ತಾಯ್ನಾಡಿಗೆ ಮರಳಿದ ಹೊಟ್ಟಿಗೆ ಸನ್ಮಾನ

ಸತ್ಯಕಾಮ ವಾರ್ತೆ ಯಾದಗಿರಿ:
ಇಂಗ್ಲೆಂಡನಲ್ಲಿ ಒಂದು ವಾರ ಕಾಲ ಆಯೋಜಿಸಿದ ಅಂತರಾಷ್ಟ್ರೀಯ ಸಹಕಾರ ಸಮಾವೇಶದಲ್ಲಿ ಭಾಗವಹಿಸಿ ವಿದೇಶಿ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ನವ ದೆಹಲಿಯ ನೆಪೇಡ್ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಅವರನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಅಧ್ಯಕ್ಷರಾದ ವೆಂಕಟೇಶ ಕಲಕಂಭ ಮಾತನಾಡಿ ಕನ್ನಡದ ಏಳಿಗೆಗೆ ಸದಾ ಸಂಘಟನಾತ್ಮಕವಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಪ್ಪ ಹೊಟ್ಟಿ ಅವರ ಸಮಾಜ ಸೇವೆ ದೊಡ್ಡದು ಅವರು ಇನ್ನು ಹೆಚ್ಚಿನ ಸ್ಥಾನಮಾನಗಳನ್ನ ಪಡೆದುಕೊಂಡು ಕನ್ನಡದ ನಾಡು ನುಡಿ ಹಾಗೂ ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಜನರ ಸೇವೆಯನ್ನು ಮಾಡಲೆಂದು ಆಶಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕರ. ಸೋಮಶೇಖರ್ ಮಣ್ಣೂರು. ಬಸವಂತ್ರಾಯಗೌಡ ಮಾಲಿಪಾಟೀಲ. ನೂರಂದಪ್ಪ ಲೇವಡಿ. ನಾಗೇಂದ್ರಪ್ಪ ಜಾಜಿ. ಚೆನ್ನಪ್ಪ ಠಾಣಗುಂದಿ. ದೇವಿಂದ್ರರಡ್ಡಿ ಯಡ್ಡಳ್ಳಿ. ಮಲ್ಲಿಕಾರ್ಜುನ ಹಳ್ಳಿಕಟ್ಟಿ. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಪಾಟೀಲ ಕಿಲ್ಲನಕೇರ ಸಂಘಟನಾ ಕಾರ್ಯದರ್ಶಿ, ಬಸನಗೌಡ ಪಾಟೀಲ ಕೋಶ್ಯಾಧ್ಯಕ್ಷರಾದ ವೀರಭದ್ರಯ್ಯ ಸ್ವಾಮಿ ಜಾಕಮಠ ಪ್ರತಿನಿಧಿ ರಮೇಶ್ ಈಟ್ಟೆ ಉಪಸ್ಥಿತರಿದ್ದರು.

apvc-iconPost Views: 12

Comments

Leave a Reply

Your email address will not be published. Required fields are marked *