆ ಕೋಡಬೇಕು ಯಾರನ್ನೋ ತೇಜೋವಧೆ ಮಾಡಲು ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು ಹೆಚ್ಚಿಗೆ ಯಾವೂದನ್ನು ಬಿಡಿಸಿ ನಾನು ಹೇಳಲಾರೆ ಎಂದು ಟಾಂಗ ನೀಡಿದರು.

    ————-
    ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ರಿಯಾಜಹ್ಮದ ಢವಳಗಿ ಹಾಗೂ ಬಿಜೆಪಿ ಸದಸ್ಯ ಬಸವರಾಜ ಮುರಾಳ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್‌ನಿAದ ಭಾರತಿ ಪಾಟೀಲ ಹಾಗೂ ಪ್ರೀತಿ ದೇಗಿನಾಳ ಹಾಗೂ ಬಿಜೆಪಿಯಿಂದ ಸಹನಾ ಬಡಿಗೇರ ಅವರು ನಾಮಪತ್ರ ಸಲ್ಲಿಸಿದ್ದರು.೧೧ಗಂಟೆಗೆ ನಾಮತ್ರ ಸಲ್ಲಿಕೆ, ೧೧ರಿಂದ ೧೧.೩೦ರವೆಗೆ ನಾಮಪತ್ರ ಪರಿಶಿಲನೆ, ೧೧.೩೦ರಿಂದ ೧೨ಗಂಟೆಯವರಗೆ ನಾಮಪತ್ರ ಹಿಂಪಡೆಯಲು ಅವಕಾಶ ಬಳಿಕ ೧೨.೩೦ರಿಂದ
    ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಯಿತು. ೮ಜನ ಬಿಜೆಪಿ ಸದಸ್ಯರು, ೮ ಜನ ಕಾಂಗ್ರೇಸ್ ಸದಸ್ಯರು, ೫ ಜನ ಪಕ್ಷೇತರ ಸೇರಿದಂತೆ ಒಟ್ಟು ೨೩ ಸದಸ್ಯರ ಬಲವನ್ನು ಹೊಂದಿದ ಪುರಸಭೆಗೆ ಸದ್ಯ ೫ ಪಕ್ಷೇತರರು ಹಾಗೂ ೮ ಜನ ಬಿಜೆಪಿ ಸದಸ್ಯರು ಪರಸ್ಪರ ಹೊಂದಾಣಿಕೆಯಿAದ ಪಕ್ಷೇತರ ಅಭ್ಯರ್ಥಿ ರಿಯಾಜ್ಮದ ಢವಳಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಒಂದು ಬಣ ಹಾಗೂ ಸಂಪೂರ್ಣ ಕಾಂಗ್ರೇಸ್ ಪಕ್ಷದ ೮ ಜನ ಸದಸ್ಯರ ಹಾಗೂ ೪೦ ಜನ ಪಕ್ಷೇತರ ಬಲದಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಹಾಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಿಯಾಜಹ್ಮದ ಢವಳಗಿಯವರು ಅವರು ಕಾಂಗ್ರೇಸ್ ಪಕ್ಷದೊAದಿಗೆ ಗುರ್ತಿಸಿಕೊಂಡಿರುವುದು ಮಾತ್ರವಲ್ಲದೇ ಕಾಂಗ್ರೇಸ್ ನ ತಾಲೂಕಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದರಿಂದ ಬ್ಲಾಕ್ ಕಾಂಗ್ರೇಸ್ ಗುರು ತಾರನಾಳ ಅವರನ್ನು ಕಳುಹಿಸಿ ಕೆಲ ಹೊತ್ತು ಆಜ್ಞಾತ ಸ್ಥಳಕ್ಕೆ ಕರೆಯಿಸಿಕೊಂಡ ಶಾಸಕ
    ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹಾಗೂ ತಾಲೂಕಾ ಪಟ್ಟಣದ ಹಾಗೂ ತಾಲೂಕಿನ ಬಹುತೇಕ ಕಾಂಗ್ರೇಸ್ ಮುಖಂಡರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ರಿಯಾಜ್ ಹಮ್ಮದ‌ ಡವಳಗಿಯವರ ಮನೋಲಿಸಿ ಮೈಬೂಬ ಗೊಳಸಂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸರ್ವ ಸದಸ್ಯರನ್ನು ಒಪ್ಪಗೆ ಪಡೆದು ೧೬ ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದರಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಪ್ರೀತಿ ದೇಗಿನಾಳ ಅವರು ಉಪಾಧ್ಯಕ್ಷರನ್ನಾಗಿ ಆಯ್ಕೆ
    ಗೊಂಡಿದ್ದರಿAದ ಬಿಜೆಪಿ ಸದಸ್ಯ ಬಸವರಾಜ ಮುರಾಳ ಅವರು ನೀಡಿದ್ದ ನಾಮಪತ್ರ ಹಿಂಪಡೆದುಕೊಳ್ಳುವAತೆ ಮಾಡಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನ ಎಂದು ಘೊಷಿಸುವ ಬಿಜೆಪಿಯವರಿಗೆ ಕಾಂಗ್ರೇಸ್ ತAತ್ರಗಾರಿಕೆಯಿAದ ಬಿಜೆಪಿಯವರಿಗೆ ಮುಖಭಂಗ ಅನುಭವಿಸುವಂತಾಯಿತು.

     


     

    ಕಾರ್ಯಕರ್ತರ ಹರ್ಷೋದ್ಘಾರ ವಿಜಯೋತ್ಸವ

    ಪುರಸಭೆಯ ನೂತನ ಅಧ್ಯಕ್ಷರಾಗಿ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಅವರು ಆಯ್ಕೆಗೊಳ್ಳುತ್ತಿದ್ದಂತೆ ಕಾಂಗ್ರೇಸ್
    ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪಟಾಕಿ ಸಿಡಿಸಿ ಪರಸ್ಪರ ಅಪ್ಪಿಕೊಂಡು ವಿಕ್ಟರಿ ಚಿನ್ಹೇ ತೊರಿಸಿ ಕೈ ಮಾಡಿ ಗುಲಾಲು ಎರಚಿ ಮೈಬೂಬ ಗೊಳಸಂಗಿಯವರನ್ನು ಮೇಲಕ್ಕೆ ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಪಾದಯಾತ್ರೆ ಮೂಲಕ ಪಟ್ಟಣದ
    ಪ್ರಮುಖ ಬೀದಿಗಳಿಗ ಮೂಲಕ ಹಾಯ್ದು ಸಂಭ್ರಮಿಸಿದರು.

    ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಹಿರಿಯ ಮುಖಂಡರಾದ ಸಂಗಮೇಶ ಬಿರಾದಾರ(ಜಿಟಿಸಿ) ಎಂ ಬಿ ನಾವದಗಿ, ಗಫೂರಸಾಬ ಮಕಾಂದಾರ, ಸಿಬಿ ಅಸ್ಕೀ, ಸಿಕಂದರ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರಾದ ವಿರೇಶ ಹಡಲಗೇರಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ಸೋನಾಬಾಯಿ ನಾಯಕ, ರಫೀಕ ದ್ರಾಕ್ಷೀ, ಶಿವು ಶಿವಪುರಿ, ಹಣಮಂತ ಭೋವಿ, ಶಾಹಾಜಾದಬಿ ಹುಣಸಗಿ, ಮಹಮ್ಮದರಫೀಕ ಶಿರೋಳ, ಸದ್ದಾಂ ಕುಂಟೋಜಿ,ಕಾಮರಾಜ ಬಿರಾದಾರ, ಸಂಗಪ್ಪ ಮೇಲಿಮನಿ, ಶ್ರೀಕಾಂತ ಚಲವಾದಿ, ಬಸವರಾಜ ಗೊಳನಾಳ ಸೇರಿದಂತೆ ಅನೇಕರು ಇದ್ದರು.


    ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವೂದೇ ಅಹಿತಕರ ಗಲಾಟೆಯಾಗದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಹಾಗೂ ಪಿಎಸೈ ಸಂಜಯ ತಿಪ್ಪಾರೆಡ್ಡಿ ಹಾಗೂ ತಾಳಿಕೋಟಿ ಪಿಎಸೈ ರಾಮನಗೌಡ ಸಂಕನಾಳ, ಕ್ರೈಂಪಿ.ಎ.ಸೈ ಆರ್.ಎಸ್ ಬಂಗಿ, ಆರ್.ಎಲ್ ಮನ್ನಾಭಾಯಿ, ನೇತೃತ್ವದ ೬೦ಪೋಲಿಸ್ ಸಬ್ಬಂದಿ ಹಾಗೂ ಒಂದು ಡಿ ಆರ್ ತುಕಡಿಯೊಂದಿಗೆ  ಪುರಸಭೆ ಕಚೇರಿಯ ಸುತ್ತಲೂ ಬ್ಯಾರಿಕೇಡ ಅಳವಡಿಸಿ ವ್ಯಾಪಕ ಬಗಿ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಚುನಾವಣೆ ಮಗಿಯುವವರೆಗೂ ಪೋಲಿಸ ಸಿಬ್ಬಂದಿಗಳು ಆಗಾಗ ತಪಾಸಣೆ ನಡೆಸುವ ಮೂಲಕ ಜಾಗೃತಿ ವಹಿಸಿಕೊಂಡಿದ್ದು ಕಂಡುಬAತು.

    ————————–

    ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್
    ನಾಡಗೌಡ(ಅಪ್ಪಾಜಿ)ಯವರ ಹಾಗೂ ತಾಲೂಕಿನ ಬಹುತೇಕ ಎಲ್ಲ ಕಾಂಗ್ರೇಸ್ ಮುಖಂಡ
    ಆಶಿರ್ವಾದಿAದ ಇಂದು ನಾನು ಅಧ್ಯಕ್ಷನಾಗಿದ್ದೇನೆ ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ
    ಹೊರೆಸಿದ್ದಾರೆ. ನಾನಿರುವ ಅಧಿಕಾರವಧಿಯಲ್ಲಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ
    ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಉದ್ಯಾನವನಗಳು
    ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಪಟ್ಟಣದ ಅಭಿವೃದ್ಧಿಗೆ ಟೊಂಕ ಕಟ್ಟಿ
    ನಿಲ್ಲುತ್ತೇನೆ. ನಾನು ಅಧ್ಯಕ್ಷನಾಗಲು ಶ್ರಮಿಸಿದ ಶಾಸಕರಿಗೂ, ಎಲ್ಲ ಸ್ನೇಹಿತರಿಗೂ,
    ಮುಖಂಡರಿಗೂ, ಪುರಸಭೆ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು
    ಸಲ್ಲಿಸುತ್ತೇನೆ.

    ಪುರಸಭೆ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ.
    —————–

     

  • ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್

    ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್

    ಯಲಹಂಕ: ಕನ್ನಡ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮನದ ಕಡಲು ಚಿತ್ರದ ಚಿತ್ರೀಕರಣದ ವೇಳೆ ಅವಗಡ ಒಂದು ಸಂಭವಿಸಿದ್ದು ಲೈಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ (24) 30 ಅಡಿ ಎತ್ತರದ ಏಣಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಗೊರಗುಂಟೆ ಪಾಳ್ಯದ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಯೋಗರಾಜ ಭಟ್, ನಿರ್ಮಾಪಕ ಈ ಕೃಷ್ಣಪ್ಪ, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

    ಘಟನೆಯ ವಿವರ: ಇದೇ ತಿಂಗಳ 3ನೇ ತಾರೀಕು ಮಂಗಳವಾರ ಅಡಕಮಾರನಹಳ್ಳಿ ಬಳಿಯ ವಿ ಆರ್ ಎಲ್ ಗೋಡೌನ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಮೃತ ಮೋಹನ್ ಕುಮಾರ್ ಮತ್ತು ಆತನ ಸಹೋದರರು 30 ಅಡಿಯ ಏಣಿಯನ್ನು ಬಳಸಿ ಮೇಲೆ ಕಟ್ಟಿದ್ದ ಲೈಟನ್ನು ಬಿಚ್ಚಲು ಮುಂದಾಗಿದ್ದು ಏಣಿಯು ಜಾರಿ ಮೇಲಿದ್ದ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದಾನೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ರಕ್ತಸ್ರಾವ ಉಂಟಾಗಿದೆ ಕೂಡಲೆ ಆತನನ್ನು ಸಹೋದರರು ಮತ್ತು ಇತರರು ನೆಲಮಂಗಲ ಬಳಿಯ ವಿಪಿ ಮ್ಯಾಗ್ನೆಸ್ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ ಅದರಂತೆ ಗೊರಗುಂಟೆಪಾಳ್ಯ ಬಳಿಯ ಸ್ಪರ್ಶ ಆಸ್ಪತ್ರೆಗೆ ಗಾಯಾಳುವನ್ನು ಸೇರಿಸಿದ್ದು ತಲೆಯಲ್ಲಿ ತೀವ್ರ ರಕ್ತಸ್ರಾವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಸಂಬಂಧಿಕರ ಆರೋಪ:
    ವಿ ಆರ್ ಎಲ್ ಗೋಡನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು ಶೂಟಿಂಗ್ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ ಜೊತೆಗೆ ಕೆಲಸಕ್ಕೆ ಬೇಕಾಗುವಂತ ಸುಸಜ್ಜಿತ ಉಪಕರಣಗಳನ್ನು ನೀಡಿಲ್ಲ ಇದರಿಂದಾಗಿ ತಮ್ಮ ಮೃತಪಟ್ಟಿದ್ದಾನೆ ಆದ್ದರಿಂದ ಮನದ ಕಡಲು ಚಿತ್ರದ ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಚಿತ್ರದ ನಿರ್ಮಾಪಕ ಈ.ಕೃಷ್ಣಪ್ಪ, ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತನ ಅಣ್ಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

  • ಬೈಕ್ ಓವರ್ ಸ್ಪೀಡ್’ಗೆ ನಾಲ್ವರ ಬಲಿ.?

    ಬೈಕ್ ಓವರ್ ಸ್ಪೀಡ್’ಗೆ ನಾಲ್ವರ ಬಲಿ.?

    ವರದಿ; ಶ್ರೀಶೈಲ್ ಪೂಜಾರಿ

    ಮುದ್ದೇಬಿಹಾಳ; ತಾಲೂಕಿನ ಕುಂಟೋಜಿ ಗ್ರಾಮದ ಸಮೀಪ ಬೈಕ್ ಗುದ್ದಿದ ಪರಿಣಾಮವಾಗಿ ಸವಾರರು ಹಾಗೂ ಪಾದಚಾರಿ ಸೇರಿ ಮೂವರು ಮೂವರು ಮೃತಪಟ್ಟರೆ, ನಾಲ್ವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

    ಮೃತಪಟ್ಟ ಮೂವರಲ್ಲಿ ಬೈಕ್ ಸವಾರ ನಿಂಗರಾಜ ಚೌದರಿ(22) ತಾಳಿಕೋಟಿ ತಾಲೂಕಿನ ಗೊಟಗುನಕಿ ಗ್ರಾಮ, ಬೈಕ್ ನ ಹಿಂಬದಿ ಸವಾರ ಅನಿಲ ವನೂರು (27) ದೇವರ ಹಿಪ್ಪರಗಿ ತಾಲೂಕಿನ ಹಂಚಿನಾಳ ಗ್ರಾಮ, ಪಾದಾಚಾರಿ ಕುಮಾರ ಪ್ಯಾಟಿ(18) ಮಲಗಲದಿನ್ನಿ ಗ್ರಾಮದವನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ ಯುವಕನ ಹೆಸರು ತಿಳಿದುಬಂದಿಲ್ಲ.

    ಶಾಹೀದ್ ಹುನಗುಂದ(19), ಪ್ರಶಾಂತ ಕುರುಬಗೌಡರ(16), ಹಣಮಂತ ಕುರುಬಗೌಡರ(18), ರಾಯಪ್ಪ ಬಾಗೇವಾಡಿ(24) ಅವರ ಆರೋಗ್ಯ ಚಿಂತಾಜನಕವಾಗಿದೆ. ಈ ನಾಲ್ವರು ಮಲಗದಿನ್ನಿ ಗ್ರಾಮದವರಾಗಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಾಳಿಕೋಟಿಯಿಂದ ಮುದ್ದೇಬಿಹಾಳಕ್ಕೆ ಬೈಕ್ ಸವಾರರು ಎನ್.ಎಸ್ 200 ಬೈಕ್ ನಲ್ಲಿ ಕುಂಟೋಜಿ ಗ್ರಾಮವನ್ನು ದಾಟಿ ಮುದ್ದೇಬಿಹಾಳಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.

    ಕುಂಟೋಜಿ ಗ್ರಾಮದಲ್ಲಿ ಬಸವಣ್ಣನ ಜಾತ್ರೆ ನಿಮಿತ್ಯ ವಿವಿಧ ಮನರಂಜನೆ ಹಾಗೂ ಸ್ಪರ್ಧೆಗಳು ಇದ್ದವು. ಇವುಗಳನ್ನು ನೋಡಲು ಮಲಗಲದಿನ್ನಿ ಗ್ರಾಮದಿಂದ ಟಾಟಾ ಎಸ್ ನಲ್ಲಿ ಬಂದಿದ್ದರು. ಮಲಗಲದಿನ್ನಿ ಯುವಕರು ಶೌಚಾಲಯಕ್ಕೆ ಹೋಗಿ ರಸ್ತೆ ಪಕ್ಕದಲ್ಲಿ ಬರುವಾಗ ಬೈಕ್ ಸವಾರನ ಓವರ್ ಸ್ಪೀಡ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಒಟ್ಟು 6 ಪಾದಚಾರಿಗಳಿಗೆ ಈ ಬೈಕ್ ಗುದ್ದಿದ್ದು, ಬೈಕ್ ಸವಾರರು ಇಬ್ಬರು ಹಾಗೂ ಇಬ್ಬರು ಪಾದಚಾರಿಗಳು ಇಬ್ಬರು ಮೃತಪಟ್ಟಿದ್ದಾರೆ. ಪಾದಾಚಾರಿ ಒಬ್ಬರು ಆರೋಗ್ಯಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಈ ನಾಲ್ವರಲ್ಲಿ ಒಬ್ಬರು ಮೃತಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸ್ ಇಲಾಖೆ ಈ ಮಾಹಿತಿಯನ್ನು ತಳ್ಳಿ ಹಾಕಿದೆ.

    ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಎಸ್.ಪಿ ಎಸ್.ಕೆ ಮಾರಿಹಾಳ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜೀವ್ ತಿಪ್ಪಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

  • ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ

    ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ

    • ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ ;ಸ್ಕಾಡಾ ಗೆಟ್ ಅಳವಡಿಕೆ, ರೈತರಲ್ಲಿ ಸಂತಸ

    ಸತ್ಯಕಾಮ ನ್ಯೂಸ್ ಡೆಸ್ಕ್

    ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ಆಧುನಿಕರಣ, ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಜಲಾಶಯದಲ್ಲಿ ಬಳಕೆ ಆಗುತ್ತಿರುವ ನೀರು, ಕಾಲುವೆ ನಿರ್ವಹಣೆ ಹಾಗೂ ನೀರು ಬಳಕೆದಾರ ಸಹಕಾರ ಸಂಘಗಳ ಕಾರ್ಯ ಚಟುವಟಿಕೆ ಕುರಿತು “ಮಾಸಕೊಟ್ ಸಂಸ್ಥೆ” ಸೂಚನೆಯಂತೆ ಗುರುವಾರ ಅಧಿಕಾರಿಗಳೂ ಇಂಜನೀಯರುಗಳೂ ಹಾಗೂ ಸದಸ್ಯರು ಯೋಜನಾ ಪ್ರದೇಶದ ನಾರಾಯಣಪುರದಿಂದ ಹುಣಸಗಿಯ ತನಕ ಭೇಟಿ ನೀಡಿ ಪರಿಶೀಲನೆ ಮಾಡಿದರು.

    ನಾರಾಯಣಪುರ ಜಲಾಶಯದ ಕಾಲುವೆ ಹಾಗೂ ನೀರು ನಿರ್ವಹಣೆ ತಂಡಗಳೊಂದಿಗೆ ಜಲ, ಗೆಟ್, ನೀರಿನ ವಿತರಣೆ, ನೀರು ಬಳಕೆದಾರ ಸಹಕಾರ ಸಂಗಗಳ ಕಾರ್ಯ ಚಟುವಟಿಕೆ ಕುರಿತು ಸರಕಾರಕ್ಕೆ ವರದಿ ಸಲ್ಲಿಸುವದಕ್ಕಾಗಿ ಅಧ್ಯಯನ ನಡೆಸುತ್ತಿರುವದಾಗಿ ಕೆ.ಇ.ಆರ್.ಎಸ್ ಮುಖ್ಯ ಎಂಜಿನಿಯರ್ ಕೆ.ಜಿ.ಮಹೇಶ ಹೇಳಿದರು.

     

    ಹುಣಸಗಿ ತಾಲೂಕಿನ ನಾರಾಯಣಪುರ ಎಡದಂಡೆ ನಾಲೆಯ ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಅದರ ಫಲಶ್ರುತಿ ಕುರಿತು ಮುಖ್ಯ ಅಭಿಯಂತರರಾದ ಕೆ.ಜಿ.ಮಹೇಶ ಭೇಟಿ ನೀಡಿ ಪರೀಶಿಲಿಸಿದರು.
    ಹುಣಸಗಿ ತಾಲೂಕಿನ ನಾರಾಯಣಪುರ ಎಡದಂಡೆ ನಾಲೆಯ ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಅದರ ಫಲಶ್ರುತಿ ಕುರಿತು ಮುಖ್ಯ ಅಭಿಯಂತರರಾದ ಕೆ.ಜಿ.ಮಹೇಶ ಭೇಟಿ ನೀಡಿ ಪರೀಶಿಲಿಸಿದರು.

    ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನಿರ್ಮಾಣದ ಹಲವು ದಶಕಗಳಿಂದ ನಿರಂತರವಾಗಿ ಕುಸಿತದಿಂದಾಗಿ, ಕಾಲುವೆ ನೀರು ಅಧಿಕ ಪ್ರಮಾಣದಲ್ಲಿ ಪೊಲಾಗುತ್ತಿತ್ತು. ಕಾಲುವೆ ಅಧುನಿಕರಣಕ್ಕಾಗಿ ಬೇಡಿಕೆ ಕಂಡು ಬಂತು.ತದ ನಂತರ ಕಾಲುವೆ ಅಧುನಿಕರಣ (ಇಆರ್‌ಎಮ್) ಕೈಗೊಳ್ಳಲಾಯಿತು.

    ಮುಂದುವರೆದು ದೇಶದಲ್ಲಿ ಮೊದಲ ಬಾರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಕಾಡಾ ಅಡಿಯಲ್ಲಿ ೫ಸಾವಿರ ಕೊಟಿ ರೂಗಳಲ್ಲಿ ಸುರಕ್ಷಿತ ಗೇಟ್ ಅಳವಡಿಸಿದ ನಂತರ ನೀರು ಪೋಲಾಗುವದು ತಪ್ಪಿಸಿದಂತಾಗಿದೆ. ಅಲ್ಲದೆ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಲಭ್ಯವಾಗುತ್ತಿದ್ದು, ಇದರಿಂದಾಗಿ ನೀರಾವರಿ ಕ್ಷೇತ್ರ, ಅಧಿಕ ಇಳುವರ, ರೈತರ ಗುಳೆ ತಪ್ಪಿದಂತಾಗಿದೆ ಎಂಬುದು ಅಧ್ಯಯನದಿಂದ ಕಂಡು ಬಂದಿದೆ ಎಂದು ಮಹೇಶ ಹೇಳಿದರು.

    ನೀರು ಬಳಕೆದಾರರ ಸಹಕಾರಿ ಸಂಘಗಳ ಪ್ರಮುಖ ಎಂ.ಆರ್.ಖಾಜಿ ಮಾತನಾಡಿ, ರೈತರಿಗೆ ನೀರನ್ನು

    ಮುಟ್ಟಿಸುವಲ್ಲಿ ಸಂಗಗಳ ಚಟುವಟಿಕೆ ಉತ್ತಮವಾಗಿದ್ದು, ಆಡಳಿತದಲ್ಲಿ ಇರುವ ಯಾವುದೇ ಸರಕಾರ ಸಂಘಗಳನ್ನು ಬಲಡಪಸುವಲ್ಲಿ ತಮ್ಮ ಇಚ್ಛಾಶಕ್ತಿ ತೋರುತ್ತಿಲ್ಲಾ. ಕೃಷ್ಣಾ ಕಾಡಾ ಅಡಿಯಲ್ಲಿನ ನಾರಾಯಣಪುರ ವಲಯದ ನೀರು ಬಳಕೆದಾರ

    ಸಹಕಾರ ಸಂಘಗಳು ಮಾತ್ರ ನೀರಿನ ಕರವನ್ನು ಮುಂಗಡವಾಗಿ ಪಾವತಿ ಮಾಡುತ್ತಿವೆ ಎಂದು ಹೇಳಿದರು.

    ಈ ನಿಟ್ಟಿನಲ್ಲಿ ಸಂಘಗಳಿಗೆ ಉತ್ತೇಜನ ನೀಡುವದು ಅಗತ್ಯವಾಗಿದೆ ಎಂದು ಮನವಿ ಮಾಡಿದರು.

    ನಾರಾಯಣಪುರ ಜಲಾಶಯ, ಸ್ಕಾಡಾ ಸೆಂಟರ್, ನಾರಾಯಣಪುರ ಎಡದಂಡೆ ಮುಖ್ಯ ನಾಲೆ, ಎಸ್ಕೇಪ ಗೆಟ್‌ಗಳನ್ನು ಪರೀಶಿಲನೆ ಮಾಡಿದರು.

    ಈ ಸಂದರ್ಭದಲ್ಲಿ ಅಧಿಕ್ಷಕ ಅಭಿಯಂತರ ರಮೇಶ.ಜಿ. ರಾಠೋಡ. ಇಇಗಳಾದ ಹಣಮಂತ ಕೊಣ್ಣುರು, ರವಿಕುಮಾರ, ನಾಗೇಶ, ಎಇಇ ಆರ್.ಎಸ್.ರಾಠೋಡ, ಮಾನಪ್ಪ,ಮಹಾಲಿಂಗ ಹೊಕ್ರಾಣಿ, ವಿಜಯಕುಮಾರ ಅರಳಿ, ರಾಜಶೇಖರ ವಂದಲಿ, ವಿಶಾಲ ಇತರ ಅಧಿಕಾರಿಗಳು ಇದ್ದರು.