ಮೈಕ್ ಡಿ.ಜೆ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಸಭೆ

ಸತ್ಯಕಾಮ ವಾರ್ತೆ ಗುರುಮಠಕಲ್ :

ಮುಂಜಾನೆ 6 ರಿಂದ ಸಾಯಾಂಕಾಲ 10 ಗಂಟೆಯೊಳಗೆ ಸೌಂಡ ಸಿಸ್ಟಮ್ ಆಳವಡಿಸುವದು. ಇದಕ್ಕೆ ಮೀರಿ ನಡೆದರೆ ಜೈಲು ಶಿಕ್ಷೆ ಮತ್ತು ಭಾರಿ ಜುಲ್ಮಾನೆಗೂ ಹೊಣೆಗಾರರಾಗಿರುತ್ತೀರಿ ಎಂದು ಗುರುಮಠಕಲ್ ಪಿ. ಐ. ಈರಣ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುಮಠಕಲ್ ವಲಯ ಸೌಂಡ್ ಮತ್ತು ಲೈಟಿಂಗ್ ಮಾಲೀಕರ ಕ್ಷೇಮಭಿವೃದ್ಧಿ ಸಂಘದ ಸದಸ್ಯರೊಂದಿಗೆ ಅವರು ಸಮಾಲೋಚನೆ ನಡೆಸಿ ಸರಕಾರದಿಂದ ಹೊರಡಿಸಿದ ನಡಾವಳಿ ಕುರಿತು ಮನವರಿಕೆ ಮಾಡಿದರು.

ಗಣೇಶ ಹಬ್ಬದಲ್ಲಿ ಪ್ರತಿ ಬಡಾವಣೆ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಗಣೇಶ ಕೂಡಿಸಿದ ಸಂಧರ್ಭದಲ್ಲಿ ಸರಕಾರದ ನಿಯಮಾವಳಿಯಂತೆ ಸಮಯ ಪಾಲನೆ ಮಾಡಿ ಸೌಂಡ್ ಬಳಸಬೇಕು.

ಸಾರ್ವಜನಿಕರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಸೌಂಡ್ ಬಳಸದೆ ಹಾಗೂ ವಿಸರ್ಜನೆ ಸಮಯದಲ್ಲಿ ರಾತ್ರಿ 10-11 ಘಂಟೆಯ ಒಳಗೆ ಮೆರವಣಿಗೆ ಮುಗಿಯುವಂತೆ ನೋಡಿಕೊಳ್ಳಬೇಕು ಕಟ್ಟು ನಿಟ್ಟಾಗಿ ಹೇಳಿದರು.

ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂಧಿ ಶಿವರಾಮ್ ರೆಡ್ಡಿ, ಮೈಕ್ ಸಂಘದ ಪಾಪಣ್ಣ ಎ ಅಧ್ಯಕ್ಷ, ಅಬ್ದುಲ್ ರೌಫ್ ಗೌ. ಉಪಾಧ್ಯಕ್ಷ, ಮಲ್ಲೇಶಪ್ಪ ಮಳಖೆಡ್ಕರ್, ಮೋಹನ್ ಕುಮಾರ್ ಬುರ್ಬುರೆ ಉಪಾಧ್ಯಕ್ಷ, ರಮೇಶ ಚಕ್ಕೊಲೆ ಖಜಾಂಚಿ, ನರಸಪ್ಪ ಕಾವಲಿ, ನರಸಿಂಹಲು ಗಂಗನೋಳ್, ರಮೇಶ ಅಲ್ಲಿಪುರ, ರಾಮು ಚಾವ್ಲ, ಸುರೇಶ ಸ್ವಾಮಿ ಕಾಕಲವಾರ, ವಿಜಯ ಬೆಟ್ಟದಹಳ್ಳಿ, ಮನೋಹರ ಟಪ್ಪ, ರವಿ ಡಿ. ಜೆ ಬುದುರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

apvc-iconPost Views: 396

Comments

Leave a Reply

Your email address will not be published. Required fields are marked *