ಸತ್ಯಕಾಮ ವಾರ್ತೆ ಯಾದಗಿರಿ:
ನಗರದ ಡಿವೈಎಸ್ ಪಿ ಅಧಿಕಾರ ಸ್ಚೀಕಾರ ವಿಚಾರಕ್ಕೆ ಸಂಬಂಧಪಟ್ಟಂತೆಯೇ ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಾಂಗ್ರೆಸ್ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ತಮ್ಮ ಕಚೇರಿಯಲ್ಲಿ ಶನಿವಾರ ವಡಗೇರಾ ತಾಲೂಕಿನ 12 ಗ್ರಾಮಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ ಹುದ್ದೆಗೆ ರಾಜ್ಯ ಸರ್ಕಾರ, ಗೃಹ ಇಲಾಖೆ ಅಧಿಕಾರಿಗಳನ್ನು ವರ್ಗ ಮಾಡುವುದು ಸಹಜ ಕ್ರೀಯೆ. ಇಲ್ಲಿಗೆ ಪೊಸ್ಟಿಂಗ್ ಪಡೆದವರು ಯಾಕೆ ಇನ್ನೂ ಅಧಿಕಾರ ಸ್ಚೀಕರಿಸಿಲ್ಲ ಎಂಬ ಬಗ್ಗೆ ಇಲಾಖೆ ಮೇಲಾಧಿಕಾರಿಗಳು ಇಲ್ಲವೇ ಡಿವೈಎಸ್ ಪಿಯಾಗಿ ಬರಲಿರುವವರು ಹೇಳಬೇಕೆಂದರು. ಆದರೇ ಇದರಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂದ ಶಾಸಕರು, ಈ ಹಿಂದೇ ತೆಲ್ಕೂರ್ ಅವರು ಶಾಸಕರಾಗಿ ಕೆಲಸ ಮಾಡಿದ್ದಾರೆ. ಶಾಸಕಾಂಗ, ಕಾರ್ಯಾಂಗ ವ್ಯವಸ್ಥೆ ಅವರಿಗೂ ಗೊತ್ತಿದೆ ಅಂತ ಭಾವಿಸುತ್ತೆನೆ. ಒಬ್ಬ ಶಾಸಕ ತನ್ನ ಮತಕ್ಷೇತ್ರದಲ್ಲಿ ಬೇಕು – ಬೇಡಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ದಿನ ಇಂತಹ ಯಾವುದೇ ವಿಷಯವನ್ನು ತಡೆಯಬಹುದು. ಅವರೇ ಹೇಳುವ ಹಾಗೇ 10-12 ದಿನಗಳಾದವು ಎಂದರೇ, ಇಷ್ಟು ಒತ್ತಡ ಸರ್ಕಾರದ ಮೇಲೆ ಹಾಕಿ ತಡೆಯುವ ಯಾವುದೇ ಬಯಕೆ ಮತ್ತು ಇಚ್ಛೆ ನನಗಿಲ್ಲ. ನಾವು ಆಡಳಿತದಲ್ಲಿವೆ, ಆರೋಪಿಸುವವರು ಪ್ರತಿಪಕ್ಷದಲ್ಲಿ ಇದ್ದಾರೆ. ಸಹಜವಾಗಿ ಇಂತಹ ಸುಳ್ಳು ಆರೋಪ ಮಾಡುತ್ತಾರೆ. ಇದೆಲ್ಲ ಸರ್ಕಾರದ ಮಟ್ಟದಲ್ಲಿ ನಡೆಯುವ ಕೆಲಸವೆಂದು ಶಾಸಕರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ನೀಲಕಂಠ ಬಡಿಗೇರ್ ಇದ್ದರು.
12 ಗ್ರಾಮಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ : ಶಾಸಕ ತುನ್ನೂರು
- Advertisement -
ಯಾದಗಿರಿ: ಇಂದು ವಡಗೇರಾ ತಾಲೂಕಿನ ಸುಮಾರು 12 ಗ್ರಾಮ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದೆ. ಈ ಮೂಲಕ ಸಾರ್ವಜನಿಕರ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ಹೇಳಿದರು. ತಮ್ಮ ಮತಕ್ಷೇತ್ರದಲ್ಲಿ ಈ ಮುಂಚೆ 17 ಲ್ಯಾಪ್ ಟಾಪ್ ವಿತರಿಸಲಾಗಿದೆ.
ಇ – ಖಾತೆ ಕೆಲಸ ಸೇರಿದಂತೆಯೇ ವಿವಿಧ ಸಾರ್ವಜನಿಕರ ಕೆಲಸಗಳಿಗೆ ಅಧಿಕಾರಿಗಳು ಸ್ಪಂಧಿಸಬೇಕೆಂದರು.
ವಡಗೇರಾ ತಹಸಿಲ್ದಾರ್, ಸೇರಿದಂತೆಯೇ ಇತರರಿದ್ದರು.
—-
- Advertisement -

