ನಾಳೆ ಯಾದಗಿರಿ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ ಪ್ರತಿಭಟನೆ MRPS ಅಧ್ಯಕ್ಷ ರವಿ ಬುರನ್ನೊಳ್

ಸತ್ಯಕಾಮ ವಾರ್ತೆ ಗುರುಮಠಕಲ್:

ಪಟ್ಟಣದ ಇಂದಿರಾ ನಗರ ಬಡಾವಣೆಯ ಅಲೆಮಾರಿ ಜನಾಗಂದ ಬುಡಗ ಜಂಗಮ ಜಾತಿಯ ಸಾಯಮ್ಮ ತಂ/ ಭೀಮಪ್ಪ ಸಿರಿಗಿರಿ ವಯಸ್ಸು ೧೫ ವರ್ಷ ಮತ್ತು ಶ್ಯಾಮಮ್ಮ ತಂ/ ಯಲ್ಲಪ್ಪ ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಕ್ಕೆ ಕಾನೂನ ಪ್ರಕಾರ ನ್ಯಾಯ ಒದಗಿಸಿ ಕೊಡಲು ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಗುರುಮಠಕಲ್ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಾಗೂ ಕರ್ನಾಟಕ ಅಲೆಮಾರಿ ಬಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸುಭಾಷ್ ವೃತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಮತ್ತು ಅಧಿಕಾರಿಗಳ ಗಮನ ಸೆಳೆಯಲಿದ್ದೇವೆ ಎಂದರು.

ಸಂತ್ರಸ್ತ ಕುಟುಂಬಕ್ಕೆ ಈ ಕೊಡಲೇ ಸರಕಾರದಿಂದ ಬರುವ ಎಲ್ಲಾ ಪರಿಹಾರವನ್ನು ಒದಗಿಸಿಕೊಡುವದರ ಜೊತೆಗೆ ಆರೋಪಿಗಳಿಗೆ ಗಲ್ಲುಶಿಕ್ಷೆ ಮಾಡಬೇಕು ಎಂಬ ಧ್ಯೆಯದೊಂದಿಗೆ ಒತ್ತಾಯಸಿಲಿದ್ದೇವೆ ಎಂದು ಅವರು ಹೇಳಿದರು.

 

apvc-iconPost Views: 66

Comments

Leave a Reply

Your email address will not be published. Required fields are marked *