Author: Satyakam NewsDesk

  • ಕರ್ನಾಟಕದಲ್ಲಿ ಕನ್ನಡ ವ್ಯಾವಹಾರಿಕ ಭಾಷೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

    ಕರ್ನಾಟಕದಲ್ಲಿ ಕನ್ನಡ ವ್ಯಾವಹಾರಿಕ ಭಾಷೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

    ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ಕಾರ್ಯಕ್ರಮಕ್ಕೆ ಚಾಲನೆ, ವಿವಿಧ ಸಚಿವರು ಭಾಗಿ

    ಸತ್ಯಕಾಮ ವಾರ್ತೆ ರಾಯಚೂರು:-

    ಕರ್ನಾಟಕ ಸಂಪೂರ್ಣ ಕನ್ನಡಮಯವಾಗಲಿ. ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಇಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಮನೆ ಭಾಷೆ ಯಾವುದೇ ಇದ್ದರೂ ವ್ಯಾವಹಾರಿಕ ಭಾಷೆ ಕನ್ನಡವಾಗಲಿ. ಕನ್ನಡ ಅಗ್ರ ಭಾಷೆಯಾಗಲಿ, ಕನ್ನಡ ಮೊದಲ ಭಾಷೆಯಾಗಲಿ ಎಂದು ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು  ಕರೆ ನೀಡಿದರು.

    ಅವರು ಅ.05ರ ಶನಿವಾರದ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದ ವತಿಯಿಂದ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

    ಗೋಕಾಕ್ ಚಳವಳಿಯ ಪರಿಣಾಮ ರಾಜ್ಯದಲ್ಲಿ ಕನ್ನಡದ ವಾತಾವರಣ ವಿಸ್ತರಿಸಲು ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ಬಳಿಕ ಇದೇ ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯಿತು. ಪ್ರತಿಯೊಂದು ಭಾಷೆಯನ್ನೂ ಕಲಿಯಿರಿ, ಆದರೆ ಆಡಳಿತ ಭಾಷೆ ಕನ್ನಡ ಆಗಿರಲಿ. ಕನ್ನಡ ನೆಲದಲ್ಲಿ ನಡೆದ ಕನ್ನಡ ಭಾಷಾ ಚಳವಳಿ ಅತ್ಯಂತ ಚರಿತ್ರಿಕವಾದದ್ದು, ನಾನು ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಇಂಗ್ಲಿಷ್ ಟೈಮ್ ರೈಟರ್ ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ ಗಳನ್ನು ಕೊಡ್ತಿದ್ದೆ ಎಂದು ತಮ್ಮ ಅವಧಿಯ ಕನ್ನಡ ಕಟ್ಟುವ ಕೆಲಸವನ್ನು ಸ್ಮರಿಸಿದರು.

     

    ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಿರಿ ಆದರೆ ಈ ನೆಲದ ಭಾಷೆ ಕನ್ನಡವನ್ನು ಬಿಟ್ಟು ಕೊಡುವಷ್ಟು ದಾರಾಳತನ ಬೇಡ ಎಂದು ಸಲಹೆ ನೀಡಿದರು.

    ಗೋಕಾಕ್ ಚಳವಳಿಯು ಕರ್ನಾಟಕದಲ್ಲಿ ಭಾಷಾ ಚಳವಳಿ, ಕನ್ನಡ ಚಳವಳಿ ಆಗಿದೆ. ನಾನು ಯಾವ ಭಾಷೆಗೂ ವಿರೋಧವಿಲ್ಲ. ಮಾತೃಭಾಷೆ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೆ. ಮಾತೃಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ವಾತಾವರಣ ಸೃಷ್ಟಿ ಮಾಡಬೇಕಾಗಿದೆ. ರಾಯಚೂರಿನಲ್ಲಿ ಕರ್ನಾಟಕ ಸಂಭ್ರಮ- 50ರ ಅಂಗವಾಗಿ ಗೋಕಾಕ್ ಚಳವಳಿ ಹಿನ್ನೋಟ- ಮುನ್ನೋಟ ಸಮಾರಂಭ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿAದ ಭಾಗಿಯಾಗಿ ಉದ್ಘಾಟನೆ ಮಾಡಿದ್ದೇನೆಂದು ಹೇಳಿದರು.

    ಆಂಧ್ರ- ತೆಲಂಗಾಣದ  ಪಕ್ಕದ ಜಿಲ್ಲೆ ರಾಯಚೂರು ಈ ಭಾಗದಲ್ಲಿ ಸ್ವಲ್ಪ ತೆಲುಗು, ಉರ್ದು ಭಾಷೆ ಪ್ರಭಾವ ಇದೆ. ಸ್ವಾಭಾವಿಕವಾಗಿ ತೆಲುಗು ಭಾಷೆ ಇರುವುದು ಸಹಜ ಕರ್ನಾಟಕ ಏಕೀಕರಣ ಆದ ಬಳಿಕ ಬೇರೆಬೇರೆ ರಾಜ್ಯದಲ್ಲಿ ಸೇರಿದ ಕನ್ನಡ ಮಾತನಾಡುವ ಜನರು ಒಂದೇ ರಾಜ್ಯದಲ್ಲಿ ಸೇರಬೇಕೆಂದು 1956, ನವಂಬರ್ 1ರಲ್ಲಿ ಕರ್ನಾಟಕ ಏಕೀಕರಣ ಆಯ್ತು ಅಲ್ಲದೆ ಮೊದಲು ಮೈಸೂರು ರಾಜ್ಯ ಅಂತಹ ನಾಮಕರಣ ಇತ್ತು ಇದನ್ನು 1973ರಲ್ಲಿ ಮೈಸೂರು ರಾಜ್ಯವನ್ನ ಕರ್ನಾಟಕ ಅಂತ ನಾಮಕರಣ ಮಾಡಲಾಯಿತು. ಇಂದು 50 ವರ್ಷ ತುಂಬಿ, 51ನೇ ವರ್ಷದಲ್ಲಿ ನಾವು ಇದ್ದೇವೆ. 2024ರ ನವಂಬರ್ 1ರಂದು ಸಮಾರೋಪ ಸಮಾರಂಭ ಮಾಡಬೇಕು. ಅದಕ್ಕಾಗಿ ರಾಜ್ಯದ ಮೈಸೂರು,ಬೆಳಗಾವಿ, ರಾಯಚೂರು, ಮಂಗಳೂರಿನಲ್ಲಿ ಕರ್ನಾಟಕ ಹೆಸರಾಯ್ತು, ಕನ್ನಡ ನಮ್ಮೆಲ್ಲರ ಉಸಿರಾಗಲಿ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

     

    ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗ ನಾನು ಆಯ್ಕೆಯಾಗಿದೆ. ಆಗ ರಾಜ್ಯದ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರು ಆಗಿದ್ರೂ ನಾನು ಮೊದಲ ಬಾರಿಗೆ ಶಾಸಕನಾಗಿದೆ. ನಿಮಗೆ ಕನ್ನಡ ಬಗ್ಗೆ ಅಭಿವೃದ್ಧಿ ಇದೆ ಅಂತಹ ಅದಕ್ಕಾಗಿ ನನಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಮಾಡಿದ್ರು ಆ ಬಳಿಕ ನಾನು 1984ರಲ್ಲಿ ರೇಷ್ಮೆ ಸಚಿವ ಆಗಿದೆ. ಯಾವುದೇ ರಾಜ್ಯದಲ್ಲಿ ಭಾಷೆ ಕಾಯಲು ಕಾವಲು ಸಮಿತಿ ಇಲ್ಲ. ಗೋಕಾಕ್ ಚಳವಳಿಯಲ್ಲಿ ರಾಜಕುಮಾರ್ ಹೋರಾಟಕ್ಕೆ ಇಳಿದಾಗ ಗೋಕಾಕ್ ಚಳವಳಿಗೆ ವೇಗ ಸಿಕ್ಕಿತ್ತು. ಉದಾರಿತನ ಇರಬೇಕು, ಆದ್ರೆ ಮಾತೃಭಾಷೆಗೆ ದಕ್ಕೆ ಆಗಬಾರದು. ಕರ್ನಾಟಕದಲ್ಲಿ ವಾಸ ಮಾಡುವರು ಕನ್ನಡ ಮಾತನಾಡಬೇಕು. ಬೇರೆ ರಾಜ್ಯದವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡಬಾರದು. ಕನ್ನಡದಲ್ಲಿ ಮಾತನಾಡಿ ಅವರಿಗೂ ಕನ್ನಡ ಕಲಿಸಿ. ಕನ್ನಡ ಗಟ್ಟಿಯಾಗಿ ಉಳಿಯಬೇಕು, ಬೆಳೆಯಬೇಕು. ಅದಕ್ಕಾಗಿ ಒಂದು ವರ್ಷ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ನವಂಬರ್ 1ರ ಒಳಗಾಗಿ ವಿಧಾನಸೌಧ ಮುಂದೆ ಭುವನೇಶ್ವರಿ ಕಂಚಿನ ಪ್ರತಿಮೆ ಉದ್ಘಾಟನೆ ಮಾಡುತ್ತೇವೆ ಮುಖ್ಯಮಂತ್ರಿಗಳು ಹೇಳಿದರು.

     

    ಈ ವೇಳೆ ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಶಿವರಾಜ್ ತಂಗಡಗಿ ಅವರು ಮಾತನಾಡಿ, ಹೆಸರಾಯ್ತು ಕರ್ನಾಟಕ, ಉಸಿರಾಯ್ತು ಕನ್ನಡ ಎಂಬ ಕಾರ್ಯಕ್ರಮದಡಿ ಈ ವರ್ಷ ನವಂಬರ್ 1ರೊಳಗಾಗಿ ನಾಲ್ಕು ಕಾರ್ಯಕ್ರಮ ಮಾಡಲು ಚಿಂತನೆ ಮಾಡಿದ್ದೇವೆ. ಮೊದಲ ಕಾರ್ಯಕ್ರಮ ಮೈಸೂರಿನಿಂದ ಮಾಡಲಾಗಿದೆ. ಮೈಸೂರಿನಲ್ಲಿ 15 ಗೋಷ್ಠಿಗಳು ಮಾಡಿಲಾಯಿತು. ಮಹಾರಾಷ್ಟçದ ಗಡಿ ಭಾಗದಲ್ಲಿ ಯಶ್ವಸಿ ಕನ್ನಡ ಕಾರ್ಯಕ್ರಮ ಮಾಡಿಲಾಗಿದ್ದು, ರಾಯಚೂರಿನ ಕಾರ್ಯಕ್ರಮವು ಮೂರನೇ ಕಾರ್ಯಕ್ರಮವಾಗಿದೆ. ಕಲ್ಯಾಣ ಕರ್ನಾಟಕದ ಗಡಿ ಭಾಗವಾದ ರಾಯಚೂರಿನಲ್ಲಿ ಮಾಡಲು ತೀರ್ಮಾನ ಮಾಡಿ, ಮಾಡುತ್ತಿದ್ದೇವೆ ಎಂದರು.

     

    ಮುಖಮಂತ್ರಿ ಸಿದ್ದರಾಮಯ್ಯ ಅವರು ಸಹಿ ಕನ್ನಡದಲ್ಲಿ ಇದೆ. ಕಡತಗಳು ಸಹ ಕನ್ನಡದಲ್ಲಿ ಮಾಡಬೇಕು. ಅಂತ ಸಿಎಂ ಅವರು ಆದೇಶ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರು ಇಡಬೇಕೆಂದರು. ನ.1ರೊಳಗಾಗಿ ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಮಾಡಲು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಅವರು ಅಲ್ಲದೆ ವಿಧಾನಸೌಧದಲ್ಲಿ ನಮಗೆ ಸಂಧಿ, ವ್ಯಾಕರಣದ ಬಗ್ಗೆ ತಿಳಿಸುತ್ತಾರೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ ಎಂದು ಹೇಳಿದರು.

     

    ಮಾನವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ; ಜಿಲ್ಲೆಯ ಮಾನವಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಇಂದು ಮುಖಮಂತ್ರಿಗಳಾದ ಶ್ರೀಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲಾಯಿತು.

    ಈ ವೇಳೆ ಜನ ಸಾಗರದ ಸಾಕ್ಷಿಯಾಯಿತು. ಸುಮಾರು  3ಕಿಮೀ ಉದ್ದದ ರಸ್ತೆಯುದ್ದಕ್ಕೂ ಸೇರಿರುವ ಜನ. ಮಾತ್ರವಲ್ಲದೆ ಬೃಹತ್ ವೇದಿಕೆ ಮುಂಭಾಗದಲ್ಲಿ 40ಸಾವಿರಕ್ಕೂ ಅಧಿಕ ಮಂದಿ ಜಮೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಮುಗಿಲು ಮುಟ್ಟುವ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

     

    ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಾಹದೇವಪ್ಪ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಬಸವನಗೌಡ ತರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ  ಎ.ವಸಂತಕುಮಾರ, ಬಸನಗೌಡ ಬಾದರ್ಲಿ,ಶರಣಗೌಡ ಬಯ್ಯಾಪೂರು, ಚಂದ್ರಶೇಖರ ಪಾಟೀಲ್, ರಾಯಚೂರು ನಗರಸಭೆಯ ಅಧ್ಯಕ್ಷರಾದ ನರಸಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ರಾಜಶೇಖರ ರಾಮಸ್ವಾಮಿ, ಮಲ್ಲಿಕಾರ್ಜುನ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿದೇವಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಂ.ಪುಟ್ಟಮಾದಯ್ಯ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾದ ಸಂತೋಷ ಹಾನಗಲ್, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

     

    *******
    ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮ; ಕಲಾ ತಂಡಗಳ ಮೆರವಣಿಗೆ ಚಾಲನೆ

    ರಾಯಚೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತದ ವತಿಯಿಂದ ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ಕಾರ್ಯಕ್ರಮದ ಅಂಗವಾಗಿ ಇಂದು ನಗರದ ಬಸವೇಶ್ವರ ವೃತ್ತದಲ್ಲಿ ಈ ವೇಳೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ವಿವಿಧ ಕಲಾ ತಂಡಗಳ ಮೆರೆವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


    ಇದೇ ಸಂದರ್ಭದಲ್ಲಿ  ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ  ಎ.ವಸಂತಕುಮಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಂ.ಪುಟ್ಟಮಾದಯ್ಯ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾದ ಸಂತೋಷ ಹಾನಗಲ್, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
    *******

     

  • ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ: ವೇಣುಗೋಪಾಲ ನಾಯಕ

    ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ: ವೇಣುಗೋಪಾಲ ನಾಯಕ

    ಸತ್ಯಕಾಮ ವಾರ್ತೆ ಹುಣಸಗಿ:

    ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಸ್ಥಳೀಯರು ಸಹಕರಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

    ಪಟ್ಟಣದ ವಿವಿಧ ವಾರ್ಡ್ಗಳಿಗೆ ಶನಿವಾರ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿದ ನಂತರ ಮಾತನಾಡಿ, ಪಟ್ಟಣದ ಪ್ರತಿಯೊಂದು ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿಸಿ‌ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು.

    ಪಟ್ಟಣದ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ  ಪರಿಹರಿಸಲಾಗುವುದು. ವಾರ್ಡ್ಗಳ ಸ್ವಚ್ಛತೆ, ಕುಡಿಯುವ ನೀರು ವಿಷಯದಲ್ಲಿ ಜನರಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಹಳ್ಳದ ಆಂಜನೇಯ ದೇವಸ್ಥಾನ ಕಿರು ಸೇತುವೆ ಈಗಾಗಲೇ ಬಿರುಕು ಬಿಟ್ಟಿದು ಅಪಾಯದಲ್ಲಿದೆ. ಭಕ್ತರ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಪ.ಪಂ.ಅನುದಾನದಲ್ಲಿ ಶಾಶ್ವತ ಸೇತುವೆಗೆ ಕ್ರಮಕೈಗೊಳ್ಳಿ ಎಂದು ಪ.ಪಂ.ಮುಖ್ಯಾಧಿಕಾರಿಗೆ ಸೂಚಿಸಿದ ಅವರು ಹೆಚ್ಚಿನ ಅನುದಾನ ಬೇಕಿದ್ದರೆ ಒದಗಿಸುವುದಾಗಿ ತಿಳಿಸಿದರು.

    ಚರಂಡಿ ನೀರು ಗದ್ದೆಯಲ್ಲಿ ಹರಿದು ಜನತಾ ಕಾಲೋನಿಯಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಶಾಸಕರ ಗಮನಕ್ಕೆ ನಿವಾಸಿಗರು ತಂದಾಗ ವರದಿ ಆಧಾರಿಸಿ ಸಮಸ್ಯೆ ಪರಿಹರಿಸಲು ಅಧಿಕಾರಿಗೆ ಸೂಚಿಸಲಾಯಿತು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ.ಪಂ.ಅಧ್ಯಕ್ಷ ತಿಪ್ಪಣ್ಣ ನಾಯಕ, ಪ.ಪಂ.ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಸದಸ್ಯರಾದ ಶರಣು ದಂಡಿನ್, ಸಿದ್ದು ಮುದಗಲ್, ಕಾಶೀಮ್‌ಸಾಬ ಟೊಣ್ಣೂರು ಹಾಗೂ ಆರ್.ಎಂ.ರೇವಡಿ, ಚನ್ನಯ್ಯಸ್ವಾಮಿ ಹಿರೇಮಠ, ಬಸವರಾಜ ಸಜ್ಜನ್, ಮಹಾದೇವಿ ಬೇನಾಳಮಠ, ಅರುಣ ಮಲಗಲದಿನ್ನಿ ಸೇರಿದಂತೆ ಇತರರಿದ್ದರು.

  • ಅಪಘಾತ ಪ್ರಕರಣ ಆರೋಪಿಗೆ ಜೈಲು ಶಿಕ್ಷೆ

    ಅಪಘಾತ ಪ್ರಕರಣ ಆರೋಪಿಗೆ ಜೈಲು ಶಿಕ್ಷೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಗೂಡೂರು ಗ್ರಾಮದ ಮದ್ಯದ ಹೊರಹೊಲಯದ ಹೊಲದ ಹತ್ತಿರ ಫೆಬ್ರವರಿ, 13, 2024 ರಲ್ಲಿ ಆಟೋರಿಕ್ಷಾದಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಕಮಲಮ್ಮ ಗಂಡ ನಾರಾಯಣ ಮಲಗಣಿ ಸಾ.ಮಡ್ಡಿಪೇಟ ಸಾವಿಗೆ ಕಾರಣವಾದ ಆರೋಪಿ ಮಹಾದೇವ ತಂದೆ ಬೀಗಯ್ಯ ಗುಲ್ಲೆ ಎಂಬಾತನಿಗೆ ಯಾದಗಿರಿಯ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ರಾಹುಲ್ ಚಾಂಬಾರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

    ಆರೋಪಿ ರಾಯಚೂರು ತಾಲೂಕಿನ ಚಂದ್ರಬAಡಾ ಗ್ರಾಮದವರಾಗಿದ್ದು, ಆರೋಪಿತನ ಟಂಟA ಆಟೋವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿ, ಆಟೋ ಮೇಲೆ ನಿಯಂತ್ರಣ ತಪ್ಪಿ ತಿರುವು ಮತ್ತು ಇಳಿಜಾರು ರಸ್ತೆಯ ಮೇಲೆ ಪಲ್ಟಿ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಕಮಲಮ್ಮ ಈಕೆಗೆ ಎಡ ಕಿವಿಗೆ ಹರಿದ ರಕ್ತ ಗಾಯ, ಎಡಗಡೆ ತಲೆಗೆ ಭಾರಿ ಒಳಪೆಟ್ಟಾಗಿ ಬಾವು ಬಂದು, ಎಡಗೈ ರಟ್ಟೆಗೆ ಭಾರೀ ತರಚಿದ ರಕ್ತಗಾಯ ಮತ್ತು ಹೊಟ್ಟೆಯಿಂದ ಟೊಂಕದವರೆಗೆ ಗಾಯಗಳಾದಾಗ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.

    ಸದರಿ ಅಪಘಾತ ನಡೆಸಿ ಆರೋಪಿತನು ಆಟೋವನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿರುತ್ತಾನೆ. ಆಟೋ ಓಡಿಸಲು ಅನುಮತಿ ಪತ್ರವು ಇರುವುದಿಲ್ಲ, ನೋಂದಣಿ ಮಾಡಿಸಿರುವುದಿಲ್ಲ. ಆಟೋದಲ್ಲಿ ಆಸನದ ಅರ್ಹತೆ ಮೀರಿ ಹೆಚ್ಚಿನ ಜನರನ್ನು ಸಾಗಿಸಿದ್ದರಿಂದ ಆರೋಪಿತನು ಅಪರಾಧ ಎಸಗಿರುತ್ತಾನೆ ಎಂದು ಪ್ರಕರಣದ ತನಿಖೆ ಹಾಗೂ ಸಾಕ್ಷಾಧಾರಗಳಿಂದ ಅಪರಾಧ ದೃಢಪಟ್ಟಿರುತ್ತದೆ.
    ಆದ್ದರಿಂದ ಆರೋಪಿತನ ವಿರುದ್ಧ 279, 337, 304 (ಎ) ಐಪಿಸಿ ಮತ್ತು 187, 192 (ಎ), 177 ಐ.ಎಮ್.ವಿ ಆ್ಯಕ್ಟ್ ದೋಷಾರೋಪಣೆ ಪತ್ರವನ್ನು ಸೈದಾಪುರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಎಸ್‌ಐ  ಬಾಲಚಂದ್ರ ಮತ್ತು ಗುರುಮಿಠಕಲ್ ತನಿಖಾಧಿಕಾರಿ ಸಿಪಿಐ ಪಿ.ಕೆ ಚೌಧರಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
    ಸದರಿ ಪ್ರಕರಣವು ಅಧಿವಿಚಾರಣೆ ಮಾಡಿ ಆರೋಪಿ ಮಾಡಿರುವ ಆರೋಪ ಸಾಬೀತಾಗಿದ್ದರಿಂದ  ಈತನ ವಿರುದ್ದ ಕಲಂ 279 ರ ಅಡಿಪಾಯ ಅಪರಾಧಕ್ಕಾಗಿ 1 ತಿಂಗಳ ಸಾಧಾರಣ ಶಿಕ್ಷೆ ಮತ್ತು 1 ಸಾವಿರ ದಂಡ. 337 ರ ಅಡಿಯಲ್ಲಿ ಅಪರಾಧಕ್ಕಾಗಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 500 ರೂ ದಂಡ, 304(ಎ) ಐಪಿಸಿ ಅಪರಾಧಕ್ಕಾಗಿ 1 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ಸದರಿಜುಲ್ಮಾನೆ ಪಾವತಿಸಲು ತಪ್ಪಿದ್ದಲ್ಲಿ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು, 187 ಐ ಎಮ್ ವಿ ಆ್ಯಕ್ಟ್ ಅಪರಾಧಕ್ಕಾಗಿ 5 ನೂರು ರೂಪಾಯಿ ದಂಡ ವಿಧಿಸಿದ್ದು, ಜುಲ್ಮಾನೆ ತಪ್ಪಿದಲ್ಲಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು ಎಂದು ತಿಳಿಸಿದ್ದಾರೆ.

    ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುನಂದ ಆರ್ ಅವರು ವಾದವನ್ನು ಮಂಡಿಸಿರುತ್ತಾರೆ.
  • ಪಡಿತರ ಆಹಾರ ಬಿಡುಗಡೆ

    ಪಡಿತರ ಆಹಾರ ಬಿಡುಗಡೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಅಕ್ಟೋಬರ್ 05, (ಕ.ವಾ) :ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಪಡಿತರ ಆಹಾರ ವಿತರಿಸಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಅನೀಲ ಕುಮಾರ ಡವಳಗಿ ಅವರು ತಿಳಿಸಿದ್ದಾರೆ.

    ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ 2024ರ ಅಕ್ಟೋಬರ್ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯ ಎಎವೈ  (AAY)28,550 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ ಹಾಗೂ ಬಿಪಿಎಲ್  (BPL) 8,82,101 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 3 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಮತ್ತು 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುವುದು.

    2024ರ ಅಕ್ಟೋಬರ್ ಮಾಹೆಯ ಆಹಾರಧಾನ್ಯ ಪಡೆಯಲು ಇಚ್ಚೆಯನ್ನು ವ್ಯಕ್ತಪಡಿಸಲು ಆಧ್ಯತೇತರ (ಂPಐ) 4,832 ಪಡಿತರ ಚೀಟಿಗಳಿದ್ದು, ಸದರಿ APLಪಡಿತರ ಚೀಟಿಯ ಫಲಾನುಭವಿಗಳ ಪೈಕಿ ಏಕ ಸದಸ್ಯರ ಪಡಿತರ ಚೀಟಿಗಳಿಗೆ 5 ಕೆಜಿ ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಿಗೆ 10 ಕೆಜಿ ಅಕ್ಕಿ ಯನ್ನು ಪ್ರತಿ ಕೆಜಿಗೆ 15ರೂ. ರಂತೆ ನೀಡಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಜಿಲ್ಲೆಯ ಎಲ್ಲಾ 403 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಒ.ಟಿ.ಪಿ ಮುಖಾಂತರ ಅಥವಾ ಬೆರಳಚ್ಚನ್ನು, ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು  (Point of Sale POS Shop Module)   ವ್ಯವಸ್ಥೆ ಮಾಡಲಾಗಿದೆ ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪಡಿತರ ಚೀಟಿ ಪ್ರಕಾರ ತಿಳಿದುಕೊಂಡು ಆಹಾರ ಧಾನ್ಯ ಪಡೆದುಕೊಳ್ಳಬಹುದಾಗಿರುತ್ತದೆ. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ದೂ.ಸಂ 08473 253707, ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ : ಹೆಡಗಿಮದ್ರಾ ಶ್ರೀ

    ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ : ಹೆಡಗಿಮದ್ರಾ ಶ್ರೀ

    ಸತ್ಯಕಾಮ ವಾರ್ತೆ ಯಾದಗಿರಿ :

    ಹಿರಿಯ ರಾಜಕಾರಣಿಯಾಗಿದ್ದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಬದುಕಿನ ಹೆಚ್ಚುಕಾಲ ಜನ ಸೇವೆಯಲ್ಲಿಯೇ ಕಳೆದರು, ಅವರು ಜೀವನದ ಅತಿಹೆಚ್ಚು ದಿನಗಳ ನ್ಯಾಯ, ನೀತಿ, ಧರ್ಮ ಪರಿಪಾಲನೆ ಹೀಗೆ ಸಾಮಾಜಿಕ ಜೀವನದಲ್ಲಿಯೇ ಕಳೆದರು ಎಂದು ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿಶ್ವರ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

    ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ, ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಾಟಕ ಮಾಡಿ ಬದುಕುವುದಕ್ಕಿಂತ ನೇರ ದಿಟ್ಟ ನಡೆ ನುಡಿಯಿಂದ ಬದುಕುಬೇಕು ಎಂಬುದು ಅವರ ತತ್ವವಾಗಿತ್ತು, ಜೀವನದುದ್ದಕ್ಕೂ ಕೂಡ ಅವರು ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕರಾಗಿಯೇ ಜೀವನ ನಡೆಸಿದರು ಎಂದು ಹೇಳಿದರು.

    ಯಾದಗಿರಿ ಜಿಲ್ಲೆಯಲ್ಲಿ ರಾಜಕೀಯ ಜೀವನದಲ್ಲಿ ಹೆಚ್ಚಿನ ಅಭಿವೃದ್ದಿಗಳನ್ನು ಮಾಡಿದ್ದಾರೆ ಅವರ ಆತ್ಮಕ್ಕೆ ದೇವರು ಶಾತಿ ನೀಡಲಿ ಎಂದು ತಿಳಿಸಿದರು.

    ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಅವರು ರಾಜಕೀಯ ಜೀವನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಸದಾ ಜನರ ಕಾಳಜಿವಹಿಸುವ ಓರ್ವ ನಾಯಕರಾಗಿದ್ದರು ನ್ಯಾಯ, ನೀತಿಯಂತೆ ಬದುಕು ನಡೆಸಿದ ಒಬ್ಬ ಜನ ನಾಯಕರು ವೆಂಕಟರೆಡ್ಡಿಗೌಡ ಮುದ್ನಾಳ ಆಗಿದ್ದರು ಎಂದು ಹೇಳಿದರು.

    ದಾಸಬಾಳ ಶ್ರೀ ಮಠದ ಸದ್ಗುರು ವೀರೇಶ್ವರ ಮಹಾಸ್ವಾಮಿಗಳು ಮಾತನಾಡಿ, ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕೇವಲ ಜನ ನಾಯಕರಾಗಿರದೇ ಜನ ಪ್ರೀತಿಯ ನಾಯಕರಾಗಿದ್ದರು, ಜೀವನವಿಡಿ ಮತಕ್ಷೇತ್ರದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕರಾಗಿದ್ದರು ಎಂದು ಹೇಳಿದರು.

    ಸೊಪ್ಪಿಮಠಡ ಶ್ರಿಗಳಾದ ಚನ್ನಕೇಶವ ಮಹಾಸ್ವಾಮಿಗಳು. ವಿಶ್ವಕರ್ಮ ಏಕದಂಡಗಿ ಮಠದ ಕುಮಾರ ಮಹಾಸ್ವಾಮಿಗಳು ಮಾತನಾಡಿದರು.

    ಈ ಸಂದರ್ಭದಲ್ಲಿ ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ. ರಾಚಣ್ಣಗೌಡ ಮುದ್ನಾಳ. ಮಹೇಶರೆಡ್ಡಿ ಗೌಡ ಮುದ್ನಾಳ. ಹಣಮಂತರೆಡ್ಡಿ ಗೌಡ ಮುದ್ನಾಳ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ. ಶರಣಪ್ಪಗೌಡ ಮಲ್ಹಾರ. ವೀರಶೈವ ಸಮಾಜದ ಗೌರವ ಅಧ್ಯಕ್ಷ ಎಸ್ ಬಿ ಪಾಟೀಲ. ಸಿ ಎಸ್ ಮಾಲಿಪಾಟೀಲ. ಚನ್ನಬಸರೆಡ್ಡಿ ಗೌಡ ಮುದ್ನಾಳ. ಸೋಮಶೇಖರ್ ಮಣ್ಣೂರ. ಬಸವಂತ್ರಾಯ ಗೌಡ ಮಾಲಿ ಪಾಟೀಲ. ಗೂಂಡುರಾವ ಪಂಚೇತ್ರಿ. ಬಸವರಾಜ ಮೋಟ್ನಳ್ಳಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ನಾಗರತ್ನ ಕುಪ್ಪಿ. ನಾಗರತ್ನ ಅನಪೂರ. ಅನ್ನಪೂರ್ಣ ಜವಳಿ ವೀಣಾ ಮೋದಿ. ಸುನೀತಾ ಚವ್ಹಾಣ. ನಾಗೇಂದ್ರ ಜಾಜಿ. ಸಿದ್ದರಾಜ ರೆಡ್ಡಿ ರಾಜಶೇಖರ ಕಿಲ್ಲನಕೇರಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ಚೆನ್ನಪ್ಪ ಸಾಹುಕಾರ. ಇತರರು ಇದ್ದರು

  • ವಿದ್ಯಾರ್ಥಿಗಳ ಮನೋಭಾವ ಅರಿತು ಶಿಕ್ಷಣ ನೀಡಬೇಕಾಗಿದೆ – ಶ್ರೀನಿವಾಸ

    ವಿದ್ಯಾರ್ಥಿಗಳ ಮನೋಭಾವ ಅರಿತು ಶಿಕ್ಷಣ ನೀಡಬೇಕಾಗಿದೆ – ಶ್ರೀನಿವಾಸ

    ಸತ್ಯಕಾಮ ವಾರ್ತೆ ಗುರುಮಠಕಲ್ :

    ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ರೂಪಿಸುವ ಶಿಕ್ಷಕನ ಮೇಲೆ ಅತಿಹೆಚ್ಚು ಜವಾಬ್ದಾರಿ ಇದೆ. ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಮನೋಭಾವನೆಯನ್ನು ಅರಿತು ಅವರಿಗೆ ಶಿಕ್ಷಣ ನೀಡಬೇಕಿದೆ. ಶಿಕ್ಷಣದ ಆಳವನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ ಎಂದು ಪ್ರಾದೇಶಿಕ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಪಾಟೀಲ್ ಸೇಡಂ ಹೇಳಿದರು.

    ಪಟ್ಟಣದ ಖಾಸಮಠ ಆವರಣದಲ್ಲಿ ಲಾಯನ್ಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಗುರುಮಠಕಲ್ ಸೇವಾ ಸದನ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಗುರುವಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

    ಇದೇ ಸಂಧರ್ಭದಲ್ಲಿ ಗುರುಮಠಕಲ್ ಲಯನ್ಸ್ ಕ್ಲಬ್ ಸೇವಾ ಸಾಧನ ಅಧ್ಯಕ್ಷ ಸಂತೋಷ ಕುಮಾರ್ ನೀರೇಟಿ ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಮಕ್ಕಳಿಗೆ ಪ್ರಾಚೀನ ಮತ್ತು ಪ್ರಸ್ತುತ ಸಮಾಜದ ಆಗುಹೋಗುಗಳ ಕುರಿತು ಭೋದನೆ ಮಾಡಬಹುದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಠಬೋಧನೆ ಮಾಡಿದರೆ ಮಾತ್ರ ನೀವು ಮಕ್ಕಳ ಗಮನ ಸೆಳೆಯಬಹುದು ಎಂದರು.

    ಕಾರ್ಯಕ್ರಮದಲ್ಲಿ ತಾಲೂಕಿನ ಸಮಾರು 300ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.

    ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರವೃತ್ತಿಯನ್ನಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಕ್ಲಸ್ಟರ್ ನ 17 ಶಿಕ್ಷಕರನ್ನು ಆಯ್ಕೆ ಮಾಡಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿದರು. ಶಶಿಕಾಂತ್ ಜನಾರ್ಧನ್ ನಿರೂಪಣೆ ಮಾಡಿದರು.

     

    ಈ ಸಂಧರ್ಭದಲ್ಲಿ ಅಖಂಡೇಶ್ವರ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಭೀಮಪ್ಪ ಮನ್ನೆ, ಉಪಾಧ್ಯಕ್ಷರಾದ ಶ್ರೀನಿವಾಸ್ ಮಡಿವಾಳ,ಸಿಆರ್‌ಪಿ ಸಿದ್ದಲಿಂಗಪ್ಪ ನೆಲ್ಲೋಗಿ, ಬಾಲಪ್ಪ ಸಿರಿಗೆಮ್, ರಾಮಕೃಷ್ಣ, ಪ್ರಕಾಶ್, ವೀರಾಶಾಸ್ತ್ರಿ, ರವೀಂದ್ರ ಚೌಹಾಣ, ಬಾಲಪ್ಪ ಸಿರಿಗಂ, ಸಿದ್ದು ಕಂದಕುರ್,ರಾಜೇಂದ್ರ, ಆಂಜನೇಯ, ವಿಜಯಲಕ್ಷ್ಮಿ ನಿಲ್ಲೋಗಿ, ಗಾಯತ್ರಿ ನಾಯಕಿನ್ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

  • ಸತ್ಯಕಾಮ ಪ್ರತಿಫಲ: “ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯಾರಂಭ”

    ಸತ್ಯಕಾಮ ಪ್ರತಿಫಲ: “ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯಾರಂಭ”

    ಸತ್ಯಕಾಮ ಪ್ರತಿಫಲ: ಎಲ್ಲರಿಗಿಂತ ಮೊದಲು ಸುದ್ದಿ ಪ್ರಕಟಿಸಿದ್ದೇ ನಾವು

     

    ಸತ್ಯಕಾಮ ವಾರ್ತೆ ಗುರುಮಠಕಲ್ :

    ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ಕುಸಿತದ ಬಗ್ಗೆ ಇತ್ತೀಚಿಗೆ ದಿ. 21 ಸೆಪ್ಟೆಂಬರ್ ರಂದು “ಶಾಲಾ ಕೊಠಡಿಯ ಮೇಲ್ಪಾವಣಿಯ ಸಿಮೆಂಟ್ ಕುಸಿತ; ತಪ್ಪಿದ ಭಾರಿ ಅನಾಹುತ” ಶೀರ್ಷಿಕೆ ಅಡಿಯಲ್ಲಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು, ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯ ಮಾಡುವಲ್ಲಿ ಮುಂದಾಗಿದ್ದಾರೆ.

    ಗುರುಮಠಕಲ್ : ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ದುರಸ್ಥಿಗೋಳಿಸುತ್ತಿರುವ ದೃಶ್ಯ.
    ಗುರುಮಠಕಲ್ : ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ದುರಸ್ಥಿಗೋಳಿಸುತ್ತಿರುವ ದೃಶ್ಯ.

     

    ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನೂತನ ಕೋಠಡಿಗಳನ್ನು ಹಸ್ಥಾಂತರಿಸಿ ಒಂದು ವರ್ಷವು ಕಳೆಯುವ ಮುನ್ನ ಗುರುವಾರ ಜರುಗಿದ ಅನಾಹುತವನ್ನು ಬೆಳಕಿಗೆ ತಂದ ಕೂಡಲೇ ಶಾಲೆಗೆ ಭೇಟಿ ನೀಡಿ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರ್ ಮಾಡಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ, ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಲ್ಲಿ ಸಂತಸ ತಂದಿದೆ ಹಾಗೂ ಮುಂದಿನ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವಂತೆ ತಾಕೀತು ಮಾಡಿದರು.

     

    ಕಳೆದ ೨೦೨೨-೨೩ ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಿತಿ ಕೇಂದ್ರದವರಿಂದ ನಿರ್ಮಿಸಲಾದ ನಾಲ್ಕು ಕೋಠಡಿಗಳನ್ನು ನ. ೦೨ ರಂದು ಶಾಲೆಗೆ ಹಸ್ಥಾಂತರಿಸಲಾಗಿತ್ತು.

    —————————————

    ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಮೆಲ್ಚಾವಣಿಯ ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರಿಂಗ್ ಮಾಡಿಸಿಕೊಟ್ಟಿದ್ದೇವೆ.

    ಅಬ್ದುಲ್ ನಭಿ, ಯೋಜನಾ ಅಭಿಯಂತರರು ನಿರ್ಮಿತಿ ಕೇಂದ್ರ.

    ———————–

    ಮೆಲ್ಚಾವಣಿಯ ಪ್ಲಾಸ್ಟರ್ ಅವೈಜ್ಞಾನಿಕವಾಗಿ ಮಾಡಿದ್ದು ಅವಶ್ಯಕತೆಗಿಂತಲು ಹೆಚ್ಚಾಗಿ ಸಿಮೆಂಟ್ ಹಾಕಲಾಗಿದೆ. ಇಂದು ಗಂಗಾವತಿಯ ಅಂಗನವಾಡಿಯಲ್ಲಿಯೂ ಇದೇ ರೀತಿ ಘಟನೆ ಜರುಗಿದ್ದು ಅಧಿಕಾರಿಗಳು ಶಾಲೆಗಳಿಗೆ ಹಸ್ತಂತರಿಸುವ ಮುನ್ನ ಗುಣಮಟ್ಟತೆ ಕಾಯ್ದಕೊಳ್ಳಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಬೇಕಾಗಿತ್ತದೆ-

    ನಾಗೇಶ ಗದ್ದಗಿ, ಗುರುಮಠಕಲ್ ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗುರುಮಠಕಲ್.

  • ನಾಳೆ ಅರಕೇರಾ.ಕೆ ಗ್ರಾಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭೇಟಿ.

    ನಾಳೆ ಅರಕೇರಾ.ಕೆ ಗ್ರಾಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭೇಟಿ.

    ಸತ್ಯಕಾಮ ವಾರ್ತೆ ಯಾದಗಿರಿ:

    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬುಧವಾರ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11-30 ಗಂಟೆಗೆ ಯಾದಗಿರಿ ತಾಲೂಕಿನ ಅರಕೇರಾ .ಕೆ ಗ್ರಾಮ ದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ 2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ವಾರದಲ್ಲಿ 6 ದಿನಗಳ ಪೂರಕ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವರು.

    ಅಂದು ಮಧ್ಯಾಹ್ನ 2-30ಗಂಟೆಗೆ ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲಬುರ್ಗಿ ವಿಭಾಗ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಂಜೆ 6-30 ಗಂಟೆಗೆ ಕಲಬುರ್ಗಿ ಗೆ ಪ್ರಯಾಣ ಬೆಳೆಸುವರು.

  • ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್

    ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್

    ಬೆಂಗಳೂರು: ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್ ಎದುರಾಗಿದೆ. ಮುಡಾ ಸೈಟು ಅಕ್ರಮ ಹಂಚಿಕೆ ಪ್ರಕರಣವನ್ನು ತನಿಖೆ ನಡೆಸಲು ಗೌರ್ನರ್ ನೀಡಿದ್ದ ಅನುಮತಿ ಪ್ರಕ್ರಿಯೆಗೆ ಹೈಕೋರ್ಟ್ ಅಸ್ತು ಎಂದಿದೆ. ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿರುವ ನ್ಯಾಯಮೂರ್ತಿ ನಾಗ ಪ್ರಸನ್ನ ನೇತೃತ್ವದ ಪೀಠ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.

    ಗೌರ್ನರ್ ಆದೇಶವನ್ನು ಹೈಕೋರ್ಟ್ ಪೀಠ ಎತ್ತಿ ಹಿಡಿದಿದ್ದು ದೂರುದಾರರಾದ ಸ್ನೇಹ ಮಯಿ ಕೃಷ್ಣ, ಪ್ರದೀಪ್ ಹಾಗೂ ಟಿ.ಜೆ ಅಬ್ರಹಾಂ ಅವರ ವಾದಕ್ಕೆ ಮನ್ನಣೆ ಸಿಕ್ಕಿದೆ. ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಫಲಾನುಭವಿ ಆಗಿದೆ ಹಾಗಾಗಿ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಹೈ ಕೋರ್ಟ್ನ ಈ ತೀರ್ಪನ್ನು ವಿಭಾಗಿಯ ಪೀಠದಲ್ಲಿ ಪ್ರಶ್ನೆ ಮಾಡುವುದಾಗಿ ಮತ್ತು ಪ್ರಶ್ನಿಸುವದಾಗಿ ಸಿದ್ದರಾಮಯ್ಯ ಪರ ವಕೀಲರು ಹೇಳಿದ್ದಾರೆ.

    ಮುಡಾ ಅಸ್ತ್ರ ಮುಂದಿಟ್ಟು ಸಿದ್ಧರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರ ನಿಂತಿತ್ತು. ಇದೀಗ ಮತ್ತೆ ಪಕ್ಷಗಳ ಬಾಯಲ್ಲಿ ಸಿಎಂ ರಾಜೀನಾಮೆ ಕೊಟ್ಟು ಕೇಳಿ ಬಂದರು ಆಶ್ಚರ್ಯವಿಲ್ಲ.

  • ಸಿಂಧೂ ನಾಗರಿಕತೆ ಪರಿಚಯದ ಶತಮಾನೋತ್ಸವ ಸಂಭ್ರಮ!

    ಸಿಂಧೂ ನಾಗರಿಕತೆ ಪರಿಚಯದ ಶತಮಾನೋತ್ಸವ ಸಂಭ್ರಮ!

    ಸಿಂಧೂ ನಾಗರಿಕತೆ, ಮೆಸಪೊಟಮಿಯಾ ಮತ್ತು ಈಜಿಪ್ಟ್‌ ನಾಗರಿಕತೆಗಳನ್ನು ಪ್ರಪಂಚದ ಮೂರು ಆರಂಭಿಕ ನಾಗರಿಕತೆಗಳೆಂದು ಗುರುತಿಸಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ಸಿಂಧೂ ನಾಗರಿಕತೆಯು ಬಹು ವಿಸ್ತಾರವಾದದ್ದು. ಸಿಂಧೂ ನಾಗರಿಕತೆ ಅಥವಾ ಸಿಂಧೂ ಕಣಿವೆ ನಾಗರಿಕತೆ ಅಥವಾ ಹರಪ್ಪನ್ ನಾಗರಿಕತೆ ಎಂದೂ ಕರೆಯಲ್ಪಡುವ ಇದು, ಭಾರತದ ಅತ್ಯಂತ ಪ್ರಾಚೀನ ನಗರ ಸಂಸ್ಕೃತಿಯಾಗಿದೆ. ಅಮೆರಿಕದ ಖ್ಯಾತ ಇತಿಹಾಸಕಾರ ಮತ್ತು ತತ್ವಜ್ಞಾನಿ ವಿಲಿಯಂ ಜೇಮ್ಸ್‌ ಡ್ಯೂರಾಂಟ್‌ ಅವರ ಪ್ರಕಾರ, ಈಜಿಪ್ಟ್‌ ನಾಗರಿಕತೆಗಿಂತಲೂ ಸಿಂಧೂ ನಾಗರಿಕತೆ ಹಳೆಯದು! ಈ ನಾಗರಿಕತೆಯ ಪ್ರದೇಶವು ಸಿಂಧೂ ನದಿಯ ಉದ್ದಕ್ಕೂ ಈಶಾನ್ಯ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಮತ್ತು ವಾಯುವ್ಯ ಭಾರತದವೆಗೂ ವಿಸ್ತರಿಸಿದೆ. ಈ ಕಾರಣಕ್ಕಾಗಿಯೇ ಸಿಂಧೂ ನದಿಯನ್ನು ʻಭಾರತದ ನಾಗರಿಕತೆಯ ತೊಟ್ಟಿಲುʼ ಎಂದು ಕರೆಯಲಾಗುತ್ತದೆ. ಈ ನಾಗರಿಕತೆಯು ಮುಖ್ಯವಾಗಿ ಹರಪ್ಪಾ ಮತ್ತು ಮೊಹೆಂಜೊದಾರೊ ಎಂಬ ಎರಡು ಬೃಹತ್‌ ನಗರಗಳನ್ನು ಹೊಂದಿತ್ತು. ಇವು ಕ್ರಿಸ್ತಪೂರ್ವ 2600ರಲ್ಲಿ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಸಿಂಧೂ ನದಿ ಕಣಿವೆಯ ಉದ್ದಕ್ಕೂ ಕಂಡುಬಂದವು. 19ನೇ ಮತ್ತು 20ನೇ ಶತಮಾನಗಳಲ್ಲಿ ಜರುಗಿದ ಸಂಶೋಧನೆ ಮತ್ತು ಉತ್ಖನನವು ಈ ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಪ್ರಮುಖ ಪುರಾತತ್ತ್ವದ ಮಾಹಿತಿಯನ್ನು ಸಂಪೂರ್ಣವಾಗಿ ಒದಗಿಸಿದವು.

    ಕ್ರಿಸ್ತ ಶಕ 1856ರಲ್ಲಿ ಬ್ರಿಟಿಷರು ಸಿಂಧ್‌ನಲ್ಲಿ ರೈಲ್ವೇ ಮಾರ್ಗ ಹಾಕಲು ಒಂದು ದಿಬ್ಬವನ್ನು ಅಗೆದರು. ಆಗ ಭೂಮಿಯಲ್ಲಿ ಸುಟ್ಟ ಇಟ್ಟಿಗೆಗಳು ಕಾಣಲು ಸಿಕ್ಕವು. 1861ರಲ್ಲಿ ಪುರಾತತ್ವ ಇಲಾಖೆಯನ್ನು ಅಲೆಕ್ಸಾಂಡರ್‌ ಕನ್ನಿಂಗ್‌ಹ್ಯಾಮ್‌ ಅವರು ಸ್ಥಾಪಿಸಿ, 1862ರಲ್ಲಿ ಸುಟ್ಟ ಇಟ್ಟಿಗೆಗಳ ಜೊತೆಗೆ ಮುದ್ರೆಗಳನ್ನೂ ಪತ್ತೆ ಮಾಡಿದರು. ಇವರನ್ನು ಭಾರತದ ಪುರಾತತ್ವ ಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ನಂತರ 1902ರಲ್ಲಿ ಎಎಸ್‌ಐ ನಿರ್ದೇಶಕನಾಗಿ ಸರ್‌ ಜಾನ್‌ ಹಬರ್ಟ್ ಮಾರ್ಷಲ್‌ರನ್ನು ನೇಮಿಸಲಾಯಿತು. ಇವರ ಸಂಶೋಧನೆ ಮತ್ತು ಉತ್ಖನನ ಪ್ರಯತ್ನಗಳಿಂದ 1922ರ ಸಮಯಕ್ಕೆ ಸಿಂಧೂ ನಾಗರಿಕತೆ ಬೆಳಕಿಗೆ ಬಂದಿತು. ಈ ಕುರಿತಾದ ಮೊದಲ ಚಿತ್ರವನ್ನು ಸರ್‌ ಜಾನ್‌ ಮಾರ್ಷಲ್‌ ಅವರು 1924ರ ಸೆಪ್ಟೆಂಬರ್‌ 20ರಂದು ʻಇಲಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌ʼ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿ, ನಮ್ಮ ನಾಗರಿಕತೆಯನ್ನು ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಿದರು. ಈ ಪ್ರಕಟಣೆಗೆ ಭರ್ತಿ ಈಗ 100 ವರ್ಷ!

    1921ರಲ್ಲಿ ದಯಾರಾಮ್‌ ಸಹಾನಿ ಹರಪ್ಪ ನಗರವನ್ನು; 1922ರಲ್ಲಿ ಆರ್‌ ಡಿ ಬ್ಯಾನರ್ಜಿ ಅವರು ಮೊಹೆಂಜೊದಾರೊ ನಗರವನ್ನು ಪತ್ತೆ ಮಾಡಿದರು. ತದನಂತರ ಹರಪ್ಪನ್ ನಾಗರಿಕತೆಯ ವಿವಿಧ ಹಂತಗಳಲ್ಲಿ ವಿವಿಧ ಪ್ರದೇಶಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಯಿತು:

    • ಅವಧಿ – ಕ್ರಿ.ಪೂ 7000 – ಕ್ರಿ.ಪೂ 5500: ಈ ನವಶಿಲಾಯುಗದ ಅವಧಿಯನ್ನು ಮೆಹರ್‌ಗಢ್‌ನಂತಹ ತಾಣಗಳು ಅತ್ಯುತ್ತಮವಾಗಿ ಉದಾಹರಿಸುತ್ತವೆ. ಇದು ಕೃಷಿ ಅಭಿವೃದ್ಧಿ; ಸಸ್ಯ ಮತ್ತು ಪ್ರಾಣಿಗಳ ಪಳಗಿಸುವಿಕೆ; ಉಪಕರಣಗಳು ಮತ್ತು ಪಿಂಗಾಣಿಗಳ ಉತ್ಪಾದನೆಯ ಪುರಾವೆಗಳನ್ನು ತೋರಿಸುತ್ತದೆ.
    • ಅವಧಿ – ಕ್ರಿ.ಪೂ 5500 – ಕ್ರಿ.ಪೂ 2800: ಈಜಿಪ್ಟ್, ಮೆಸಪೊಟಮಿಯಾ ಮತ್ತು ಚೀನಾದೊಂದಿಗೆ ವ್ಯವಹರಿಸುತ್ತಿದ್ದ ಸಮಯವಿದು. ಸಣ್ಣ ಹಳ್ಳಿಗಳಲ್ಲಿ ವಾಸಿಸುವ ಜನರಿಂದ ಬಂದರುಗಳು, ಹಡಗುಕಟ್ಟೆಗಳು ಮತ್ತು ಗೋದಾಮುಗಳನ್ನು ಜಲಮಾರ್ಗಗಳನ್ನು ನಿರ್ಮಿಸಲಾಯಿತು.
    • ಅವಧಿ – ಕ್ರಿ.ಪೂ 2800 – ಕ್ರಿ.ಪೂ 1900: ಈ ಸಮಯದಲ್ಲಿ ಮಹಾನಗರಗಳ ನಿರ್ಮಾಣ ಮತ್ತು ವ್ಯಾಪಕವಾದ ನಗರೀಕರಣವಾಯಿತು. ಹರಪ್ಪಾ ಮತ್ತು ಮೊಹೆಂಜೊದಾರೋ ಎರಡೂ ನಗರಗಳು ಪ್ರವರ್ಧಮಾನಕ್ಕೆ ಬಂದವು.
    • ಅವಧಿ – ಕ್ರಿ.ಪೂ 1900 – ಕ್ರಿ.ಪೂ 1500: ಈ ಸಮಯವು ಈ ನಾಗರಿಕತೆಯ ಅವನತಿಯನ್ನು ಸೂಚಿಸುತ್ತದೆ. ಹವಾಮಾನ ಬದಲಾವಣೆಯು ಪ್ರವಾಹ, ಬರ ಮತ್ತು ಕ್ಷಾಮದಿಂದಾಗಿ ಈ ನಾಗರಿಕತೆ ನಶಿಸಿತು ಎಂದು ಕೆಲ ಅಧ್ಯಯನಗಳು ಹೇಳುತ್ತವೆ.
    • ಅವಧಿ – ಕ್ರಿ.ಪೂ 1500 – ಕ್ರಿ.ಪೂ 600: ಈ ಸಮಯದಲ್ಲಿ ಜನರು ನಗರಗಳನ್ನು ತೊರೆದರು. ಕ್ರಿ.ಪೂ 530ರಲ್ಲಿ ಎರಡನೇ ಸೈರಸ್ ಭಾರತವನ್ನು ಆಕ್ರಮಿಸುವ ಹೊತ್ತಿಗೆ ಈ ನಾಗರಿಕತೆಯು ಸಂಪೂರ್ಣವಾಗಿ ಕುಸಿದಿತ್ತು ಎಂದು ಅಧ್ಯಯನಗಳು ಹೇಳುತ್ತವೆ.

     

    ಸಿಂಧೂ ನಾಗರಿಕತೆಯ ನಗರ ವ್ಯವಸ್ಥೆ:

    ಸಿಂಧೂ ಕಣಿವೆ ನಾಗರಿಕತೆಯು ಸುಸಜ್ಜಿತ ನಗರ, ಸಂಘಟಿತ ಮೂಲಸೌಕರ್ಯ, ವಾಸ್ತುಶಿಲ್ಪ ಮತ್ತು ಆಡಳಿತ ವ್ಯವಸ್ಥೆಗಳನ್ನು ಒಳಗೊಂಡಿತ್ತು. ಕ್ರಿ.ಪೂ 2600ರ ಹೊತ್ತಿಗೆ, ಸಣ್ಣ ಹರಪ್ಪನ್ ಸಮುದಾಯಗಳು ದೊಡ್ಡ ನಗರ ಕೇಂದ್ರಗಳಾಗಿ ಮಾರ್ಪಟ್ಟವು. ಈ ನಗರಗಳಲ್ಲಿ ಹರಪ್ಪಾ, ಗನೇರಿವಾಲಾ, ಮೊಹೆಂಜೊದಾರೋ, ಧೋಲವೀರಾ, ಕಾಲಿಬಂಗನ್, ರಾಖಿಗರ್ಹಿ, ರೂಪಾರ್ ಮತ್ತು ಲೋಥಲ್ ಸೇರಿವೆ. ಒಟ್ಟಾರೆಯಾಗಿ, ಸಿಂಧೂ ನದಿ ಮತ್ತು ಅದರ ಉಪನದಿಗಳ ಸಾಮಾನ್ಯ ಪ್ರದೇಶದಲ್ಲಿ 1,052 ಕ್ಕೂ ಹೆಚ್ಚು ನಗರಗಳು ಕಂಡುಬಂದಿವೆ. ಸಿಂಧೂ ಕಣಿವೆ ನಾಗರಿಕತೆಯ ಜನಸಂಖ್ಯೆಯು ಐದು ದಶಲಕ್ಷದಷ್ಟು ಇರಬಹುದು ಎಂದು ಅಧ್ಯಯನಗಳಿಂದ ಅಂದಾಜಿಸಲಾಗಿದೆ. ಸುಸಜ್ಜಿತವಾದ ತ್ಯಾಜ್ಯನೀರಿನ ಒಳಚರಂಡಿ ವ್ಯವಸ್ಥೆ, ಕಸ ಸಂಗ್ರಹ ವ್ಯವಸ್ಥೆಗಳು ಮತ್ತು ಸ್ನಾನಗೃಹಗಳು ಸಹ ಇದ್ದವು. ನಗರ ಯೋಜನೆಯ ಗುಣಮಟ್ಟವು ನೈರ್ಮಲ್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಮರ್ಥ ಪುರಸಭೆಯಂತಹ ಸರ್ಕಾರಗಳನ್ನು ಹೊಂದಿದ್ದವು ಎಂದರೆ ಆಶ್ಚರ್ಯ ಎನಿಸದೇ ಇರಲಾರದು! ಇತಿಹಾಸಕಾರ ಕೆ ಎ ನೀಲಕಂಠಶಾಸ್ತ್ರಿಗಳು, ʻಸಿಂಧೂ ನಾಗರಿಕತೆಯ ಜನರ ನಗರ ಯೋಜನೆಯ ನಿರ್ದಿಷ್ಟತೆ ಮತ್ತು ಏಕರೂಪತೆಗಳ ಜೊತೆಗೆ ನೈರ್ಮಲ್ಯೀಕರಣ ವ್ಯವಸ್ಥೆಗಳು ಮೆಚ್ಚುಗೆಗೆ ಅರ್ಹವಾಗಿವೆʼ ಎಂದು ಬರೆದಿದ್ದಾರೆ.

     

    ಸಮಾಜ ಮತ್ತು ರಾಜಕೀಯ ವ್ಯವಸ್ಥೆ

    ಪುರಾತತ್ತ್ವ ಶಾಸ್ತ್ರದ ದಾಖಲೆಗಳ ಪ್ರಕಾರ, ಹರಪ್ಪ ಕಾಲದ ಸಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಕುರಿತು ಸ್ಪಷ್ಟ ಚಿತ್ರಣವಿಲ್ಲ. ಇತಿಹಾಸಕಾರ ಡಾ. ಎ ಡಿ ಪುಸಾಲ್ಕರ್‌ ಅವರ ಪ್ರಕಾರ, ನಾಲ್ಕು ಸಾಮಾಜಿಕ ವರ್ಗಗಳಿದ್ದವು. ಅವುಗಳೆಂದರೆ, ಪುರೋಹಿತ ವರ್ಗ, ಕ್ಷತ್ರಿಯ ವರ್ಗ, ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರು. ಹರಪ್ಪನ್ ಆಡಳಿತ ಅಥವಾ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಸಿದ್ಧಾಂತಗಳು ಅಭಿವೃದ್ಧಿಗೊಂಡಿವೆ. ಮೊದಲನೆಯದು, ನಾಗರಿಕತೆಯ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಏಕೈಕ ರಾಜ್ಯವಿತ್ತು, ಕಲಾಕೃತಿಗಳಲ್ಲಿನ ಹೋಲಿಕೆ, ಯೋಜಿತ ವಸಾಹತುಗಳ ಪುರಾವೆಗಳು, ಇಟ್ಟಿಗೆ ಗಾತ್ರದ ಪ್ರಮಾಣಿತ ಅನುಪಾತವಿತ್ತು ಎಂದು ಈ ಸಿದ್ಧಾಂತ ಹೇಳುತ್ತದೆ. ಎರಡನೆಯ ಸಿದ್ಧಾಂತವು, ಒಬ್ಬನೇ ಆಡಳಿತಗಾರ ಇರಲಿಲ್ಲ ಎಂದು ಪ್ರತಿಪಾದಿಸುತ್ತದೆ. ಅಂತಿಮ ಸಿದ್ಧಾಂತವು ಸಿಂಧೂ ಕಣಿವೆ ನಾಗರಿಕತೆಗೆ ಆಡಳಿತಗಾರರಿರಲಿಲ್ಲ ಎಂದು ಹೇಳುತ್ತದೆ.

     

    ತಂತ್ರಜ್ಞಾನ

    ಹರಪ್ಪನ್ನರು ಏಕರೂಪದ ತೂಕ ಮತ್ತು ಅಳತೆಗಳ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರಲ್ಲಿ ಮೊದಲಿಗರು. ಆಧುನಿಕ ಭಾರತದ ಗುಜರಾತ್ ರಾಜ್ಯದಲ್ಲಿರುವ ಪ್ರಮುಖ ಸಿಂಧೂ ಕಣಿವೆಯ ನಗರವಾದ ಲೋಥಾಲ್‌ನಲ್ಲಿ ಕಂಡುಬರುವ ದಂತದ ಪ್ರಮಾಣದಲ್ಲಿ ಸರಿಸುಮಾರು 1.6 ಮಿಮೀ ಗುರುತಿಸಲಾಗಿದೆ. ಇದು ಕಂಚಿನ ಯುಗದ ಪ್ರಮಾಣದಲ್ಲಿ ದಾಖಲಾದ ಚಿಕ್ಕ ವಿಭಾಗವಾಗಿದೆ. ಸುಧಾರಿತ ಮಾಪನ ವ್ಯವಸ್ಥೆಯ ಇನ್ನೊಂದು ಸೂಚನೆಯೆಂದರೆ, ಸಿಂಧೂ ನಗರಗಳನ್ನು ನಿರ್ಮಿಸಲು ಬಳಸಿದ ಇಟ್ಟಿಗೆಗಳು ಗಾತ್ರದಲ್ಲಿ ಏಕರೂಪವಾಗಿದ್ದವು! ಹರಪ್ಪನ್ನರು ನೌಕಾನೆಲೆಗಳು, ಧಾನ್ಯಗಳು, ಗೋದಾಮುಗಳು, ಇಟ್ಟಿಗೆ ಮತ್ತು ರಕ್ಷಣಾತ್ಮಕ ಗೋಡೆಗಳೊಂದಿಗೆ ಸುಧಾರಿತ ವಾಸ್ತುಶಿಲ್ಪವನ್ನು ಹೊಂದಿದ್ದರು. ಹರಪ್ಪನ್ನರು ಸೀಲ್ ಕೆತ್ತನೆಯಲ್ಲಿ ಪ್ರವೀಣರಾಗಿದ್ದರು ಎಂದು ಭಾವಿಸಲಾಗಿದೆ. ಸೀಲ್‌ನ ಕೆಳಭಾಗದ ಮುಖಕ್ಕೆ ಮಾದರಿಗಳನ್ನು ಅಂಟಿಸಿ, ವ್ಯಾಪಾರ ಸರಕುಗಳ ಮೇಲೆ ಜೇಡಿಮಣ್ಣನ್ನು ಮುದ್ರೆ ಮಾಡಲು ವಿಶಿಷ್ಟವಾದ ಮುದ್ರೆಗಳನ್ನು ಬಳಸಿದರು. ಸೀಲುಗಳು ಸಿಂಧೂ ಕಣಿವೆಯ ನಗರಗಳಲ್ಲಿ ಸಾಮಾನ್ಯವಾಗಿ ಕಂಡುಹಿಡಿದ ಕಲಾಕೃತಿಗಳಲ್ಲಿ ಒಂದಾಗಿದೆ, ಆನೆಗಳು, ಹುಲಿಗಳು ಮತ್ತು ನೀರಿನ ಎಮ್ಮೆಗಳಂತಹ ಪ್ರಾಣಿಗಳ ಆಕೃತಿಗಳಿಂದ ಅಲಂಕರಿಸಲಾಗಿದೆ. ಹರಪ್ಪನ್ನರು ಲೋಹಶಾಸ್ತ್ರದಲ್ಲಿ ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸಿದರು. ತಾಮ್ರ, ಕಂಚು, ಸೀಸ ಮತ್ತು ತವರದೊಂದಿಗೆ ಕೆಲಸ ಮಾಡುವ ವೈಜ್ಞಾನಿಕ ಮತ್ತು ಅರೆ-ಅಮೂಲ್ಯ ರತ್ನದ ಕಾರ್ನೆಲಿಯನ್ ಉತ್ಪನ್ನಗಳನ್ನು ಬಳಸಿಕೊಂಡು ಸಂಕೀರ್ಣವಾದ ಕರಕುಶಲಗಳನ್ನು ಪ್ರದರ್ಶಿಸುತ್ತಿದ್ದರು ಎಂದು ತಿಳಿದು ಬಂದಿದೆ.

     

    ಕಲೆ

    ಸಿಂಧೂ ಕಣಿವೆಯ ಉತ್ಖನನ ಸ್ಥಳಗಳು ಶಿಲ್ಪಗಳು, ಮುದ್ರೆಗಳು, ಕುಂಬಾರಿಕೆ, ಚಿನ್ನದ ಆಭರಣಗಳು, ಟೆರಾಕೋಟಾ, ಕಂಚು ಮತ್ತು ಸ್ಟೀಟೈಟ್‌ನಲ್ಲಿನ ಅಂಗರಚನಾಶಾಸ್ತ್ರದ ವಿವರವಾದ ಪ್ರತಿಮೆಗಳನ್ನು ಒಳಗೊಂಡಂತೆ ಸಂಸ್ಕೃತಿಯ ಕಲೆಯ ಹಲವಾರು ವಿಭಿನ್ನ ಉದಾಹರಣೆಗಳನ್ನು ಅಧ್ಯಯನಗಳು ಬಹಿರಂಗಪಡಿಸಿವೆ. ಚಿನ್ನ, ಟೆರಾಕೋಟಾ ಮತ್ತು ಕಲ್ಲಿನ ಪ್ರತಿಮೆಗಳಲ್ಲಿ, “ಪ್ರೀಸ್ಟ್-ಕಿಂಗ್”ನ ಆಕೃತಿ, ಕೇವಲ 11 ಸೆಂ.ಮೀ. ಎತ್ತರದ “ಡ್ಯಾನ್ಸಿಂಗ್ ಗರ್ಲ್” ಎಂದು ಕರೆಯಲ್ಪಡುವ ಕಂಚಿನ ಮತ್ತೊಂದು ಪ್ರತಿಮೆ ಮತ್ತು ಕೆಲವು ನೃತ್ಯ ರೂಪಕಗಳ ಉಪಸ್ಥಿತಿಯನ್ನು ಸೂಚಿಸುವ ಭಂಗಿಯಲ್ಲಿ ಸ್ತ್ರೀ ಆಕೃತಿಯನ್ನು ತಯಾರಿಸಿರುವುದು ಕಂಡುಬಂದಿದೆ. ಶಿವನ ರುದ್ರತಾಂಡವ ಮೂರ್ತಿಯೊಂದು ದೊರೆತಿದ್ದು ಅದನ್ನು ನಟರಾಜ ಎಂದು ಗುರುತಿಸಲಾಗಿದೆ. ಈ ಪ್ರತಿಮೆಗಳ ಜೊತೆಗೆ, ಸಿಂಧೂ ನದಿ ಕಣಿವೆಯ ಜನರು ನೆಕ್ಲೇಸ್ಗಳು, ಬಳೆಗಳು ಮತ್ತು ಇತರ ಆಭರಣಗಳನ್ನು ತಯಾರಿಸಿದ್ದರು ಎಂದು ಅಧ್ಯಯನಗಳು ಹೇಳಿವೆ.

     

    ಲಿಪಿ

    ಹರಪ್ಪನ್ನರು ಸಂಕೇತಗಳನ್ನು ಒಳಗೊಂಡಿರುವ ಸಿಂಧೂ ಲಿಪಿಯನ್ನು ಬಳಸಿದ್ದಾರೆಂದು ನಂಬಲಾಗಿದೆ. ಕ್ರಿ.ಪೂ 3300-3200 ಸಮಯದಲ್ಲಿನ, ಕಾರ್ಬನ್-ಡೇಟ್ ಮಾಡಲಾದ ಹರಪ್ಪಾದಲ್ಲಿ ಜೇಡಿಮಣ್ಣು ಮತ್ತು ಕಲ್ಲಿನ ಫಲಕಗಳ ಮೇಲೆ ಲಿಖಿತ ಪಠ್ಯಗಳ ಸಂಗ್ರಹವನ್ನು ಕಂಡುಹಿಡಿಯಲಾಯಿತು. ಇದು ತ್ರಿಶೂಲ-ಆಕಾರದ, ಸಸ್ಯದಂತಹ ಗುರುತುಗಳನ್ನು ಒಳಗೊಂಡಿದೆ. ಈ ಸಿಂಧೂ ಲಿಪಿಯು ಸಿಂಧೂ ನದಿ ಕಣಿವೆಯ ನಾಗರಿಕತೆಯಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿತು. ಸೀಲುಗಳು, ಸೆರಾಮಿಕ್ ಮಡಕೆಗಳು ಮತ್ತು ಹನ್ನೆರಡು ಇತರ ವಸ್ತುಗಳ ಮೇಲೆ 600 ವಿಭಿನ್ನ ಸಿಂಧೂ ಚಿಹ್ನೆಗಳು ಕಂಡುಬಂದಿವೆ. ವಿಶಿಷ್ಟವಾದ ಸಿಂಧೂ ಶಾಸನಗಳು ನಾಲ್ಕು ಅಥವಾ ಐದು ಅಕ್ಷರಗಳಿಗಿಂತ ಹೆಚ್ಚು ಉದ್ದವಿರುವುದಿಲ್ಲ, ಅವುಗಳಲ್ಲಿ ಹೆಚ್ಚಿನವು ತುಂಬಾ ಚಿಕ್ಕದಾಗಿವೆ. 1 ಇಂಚು (ಅಥವಾ 2.54 ಸೆಂ.) ಚೌಕಕ್ಕಿಂತ ಕಡಿಮೆ ಇರುವ ಒಂದೇ ಮೇಲ್ಮೈಯಲ್ಲಿ ಉದ್ದವಾದ 17 ಚಿಹ್ನೆಗಳಿವೆ. ಶಾಸನಗಳನ್ನು ಪ್ರಾಥಮಿಕವಾಗಿ ಬಲದಿಂದ ಎಡಕ್ಕೆ ಬರೆಯಲಾಗಿದೆ ಎಂದು ಭಾವಿಸಲಾಗಿದೆ, ಆದರೆ ಈ ಲಿಪಿಯು ಸಂಪೂರ್ಣ ಭಾಷೆಯನ್ನು ರೂಪಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಇತರ ಬರವಣಿಗೆಯ ವ್ಯವಸ್ಥೆಗಳೊಂದಿಗೆ ಹೋಲಿಕೆಯಾಗಿ ಬಳಸಲು *”ರೊಸೆಟ್ಟಾ ಸ್ಟೋನ್”* ಇಲ್ಲದೆ, ಚಿಹ್ನೆಗಳು ಭಾಷಾಶಾಸ್ತ್ರಜ್ಞರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರಿಗೆ ವಿವರಿಸಲಾಗದಂತೆ ಉಳಿದಿವೆ. ಇತಿಹಾಸಕಾರ ಡಾ. ಎಸ್‌ ಆರ್‌ ರಾವ್‌ ಅವರು ಮುದ್ರೆಗಳ ಮೇಲಿನ 62 ವರ್ಣಗಳನ್ನು ಗುರುತಿಸಿದ್ದಾರೆ. ಒಂದು ಮುದ್ರೆ ಗರಿಷ್ಠ 26 ಚಿತ್ರಗಳನ್ನು ಒಳಗೊಂಡಿದೆ. ಬೆಂಗಳೂರಿನ ಭಾಷಾತಜ್ಞರಾದ ಡಾ. ಬಿ ವಿ ಸುಬ್ಬರಾಯಪ್ಪನವರು ಸಿಂಧೂ ಲಿಪಿ ಅಂಕ ಸೂಚಕವೇ ಹೊರತು ಭಾಷಾ ಸೂಚಕವಲ್ಲ ಎಂದು ಹೇಳಿದ್ದಾರೆ. ಅದನ್ನು ಚಿತ್ರಲಿಪಿ ಎಂದೂ ಸಹ ಭಾವಿಸಲಾಗುತ್ತದೆ.

     

    ಧರ್ಮ

    ಹರಪ್ಪನ್ ಧರ್ಮವು ಊಹಾಪೋಹದ ವಿಷಯವಾಗಿ ಉಳಿದಿದೆ. ಹರಪ್ಪನ್ನರು ಫಲವತ್ತತೆಯನ್ನು ಸಂಕೇತಿಸುವ ಮಾತೃ ದೇವತೆಯನ್ನು ಪೂಜಿಸುತ್ತಾರೆ ಎಂದು ವ್ಯಾಪಕವಾಗಿ ಸೂಚಿಸಲಾಗಿದೆ. ಡಾ. ಜಾನ್‌ ಹಬರ್ಟ್‌ ಮಾರ್ಷಲ್‌ರ ಪ್ರಕಾರ, ʻಸಿಂಧೂ ನಾಗರಿಕತೆಯ ಸಂಸ್ಕೃತಿಯು ಹಿಂದೂ ಧರ್ಮದ ತವರುಮನೆಯಾಗಿತ್ತುʼ. ಕೆಲವು ಸಿಂಧೂ ಕಣಿವೆಯ ಮುದ್ರೆಗಳು ಸ್ವಸ್ತಿಕ ಚಿಹ್ನೆಯನ್ನು ತೋರಿಸುತ್ತವೆ, ಇದನ್ನು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮ ಸೇರಿದಂತೆ ನಂತರದ ಭಾರತೀಯ ಧರ್ಮಗಳು ಅಳವಡಿಸಿಕೊಂಡಿವೆ. ಸೇರಿಸಲಾಗಿದೆ. ಅನೇಕ ಸಿಂಧೂ ಕಣಿವೆಯ ಮುದ್ರೆಗಳು ಪ್ರಾಣಿಗಳ ರೂಪಗಳನ್ನು ಒಳಗೊಂಡಿವೆ, ಕೆಲವು ಅವುಗಳನ್ನು ಮೆರವಣಿಗೆಗಳಲ್ಲಿ ಒಯ್ಯುವುದನ್ನು ಚಿತ್ರಿಸುತ್ತದೆ. ಮೊಹೆಂಜೊದಾರೊದ ಒಂದು ಮುದ್ರೆಯು ಅರ್ಧ ಮಾನವ, ಅರ್ಧ ಎಮ್ಮೆ ದೈತ್ಯಾಕಾರದ ಹುಲಿಯ ಮೇಲೆ ದಾಳಿ ಮಾಡುವುದನ್ನು ತೋರಿಸುತ್ತದೆ.

     

    ವಿದೇಶಿ ವ್ಯಾಪಾರ

    ಹರಪ್ಪನ್ ನಾಗರಿಕತೆಯು ಇಂದು ದಕ್ಷಿಣ ಏಷ್ಯಾದಾದ್ಯಂತ ಕಂಡುಬರುವಂತೆ ಹೋಲುವ ಎತ್ತಿನ ಬಂಡಿಗಳ ರೂಪದಲ್ಲಿ ಚಕ್ರಗಳ ಸಾರಿಗೆಯನ್ನು ಬಳಸಿರಬಹುದು ಎಂದು ಊಹಿಸಲಾಗಿದೆ. ಈ ನಾಗರಿಕತೆಯ ಜನರು ದೋಣಿಗಳು ಮತ್ತು ವಾಟರ್‌ಕ್ರಾಫ್ಟ್‌ಗಳನ್ನು ನಿರ್ಮಿಸಿದ್ದರೆಂದು ತೋರುತ್ತದೆ. ಏಕೆಂದರೆ ದೊಡ್ಡದಾಗಿ ತೋಡಿದ ಕಾಲುವೆಯ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಂದ ರುಜುವಾತಾಗಿದ್ದು, ಕರಾವಳಿ ನಗರವಾದ ಲೋಥಾಲ್‌ನಲ್ಲಿ ಡಾಕಿಂಗ್ ಸೌಲಭ್ಯ ಇತ್ತೆಂದು ಪರಿಗಣಿಸಲಾಗಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಖನಿಜಗಳು, ಭಾರತದ ಇತರ ಭಾಗಗಳಿಂದ ಸೀಸ ಮತ್ತು ತಾಮ್ರ, ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ವ್ಯಾಪಾರ ಕೇಂದ್ರೀಕೃತವಾಗಿತ್ತು. ಇತರ ವ್ಯಾಪಾರ ಸರಕುಗಳಲ್ಲಿ ಟೆರಾಕೋಟಾ ಮಡಕೆಗಳು, ಚಿನ್ನ, ಬೆಳ್ಳಿ, ಲೋಹಗಳು, ಮಣಿಗಳು, ಉಪಕರಣಗಳನ್ನು ತಯಾರಿಸಲು ಫ್ಲಿಂಟ್‌ಗಳು, ಸೀಶೆಲ್‌ಗಳು, ಮುತ್ತು-ರತ್ನಗಳು ಸೇರಿವೆ. ಹರಪ್ಪನ್ ಮತ್ತು ಮೆಸಪೊಟಮಿಯನ್ ನಾಗರಿಕತೆಗಳ ನಡುವೆ ವ್ಯಾಪಕವಾದ ಕಡಲ ವ್ಯಾಪಾರ ಜಾಲವು ಕಾರ್ಯನಿರ್ವಹಿಸುತ್ತಿತ್ತು. ಆಧುನಿಕ ಇರಾಕ್, ಕುವೈತ್ ಮತ್ತು ಸಿರಿಯಾದ ಭಾಗಗಳನ್ನು ಒಳಗೊಂಡಿರುವ ಮೆಸಪೊಟಮಿಯನ್ ಪ್ರದೇಶಗಳಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಲ್ಲಿ ಹರಪ್ಪನ್ ಮುದ್ರೆಗಳು ಮತ್ತು ಆಭರಣಗಳು ಕಂಡುಬಂದಿವೆ. ಅರೇಬಿಯನ್ ಸಮುದ್ರ, ಕೆಂಪು ಸಮುದ್ರ ಮತ್ತು ಪರ್ಷಿಯನ್ ಗಲ್ಫ್‌ನಂತಹ ಜಲರಾಶಿಗಳ ಮೇಲೆ ದೀರ್ಘ ದೂರದ ಸಮುದ್ರ ವ್ಯಾಪಾರವು ವಾಟರ್‌ಕ್ರಾಫ್ಟ್‌ಗಳ ಅಭಿವೃದ್ಧಿಯೊಂದಿಗೆ ಕಾರ್ಯಸಾಧ್ಯವಾಗಬಹುದು. ಈ ಬಗೆಯ ವಾಟರ್‌ಕ್ರಾಫ್ಟ್‌ ಆಗ ಇರಬಹುದೇನೋ?!

     

    ಸಿಂಧೂ ಕಣಿವೆ ನಾಗರಿಕತೆಯ ಅಂತ್ಯ

    ಸಿಂಧೂ ಕಣಿವೆ ನಾಗರಿಕತೆಯು ಹವಾಮಾನ ಬದಲಾವಣೆ ಮತ್ತು ವಲಸೆಯ ಕಾರಣದಿಂದ ಕ್ರಿ.ಪೂ 1800ರಲ್ಲಿ ಕುಸಿಯಿತು ಎಂದು ನಂಬಲಾಗಿದೆ. ಈ ನಾಗರಿಕತೆಯ ಕಣ್ಮರೆಯ ಕುರಿತು ಹಲವಾರು ಸಿದ್ಧಾಂತಗಳಿವೆ. ಅವುಗಳೆಂದರೆ,

     

    ಆರ್ಯನ್ ಆಕ್ರಮಣ ಸಿದ್ಧಾಂತ (ಕ್ರಿ. ಪೂ 1800-1500)

    1944ರಿಂದ 1948ರವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರಾಗಿದ್ದ ಮಾರ್ಟಿಮರ್ ವೀಲರ್ ಅವರ ಪ್ರಕಾರ, ʻಇಂಡೋ-ಯುರೋಪಿಯನ್ ಬುಡಕಟ್ಟಿನ ಅಲೆಮಾರಿಯಾಗಿದ್ದ ಆರ್ಯನ್ನರು, ಸಿಂಧೂ ನದಿ ಕಣಿವೆಯನ್ನು ವಶಪಡಿಸಿಕೊಂಡರು. ಮೊಹೆಂಜೊದಾರೋ ಪುರಾತತ್ತ್ವ ಶಾಸ್ತ್ರದ ಉನ್ನತ ಮಟ್ಟದಲ್ಲಿ ಕಂಡುಬರುವ ಅನೇಕ ಸಮಾಧಿ ಮಾಡದ ಶವಗಳು ಯುದ್ಧದ ಬಲಿಪಶುಗಳಾಗಿವೆʼ ಎಂದು ಪ್ರತಿಪಾದಿಸಿದರು. ಶಾಂತಿಯುತ ಹರಪ್ಪನ್ ಜನರ ವಿರುದ್ಧ ಕುದುರೆಗಳು ಮತ್ತು ಹೆಚ್ಚು ಸುಧಾರಿತ ಆಯುಧಗಳನ್ನು ಬಳಸಿ, ಆರ್ಯರು ಅವರನ್ನು ಸುಲಭವಾಗಿ ಸೋಲಿಸಬಹುದೆಂದು ಅವರು ನೀಡಿದ ಸಿದ್ಧಾಂತದಲ್ಲಿ ಹೇಳಿದ್ದಾರೆ. ವೀಲರ್ ಅವರ ನಂತರ, ಇತರ ವಿದ್ವಾಂಸರು ಅಸ್ಥಿಪಂಜರಗಳು ಆಕ್ರಮಣದ ಹತ್ಯಾಕಾಂಡಗಳ ಬಲಿಪಶುಗಳಲ್ಲ ಎಂದು ಹೇಳಿದರು. ಆದರೆ, ಅನೇಕ ವಿದ್ವಾಂಸರು ಇಂದಿಗೂ ಇಂಡೋ-ಆರ್ಯನ್ ವಲಸೆ ಸಿದ್ಧಾಂತದಲ್ಲಿ ನಂಬಿಕೆಗೆ ಇಡುತ್ತಾರೆ.

     

    ದಿ ಕ್ಲೈಮೇಟ್ ಚೇಂಜ್ ಥಿಯರಿ (ವಾಯುಗುಣ ಬದಲಾವಣೆ ಸಿದ್ಧಾಂತ) (ಕ್ರಿ.ಪೂ 1800-1500)

    ಅನೇಕ ವಿದ್ವಾಂಸರು ಹವಾಮಾನ ಬದಲಾವಣೆಯಿಂದ ಸಿಂಧೂ ನಾಗರಿಕತೆ ಅವನತಿ ಕಂಡಿತು ಎಂದು ಹೇಳುತ್ತಾರೆ. ಕೆಲವು ತಜ್ಞರು ಕ್ರಿ. ಪೂ 1900ರಲ್ಲಿ ಪ್ರಾರಂಭವಾದ ಸರಸ್ವತಿ ನದಿಯ ಒಣಗುವಿಕೆಯು ಹವಾಮಾನ ಬದಲಾವಣೆಗೆ ಮುಖ್ಯ ಕಾರಣವೆಂದು ನಂಬುತ್ತಾರೆ. ಆದರೆ ಇತರರು ಈ ಪ್ರದೇಶವನ್ನು ದೊಡ್ಡ ಪ್ರವಾಹದಿಂದ ನಿರ್ನಾಮವಾಯಿತು ಎಂದು ವಿವರಿಸುತ್ತಾರೆ. ಅಸ್ಥಿಪಂಜರದ ಪುರಾವೆಗಳು ಮಲೇರಿಯಾದಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಸೂಚಿಸಿವೆ. ಹರಪ್ಪಾ ಹವಾಮಾನದಲ್ಲಿನ ಮತ್ತೊಂದು ವಿನಾಶಕಾರಿ ಬದಲಾವಣೆಯು ಪೂರ್ವಕ್ಕೆ ಚಲಿಸುವ ಮಾನ್ಸೂನ್ ಅಥವಾ ಭಾರೀ ಮಳೆಯನ್ನು ತರುವ ಗಾಳಿಯಾಗಿರಬಹುದು. ಮಾನ್ಸೂನ್‌ಗಳು ಸಸ್ಯವರ್ಗ ಮತ್ತು ಕೃಷಿಯನ್ನು ಬೆಂಬಲಿಸುತ್ತದೆಯೇ ಅಥವಾ ನಾಶಪಡಿಸುತ್ತದೆಯೇ ಎಂಬುದರ ಆಧಾರದ ಮೇಲೆ ಹವಾಮಾನಕ್ಕೆ ಸಹಾಯಕ ಮತ್ತು ಹಾನಿಕಾರಕವಾಗಿದೆ. ಸಿಂಧೂ ನದಿ ಕಣಿವೆಗೆ ಬಂದ ಮಾನ್ಸೂನ್‌ಗಳು ಕೃಷಿ ಹೆಚ್ಚುವರಿಗಳ ಬೆಳವಣಿಗೆಗೆ ನೆರವಾದವು, ಇದು ಹರಪ್ಪದಂತಹ ನಗರಗಳ ಅಭಿವೃದ್ಧಿಗೆ ಬೆಂಬಲ ನೀಡಿತು. ಜನಸಂಖ್ಯೆಯು ನೀರಾವರಿಗಿಂತ ಹೆಚ್ಚಾಗಿ ಕಾಲೋಚಿತ ಮಾನ್ಸೂನ್‌ಗಳ ಮೇಲೆ ಅವಲಂಬಿತವಾಗಿದೆ ಮತ್ತು ಮಾನ್ಸೂನ್‌ಗಳು ಪೂರ್ವಕ್ಕೆ ಸ್ಥಳಾಂತರಗೊಂಡಂತೆ, ನೀರಿನ ಪೂರೈಕೆಯು ಬತ್ತಿ ಹೋಗುತ್ತಿತ್ತು ಎಂಬ ಅಂಶವೂ ಕಾರಣವಾಗಿರಬಹುದು.