Author: Satyakam NewsDesk

  • ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್

    ಸರ್ಕಾರದ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಿ : ಶಾಸಕ ಚೆನ್ನಾರಡ್ಡಿ ಪಾಟೀಲ್

    ಯಾದಗಿರಿ: ಸರ್ಕಾರದ ಯೋಜನೆಗಳು ವಿವಿಧ ಇಲಾಖೆಗಳಿಂದ ಅನುಷ್ಟಾನಗೊಳ್ಳುತ್ತಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಯಾದಗಿರಿ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಅಂಗನವಾಡಿ ಕೇಂದ್ರಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಅಡಿಗೆ ಕೋಣೆಗಳು, ಆಟದ ಮೈದಾನ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ನೀಡಬೇಕಾಗುತ್ತದೆ  ಎಂದು ಹೇಳಿದರು.

    ಅದಷ್ಟೇ ಅಲ್ಲದೆ, ದುರಸ್ತಿ ಅಥವಾ ಇನ್ನಿತರ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದ ಶಾಲೆಗಳ ಪಟ್ಟಿ ತಯಾರಿಸಿ, ಶೀಘ್ರದಲ್ಲಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂಬ ಸೂಚನೆಯನ್ನು ಕೂಡ ನೀಡಿದರು.

    ಈ ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿಗಳು  ಮಹಾದೇವ ಬಾಬಳಗಿ,  ಬಸವರಾಜ್ ಶರಬೈ, ಮಲ್ಲಿಕಾರ್ಜುನ ಸಂಗವಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ್ ಐರಡ್ಡಿ ಹಾಗೂ ತಾಲ್ಲೂಕು ಮಟ್ಟದ ಇತರ ಅಧಿಕಾರಿಗಳು ಭಾಗವಹಿಸಿದ್ದರು.

  • ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?

    ಸಿಎಂ ಅನ್ನಭಾಗ್ಯ’ಗೆ ಪರೋಕ್ಷವಾಗಿ ಆಹಾರ ಇಲಾಖೆ ಅಧಿಕಾರಿಗಳು ಕನ್ನ.?

    ವರದಿ; ಶ್ರೀಶೈಲ್ ಪೂಜಾರಿ
    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮುಂದುವರೆದಿದೆ. ಈ ಮಧ್ಯೆ ಗ್ರಾಮಗಳಿಗೆ ತೆರಳಿ ಫಲಾನುಭವಿಗಳಿಂದ ಅನ್ನಭಾಗ್ಯದ ಅಕ್ಕಿಯನ್ನು ಕಡಿಮೆ ದರಕ್ಕೆ ಕೊಂಡುಕೊಂಡು ಹೆಚ್ಚಿನ ದರಕ್ಕೆ ಬೇರೆ ಪ್ರದೇಶಗಳಿಗೆ ಕಳುಹಿಸುವ ಅಕ್ರಮ ದಂಧೆ ತಂಡ ವ್ಯಾಪಕವಾಗಿ ಬೇರೂರಿವೆ. ಆಹಾರ ಇಲಾಖೆ ಈ ಅಕ್ರಮವನ್ನು ತಡೆಗಟ್ಟಲು ಸಂಪೂರ್ಣ ವಿಫಲವಾಗಿದ್ದು ಪ್ರಜ್ಞಾವಂತ ನಾಗರೀಕರು ಆಹಾರ ಇಲಾಖೆ ಅಧಿಕಾರಿಗಳು ಇದ್ದಾರೋ ಇಲ್ಲವೋ ಎಂದು ಕೇಳುವ ಪ್ರಶ್ನೆ ಉದ್ಭವವಾಗಿದೆ.

    ಹೌದು.. ತಾಲೂಕಿನ ಮೈಬೂಬನಗರದ ಶಿರೋಳ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಣೆ ಪಡಿತರ ಅಕ್ಕಿ ವಾಹನವನ್ನು ಸಾರ್ವಜನಿಕರು ಹಿಡಿದು ಮಾಹಿತಿ ನೀಡಿದರು ಕೂಡ ಆಹಾರ ಇಲಾಖೆ ಅಧಿಕಾರಿಗಳು ಬರದೇ ಇರುವುದರಿಂದ ಸೋಮವಾರ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುವುದಲ್ಲದೇ ತಹಶಿಲ್ದಾರರಿಗೆ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಅವರ ವಿರುದ್ಧ ದೂರು ನೀಡಲಾಗಿದೆ.

    ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿರುವುದು ಮುದ್ದೇಬಿಹಾಳ ಹಾಗೂ ಸುತ್ತಲಿನ ಗ್ರಾಮದಲ್ಲಿ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಕಾಳಸಂತೆಯಲ್ಲಿ ಅಕ್ರಮ ಪಡಿತರ ಮಾರಾಟಕ್ಕೆ ಬ್ರೇಕ್‌ ಹಾಕಲು ಶ್ರಮ ವಹಿಸುತ್ತಿದ್ದರೆ, ಆದರೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ವ್ಯವಹಾರ ಎಗ್ಗಿಲ್ಲದೆ ಸಾಗಿರುವುದು ಜನ ಹುಬ್ಬೆರಿಸುವಂತೆ ಮಾಡುವುದಲ್ಲದೇ ಆಹಾರ ಇಲಾಖೆ ವಿರುದ್ಧ ಸಂಶಯ ವ್ಯಕ್ತವಾಗಿದೆ.

    ಅನ್ನಭಾಗ್ಯ ದಲ್ಲಾಳಿಗಳಿಗೆ ಮಾರಾಟ

    ತಾಲೂಕಿನ ವಿವಿಧ ಗ್ರಾಮಗಳ ಮನೆಗೆ ತೆರಳುವ ಈ ಗುಂಪು, ರೇಷನ್‌ ಅಕ್ಕಿ ಖರೀದಿಸಲಾಗುವುದು ಎಂದು ಹೇಳುತ್ತಾರೆ. ಮನೆ ಬಾಗಿಲಿನಲ್ಲಿಯೇ ಅಕ್ಕಿಯ ತೂಕ ನೋಡಿ, ಹಣ ನೀಡಿ ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಅಧಿಕ ಹಣಕ್ಕೆ ಮರು ಮಾರಾಟ ಮಾಡುತ್ತಾರೆ. ಅವರು ಅದನ್ನು ಡೀಲರ್ಸ್‌ ಗಳ ಮೂಲಕ ಲಾರಿಗಳಲ್ಲಿ ಬೇರೆ ರಾಜ್ಯಕ್ಕೆ ಸಾಗಿಸುತ್ತಾರೆ ಎಂಬ ಗುಮಾನಿ ಇದೆ.

    ಅಕ್ರಮ ಸಾಗಣೆ ವಾಹನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರು ಕೂಡ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ಶಂಕರ ಗುಮತಿಮಠ ಸ್ಥಳಕ್ಕೆ ಬರದೇ ಸಮಯ ಕಳೆಯುತ್ತಾ ಕುಂಟುನೆಪ ಹೇಳಿ ಜಾರಿಕೊಂಡ ಸನ್ನೀವೇಶ ನಡೆದರೆ, ಅಕ್ರಮ ಸಾಗಣೆ ವಾಹನ ಪರ ಕೆಲವರು ಪರೋಕ್ಷವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವೆ ಎಂದು ಬಿಂಬಿಸಿ ಪರೋಕ್ಷವಾಗಿ ಅಕ್ರಮ ಅಕ್ಕಿ ವಾಹನವನ್ನು ಎಸ್ಕೇಪ್ ಮಾಡಿದ ಸನ್ನಿವೇಶ ಜರುಗಿತು.

    ಇನ್ನು ಯಾವುದೇ ಭಯವಿಲ್ಲದೇ ಅಕ್ರಮವಾಗಿ ಅಕ್ಕಿ ಖರೀದಿ ಹಾಗೂ ಸಾಗಣೆ ಮಾಡುತ್ತಿದ್ದರೂ ತಾಲೂಕಿನಲ್ಲಿ ಯಾವುದೇ ಕ್ರಮ ಇಲ್ಲದಂತಾಗಿದೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಉಚಿತವಾಗಿ ಅಕ್ಕಿ ನೀಡಿದರೆ ಅದು ಅಕ್ರಮ ದಂಧೆಗೆ ಬಳಕೆಯಾಗುತ್ತಿದೆ. ಕೂಡಲೇ ಸರ್ಕಾರ ಮತ್ತು ಆಹಾರ ಇಲಾಖೆ ಮುದ್ದೇಬಿಹಾಳ ಆಹಾರ ಇಲಾಖೆ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅನ್ನಭಾಗ್ಯ ಯೋಜನೆಯನ್ನು ಕಾಪಾಡಬೇಕಿದೆ.

    ಏನೇ ಆಗಲಿ ಅನ್ನಭಾಗ್ಯ ಯೊಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಅವ್ಯಾಹತವಾಗಿ ನಡೆದಿರುವುದಕ್ಕೆ ಕಡಿವಾಣ ಹಾಕಲು ಒಂದು ಕಡೆ ಅಧಿಕಾರಿಗಳು ಹೆಣಗಾಡುತ್ತಿದ್ದರೆ, ಮತ್ತೊಂದು ಕಡೆ ಅನ್ನಭಾಗ್ಯ ಅಕ್ರಮ ಸಾಗಾಟಕ್ಕೆ ತಂಡಪೋ ತಂಡಗಳು ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿವೆ. ಇದಕ್ಕೆ ಪುಷ್ಟಿಕರಿಸುವಂತೆ ಮಾಹಿತಿ ನೀಡಿದರೂ ಕೂಡ ಭಾನುವಾರ ಅಕ್ರಮ ಸಾಗಣೆ ವಾಹನ ವಶಪಡಿಸಿಕೊಳ್ಳದೇ ಬಿಟ್ಟಿದ್ದು ಸಾರ್ವಜನಿಕರಲ್ಲಿ ಅಧಿಕಾರಿಗಳು ಕೂಡ ಅಕ್ಕಿ ಅಕ್ರಮ ಸಾಗಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ರಾ ಎಂಬ ಮಾತುಗಳು ಕೇಳಿಬಂದವು.

  • ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ

    ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ

    • ಹನ್ನೊಂದು ತೊಲಿ ಬಂಗಾರ ಸೇರಿ ರೂ 4,15,500 ನಗದು ವಶ

    ಸತ್ಯಕಾಮ ವಾರ್ತೆ ಶಹಾಪುರ : 

    ತಾಲೂಕಿನ ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನದ ವರದಿಗಳನ್ನು ಬೆನ್ನಟ್ಟಿ ಬೆರಳಚ್ಚು ಸೇರಿದಂತೆ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಪ್ರಕರಣ ಭೇದಿಸಿ ನಾಲ್ಕು ಲಕ್ಷ ಹದಿನೈದು ಸಾವಿರದ ಐದುನೂರು ರೂಪಾಯಿ ನಗದು ಸೇರಿ ಹನ್ನೊಂದು ತೊಲಿ ಬಂಗಾರದ ಆಭರಣ ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಜಾವೇದ್ ಇನಾಮದಾರ ಹೇಳಿದರು.

    ನಗರದ ಆರಕ್ಷಕ ವೃತ್ತ ನೀರಿಕ್ಷಕ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಇತ್ತೀಚಿಗೆ  ಗೋಗಿ ಹಾಗೂ ಭೀ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನ ನಡೆದ ಕುರಿತು ವರದಿಯಾಗಿದ್ದು. ಈ ಪ್ರಕರಣಗಳನ್ನು ಬೇಧಿಸಲು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಾದ ಪೃತ್ವಿಕ್ ಶಂಕರ ಹಾಗೂ ಕೆ ಎಸ್ ಪಿ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೆಶ ಹಾಗೂ ಉಪ ಅಧೀಕ್ಷಕ ಸುರಪುರ ವಿಭಾಗದ  ಜಾವೇದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ  ನಗರದ ಸಿಪಿಐ ಶರಣಗೌಡ ನ್ಯಾಮನ್ನವರ ಗೋಗಿ ಹಾಗೂ ಭೀ ಗುಡಿ ಪಿ ಎಸ್ ಐಗಳಾದ ದೇವಿಂದ್ರರೆಡ್ಡಿ ಹಾಗೂ ಚಂದ್ರನಾಥ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಗೋಗಿ ಠಾಣೆಯ ಗುನ್ನ ಸಂಖ್ಯೆ 52/2024, 48/2025, 61/2025,ಭೀ ಗುಡಿ ಠಾಣೆಯ ಗುನ್ನ ಸಂಖ್ಯೆ 02/2025 ರಲ್ಲಿ ಒಟ್ಟು ನಾಲ್ಕು ಹಗಲು ಹಾಗೂ ರಾತ್ರಿ ವೇಳೆ ಮನೆ ಗಳ್ಳತನ ಪ್ರಕರಣಗಳನ್ನು  ಭೇದಿಸಿ  ವಿಜಾಪುರ ಜಿಲ್ಲೆಯ ಅದೇ ತಾಲೂಕಿನ ಹೊನ್ನಾಳಿ ಗ್ರಾಮದ ಸಂತೋಷ ತಂದೆ ಶಿವಣ್ಣ ನಂದ್ಯಾಳನನ್ನು ದಸ್ತಗಿರಿ ಮಾಡಿ ಹನ್ನೊಂದು ತೊಲಿ ಬಂಗಾರದ ಆಭರಣಗಳೊಂದಿಗೆ 4,15,500 ರೂ ನಗದು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದರು.

    ಆರೋಪಿಯ ಬೆರಳಚ್ಚು ಗುರುತಿನ ಸಹಾಯದಿಂದ ಬೆನ್ನಟ್ಟಿ ಆತನ ಚಲನವಲನಗಳನ್ನು ಹಿಂಬಾಲಿಸಿ ರಭಕವಿ ಬನಹಟ್ಟಿ, ಲಿಂಗಸೂರು,  ಸುರಪುರು ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಯಾರದೋ ಬಳಸಿಕೊಂಡು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ ವಿವರ ಸಂಗ್ರಹಿಸಿ ಲಿಂಗಸೂರಿನಲ್ಲಿ ತನ್ನ ಪತ್ನಿಯ ಫೋನ್ ಕರೆಯಿಂದ ಬಾಡಿಗೆ ವಾಹನದಲ್ಲಿ ಶಾಪಿಂಗ್ ಮಹಲಿನಲ್ಲಿ ಸಂಚರಿಸಿದ್ದ ಸಿ ಸಿ ಟಿ ವಿಗಳಲ್ಲಿ ಸೆರೆ ಸಿಕ್ಕಿದ ಚಿತ್ರಣಗಳ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.

    ಸದರಿ ಕಳ್ಳತನ ಅಪಾರಧ ಪ್ರಕರಣಗಳನ್ನು ಪತ್ತೆ  ಮಾಡಿದ ತಂಡದ ಸಿ ಪಿ ಐ, ಪಿ ಎಸ್ ಐ, ಹಾಗೂ ಸಿಬ್ಬಂದಿಗಳಾದ ಗೋಗಿ  ಶ್ರೀಶೈಲ್ ಸಜ್ಜನ, ದೇವಿಂದ್ರಪ್ಪ, ಭೀಮನಗೌಡ, ಬಸನಗೌಡ, ನಾಗಪ್ಪ, ಹಾಗೂ ಸೋಮಯ್ಯ ರವರನ್ನು ಜಿಲ್ಲಾ ಪೊಲೀಸ್ ಅಧಿಕ್ಷಕರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.
  • ಸಮಾಜದ ಶಾಂತಿಗೆ ಪೊಲೀಸರೊಂದಿಗೆ ಸಹಕಾರ ಅಗತ್ಯ : ಎಸ್.ಪಿ ಪೃಥ್ವಿಕ್ ಶಂಕರ್

    ಸಮಾಜದ ಶಾಂತಿಗೆ ಪೊಲೀಸರೊಂದಿಗೆ ಸಹಕಾರ ಅಗತ್ಯ : ಎಸ್.ಪಿ ಪೃಥ್ವಿಕ್ ಶಂಕರ್

    ಸತ್ಯಕಾಮ ವಾರ್ತೆ ಗುರುಮಠಕಲ್:
    ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪೃಥ್ವಿ‌ಕ್‌  ಶಂಕರ್ ಹೇಳಿದರು.

    ಪಟ್ಟಣದ ಹರಿಜನವಾಡದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುಮಠಕಲ್ ಪೊಲೀಸ್ ಠಾಣೆಯಿಂದ ಆಯೋಜಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯಲ್ಲಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು.‌  “ರಸ್ತೆ ಸುರಕ್ಷತೆಗಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮನೆ ಕಳ್ಳತನ ತಪ್ಪಿಸಲು ಸಿಸಿ ಟಿವಿ ಅಳವಡಿಸುವುದು ಉತ್ತಮ. ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಇರಬೇಕಾಗಿದೆ,” ಎಂದು ಅವರು ತಿಳಿಸಿದರು.

    ಅಪರಾಧಗಳನ್ನು ತಡೆಯಲು ಜನರ ಸಹಕಾರ ಅತ್ಯಗತ್ಯವಾಗಿದ್ದು, ದಲಿತ ಸಮುದಾಯದ ಯಾರಿಗಾದರೂ ತೊಂದರೆ ಆಗಿದ್ದರೆ, ಪೊಲೀಸ್ ಇಲಾಖೆ ಅವರ ಪಕ್ಕದಲ್ಲೇ ಇರುತ್ತದೆ. ಕಾನೂನು ಅವರನ್ನು ರಕ್ಷಿಸುವ ಶಕ್ತಿ ಹೊಂದಿದೆ ಎಂದರು.

    ಈ ಸಂಧರ್ಭದಲ್ಲಿ ಪಿ. ಐ. ಈರಣ್ಣ ದೊಡ್ಡಮನಿ, ತಾಲೂಕ ಪಂಚಾಯತ್ ಇ. ಓ. ಅಂಬರೀಷ್ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ನರಸಿಂಹಸ್ವಾಮಿ, ಎ.ಎಸ್. ಐ ಭೀಮಶಪ್ಪ ಖಾನಾಗಡ್ಡ, ಶರಣಪ್ಪ ಪಸರ್, ಶಿವರಾಮರೆಡ್ಡಿ, ಶ್ರೀಶೈಲ, ರಾಜುಗೌಡ, ಸೇರಿದಂತೆ ಯುವಕರು ಮುಖಂಡರುಗಳು ಉಪಸ್ಥಿತರಿದ್ದರು.

  • ರಸ್ತೆ ದುರಸ್ಥಿಗೆ ಅಧಿಕಾರಿಗಳ ಮೀನಾಮೇಷ!

    ರಸ್ತೆ ದುರಸ್ಥಿಗೆ ಅಧಿಕಾರಿಗಳ ಮೀನಾಮೇಷ!

    ಲಿಂಗಸುಗೂರು: ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಜಮೀನಿಗೆ ಹೋಗುವ ದಾರಿಗಳು ಸಂಪೂರ್ಣ ಹದಗೆಟ್ಟಿವೆ. ಈ ಹಿನ್ನೆಲೆ ‘ನಮ್ಮ ಹೊಲ, ನಮ್ಮ ದಾರಿ’ ಎಂಬ ರಾಜ್ಯ ಸರ್ಕಾರದ ಯೋಜನೆ ಹೆಸರಿಗಷ್ಟೇ ಉಳಿದಿದೆಯೆಂಬ ಆರೋಪ ರೈತ ಸಮುದಾಯದಿಂದ ಕೇಳಿಬರುತ್ತಿದೆ.

    ನಾಗರಹಾಳ ಗ್ರಾಮದ ಲ್ಯಾಟ್ರಲ್ 8ರ ಸಬ್ ಲ್ಯಾಟ್ರಲ್ 1 ಕಾಲುವೆ ಪಕ್ಕದ ದಾರಿಯಲ್ಲಿ ಸ್ಥಳೀಯ ರೈತರು ಹಾಗೂ ಕೂಲಿಕಾರ್ಮಿಕರು ಪ್ರತಿದಿನವೂ ಪರದಾಡುವಂತಾಗಿದೆ. ಈ ರಸ್ತೆಗೆ ಮರಂ ಹಾಕಿ ದುರಸ್ತಿಗೆ 10 ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದ್ದರೂ ಕಾರ್ಯವಿಲ್ಲ.

    ಗ್ರಾ.ಪಂ ಪಿಡಿಒ ಪ್ರವೀಣ್ ಪಾಟೀಲ ಅವರ ಮಾತಿನಂತೆ, ಈ ರಸ್ತೆಗಾಗಿ ₹5 ಲಕ್ಷ ರೂ. ಯೋಜನೆ ರೂಪಿಸಲಾಗಿತ್ತು, ಆದರೆ ಕಾಮಗಾರಿ ಕೋಲಾಪ್ಸ್ ಆಗಿದೆ ಎಂಬ ಉತ್ತರ ಕೇಳಿಬಂದಿದೆ.

    ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಲಿಂಗಸುಗೂರು ತಾಲೂಕ ಉಪಾಧ್ಯಕ್ಷ ಭೀಮಪ್ಪ ಎನ್. ಪವಾರ್, ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗದಿದ್ದರೆ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ಸರ್ಕಾರದ ವಿರುದ್ದ ಹೋರಾಟ- ಮಗ್ದಂಪುರ

    ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ಸರ್ಕಾರದ ವಿರುದ್ದ ಹೋರಾಟ- ಮಗ್ದಂಪುರ

    ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚೆ

    ಯಾದಗಿರಿ: ಮುಂಬರುವ ವಿಧಾನ ಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು ಆ ಅಧಿವೇಶನದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳು ತೆಗೆದುಕೊಂಡವರ ವಿರುದ್ದ ಕಾನೂನು ಕ್ರಮ ಆಗಬೇಕು ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆ ಆದ ಶಾಸಕರು ಅಧಿವೇಶನದಲ್ಲಿ ದ್ವನಿ ಎತ್ತಬೇಕು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.

    ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆಯಾದ ಶಾಸಕರು ವಾಲ್ಮೀಕಿ ಸಮಾಜದ ಬೇಡಿಕೆಗಳಿಗೆ ಸ್ಪಂದನೆ ನೀಡದೆ ತಮ್ಮ ಮುಂದಿನ ರಾಜಕೀಯ ಬಹುಶಃ ಸಲುವಾಗಿ ನಮ್ಮ ಸಮಾಜಕ್ಕೆ ಅನ್ಯಾಯ ಎಸುಗುತ್ತಿದ್ದಾರೆ ಎಂದು ಸಚಿವರು ಹಾಗೂ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ವಾಲ್ಮೀಕಿ ಸಮಾಜದ ವಿವಿಧ ಬೇಡಿಕೆಗಳಾದ ಯಾದಗಿರಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಹತ್ತಿರ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಸಂಬಂಧಿಸಿದ ದಾಖಲಾತಿ ಇದ್ದರೂ ಕೂಡ ಎ ಖಾತಾ ಕೊಡಲು ಸಂಬಂಧಿಸಿದ‌ ನಗರ ಸಭೆ ಅಧಿಕಾರಿಗಳು ನೀಡದೆ ಇರುವುದು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಆಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.

    ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಮಾತನಾಡಿ ಯಾದಗಿರಿ ನಗರದಲ್ಲಿ ರಾಜ್ಯಾದ್ಯಂತ ನಕಲಿ ಪ್ರಮಾಣ ಪತ್ರಗಳು ವಿತರಣೆ ಆಗುತ್ತಿದ್ದು ಅದನ್ನು ಕೂಡಲೇ ತಡೆಯುವಂತೆ ಅಗಸ್ಟ್ ೧೩ ರಂದು ಯಾದಗಿರಿ ನಗರದಲ್ಲಿ ಬೃಹತ್ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

    ಮುಂಬರುವ ವಿಧಾನ ಸಭೆ ಅಧಿವೇಶನದಲ್ಲಿ ವಾಲ್ಮೀಕಿ ಸಮಾಜದ ಬೇಡಿಕೆಗಳ ಬಗ್ಗೆ ಚರ್ಚೆ ಆಗಬೇಕು ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಗಟ್ಟಲು ಸೂಕ್ತವಾದ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮುಖಂಡರಾದ ಸಿದ್ದಲಿಂಗಪ್ಪ ನಾಯಕ. ಚಂದ್ರಕಾಂತ ಹತ್ತಿಕುಣಿ. ಶರಣಪ್ಪ ಜಾಕನಹಳ್ಳಿ. ಗಂಗಾಧರ ನಾಯಕ. ದೊಡ್ಡಯ್ಯ ನಾಯಕ. ಅಂಬು ನಾಯಕ. ವಾಲ್ಮೀಕಿ ನಾಯಕ ಸಮಾಜದ ತಾಲೂಕ ಅಧ್ಯಕ್ಷರಾದ ಸಾಹೇಬ ಗೌಡ ನಾಯಕ ಗೌಡಗೇರ. ಶಹಪೂರ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ. ಸುರಪುರ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮನಗೌಡ. ಗುರಮಿಠಕಲ್ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕಾಶಪ್ಪ ನಾಯಕ. ಶೇಖರ ದೊರೆ. ಮಲ್ಲಿಕಾರ್ಜುನ ಕಟಕಟಿ. ಮಲ್ಲಿಕಾರ್ಜುನ ನಿಲಹಳ್ಳಿ. ಮೋನಪ್ಪ ಹಳಿಗೇರ. ಬಸವರಾಜ ಗೊಂದೆನೂರ. ನಾಗರಾಜ ಪ್ಯಾಪ್ಲಿ. ಚಂದಪ್ಪ ರಾಮಸಮುದ್ರ. ಬಸವರಾಜ ಹತ್ತಿಕುಣಿ. ಭೀಮರಾಯ ರಾಮಸಮುದ್ರ. ಸಿದ್ದಪ್ಪ ಕ್ಯಾಸಪನಳ್ಳಿ. ಲಕ್ಷ್ಮಣ ಜೀನಕೇರಿ. ಸಾಬು ನಿಲಹಳ್ಳಿ. ಪೋಲಪ್ಪ ನಿಲಹಳ್ಳಿ. ಈಶಪ್ಪ ಹೆಡಗಿಮದ್ರಿ. ರವಿ ಜಮಾದಾರ. ಕಾಶಿನಾಥ ನಾನೆಕ್. ಮಲ್ಲೇಶ ನಾಯಕ. ಮೋನಪ್ಪ ಯಾದಗಿರಿ. ಶಿವರಾಜ ಹವಲ್ದಾರ. ಬಂದಪ್ಪ ನಾಯಕ. ರವಿ ಹೊಸ್ಸಳ್ಳಿ. ರಮೇಶ ಯಾದಗಿರಿ‌. ಶ್ರೀನಿವಾಸ ಯಕ್ಷಂತಿ. ದೊಡ್ಡಪ್ಪ ನಾಯಕ. ರವಿಕುಮಾರ. ಅಂಬಣ್ಣ ಗೌಡಗೇರ. ಮಂಜುನಾಥ ಬಳಿಚಕ್ರ. ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಇದ್ದರೂ.

  • ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

    ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಯಾದಗಿರಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ರಾಜ್ಯದಲ್ಲಿ ಕಳೆದ ೨ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ರಾಜ್ಯದ ರೈತರ ಸಮಸ್ಯೆಗೆ ಮತ್ತು ಮಳೆ ಹಾನಿ ಹಾಗೂ ನೆರೆ ಹಾವಳಿಯಿಂದ ಹಾಗೂ ಮಳೆ ಕೊರತೆಯಿಂದ ಭಾಧೀತವಾದ ರೈತರ ಮತ್ತು ನೊಂದ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ ೨ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯತೆಯಿಂದ ರಾಜ್ಯದ ಜನತೆ ಆಕ್ರೋಶದಿಂದ ಬೇಸತ್ತು ಬಸವಳಿದಿದ್ದಾರೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರುನಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ರೈತರು ತಮ್ಮ ಬಹುತೇಕ ಕೃಷಿ ವಿಸ್ತೀರ್ಣದಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿ ಬಿತ್ತನೆಯಲ್ಲಿ ತೊಡಗಿದ್ದಾರೆ ಹಾಗೂ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಗೊಂಡಿದ್ದು, ನೀರಾವರಿ ಅಚ್ಚುಕಟ್ಟಿನಲ್ಲಿ ರೈತರು ಸಾಗುವಳಿ ಪ್ರಾರಂಭಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸದರು.

    ಮಳೆ ಮತ್ತು ನೆರೆ ಹಾವಳಿಯಿಂದ ಫಸಲು ನಷ್ಟಕ್ಕೆ ಮತ್ತು ಮಳೆ ಅಭಾವದಿಂದ ಹಾಳಾದ ಬೆಳೆ ನಷ್ಟಕ್ಕೆ ಸಂಬAಧಿಸಿದ ಫಸಲು ವಿಮಾ ಕಂಪನಿಗಳಿAದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಎಲ್ಲಾ ವೈಫಲ್ಯಗಳಿಂದ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸಲು ನೈತಿಕವಾಗಿ ಅಧಿಕಾರ ಕಳೆದುಕೊಂಡಿದೆ. ಗೌರವಾನ್ವಿತ ರಾಜ್ಯಪಾಲರು, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನವಿತ್ತು ಎಚ್ಚರಿಕೆ ನೀಡಿ, ರೈತರ ಸಮಸ್ಯೆ ಹಾಗೂ ನೆರೆ ಹಾವಳಿಯಿಂದ ನೊಂದ ಸಂತ್ರಸ್ತರಿಗೆ ಹಾಗೂ ಮಳೆ ಅಭಾವದಿಂದ ಫಸಲನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

    ಒಂದು ವೇಳೆ ರಾಜ್ಯ ಸರ್ಕಾರ ಸಂವಿಧಾನ ರೀತಿ ಕಾರ್ಯನಿರ್ವಹಿಸದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಚನ್ನಪ್ಪಗೌಡ ಮೊಸಂಬಿ, ನವಾಜರೆಡ್ಡಿ ಚಪೇಟ್ಲಾ, ರಾಮಣ್ಣ ಕೋಟಗೇರಾ, ಬಸವರಾಜಪ್ಪಗೌಡ ಗೊಂದಡಗಿ, ಬಸವರಾಜ ಕಣೇಕಲ್, ಈಶಪ್ಪ ರಾಖಾ, ರಾಜೇಶ ಉಡುಪಿ ಸೈದಾಪೂರ, ದೇವಿಂದ್ರಪ್ಪ ಸುರಪೂರ, ಶಿವು ಮೊಟಗಿ ಶಹಾಪೂರ, ಶಿವಣ್ಣ ಸುರಪೂರ, ವಿಶ್ವನಾಥ ಶಿರವಾಳ, ಬಂದಪ್ಪ ಅರಳಿ, ನರಸಪ್ಪ ಕವಡೆ, ಶರಣು ಆವಂಟಿ, ಪ್ರಕಾಶ ನೀರಟ್ಟಿ, ಬಸ್ಸಣ್ಣ ದೇವರಹಳ್ಳಿ, ರವಿ ಪಾಟೀಲ್ ಗುರುಮಿಠಕಲ್, ಮಲ್ಲಣ್ಣಗೌಡ ಕೌಳೂರು, ಬಸ್ಸುಗೌಡ ಚಾಮನಹಳ್ಳಿ, ಬಸರಡ್ಡಿ ಹೆಗ್ಗಣಗೇರಾ ಚಂದ್ರಾಯಗೌಡ ಹತ್ತಿಕುಣಿ, ಶರಣಗೌಡ ಚಾಮನಹಳ್ಳಿ, ರವಿ ಪಾಟೀಲ್ ಹತ್ತಿಕುಣಿ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ,ಜಯೇಂದ್ರ ಚವ್ಹಾಣ, ಪರಮರೆಡ್ಡಿ ಕಂದಕೂರ, ದೊಡ್ಡಣ್ಣಗೌಡ ಅರಕೇರಾ (ಬಿ), ಮಾರ್ಥಂಡ ಮಾನೇಗಾರ, ನಿಂಗಾರೆಡ್ಡಿ ಯಡ್ಡಳ್ಳಿ, ತಾಯಪ್ಪ ಬದ್ದೇಪಲ್ಲಿ, ಅನಂತಪ್ಪ ಮುಕಡಿ, ಶರಣು ಗಾಡಿ ಮೋಟ್ನಳ್ಳಿ, ಲಕ್ಷ್ಮಣನಾಯಕ ಕುಡ್ಲೂರ, ಅಲ್ಲಾವುದ್ದೀನ್ ನೀಲಹಳ್ಳಿ ಸೇರಿದಂತೆ ಇತರರಿದ್ದರು.
    ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚಿಗೆ ಕೊಟ್ಟಾರಲ್ರಿ

    ಕಾಳಸಂತೆಕೋರರು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಿ ವಿತರಿಸದೇ ಇರುವುದರಿಂದ ರೈತರು ಪರದಾಡುತ್ತಿದ್ದಾರೆ. ಈ ರಸ ಗೊಬ್ಬರಗಳು ಕಾಳಸಂತೆಯಲ್ಲಿ ವರ್ತಕರು ಮನಸೋ ಇಚ್ಚಾ ಬಂದ ಧರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ರಾಜ್ಯಕ್ಕೆ ಕೊರತೆ ಇರುವ ರಸ ಗೊಬ್ಬರಗಳನ್ನು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸಂಪರ್ಕಿಸಿ ಪಡೆಯಲು ವಿಫಲವಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ೬.೩೧೦೦೦ ಮೆಟ್ರಿಕ ಟನ್ ರಸ ಗೊಬ್ಬರ ಬೇಡಿಕೆ ಇಟ್ಟಿರುತ್ತಾರೆ. ಆದರೂ ಕೇಂದ್ರ ಸರ್ಕಾರ ನಿರೀಕ್ಷೆಗೆ ಮೀರಿ ೮.೭೩೦೦೦ ಮೆಟ್ರಿಕ ಟನ್ ರಸಗೊಬ್ಬರ ಪೂರೈಸಿದ್ದಾರೆ. ಈ ಪೈಕಿ ಕೇವಲ ೫.೨೭ ಲಕ್ಷ ಟನ್ ರಸ ಗೊಬ್ಬರ ನೀಡಿರುವುದಾಗಿ ರಾಜ್ಯ ಸರ್ಕಾರ ಆಪಾದನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ಕೈಮಾಡಿ ತೋರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.


    ಸುಭಾಶ್ಚಂದ್ರ ಕಟಕಟಿ ಜೆಡಿಎಸ್ ಜಿಲ್ಲಾಧ್ಯಕ್ಷರು, ಯಾದಗಿರಿ
  • ರಸಗೊಬ್ಬರ ಇದ್ದರು ಅಂಗಡಿ ಮಾಲೀಕರು ನೀಡುತ್ತಿಲ್ಲ-ರವಿ ನಾಯಕ

    ರಸಗೊಬ್ಬರ ಇದ್ದರು ಅಂಗಡಿ ಮಾಲೀಕರು ನೀಡುತ್ತಿಲ್ಲ-ರವಿ ನಾಯಕ

    ಸುರಪುರ:ರಸಗೊಬ್ಬರ ಅಂಗಡಿಗಳಲ್ಲಿ ಗೊಬ್ಬರವಿದ್ದರು ರೈತರಿಗೆ ನೀಡುತ್ತಿಲ್ಲ.ರಸಗೊಬ್ಬರ ಅಂಗಡಿಗಳ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.ಆದ್ದರಿಂದ ಇಲಾಖೆಯಿಂದ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಆಗ್ರಹಿಸಿದರು.

    ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಈಗಾಗಲೇ ರೈತರು ರಸಗೊಬ್ಬರ ಸಿಗದೆ ತುಂಬಾ ತೊಂದರೆ ಪಡುತ್ತಿದ್ದು ಕೃಷಿ ಇಲಾಖೆ ರೈತರ ಸಮಸ್ಯೆಗೆ ಸ್ಪಂದಿಸುವAತೆ ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಸಹಾಯಕ ಕೃಷಿ ನಿರ್ದೇಶಕ ಮಾತನಾಡಿ,ರೈತರು ರಸಗೊಬ್ಬರದ ಬದಲಾಗಿ ನ್ಯಾನೋ ರಸಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.ಅಲ್ಲದೆ,ತಾವು ಸಲ್ಲಿಸಿರುವ ಬೇಡಿಕೆಯಂತೆ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಏನಾದರು ಅಕ್ರಮ ನಡೆದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಸಂಘದ ತಾಲ್ಲೂಕ ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ, ಶಿವರಾಜ ಮೊಕಾಸಿ ಸತ್ಯಂಪೇಟೆ,ವಾಸುದೇವ ನಾಯಕ,ಮೌನೇಶ ದಳಪತಿ,ರಾಘವೇಂದ್ರ ಸಗರ,ಬಸವರಾಜ ಪಾಟೀಲ್,ರವಿ ಹುಲಕಲ್,ಮಲ್ಲು ನಾಯಕ,ರವಿಕಿರಣ್ ಹೊಸ ಸಿದ್ದಾಪುರ,ದ್ಯಾವಪ್ಪ ದೇವಿಕೇರಾ,ನಿಂಗಣ್ಣ ದುಸ್ತಾರಿ,ಭೀಮಣ್ಣ ಗಡ್ಡಿಮನಿ, ದೇವು ನಾಯಕ,ಕೃಷ್ಣಾ ನಾಯಕ,ಶಿವಮೂರ್ತಿ ದೀವಳಗುಡ್ಡ,ಬಸಪ್ಪ ಹೆಳವರ,ಮರೆಪ್ಪ ಕೋಮಾರಿ,ಹುಲಿರಾಜ್ ಹುಲಕಲ್,ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.

  • ಕಲೆ ಸಂಸ್ಕೃತಿ ಬೆಳೆಸೋಣ: ಮಹಾವೀರ ಲಿಂಗೇರಿ

    ಕಲೆ ಸಂಸ್ಕೃತಿ ಬೆಳೆಸೋಣ: ಮಹಾವೀರ ಲಿಂಗೇರಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಸಂಸ್ಕೃತಿಯ ನಾಡೆಂದು ಹೆಸರು ವಾಸಿಯಾಗಿರುವ ಭಾರತ ಸಂಸ್ಕೃತಿ ನೆಲದಲ್ಲಿ ಜನಿಸಿದ ನಾವೆಲ್ಲರೂ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯವನ್ನು ಬೆಳೆಸೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ ಹೇಳಿದರು.

     ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದ ಸಮನ್ವಯ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿರುವ ಜಾನಪದ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರೈತರ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶಿಸಿ ಪ್ರದರ್ಶಿಸುವ ಒಂದು ಸುವರ್ಣ ವೇದಿಕೆ ಸಂಘ-ಸಂಸ್ಥೆಗಳು ಮಾಡಲ್ಪಟ್ಟಿವೆ ಹಾಗಾಗಿ ಪ್ರತಿಯೊಬ್ಬರೂ ನಾಡಿನ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.
    ಸಮನ್ವಯ ಸೇವಾ ಸಂಸ್ಥೆ ಹಲವು ವರ್ಷದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ, ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾಗಿದೆ, ಶಿಕ್ಷಣದ ಜೊತೆಗೆ ಕಲೆ ಸಂಸ್ಕೃತಿ ಬೆಳೆಸಲು ಇಂತಹ ಸಂಘ ಸಂಸ್ಥೆಗಳು ಜೀವಂತವಾಗಿವೆ, ಇಂತಹ ಸಂಸ್ಥೆಗಳಿಗೆ ಸರಕಾರದಿಂದ ಸಹಾಯ ಧನ ಪಡೆದುಕೊಂಡು ದೊಡ್ಡ ಮಟ್ಟದ ಸೇವೆಯನ್ನು ಮಾಡಲಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಾಬು ಚೌಹಾನ್ ಪ್ರಾಸ್ತವಿಕ ನುಡಿಗಳು.

    ಈ ಸಂದರ್ಭದಲ್ಲಿ ರೈತ ಸೇನೆಯ ತಾಲೂಕು ಉಪಾಧ್ಯಕ್ಷ ತಾಯಪ್ಪ ನಾಯಕ, ಸಂಸ್ಥೆಯ ಅಧ್ಯಕ್ಷ ದೇವಿಂದ್ರ ಧೋತ್ರ, ಭೀಮಾ ಜ್ಯೋತಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಭೀಮಶಂಕರ ಎಂ.ಯರಗೋಳ, ಮುಖ್ಯ ಗುರು ಲಕ್ಷ್ಮಿಕಾಂತ್, ಚನಬಸಪ್ಪ, ನಿವೃತ್ತ ಮುಖ್ಯಗುರು ಚಂದ್ರಪ್ಪ ಗುಂಜಾನೂರ್, ಮುಖ್ಯ ಗುರು ಶ್ರೀಮತಿ ಕಲ್ಪನಾ, ಎಸ್‌.ಡಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಪೂಜಾರಿ, ಸಾಬಣ್ಣ ಜೋಗಿ ಗ್ರಾ.ಪಂ.ಕಾರ್ಯದರ್ಶಿ ರವಿ ಮುಂತಾದವರಿದ್ದರು.

    ಈ ವೇಳೆ ವೇಳೆಯಲ್ಲಿ ಗೌತಮ್ ಬುದ್ಧ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಭರತನಾಟ್ಯ, ಜಾನಪದ ಗೀತೆ, ಜಾನಪದ ಸಾಮೂಹಿಕ ನೃತ್ಯ, ಗೀತ ಗಾಯನ ಮುಂತಾದವು ಕಲೆಗಳನ್ನು ಪ್ರದರ್ಶಿಸಿದರು ನೋಡುಗರ ಗಮನ ಸೆಳೆದವು.
  • ಮೂಟ್ ಕೋರ್ಟ್ ಹಾಲ್ ಉದ್ಘಾಟನೆ

    ಮೂಟ್ ಕೋರ್ಟ್ ಹಾಲ್ ಉದ್ಘಾಟನೆ

    ಸತ್ಯಕಾಮ ವಾರ್ತೆ ಬೆಂಗಳೂರು:
    ಬೆಂಗಳೂರು ನಗರದ ಮೈಸೂರು ರಸ್ತೆಯ ಕೆಂಗೇರಿ ಚೆಕ್ ಪೋಸ್ಟ್ ಬಳಿಯಲ್ಲಿರುವ ಐಸಿಎಫ್ಎಐ ಲಾ ಸ್ಕೂಲ್ ನ ಕೆಂಗೇರಿ ಕ್ಯಾಂಪಸ್‌ನಲ್ಲಿರುವ ನವೀಕೃತ ಮೂಟ್ ಕೋರ್ಟ್ ಹಾಲ್‌ನ್ನು ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಅಶೋಕ್ ಜಿ. ನಿಜಣ್ಣರವರು ಹಾಗೂ ಮತ್ತಿತರ ಗಣ್ಯರು ಉದ್ಘಾಟಿಸಿದರು.[web_stories title=”true” excerpt=”false” author=”false” date=”false” archive_link=”true” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”2″ order=”ASC” orderby=”post_title” view=”circles” /]

    ನಂತರ ಮಾತನಾಡಿದ ಇವರು ಮೂಟ್ ಕೋರ್ಟ್ ಹಾಲ್ ಇದೊಂದು ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಅಧ್ಯಯನ ಹಾಗೂ ಪ್ರಾಯೋಗಿಕವಾಗಿ ಕಾನೂನು ತರಬೇತಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿರ್ದೇಶಕರಾದ ಶ್ರೀ ಸಿ.ಎಸ್. ಪಾಟೀಲ, ಕರ್ನಾಟಕ ಕಾನೂನು ಮತ್ತು ಸಂಸತ್ತೀಯ ಸುಧಾರಣಾ ಸಂಸ್ಥೆ ಹಾಗೂ ಮಾಜಿ ಕುಲಪತಿಗಳು, ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ, ಗೌರವಾನ್ವಿತ ಕುಲಾಧಿಪತಿ, ಐಸಿಎಫ್ಎಐ ಕಾನೂನು ವಿಶ್ವವಿದ್ಯಾಲಯ, ಮಿಜೋರಂ ಮತ್ತು ಮಾಜಿ ಕುಲಪತಿ, ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಶ್ರೀ ವೈ.ಆರ್. ಹರಗೋಪಾಲ್ ರೆಡ್ಡಿಯವರು, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್ ಮತ್ತು ಸುಪ್ರೀಂ ಕೋರ್ಟ್ ನ ದಾಖಲಾತಿ ನ್ಯಾಯವಾದಿಯಾದ ಶ್ರೀ ಗೌತಮ್ ದಾಸ್ ಮತ್ತಿತರು ಉಪಸ್ಥಿತರಿದ್ದರು.

    ಇನ್ನು ವಿಶೇಷ ಆಹ್ವಾನಿತರಾಗಿ ಪ್ರೊ. ಡಾ. ಸಂದೀಪ್ ದೇಸಾಯಿ ರವರು ಡೀನ್ ಹಾಗೂ ಅಮಿಟಿ ಕಾನೂನು ಕಾಲೇಜು, ಹಾಗೂ ಶ್ರೀ ಇ. ಸುಹೈಲ್ ಅಹ್ಮದ್, ಹಿರಿಯ ಸಹಭಾಗಿ ಮತ್ತು ಟ್ರೈಲ್ ಬೇಸ್, ಬೆಂಗಳೂರು ಇದ್ದರು. ಅತಿಥಿಗಳನ್ನು ಕುಲಪತಿಗಳಾದ ಪ್ರೊ. ಡಾ. ಮುದ್ದು ವಿನಯ್ ರವರು ಮತ್ತು ವಿಭಾಗದ ಮುಖ್ಯಸ್ಥೆ ಡಾ. ರಾಜಶ್ರೀ ಪಾಟೀಲ, ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.

    ಈ ಕಾರ್ಯಕ್ರಮದಲ್ಲಿ ಗಣ್ಯರಿಂದ ಹಲವು ಬಗೆಯ ಪ್ರೇರಣಾದಾಯಕ ಭಾಷಣಗಳಲ್ಲಿ ಕಾನೂನು ಶಿಕ್ಷಣದಲ್ಲಿ ಮೂಟ್ ಕೋರ್ಟ್‌ಗಳ ಪಾತ್ರ ಮತ್ತು ಸಿದ್ಧಾಂತದ ಅನುಭವವನ್ನು ಏಕೀಕರಿಸುವ ಅವಶ್ಯಕತೆಯನ್ನು ಹೈಲೈಟ್ ಮಾಡಲಾಯಿತು. ಹಾಗೇಯೆ ಈ ಕಾರ್ಯಕ್ರಮವು ಉತ್ಸಾಹ ಭರಿತ ವಿದ್ಯಾರ್ಥಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನಡೆಯಿತು.