ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • State
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ
Latest News

ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ

2022ರ ಜನವರಿಯಿಂದ ನಾಪತ್ತೆಯಾಗಿರುವ ಸುರಪುರ ತಾಲೂಕಿನ ರೈತ ಕುಟುಂಬದ ಸೂಗಯ್ಯ ಸ್ವಾಮಿ ಪ್ರಕರಣ (ಕೈಂ. ನಂ. 30/2022) ತನಿಖೆಯಲ್ಲಿ ಪೊಲೀಸ್ ಇಲಾಖೆ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ರಾಜಕೀಯ ಮತ್ತು ಹಣಬಲಕ್ಕೆ ಮಣಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯಾಧ್ಯಕ್ಷ ಚನ್ನಪಟ್ಟಣ ಶಾಂತಗೌಡ ಗಂಭೀರ ಆರೋಪ ಮಾಡಿದ್ದಾರೆ.

Satyakam NewsDesk
Last updated: 2025/08/11 at 8:14 PM
Satyakam NewsDesk
Share
1 Min Read
SHARE

ಯಾದಗಿರಿ: 2022ರ ಜನವರಿಯಿಂದ ನಾಪತ್ತೆಯಾಗಿರುವ ಸುರಪುರ ತಾಲೂಕಿನ ರೈತ ಕುಟುಂಬದ ಸೂಗಯ್ಯ ಸ್ವಾಮಿ ಪ್ರಕರಣ (ಕೈಂ. ನಂ. 30/2022) ತನಿಖೆಯಲ್ಲಿ ಪೊಲೀಸ್ ಇಲಾಖೆ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ರಾಜಕೀಯ ಮತ್ತು ಹಣಬಲಕ್ಕೆ ಮಣಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯಾಧ್ಯಕ್ಷ ಚನ್ನಪಟ್ಟಣ ಶಾಂತಗೌಡ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂಗಯ್ಯ ಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಪ್ರಭಾವಿಶಾಲಿ ಜೈನ್ ಸಹೋದರರಿಗೆ 25 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಗ್ಯಾನಚಂದ್ ಜೈನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ, ಜೈನ್ ಸಹೋದರರು ಸುಪಾರಿ ಕೊಟ್ಟು ಸೂಗಯ್ಯನನ್ನು ಕೊಲ್ಲಿಸಿದ ಶಂಕೆ ವ್ಯಕ್ತವಾಗಿದೆ.

ಪ್ರಕರಣ ದಾಖಲಾಗಿ ಮೂರು ವರ್ಷವಾದರೂ, ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ. ಶಾಂತಗೌಡ ಅವರ ದೂರಿನ ಪ್ರಕಾರ, ಇದೇ ಜೈನ್ ಸಹೋದರರ ವಿರುದ್ಧ 2019ರಲ್ಲಿ ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ (ಕ್ರೈಂ. ನಂ. 83/2019) ದಾಖಲಾದರೂ, ಕೇವಲ ಒಂದು ತಿಂಗಳಲ್ಲಿ ‘ಬಿ ಅಂತಿಮ ತರದಿ’ ಸಲ್ಲಿಸಿ ಮುಚ್ಚಲಾಗಿದೆ ಎಂದರು.

ಇದಲ್ಲದೆ, ಸೂಗಯ್ಯ ಸ್ವಾಮಿಯ ಪತ್ನಿ ಅವರ ಹೆಸರಿನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟಕ್ಕೆ ಮುಂದಾಗಿರುವುದು, ಕುಟುಂಬದವರು ನಾಪತ್ತೆ ಪ್ರಕರಣದ ವಿಚಾರದಲ್ಲಿ ಆಸಕ್ತಿ ತೋರದಿರುವುದು — ಇವೆಲ್ಲವೂ ಹಣಬಲ ಮತ್ತು ರಾಜಕೀಯ ಬಲದ ಪ್ರಭಾವದ ಸೂಚನೆ ಎಂದು ಶಾಂತಗೌಡ ಆರೋಪಿಸಿದ್ದಾರೆ.

ಸತ್ಯವನ್ನು ಬೆಳಕಿಗೆ ತರುವುದೇ ನನ್ನ ನೈತಿಕ ಕರ್ತವ್ಯ ಎಂದು ಶಾಂತಗೌಡ ಹೇಳಿದ್ದು, ಪ್ರಕರಣವನ್ನು ಗಂಭೀರವಾಗಿ ಪುನರ್‌ ತನಿಖೆ ಮಾಡಲು ಪೊಲೀಸರು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷೀಕಾಂತ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ನಡುವಿನಕೇರಿ, ತಾಲೂಕು ಅಧ್ಯಕ್ಷ ಮಹಿಪಾಲ ರೆಡ್ಡಿ ಕಟಗಿ ಶಹಾಪುರ, ಅಶೋಕ್ ನಾಯಕ, ಭಾಷಾ ಕುರಕುಂಧಿ, ಮಲ್ಲಿಕಾರ್ಜುನ, ರೆಡ್ಡಿ ಖಾನಾಪುರ ಸೇರಿದಂತೆ ಇನ್ನಿತರರು ಇದ್ದರು.

apvc-iconTotal Visits: 43
apvc-iconAll time total visits: 24997

You Might Also Like

ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

Satyakam NewsDesk August 11, 2025 August 11, 2025
Share This Article
Facebook Twitter Whatsapp Whatsapp Telegram Copy Link Print
Share
Previous Article ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ
Next Article ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

Stay Connected

Facebook Like
Twitter Follow
Instagram Follow
Youtube Subscribe

Latest News

ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು
Crime September 7, 2025
ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ
Latest News September 6, 2025
ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್
Latest News August 30, 2025
ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ
Latest News August 30, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube