ಮನರಂಜಿಸಿದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ

ಕಲಬುರಗಿ. ಮಸ್ಸಂಜೆಯ ಮನೋಹರ ಗಾನ ಸಂಭ್ರಮ ಪ್ರೇಕ್ಷಕರ ಮನ ರಂಜಿಸಿರುವುದು ನನಗೂ ಖುಷಿ ಎನಿಸಿದೆ ಎಂದು ಚಲನ ಚಿತ್ರ ಸಂಗೀತ ನಿರ್ದೇಶಕರಾದ ವಿ ಮನೋಹರ ಹೇಳಿದರು.
ನಗರದ ಕಲಾ ಮಂಡಲದಲ್ಲಿ ಸುಕಿ ಸಂಸ್ಕೃತಿಕ ಸಂಸ್ಥೆ ಹಾಗೂ ರಾಷ್ಟ್ರ ಕೂಟ ಪುಸ್ತಕ ಮನೆ ಸಹಯೋಗದಲ್ಲಿ ನಡೆದ ಮಹಿಪಾಲ ರೆಡ್ಡಿ ಮುನ್ನೂರು ಅವರ ಮುಗಿಲು ಸುರಿದ ಮುತ್ತು ಪುಸ್ತಕ ಲೋಕಾರ್ಪಣೆ ಹಾಗೂ ವಿ ಮನೋಹರ ಅವರ ರಚನೆ ಹಾಗೂ ಸಂಗೀತ ನಿರ್ದೇಶನದ ಗೀತೆಗಳ ಗಾನ ಸಂಭ್ರಮ ದಲ್ಲಿ ಸುಕಿ ಮೆಲೋಡಿಸ್ ತಂಡದವರಿಂದ ಮನೋಹರ ಗಾನ ಸಂಭ್ರಮ ದಲ್ಲಿ ಗಾಯಕರ ಗಾನಗಳನ್ನು ಕೇಳಿ ಆನಂದಿಸಿದ್ದೇನೆ ಅವರುಗಳು ಬಲು ಸಂಭ್ರಮ ದಿಂದ ನನ್ನ ಹಾಡುಗಳನ್ನು ಹಾಡಿದ್ದು ಒಂದು ಕುಟುಂಬ ಕಾರ್ಯಕ್ರಮ ವೆಂದು ಅನಿಸುತ್ತದೆ ಇಂತಹ ಮಳೆಯ ವಾತಾವರಣದಲ್ಲಿ ಅದರಲ್ಲೂ ಬಾನುವಾರ ವಾಗಿದ್ದು ಮನೆಯಲ್ಲಿ ಹಾಯಾಗಿ ಮಿರ್ಚಿ ಬಝಿ ಮಂಡಕ್ಕಿ ತಿನ್ನುತ್ತಾ ಟಿವಿ ನೋಡುತ್ತಾ ಕೂಡ್ರುವ ಜಾಯಮಾನದಲ್ಲಿ ಇಲ್ಲಿ ಅದೆಂತಹ ಸಂಭ್ರಮ ದಲ್ಲಿ ಕೂತು ಹಾಡು ಕೇಳುತ್ತಿರುವುದು ಇದೊಂದು ಸ್ವರ್ಗದ ಹಾಗೆ ಆಗಿದೆ ಎಂದು ಹೇಳುತ್ತ ಪ್ರೇಕ್ಷಕರ ಕೋರಿಕೆಯ ಮೆರೆಗೆ ಓ ಮಲ್ಲಿಗೆ ಹಾಡನ್ನು ಹಾಡಿ ಮನರಂಜಸಿದರು.
ಕಲಾ ಮಂಡಳ ಗಾಯನ ಅಭಿಮಾನಿಗಳಿಗೆ ಕಿಕ್ಕಿರಿದು ತುಂಬಿ ಮನೋಹರ ಗಾನ ಸಂಭ್ರಮದ ವಾತಾವರಣಕ್ಕೆ ಸಾಕ್ಷಿ ಆದರು.
ಗಾಯನದಲ್ಲಿ ಕಿರಣ್ ಪಾಟೀಲ ಕವಿರಾಜ್ ಕಾವೇರಿ ಹಿರೇಮಠ ಮಹೇಶ ಕುಮಾರ. ಪ್ರಕಾಶ ದಂಡೋತಿ ಆನಂದ ಪಾಟೀಲ್ ಸಿದ್ದಣ್ಣ ಡಿಗ್ಗಾವಿ. ಶರಣು ವಿಜಯಲಕ್ಷ್ಮಿ ಮುಂತಾದ ಗಾನದಲ್ಲಿ ಬಾಗಿಯಾಗಿ ಮನೋಹರ ಅವರ ಹಾಡುಗಳನ್ನು ಹಾಡಿದರು.

apvc-iconPost Views: 8

Comments

Leave a Reply

Your email address will not be published. Required fields are marked *