ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!

ಹಿಂದೆ ಮನೆಯ ಅಡುಗೆಮನೆ ಬದಿಯಲ್ಲೇ ಕಸದ ಬುಟ್ಟಿಗೆ ಸೇರುತ್ತಿದ್ದ ತೆಂಗಿನಕಾಯಿ ಚಿಪ್ಪು ಇಂದು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ರೈತರಿಂದ ಮನೆಮಹಿಳೆಯರವರೆಗೂ ಎಲ್ಲರಿಗೂ ಹೆಚ್ಚುವರಿ ಆದಾಯ ತರಿಸುತ್ತಿರುವ ಸುದ್ದಿ ಇದೀಗ ಗ್ರಾಮೀಣ ಭಾಗದಲ್ಲಿ ದೊಡ್ಡ ಗೆ ಗ್ರಾಸವಾಗಿದೆ. ಭಾರತದಲ್ಲಿ ತೆಂಗಿನಕಾಯಿ ಕಲ್ಪವೃಕ್ಷ ಎಂದು ಕರೆಯಲ್ಪಡುವುದಕ್ಕೆ ಕಾರಣ, ಅದರ ಪ್ರತಿಯೊಂದು ಭಾಗವೂ ಮಾನವನಿಗೆ ಒಳ್ಳೆಯದು ಆಗುವುದು. ಎಳನೀರು, ಕೊಬ್ಬರಿ, ತೊಳೆ, ಗರಿ, ಎಣ್ಣೆ ಹೀಗೆ ಮರದ ಎಲ್ಲ ಭಾಗಗಳು ಬಳಕೆಯಲ್ಲಿ ಇವೆ. ಆದರೆ ಜಾಗತಿಕ ಮಾರುಕಟ್ಟೆಯ ಅವಶ್ಯಕತೆ, ವಿದೇಶಗಳಲ್ಲಿ ಇದ್ದಿಲಿಗೆ ಏರಿದ ಡಿಮ್ಯಾಂಡ್ ಹಾಗೂ ಸ್ಥಳೀಯ ಮಟ್ಟದಲ್ಲಿ ತೆಂಗು ಉತ್ಪಾದನೆಯಲ್ಲಿ ಕಂಡುಬಂದ ಬದಲಾವಣೆ ಈ ತ್ಯಾಜ್ಯವನ್ನು ಇಂದು ಆರ್ಥಿಕ ನೇರವಾಗಿ ಪರಿಣಮಿಸಿದೆ.

ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಮನೆ ಬಾಗಿಲಿಗೇ ವ್ಯಾಪಾರಿಗಳು:

ಇತ್ತೀಚೆಗೆ ತೆಂಗಿನ ಚಿಪ್ಪಿನ ಬೆಲೆ ಅಚ್ಚರಿಯ ಮಟ್ಟಿಗೆ ಏರಿಕೆಯಾಗಿದೆ. ವ್ಯಾಪಾರಿಗಳು ಸ್ವತಃ ಮನೆಯ ಬಾಗಿಲಿಗೇ ಬಂದು ಚಿಪ್ಪುಗಳನ್ನು ಸಂಗ್ರಹಿಸಿ, ಒಂದು ಕೆಜಿಗೆ 20–22 ರೂ. ಒಂದು ಚಿಪ್ಪಿಗೆ 1 ರೂಪಾಯಿ, ಕೊಟ್ಟು ಖರೀದಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿನ ಮಹಿಳೆಯರಿಗೆ ಹೊಸ ಆದಾಯದ ಮೂಲ ರೂಪುಗೊಂಡಿದೆ. ಹಿಂದಿನಂತೆ ಚಿಪ್ಪುಗಳನ್ನು ಉರಿಯಾಗಿ ಬಳಸದೆ, ಜನರಿಂದ ಸಂಗ್ರಹಿಸಿ ಮಾರಾಟ ಮಾಡುವುದು ಈಗ ಸಾಮಾನ್ಯವಾಗಿದೆ.

ವಿದೇಶಕ್ಕೆ ರಫ್ತಾಗುತ್ತಿರುವ ಚಿಪ್ಪಿನ ಇದ್ದಿಲು:

ಕೊನೆಯ ಕೆಲವು ವರ್ಷಗಳಿಂದ ತೆಂಗಿನ ಚಿಪ್ಪಿನಿಂದ ತಯಾರಾಗುವ ಇದ್ದಿಲು (charcoal briquettes) ವಿದೇಶಗಳಲ್ಲಿ ಭಾರೀ ಬೇಡಿಕೆ ಪಡೆದಿದೆ.

ಬಾರಿ ಪ್ರಮಾಣದಲ್ಲಿ ರಫ್ತು ಆಗುತ್ತಿರುವುದು ಚಿಪ್ಪಿನ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ರಫ್ತುಗಾರರು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಕಚ್ಚಾ ಸಾಮಗ್ರಿ ಬೇಕಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ಎಳನೀರು ಬೇಡಿಕೆ, ಚಿಪ್ಪಿನ ಕೊರತೆ:

ರೈತರು ಈಗ ಕೊಬ್ಬರಿ ಮಾರಾಟಕ್ಕಿಂತ ಎಳನೀರಿಗೆ ಹೆಚ್ಚು ಒಲವು ತೋರುತ್ತಿರುವುದು ಮಾರುಕಟ್ಟೆಯಲ್ಲಿ ಬಲಿತ ತೆಂಗಿನಕಾಯಿಗಳ ಲಭ್ಯತೆಯನ್ನು ಕಡಿಮೆ ಮಾಡಿದೆ. ಇಂತಹ ಪರಿಸ್ಥಿತಿ ಚಿಪ್ಪಿನ ಮೌಲ್ಯವನ್ನು ಇನ್ನಷ್ಟು ಏರಿಸಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಗ್ರಾಮೀಣ ಮಹಿಳೆಯರಿಗೆ ಹೊಸ ಆದಾಯದ ದಾರಿಗಳು:

ಹಿಂದೆ ಉರಿಯಾಗಿ ಅಥವಾ ಮಣ್ಣಿನಲ್ಲಿ ಹೂತುಬಿಡುತ್ತಿದ್ದ ಚಿಪ್ಪುಗಳು ಈಗ ನೇರ ಹಣ ತರುತ್ತಿರುವುದರಿಂದ ಹಲವಾರು ಮನೆಗಳು ಇದನ್ನು ಪಾರ್ಶ್ವ ಉದ್ಯಮವಾಗಿ ತೆಗೆದುಕೊಂಡಿವೆ.

ಟ್ರ್ಯಾಕ್ಟರ್‌ಗಳಲ್ಲಿ ಸಂಗ್ರಹಿಸಿದ ಚಿಪ್ಪುಗಳನ್ನು ತಿಪಟೂರು, ಅರಸೀಕೆರೆ ಮುಂತಾದ ಪ್ರಮುಖ ತೆಂಗು ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ.

ಕಲ್ಪವೃಕ್ಷಕ್ಕೆ ಮತ್ತೊಂದು ಗರಿ:

ತೆಂಗು ಮರದ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯುಕ್ತ. ಈಗ ಚಿಪ್ಪು ಕೂಡಾ ಆ ಜಾತಿಗೆ ಸೇರಿದೆ. ಎಣ್ಣೆ, ಎಳನೀರು, ಗರಿ, ತೊಳೆ, ಮಟ್ಟೆ ಈಗ ಚಿಪ್ಪಿನ ಇದ್ದಿಲು ಎಲ್ಲವೂ ವ್ಯಾಪಾರ ರಂಗದಲ್ಲಿ ಮೌಲ್ಯ ಪಡೆದಿವೆ. ಇದರಿಂದ ತೆಂಗಿನಕಾಯಿ ಕಲ್ಪವೃಕ್ಷ ಎಂಬ ಹೆಸರಿನ ಮಹತ್ವ ಇನ್ನಷ್ಟು ಹೆಚ್ಚಿಸಿದೆ.

ಒಟ್ಟಾರೆಯಾಗಿ, ಒಮ್ಮೆಗೆ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟ ತೆಂಗಿನಕಾಯಿ ಚಿಪ್ಪು ಇಂದು ತನ್ನದೇ ಆದ ಮಾರುಕಟ್ಟೆ, ಮೌಲ್ಯ ಮತ್ತು ಬೇಡಿಕೆಯನ್ನು ಪಡೆದುಕೊಂಡಿದೆ. ರೈತರಿಗೆ, ಮಹಿಳೆಯರಿಗೆ ಹಾಗೂ ಗ್ರಾಮೀಣ ಉದ್ಯಮಗಳಿಗೆ ಹೊಸ ಚೈತನ್ಯ ಮತ್ತು ಹೆಚ್ಚುವರಿ ಆದಾಯ ನೀಡುತ್ತಿದೆ.

apvc-iconPost Views: 23

Comments

Leave a Reply

Your email address will not be published. Required fields are marked *