ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!
Cultural

ದೇವರ ಪೂಜೆಯ ಕಳಶ ತೆಂಗಿನಕಾಯಿಯ ಹಿಂದಿನ ದೈವೀ ರಹಸ್ಯ: ಬಳಸುವಾಗ ತಪ್ಪು ಮಾಡಬೇಡಿ!

Satyakam NewsDesk
Last updated: 2025/10/27 at 8:21 PM
Satyakam NewsDesk
Share
2 Min Read
SHARE

ಭಾರತೀಯ ಸಂಸ್ಕೃತಿಯಲ್ಲಿ ದೇವರ ಪೂಜೆ, ಹೋಮ, ಹವನ, ಗೃಹಪ್ರವೇಶ ಅಥವಾ ಯಾವುದೇ ಮಂಗಳಕಾರ್ಯಗಳಲ್ಲಿ ಕಳಶ ಸ್ಥಾಪನೆ ಒಂದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ. ಕಳಶವು ದೇವತೆಯ ಶಕ್ತಿ, ಶುದ್ಧತೆ ಮತ್ತು ಸೃಷ್ಟಿಯ ಮೂಲ ತತ್ವದ ಪ್ರತೀಕವೆಂದು ವೇದಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕಳಶದ ಮೇಲೆ ಇಡುವ ತೆಂಗಿನಕಾಯಿ ಕೇವಲ ಅಲಂಕಾರವಲ್ಲ ಅದು ದೈವೀ ಶಕ್ತಿಯ ಆವರಣ ಎಂದು ಪರಿಗಣಿಸಲಾಗುತ್ತದೆ.

ಆದರೆ ಅನೇಕರು ಪೂಜೆ ಮುಗಿದ ಬಳಿಕ ಈ ಕಳಶದ ತೆಂಗಿನಕಾಯಿಯನ್ನು ಏನು ಮಾಡಬೇಕು? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ತಿಳಿಯದೇ ಗೊಂದಲದಲ್ಲಿರುತ್ತಾರೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಶಾಸ್ತ್ರೋಕ್ತವಾಗಿ ನೀಡಿರುವ ಮಾಹಿತಿ ಹೀಗಿದೆ.

ಕಳಶದಲ್ಲಿನ ತೆಂಗಿನಕಾಯಿಯ ದೈವೀ ಮಹತ್ವ: 

ಕಳಶಕ್ಕೆ ಇಡುವ ತೆಂಗಿನಕಾಯಿ ದೇವರ ಸಾನಿಧ್ಯದಲ್ಲಿ ಇರಿಸುವುದರಿಂದ ಅದು ದೈವ ಸ್ವರೂಪ ಪಡೆಯುತ್ತದೆ. ಹೀಗಾಗಿ ಪೂಜೆ ಬಳಿಕ ಅದನ್ನು ನಿರ್ಲಕ್ಷ್ಯವಾಗಿ ಅಥವಾ ಸಾಮಾನ್ಯ ಉಪಯೋಗಕ್ಕಾಗಿ ಬಳಸಬಾರದು.

ಮಾಂಸದ ಅಡುಗೆಯಲ್ಲಿ ಬಳಸಬಾರದು: 

ಶಾಸ್ತ್ರಗಳಲ್ಲಿ ಉಲ್ಲೇಖವಾದಂತೆ, ದೇವರಿಗೆ ಅರ್ಪಿಸಿದ ತೆಂಗಿನಕಾಯಿಯನ್ನು ಮಾಂಸದ ಅಡುಗೆಗೆ ಬಳಸುವುದು ಅಪಶಕುನ ಎಂದು ಹೇಳಲಾಗಿದೆ. ಇಂತಹ ಪ್ರಯೋಗದಿಂದ ಪೂಜೆಯ ಪಾವಿತ್ರ್ಯ ಕಳೆದುಹೋಗುತ್ತದೆ.

ಸಿಹಿ ಪದಾರ್ಥಕ್ಕೆ ಬಳಸುವುದು ಶ್ರೇಷ್ಠ:

ಜ್ಯೋತಿಷಿ ವಿವೇಕಾನಂದ ಆಚಾರ್ಯರ ಪ್ರಕಾರ, ಕಳಶದ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳು (ಉದಾ: ಪಾಯಸ, ಹೋಳಿಗೆ, ಲಾಡು ಮುಂತಾದವು) ತಯಾರಿಸಲು ಬಳಸುವುದು ಅತ್ಯಂತ ಶುಭಕರ. ತಯಾರಿಸಿದ ಸಿಹಿ ಪದಾರ್ಥಗಳನ್ನು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಹಂಚಿದರೆ ಶುಭಫಲ ದೊರೆಯುತ್ತದೆ.

ತೆಂಗಿನಕಾಯಿ ಆಯ್ಕೆ ಮಾಡುವಾಗ ಎಚ್ಚರಿಕೆ:

ಕಳಶಕ್ಕೆ ಇಡುವ ತೆಂಗಿನಕಾಯಿ ಪೂರ್ಣವಾಗಿ ಒಣಗಿರಬಾರದು. ಒಣ ತೆಂಗಿನಕಾಯಿ ಕಳಶದಲ್ಲಿ ಇಟ್ಟರೆ ಮನೆಯವರ ಜೀವನದಲ್ಲಿ ಸಂಕಷ್ಟಗಳು ಅಥವಾ ಅಡೆತಡೆಗಳು ಎದುರಾಗಬಹುದು ಎಂದು ಶಾಸ್ತ್ರ ನುಡಿಸುತ್ತದೆ.

ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ ಅಥವಾ ಬಿರುಕು ಬಿಟ್ಟರೆ ಏನಾಗುತ್ತದೆ?

ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ, ಅದು ಆರ್ಥಿಕ ನಷ್ಟ ಅಥವಾ ಹಣಕಾಸಿನ ತೊಂದರೆಯ ಸೂಚನೆ ಎಂದು ಪರಿಗಣಿಸಲಾಗುತ್ತದೆ.

ತೆಂಗಿನಕಾಯಿಗೆ ಬಿರುಕು ಬಿದ್ದರೆ, ಮನೆಯ ಸದಸ್ಯರಿಗೆ ಅಪಘಾತ ಅಥವಾ ಅನಾರೋಗ್ಯ ಉಂಟಾಗುವ ಸಂಭವವಿದೆ ಎಂಬ ನಂಬಿಕೆಯೂ ಇದೆ.

ನೀರಿಲ್ಲದ ತೆಂಗಿನಕಾಯಿ ಶಕುನ:

ಕಳಶಕ್ಕೆ ಇಡುವ ತೆಂಗಿನಕಾಯಿಯಲ್ಲಿ ನೀರು ಇಲ್ಲದಿದ್ದರೆ, ಅದು ಸಂತಾನ ಭಾಗ್ಯ ಕುಂದಿಸುವ ಸೂಚನೆ ಎಂದು ಹೇಳಲಾಗಿದೆ. ಕೆಲವೆಡೆ ಇದನ್ನು ಮಕ್ಕಳು ದಾರಿ ತಪ್ಪುವ ಸಾಧ್ಯತೆ ಎಂದೂ ಅರ್ಥೈಸಲಾಗುತ್ತದೆ.

ಅರ್ಚಕರಿಗೆ ಅಥವಾ ಅನ್ಯರಿಗೆ ನೀಡಬಾರದು: 

ಪೂಜೆ ಮುಗಿದ ಬಳಿಕ ಕಳಶದ ತೆಂಗಿನಕಾಯಿಯನ್ನು ಅನ್ಯರಿಗೆ ಅಥವಾ ಅರ್ಚಕರಿಗೆ ನೀಡುವುದು ತಪ್ಪು ಎಂದು ಜ್ಯೋತಿಷಿ ಎಚ್ಚರಿಸುತ್ತಾರೆ. ಹೀಗೆ ಮಾಡಿದರೆ, ಪೂಜೆಯಿಂದ ಪಡೆದ ಪುಣ್ಯ ಫಲ ನಮ್ಮಿಂದ ದೂರವಾಗಿ, ಅದನ್ನು ಸ್ವೀಕರಿಸಿದವರಿಗೆ ತಲುಪುತ್ತದೆ ಎಂದು ನಂಬಿಕೆ ಇದೆ.

ಕಳಶದ ತೆಂಗಿನಕಾಯಿ ಕೇವಲ ಪೂಜಾ ಸಾಮಗ್ರಿ ಅಲ್ಲ, ಅದು ದೇವರ ಕೃಪೆಯ ಪ್ರತೀಕ. ಅದನ್ನು ಗೌರವದಿಂದ ಬಳಸುವುದು, ಸಿಹಿ ಪದಾರ್ಥ ತಯಾರಿಸಿ ಹಂಚಿಕೊಳ್ಳುವುದು ಮತ್ತು ನಿರ್ಲಕ್ಷ್ಯವಾಗಿ ಉಪಯೋಗಿಸದಿರುವುದು ಶಾಸ್ತ್ರೋಕ್ತ ಶ್ರೇಷ್ಠ ಕ್ರಮ ಎಂದು ಪರಿಗಣಿಸಲಾಗಿದೆ.

apvc-iconTotal Visits: 2
apvc-iconAll time total visits: 30841

You Might Also Like

ಚಿನ್ನ–ಬೆಳ್ಳಿ ದರ ಕುಸಿತ.!ಶೇ.35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ನಾಡ ಹಬ್ಬಕ್ಕೆ ಚಾಲನೆ

ಗಣಪತಿ ಸರ್ಕಾರಕ್ಕೆ ಸದ್ಬುದ್ದಿ ನೀಡಲಿ : ಶಾಸಕ ಕಂದಕೂರ

ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

TAGGED: God
Satyakam NewsDesk October 27, 2025 October 27, 2025
Share This Article
Facebook Twitter Whatsapp Whatsapp Telegram Copy Link Print
Share
By Satyakam NewsDesk
Follow:
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
Previous Article ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!
Next Article ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

Stay Connected

Facebook Like
Twitter Follow
Instagram Follow
Youtube Subscribe

Latest News

ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಇಳಿದ ನಟ
Crime Entertainment October 27, 2025
ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕಂದಕೂರ ಸಲಹೆ.
Latest News ಯಾದಗಿರಿ October 27, 2025
ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ದಿನೇಶ್, ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
Latest News ಯಾದಗಿರಿ October 27, 2025
ಚಿನ್ನದ ದರದಲ್ಲಿ ಭಾರಿ ಇಳಿಕೆ: ಖರೀದಿ ಮಾಡಲು ಸುವರ್ಣಾವಕಾಶ!
Business Technology October 27, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube