Author: Satyakam NewsDesk

  • RSS ಗೀತೆ ಹಾಡಿದ್ರೆ CM ಸೀಟ್ ಸಿಗೋದಾದರೆ? ನಾವು ಇಬ್ಬರೂ ಹಾಡ್ತೀವಿ! – ಜಾರಕಿಹೊಳಿ ವ್ಯಂಗ್ಯ

    RSS ಗೀತೆ ಹಾಡಿದ್ರೆ CM ಸೀಟ್ ಸಿಗೋದಾದರೆ? ನಾವು ಇಬ್ಬರೂ ಹಾಡ್ತೀವಿ! – ಜಾರಕಿಹೊಳಿ ವ್ಯಂಗ್ಯ

    ಯಾದಗಿರಿ : ಆರ್ ಎಸ್ ಎಸ್ ಗೀತೆ ಹಾಡಿದರೇ ಮುಖ್ಯಮಂತ್ರಿ ಸ್ಥಾನ ಸಿಗುವಂಗ ಇದ್ದರೇ ನಾನು ಶಾಸಕ ಚನ್ನಾರಡ್ಡಿ ಪಾಟೀಲ್ ಇಬ್ಬರು ಹಾಡುತ್ತೆವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ವ್ಯಂಗ್ಯವಾಡಿದರು.

    ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಂಸ್ಕ್ರತ ಭಾಷೆ ಚನ್ನಾಗಿ ಬಲ್ಲವರಾಗಿದ್ದಾರೆ. ಸಂಧರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಠೆ, ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮುರುಡಿ ಅವರನ್ನು ಒದ್ದು ಒಳಗೆ ಹಾಕಿದ್ದವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನು ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು.

    ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ನಡೆಯುತ್ತಾ ಎಂಬ ಪ್ರಶ್ನೆಗೆ ಅಂತಹದ್ದು ಏನು, ಅದೆಲ್ಲ ಪಕ್ಷದ ಕೇಂದ್ರ ಸಮಿತಿಗೆ ಬಿಟ್ಟಿದ್ದು ಎಂದರು. ಮಾಜಿ ಸಚಿವ ರಾಜಣ್ಣ ಅವರು ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿ ಆಗಿರುವ ಘಟನೆ ವಿವರಿಸುತ್ತಾರೆ, ಮುಂದಿನದು ಹೈಕಮಾಂಡಗೆ ಬಿಟ್ಟಿದ್ದು ಎಂದರು. ವಾಲ್ಮೀಕಿ ಸಮುದಾಯವನ್ನು ತುಳಿಯುವ ಕೆಲಸ ಈ ಸರ್ಕಾರ ಮತ್ತು ಪಕ್ಷದಿಂದ ನಡೆಯುತ್ತಿದೆ ಎಂಬುವುದು ಸುಳ್ಳು ಎಂದರು.

    ಬೇರೆಯವರಂತೆಯೇ ನಮ್ಮ ನಾಯಕ ರಾಹುಲ್ ಗಾಂಧಿ ಅವರು ರಿವೆಂಜ್ ಪಾಲಿಟಿಕ್ಸ್ ಮಾಡುವವರಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಬುರುಡೆ ಚಿನ್ನಯ್ಯ ಅರೆಸ್ಟ್ ಆದ ಬಗ್ಗೆ ಕೇಳಿದ ಪ್ರಶ್ನೆಗೆ ಧರ್ಮಸ್ಥಳ ಒಂದು ಊರು. ಅದೇನು ರಾಜ್ಯ, ರಾಷ್ಟ್ರದ ಸಮಸ್ಯೆ ಅಲ್ಲ. ಕೋರ್ಟ್ ಆದೇಶದಂತೆಯೇ ಸರ್ಕಾರ ತನಿಖೆ ನಡೆಸಿದೆ. ಅದರಿಂದ ಏನೇನು ಹೊರಬರಬೇಕು ಅದು ಬರುತ್ತದೆ. ನೀವೇ ಅದು ದೊಡ್ಡದಾಗಿ ನಿತ್ಯ ಬಿಂಬಿಸುತ್ತಿದ್ದಿರಿ ಎಂದು ಮಾಧ್ಯಮದವರ ಕಡೆ ಸಚಿವರು‌ ಬೊಟ್ಟು ಮಾಡಿದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಇದ್ದರು.

    ಬೆಳೆ ಹಾನಿ: ಸಮೀಕ್ಷೆ ವರದಿ ನಂತರ ಪರಿಹಾರ ವಿತರಣೆ.

    ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಪರಿಹಾರ ವಿತರಣೆಯಾಗುತ್ತದೆ. ಈ ಸರ್ಕಾರದಲ್ಲಿ ಇದುವರೆಗೂ ಒಂದು ಬ್ರೀಜ್ ನಿರ್ಮಿಸಿಲ್ಲ. ಈಗ ಆ ಕೆಲಸ ಶುರು ಮಾಡುತ್ತವೆ. ಹೊಸ ಸೇತುವೆಗಳ ನಿರ್ಮಾಣ, ಶಿಥಿಲಗೊಂಡ ಸೇತುವೆಗಳ ದುರಸ್ತಿ ಕೆಲಸ ಕೈಗೊಳ್ಳಲಾಗುವುದು.
    ನಕಲಿ ಜಾತಿ ಪ್ರಮಾಣ‌ ನೀಡುವುದನ್ನು ಜಿಲ್ಲಾಧಿಕಾರಿಗಳು ತಡೆಯುತ್ತಾರೆ ಎಂದು ಸಚಿವ ಜಾರಕಿಹೊಳಿ ಹೇಳಿದರು.

  • ಎರಡು ವರ್ಷ ಕಾಣದಂತೆ ಮಾಯವಾದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ

    ಎರಡು ವರ್ಷ ಕಾಣದಂತೆ ಮಾಯವಾದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ

    ಯಾದಗಿರಿ: ಕರ್ನಾಟಕ ಅಧಿವೇಶನದಲ್ಲಿ ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ, ಕಲ್ಯಾಣ ಕರ್ನಾಟಕದ ಧ್ವನಿಯಾಗಿ ಅಭಿವೃದ್ದಿ ಬಗ್ಗೆ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವುದನ್ನು ಪ್ರಶ್ನಿಸಿದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ ನೀವು ಯಾವ ಪಕ್ಷದಲ್ಲಿ ಇರುತ್ತೀರಿ ಅಂತ ನಿಮಗೆ ಗೊತ್ತಿಲ್ಲಾ ಎಂದು ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯ ನಂತರ ಹಲವು ದಿನಗಳಿಂದ ನಾಪತ್ತೆಯಾಗಿರುವ ನೀವು ಈಗ ಯಾವ ಪಕ್ಷದಲ್ಲಿದ್ದೀರಿ, ಒಂದ್ ವರ್ಷ ಬಿಜೆಪಿ, ಒಂದ್ ವರ್ಷ ಕಾಂಗ್ರೆಸ್ ಅಂತ ತಿರುಗುವ ನೀವು ಮೊದಲು ಯಾವ ಪಕ್ಷದಲ್ಲಿದ್ದೀರಿ ಎಂದು ಜನತೆಗೆ ತಿಳಿಸಿ, ಆ ನಂತರ ನೀವು ನಮ್ ಶಾಸಕರ ಬಗ್ಗೆ ಹೇಳಿಕೆ ನೀಡಿ, ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವ, ಹೇಳಿಕೆ ನೀಡುವ ಚಾಳಿಬಿಟ್ಟು ಅಭಿವೃದ್ಧಿ ಪರ ಮಾತನಾಡುವ ಶಾಸಕರಿಗೆ ಬೆಂಬಲ ಕೊಡುವುದನ್ನು
    ಕಲಿಯಿರಿ ಎಂದು ತಿಳಿಹೇಳಿದ್ದಾರೆ.

    ಅಧಿವೇಶನದ ಸಂದರ್ಭಗಳಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ ಶಾಸಕರ ಕೆಲಸ ಅದನ್ನು ಅವರು ಸರಿಯಾಗಿ ಮಾಡುತ್ತಿದ್ದಾರೆ, ಕಳೆದ ಹಲವು ದಶಕಗಳವರೆಗೆ ಗುರುಮಠಕಲ್ ಕ್ಷೇತ್ರದಿಂದಲೇ
    ಆಯ್ಕೆಯಾಗಿ ಹೋದವರು ಇಲ್ಲಿಯ ವರೆಗೂ ಯಾರು ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲಾ ಎನ್ನುವುದು ನಿಮಗೆ ನೆನಪಿರಲಿ ಎಂದಿದ್ದಾರೆ.

    ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳ ಬಗ್ಗೆ ಸದನದಲ್ಲಿ ರೈತರ ಪರವಾಗಿ ಧ್ವನಿ ಎತ್ತಿ ಆ ಡ್ಯಾಂಗಳ ಅಭಿವೃದ್ಧಿಗಾಗಿ ಸರ್ಕಾರದ ಗಮನ ಸೆಳೆದರೆ ತಮಗೇಕೆ ಸಿಟ್ಟು ಆ ಭಾಗದ ಜನರ ಅಭಿವೃದ್ಧಿ ನಿಮಗೆ ಬೇಡವೆ ಇದನ್ನಿಟ್ಟುಕೊಂಡು ನೀವು ಹೇಳಿಕೆ ನೀಡಿದ್ದೀರಿಲ್ಲ
    ಜನರ ಅಭಿವೃದ್ಧಿಗಾಗಿ ಸದನದಲ್ಲಿ ಧ್ವನಿ ಎತ್ತಿರುವುದರಲ್ಲಿ ತಪ್ಪೇನಿದೆ ಎಂಬುದು ನೀವೇ ಹೇಳಬೇಕು ಎಂದಿದ್ದಾರೆ.

    ವಿಧಾಸಭೆ ಅಧಿವೇಶನದಲ್ಲಿ ನಮ್ಮ ಭಾಗದ ಧ್ವನಿಯಾಗಿ ನಮ್ ಶಾಸಕರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನವನ್ನಿಟ್ಟುಕೊಂಡು ಮಾತನಾಡುತ್ತಾರೆ, ಅದರಲ್ಲಿ ನಮ್ಮ ಗುರುಮಠಕಲ್ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಅಭಿವೃದ್ಧಿ ಸಹಿಸದ ನೀವು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾ ಕಾಲಹರಣ ಮಾಡುತ್ತಿರುವ ನೀಮ್ಮಿಂದ ನಮ್ ಶಾಸಕರು ಕಲಿಯಬೇಕಾಗಿಲ್ಲಾ, ನಮ್ ಶಾಸಕರು ಸದನದಲ್ಲಿ ಮಾತನಾಡಿದಾಗ ಪಕ್ಷಾತೀತವಾಗಿ ರಾಜ್ಯದ ಹಲವು ಶಾಸಕರು ಬೆಂಬಲ ನೀಡುತ್ತಿದ್ದಾರೆ ಅಂತದರಲ್ಲಿ ನೀವು ಯಾದಗಿರಿ ಜಿಲ್ಲೆಯವರಾಗಿ ವಿರೋಧ ಹೇಳಿಕೆ ನೀಡುತ್ತಿದ್ದೀರಿಲ್ಲ ಇದರಲ್ಲೆ ತಿಳಿಯುತ್ತೆ ನಿಮ್ಮ ಮೂರ್ಖತನದ ಬುದ್ದಿ. ನೀವು ಇದೆ ರೀತಿ ಮುಂದುವರೆಸಿದರೆ ನಾವು ನಿಮ್ಮ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

  • ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

    ಅಕಾಲಿಕ ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡಲು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮನವಿ

    ಯಾದಗಿರಿ : ವಾಯುಭಾರ ಕುಸಿತದಿಂದಾಗಿ ಒಂದು ವಾರದವರೆಗೂ ಸುರಿದ ಸತತ ಮಳೆಗೆ ಜಿಲ್ಲೆಯ ರೈತರು ಬಿತ್ತಿದ ಹೆಸರು, ತೊಗರಿ ಮತ್ತು ಹತ್ತಿ ಇತರೆ ಬೆಳೆಗಳು ಹಾಳಾಗಿದ್ದು, ಈಗ ಆರಂಭಿಸಲಿರುವ ಸಮೀಕ್ಷೆ ಬೇಗನೆ ಮುಗಿಸಿ ಹಾನಿಗೊಳಗಾದ ರೈತರಿಗೂ ಹಾಗೂ ಮನೆಗಳು ಕುಸಿದು ಸೂರು ಕಳೆದಕೊಂಡವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಶುಕ್ರವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಬೆಳೆಗಳು ರಾಶಿ ಹಂತಕ್ಕೆ ಬಂದಿದ್ದವು, ಇದಕ್ಕೆ ಸಿದ್ದರಾಗಿದ್ದ ರೈತರಿಗೆ ಈ ಮಳೆ ಬರಸಿಡಿಲು ಬಡಿದಂತೆಯೇ ಆಗಿದೆ.

    ಹೆಸರು ರೈತರ ಮಿತ್ರ ಬೆಳೆ. 40 ದಿನಗಳಲ್ಲಿ ಕೈಸೇರುವ ಇದು ಮಾರಿ ಮುಂದಿನ ಬೆಳೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದರು. ಆದರೇ ಅವರ ಕನಸು ನುಚ್ಚುನೂರಾಗಿದೆ. ಕಾರಣ ರೈತರು ಉಳಿದರೇ ಎಲ್ಲರೂ ಉಳಿದಂತೇ. ಕಾರಣ ತ್ವರಿತಗಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸುವ ಆಗಬೇಕೆಂದು ಶಾಸಕರು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಜಿಲ್ಲೆಯ ಆರು ತಾಲೂಕುಗಳಲ್ಲಿ ಮಳೆಯಿಂದ ಮನೆಗಳು ಕುಸಿದಿವೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಕಾರಣ, ಸಂಬಂಧಪಟ್ಟ ಅಧಿಕಾರಿಗಳಿಂದ ಇದರ ಸಮೀಕ್ಷೆ ಕೂಡಾ ನಡೆಸಿ ಪರಿಹಾರ ನೀಡಬೇಕೆಂದು ತುನ್ನೂರು ಮನವಿ ಮಾಡಿದ್ದಾರೆ.

  • ಬಾವಿಯಲ್ಲಿ ಬಿದ್ದು ಮೃತಪಟ್ಟ ಬಾಲಕನ ಶವ ಪರೀಕ್ಷೆ

    ಬಾವಿಯಲ್ಲಿ ಬಿದ್ದು ಮೃತಪಟ್ಟ ಬಾಲಕನ ಶವ ಪರೀಕ್ಷೆ

    ಹುಣಸಗಿ: ತಾಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ 17 ವರ್ಷದ ಜಗದೀಶ ಎಂಬ ಬಾಲಕನ ಶವವನ್ನು ಹೊರತೆಗೆಸಿ ಮರು ಶವಪರೀಕ್ಷೆ ನಡೆಸಲಾಯಿತು.

    ಜಗದೀಶ, ಯಮನಪ್ಪ ಇಂಗಳಗಿ ಮತ್ತು ದುರ್ಗವ್ವ ದಂಪತಿ ಪುತ್ರ. ಏಪ್ರಿಲ್ 23ರಂದು ಗ್ರಾಮದ ಹಣಮಂತ ಅವರ ಜಮೀನಿನ ಬಾವಿಗೆ ಈಜಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ನಂತರ ಪೋಷಕರು ಹೊಲದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.

    ಆದರೆ ಜುಲೈ 12ರಂದು ಮಗನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ತಂದೆ ಯಮನಪ್ಪ ಅವರು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಪ್ರಕಾರ ಪೋಷಕರ ಸಮ್ಮುಖದಲ್ಲಿ ತಹಶೀಲ್ದಾರ್ ಎಂ. ಬಸವರಾಜ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆಸಿ ಶವಪರೀಕ್ಷೆ ನಡೆಸಲಾಯಿತು. ಈ ವೇಳೆ ಪಿಎಸ್‌ಐ ರಾಜಶೇಖರ ಹಾಗೂ ವೈದ್ಯರು ಉಪಸ್ಥಿತರಿದ್ದರು.

  • ಬಲವಂತದ ದೇಣಿಗೆ ಬೇಡ: ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

    ಬಲವಂತದ ದೇಣಿಗೆ ಬೇಡ: ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಮುಂಬರುವ ಗೌರಿ–ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ವಾಹನಗಳನ್ನು ತಡೆದು ಬಲವಂತವಾಗಿ ದೇಣಿಗೆ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.

    ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಹಬ್ಬದ ಸಂದರ್ಭಗಳಲ್ಲಿ ಕೆಲವು ಸಮಿತಿಗಳ ಸದಸ್ಯರು ರಸ್ತೆಗಳಲ್ಲಿ ಗುಂಪು ಸೇರಿ, ವಾಹನ ಸವಾರರಿಗೆ ಅಡಚಣೆ ಉಂಟುಮಾಡಿ ಬಲವಂತವಾಗಿ ಹಣ ಬೇಡುವ ಘಟನೆಗಳು ನಡೆಯುತ್ತಿರುವುದಾಗಿ ತಿಳಿಸಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಅಪಘಾತಗಳ ಸಂಭವ ಹೆಚ್ಚಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ದೇಣಿಗೆಯನ್ನು ಸ್ವೀಕರಿಸಲು ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ರಸ್ತೆ ತಡೆದು ಹಣ ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.

    ಗೌರಿ–ಗಣೇಶ ಹಬ್ಬವನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಹಬ್ಬವನ್ನು ನೆರವೇರಿಸಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಮ್ಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

  • ಸೌಹಾರ್ದಯುತವಾಗಿ ಹಬ್ಬಗಳು ಆಚರಿಸಿ – ಡಿ.ವೈ.ಎಸ್.ಪಿ ಸುರೇಶ್

    ಸೌಹಾರ್ದಯುತವಾಗಿ ಹಬ್ಬಗಳು ಆಚರಿಸಿ – ಡಿ.ವೈ.ಎಸ್.ಪಿ ಸುರೇಶ್

    ಗುರುಮಠಕಲ್: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಎಂದು ಡಿ.ವೈ.ಎಸ್. ಪಿ ಸುರೇಶ್. ಎಮ್. ಹೇಳಿದರು.

    ತಾಲೂಕಿನ ಚಂಡ್ರಿಕಿ ಗ್ರಾಮದಲ್ಲಿ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳಬೇಕು’ ಎಂದರು.

    ಇದೇ ಸಂಧರ್ಭದಲ್ಲಿ ಪಿ. ಐ. ವೀರಣ್ಣ ದೊಡ್ಡಮನಿ ಮಾತನಾಡಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಣ್ಣ ಪುಟ್ಟ ಮಕ್ಕಳು ಮೆರವಣಿಗೆ ಹೋಗದಂತೆ ಪೋಷಕರು ಗಮನಹರಿಸಿ ಹಾಗೂ ಮೂರ್ತಿಗಳ ವಿಸರ್ಜನೆ ನಮ್ಮ ಇಲಾಖೆ ಬೇಕಾದ ಅಗತ್ಯ ಸಿಬಂದಿಯನ್ನು ನಿಯೋಜನೆ ಮಾಡಲಾಗುವುದು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸದೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ತ್ಯಾಜ್ಯವನ್ನು ಒಂದು ನಿಗದಿಪಡಿಸಿದ ಸ್ಥಳದಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.

    ಈ ವೇಳೆ ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪಿ.ಡಿ.ಓ. ಗೀತಾ, ಶಿವರಾಮ ರೆಡ್ಡಿ ಸೇರಿದಂತೆ ಊರಿನ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

  • ಗೋಶಾಲೆಯಲ್ಲಿ ಸಾಕಿದ್ದ ಜಿಂಕೆ ಮರಿ ವಶ

    ಗೋಶಾಲೆಯಲ್ಲಿ ಸಾಕಿದ್ದ ಜಿಂಕೆ ಮರಿ ವಶ

    ಸತ್ಯಕಾಮ ವಾರ್ತೆ ಯಾದಗಿರಿ :
    ಯಾದಗಿರಿ ನಗರದ ಹೊರವಲಯದಲ್ಲಿರುವ ಭಗವಾನ್ ಮಹಾವೀರ ಜೈನ್ ಗೋಶಾಲಾದಲ್ಲಿ ಸಾಕಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

    ಮೂಲಗಳ ಮಾಹಿತಿ ಪ್ರಕಾರ, ಪಕ್ಕದ ಜಮೀನಿನಲ್ಲಿ ಸಿಕ್ಕಿದ್ದ ಜಿಂಕೆಯನ್ನು ಗೋಶಾಲಾ ಸಿಬ್ಬಂದಿಗಳು ಕಳೆದ ಒಂದು ವರ್ಷದಿಂದ ಸಾಕುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಜಿಂಕೆ ಪತ್ತೆಯಾಗಿದೆ.

    ಜಿಂಕೆಯನ್ನು ವಶಕ್ಕೆ ಪಡೆಯುವ ವೇಳೆ ಗೋಶಾಲಾ ಸಿಬ್ಬಂದಿಗಳು ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯವೂ ಅಲ್ಲಿ ಕಂಡುಬಂದಿತು. ಆದಾಗ್ಯೂ, ಅರಣ್ಯ ಕಾಯ್ದೆ ಪ್ರಕಾರ ಕಾಡುಪ್ರಾಣಿಗಳನ್ನು ಮನೆಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಾಕುವುದು ಕಾನೂನು ಬಾಹಿರವಾಗಿರುವುದರಿಂದ ಅಧಿಕಾರಿಗಳು ಜಿಂಕೆಯನ್ನು ವಶಕ್ಕೆ ಪಡೆದು ಎಲೆರಿ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇದರ ನಡುವೆ, ಜಿಂಕೆ ಗೋಶಾಲೆಯಲ್ಲಿ ಗೋಪ್ಯವಾಗಿ ಇಟ್ಟ ಗೋಶಾಲೆಯ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗಿತ್ತು ಎಂಬ ಸಾರ್ವಜನಿಕರ ಬೇಡಿಕೆ ವ್ಯಕ್ತವಾಗಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

  • ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

    ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

    ಯಾದಗಿರಿ: ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ದೆಹಲಿಯ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಸಿದ್ದಪ್ಪ ಎಸ್ ಹೊಟ್ಟಿ ಅವರಿಗೆ ಹೊಟ್ಟಿಯ ಆತ್ಮೀಯ ಬಳಗದ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಲಯದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

    ಸನ್ಮಾನ ನೇರವೆರಿಸಿ ಮಾತನಾಡಿದ  ಸಹಕಾರ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಪೂರ ಗಿರಿ ಜಿಲ್ಲೆಯ ಸಹಕಾರ ಸಂಘದಲ್ಲಿ ಗುರಿತಿಕೊಂಡಿದ್ದ ಸಿದ್ದಪ್ಪ ಹೊಟ್ಟಿ ದೇಶದ ದೆಹಲಿಯಲ್ಲಿರುವ ನೆಪೆಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ನಮ್ಮ ಹಿಂದುಳಿದ  ಯಾದಗಿರಿ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

    ಸಹಕಾರ ಯುನಿಯನ್ ನಿರ್ದೇಶಕ ಕೆಂಚಪ್ಪ ನಗನೂರ ಮಾತನಾಡಿ ಸಿದ್ದಪ್ಪ ಎಸ್ ಹೊಟ್ಟಿ ಅವರು ದೆಹಲಿ ನೆಪೆಡ್ ಸಂಸ್ಥೆಯ ಮತ್ತ ನೂತನವಾಗಿ ಆಯ್ಕೆಯಾದ ಎನ್ ಎಚ್ ಆರ್ ಡಿ ಎಪ್ ಸಂಸ್ಥೆಯ ವತಿಯಿಂದ ಬರುವ ಸವಲತ್ತುಗಳನ್ನು ನಮ್ಮ ಗಿರಿ ಜಿಲ್ಲೆಗೆ ತರುವಂತಹ ಕೆಲಸ ಆಗಬೇಕು ನಮ್ಮ ಸ್ಥಳೀಯ ಸಹಕಾರ ಸಂಘಗಳಿಗೆ ಆರ್ಥಿಕ ಶಕ್ತಿ ತುಂಬುವಂತಹ ಕೆಲಸ ತಾವು ಮಾಡಬೇಕು ಎಂದು ಹೇಳಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದಪ್ಪ ಎಸ್ ಹೊಟ್ಟಿ  ನಾನು ಸಹಕಾರ ಕ್ಷೇತ್ರದಲ್ಲಿ ಇಂದು ಈ ಮಟಕ್ಕೆ ಹೋಗಲು ದಿವಂಗತ ಸದಾಶಿವರೆಡ್ಡಿ ಕಂದಕೂರ ಅವರ ಆಶಿರ್ವಾದದಿಂದ ನಾನು ಸಹಕಾರ ಕ್ಷೇತ್ರದಲ್ಲಿ ಬೇಳೆಯಲು ಸಾದ್ಯವಾಗಿದೆ ಎಂದು ಹೇಳಿದರು.  ನಾನು ತಾಲೂಕು ಒಕ್ಕಲುತನ ಹುಟ್ಟವಳಿ ಮಾರಟ ಸಹಕಾರ ಸಂಘದ ಅಧ್ಯಕ್ಷರಾಗಿ ನಿರ್ದೇಶಕರಾಗಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಇನ್ನೂ ಅನೇಕ ಸಂಘಗಳಲ್ಲಿ ಹುದ್ದೆಯನ್ನು ನಿಭಾಯಿಸಲು ನಿಮ್ಮೇಲ್ಲರ ಸಹಕಾರದಿಂದ ಸೇವೆ ಮಾಡುತ್ತಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ಕಲಬುರಗಿ ಹಾಗೂ ಯಾದಗಿರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಪವನ ಕುಮಾರ. ಅಯ್ಯಣ್ಣ ಹುಂಡೇಕಾರ.ಪ್ರಕಾಶ ಅಂಗಡಿ ಕನ್ನೆಳ್ಳಿ. ಆರ್ ಮಾಹದೇವಪ್ಪಗೌಡ ಅಬ್ಬೆತುಮಕುರ. ಬಸವಂತ್ರಾಯ ಮಾಲಿಪಾಟೀಲ್. ಬಸವರಾಜ ಮೊಟ್ನಳ್ಳಿ. ಡಾ. ಭೀಮರಾಯ ಲಿಂಗೇರಿ.ಡಾ. ಎಸ್ ಎಸ್ ನಾಯಕ. ಚೆನ್ನಪ್ಪ ಠಾಣಗುಂದಿ, ಸೂಗಪ್ಪ ಪಾಟೀಲ್, ಅಮರಣ್ಣಗೌಡ ಗಡ್ಡೆಸೂಗೂರು, ವೈಜನಾಥ ತುಮಕೂರು, ನಾಗೇಂದ್ರ ಜಾಜಿ. ವಿ ಎಸ್ ಜಾಕಾಮಠ. ವೀರಭದ್ರಯ್ಯ ಮೋಟಾರ. ಶರಣಪ್ಪ ಗುಳಗಿ. ನಾಗಪ್ಪ ಸಜ್ಜನ. ಮಲ್ಲಿನಾಥ ಆಯರಕರ್. ಶೇಖರ ಅರಳಿ. ಲಕ್ಮೀನಾರಯಣ. ಅಯ್ಯಣ್ಣ ಗೌಡ ಕ್ಯಾಸಪನಳ್ಳಿ. ದೇವರಾಜ ವರ್ಕನಳ್ಳಿ,  ಸುಜಾತ ಮಠ.ರೇಖಾ ಮ್ಯಾಗೇರಿ. ಮಲ್ಲು ಸ್ವಾಮಿ,ಸಿದ್ದಪ್ಪ ಹೊಟ್ಟಿಯ ಆತ್ಮೀಯ ಬಳಗದಿಂದ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

  • ಮೋದಿ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠಿತ ಸ್ಥಾನಮಾನ – ಕಂದಕೂರು

    ಮೋದಿ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠಿತ ಸ್ಥಾನಮಾನ – ಕಂದಕೂರು

    ಗುರುಮಠಕಲ್: ಭಾರತ ಸ್ವಾತಂತ್ರದ ನಂತರ ಹಲವಾರು ದಶಕಗಳ ವರೆಗೂ ಸಣ್ಣಪುಟ್ಟ ರಾಷ್ಟ್ರಗಳೊಂದಿಗೆ ಹೋಲಿಕೆ ಆಗುತ್ತಿತ್ತು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಲಾಢ್ಯ ರಾಷ್ಟ್ರಗಳ ಜೊತೆ ಸರಿಸಮವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ರಂಗದಲ್ಲಿ ಸ್ಪರ್ಧೆ ನೀಡುವಂತಾಗಿದ್ದೇವೆ ಎಂದು ಶಾಸಕ ಶರಣು ಗೌಡ ಕಂದಕೂರು ಹೇಳಿದರು.

    ಪಟ್ಟಣದ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಯೋತ್ಪಾದಕರ ಕುತಂತ್ರಕ್ಕೆ 27 ಜನ ಭಾರತೀಯರು ಬಲಿಯಾಗಿರುವ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಕಾರ್ಯಚರಣೆ ವಿರೋಧಿಗಳಿಗೆ ನಿದ್ದೆಗೆಡಿಸಿದೆ. ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಷವಾಗಿದ್ದು, ಕೊರೋನಾ ಕಾಲದಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ಕಂಡು ದೊಡ್ಡ ದೇಶಗಳು ಕೂಡ ಬೆರಗಾಗಿವೆ ಎಂದು ಅವರು ಬಣ್ಣಿಸಿದರು.

    ಅಧ್ಯಕ್ಷ ಭಾಷಣಕ್ಕೂ ಮುಂಚೆ ಕಲಬುರಗಿ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧೀಪತಿಗಳಾದ ಡಾ||ಶರಣಬಸಪ್ಪ ಅವರಿಗೆ ಸಂತಾಪ ಸೂಚಿಸಿದರು, ವೇದಿಕೆ ಮೇಲಿದ್ದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ತಾಲೂಕ ದಂಡಾಧಿಕಾರಿಗಳಿಗೆ ಶಿಸ್ತು ಮತ್ತು ಸಮಯ ಪರಿಪಾಲನೆ ಮಾಡುವಂತೆ ಎಚ್ಚರಿಕೆ ನೀಡಿದರು.

    ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಉಪನ್ಯಾಸ ನೀಡಿದ ಚಂದ್ರಶೇಖರ್ ಪಾಟೀಲ್, ಅಜ್ಞಾತ ಸ್ವಾತಂತ್ರ ವೀರರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸೋಣ ಕೇವಲ ಒಂದು ವ್ಯಕ್ತಿಯಿಂದ ಸ್ವಾತಂತ್ರ ನಮಗೆ ಬಂದಿಲ್ಲ, ಸಾವಿರಾರು ದೇಶಭಕ್ತರು ದೇಶಕ್ಕಾಗಿ ಹುತಾತ್ಮರಾಗಿರುವ ಪ್ರಯುಕ್ತ ನಮಗೆ ದೇಶ ಸ್ವಾತಂತ್ರ ಸಿಕ್ಕಿದೆ ಜಲಿಯನ್ ವಾಲಿಬಾಲ್ ಹತ್ಯಾಕಾಂಡ ಹಾಗೂ ದೇಶಭಕ್ತ ಉದಂ ಸಿಂಗ್ ಅವರ ಕುರಿತು ವಿವರಿಸಿ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಿದರು.

    ಇದಕ್ಕೂ ಮುಂಚೆ ತಾಲೂಕ ದಂಡಾಧಿಕಾರಿ ಹಾಗೂತಹಸೀಲ್ದಾರ ಶಾಂತಗೌಡ ಬಿರಾದಾರ ಧ್ವಜಾರೋಹಣ ನೆರವೇರಿಸಿ ಪ್ರಾಸ್ಥಾವಿಕ ನುಡಿ ಹೇಳಿದರು.

    ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.

    ಈ ವೇಳೆ ವೇಧಿಕೆಮೇಲೆ ಜಯಶ್ರೀ ಪೊ.ಪಾಟೀಲ್ ಪುರಸಭೆ ಅಧ್ಯಕ್ಷರು, ರೇಣುಕಾ ವಿ.ಪಡಿಗೆ ಉಪಾಧ್ಯಕ್ಷರು, ಅಂಬ್ರೇಶ್ ಪಾಟೀಲ್ ತಾ.ಪಂ ಇ. ಓ, ಭಾರತಿ.ಸಿ.ದಂಡೋತಿ ಪುರಸಭೆ ಮುಖ್ಯಾಧಿಕಾರಿ, ವೀರಣ್ಣ.ಎಸ್. ದೊಡ್ಡಮನಿ ಆರಕ್ಷಕ ನಿರೀಕ್ಷಕರು, ನರಸಿಂಹಸ್ವಾಮಿ ಉಪ ತಹಶೀಲ್ದಾರ್ ಸೇರಿದಂತೆಮುಖಂಡರುಗಳು ಸಾರ್ವಜನಿಕಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ

    ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ, ಕಲಬುರಗಿಯ ಮಹಾ ದಾಸೋಹಿ ಪರಂ ಪೂಜ್ಯ ಶರಣಬಸಪ್ಪ ಅಪ್ಪ (92) ಅವರು ಇಂದು ರಾತ್ರಿ 9.23ಕ್ಕೆ ದಾಸೋಹ ಮಹಾ ಮನೆಯಲ್ಲಿ ಲಿಂಗೈಕ್ಯರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪಾಜಿ, ಕೆಲವು ದಿನಗಳಿಂದ ಮಠದಲ್ಲೇ ವೆಂಟಿಲೇಟರ್‌ನಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಪರಮಧಾಮ ಪ್ರವೇಶಿಸಿದರು.

    ಕುಟುಂಬಸ್ಥರು ದೇವಸ್ಥಾನದ ಮುಂಭಾಗದಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದು, ಭಕ್ತರ ಭಾರಿ ಆಗಮನದ ಹಿನ್ನಲೆ ಕಲಬುರಗಿ ಪೊಲೀಸ್ ಇಲಾಖೆ ಕಠಿಣ ಬಂದೋಬಸ್ತ್ ಕೈಗೊಂಡಿದೆ. ಅಂತಿಮ ದರ್ಶನದ ವೇಳೆಯನ್ನು ಕುಟುಂಬ ಸಮಾಲೋಚನೆ ಬಳಿಕ ಪ್ರಕಟಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ತಿಳಿಸಿದ್ದಾರೆ.