Author: Satyakam NewsDesk

  • ಪತ್ರಿಕೆಗಳಲ್ಲಿ ಆರೋಗ್ಯ-ಕೃಷಿ ಲೇಖನಗಳು ಬರಲಿ: ಡಾ. ಅಪ್ಪ

    ಪತ್ರಿಕೆಗಳಲ್ಲಿ ಆರೋಗ್ಯ-ಕೃಷಿ ಲೇಖನಗಳು ಬರಲಿ: ಡಾ. ಅಪ್ಪ

    ಸತ್ಯಕಾಮ ವಾರ್ತೆ ಕಲಬುರಗಿ:

    ಇಂದಿನ ದಿನಮಾನಗಳಲ್ಲಿ ಆರೋಗ್ಯವೇ ಮಹತ್ವವಾಗಿದ್ದರಿಂದ ಜತೆಗೆ ಕೃಷಿ ಮತ್ತೆ ಪ್ರಾಮುಖ್ಯತೆ ಹೊಂದುವ ನಿಟ್ಟಿನಲ್ಲಿ ಮಾಧ್ಯಮಗಳಲ್ಲಿ ಅದರಲ್ಲೂ ಪತ್ರಿಕೆಗಳಲ್ಲಿ ಹೆಚ್ಚು ಲೇಖನಗಳು ಹೊರ ಬರುತ್ತಿರಲಿ ಎಂದು ಶರಣಬಸವೇಶ್ವರ ಸಂಸ್ಥಾನದ ಡಾ. ಲಿಂಗರಾಜಪ್ಪ ಅಪ್ಪ ಆಶಯ ವ್ಯಕ್ತಪಡಿಸಿದರು.

    ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನರಿಗಿಂದು ಆಹಾರದ ಮಹತ್ವ ಅದರಲ್ಲೂ ಬಳಕೆ ಕುರಿತಾಗಿ ಪರಿಣಾಮಕಾರಿ ತಿಳಿ ಹೇಳಬೇಕಿದೆ. ಹೀಗಾಗಿ ಆರೋಗ್ಯದ ಮಾಹಿತಿ ನೀಡುವ ಲೇಖನಗಳು ಹೊರ ಬರಲಿ, ಅದೇ ತೆರನಾಗಿ ಕೃಷಿಯೇ ನಮ್ಮ ದೇಶದ ಪ್ರಮುಖ ಕಾಯಕ. ಈ ಕಾಯಕದಿಂದ ಸಮಾಜದ ಆರ್ಥಿಕ ಸ್ಥಿರತೆ ಸಾಧ್ಯ. ಹೀಗಾಗಿ ಕೃಷಿ ಮಹತ್ವ ಮತ್ತು ಕೃಷಿಯಲ್ಲಿನ ಸುಧಾರಣೆ ಕುರಿತಾಗಿ ಲೇಖನಗಳು ಪ್ರಕಟವಾಗುತ್ತಿರಲಿ ಎಂದು ಹೇಳಿದರು.

    ಕಲಬುರಗಿ: ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
    ಕಲಬುರಗಿ: ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ಪಿ.ಎಂ. ಮಣ್ಣೂರ ಅವರ ೭೭ನೇ ಜನ್ಮ ದಿನದಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    ಪಿ.ಎಂ. ಮಣ್ಣೂರ ಅವರು ಸ್ಥಾಪಿಸಿದ ಪತ್ರಿಕೆಯನ್ನು ಆನಂದ ಮಣ್ಣೂರ ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೀಯ. ಸದಾ ಅವರ ಮಾಧ್ಯಮ ಚಟುವಟಿಕೆಗಳಿಗೆ ಬೆಂಬಲ ಇದ್ದೇ ಇರುತ್ತದೆ ಎಂದು ಡಾ. ಲಿಂಗರಾಜಪ್ಪ ಅಪ್ಪ ಅಭಯ ನೀಡಿದರು.

    ಹಿರಿಯ ವೈದ್ಯರು ಹಾಗೂ ಸಾಹಿತಿಗಳಾಗಿರುವ ಡಾ. ಎಸ್.ಎಸ್. ಗುಬ್ಬಿ ಮಾತನಾಡಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಸಾಯುವ ಕೊನೆ ಘಳಿಗೆವರೆಗೂ ಕಲಿಕೆ ಇದ್ದೇ ಇರುತ್ತದೆ. ಮಣ್ಣೂರ ಅವರು ದಿನ ನಿತ್ಯ ಹೊಸದಾದ ಕಲಿಕೆಯನ್ನೇ ಮೈಗೂಢಿಸಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಪತ್ರಿಕೋದ್ಯಮವಲ್ಲದೇ ರಾಜಕೀಯ, ಸಾಹಿತ್ಯ, ರಂಗಭೂಮಿ ಸೇರಿ ಇತರ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಲು ಸಾಧ್ಯವಾಯಿತು ಎಂದು ಹೇಳಿದರಲ್ಲದೇ ತಂದೆ-ತಾಯಿ ಹಾಗೂ ಹಿರಿಯರಿಗೆ ಗೌರವ ಕೊಡುವುದು ಇಂದು ದೊಡ್ಡ ಮಾತು ಎನ್ನುವಂತಾಗಿದೆ. ಆದ್ದರಿಂದ ಎಲ್ಲರಲ್ಲಿ ಜನ್ಮ ನೀಡಿದವರಿಗೆ ಹಾಗೂ ಹಿರಿಯರಿಗೆ ಗೌರವ ಕೊಡುವುದನ್ನು ಎಲ್ಲರೂ ಪಾಲಿಸಿದ್ದಲ್ಲಿ ಸಮೃದ್ಧ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದವರಲ್ಲಿ ಪಿ.ಎಂ. ಮಣ್ಣೂರ ಒಬ್ಬರು. ಒಟ್ಟಾರೆ ಆಡು ಮುಟ್ಟದ ಸೊಪ್ಪಿಲ್ಲ. ಮಣ್ಣೂರು ಕಾರ್ಯ ಮಾಡದ ಕ್ಷೇತ್ರವಿಲ್ಲ ಎನ್ನುವಂತಿದೆ ಎಂದರು.

    ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಸಮಾಜದ ಎಲ್ಲ ವರ್ಗದವರನ್ನು ಪ್ರಶ್ನಿಸುವ ಹಾಗೂ ತಿದ್ದುವ ಅಧಿಕಾರ ಪತ್ರಕರ್ತರು ಹೊಂದಿದ್ದಾರೆ ಎಂದು ಹೇಳಿದರು.

    ಸತ್ಯಾಕಾಮ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶಂಕರ ಕೊಡ್ಲಾ, ಮಣ್ಣೂರ ಅವರು ಸಾಮಾಜಿಕವಾಗಿ ಹತ್ತಾರು ಕಾರ್ಯಗಳನ್ನು ಮಾಡಿದ್ದಾರೆ. ಕಲಬುರಗಿ ವೀರಶೈವ ಲಿಂಗಾಯತ ವಸತಿ ನಿಲಯ ಪ್ರಾರಂಭವಾಗುವಲ್ಲಿ ಡಾ. ಶರಣಪ್ಪ ಗಿರಿ ಅವರ ಜತೆ ಕೈ ಜೋಡಿಸಿದವರಲ್ಲಿ ಇವರೇ ಪ್ರಮುಖರು. ಅದೇ ತೆರನಾಗಿ ಮೂರು ದಶಕಗಳ ಹಿಂದೆ ಬಸವ ಜಯಂತಿ ಆಚರಣೆಗೆ ನಾಂದಿ ಹಾಡಿದವರಲ್ಲೂ ಮಣ್ಣೂರ ಅವರೇ ಪ್ರಮುಖರು. ಪ್ರಮುಖವಾಗಿ ಸದಾ ಹಸನ್ಮುಖಿಯಾಗಿದ್ದರಲ್ಲದೇ ಹಾಸ್ಯ ಚಟಾಕಿ ಹಾರಿಸುವಲ್ಲಿ ಎತ್ತಿದ ಕೈಯಾಗಿದ್ದರು ಎಂದು ಒಡನಾಟದ ಘಟನೆಗಳ ವಿವರಣೆ ನೀಡಿದರು.

    ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ ಸಹ ಸತ್ಯಕಾಮ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ, ಮಣ್ಣೂರ ಅವರು ಸತ್ಯಕ್ಕೆ ಹೇಳಲು ಹಿಂಜರಿಕೆ ಬೇಡ ಎಂದು ಹೇಳುತ್ತಿದ್ದರು. ಪಾಲಿಕೆ ಸದಸ್ಯರಾಗಿಯೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ನಗರದ ಒಂದು ರಸ್ತೆಗೆ ಹೆಸರಿಡಲಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಡಿ.ಎಂ.ಮಣ್ಣೂರ ಅಧ್ಯಕ್ಷತೆ ವಹಿಸಿ, ತಂದೆಯವರು ಸಾಹಿತಿ ಮತ್ತು ಸ್ವಾತಂತ್ರö್ಯ ಹೋರಾಟಗಾರರಾಗಿದ್ದರು. ಅದನ್ನು ಪಿ.ಎಂ. ಮಣ್ಣೂರ ಮೈಗೂಢಿಸಿಕೊಂಡಿದ್ದರು. ಅದ್ನನೀಗ ಆನಂದ ಮಣ್ಣೂರು ಮುಂದುವರೆಸಿಕೊAಡು ಹೋಗುತ್ತಿದ್ದಾರೆ ಎಂದರು.

    ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ನಿವೃತ್ತ ವಾರ್ತಾಧಿಕಾರಿ ಅಪ್ಪಾರಾವ ಅಕ್ಕೋಣಿ, ಹಿರಿಯ ಪತ್ರಕರ್ತ ದೇವಿಂದ್ರಪ್ಪ ಕಪನೂರ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಮುಖರಾದ ಝರಣಪ್ಪ ಚಿಂಚೋಳಿ, ರೇವಣಸಿದ್ದಪ್ಪ ಮಾಸ್ತರ್, ಚಾಮರಾಜ ದೊಡ್ಡಮನಿ, ಸುರೇಶ ಕೊಟಗಿ, ಬಸವರಾಜ ಶಿವಗೋಳ ಸೇರಿದಂತೆ ಮುಂತಾದವರಿದ್ದರು. ಸಂಪಾದಕ ಆನಂದ ಪಿ. ಮಣ್ಣೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗಲಿಂಗಯ್ಯ ಶಾಸ್ತಿçÃಗಳು, ಪತ್ರಕರ್ತ ಸಂಗಮನಾಥ ರೇವತಗಾಂವ ನಿರೂಪಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಕಿರಣ ಪಾಟೀಲ್ ನೇತೃತ್ವದ ಸುಕಿ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.

     

    ದಿ.ವಿ.ಎನ್ ಕಾಗಲಕರ್ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಸ್ಥಾಪಿಸಲೆಂದು ಈಗಾಗಲೇ ಒತ್ತಾಯಿಸಲಾಗಿದೆ. ಅದೇ ತೆರನಾಗಿ ಪಿ.ಎಂ. ಮಣ್ಣೂರ ಹೆಸರಿನಲ್ಲೂ ಪ್ರಶಸ್ತಿ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಪ್ರಮುಖವಾಗಿ ಪತ್ರಕರ್ತರ ಕಲಬುರಗಿ ಜಿಲ್ಲಾ ಸಂಘದಿAದ ಪಿ.ಎಂ.ಮಣ್ಣೂರ ಹೆಸರಿನಲ್ಲಿ ಇದೇ ವರ್ಷದಿಂದ ಪ್ರಶಸ್ತಿ ಪ್ರಾರಂಭಿಸಲಾಗುವುದು.

    ಬಾಬುರಾವ ಯಡ್ರಾಮಿ, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ

     

    ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ

    ಹಿರಿಯ ಪತ್ರಕರ್ತರಾದ ಶಂಕರ ಕೊಡ್ಲಾ, ಅಜೀಜುಲ್ಲಾ ಸರ್ಮಸ್ತ್, ರಾಮಕೃಷ್ಣ ಬಡಶೇಷಿ, ಹಣಮಂತರಾವ ಭೈರಾಮಡಗಿ, ಚಂದ್ರಕಾAತ ಹುಣಸಗಿ, ಪ್ರಕಾಶ ಕುಲಕರ್ಣಿ ಅವರಿಗೆ ಸತ್ಯಕಾಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

  • ಜುಲೈ 01 ರಂದು ಸತ್ಯಕಾಮ ಸಮ್ಮಾನ್” ಪ್ರಶಸ್ತಿ ಪ್ರದಾನ ಕಾರ್ಯಕ್ರಮ

    ಜುಲೈ 01 ರಂದು ಸತ್ಯಕಾಮ ಸಮ್ಮಾನ್” ಪ್ರಶಸ್ತಿ ಪ್ರದಾನ ಕಾರ್ಯಕ್ರಮ

    ಕಲುಬುರಗಿ: ಜುಲೈ 01 ರಂದು ದಿ. ಪಿ.ಎಂ. ಮಣ್ಣೂರ ಅವರ 77ನೇ ಹುಟ್ಟುಹಬ್ಬ ಹಾಗೂ ಸತ್ಯಕಾಮ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಆಡಿಟೊರಿಯಂನಲ್ಲಿ ಬೆಳ್ಳಗೆ 11:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸತ್ಯಕಾಮ” ಪತ್ರಿಕೆಯ ಸಂಪಾದಕರಾದ ಆನಂದ್ ಪಿ. ಮಣ್ಣೂರ ಹೇಳಿದರು.

     

    ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಜುಲೈ 01ರಂದು ದಿ. ಪಿ.ಎಂ. ಮಣ್ಣೂರ ಅವರ ಹುಟ್ಟುಹಬ್ಬದ ಅಂಗವಾಗಿ “ಸತ್ಯಕಾಮ ಸಮ್ಮಾನ್” ಪ್ರಶಸ್ತಿಯನ್ನು ಐವರು ಗಣ್ಯರಿಗೆ ಹಾಗೂ ಸತ್ಯಕಾಮ ಪತ್ರಿಕೆಯಲ್ಲಿ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಆವೃತ್ತಿಯಲ್ಲಿ ಸ್ಥಾನಿಕ ಸಂಪಾದಕರಿಗೆ ಸತ್ಯಕಾಮ ಸಮ್ಮಾನ್ ವಿತರಿಸಲಾಗುವುದು ಎಂದರು. ಅಂದು ಬೆಳ್ಳಗೆ 11:30 ಗಂಟೆಗೆ ಜರಗುವ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಡಾ. ಲಿಂಗರಾಜಪ್ಪ ಅಪ್ಪ ನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಗದ್ದುಗೆ ಮಠದ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ನಿವೃತ್ತ. ಯೋಜನಾ ನಿರ್ದೇಶಕರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಡಿ. ಎಂ ಮಣ್ಣೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರ್ಗಿ ಮಹಾಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಜಡಿಯಪ್ಪ ಗೆದ್ದಗಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರ್ಗಿ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಬುದ್ಧ ಲೋಕ ಪತ್ರಿಕೆಯ ಹಿರಿಯ ಸಂಪಾದಕರು ದೇವೇಂದ್ರಪ್ಪ ಕಪನೂರ್, ಮಾಧ್ಯಮ ಮಾನ್ಯತೆ ಸಮಿತಿ ಸದಸ್ಯರು ಮತ್ತು ಕ.ಕ.ಸಂ.ಸಂಘದ ಕಲಬುರ್ಗಿ ಅಧ್ಯಕ್ಷ ಗುರುರಾಜ್ ಕುಲಕರ್ಣಿ, ಅರ್ಥೋಪೆಡಿಕ್ ಸರ್ಜನ್ ಮತ್ತು ಸಾಹಿತಿಗಳಾದ ಡಾ. ಎಸ್.ಎಸ್‌ ಗುಬ್ಬಿ, ಕೆ.ಕೆ.ಸಿ.ಸಿ.ಐ ಅದ್ಯಕ್ಷರಾದ ಶರಣಬಸಪ್ಪ ಪಪ್ಪಾರವರು ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದರು.

    ಸುಕಿ ಮೆಲೋಡಿಸ್‌(ಕಿರಣ್‌ ಪಾಟೀಲ್‌) ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು. ಶ್ರೀ ನಾಗಲಿಂಗಯ್ಯ ಶಾಸ್ತ್ರೀಗಳು ಸ್ಥಾವರಮಠ ಅವರು ನಿರೂಪಿಸಿಲಿದ್ದಾರೆ ಎಂದರು.

    ಸತ್ಯಕಾಮ ಸಮ್ಮಾನ್ ಪುರಸ್ಕೃತರು

    1. ಶ್ರೀ ಶಂಕರ್ ಕೊಡ್ಲಾ, ಸಂಪಾದಕರು, ಜೈ ಭೀಮ್ ಗದೆ ಪತ್ರಿಕೆ ಮತ್ತು  ವ್ಯವಸ್ಥಾಪಕರು, ಎಸ್.ಎಸ್.ವಿ.ಟಿವಿ

    2. ಶ್ರೀ ಅಜೀಜುಲ್ಲಾ ಸರ್ಮಸ್ತ್, ಸಂಸ್ಥಾಪಕ ಸಂಪಾದಕರು, ಬ್ಹಾಮನಿ ಉರ್ದು ದಿನಪತ್ರಿಕೆ

    3. ಶ್ರೀ ರಾಮಕೃಷ್ಣ ಬಡಶೇಷಿ, ವಿಶೇಷ ವರದಿಗಾರರು, ಕಲಬುರಗಿ, ದಿ ನ್ಯೂ ಇಂಡಿಯಾ ಎಕ್ಸಪ್ರೆಸ್

    4. ಶ್ರೀ ಹಣಮಂತರಾವ್ ಭೈರಾಮಡಗಿ, ಡೆಪ್ಯೂಟಿ ಚೀಫ್ ರಿಪೋರ್ಟರ್, ಉದಯವಾಣಿ, ಕಲಬುರಗಿ ಆವೃತ್ತಿ

    5. ಶ್ರೀ ಚಂದ್ರಕಾAತ್ ಹುಣಸಗಿ, ಪ್ರಧಾನ ವರದಿಗಾರರು,ಗುಲ್ಬರ್ಗಾ ಸಂಜೆವಾಣಿ

    6. ಶ್ರೀ ಪ್ರದೀಪ್ ಕುಲಕರ್ಣಿ, ಸ್ಥಾನಿಕ ಸಂಪಾದಕರು, ಸತ್ಯಕಾಮ, ವಿಜಯಪುರ,ಮೂರು ದಶಕಗಳ ಸೇವೆಗೆ ಸನ್ಮಾನ

     
  • ಡಿ.ಡಿ.ಯು ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

    ಡಿ.ಡಿ.ಯು ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

    ಸತ್ಯಕಾಮ ವಾರ್ತೆ  ದೋರನಹಳ್ಳಿ:
    ವಿದ್ಯಾರ್ಥಿ ಜೀವನಕ್ಕೆ ಆಟ,ಪಾಠ, ಮನರಂಜನೆ ಅವಶ್ಯವಾಗಿರಬೇಕು. ವಿದ್ಯಾರ್ಥಿಗಳು ಕೇವಲ ಓದುತ್ತ ಇದ್ದರೆ ಸಾಲದು, ದೈಹಿಕವಾಗಿ ದಂಡನೆ ಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ ಎನ್ನುವುದು ತಪ್ಪು ಕಲ್ಪನೆ,ಪಾಠದೊಂದಿಗೆ ಆಟವಿದ್ದರೆ ಮಾನಸಿಕ ಮತ್ತು ದೈಹಿಕವಾಗಿ ಶಸಕ್ತರಾಗುತ್ತಾರೆ ಎಂದು ಶಾಲೆಯ ಮುಖ್ಯಗುರು ಪ್ರಕಾಶ ಬಳ್ಳಾರಿ ಹೇಳಿದರು.

    ದೋರನಹಳ್ಳಿ ಗ್ರಾಮದ ಡಿ.ಡಿ.ಯು ಸಿಬಿಎಸ್‌ಇ ಪ್ರೌಢ ಶಾಲೆ ಮತ್ತು ಡಿಡಿಯು ಪಿಯು ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಕ ಬಸವರಾಜ ಗೋಗಿ ಮಾತನಾಡಿ  ಇಂದು ಮಕ್ಕಳು, ಚಿಕ್ಕ ವಿದ್ಯಾರ್ಥಿಗಳು ಒತ್ತಡದಲ್ಲಿ ಕಲಿಯುವ ಪರಿಸ್ಥಿತಿಯಿದೆ. ಒತ್ತಡದಲ್ಲಿ ಓದಿ ಚೆನ್ನಾಗಿ ಕಲಿತು ವಿದ್ಯೆ ಕಲಿಯುವುದರಲ್ಲಿ ಯಶಸ್ಸು ಗಳಿಸುತ್ತಿದ್ದಾರೆ, ಮುಂದೆ ನೌಕರಿಯೂ ಸಿಗುತ್ತದೆ. ಆದರೆ, ಆ ಹೊತ್ತಿಗೆ ಒತ್ತಡದ
    ಕಾರಣಕ್ಕೆ ದೇಹಾರೋಗ್ಯವೂ ಕೆಟ್ಟು ಹೋಗಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳುತ್ತಲೇ ಬದುಕಿನಲ್ಲೂ ಯಶಸ್ಸು ಗಳಿಸಲು ಯೋಗ, ಧ್ಯಾನ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

    ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಇವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು,ಕಾಲೇಜಿನ ಉಪನ್ಯಾಸಕರು,ವಸತಿ ನಿಲಯ ಪಾಲಕರಿದ್ದರು.

  • ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ; ಇಟಗಿ ಆರೋಪ

    ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ; ಇಟಗಿ ಆರೋಪ

    • ಬಿಜೆಪಿ ವಕ್ತಾರ ಹಣಮಂತ ಇಟಗಿ ಆರೋಪ
    • ಖಟಾಖಟ್ ಹಣ ನೀಡುವುದಾಗಿ ಆಮಿಷವೊಡ್ಡಿದ ರಾಹುಲ್ ಗಾಂಧಿ, ಸರ್ಕಾರದ ಮೂಲಕ ಜನರಿಂದ ಖಟಾಖಟ್ ಹಣ ವಸೂಲಿಗೆ ಸಾಕ್ಷಿ ಕೊಟ್ಟ ಹಿರಿಯ ಶಾಸಕ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕದ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಬ್ರಷ್ಟಾಚಾರದ ಮುಖವಾಡ ಮತ್ತೆ ಕಳಚಿಬಿದ್ದಿದೆ. ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂದಿ ಹೇಳುವ ‘ಖಟಾಖಟ್’ ಮಾದರಿಯಲ್ಲಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ಖಟಾಕಟ್ ನಡೆದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಗರಸಭೆ ಸದಸ್ಯ ಹಣಮಂತ ಇಟಗಿ ಆರೋಪಿಸಿದ್ದಾರೆ.

    ಈ ಕುರಿತು ಹೇಳಿಕೆನೀಡಿರುವ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಓಲೈಕೆಗಳು ಜೊತೆಯಾಗಿ ಮುಂದಡಿ ಇಡುತ್ತಿವೆ ಎನ್ನಲು ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿನ ಬೇರು ಬಿಟ್ಟ ಭ್ರಷ್ಟಾಚಾರವನ್ನು ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ರು ಅಧಿಕಾರಿಗಳ ಜೊತೆ ನಡೆಸಿದ ಸಂಭಾಷಣೆಯ ಆಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಬಡವರಿಗೆ ನೀಡುವ ಆಶ್ರಯ ಮನೆಗಳ ಹಂಚಿಕೆಗೂ ಬಿಡದೇ ಲಂಚವನ್ನು ಬಹಿರಂಗವಾಗಿ ಕೇಳಲಾಗುತ್ತದೆ ಎಂಬುದನ್ನು ಬಿ.ಆರ್. ಪಾಟೀಲ್ ರು ಸ್ವತಃ ಸಚಿವ ಜಮೀರ್ ಖಾನ್ ಅವರ ಪಿಎ ಜೊತೆ ಸಂಭಾಷಣೆಯಲ್ಲಿಯೇ ಸ್ಪಷ್ಟಪಡಿಸಿಕೊಂಡಿದ್ದು ಅದನ್ನು ಸಾರ್ವಜನಿಕವಾಗಿ ವೈರಲ್ ಮಾಡಿರುವುದು ಬ್ರಷ್ಟ ಕಾಂಗ್ರೆಸ್ ನ ಕರಾಳ ಮುಖ ಮತ್ತೆ ಮತ್ತೆ ಬಯಲಾಗಿದೆ ಎಂದು ಇಟಗಿ ಆರೋಪಿಸಿದ್ದಾರೆ.

    ಲಂಚ ನೀಡದ ಕಾರಣಕ್ಕಾಗಿ, ಅವರು ಅಧಿಕೃತವಾಗಿ ಶಿಫಾರಸು ಮಾಡಿದ ಪತ್ರಗಳನ್ನು ಸಹ ಕಸದ ಬುಟ್ಟಿಗೆ ಹಾಕಲಾಗಿದೆ ಎಂಬುದು ಸ್ವತಃ ಬಿ.ಆರ್. ಪಾಟೀಲ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ಪಿಎ ಅವರೊಂದಿಗೆ ನಡೆಸಿದ ಸಂಭಾಷಣೆಯೇ ರಾಜಾರೋಷವಾಗಿ ವಾಸ್ತವದಲ್ಲಿ ಈ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮುಖವನ್ನು ಅನಾವರಣ ಮಾಡಿದೆ.

    ಯಾವದೇ ಕೆಲಸಕ್ಕೂ ಹಣ ಕೊಡಬೇಕು ಹಣ ಕೊಡದೇ ಇದ್ದರೆ ಶಾಸಕರು ಸಚಿವರ ಪತ್ರಗಳಿಗೂ ಕವಡೆ ಕಿಮ್ಮತ್ತಿಲ್ಲದಂತೆ ಮಾಡಿದ ಇಂತಹ ಭ್ರಷ್ಟ ಸರ್ಕಾರ ಈ ಹಿಂದೆ ಎಂದೆAದೂ ಎಲ್ಲೂ ಕಂಡಿಲ್ಲ ಎಂದು ಇಟಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಹುಲ್ ಗಾಂದಿಯವರ ‘ಖಟಾಖಟ್’ ಎಂದು ಜನರಿಗೆ ಹಣ ಎಣಿಸುವುದಾಗಿ ಹೇಳಿ ಈದೀಗ ಜನರಿಂದ ಖಟಾಕಟ್ ಹಣವನ್ನು ಈ ಬ್ರಷ್ಟ ಸರ್ಕಾರದಿಂದ ವಸೂಲಿ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅರಿಯಬೇಕಾಗಿದೆ.

    ಇಂತಹ ಭ್ರಷ್ಟ ನೀಚ ಸರ್ಕಾರದ ಕೃತ್ಯಗಳನ್ನು ಜನತೆ ಇನ್ನು ಮೂರು ವರ್ಷ ಸಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಜನತೆಗೆ ಖಟಾಖಟ್ ಆಮಿಷ ವೊಡ್ಡಿದ ರಾಹುಲಗಾಂದಿ ‘ಖಟಾಕಟ್’ ಬ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿರುವುದು ಈ ಘಟನೆಯಿಂದ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಅವರು ಟೀಕಿಸಿದ್ದಾರೆ.

  • ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ೧೧ನೇ ಅಂ.ರಾ. ಯೋಗ ದಿನಾಚರಣೆ

    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ೧೧ನೇ ಅಂ.ರಾ. ಯೋಗ ದಿನಾಚರಣೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ೧೧ನೇ ವರ್ಷದ ಅಂತಾರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

    ಯೋಗ ಶಿಕ್ಷಕರಾದ ಶರಣಪ್ಪ ಬೆನಕನಹಳ್ಳಿ, ಚಂದ್ರರೆಡ್ಡಿ ಠಾಣಗುಂದಿ ಆಗಮಿಸಿ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.

    ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಬಸವರಾಜಪ್ಪ ವಿಭೂತಿಹಳ್ಳಿ, ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಯುವ ಮುಖಂಡರಾದ ಮಹೇಶರೆಡ್ಡಿ ಗೌಡ ಮುದ್ನಾಳ ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಮಾಜಿ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆ ತುಮಕೂರು, ಭೀಮನಗೌಡ ಕ್ಯಾತನಾಳ, ಜಿಲ್ಲಾ ಬಿಜೆಪಿ ವಕ್ತಾರರಾದ ಹನುಮಂತ ಇಟಗಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಧರ ಸಾಹುಕಾರ, ಉಪಾಧ್ಯಕ್ಷ ಮಲ್ಲು ಕೋಲಿವಾಡ, ಮಾಜಿ ಜಿಲ್ಲಾದ್ಯಕ್ಷ ಮೌನೇಶ ಬೆಳಗೇರಾ, ನಗರಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಶರಣಗೌಡ ಅಲ್ಲಿಪುರ, ಮಂಡಲ ಮಾಜಿ ಅದ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ರವಿ ಮುದ್ನಾಳ, ಲಕ್ಷಿö್ಮÃಪುತ್ರ ಮಾಲಿ ಪಾಟೀಲ್, ಮಹಾದೇವಪ್ಪ ಗಣಪೂರ, ಮಹಿಳಾ ಮೋರ್ಚಾ ಜಿಲ್ಲಾದ್ಯಕ್ಷೆ ಸುನಿತಾ ಚವ್ಹಾಣ, ಕಾರ್ಯದರ್ಶಿ ಶಕುಂತಲಾ ಗುಂಜನೂರ, ನಗರಸಭೆ ಸದಸ್ಯೆ ವಿಜಯಲಕ್ಷಿö್ಮÃ ನಾಯಕ, ಕಾರ್ಯಾಲಯ ಕಾರ್ಯದರ್ಶಿ ಚೆನ್ನವೀರಯ್ಯ ಸ್ವಾಮಿ ಹಿರೇಮಠ, ಮರಲಿಂಗ ಜಿನಿಕೇರ, ಸೊಲಮನ್ ಯಡ್ಡಳ್ಳಿ, ನಾಗಪ್ಪ ಗಚ್ಚಿನಮನಿ, ಮಲ್ಲಿಕಾರ್ಜುನ ತಳಕ, ಮಲ್ಲಿಕಾರ್ಜುನ ಮುದ್ನಾಳ, ಶಿವಣ್ಣ ವಿಶ್ವಕರ್ಮ ಸೇರಿದಂತೆ ಬಿಜೆಪಿ ನಗರ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ನಗರಸಭೆ ಸದಸ್ಯರು ಎಲ್ಲಾ ಮೋರ್ಚದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  • ಯೋಗ,ಧ್ಯಾನಕ್ಕೆ ಭಾರತವೇ ಮೂಲ : ಶಾಸಕ ಚನ್ನಾರಡ್ಡಿ ಪಾಟೀಲ್

    ಯೋಗ,ಧ್ಯಾನಕ್ಕೆ ಭಾರತವೇ ಮೂಲ : ಶಾಸಕ ಚನ್ನಾರಡ್ಡಿ ಪಾಟೀಲ್

    ಯೋಗಮಯವಾದ ಯಾದಗಿರಿ ಸ್ವಪ್ನಾ ಮೈದಾನ – ಸಾವಿರಾರು ಜನರು ಭಾಗಿ

    ಸತ್ಯಕಾಮ ವಾರ್ತೆ ಯಾದಗಿರಿ:
    ಆದಿ,ಅನಾದಿ ಕಾಲದಿಂದಲೂ ಯೋಗ, ವ್ಯಾಯಾಮ,ಧ್ಯಾನ ಋಷಿ ಮುನಿಗಳು ಮಾಡಿಕೊಂಡ ಬಂದ ಪರಿಣಾಮ ಅವರಿಗೆ ಆಯುಷ್ಯ ಹೆಚ್ಚಿಗೆ ಇತ್ತು ಮತ್ತುಉತ್ತಮ ಆರೋಗ್ಯ ಹೊಂದಿದ್ದರೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

    ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ, ಹಾಗೂ ಸರ್ಕಾರದ ಇತರೆ ಇಲಾಖೆ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಪ್ನಾ ಮೈದಾನದಲ್ಲಿ ಆಯೋಜಿಸಿದ್ದ “11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಭಾರತೀಯರು ಯೋಗದ ಮೂಲಕವೇ ಅನೇಕ ರೋಗಗಳನ್ನು ಗುಣಪಡಿಸಿಕೊಳ್ಳುವ ಕಾಲವೊಂದಿತ್ತು. ಆದರೆ, ಮುಂದೆ ಇಂಗ್ಲಿಷ್ ಔಷಧಿಗಳಿಗೆ ಮೊರೆ ಹೋಗುವ ಮೂಲಕ ಈ ದೇಸಿ ಪದ್ದತಿ ಮೇಲಿನ ಕಾಳಜಿ ಕಡಿಮೆ ಆಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಜನರು ಯೋಗ ಇತರೆ ದೈಹಿಕ‌ ಕಸರತ್ತಿನ ಮೂಲಕ ತಮ್ಮ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಮರಳಿದ್ದಾರೆಂದು ಶಾಸಕರು‌ ವಿವರಿಸಿದರು.

    ಪ್ರತಿ ನಿತ್ಯ ಬೆಳಗ್ಗೆ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಆಗಿ ಲವ,ಲವಿಕೆಯಿಂದ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಬಹುದೆಂದು ಹೇಳಿದರು.

    ಚಟಗಳ ದಾಸರಾಗದೇ ಉತ್ತಮ ಆರೋಗ್ಯ ಹೊಂದಿ,ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ, ಶುದ್ಧ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.

    ನಮ್ಮ ಈ ವಿದ್ಯೆ ಈಗ ಅಂತರ ರಾಷ್ಟ್ರಮಟ್ಟದಲ್ಲಿ ಭಾರಿ ಚಲಾವಣೆಗೆ ಬಂದಿದೆ. ಇದೇ ಭಾರತದ ಶಕ್ತಿ ಎಂದರು.

    ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ನಗರಸಭೆ ಆಯುಕ್ತರಾದ ಉಮೇಶ ಚವ್ಹಾಣ, ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಜೆ.ಗಾಳಿ, ಯೋಗ ಗುರುಗಳಾದ ಸೋಮನಾಥರೆಡ್ಡಿ ಎಲ್ಹೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನಿರ್ದೇಶ ಪಂಡೀತರಾವ, ರೇಶ್ಮೆ ಇಲಾಖೆ ಸಹಾಯಕ ಸಂತೋಷ,
    ವೈದ್ಯಾಧಿಕಾರಿ ಪ್ರಕಾಶ ರಾಜಾಪೂರೆ, ಬ್ರಹ್ಮಾಕುಮಾರಿ ವೀಣಾ ಅಕ್ಕಾ ಇದ್ದರು,

  • ದೇಹ ಮತ್ತು ಮನಸ್ಸು ಸ್ವಾಸ್ತ್ಯವಾಗಿಡಲು ಯೋಗದಿಂದ ಸಾಧ್ಯ – ನಾಯಕ್

    ದೇಹ ಮತ್ತು ಮನಸ್ಸು ಸ್ವಾಸ್ತ್ಯವಾಗಿಡಲು ಯೋಗದಿಂದ ಸಾಧ್ಯ – ನಾಯಕ್

    ಸತ್ಯಕಾಮ ವಾರ್ತೆ ಗುರುಮಠಕಲ್:

    ಯೋಗವು ಭಾರತದಲ್ಲಿ ಅಳವಡಿಸಿಕೊಂಡ ಸುಂದರವಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರಪಂಚದಾದ್ಯಂತ ಜನರು ಆರೋಗ್ಯಕರ ಜೀವನವನ್ನು ಹೊಂದಲು ಯೋಗವನ್ನು ಪ್ರಶಂಸಿಸುವತ್ತ ಸಾಗುತ್ತಿದ್ದಾರೆ ಎಂದು ಮುಖ್ಯಗುರು ವೀರೇಂದ್ರ ನಾಯಕ್ ಹೇಳಿದರು.

    ಪಟ್ಟಣದ ಖಾಸಮಠ ಆವರಣದಲ್ಲಿ 11ನೇ ಅಂತರ್ ರಾಷ್ಟೀಯ ಯೋಗ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ಯೋಗವು ಮಾನವೀಯತೆಗೆ ಸಂಪೂರ್ಣ ಮಸಾಜ್ ಅನ್ನು ಹೊಂದಿದೆ. ಇದು ಮಾನವ ದೇಹ, ಮನಸ್ಸು ಮತ್ತು ಆತ್ಮಕ್ಕೂ ಮಸಾಜ್ ಅನ್ನು ಹೊಂದಿದೆ. ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಇದನ್ನು ಮೊದಲು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಘೋಷಿಸಿದರು. ಅದರ ನಂತರ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲು ಪ್ರಾರಂಭಿಸಲಾಯಿತು ಮತ್ತು ಅದನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಪರಿವರ್ತಿಸಲಾಯಿತು ಎಂದು ತಿಳಿಸಿದರು.‌

    ಇದೇ ಸಂಧರ್ಭದಲ್ಲಿ ಯೋಗಪಟುಗಳಾದ ಹಣಮಂತು ಹಾಗೂ ನರಸರೆಡ್ಡಿ ಶಾಲಾ ಮಕ್ಕಳಿಗೆ ಯೋಗದಿನವನ್ನು ವಿವಿಧ ಯೋಗ ಭಂಗಿಯ ಯೋಗ ಪ್ರದರ್ಶಿಸುವದರ ಮೂಲಕ ಆಚರಣೆಮಾಡಲಾಯಿತು. ಶಿಕ್ಷಕ ಲಾಲಪ್ಪ ಯಾದವ ಸ್ವಾಗತಿಸಿದರು.

    ಈ ವೇಳೆ ನಿರ್ದೇಶಕ ಅಖಂಡೇಶ್ವರ ಹಿರೇಮಠ, ಮುಖ್ಯಗುರುಗಳಾದ ಸುದರ್ಶನ್ ಗೌಡ, ದೈ. ಶಿಕ್ಷಕ ನರಸರೆಡ್ಡಿ ಗಡ್ಡೆಸೂಗೂರು, ಚಂದ್ರಶೇಖರ್, ವಿಜಯಕುಮಾರ್, ಭಾಗ್ಯಲಕ್ಷ್ಮೀ ವಾರದ, ಮೌನಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಸಾಹಿತ್ಯ ಕ್ಷೇತ್ರಕ್ಕೆ ಎಚ್ಎಸ್ವಿ ಕೊಡುಗೆ ಅಪಾರ – ಶಿವಣ್ಣ ಇಜೇರಿ

    ಸಾಹಿತ್ಯ ಕ್ಷೇತ್ರಕ್ಕೆ ಎಚ್ಎಸ್ವಿ ಕೊಡುಗೆ ಅಪಾರ – ಶಿವಣ್ಣ ಇಜೇರಿ

    ಸತ್ಯಕಾಮ ವಾರ್ತೆ ಶಹಾಪುರ:

    ಹಿರಿಯ ಸಾಹಿತಿ,ಲೇಖಕ,ಕಾದಂಬರಿಕಾರ ಡಾ.ಎಚ್.ಎಸ್ ವೆಂಕಟೇಶಮೂರ್ತಿಯವರ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೆರಿ ಹೇಳಿದರು

    ನಗರದ ಮಾತೃ ಛಾಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಇತ್ತೀಚಿಗೆ ನಮ್ಮನ್ನು ಅಗಲಿದ ನಾಡಿನ ಹೆಸರಾಂತ ಹಿರಿಯ ಸಾಹಿತಿ,ಡಾ.ಎಚ್.ಎಸ್ ವೆಂಕಟೇಶಮೂರ್ತಿ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

    ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಸಿದ್ಧಲಿಂಗಣ್ಣ ಆನೆಗುಂದಿ ಮಾತನಾಡಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ಗ್ರಾಮೀಣ ಪ್ರದೇಶದಿಂದ ಬಂದಂತ ಪ್ರತಿಭೆ,ಅತಿ ಹೆಚ್ಚು ಗ್ರಾಮೀಣ ಸೊಗಡಿನ ಮತ್ತು ಪರಿಸರದ ಕಾಳಜಿ ಹೊಂದಿದ್ದರು ಅಲ್ಲದೆ ಸಾಹಿತ್ಯ ರಚನೆಯ ಜೊತೆಗೆ ಸಂಗೀತ ಕ್ಷೇತ್ರಕ್ಕೂ ಸಾಕಷ್ಟು ಶ್ರಮಿಸಿದ್ದಾರೆ ಎಂದು ನುಡಿದರು.

    ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಬಸವರಾಜ ಶಿಣ್ಣೂರ ಮಾತೃ ಛಾಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣ ಖ್ಯಾತನಾಳ,ಸಂಶೋಧಕ,ಸಾಹಿತಿ ಸಾಯಿಬಾಬಾ ಅಣಬಿ,ಪರಮಣ್ಣ ಬಡಿಗೇರ್,ಮಲ್ಲಪ್ಪ ಕಾಂಬಳೆ,ಬಾಬುರಾವ್,ಶರಣು ಕಾಡಮಗೇರ ಹಾಗೂ ಶಾಲಾ ಸಿಬ್ಬಂದಿಗಳಾದ ದಾನೇಶ್ವರಿ,ಶರಣಮ್ಮ ಜೊತೆಗೆ ಇನ್ನಿತರರು ಉಪಸ್ಥಿತರಿದ್ದರು

  • ಕೋರ್ಟ್ ಹಾಲ್ ಗಳಲ್ಲಿ ಬಾಬಾಸಾಹೇಬರ ಭಾವಚಿತ್ರ ಹಾಕಲು ಹೈಕೋರ್ಟ್ ಆದೇಶ: ಜಗದೀಶ ದಾಸನಕೇರಿ ಹರ್ಷ

    ಕೋರ್ಟ್ ಹಾಲ್ ಗಳಲ್ಲಿ ಬಾಬಾಸಾಹೇಬರ ಭಾವಚಿತ್ರ ಹಾಕಲು ಹೈಕೋರ್ಟ್ ಆದೇಶ: ಜಗದೀಶ ದಾಸನಕೇರಿ ಹರ್ಷ

    ಸತ್ಯಕಾಮ ವಾರ್ತೆ ಯಾದಗಿರಿ: 
    ಕರ್ನಾಟಕ ಹೈಕೋರ್ಟ್ ಬೆಂಗಳೂರು, ಹೈಕೋರ್ಟ ಪೀಠ ಧಾರವಾಡ, ಕಲ್ಬುರ್ಗಿ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯದ ಕೋರ್ಟ್ ಹಾಲ್ ಗಳಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಹೈಕೋರ್ಟ್ರಿಜಿಸ್ಟಾçರ್ ಜನರಲ್ ಆದೇಶ ಹೊರಡಿಸಿದ್ದಾರೆ. ಇದು ಸ್ವಾಗತಾರ್ಹ ಎಂದು ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ.
    ಈ ಕುರಿತು ಹೇಳಿಕೆ ನೀಡಿರುವ ಅವರು, ನಮ್ಮ ಸಂಘಟನೆಯಿAದ ಮೊದಲ ಬೇಡಿಕೆ ಇದಾಗಿತ್ತು, ಇದೇ ಬೇಡಿಕೆಯನ್ನು ಇಟ್ಟುಕೊಂಡು ಸತತ ೨-೩ ವರ್ಷಗಳಿಂದ ಮಾಡಿದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.
    ಇದಾದ ನಂತರ ಅಹಿಂದ ಸಂಘಟನೆ ಮುಖಾಂತರವೂ ಹೋರಾಟ ಮಾಡಿದ್ದು ವಿವಿಧ ದಲಿತ ಸಂಘಟನೆಗಳು ರಾಜ್ಯದ ಹಲವು ಕಡೆ ಹೋರಾಟ ನಡೆಸಿದ್ದವು ಛಲಬಿಡದೇಹೋರಾಟ ಮುಂದುವರೆಸಿದ ಫಲವಾಗಿ ಇಂದು ಕೋರ್ಟ್ ಆದೇಶವಾಗಿರುವುದು ಸಂತಸ ತಂದಿದೆ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
  • ಜೂನ್ 23 ರಂದು ಶ್ರೀ ಈರಗಣ್ಣ ತಾತ ದರ್ಗಾ ಉದ್ಘಾಟನೆ

    ಜೂನ್ 23 ರಂದು ಶ್ರೀ ಈರಗಣ್ಣ ತಾತ ದರ್ಗಾ ಉದ್ಘಾಟನೆ

    ಸತ್ಯಕಾಮ ವಾರ್ತೆ ವಡಗೇರಾ: 
    ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಜರತ್ ಇಮಾಮ ಕಾಸಿಂ ದೇವರ ಸೇವಕರಾದ ಲಿಂಗೈಕ್ಯ ಶ್ರೀ ಈರಗಣ್ಣ ತಾತನವರ ನೂತನ ದರ್ಗಾ ಉದ್ಘಾಟನೆಯು ಸೋಮವಾರ ಜೂನ್ 23 ರಂದು ಬೆಳಿಗ್ಗೆ 9:30ಕ್ಕೆ ಸಂತ ಶರಣರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ದರ್ಗಾ ಕಮಿಟಿಯವರು ತಿಳಿಸಿದ್ದಾರೆ.
    ಅಂದು ಬೆಳಗ್ಗೆ ಗಂಧ ಮೆರವಣಿಗೆಯೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ರಾತ್ರಿ 10:30ಕ್ಕೆ ಕವಾಲಿ ಕಾರ್ಯಕ್ರಮ ಜರುಗಲಿದೆ ಈ ದರ್ಗಾ ಉದ್ಘಾಟನ  ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಬೆಂಡೆಬೆಂಬಳಿ ಗ್ರಾಮದ ದರ್ಗಾ ಕಮಿಟಿಯವರು ಕೋರಿದ್ದಾರೆ