Author: Satyakam NewsDesk

  • ರಸಗೊಬ್ಬರ ಮಾರಾಟ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೃಷಿ ಅಧಿಕಾರಿ ಎಚ್ಚರಿಕೆ

    ರಸಗೊಬ್ಬರ ಮಾರಾಟ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೃಷಿ ಅಧಿಕಾರಿ ಎಚ್ಚರಿಕೆ

    ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಕೃಷಿ ಅಧಿಕಾರಿ ಭೇಟಿ ; ಪರಿಶೀಲನೆ

    ಸತ್ಯಕಾಮ ವಾರ್ತೆ ಸಿರವಾರ:

    ತಾಲೂಕಿನ ಮಲ್ಲಟ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ನೂಗಡೋಣಿ,ಎನ್ ಹೊಸೂರ, ಬಲ್ಲಟಗಿ,ಬಸವಣ್ಣ ಕ್ಯಾಂಪ್, ಮತ್ತು ಬಾಗಲವಾಡ ಗ್ರಾಮಗಳಲ್ಲಿನ ರಸಗೊಬ್ಬರ ಕೀಟನಾಶಕ ಮಾರಾಟ ಮಳಿಗೆಗಳಿಗೆ ಮಲ್ಲಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾರುತಿ ಯರಗಲ್ ಭೇಟಿ ನೀಡಿ ದಾಸ್ತಾನು ಪರಿಶೀಲನೆ ಮಾಡಿದರು.

    ರಸಗೊಬ್ಬರ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವುದರಿಂದ, ಹೆಚ್ಚಿನ ಧರಕ್ಕೆ ಮಾರಾಟ ಮಾಡುವುದು, ಅಕ್ರಮ ದಾಸ್ತಾನು ಮಾಡುವುದು ಕಾನೂನಿನ ಪ್ರಕಾರ ತಪ್ಪು. ಅವಧಿ ಮೀರಿದ, ಬೀಜ ಹಾಗೂ ಕೀಟನಾಶಕಗಳ ಮಾರಾಟ, ನಿಷೇಧಿತ ಬಯೋ ಕೀಟನಾಶಕಗಳ ಮಾರಾಟವನ್ನು ನಿಷೇಧಿಸಲಾಗಿದೆ. ನಿತ್ಯವೂ ದಾಸ್ತಾನು ಫಲಕ (ಸ್ಟಾಕ್ ಬೋರ್ಡ್) ಬರೆಯಬೇಕು. ತಪ್ಪದೇ ರೈತರಿಗೆ ಖರೀದಿಯ ರಶೀದಿ ನೀಡಬೇಕು ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.


    ಈ ಸಂದರ್ಭದಲ್ಲಿ ಕೃಷಿ ವ್ಯವಸ್ಥಾಪಕ ನಾಗರಾಜ ಕಂಬಾರ್ ಮತ್ತು ಆಂಜನೇಯ ಕೃಷಿ ಮಿತ್ರರು ಹಾಗೂ ರೈತರು ಇದ್ದರು.

  • ನಾಳೆ ನಗರಸಭೆ ಸಾಮಾನ್ಯ ಸಭೆ

    ನಾಳೆ ನಗರಸಭೆ ಸಾಮಾನ್ಯ ಸಭೆ

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರಸಭೆ ಅಧ್ಯಕ್ಷರಾದ ಕು.ಲಲಿತಾ ಅನಪೂರ ಅವರ ಅಧ್ಯಕ್ಷತೆಯಲ್ಲಿ 2025ರ ಜುಲೈ 31ರ ಗುರುವಾರ (ನಾಳೆ) ಅಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಸದಸ್ಯರ ಸಾಮಾನ್ಯ ಸಭೆಯು ಯಾದಗಿರಿ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯಾದಗಿರಿ ನಗರಸಭೆ ಪೌರಾಯುಕ್ತರಾದ ಉಮೇಶ್ ಚವ್ಹಾಣ್ ತಿಳಿಸಿದ್ದಾರೆ.

  • ಅಧಿಕಾರಿಗಳು ತಾಲೂಕಿನ ಹಿರಿಮೆ ಹೆಚ್ಚುವ ಕಾರ್ಯ ಮಾಡಿದ್ದಾರೆ-ಶಾಸಕ ರಾಜುಗೌಡ

    ಅಧಿಕಾರಿಗಳು ತಾಲೂಕಿನ ಹಿರಿಮೆ ಹೆಚ್ಚುವ ಕಾರ್ಯ ಮಾಡಿದ್ದಾರೆ-ಶಾಸಕ ರಾಜುಗೌಡ

    ಸಂಪೂರ್ಣತಾ ಅಭಿಯಾನದ ಸನ್ಮಾನ ಸಮಾರಂಭ
    ಸತ್ಯಕಾಮ ವಾರ್ತೆ ತಾಳಿಕೋಟೆ:

    ಹಿಂದೂಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕುವಂತಹ ಕೆಲಸವನ್ನು ಅಧಿಕಾರಿಗಳು ಮಾಡಿರುವದು ಸಂತಸ ಪಡುವಂತಹದ್ದಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ಹೇಳಿದರು.

    ಮಂಗಳವಾರರಂದು ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಮಚಾಯತ್ ವಿಜಯಪುರ, ತಾಲೂಕಾಡಳಿತ ತಾಲೂಕಾ ಪಂಚಾಯತ್ ತಾಳಿಕೋಟೆ ಇವರ ಸಹಯೋಗದಲ್ಲಿ ಮಹಾತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಸಂಪೂರ್ಣತಾ ಅಭಿಯಾನ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ದೇಶದಲ್ಲಿ ಅತೀ ಹಿಂದೂಳಿದ ತಾಲೂಕುಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ದಿ ಪಡಿಸಬೇಕೆಂಬ ಇಚ್ಚೆಯೊಂದಿಗೆ ಕೇಂದ್ರ ಸರ್ಕಾರವು ನೀತಿ ಆಯೋಗದ ಮೂಲಕ ರಾಜ್ಯದ ೧೪ ತಾಲೂಕುಗಳನ್ನು ಗುರುತಿಸಿ ಅತೀ ಹಿಂದೂಳಿದ ತಾಲೂಕುಗಳಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಸೇರಿಸಿತ್ತು ಅದರಲ್ಲಿ ೩೯ ಸೂಚಂಕಗಳನ್ನು ಅಭಿವೃದ್ದಿ ಪಡಿಸುವದರಲ್ಲಿ ಕೇವಲ ೨ ವರ್ಷಗಳಲ್ಲಿ ೬ ಸೂಚಂಕಗಳನ್ನು ಶೇ.೧೦೦ ರಷ್ಟು ಅಭಿವೃದ್ದಿ ಪಡಿಸಿ ಬಂಗಾರದ ಪಧಕ ಪಡೆದುಕೊಳ್ಳುವಂತಹ ಕೆಲಸ ಅಧಿಕಾರಿಗಳು ಮಾಡಿರುವದು ಸಂತಸ ಪಡುವಂತಹದ್ದಾಗಿದೆ ಅಭಿವೃದ್ದಿ ಕಾರ್ಯಗಳಾಗಬೇಕಾದರೆ ಅಧಿಕಾರಿಗಳ ಸಾರ್ವಜನಿಕರ ಸಹಕಾರವೆಂಬುದು ಬಹುಮುಖ್ಯವಾಗಿ ಬೇಕಾಗುತ್ತದೆ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಒಳಗೊಂಡು ೬ ಸೂಚಂಕಗಳನ್ನು ಶೇ.೧೦೦ ರಷ್ಟು ಅಧಿಕಾರಿಗಳು ಗುರಿಸಾದಿಸಿರುವದು ಮೆಚ್ಚುವಂತಹದ್ದಾಗಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಯನ್ನು ಅಧಿಕಾರಿಗಳು ಅಚ್ಚುಕ್ಕಟ್ಟಾಗಿ ಕೆಲಸ ಮಾಡುವದರ ಜೊತೆಗೆ ಈ ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಗೌರವಿಸುವಂತಹ ಕೆಲಸ ಮಾಡಿರುವದು ಶ್ಲಾಘನೀಯವಾಗಿದೆ ತಾಳಿಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಹಳ್ಳಿಗಳು ಬರುವದು ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಒಳಪಡುತ್ತವೆ ಈ ತಾಲೂಕಿನ ಅಭಿವೃದ್ದಿಗೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆಂದರು.

    ಇನ್ನೋರ್ವ ಅಧ್ಯಕ್ಷತೆ ವಹಿಸಿದ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಮಾತನಾಡಿ ತಾಳಿಕೋಟೆ ನಗರವು ಐತಿಹಾಸಿಕ ನಗರವಾಗಿದೆ ಮತ್ತು ವ್ಯಾಪಾರಿಕರಣ ನಗರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿದೆ ಆದರೆ ಕೇಂದ್ರ ಸರ್ಕಾರವು ೩೯ ಮಾನದಂಡಗಳನ್ನು ಸೇರಿಸಿ ಅತೀ ಹಿಂದೂಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ದಿ ಕಾರ್ಯಗಳಿಗೆ ಮುನ್ನುಡಿಯನ್ನು ಬರೆದಿತ್ತು ಅದರಂತೆ ಅಧಿಕಾರಿಗಳು ಕೇವಲ ೨ ವರ್ಷಗಳಲ್ಲಿ ಶ್ರಮವಹಿಸಿ ೩೯ ಮಾನದಂಡಗಳಲ್ಲಿ ೬ ರಲ್ಲಿ ಶೇ.೧೦೦ ರಷ್ಟು ಸಾಧನೆ ಮಾಡಿ ಗೋಲ್ಡ್ ಮೇಡಲ್ ಪಡೆದುಕೊಂಡಿರುವದು ಸಂತೋಷ ಪಡುವಂತಹದ್ದಾಗಿದೆ ಈ ತಾಳಿಕೋಟೆ ತಾಲೂಕು ವಿಜಯಪುರ ಜಿಲ್ಲೆಯ ಕೊನೆಯ ತಾಲೂಕಾ ಕೇಂದ್ರವಾಗಿತ್ತು ಈ ತಾಲೂಕಿಗೆ ಹೈದ್ರಾಬಾದ ಕರ್ನಾಟಕವು ಸೇರಿಕೊಳ್ಳುತ್ತಿರುವದರಿಂದ ಸಹಜವಾಗಿಯೇ ಹಿಂದೂಳಿದ ಪಟ್ಟಿಯಲ್ಲಿ ಸೇರಿಕೊಂಡಿತ್ತು ಯಾವುದೇ ಕೆಲಸ ಮಾಡಬೇಕೆಂದರೆ ಆತ್ಮ ಸ್ಥೈರ್ಯ, ಆತ್ಮ ವಿಸ್ವಾಸವೆಂಬುದು ಬೇಕಾಗುತ್ತದೆ ಅಂತಹ ಆತ್ಮ ವಿಸ್ವಾಸವನ್ನು ಹೊಂದಿದ ಅಧಿಕಾರಿಗಳು ತಾಲೂಕಿನ ಜನರ ಸಹಕಾರದೊಂದಿಗೆ ೬ ಸೂಚಂಕಗಳಲ್ಲಿ ಶೇ. ೧೦೦ ರಷ್ಟು ಗುರಿ ಸಾಧಿಸಿ ರಾಜ್ಯದ ಹಿಂದೂಳಿದ ೧೪ ತಾಲೂಕುಗಳಲ್ಲಿ ತಾಳಿಕೋಟೆ ತಾಲೂಕು ಗೋಲ್ಡ ಮೇಡಲ್ ಪಡೆದುಕೊಂಡು ಮೊದಲನೇಯದಾಗಿ ಹೊರಬರಲು ಪ್ರಯತ್ನಿಸಿರುವದು ಹೆಮ್ಮೆ ಪಡುವಂತಹದ್ದಾಗಿದೆ ಇನ್ನೂ ೩೩ ಸೂಚಂಕಗಳನ್ನು ಪೂರೈಸಬೇಕಾಗಿದೆ ಅಧಿಕಾರಿಗಳು ಕೆಲಸ ಮಾಡುತ್ತಿರುವ ಪರಿಯನ್ನು ಲಕ್ಷೀಸಿದರೆ ನಮ್ಮಲ್ಲಿಯೂ ಆತ್ಮ ವಿಸ್ವಾಸವೆಂಬುದು ಹೆಚ್ಚಿಸುವಂತೆ ಮಾಡಿದೆ ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಮುಟ್ಟಬೇಕಾಗಿದೆ ಇದರಿಂದ ಹಳ್ಳಿಯಿಂದ ತಾಲೂಕು, ಜಿಲ್ಲೆ ದೇಶ ಎಂದಿಗೂ ಬಡವಾಗುವದಿಲ್ಲಾ ಅಧಿಕಾರಿಗಳ ಆತ್ಮ ಸ್ಥೈರ್ಯದ ಜೊತೆಗೆ ನಿಲ್ಲುವಂತಹ ಕೆಲಸ ರಾಜಕಾರಣಿಗಳು ಸಹ ಮಾಡಬೇಕೆಂದರು.

    ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಮಾತನಾಡಿ ಕೇಂದ್ರ ಸರ್ಕಾರವು ೨೦೧೮ ರಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯೊಂದಿಗೆ ನಮ್ಮ ರಾಜ್ಯದ ೧೪ ತಾಲೂಕುಗಳನ್ನು ಗುರುತಿಸಿ ಹಿಂದೂಳಿದ ತಾಲೂಕುಗಳೆಂದು ಘೋಷಣೆ ಮಾಡಿತ್ತು ಅದರಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕು ಒಳಗೊಂಡಿತ್ತು ಇದನ್ನು ಸವಾಲಾಗಿ ಅಧಿಕಾರಿಗಳು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದರ ಪರಿಣಾಮ ೬ ಸೂಚಂಕಗಳಲ್ಲಿ ಶೇ.೧೦೦ ರಷ್ಟು ಸಾಧನೆ ಮಾಡಿದ್ದೇವೆ ಇನ್ನೂ ೩೩ ಸೂಚಂಕಗಳಿದ್ದು ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿವರ್ಗದವರು ಸಾಗಲಿದ್ದಾರೆಂದರು.

    ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎ.ಡಿ.ಅಲ್ಲಾಪೂರ ಅವರು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಬಗ್ಗೆ ತಿಳಿ ಹೇಳಿದರು. ತಾಪಂ ಇಓ ನಿಂಗಪ್ಪ ಮಸಳಿ ಪ್ರಾಸ್ಥಾವಿಕ ಮಾತನಾಡಿದರು.

    ಇದೇ ಸಮಯದಲ್ಲಿ ೬ ಸೂಚಂಕಗಳಲ್ಲಿ ಸಾಧನೆ ಮಾಡಿದ ಕೃಷಿ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಆರೋಗ್ಯ ಇಲಾಖೆಯೊಳಗೊಂಡ ಅಧಿಕಾರಿವರ್ಗದವರನ್ನು ಹಾಗೂ ಗರ್ಭಿಣಿ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಈ ಸಮಯದಲ್ಲಿ ತಾಲೂಕಾಡಳಿತದ ಅಧಿಕಾರಿಗಳಾದ ತಾಲೂಕಾ ತಹಶಿಲ್ದಾರ ವಿನಯಾ ಹೂಗಾರ, ಶರಣಗೌಡ ಬಿಳಗಿ, ಡಾ.ಸತೀಶ ತಿವಾರಿ, ಶಿವಮೂರ್ತಿ ಕುಂಭಾರ, ಆರ್.ಎಸ್.ಹಿರೇಗೌಡರ, ಬಿ.ಎಸ್.ಸಾವಳಗಿ, ಮತ್ತು ಎಚ್.ಎಸ್.ಪಾಟೀಲ, ಪ್ರಭುಗೌಡ ಮದರಕಲ್ಲ, ಮಡುಸಾಹುಕಾರ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ), ಮೊದಲಾದವರು ಉಪಸ್ಥಿತರಿದ್ದರು.

    ಸಿಆರ್‌ಸಿ ರಾಜು ವಿಜಾಪೂರ ನಿರೂಪಿಸಿದರು. ತಾಪಂ ಸಹಾಯಕ ನಿರ್ದೇಶಕ ಬಿ.ಎಂ.ಸಾಗರ ವಂದಿಸಿದರು.

  • ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ವಿಫಲತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ– ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆಕ್ರೋಶ

    ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ವಿಫಲತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ– ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆಕ್ರೋಶ

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದು, ಇದರ ಪ್ರಮುಖ ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮಕ್ಕಳಿಗೆ ಸೂಕ್ತ ತರಗತಿ ಕೋಣೆಗಳು ಇಲ್ಲ, ಶೌಚಾಲಯಗಳಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ – ಈ ಎಲ್ಲಾ ಸಮಸ್ಯೆಗಳು ಇನ್ನೂ ದೂರವಾಗಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇನ್ನು ಕೆಲವು ಶಾಲೆಗಳ ಮೇಲ್ಛಾವಣಿಗಳು ಕುಸಿಯುವ ಸ್ಥಿತಿಯಲ್ಲಿವೆ. ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಗ್ರಾಮಸ್ಥರು ಶಾಲೆಗಳ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ತಲೆಕೆಡಿಸಿಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಭವಿಷ್ಯಕ್ಕೆ ನೇರ ಧಕ್ಕೆಯಾಗಿದೆ, ಎಂದು ಗುಡುಗಿದ್ದಾರೆ.

    ಮಾಧ್ಯಮಗಳಲ್ಲಿ ಸುದ್ದಿ ಬರುವ ತನಕ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಬರುವುದಿಲ್ಲ. ಮಕ್ಕಳಿಗಾಗಿ ಪೋಷಕರ ಆತಂಕ, ಕಣ್ಣೀರು, ಇದ್ಯಾವುದೂ ಇವರಿಗೆ ಕಾಣುವುದಿಲ್ಲ, ನೆಪ ಮಾತ್ರಕ್ಕೆ ಸುದ್ದಿಯಾದಾಗ ಮಾತ್ರ ವೀಕ್ಷಣಾ ಭೇಟಿ – ಇದು ಕೇವಲ ನಾಟಕ ಮಾತ್ರ? ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ.

    ಅದರಲ್ಲೂ ಪ್ರಮುಖವಾಗಿ ಹಲವಾರು ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆಯಿಂದ ಪಾಠಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವಿಷಯ ಶಿಕ್ಷಕರಿಲ್ಲದೆ ಶಾಲೆ ಹೋದ ಮಕ್ಕಳು ಏನು ಕಲಿತು ಬರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪ್ರಾಥಮಿಕ ಶಿಕ್ಷಣವೇ ಭವಿಷ್ಯದ ಅಡಿಪಾಯ. ಅದು ಬಲವಾಗಿಲ್ಲದಿದ್ದರೆ, ವಿದ್ಯಾರ್ಥಿಗಳು ಮುಂದಿನ ಹಂತ ತಲುಪುವುದು ಹೇಗೆ?  ಎಂದಿದ್ದಾರೆ, ಇದು ರಾಜ್ಯದ ಶಿಕ್ಷಣ ಇಲಾಖೆಯ ಸಂಪೂರ್ಣ ವೈಫಲ್ಯ. ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿರುವುದು ಜಿಲ್ಲೆಯ ಮಕ್ಕಳ ಭವಿಷ್ಯವೇ ಅಪಾಯದಲ್ಲಿ ಸಿಲುಕಿದೆ ಎಂದರು.

    ಚುನಾವಣೆಯ ವೇಳೆ ಮನೆ ಮನೆಗೆ ಭೇಟಿ ನೀಡಿ ಮತ ಕೇಳಿದವರು, ಶಾಲೆಗಳ ದುಸ್ಥಿತಿಯ ಕುರಿತಾಗಿ ಎಷ್ಟು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ?,ಎಂದು ಪ್ರಶ್ನಿಸಿದ್ದಾರೆ.

  • ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ರೇಣುಕಾ ಸಿಂಗೆ

    ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ರೇಣುಕಾ ಸಿಂಗೆ

    ಸತ್ಯಕಾಮ ವಾರ್ತೆ ಕಲಬುರಗಿ:

    ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದೆ ಮಹಿಳೆಯರನ್ನು ಆರ್ಥಿಕ ಶೈಕ್ಷಣಿಕ ಶಕ್ತಿ ತುಂಬಿರುವ ಸರಕಾರದ ಗ್ಯಾರಂಟಿಗಳ ಪ್ರಚಾರ ಮಾಡಬೇಕು ಮತ್ತು ಪಕ್ಷವನ್ನು ಸಂಘಟಿಸಿ ಮತ್ತಷ್ಟು ಬಲಪಡಿಸಬೇಕೆಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ ಕರೆ ನೀಡಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಪಂಚಗ್ಯಾರAಟಿ ಸದುಪಯೋಗ ಪಡಿಸಿ ಕೊಂಡು ಮಹಿಳೆಯರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಅನುಕೂಲ ಮಾಡಿದೆ ಇದರ ಪ್ರಚಾರ ಇನ್ನಷ್ಟು ಮಹಿಳೆಯರಿಗೆ ತಲುಪಿಸುವ ಕೆಲಸ ಮಹಿಳಾ ಕಾರ್ಯಕರ್ತರು ಮಾಡಬೇಕೆಂದರು.

    ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ ನಿಕಟಪೂರ್ವ ಜಿಲ್ಲಾಧ್ಯಕ್ಷೆ ಲತಾ ರಾಠೋಡ ಅವರು ನೂತನ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ರೇಣುಕಾ ಸಿಂಗೆ ಅವರಿಗೆ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು, ಮಾತನಾಡಿ ಸ್ವಂತ ಬಲದಮೇಲೆ ಬಿಜೆಪಿ ಭದ್ರಕೋಟೆಯನ್ನು ಛಿದ್ರಮಾಡಿ ಶಾಸಕಿಯಾಗಿ ಆಯ್ಕೆಯಾದ ಬಲಿಷ್ಠ ನಾಯಕಿ ಸೌಮ್ಯರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುತ್ತಾ ಕಾಂಗ್ರೆಸ್ ಸರಕಾರ ಮಹಿಳೆಯಿರಿಗೆ ನೀಡಿರುವ ಶಕ್ತಿ ಮತ್ತು ಭಕ್ತಿಯ ಬಲದಿಂದ ಪಕ್ಷ ಬಲಿಷ್ಠಗೊಳಿಸಬೇಕೆಂದು ಹೇಳಿದರು.

    ಬಿಜೆಪಿ ಮನೆಯೊಡೆಯುವ ಕೆಲಸ ಮಾಡಿದರೆ ಕಾಂಗ್ರೆಸ್ ಮಹಿಳೆಯರಿಗೆ ಸೌಲಭ್ಯಗಳನ್ನು ಕೊಟ್ಟು ಮನೆ ನಡೆಸುವ ಮತ್ತು ಮನೆ ನಿರ್ವಹಣೆಗೆ ಕೆಲಸ ಮಾಡಿದೆ ಎಂದರು.

    ಈ ಸಂದರ್ಭದಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಅಲ್ಲಂಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಜಗದೇವ್ ಗುತ್ತೇದಾರ್ ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

  • ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣಾ ದಿನಾಚರಣೆ.

    ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣಾ ದಿನಾಚರಣೆ.

    ಸತ್ಯಕಾಮ ವಾರ್ತೆ ಯಾದಗಿರಿ:

    ಮಹಾನ್ ಧರ್ಮನಿರಪೇಕ್ಷ- ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣ ದಿನ ವನ್ನು ಯಾದಗಿರಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ (ಟೌನ್) ವಸತಿ ನಿಲಯದಲ್ಲಿ ಹಾಗೂ ಯರಗೋಳ ಗ್ರಾಮದ ಬಸ್ ನಿಲ್ದಾಣದ ಬಳಿ ಆಚರಿಸಲಾಯಿತು.

    ಆಧುನಿಕ ಶಿಕ್ಷಣಕ್ಕೆ ನಾಂದಿ ಹಾಡಿದ, ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ, ವಿಧವಾ ಪುನರ್ ವಿವಾಹಕ್ಕಾಗಿ ದುಡಿದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರರು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಸಾರ್ವಜನಿಕ ಶಿಕ್ಷಣ ಉಳಿಸುವ ಹೋರಾಟಕ್ಕೆ ವಿದ್ಯಾಸಾಗರರು ನಮಗೆ ಸ್ಫೂರ್ತಿಯಾಗಬೇಕು ಎಂದು AIDSO ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ ಕೆ ರವರು ಮಾತನಾಡಿದರು.

    ಕಾರ್ಯಕ್ರಮದಲ್ಲಿ AIDSO ಸದಸ್ಯರಾದ ದೇವೀಂದ್ರಮ್ಮ, ಲಕ್ಷ್ಮೀಕಾಂತ, ರೆಡ್ದೆಪ್ಪ, ರಂಜಿತಾ, ಶ್ರವಣಕುಮಾರ, ಮೆಹಬೂಬ್, ನಾಗಿಂದ್ರಮ್ಮ ಹಾಗೂ ಊರಿನ ನಾಗರೀಕರಾದ ಭೀಮರೆಡ್ಡಿ, ಯಂಕಾರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.

  • 14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    14ನೇ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಸಂಭ್ರಮದ ಜಾತ್ರಾ ಮಹೋತ್ಸವ 

    ಸತ್ಯಕಾಮ ವಾರ್ತೆ ಯಾದಗಿರಿ:

    ತಾಲ್ಲೂಕಿನ ಮುಂಡರಗಿ ಗ್ರಾಮ ಹೊರವಲಯದ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಿಂದ 14 ನೇ ವರ್ಷದ ಜಾತ್ರೆ ಜರುಗಿತು.

    ಮಠದ ಪೀಠಾಧಿಪತಿ ಶಿವ ಚಂದ್ರಶೇಖರ ಮುತ್ಯಾ ಮಾತನಾಡಿ ಪ್ರತಿವರ್ಷದಂತೆ ಮಠದಲ್ಲಿ ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸಿ ನಾಗಲಿಂಗೇಶ್ವರ ದರ್ಶನ ಮಾಡುವರು. ಜಾತ್ರೆಯ ಪೂರ್ವದಿನ ರಾತ್ರಿ ಭಜನೆ ಕಾರ್ಯಕ್ರಮ, ಬೆಳಿಗ್ಗೆ ಮುಂಡರಗಿ ಗ್ರಾಮದ ದ್ಯಾಮವ್ವ ದೇವಸ್ಥಾನಕ್ಕೆ ತೆರಳಿ ಉಡಿ ತುಂಬುವ ಕಾರ್ಯಕ್ರಮ, ಗಂಗಾ ಸ್ನಾನ, ನಾಗರ ಹುತ್ತಕ್ಕೆ ಪೂಜೆ, ಹಾಗೂ ನಿಜ ನಾಗರಕ್ಕೆ ಹಾಲುಣಿಸುವುದು ವಾಡಿಕೆ. ಜಾತ್ರೆಯಲ್ಲಿ ಹಲಗೆ ಕುಣಿತ, ಡೊಳ್ಳು ಕುಣಿತ, ಕೈ ಕುಸ್ತಿ ಪಂದ್ಯಗಳು ಜರುಗುತ್ತವೆ, ವಿಶೇಷ ಪೂಜೆಗಳು ನೆರವೇರುತ್ತವೆ ಎಂದರು.

    ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ್ ಮಾತನಾಡಿ ನಮ್ಮ ಸನಾತನ ಧರ್ಮವು ಮನುಷ್ಯನಿಗೆ ಭಯ, ಭಕ್ತಿ, ನಂಬಿಕೆ, ದಾನ, ಧರ್ಮ, ಸಂಸ್ಕೃತಿ, ಸಂಸ್ಕಾರ ಗಳು ಇದ್ದಾಗಲೇ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ, ನಾವು ಕೂಡ ಹಲವು ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತೇವೆ ವಿಶೇಷವಾಗಿ ನಾಗರ ಪಂಚಮಿ ಪ್ರಯುಕ್ತ ನಮ್ಮ ಭಾಗದ ಕಂದಕೂರು ಗ್ರಾಮದ ಬೆಟ್ಟದ ಕೊಂಡಮ್ಮಾಯಿ ಜಾತ್ರೆವೇಳೆಯಲ್ಲಿ ರಾಶಿಗಟ್ಟಲೇ ಸಾವಿರಾರು ಹಾವು, ಚೇಳುಗಳು ಹೊರಬಂದು, ಜನರೆಲ್ಲ ಅವುಗಳಿಂದ ಆಟವಾಡುವುದು ಸಾಮಾನ್ಯ ಮಾತಲ್ಲ. ಅಂತೆಯೇ ಹುತ್ತದಲ್ಲಿನ ನಿಜ ನಾಗರ ಹಾವನ್ನು ಹೊರತೆಗೆದು ಹಾಲುಣಿಸುವುದು ದೈವತ್ವದ ಮಾತು ಎಂದರು.

    ಕಾರ್ಯಕ್ರಮದಲ್ಲಿ ಹಳಿಗೇರ ಪೀಠದ ಹಣಮಂತ್ರಾಯ ಮುತ್ಯಾ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರಮೇಶ್ ಕೋಟಿಮನಿ, ಶ್ರೀಧರ್ ಮಹಾಂತೇಶ್, ಅಶೋಕ್ ರೆಡ್ಡಿ ಎಲೇರಿ, ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್ ಸ್ವಾಮಿಗಳಿಂದ ಆಶೀರ್ವಾದ ಪಡೆದರು.

  • ನಾಳೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ನಾಳೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಸತ್ಯಕಾಮ ವಾರ್ತೆ ಯಾದಗಿರಿ:
    ಲಯನ್ಸ್ ಕ್ಲಬ್, ಯಾದಗಿರಿ ಇವರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30, 2025 (ಬುಧವಾರ) ಸಂಜೆ 5 ಗಂಟೆಗೆ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ತಿಳಿಸಿದೆ.

    ನಾಳೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಓರಾಡಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ಅವರು ವಿಶೇಷ ಅತಿಥಿಯಾಗಿದ್ದಾರೆ.

    ಪದಗ್ರಹಣಾಧಿಕಾರಿಯಾಗಿ ಎಲ್.ಎನ್. ಸಿಎ ಮನೋಜ್ ಕುಮಾರ್ ಪುರೋಹಿತ್ ಹಾಗೂ ಎಲ್.ಎನ್. ಸುರೇಶ್ ಜಂಗ್ನಾನಿ ಕಾರ್ಯನಿರ್ವಹಿಸಲಿದ್ದು, ಹರಿನಾರಾಯಣ ಭಟ್ಟಾಡ್ ಮತ್ತು ಸಿಎ ರಾಮು ಪರಿತಾಲಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.

    ಕಾರ್ಯಕ್ರಮದ ನಿರೂಪಣೆಯನ್ನು ಎಲ್.ಎನ್. ಜಾನಾರ್ಧನ್ ಅವರು ನಿಭಾಯಿಸಲಿದ್ದಾರೆ.

    2025-26ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳು

    ಅಧ್ಯಕ್ಷರಾಗಿ Ln. ಭೀಮಣ್ಣಗೌಡ ಕ್ಯಾತ್ನಳ, ಕಾರ್ಯದರ್ಶಿಯಾಗಿ Ln. ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ ಹಾಗೂ ಖಜಾಂಚಿಯಾಗಿ Ln. ವೆಂಕಟರೆಡ್ಡಿ ಪಾಟೀಲ ತಂಗಡಗಿ ಅವರನ್ನು ಆಯ್ಕೆ ಮಾಡಲಾಗಿದೆ.

    ಉಪಾಧ್ಯಕ್ಷರಾಗಿ ಮಲ್ಲಣ್ಣಗೌಡ ಹಳಿಮನಿ, ಸದಸ್ಯತ್ವದ ಮುಖ್ಯಸ್ಥ Ln. ಸಿದ್ದರಾಮರೆಡ್ಡಿ ತಿಪ್ಪರೆಡ್ಡಿ, ಜಂಟಿ ಕಾರ್ಯದರ್ಶಿಯಾಗಿ. ಇಂದೂಧರ್ ಶಿನ್ನೂರ, ಸೇವಾ ಕಾರ್ಯದರ್ಶಿಯನ್ನಾಗಿ ಮಲ್ಲಿಕಾರ್ಜುನ ಸಿರ್ಗೋಳ, ಟೇಮರ್ ಶರಣರೆಡ್ಡಿ ಹತ್ತಿಕುಣಿ, ಟೇಲ್ ಟ್ವಿಸ್ಟರ್ ವಿಜಯ ದಿಗ್ಗವಿ ಹಾಗೂ ಮಾರುಕಟ್ಟೆ ಸಂವಹನ ಮುಖ್ಯಸ್ಥೆಯಾಗಿ ಲೀಲಾ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ ಹಾಗೂ LCIF ಸಂಯೋಜಕರಾಗಿ ದೀಪಕ್ ಯಲಸತ್ತಿ ಮತ್ತು ಸಹ ಖಜಾಂಚಿಯಾಗಿ ವೀರೇಂದ್ರ ಪಾಟೀಲ ಮೊಸಂಬಿ ಅವರನ್ನು ನೇಮಕ ಮಾಡಲಾಗಿದೆ.

    ಜಿಲ್ಲಾ ಮಟ್ಟದ ಸೇವಾ ವಿಭಾಗಗಳಲ್ಲಿಯೂ ಯಾದಗಿರಿ ಸದಸ್ಯರು ನಾಮನಿರ್ದೇಶಿತರಾಗಿದ್ದು, ಆರೋಗ್ಯ, ಶಿಕ್ಷಣ, ಸ್ವಚ್ಛತಾ ಚಟುವಟಿಕೆ ಹಾಗೂ ಕ್ರೀಡಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಕಾರ್ಯಕ್ರಮಕ್ಕೆ ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕೆಂದು ಕೋರಲಾಗಿದೆ.

  • ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ – ಕಲ್ಲಿನಾಥ ಶ್ರೀಗಳು

    ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ – ಕಲ್ಲಿನಾಥ ಶ್ರೀಗಳು

    ಸತ್ಯಕಾಮ ವಾರ್ತೆ ಶಹಾಪುರ:

    ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಭೇದ ಭಾವ ಮರೆತು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೊರ್ತಿ ಕೋಲಾರದ ವಿಶ್ವಗಾಣಿಗ ಸಮಾಜದ ಜಗದ್ಗುರು ಪೂಜ್ಯ ಶ್ರೀ ಕಲ್ಲಿನಾಥ ಮಹಾ ಸ್ವಾಮಿಗಳು ಹೇಳಿದರು.

    ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗಾಣದೇವತೆ ವೃತ್ತದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು,ಬಡವರ ಹಾಗೂ ಅಸಹಾಯಕರ ನೆರವಿಗೆ ನಿಂತು ನ್ಯಾಯ ದೊರಕಿಸಿ ಕೊಡುವನೆ ನಿಜವಾದ ಗಾಣಿಗ, ಈ ನಾಡಿಗೆ ನಮ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

    ವಕ್ಕಲಿಗೇರಿ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಮಾತನಾಡಿ,ಗಾಣಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ,ಮುಖ್ಯ ವೇದಿಕೆಗೆ ತರುವಲ್ಲಿ ಶ್ರಮಿಸಿ ಉತ್ತಮ ಸಮಾಜ ಕಟ್ಟುವ ಕೆಲಸ ಮಾಡೋಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಕಿರಿಯರನ್ನ ನಾಡಿಗೆ ಪರಿಚಯಿಸುವ ಕೆಲಸ ಹೆಚ್ಚೆಚ್ಚು ಆಗಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಭೀಮರಾಯ ಸೇರಿ,ಪಿಡ್ಡಪ್ಪ ನಂದಿಕೋಲ, ಮಲ್ಲಣ್ಣವಮ್ಮಾ,ನಿಂಗಣ್ಣ ಮುದ್ದಾ,ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ,ಶಿವಣ್ಣಗೌಡ ಗೌಡರ,ಅಮರೇಶ್  ನಂದಿಕೋಲ,ಮಹಾಂತಪ್ಪ ಕೂಡ್ಲೂರು,ಮಡಿವಾಳಪ್ಪ ಪಾಟೀಲ್,ಗಣೇಶ್ ಚಡಗುಂಡ ಸೇರಿದಂತೆ ನೂರಾರು ಸಮಾಜದ ಬಂಧುಗಳು ಹಾಜರಿದ್ದರು.

  • ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿ : ಸಚಿವ ದರ್ಶನಾಪುರ

    ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿ : ಸಚಿವ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

    ನಗರದ ಎಸ್.ಡಿ.ಎನ್ ರೆಸಿಡೆನ್ಸಿ ಯಲ್ಲಿ ಇಂದು ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗ ಗೊಳಿಸುವುದು ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್ ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯವಿದೆ.ಈ ದಿಸೆಯಲ್ಲಿ ರಾಜ್ಯದ ಸಣ್ಣ ಉದ್ದಿಮೆದಾರರನ್ನು ತೊಂದರೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ವಿಶೇಷ ಗಮನ ನೀಡುತ್ತಿದೆ ಎಂದು ಹೇಳಿದರು.

    ಎಮ್ ಎಸ್ ಎಮ್ ಇ (micro and small and medium enterprises) ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಶಿಯಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನಿರ್ಣಯ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

    ಈ ಭಾಗದಲ್ಲಿ ಕೃಷಿಗೆ ಒತ್ತು ನೀಡಲಾಗುತ್ತಿದೆ.ಅದರಂತೆ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಗಮನ ನೀಡಿದಲ್ಲಿ ಕಾರ್ಮಿಕರ ಒಲಸೆ ಸಮಸ್ಯೆ ನಿವಾರಣೆಯಾಗಲಿದೆ.ಈ ದಿಸೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಈ ಭಾಗದ ಮುಂಡರಗಿಯಲ್ಲಿ ಕನಿಷ್ಠ ಐವತ್ತುರಿಂದ ನೂರು ಎಕರೆ ಜಮೀನಿನಲ್ಲಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ,ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ.ಅದರಂತೆ ಕಲ್ಯಾಣ ಕರ್ನಾಟಕ ಭಾಗದ ಕಲ್ಬುರ್ಗಿ, ಜೇವರ್ಗಿ,ಯಾದಗಿರಿ ಭಾಗಗಳಲ್ಲಿ ಕಡಿಮೆ ವೆಚ್ಚದ ಭೂ ನೀಡುವ ಉದ್ದೇಶ ಹೊಂದಲಾಗಿದ್ದು, ಶಹಾಪುರದಲ್ಲಿ 50 ಎಕರೆ ಜಮೀನು ಸಹ ಗುರುತಿಸಲಾಗಿದೆ ಎಂದು ಹೇಳಿದರು.

    ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹಿಸುತ್ತಿದ್ದು,ಕಾಸಿಯಾ ಸೇರಿದಂತೆ ವಿವಿಧ ಕೈಗಾರಿಕಾ ಸಂಸ್ಥೆಗಳ ಸಮಸ್ಯೆಗಳನ್ನು ಸರ್ಕಾರದ ಇತಿಮಿತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.ಉದ್ದಿಮೆದಾರರಿಗೆ ರಫ್ತು ಕುರಿತು ತರಬೇತಿ ಸಹ ನೀಡಿ ಪ್ರೋತ್ಸಾಹಿಸಲಾಗುತ್ತಿದೆ
    ಎಂದು ಹೇಳಿದರು.

    ಜಿಲ್ಲಾಧಿಕಾರಿ  ಹರ್ಷಲ್ ಭೋಯರ್ ಅವರು, ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗಾವಕಾಶಗಳ ಹೆಚ್ಚಿನ ಸೃಷ್ಟಿಗೆ ಸಣ್ಣ ಕೈಗಾರಿಕೆಗಳು ಬಹುಮುಖ್ಯ.ಉದ್ದಿಮೆದಾರರು ಆಧಾರ್ ಸ್ತಂಭವಾಗಿದ್ದು, ಜಿಲ್ಲಾಡಳಿತ ವತಿಯಿಂದ ಅವಶ್ಯಕ ನೆರವು ಒದಗಿಸಲಾಗುವುದು ಎಂದು ಹೇಳಿದರು.

    ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್ ಮಾತನಾಡಿದರು.

    ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶ್ ಕುಮಾರ್, ಕಾರ್ಯದರ್ಶಿ ಗುರು ಮಣಿಕಂಠ,ವಿಟಿಪಿಸಿ ಸಹಾಯಕ ನಿರ್ದೇಶಕ ಜಾಫರ್ ಅನ್ಸಾರಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಕುಲಶೇಖರನ್ ಉಪಸ್ಥಿತರಿದ್ದರು .ರಿಪೋರ್ಟ ಆನ್ ಕರ್ನಾಟಕ ಎಕ್ಸ್ ಪೋರ್ಟ್ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರಾದರ್ ಸ್ವಾಗತಿಸಿದರು.