ಸತ್ಯಕಾಮಸತ್ಯಕಾಮಸತ್ಯಕಾಮ
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Search
  • Advertise
© 2024 Satyakam.news All Rights Reserved.
Reading: ಜುಲೈ 30 ರಂದು ಕುಂಟೋಜಿಗೆ ಬಸವಣ್ಣ ಹಾಗೂ ಸಂಗಮೇಶ್ವರನ ತೇರು ಆಗಮನ 
Share
Sign In
Notification Show More
Aa
ಸತ್ಯಕಾಮಸತ್ಯಕಾಮ
Aa
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
  • Disclaimer
  • Contact Us
  • Terms and Conditions
Search
  • Latest News
  • About us
  • ePaper
  • Agriculture
  • Crime
  • Politics
  • Cultural
  • Education
  • Technology
  • Entertainment
  • Health
  • Privacy Policy
  • World
    • JOBS
    • Sports
    • Business
  • Disclaimer
  • Contact Us
  • Terms and Conditions
Have an existing account? Sign In
Follow US
  • Advertise
© 2023. All Rights Reserved.
Home » ಜುಲೈ 30 ರಂದು ಕುಂಟೋಜಿಗೆ ಬಸವಣ್ಣ ಹಾಗೂ ಸಂಗಮೇಶ್ವರನ ತೇರು ಆಗಮನ 
Cultural

ಜುಲೈ 30 ರಂದು ಕುಂಟೋಜಿಗೆ ಬಸವಣ್ಣ ಹಾಗೂ ಸಂಗಮೇಶ್ವರನ ತೇರು ಆಗಮನ 

Satyakam NewsDesk
Last updated: 2025/07/20 at 4:41 PM
Satyakam NewsDesk
Share
2 Min Read
SHARE

ಸತ್ಯಕಾಮ ವಾರ್ತೆ ಮುದ್ದೇಬಿಹಾಳ: 

ಅಮರ ಶಿಲ್ಪಿ ಜಕಣಾಚಾರಿಯವರಿಂದ ನಿರ್ಮಿಸಲಾಗಿದೆ ಎಂದು ಪ್ರತೀತಿ ಹೊಂದಿರುವ ತಾಲೂಕಿನ ಕುಂಟೋಜಿ (ನಂದಿ) ಬಸವೇಶ್ವರ ಸಂಗಮೇಶ್ವರ ದೇವಸ್ಥಾನದ ಜಾತೆಯು ಪ್ರತಿ ಶ್ರಾವಣ ಮಾಸದ ಕೊನೆಯ ಸೋಮವಾರದಿಂದ 5 ದಿನಗಳವರೆಗೆ ನಡೆಯುತ್ತಾ ಬಂದಿದೆ.

ಈ ವರ್ಷ ಇಲ್ಲಿನ ಜಾತ್ರೆಯು ಬಹಳ ವಿಶೇಷವಾಗಿ ನಡೆಯಲಿದೆ. ಈ ದೇವಸ್ಥಾನಕ್ಕೆ ಈ ವರ್ಷದಿಂದ ಅಂದರೆ ಮೊಟ್ಟ ಮೊದಲಬಾರಿಗೆ ಕುಂಟೋಜಿ ಬಸವೇಶ್ವರ (ನಂದಿ) ಹಾಗೂ ಸಂಗಮೇಶ್ವರ ರಥೋತ್ಸವ ಜರುಗಲಿದೆ. ಕುಂಟೋಜಿ ಗ್ರಾಮದ ಮತ್ತು ಸುತ್ತಮುತ್ತಲಿನ ಊರುಗಳು, ನಗರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬಸವಣ್ಣನ ಭಕ್ತರು ಬಹಳ ಭಕ್ತಿಪೂರ್ವಕವಾಗಿ ದೇಣಿಗೆ ನೀಡಿ, ಕೊಪ್ಪಳದ ಜಕಣಾಚರ‍್ಯ ಮತ್ತು ಅಮೋಘವರ್ಷ ನೃಪತುಂಗ ಪ್ರಶಸ್ತಿ ವಿಜೇತರಾದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಇವರು ತಮ್ಮ ಎಂ.ಜಿ.ರಥಶಿಲ್ಪಿ ಕಲಾ ಕೇಂದ್ರದಲ್ಲಿ ಸಂಪೂರ್ಣ ಉಚಿತವಾಗಿ ನಿರ್ಮಿಸಿರುವ, ಸಾಗುವಾಣಿ ಮರದ ರಥವನ್ನು ಇದೇ ಜುಲೈ 30 ರಂದು ತಾಲೂಕಾ ಕೇಂದ್ರವಾದ ಮುದ್ದೇಬಿಹಾಳ ನಗರದ ಶ್ರೀದೇವಿ ಪಿಲೇಕೆಮ್ಮ ದೇವಿ ದೇವಸ್ಥಾನದಿಂದ ಕುಂಟೋಜಿ ಗ್ರಾಮದವರೆಗೆ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತಿಸಲಿದ್ದಾರೆ.

ಜುಲೈ 27 ರಂದು ರಥವನ್ನು ತರಲು ಕುಂಟೋಜಿಯಿAದ ಭಕ್ತರು ಮತ್ತು ದೇವಸ್ಥಾನ ಕಮೀಟಿಯವರು ಟ್ರಾö್ಯಕ್ಟರ್ ಮುಖಾಂತರ ಕೊಪ್ಪಳಕ್ಕೆ ತೆರಳಿಲಿದ್ದಾರೆ. ಜುಲೈ 29 ರಂದು ಬೆಳಿಗ್ಗೆ ಕೊಪ್ಪಳದಿಂದ ರಥವನ್ನು ತೆಗೆದುಕೊಂಡು ಹೊರಟು ಅಂದೇ ಸಂಜೆ ಮುದ್ದೇಬಿಹಾಳ ನಗರದ ಶ್ರೀ ದೇವಿ ಪಿಲೇಕೆಮ್ಮ ದೇವಾಸ್ಥಾನಕ್ಕೆ ಬಂದು ತಲುಪಲಿದೆ. ಮರುದಿನ 30 ರಂದು ಬೆಳಿಗ್ಗೆ ಪ್ರಥಮ ರಥವನ್ನು ಮತ್ತು ಅದರ ಜೊತೆಗೆ 21 ಕಿಲೋ ತೂಕದ ಬಸವಣ್ಣ ಮತ್ತು ಸಂಗಮೇಶ್ವರನ ಬೆಳ್ಳಿಯ ಮುಖವಾಡಗಳನ್ನು, ನಾಗರ ಹೆಡೆಯನ್ನು, ತೇರು ಎಳೆಯುವ ಹಗ್ಗ, ತೇರಿಗೆ ರುದ್ರಾಕ್ಷಿ ಮಾಲೆ, ಕಳಸ, ಇವುಗಳನ್ನು ಕುಂಟೋಜಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಹಿಳಾ ಸಂಘಗಳ ನೇತೃತ್ವದಲ್ಲಿ ಸುಮಂಗಲೆಯರಿAದ ಭವ್ಯ ಕುಂಭ ಮೆರವಣಿಗೆ, ಮತ್ತು ಡೊಳ್ಳು, ಕರಡಿಮಜಲು, ಬೆಂಡುಬಾಜಿ, ಕೋಲಾಟ ನೃತ್ಯ ಸಂಗೀತಗಳ ಸಹಿತ ಸಾಂಪ್ರದಾಯಿಕ ವಾದನಗಳ ಭವ್ಯ ಮೆರವಣಿಗೆಯ ಜೊತೆಗೆ ಕುಂಟೋಜಿ ಗ್ರಾಮಕ್ಕೆ ಕರೆತರಲಾಗುತ್ತದೆ. ಮರುದಿನ ಜುಲೈ 31 ರಂದು ಬೆಳಿಗ್ಗೆ ಗೋಧೂಳಿ ಸಮಯದಲ್ಲಿ ಮುತೈದೆಯರಿಗೆ ಉಡಿ ತುಂಬುವ ಮೂಲಕ ರಥ ಜೋಡಿಸುವ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಎಂದು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹೇಳಿದರು.

ಅವರು ಶನಿವಾರ ಬೆಳಿಗ್ಗೆ ಕುಂಟೋಜಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಹಾಗೂ ರಥವನ್ನು ತರುವ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ನಾಗಲಿಂಗಯ್ಯ ಮಠ, ರಥದ ಸ್ವಾಗತದ ಸಂದರ್ಭದಲ್ಲಿ ನಡೆಯವಬೇಕಾದ ಸಿದ್ಧತೆಗಳ ಕುರಿತು ಮಾರ್ಗದರ್ಶನ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ದೇವಸ್ಥನ ಕಮೀಟಿಯ ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೀಕಾರ, ರಾಮಣ್ಣ ಹುಲಗಣ್ಣಿ, ಮಲ್ಲಿಕಾರ್ಜುನ ಹುಲಬೆಂಚಿ, ಗುರುಪಾದಪ್ಪ ಹೆಬ್ಬಾಳ, ಅಶೋಕ ಕಾಟಿ, ಈರನಗೌಡ ಬಿರಾದಾರ, ಬಸಲಿಂಗಪ್ಪಗೌಡ ಬಿರಾದಾರ, ಶರಣಬಸಪ್ಪ ಪಲ್ಲೇದ, ಸಂಗಮೇಶ ಕುಂಬಾರ, ಸಂಗನಗೌಡ ಪಾಟೀಲ, ಗುರುಪಾದಪ್ಪ ಹೆಬ್ಬಾಳ, ಶಿವಲಿಂಗಪ್ಪ ಗಸ್ತಿಗಾರ, ಬಸಪ್ಪ ಹೂಗಾರ, ಪ್ರಕಾಶ ಹೂಗಾರ, ಸಂಗಯ್ಯ ಮಠ, ಮಮಾತೆಪ್ಪ ಯರಝರಿ, ಮಲ್ಲನಗೌಡ ಬಿರಾದಾರ, ರಾಚಯ್ಯ ಮಠ, ಸಂಗಯ್ಯ ಮಠ, ಪವಾಡೆಪ್ಪ ತಾಂಬ್ರಳ್ಳಿ, ಸಂತೋಷ ಬಿರಾದಾರ, ಶಿವಪ್ಪ ಕೋಲಕಾರ, ಅಂಬ್ರೇಶ ಕಾಟಿ, ಶರಣಬಸ್ಸು ಫಣೇದಕಟ್ಟಿ, ಶರಣಗೌಡ ಬಿರಾದಾರ, ಮಂಜೂ ಅಬ್ಬಿಹಾಳಮಠ, ಶಿವು ಅಂದೇಲಿ, ಸಂಗಮೇಶ ಯರಝರಿ ಮತ್ತೀತರರು ಇದ್ದರು.

apvc-iconTotal Visits: 40
apvc-iconAll time total visits: 30281

You Might Also Like

ಚಿನ್ನ–ಬೆಳ್ಳಿ ದರ ಕುಸಿತ.!ಶೇ.35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ ನಾಡ ಹಬ್ಬಕ್ಕೆ ಚಾಲನೆ

ಗಣಪತಿ ಸರ್ಕಾರಕ್ಕೆ ಸದ್ಬುದ್ದಿ ನೀಡಲಿ : ಶಾಸಕ ಕಂದಕೂರ

ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

Satyakam NewsDesk July 20, 2025 July 20, 2025
Share This Article
Facebook Twitter Whatsapp Whatsapp Telegram Copy Link Print
Share
By Satyakam NewsDesk
Follow:
55 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಲ್ಪಟ್ಟಿರುವ ಪ್ರಾದೇಶಿಕ ದಿನಪತ್ರಿಕೆ,
Previous Article ನಲ್ ಜಲ್ ಮಿತ್ರ ಯೋಜನೆ ಸದುಪಯೋಗ ಪಡಿಸಿಕೊಳ್ಳಿ – ಸಿಇಒ ಲವೀಶ್ ಒರಾಡಿಯ
Next Article ಸಂಭ್ರಮದಿಂದ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬ ಆಚರಣೆ

Stay Connected

Facebook Like
Twitter Follow
Instagram Follow
Youtube Subscribe

Latest News

ಕರುಳಿನ ಆರೋಗ್ಯವನ್ನು ಕಾಪಾಡುವ ಕೆಲವು ಅತ್ಯುತ್ತಮ ಆಹಾರಗಳು ಇಲ್ಲಿವೆ!
Health October 24, 2025
ಹೊಸ ಅವತಾರದಲ್ಲಿ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್
Entertainment October 24, 2025
IND Vs AUS 2nd ODI : ಅಡಿಲೇಡ್ ನಲ್ಲಿ ಮುಗ್ಗರಿಸಿದ ಗಿಲ್ ಪಡೆ
Latest News October 23, 2025
Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
Crime October 23, 2025
ಸಂಸ್ಥಾಪಕ ಸಂಪಾದಕರು - Late Shri P M Mannur
ಸಂಪಾದಕರು - Anand P Mannur

ನಮ್ಮ ಕಚೇರಿ ವಿಳಾಸ :

ಸತ್ಯಕಾಮ – ಪ್ರಾದೇಶಿಕ ಕನ್ನಡ ದಿನಪತ್ರಿಕೆ

Head Office: 3-1, Super market main road, Opp: Zilla Punchyat, Kalaburagi-585101

Vijaypura: Station Back Road, Shikari Khana, Vijaypura

Yadgiri: CMC No. 3-6-87/1, Veerashaiva Kalyana Mantappa Road, Yadgiri 585202

Mobile: +919741112546

ಸತ್ಯಕಾಮಸತ್ಯಕಾಮ
Follow US
© 2023 ಸತ್ಯಕಾಮ All Rights Reserved. Website Developed By WebOnline.in
ಸತ್ಯಕಾಮ ಗ್ರೂಪ್ ಸೇರಿಕೊಳ್ಳಿ
Welcome Back!

Sign in to your account

Lost your password?
  • ←
  • Facebook
  • YouTube