Author: Satyakam NewsDesk

  • ಅಗ್ನಿವೀರ್ 2025: ಫಲಿತಾಂಶ ಪ್ರಕಟ

    ಅಗ್ನಿವೀರ್ 2025: ಫಲಿತಾಂಶ ಪ್ರಕಟ

    ನವದೆಹಲಿ: ಭಾರತೀಯ ಸೇನೆಯು ಅಗ್ನಿವೀರ್ ನೇಮಕಾತಿ 2025ರ ಭಾಗವಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಯ ಫಲಿತಾಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನ್ 30 ರಿಂದ ಜುಲೈ 10, 2025 ರವರೆಗೆ ನಡೆದ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶಗಳನ್ನು joinindianarmy.nic.in ನಲ್ಲಿ ಪರಿಶೀಲಿಸಬಹುದು ಹಾಗೂ ಡೌನ್‌ಲೋಡ್ ಮಾಡಬಹುದು.

     

     ಫಲಿತಾಂಶ ಪರಿಶೀಲನೆಗಾಗಿ ಹಂತಗಳು: 
    • ಮುಖಪುಟದಲ್ಲಿ “Agneepath CEE Result 2025” ಎಂಬ ಲಿಂಕ್ ಕ್ಲಿಕ್ ಮಾಡಿ
    • ನಿಮ್ಮ ಲಾಗಿನ್ ವಿವರಗಳು (ರಿಜಿಸ್ಟರ್ಡ್ ಇಮೇಲ್ ಐಡಿ/ಫೋನ್ ನಂಬರ್ ಮತ್ತು ಪಾಸ್ವರ್ಡ್) ನಮೂದಿಸಿ
    • ಫಲಿತಾಂಶ ಪರದೆಯ ಮೇಲೆ ತೋರಿಸಲಿದೆ
    • ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ ಔಟ್ ತೆಗೆದುಕೊಳ್ಳಿ

    ಪರೀಕ್ಷೆಯ ಕುರಿತು ಸಂಕ್ಷಿಪ್ತ ವಿವರ:

    • ಪರೀಕ್ಷೆಯ ದಿನಾಂಕಗಳು: ಜೂನ್ 30 – ಜುಲೈ 10, 2025

    • ಪರೀಕ್ಷಾ ಮಾದರಿ: ಬಹು ಆಯ್ಕೆ ಪ್ರಶ್ನೆಗಳು (MCQ), ವಸ್ತುನಿಷ್ಠ ಮಾದರಿ

    • ಅರ್ಜಿ ಪ್ರಕಾರ:

      • ಕೆಲವೊಂದು ವರ್ಗದ ಅಭ್ಯರ್ಥಿಗಳಿಗೆ 1 ಗಂಟೆಯಲ್ಲಿ 50 ಪ್ರಶ್ನೆಗಳು

      • ಇತರರಿಗೆ 2 ಗಂಟೆಯಲ್ಲಿ 100 ಪ್ರಶ್ನೆಗಳು

    • ಪರೀಕ್ಷಾ ಭಾಷೆಗಳು (13): ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಬೆಂಗಾಲಿ, ಉರ್ದು, ಗುಜರಾತಿ, ಮರಾಠಿ, ಅಸ್ಸಾಮಿ

    ಅಗ್ನಿವೀರ್‌ ಆಗಿ ಸೇನೆಯ ಸೇರುವ ಕನಸು ಹೊಂದಿರುವ ಅಭ್ಯರ್ಥರಿಗೆ ಇದು ಮಹತ್ವದ ಹಂತ,

    ಸೂಚನೆ: ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸ್ಪಷ್ಟತೆಗಾಗಿ, ಅಭ್ಯರ್ಥಿಗಳು joinindianarmy.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

    ನೇಮಕಾತಿ ಸುದ್ದಿಗಳು ಹಾಗೂ ಶಿಕ್ಷಣ ಮಾಹಿತಿ ಪಡೆಯಲು, ತಕ್ಷಣವೇ ಸತ್ಯಕಾಮ ಗ್ರೂಪ್‌ ಸೇರಿಕೊಳ್ಳಿ! 

  • ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಜೋ ರೂಟ್

    ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಜೋ ರೂಟ್

    ಇಂಗ್ಲೆಂಡ್‌ನ ಭರವಸೆಯ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಮತ್ತೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ, ರೂಟ್ ಅವರು ತಮ್ಮ 38ನೇ ಟೆಸ್ಟ್ ಶತಕವನ್ನು ಸಿಡಿಸಿ ವಿಶ್ವದ ಗಮನ ಸೆಳೆದಿದ್ದಾರೆ.

    ಇದರಿಂದ, ಅವರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗ ರೂಟ್ ಅವರ ಖಾತೆಯಲ್ಲಿ 13,380ಕ್ಕಿಂತ ಹೆಚ್ಚು ರನ್‌ಗಳು ದಾಖಲಾಗಿದ್ದು, ಅವರ ಮುಂದೆ ಕೇವಲ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (15,921 ರನ್) ಮಾತ್ರ ಉಳಿದಿದ್ದಾರೆ.

    ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 433/7 ರನ್‌ಗಳನ್ನು ಗಳಿಸಿ ಭಾರತದ ಮೇಲೆ 75 ರನ್ ಮುನ್ನಡೆ ಸಾಧಿಸಿದೆ. ರೂಟ್ ಅವರ ಈ ಶತಕದ ಜೊತೆಗೆ ಬೆನ್ ಸ್ಟೋಕ್ಸ್ (69) ಮತ್ತು ಒಲಿ ಪೋಪ್ (71) ಅವರ ಮಹತ್ವದ ಆಟ ಸಹ ತಂಡದ ಗೆಲುವಿಗೆ ಬಲ ನೀಡಿದೆ.

    ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಈ ಸಾಧನೆಗೆ ಪ್ರತಿಕ್ರಿಯೆ ನೀಡುತ್ತಾ – “ಜೋ ರೂಟ್ ನಮ್ಮ ತಂಡದ ನಿಜವಾದ ತಾರೆ. ಅವರ ಶಾಂತ ಮನಸ್ಸು, ತಂತ್ರಜ್ಞತೆ ಮತ್ತು ನಿಸ್ವಾರ್ಥ ಆಟದಿಂದ ಇಂಗ್ಲೆಂಡ್ ಗೆ ಗೆಲುವು ಸಾಧ್ಯವಾಗಿದೆ,” ಎಂದು ಕೊಂಡಾಡಿದ್ದಾರೆ.

    ಮುಂದಿನ ಗುರಿ: ಇದು ಜೋ ರೂಟ್ ಅವರ ಸಾಧನೆಯ ಕನಿಷ್ಠ ಹಂತ ಮಾತ್ರ. cricket ತಜ್ಞರ ಅಂದಾಜು ಪ್ರಕಾರ ಅವರು ಮುಂದಿನ 2–3 ವರ್ಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಬಹುದಾದ ಸಾಧ್ಯತೆ ಇದೆ.

  • ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಮೇಲೆ ಹಲ್ಲೆ- ಎಚ್. ಆಂಜಿನೇಯ ವಿರುದ್ಧ ಕ್ರಮಕ್ಕೆ ಕುಳುವ ಮಹಾಸಂಘ ಆಗ್ರಹ

    ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಮೇಲೆ ಹಲ್ಲೆ- ಎಚ್. ಆಂಜಿನೇಯ ವಿರುದ್ಧ ಕ್ರಮಕ್ಕೆ ಕುಳುವ ಮಹಾಸಂಘ ಆಗ್ರಹ

     ಸತ್ಯಕಾಮ ವಾರ್ತೆ ಯಾದಗಿರಿ:

    ಅಲೆಮಾರಿ ಸಮುದಾಯಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೆ ರಾಜ್ಯಮಟ್ಟದ ಸಭೆಯಲ್ಲಿ ಉಂಟಾದ ಅವಮಾನ ಹಾಗೂ ಹಲ್ಲೆ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ಮಾಜಿ ಸಚಿವ ಹೆಚ್. ಆಂಜಿನೇಯ ಸೇರಿದಂತೆ ಕೆಲ ರಾಜಕೀಯ ನಾಯಕರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾಧ್ಯಕ್ಷ ಬಸವರಾಜ ಭಜಂತ್ರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾದ್ಯಕ್ಷ  ಜುಲೈ 5ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ೪೯ ಅಲೆಮಾರಿ ಜಾತಿಗಳ ಸಭೆಯಲ್ಲಿ, ಸಮಾವೇಶಕ್ಕೆ ಆಹ್ವಾನವಿಲ್ಲದೆ ಬಂದಿದ್ದೀರಿ ಎಂದು ಪಲ್ಲವಿ ಅವರನ್ನು ವಾಗ್ದಾಳಿ ನಡೆಸಿ, ಬಳಿಕ ಶಾರೀರಿಕವಾಗಿ ದೌರ್ಜನ್ಯ ನಡೆಸಲಾಗಿದೆ. ಇದೇ ವೇಳೆ ಹೆಣ್ಣು ನಾಯಕರಾಗಿ ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷೆ ಪ್ರಭಾವತಿ ಕೂಡ ಹಲ್ಲೆಗೆ ಒಳಗಾಗಿದ್ದು, ಅವರ ಮೇಲೆ ದಲ್ಲಾಳಿಗಳು ಮಾಡಿದ ಗುಂಡಾ ಕೃತ್ಯ ಸಮುದಾಯದ ಗೌರವಕ್ಕೆ ಪೆಟ್ಟು ತಂದುಕೊಟ್ಟಿದೆ ಎಂದರು.

    ಅಲೆಮಾರಿ ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಾದ್ಯಂತ ಶ್ರಮಿಸಿ, ಎಲ್ಲಾ ೫೧ ಅಲೆಮಾರಿ/ಅರೆ ಅಲೆಮಾರಿ ಜಾತಿಗಳನ್ನು ಸಮಾನವಾಗಿ ಒಗ್ಗಟ್ಟಿಗೆ ತರಲು ಪ್ರಯತ್ನಿಸುತ್ತಿರುವ ಪಲ್ಲವಿ ಅವರ ಬೆಳವಣಿಗೆ ಸಹಿಸದವರ ತಂಡವೇ ಈ ದೌರ್ಜನ್ಯಕ್ಕೆ ಕಾರಣ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ.

    ಈ ಘಟನೆ ಪೂರ್ವನಿಯೋಜಿತ ಪಿತೂರಿಯಾಗಿದ್ದು, ಬೆಂಬಲಿಗರು, ಬಿಜೆಪಿ ಪಕ್ಷದ ಕೆಲವು ಮುಖಂಡರು, ದಲ್ಲಾಳಿಗಳಿಂದ ಇದು ನಡೆದಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೈಗ್ರೌಂಡ್ ಠಾಣೆಯಲ್ಲಿ ಏಳ ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವ ಸಂದರ್ಭದಲ್ಲೂ, ಪ್ರಮುಖ ಆರೋಪಿಗಳನ್ನು ಬಂಧಿಸಲು ಹಿಂಜರಿಯುತ್ತಿರುವ ಸರಕಾರದ ನಿರ್ಲಕ್ಷ್ಯತೆಯನ್ನು ಸಂಘದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

    ಇನ್ನೂ ಸಂಘದ ಮನವಿಯಲ್ಲಿ, ಹೆಚ್. ಆಂಜಿನೇಯ ಅವರನ್ನು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಿ, ಪಕ್ಷದಿಂದಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಲಾಗಿದೆ. ಇಲ್ಲವಾದರೆ ರಾಜ್ಯದಾದ್ಯಂತ ಆಕ್ರೋಶಾತ್ಮಕ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    ಈ ಘಟನೆ, ಅಲೆಮಾರಿ ಸಮುದಾಯದ ಹೆಮ್ಮೆಯ ಮೇಲಿನ ದಾಳಿಯಾಗಿ ಪರಿಗಣಿಸಲ್ಪಡುತ್ತಿದ್ದು, ಅಧಿಕಾರ, ರಾಜಕೀಯ ಮತ್ತು ಸಮುದಾಯ ಆಳವಾದ ಸಂಘರ್ಷದ ಚಿಹ್ನೆಯಾಗಿ ಪರಿಣಮಿಸಿದೆ. ಪಲ್ಲವಿ ವಿರುದ್ಧ ನಡೆದ ಕೃತ್ಯ ಕೇವಲ ರಾಜಕೀಯ ಆರೋಪವಲ್ಲ, ಇದು ಸಮುದಾಯದ ಅವಮಾನವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣ ಸ್ಪಷ್ಟ ಮತ್ತು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ಕುಳುವ ಮಹಾಸಂಘ ಆಗ್ರಹಿಸಿದೆ.

    ಈ ಸಂದರ್ಭದಲ್ಲಿ ರಾಜ್ಯ  ಮುಖಂಡ ಭೀಮರಾಯ ರಂಗAಪೇಠ, ಶಿವಪ್ಪ ಭಜಂತ್ರಿ, ಯಲಸತ್ತಿ, ಆಂಜನೇಯ ಭಜಂತ್ರಿ ಮಸ್ಕನಳ್ಳಿ, ಖಂಡಪ್ಪ ಭಜಂತ್ರಿ ಸುರಪುರ, ಹಣಮಂತ ಭಜಂತ್ರಿ ಗೋಗಿ, ಬಸವರಾಜ ಭಜಂತ್ರಿ ಶಿವಪುರ,   ಆನಂದ ಭಜಂತ್ರಿ ಗೋಪಳಾಪುರ,  ಸಾಬಣ್ಣ ಭಜಂತ್ರಿ ಗಣಪುರ, ಸಂತೋಷ ಭಜಂತ್ರಿ ಮದ್ರಿಕಿ, ರಮೇಶ ಭಜಂತ್ರಿ ಗೋಗಿ, ಗಂಗಪ್ಪ ಭಜಂತ್ರಿ ಅರಕೇರಾ, ಬಸವರಾಜ ಚಟ್ನಳ್ಳಿ,   ಶಂಕರ್ ಭಜಂತ್ರಿ ಹೊಸಕೇರಾ, ಆಶಪ್ಪ ಭಜಂತ್ರಿ ಅರಕೇರಾ ಸೇರಿ ಅನೇಕರಿದ್ದರು.

  • ಮಾಜಿ ಪ್ರಧಾನಿ ಇಂದಿರಾ ಗಾಂಧಿ ರೆಕಾರ್ಡ್​​ ಬ್ರೇಕ್​ ಮಾಡಿದ ಮೋದಿ ಹೊಸ ದಾಖಲೆ ನಿರ್ಮಾಣ

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ರೆಕಾರ್ಡ್​​ ಬ್ರೇಕ್​ ಮಾಡಿದ ಮೋದಿ ಹೊಸ ದಾಖಲೆ ನಿರ್ಮಾಣ

    • ‘ದಕ್ಷ ಆಡಳಿತ ನೀಡುತ್ತಿರುವ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಕೈ ಯತ್ನ’

    ಸತ್ಯಕಾಮ ವಾರ್ತೆ ಯಾದಗಿರಿ:

    ದೇಶಧ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತ ಅವಧಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಅವಧಿಯ ಎರಡನೇ ಪ್ರಧಾನ ಮಂತ್ರಿಗಳಾಗಿದ್ದುದು ದೇಶದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಹೇಳಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಅವರು, ಇಂದಿರಾಗಾAದಿಯವರ ಅಧಿಕಾರ ಅವಧಿಯ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಇಂದು ನಿರ್ಮಿಸಿದ್ದು, ನಾಗಾಲೋಟದಲ್ಲಿ ಮುಂದೆ ಸಾಗುತ್ತಿದ್ದಾರೆ. ಮೋದಿಜಿ ಅವರ ಆಡಳಿತಕ್ಕೆ ದೇಶದ ಜನತೆ ಹೆಮ್ಮೆ ಪಡುತ್ತಿದ್ದು, ಇನ್ನು ಹಲವು ದಾಖಲೆ ನಿರ್ಮಿಸಲಿ ಎಂದು ವಿಶ್ವದಾದ್ಯಂತ ಇರುವ ಭಾರತೀಯರು ಹಾರೈಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ದೇಶವನ್ನು ಅಭೂತಪೂರ್ವವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಅವರ ಆಡಳಿತವನ್ನು ನೋಡಿ ವಿರೋಧ ಪಕ್ಷವಾದ ಕಾಂಗ್ರೆಸ್ ಹತಾಶಗೊಂಡು ನಿರಾಧಾರವಾದ ಆರೋಪಗಳನ್ನು ದಿನನಿತ್ಯ ಮಾಡುವುದನ್ನೇ ಒಂದು ಚಟವಾಗಿಸಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ಹಗಲು ರಾತ್ರಿ ಶ್ರಮಿಸುತ್ತ ಭಾರತ ದೇಶವನ್ನು ಪ್ರಪಂಚದ 4ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಹೆಚ್ಚಿಸಿ ಎಲ್ಲರಂಗಗಳಲ್ಲಿಯೂ ಅಭಿವೃದ್ಧಿ ಪಥದಲ್ಲಿ ದೇಶ ಕೊಂಡೊಯ್ಯುತ್ತಿದ್ದಾರೆ.

    ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಛ ಭಾರತ ಅಭಿಯಾನದಂತಹ ದೂರದೃಷ್ಟಿಯ ಕಾರ್ಯಕ್ರಮಗಳು ನೀಡಿದ್ದಾರೆ.
    ರೈತರಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಿದೆ. ರಾಜತಾಂತ್ರಿಕ ಪ್ರಯತ್ನಗಳು ಭಾರತಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಇತರ ದೇಶಗಳೊಂದಿಗೆ ಬಲವಾದ ಸಂಬAಧಗಳAತಹ ಉಪಕ್ರಮಗಳೊಂದಿಗೆ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಟ್ಟಿವೆ. ಇಂದಿರಾಗಾAದಿಗಿAತಲೂ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿರುವ ಮೋದಿಜಿ ಅವರ ನೇತೃತ್ವದ ಕೇಂದ್ರದ ಸುಸ್ಥಿರ ಸರ್ಕಾರದ ಕೂದಲು ಕೊಂಕಿಸಲು ಆಗದೆ ಇರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹತಾಶರಾಗಿದ್ದು, ಕ್ಷÄಲ್ಲಕ ಕಾರಣ ಮುಂದೆ ಮಾಡಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಮುಂದೆ ಮಾಡಿ ತಾವು ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಹೆಣಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸೇರಿದಂತೆ ಹತ್ತಾರು ಹಗರಣಗಳು ಮಾಡಿ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದು, ಒಟ್ಟಾರೆ ದೇಶದಾದ್ಯಂತ ಸುಳ್ಳಿನ ಆಸರೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ಕೇಂದ್ರದ ಉತ್ತಮ ಆಡಳಿತವನ್ನು ದುರ್ಬಲಗೊಳಿಸಲು ಇನ್ನಿಲ್ಲದಂತೆ ಹೆಣಗುತ್ತಿದೆ. ಆದರೆ ದೇಶದ ಹಾಗೂ ರಾಜ್ಯದ ಜನತೆ ಕಾಂಗ್ರೆಸ್ ನ ಸುಳ್ಳಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • ಹೃದಯಾಘಾತದಿಂದ ಹಲ್ಕ್ ಹೊಗನ್ ವಿಧಿವಶ

    ಹೃದಯಾಘಾತದಿಂದ ಹಲ್ಕ್ ಹೊಗನ್ ವಿಧಿವಶ

    ಅಮೆರಿಕಾ: ವಿಶ್ವ ಪ್ರಸಿದ್ಧ ರೆಸಲಿಂಗ್, ನಟ ಹಾಗೂ ಪಾಪ್ ಕಲ್ಚರ್ ಐಕಾನ್‌ ಆಗಿದ್ದ ಹಲ್ಕ್ ಹೊಗನ್ (ಮೂಲ ಹೆಸರು ಟೆರಿ ಜೀನ್ ಬೋಲಿಯಾ) ಅವರು 71ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಫ್ಲೋರಿಡಾದ ಕ್ಲಿಯರ್‌ವಾಟರ್‌ನಲ್ಲಿ ತಮ್ಮ ನಿವಾಸದಲ್ಲಿದ್ದಾಗ ಇಂದು ಬೆಳಿಗ್ಗೆ ಅಸಹಜ ಆರೋಗ್ಯ ಸಮಸ್ಯೆ ಉಂಟಾಗಿ ತುರ್ತು ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಸುಮಾರು 30 ನಿಮಿಷಗಳ ಕಾಲ CPR ನೀಡಿದ ಬಳಿಕ ಆಸ್ಪತ್ರೆಗೂ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರನ್ನು ಮೃತ ಘೋಷಿಸಿದರು.

    ಹಲ್ಕ್ ಹೊಗನ್ ಅವರು 1980ರ ದಶಕದಲ್ಲಿ “Hulkamania” ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿದ್ದು, WWE (ಹಿಂದಿನ WWF) ಯ ಚಾಂಪಿಯನ್‌ಶಿಪ್‌ ಗೆದ್ದಂತೆ ಹಲವು ಪಟಕಥೆಗಳಿಗೆ ಜೀವ ತುಂಬಿದ್ದರು. ಅವರು ಆರು ಬಾರಿ WWE ಚಾಂಪಿಯನ್ ಆಗಿದ್ದು, ಹಲವು ಪೀಳಿಗೆಗಳ ಅಭಿಮಾನಿಗಳಿಗೆ ಪ್ರೇರಣೆಯಾದರು.

    ಅವರನ್ನು 2005ರಲ್ಲಿ WWE Hall of Fameಗೆ ಸೇರಿಸಲಾಗಿದೆ. ಅವರು ನಟರಾಗಿ, ಟಿವಿ ಶೋಗಳಲ್ಲಿ ಭಾಗವಹಿಸಿ ಹಲವಾರು ವರ್ಷಗಳು ಪ್ರಭಾವ ಬೀರಿದ್ದರು.

    ಅಂತಿಮ ಕ್ಷಣಗಳು:
    ಕ್ಲಿಯರ್‌ವಾಟರ್‌ನಲ್ಲಿ ಬೆಳಿಗ್ಗೆ 9:51 ಕ್ಕೆ ತುರ್ತು ಸೇವೆಗಳಿಗೆ ಕರೆ ಬಂದಿತ್ತು. ಪೊಲೀಸರು ಹಾಗೂ ವೈದ್ಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ 30 ನಿಮಿಷ CPR ನೀಡಿದರೂ ಅವರು ಜೀವಿತರಾದಿಲ್ಲ. ಯಾವುದೇ ಅಪರಾಧ ಅಥವಾ ಅನುಮಾನಾಸ್ಪದ ಘಟನೆ ಇಲ್ಲ ಎಂಬುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಕುಟುಂಬಸ್ಥರು: ಅವರು ತಮ್ಮ ಪತ್ನಿ ಸ್ಕೈ ಡೇಲಿ ಮತ್ತು ಮಕ್ಕಳು ಬ್ರುಕ್ ಹಾಗೂ ನಿಕ್ ಅವರನ್ನು ಅಗಲಿದ್ದಾರೆ.

    ಹಲ್ಕ್ ಹೊಗನ್ ಅವರ ನಿಧನದಿಂದ ರೆಸಲಿಂಗ್ ಪ್ರಪಂಚ ದುಃಖದಲ್ಲಿದ್ದು, ಹಲವು ತಾರೆಗಳು, ಅಭಿಮಾನಿಗಳು ತಮ್ಮ ಸಂತಾಪವನ್ನು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದಾರೆ.

    “ಆಹ್ ಬ್ರದರ್!” ಎಂದು ಆಳವಾದ ಧ್ವನಿಯಲ್ಲಿ ಹೇಳುತ್ತಿದ್ದ ಅವರ ನೆನಪಿನಲ್ಲಿ, ರೆಸಲಿಂಗ್ ಜಗತ್ತು ಶೋಕ ಸ್ಮರಣೆಯಲ್ಲಿದೆ.

  • ನರೇಂದ್ರ ಮೋದಿಜಿ ಪ್ರಧಾನಿಮಂತ್ರಿಯಾಗಿ ಅಪ್ರತಿಮ ಸಾಧನೆ: ಮಹೇಶರಡ್ಡಿ ಮುದ್ನಾಳ

    ನರೇಂದ್ರ ಮೋದಿಜಿ ಪ್ರಧಾನಿಮಂತ್ರಿಯಾಗಿ ಅಪ್ರತಿಮ ಸಾಧನೆ: ಮಹೇಶರಡ್ಡಿ ಮುದ್ನಾಳ

    ಸತ್ಯಕಾಮ ವಾರ್ತೆ ಯಾದಗಿರಿ:-
    ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ಅಭಿವೃದ್ಧಿಗಾಗಿ 4,078 ದಿನಗಳ ಕಾಲ ದೇಶದ ಪ್ರಧಾನಿಯಾಗಿ ನಿರಂತರ ಸೇವೆ ಮಾಡುವುದರೊಂದಿಗೆ, ಮಾಜಿ ಪ್ರಧಾನಿ ಮಂತ್ರಿ ಇಂದಿರಾ ಗಾಂಧಿಯವರ ಸೇವಾವಧಿ (4077 ದಿನ) ಅನ್ನು ಹಿಂದಿಕ್ಕಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

    ದೇಶದ ಇತಿಹಾಸದಲ್ಲಿ ಎರಡನೇ ಅತಿ ದೀರ್ಘಾವಧಿಯ ಪ್ರಧಾನಮಂತ್ರಿ, ರಾಜಕೀಯ ಪಕ್ಷದ ನಾಯಕರಾಗಿ, ಸತತ ಆರು ಸಲ ವಿಜಯಗಳಿಸಿ ಸಾಂವಿಧಾನಿಕ ಹುದ್ದೆಯ ಜವಾವ್ದಾರಿ ನಿರ್ವಹಿಸಿರುವ ಹೆಗ್ಗಳಿಕೆ, ನೆಹರೂ ಹೊರತಾಗಿ ಸತತ ಮೂರು ಭಾರಿ ಪ್ರಧಾನಿ ಹುದ್ದೆಯ ಜವಾಬ್ದಾರಿ ಹಾಗೂ ದೀರ್ಘಾವಧಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಹಾಗೂ ಹಿಂದಿಯೇತರ ಪ್ರಧಾನಿ ಎಂಬ ಕೀರ್ತಿಯೂ ಸನ್ಮಾನ್ಯ ಪ್ರಧಾನಿಗಳದ್ದಾಗಿದೆ.

    ಮೋದಿಜಿಯವರು ಸಿಎಂ ಮತ್ತು ಪ್ರಧಾನಿಯಾಗಿ ಸುಮಾರು 24 ವರ್ಷಗಳ ಸುದೀರ್ಘ ಆಡಳಿತದೊಂದಿಗೆ,  ರಾಷ್ಟ್ರದ ಪ್ರಗತಿಗೆ ದೃಢಸಂಕಲ್ಪ, ತ್ಯಾಗ ಮತ್ತು ಅವಿರತ ಬದ್ಧತೆಯ ಸಂಕೇತವಾಗಿ ಉಳಿದಿದ್ದಾರೆ. ಇದು ಮೋದಿಜೀಯವರು ನಿರ್ಮಿಸಿದ ಮೈಲಿಗಲ್ಲಿನ ಸಂಭ್ರಮಾಚರಣೆ ಮಾತ್ರವಲ್ಲ, ಪರಿವರ್ತನೆಯ ಯುಗ ಮತ್ತು ನಿರ್ಣಾಯಕ, ದೂರದೃಷ್ಟಿಯ ನಾಯಕತ್ವವನ್ನು ಆಚರಿಸುವ ಸಂಭ್ರಮದ ಕ್ಷಣವಾಗಿದೆ ಎಂದು ಹೇಳಿದರು.
  • ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ – ಮೊದಲ ದಿನವೇ ಭರ್ಜರಿ ಕಲೆಕ್ಷನ್!

    ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ – ಮೊದಲ ದಿನವೇ ಭರ್ಜರಿ ಕಲೆಕ್ಷನ್!

    ತೆಲುಗು ಚಿತ್ರರಂಗದ ಖ್ಯಾತ ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಪಿರಿಯಡ್ ಆಕ್ಷನ್ ಎಪಿಕ್ ಹರಿ ಹರ ವೀರ ಮಲ್ಲು ಚಿತ್ರ ಇಂದು ವಿಜೃಂಭಣೆಯಿಂದ ತೆರೆಕಂಡಿದ್ದು, ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರವು, ಬಿಡುಗಡೆ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಅನ್ನು ದಾಖಲಿಸಿದೆ.

    ಚಿತ್ರದ ಚಿತ್ರೀಕರಣ ಸುಮಾರು ಐದು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಅನೇಕ ಬಾರಿ ಬಿಡುಗಡೆಯು ಮುಂದೂಡಲ್ಪಟ್ಟಿತ್ತು. ಕೊನೆಗೆ ಜುಲೈ 24 ರಂದು ತೆರೆಕಂಡ ಈ ಸಿನಿಮಾ, ಬಿಡುಗಡೆಯ ದಿನವೇ ಉತ್ತಮ ಪ್ರತಿಕ್ರಿಯೆಗಳನ್ನು ಕಂಡಿದೆ.

    ಚಿತ್ರ ಮೊದಲ ದಿನದ ಕಲೆಕ್ಷನ್ ₹ (ರೂ)
    ಹರಿ ಹರ ವೀರ ಮಲ್ಲು ₹43.8 ಕೋಟಿ
    ವಕೀಲ್ ಸಾಬ್ ₹40.10 ಕೋಟಿ
    ಭೀಮ್ ನಾಯಕ್ ₹37.15 ಕೋಟಿ
    ಬ್ರೋ ₹30.5 ಕೋಟಿ

    ಈ ಮೂಲಕ, ಹರಿ ಹರ ವೀರ ಮಲ್ಲು ಸಿನಿಮಾ ಪವನ್ ಕಲ್ಯಾಣ್ ಅವರ ಚಲನಚಿತ್ರ ವೃತ್ತಿ ಜೀವನದಲ್ಲಿ ಅತ್ಯುತ್ತಮ ಆರಂಭಿಕ ದಿನದ ಕಲೆಕ್ಷನ್ ದಾಖಲಿಸಿದ ಸಿನಿಮಾ ಎನಿಸಿಕೊಂಡಿದೆ.

    ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚಿತ್ರವು ಭರ್ಜರಿಯಾಗಿ ಓಡುತ್ತಿದ್ದು, ಈ ಎರಡು ರಾಜ್ಯಗಳಿಂದ ಮಾತ್ರವೇ ₹7 ಕೋಟಿ ರೂ. ಕಲೆಕ್ಷನ್‌ ಆಗಿದೆ. ಚಿತ್ರದ ಒಟ್ಟು ಭಾರತ ಕಲೆಕ್ಷನ್ ₹11.12 ಕೋಟಿ ರೂ. ಎಂದು ಪ್ರತ್ಯೇಕ ವರದಿಯೊಂದರಲ್ಲಿ ಹೇಳಲಾಗಿದೆ.

    ಪವನ್ ಕಲ್ಯಾಣ್ ಅವರ ಶಕ್ತಿ, ಪರದೆಯ ಮೇಲೆ ಅವರ ಬಲಿಷ್ಠ ಹಾಜರಾತಿ ಮತ್ತು ಆಕ್ಷನ್ ದೃಶ್ಯಗಳ ನಿರ್ವಹಣೆ ಚಿತ್ರದ ಹೈಲೈಟ್ ಆಗಿವೆ. ಚಿತ್ರದಲ್ಲಿನ ವಿ.ಎಫ್‌.ಎಕ್ಸ್, ಕಲಾತ್ಮಕ ದೃಶ್ಯಗಳು ಪ್ರೇಕ್ಷಕರನ್ನು ಸೆಳೆದಿವೆ. ಆದರೆ ಇಂಟರ್ವೆಲ್ ನಂತರ ಕಥೆಯ ನಿಧಾನಗತಿ ಮತ್ತು ನಿರೀಕ್ಷೆಗಿಂತ ಕಡಿಮೆ ತಾಂತ್ರಿಕ ತೃಪ್ತಿ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

    ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗಾರರಾಗಿ ನಿಧಿ ಅಗರ್ವಾಲ್, ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ನೋರಾ ಫತೇಹಿ, ಸುನಿಲ್ ವರ್ಮಾ, ಜಿಶು ಸೇನ್‌ಗುಪ್ತಾ ಮತ್ತು ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಹರಿ ಹರ ವೀರ ಮಲ್ಲು ಸಿನಿಮಾ ಪವನ್ ಕಲ್ಯಾಣ್ ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಆರಂಭವಾಗಿದ್ದು, ಉತ್ತಮ ಓಪನಿಂಗ್‌ನೊಂದಿಗೆ ಬಾಕ್ಸ್‌ ಆಫೀಸ್‌ನಲ್ಲಿ ಶಕ್ತಿಶಾಲಿಯಾದ ಹಾಜರಾತಿ ನೀಡಿದೆ. ಮೊದಲ ದಿನವೇ ಚಿತ್ರವು ₹43.8 ಕೋಟಿ ಗಳಿಸಿದ್ದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಭರ್ಜರಿ ಗಳಿಕೆಯ ನಿರೀಕ್ಷೆಯಿದೆ.

  • ಕಾಣೆಯಾದ ಯುವಕನ ಪತ್ತೆಗೆ ಮನವಿ

    ಕಾಣೆಯಾದ ಯುವಕನ ಪತ್ತೆಗೆ ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಯಾದಗಿರಿ ನಗರದ ಮದನಪೂರಗಲ್ಲಿ 19 ವರ್ಷದ ಮಹ್ಮದ ಫರೀದ 2025ರ ಜುಲೈ 20 ರಂದು ಕಾಣೆಯಾದ ಹಿನ್ನೆಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ ಎಂದು ಯಾದಗಿರಿ ನಗರ ಠಾಣೆ ಆರಕ್ಷಕ ಉಪ ನಿರೀಕ್ಷಕರು (ಕಾ.ಸು) ಮಂಜನಗೌಡ ಅವರು ತಿಳಿಸಿದ್ದಾರೆ.

    ಕಾಣೆಯಾದ ಪುರುಷ ನಾವು ಎಲ್ಲರು ಮನೆಯಲ್ಲಿದ್ದಾಗ ಮಧ್ಯಾಹ್ನ 12 ಗಂಟೆಗೆ ಮನೆಯಿಂದ ಹೇಳದೆ ಕೇಳದೇ ಮನೆಯಿಂದ ಹೊರಟು ಹೋದವ ಸಂಜೆ ಮನೆಗೆ ಬರದ ಹಿನ್ನೆಲೆ ಅಂದು ಯಾದಗಿರಿ ನಗರದಲ್ಲಿ ಎಲ್ಲಾ ಕಡೆ ಹುಡಿಕಾಡಲಾಯಿತು ಯಾವುದೇ ಇರುವಿಕೆ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ನಮ್ಮ ಸಂಬಂಧಿಕರ ಮನೆ ಮೊಬೈಲ್ ಕರೆ ಮಾಡಿ ವಿಚಾರಿಸಲಾಯಿತ್ತು, ಯಾವುದೇ ಇರುವಿಕೆ ಮಾಹಿತಿ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ ಪುರುಷ ಪತ್ತೆಯಾದಲ್ಲಿ ದೂ.ಸಂ.8147067300ಗೆ ಯಾದಗಿರಿ ಕಂಟ್ರೋಲ್ ರೂಂ.ದೂ.ಸಂ. 98480803600, ಯಾದಗಿರಿ ದೂ.ಸಂ.08473 253738 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕ್ವಿಂಟಲ್ ಬಾರದ ಜೋಳದ ಚೀಲ ಹೊತ್ತು ತನ್ನೂರಿನಿಂದ ಶಹಾಪುರ ತಲುಪಿದ ಯುವಕ ನಾಗರಾಜ

    ಕ್ವಿಂಟಲ್ ಬಾರದ ಜೋಳದ ಚೀಲ ಹೊತ್ತು ತನ್ನೂರಿನಿಂದ ಶಹಾಪುರ ತಲುಪಿದ ಯುವಕ ನಾಗರಾಜ

    ಸತ್ಯಕಾಮ ವಾರ್ತೆ ಶಹಾಪುರ :

    ನಾಗರ ಪಂಚಮಿ ಹಬ್ಬದ ಅಂಗವಾಗಿ ಶಹಾಪುರ ತಾಲ್ಲೂಕಿನ ಇಟಗಾ (ಎಸ್) ಗ್ರಾಮದ ಯುವಕ ನಾಗರಾಜ ಈರಪ್ಪ ದೊಡ್ಡಮನಿ ಎಂಬವರು ತಮ್ಮ ವಿಶಿಷ್ಟ ಶಕ್ತಿ ಪ್ರದರ್ಶನದಿಂದ ಕೆಸರು ಗದ್ದೆಯಲ್ಲಿಯೇ ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು ಎಲ್ಲರ ಮನ ಗೆದ್ದಿದ್ದಾರೆ.

    ಹಬ್ಬದ ಸಂಭ್ರಮದಲ್ಲಿ ಕೇವಲ ಸಂಪ್ರದಾಯ ಪಾಲನೆ ಮಾತ್ರವಲ್ಲ, ಶಕ್ತಿಯ ನಿದರ್ಶನವನ್ನೂ ನೀಡಿದ ಇವರು ಕ್ವಿಂಟಲ್ ಬಾರದ ಜೋಳದ ಚೀಲವೊಂದು ಹೊತ್ತುಕೊಂಡು, ಕಾಲ್ನಡಿಗೆ ಮೂಲಕ ಇಟಗಾ (ಎಸ್) ಗ್ರಾಮದಿಂದ ಶಹಾಪುರದ ಹನುಮಾನ ದೇವಾಲಯಕ್ಕೆ ತಲುಪಿಸುವುದು ಇತಿಹಾಸ ಕಾರ್ಯವಾಗಿದೆ ಎನ್ನಬಹುದು.

    ಈ ಅಪರೂಪದ ಶಕ್ತಿ ಪ್ರದರ್ಶನ ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ತವರು ಗ್ರಾಮದಿಂದ ಶಹಾಪುರ ನಗರದ ದೇವಾಲಯದವರೆಗೆ ಅವರ ಮನೋಬಲ, ಶಕ್ತಿಶಾಲಿತ್ವ ಹಾಗೂ ಧೈರ್ಯ ಎಲ್ಲರಿಗೂ ಪ್ರೇರಣೆಯಾಗುತ್ತಿದೆ. ಈತನೊಂದಿಗೆ ಗ್ರಾಮದಿಂದ ಬಂದ ಹಲವಾರು ಯುವಕರು ಸಂತೋಷ ವ್ಯಕ್ತಪಡಿಸಿ ನಾಗರಾಜನನ್ನು ಸನ್ಮಾನಿಸಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಅಭಿನಂದಿಸಿದರು.

    ಗ್ರಾಮದ ಹಿರಿಯರು ಈ ಘಟನೆಯನ್ನು ಕೇವಲ ಶಕ್ತಿ ಪ್ರದರ್ಶನವೆಂದು ನೋಡದೆ, ಅದು ಯುವ ಪೀಳಿಗೆಗೆ ಪ್ರೇರಣೆಯ ಮಾದರಿಯೆಂದು ಅಭಿಪ್ರಾಯಪಟ್ಟರು. “ಇಂತಹ ಕಾರ್ಯಗಳು ಗ್ರಾಮೀಣ ಭಾವೈಕ್ಯತೆ ಹಾಗೂ ಭ್ರಾತೃತ್ವ ಬಲಪಡಿಸುತ್ತವೆ,” ಎಂದು  ಹೇಳಿದರು.

    ಈ ಸಂದರ್ಭದಲ್ಲಿ ಶಹಾಪುರದ ಯುವ ನಾಯಕ ಅವಿನಾಶ್ ಗುತ್ತೇದಾರ್ ಅವರು ನಾಗರಾಜನನ್ನು ಸನ್ಮಾನಿಸಿ ಗೌರವಿಸಿದರು. ಈ ಉತ್ಸವದಲ್ಲಿ ಇಟಗಾ ಹಾಗೂ ಶಹಾಪುರದ ಹಲವಾರು ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮದ ವಿಜೃಂಭಣೆಗೆ ಕಾರಣರಾದರು.

  • ಮೈದುಂಬಿ ಹರಿಯುತ್ತಿರುವ ಸಗರಾದ್ರಿ ಜಲಪಾತಗಳು

    ಮೈದುಂಬಿ ಹರಿಯುತ್ತಿರುವ ಸಗರಾದ್ರಿ ಜಲಪಾತಗಳು

    ಸತ್ಯಕಾಮ ವಿಶೇಷ

    ವರದಿ: ಪ್ರಕಾಶ ಗುದ್ನೇಪ್ಪನವರ.
    ಶಹಾಪುರ : ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ನಾಗರ ಕೆರೆ, ಮಾವಿನ ಕೆರೆಗಳು ತುಂಬಿ ತುಳುಕುತ್ತಿವೆ ಅಲ್ಲದೇ ದಕ್ಷಿಣ ಬಾಗದಲ್ಲಿ ಸಗರಾದ್ರಿ ಬೆಟ್ಟಗಳಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿರುವ ವಿಹಂಗಮ ದೃಶ್ಯ ಪ್ರವಾಸಿಗರ ಚಿತ್ತ ಇತ್ತ ಕಡೆ ಹರಿಸುವದರಲ್ಲಿ ಯಾವುದೇ ಸಂದೇಹ ವಿಲ್ಲ ಎನ್ನಬಹುದು.

    ನಗರದ ದಕ್ಷಿಣ ಭಾಗದಲ್ಲಿ ಸಾಲು ಸಾಲಾಗಿ ಕಂಡು ಬರುವ ಬೆಟ್ಟಗುಡ್ಡುಗಳಿಗೆ ಸಗರಾದ್ರಿ ಬೆಟ್ಟವೆಂದು ಕರೆಯಲಾಗುತ್ತದೆ ಹಾಗೂ ಸಗರನಾಡಿನ ಬೆಟ್ಟಗಳನ್ನೆ ಸಗರಾದ್ರಿ ಬೆಟ್ಟ ಎನ್ನಲಾಗುತ್ತಿದೆ.


    ಇಲ್ಲಿನ ವಿಶ್ವ ಪ್ರಸಿದ್ಧ ಬುದ್ಧ ಮಲಗಿದ ದೃಶ್ಯದ ಪ್ರವಾಸಿಗರ ಕಣ್ಮಣ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನಾಳ್ಕೈದು ಗುಡ್ಡ ಹೊಂದಿಕೊಂಡು ದೂರದಿಂದ ಬುದ್ಧ ಮಲಗಿರುವಂತೆ ಸ್ಪಷ್ಟವಾಗಿ ಚಿತ್ರ ಪ್ರತಿಯುಬ್ಬರಿಗೂ ಆಶ್ಚರ್ಯವನ್ನುಂಟು ಮಾಡಿರುವುದಂತೂ ಸತ್ಯ.

    ಈ ಭಾಗದಲ್ಲಿಯೇ ಗವಿ ಬಸಪ್ಪ ನಾಗ ಬಸಪ್ಪ ಬೆಟ್ಟದ ಪಕ್ಕದಿಂದ ಹರಿದು ಬರುವ ನೀರು ಜಲಪಾತ ಮಳೆಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು. ಇಂತಹ ಬಿಸಿಲನಾಡಿನಲ್ಲಿ ಇಂತಹದೊಂದು ಅದ್ಭುತ ಜಲಪಾತ ಮಳೆಗಾದಲ್ಲಿ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಹತ್ತಾರು ದಿನಗಳಿಂದ ಸತತ ಮಳೆ ಸುರಿಯುತ್ತಿರುವದರಿಂದ ಇದೀಗ ಸಗರಾದ್ರಿ ಜಲಪಾತ ಮೈದುಂಬಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿರವುದು ವಿಶೇಷವಾಗಿದೆ.
    ಮಳೆ ಬಂದಿತೆಂದರೆ ದಾಸನಕೊಳ್ಳ, ಸಗರಾದ್ರಿ ಜಲಪಾತ, ಈ ಭಾಗವೆಲ್ಲ ಹಸಿರಿನಿಂದ ದುಂಬಿಕೊಂಡು ಜನರನ್ನು ಆಕರ್ಷಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಈ ಪ್ರದೇಶ ಮಲೆನಾಡನ್ನು ನೆನಪಿಸುತ್ತದೆ.


    ಸರ್ಕಾರವಾಗಲಿ ಜನಪ್ರತಿನಿದಿನಗಳು ಇತ್ತ ಕಡೆ ಗಮನ ಹರಿಸಿದರೆ ಇದೊಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಯಾವದೇ ಸಂದೇಹವಿಲ್ಲ ಎನ್ನುವರು ಇಲ್ಲಿನ ಸೌಂದರ್ಯ ಸವಿಯಲು ಬರುವ ಜನರು.

    ಒಟ್ಟಾರೆ ಬಿಸಿಲನಾಡಿನಲ್ಲಿ ಮಳೆಗಾಲದಲ್ಲಿ ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿನ ಜಲಪಾತಗಳು ಧೂಮ್ಮಿಕ್ಕಿ ಹರಿದು ಸುತ್ತಮುತ್ತಲಿನ ಜನತೆಗೆ ಖುಷಿ ನೀಡುತ್ತಿರುವುದು ತುಂಬಾ ಸಂತಸ ಎನ್ನಬಹುದು.

    ಪ್ರಕೃತಿಯ ಮಡಿಲಿನಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿರುವ ಬೆಟ್ಟ ಗುಡ್ಡಗಳೊಂದಡೆಯಾದರೆ ಧೂಮುಕ್ಕಿ ಹರಿಯುತ್ತಿರುವ ಜಲಾಪಾತಗಳು ಹಾಗೂ ಮೈದುಂಬಿಕೊಂಡಿರುವ ಕೆರೆಗಳು ನಿಸರ್ಗದ ಸವಿ ಸವಿಯಲು ಪ್ರವಾಸಿಗರು ದಿನ ನಿತ್ಯ ನೂರಾರು ಜನ ಆಗಮಿಸುತ್ತಿರುವುದು ಸರ್ವೇ ಸಮಾನ್ಯವಾಗಿದೆ.

    “ಸಗಾರದ್ರಿ ಬೆಟ್ಟ ಗುಡ್ಡಗಳಲ್ಲಿ ಅನೇಕ ಜಾಲಧಾರೆ ಜಲಪಾತಗಳಿಂದ ನಿಸರ್ಗದ ಸೌಂದರ್ಯ ಇಮ್ಮಡಿಯಾಗಿದೆ ಇಂತಹ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆ ಆಸಕ್ತಿವಹಿಸಿ ಅಭಿವೃದ್ಧಿಗೆ ಮುಂದಾದರೆ ಇನ್ನೂ ಹೆಚ್ಚಿನ ಜನಾಕರ್ಶನಗೊಳ್ಳವುದು ಶತಸಿದ್ಧ ಎನ್ನುವರು” ̲ನಿವೃತ್ತ ರಾಷ್ಟ್ರ ಪಶಸ್ತಿ ವಿಜೇತ ಶಿಕ್ಷಕರಾದ ಸೋಮಶೇಖರಯ್ಯ ಹಿರೇಮಠ.